ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ
“ಎತ್ತ ಸಾಗುತ್ತಿದೆ”


ಎತ್ತ ಸಾಗುತ್ತಿದೆ ನವ ಸಮಾಜ
ಸಮಾನತೆ ಗಾಳಿಗೆ ತೂರಿ
ನಾಗರಿಕತೆಯ ಕುರುಹುಗಳ ಅರಿಯದೆ
ಮಾನವೀಯತೆಯ ಬೆತ್ತಲಾಗಿಸಿದೆ .
ಅರೆಬೆತ್ತಲೆ ಮೈ ಮನ
ಮನಸಾ ಇಚ್ಛೆಯ ಮೆರವಣಿಗೆ
ಸಾಮರಸ್ಯ ಕುರುಡಾಗಿಸಿ
ವಿಕೃತ ಮನಸ್ಸಿನ ಅನಾವರಣ.
ನಶೆಯ ಗುಂಗಲಿ
ಸಮಾಜಿಕ ಜಾಲತಾಣಗಳಿಗೆ ಮುಗಿ ಬಿದ್ದು
ಜವಾಬ್ದಾರಿ ಮರೆತು
ಕರುಳ ಕುಡಿಗಳು ಹೊಂಚು ಹಾಕುತ್ತಿವೆ.
ಬಿಕೋ ಎನ್ನುತ್ತಿವೆ ಹಳ್ಳಿ ಹಾಡು
ಹೂಬಳ್ಳಿ ಗಳು ಮುಳ್ಳು ಮೊನಚಾಗಿ
ಹಿರಿಯ ಜೀವಗಳು ಹಪಹಪಿಸುತ್ತಿವೆ
ಜೀವ ಕೊಂಡಿ ಕಳಚುತಿದೆ.
ಎಲ್ಲೆಂದರಲ್ಲಿ ಕಾರ್ಖಾನೆ
ಕೆಲಸದ ಆಸೆಗೆ ಭೂಮಿ ಮಾರಿಕೊಂಡು
ಉಸಿರಾಡಲು ಕಲುಷಿತ ಗಾಳಿ
ಹೊಟ್ಟೆ ಹೊರೆಯಲು ಜೀತದಾಳು.
ರಕ್ತ ಸಂಬಂಧಕೆ ಆಗುಂತಕರಾಗಿ
ತಮ್ಮವರನೆ ಹೆಣವಾಗಿಸಿ
ಮನೆಯಲ್ಲಿ ಹೂಳುವರೆಲ್ಲ
ವಿಕೃತ ಮನಸುಗಳು.
ಉಡ್ವೇಗಕೆ ತಲೆದೂಗಿ
ಹಸುಳೆಗಳು ನರಳಾಟ
ಕಾಮಂಧತೆಯ ಅನಾವರಣ
ಅಕ್ರಮ ದಂದೆಗಳ ತಾಣ.
ಮದ್ದು ಗುಂಡುಗಳ ಹಾವಳಿ
ಕೆಂಡ ಮಂಡಲ ವಾಗಿಸಿದೆ
ನೆತ್ತರು ಹರಿಸಿ
ಒತ್ತರಿಸಿದ ನೋವು ಕೇಳುವವರಾರು.
ಪ್ರಾರ್ಥನೆಯಲು ಹಿಂಸಾಚಾರ
ಬೋಧನೆಯಲು ಭಿನ್ನಾಚಾರ
ಉಂಡ ಮನೆಗೆ ಕನ್ನ ಹಾಕುವ ವಿಚಾರ
ತಿಳಿಯುತ್ತಿಲ್ಲ ನವ ಸಮಾಜಕೆ
ಹರುಕ ಬಟ್ಟೆ ತೊಟ್ಟು
ಮೈ ತೋರಿಸುತ
ಬದ್ಧತೆ ಇಲ್ಲದ ಪರಿಪಾಠ
ತರಾವರಿ ಮೋಹಕೆ ಬಲಿಯಾಗುತಿದೆ.
ರೇಷ್ಮಾ ಕಂದಕೂರ



