ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

“ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು” ಗೊರೂರು ಅನಂತರಾಜು

ಚಿತ್ರಕಲಾ ಸಂಗಾತಿ ಗೊರೂರು ಅನಂತರಾಜು “ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು” ಹಾಸನ ನಗರ ಹಾಸನಾಂಬ ಕಲಾಕ್ಷೇತ್ರದ ಹೊರಾಂಗಣದಲ್ಲಿ ಚಿತ್ರಕಲಾ ಶಿಕ್ಷಕರು ಕಲಾವಿದರು ವಸಂತಕುಮಾರ್ ಅವರು   ತಮ್ಮ ಹೊಸ ರಚನೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದರು. ಕಳೆದ ಹತ್ತು ವರ್ಷಗಳಿಂದ ಸರ್ಕಾರದ ಆರ್ಥಿಕ ನೆರವಿಲ್ಲದೇ ಅವರು ಕಲಾ ಪ್ರದರ್ಶನ ಮಾಡುತ್ತಲೇ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಫರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಾ ಬಂದಿದ್ದಾರೆ. ಈ ಮೊದಲು  ಹಾಸನದ ಶಾಂತಲಾ ಚಿತ್ರಕಲಾ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಈಗ  ಆಲೂರಿನ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಲಾಸೇವೆ ಗುರುತಿಸಿ ಹಾಸನ ಜಿಲ್ಲಾಡಳಿತ  ಐದಾರು ವರ್ಷಗಳ ಹಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ವಸಂತ್ ಅವರು ಪ್ರತಿವರ್ಷ  ವಿಶ್ವ ಪರಿಸರ ದಿನ ಪ್ರಯುಕ್ತ ಮಕ್ಕಳಿಗೆ ಚಿತ್ರಕಲಾ ಸ್ಫರ್ಧೆ ಏರ್ಪಡಿಸುವುದು ಮಕ್ಕಳಿಗೆ ಸ್ಫರ್ಧೆ ಏರ್ಪಡಿಸಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡುವುದು ರೂಢಿಸಿಕೊಂಡಿದ್ದಾರೆ. ಇದು  ಹತ್ತು ವರ್ಷಗಳಿಂದ ನಿರಂತರ ನಡೆದು ಬಂದಿದೆ.  ಈ ವರ್ಷ ಇವರ ೩೫  ಸೃಜನಾತ್ಮಕ  ಕಲಾಕೃತಿಗಳು ವೀಕ್ಷಕರ ಮನ ಸೆಳೆದವು.  ಇವರ ಪರಿಸರ ಕಾಳಜಿಯ ಪ್ರಕೃತಿ ಚಿತ್ರಗಳು ಆಕರ್ಷಣೀಯವಾಗಿವೆ. ಅರಸೀಕೆರೆ ಹುಳಿಯಾರ್ ಮಾರ್ಗದಲ್ಲಿ ಸಿಗುವ ಮರಗಳು ರಸ್ತೆಯ ಪ್ರಕೃತಿ ಚಿತ್ರವು ಜಲವರ್ಣದಲ್ಲಿ ಹ್ಯಾಂಡ್ ಮೇಡ್ ಶೀಟ್‌ನಲ್ಲಿ ಅದ್ಭುತವಾಗಿ ಮರುಸೃಷ್ಟಿಗೊಂಡಿದೆ.  ಬರ್ಡ್ ಸೀರಿಸ್‌ನ ೧೫ ಪಕ್ಷಿ ಚಿತ್ರಗಳು ತೈಲವರ್ಣದಲ್ಲಿ ರೂಪು ತೆಳೆದು ಹಾರಾಡಿವೆ. ಐದು ವರ್ಷಗಳ ಹಿಂದೆ ಸಕಲೇಶಪುರ ಪರಿಸರದಲ್ಲಿ ಪೋಟೋಗ್ರಫಿ ಮಾಡಿದ್ದ ರಮ್ಯ ದೃಶ್ಯಾವಳಿಗಳು, ೧೫ವರ್ಷಗಳ ಹಿಂದೆ ಪ್ರವಾಸ ಮಾಡಿದ್ದ ಎರ್ನಾಕುಲಂನ ಪ್ರಕೃತಿ ದೃಶ್ಯಗಳು ಜಲವರ್ಣದಲ್ಲಿ ಹ್ಯಾಂಡ್ ಮೇಡ್ ಶೀಟ್ ನಲ್ಲಿ ಮರುಸೃಷ್ಟಿಯಾಗಿ  ಜೀವಂತಿಕೆ ತಾಳಿವೆ. ಬಹುಶ: ಈಗ ಆ ಸೀನ್ಸ್ ಕಣ್ಮರೆಯಾಗಿರಬಹುದು. ಆದರೆ ವಸಂತಕುಮಾರ್ ಅವರ ಕಣ್ಣುಗಳಿಂದ ಮರೆಯಾಗಿಲ್ಲ.   ತಮ್ಮ  ಪೋಟೋಗಪ್ರಿಯಲ್ಲಿ ಸೆರೆ ಹಿಡಿದು ಈಗ ಸೃಷ್ಟಿಸಿರುವುದು ವಿಶೇಷವಾಗಿದೆ. ನಾವು ಕತೆಗಾರರು  ಬಾಲ್ಯದ ಘಟನೆಗಳನ್ನು, ಪ್ರವಾಸಿ ಅನುಭವಗಳನ್ನು ನೆನಪಿಸಿಕೊಂಡು ಬರಹದಲ್ಲಿ ಬರೆದಂತೆ ವಸಂತಕುಮಾರ್ ಚಿತ್ರ ಜೀವಂತಿಕೆ ನೀಡಿದ್ದಾರೆ. ಬಾಗೇಶಪುರದ ಲೋಕೇಶನ್, ಹಾರುತ್ತಿರುವ ಗಿಡುಗ, ನೆಗೆಯುತ್ತಿರುವ ಕುದುರೆ ಎಲ್ಲವೂ ಕ್ರಿಯಾಶೀಲತೆ ಸಾಕ್ಷೀಕರಿಸಿವೆ. ದೇಶದ ಮಾಜಿ ಪ್ರಧಾನಿಗಳ ಬಾವಚಿತ್ರವು ಚಾರ್ಕೋಲ್ ಪೆನ್ಸಿಲ್ ವರ್ಕ್ ನಲ್ಲಿ ಅವರಿಗೆ ಸಲ್ಲಿಸದ ಗೌರವವಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರಗಳನ್ನು ವೀಕ್ಷಿಸಿ ಭೇಷ್ ಎಂದಿರುವುದು ವಸಂತಕುಮಾರ್ ಅವರಿಗೆ ಖುಷಿ ನೀಡಿದೆ.   ಕಲಾವಿದರಿಗೆ ಇಂತಹ ಮೆಚ್ಚುಗೆಯ  ಮಾತೇ  ಸ್ಫೂರ್ತಿ ತಾನೇ..!   -ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧,

“ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು” ಗೊರೂರು ಅನಂತರಾಜು Read Post »

ಕಾವ್ಯಯಾನ

ಡಾ.ವೈ.ಎಂ.ಯಾಕೊಳ್ಳಿ ಅವರ “ಹತ್ತು‌ ಕವಿತೆ ಚೂರು”

ಕಾವ್ಯ ಸಂಗಾತಿ ಡಾ.ವೈ.ಎಂ.ಯಾಕೊಳ್ಳಿ “ಹತ್ತು‌ ಕವಿತೆ ಚೂರು” ೧ಅವ್ವ ಕಾಯುತ್ತಾಳೆಕಣ್ಣಾಗಿ ಜಗವಬುದ್ಧನಂತೆ ೨ಅಪ್ಪನ‌ ನೇಗಿಲಕುಳಕ್ಕೆ ಬೇಸರವೆಂಬುದಿಲ್ಲಬರಿ ಹಸಿರು ಬಿತ್ತುತ್ತದೆ ೩ಲೋಕ ನಿದ್ದೆಗಣ್ಣಲ್ಲಿದೆಎಚ್ಚರಿಸ ಬೇಕಾದ ದೈವಮರೆತು‌ ಮಲಗಿದೆ ೪ಯುದ್ಧ ನಿಲ್ಲದುಎದೆಯಲ್ಲಿ ಶಾಂತಿ ತೋಟಬೆಳೆಯುವವರೆಗೆ ೫ಕೈಯ ಕೋವಿಗೂಕ್ಷಮಿಸುವ ಶಕ್ತಿಕೊಟ್ಟಾಗ ಬುದ್ಧ ನಗುತ್ತಾನೆ ೬ನಮ್ಮ‌ಕೇರಿಯತುಂಬ ಹೂವು ಚೆಲ್ಲಿವೆರಂಜಾನ್,ಯುಗಾದಿ ಕೂಡಿ ನಡೆದಿವೆ೭ಅವ್ವ  ತಟ್ಟುವರೊಟ್ಟಿಗೆ ಜಗದ ಹಸಿವುನೀಗಿಸೊ ತಾಕತ್ತಿದೆ ೮ಬರೆದು ಸೋಲುತ್ತೇನೆಆಕೆ ಮಹಾಜಾಣೆಕಣ್ಣೊಳಗೇ ಓದಿ ನಗುತ್ತಾಳೆ ೯ನಾನು ಅಕ್ಷರ ಜೀವಅವಳು‌ ಪ್ರೇಮದ ಅರ್ಥಬಲ್ಲವಳು ಸಾಂಗತ್ಯ ಸಸಾರ ೧೦ಪ್ರೀತಿಯ ಬಾವಿಬತ್ತಿದ ದಿನಸಂಸಾರ ಸತ್ತು ಹೋಗಿರುತ್ತದೆ ಡಾ.ವೈ.ಎಂ.ಯಾಕೊಳ್ಳಿ

ಡಾ.ವೈ.ಎಂ.ಯಾಕೊಳ್ಳಿ ಅವರ “ಹತ್ತು‌ ಕವಿತೆ ಚೂರು” Read Post »

ಇತರೆ

“ಒಂದು ಕೊಲೆ ಮತ್ತು ಆತ್ಮವಿಮರ್ಶೆ” ವೀಣಾ ಹೇಮಂತ್ ಗೌಡ ಪಾಟೀಲ್ 

ಸಾಮಾಜಿಕ ಸಂಗಾತಿ “ಒಂದು ಕೊಲೆ ಮತ್ತು ಆತ್ಮವಿಮರ್ಶೆ” ವೀಣಾ ಹೇಮಂತ್ ಗೌಡ ಪಾಟೀಲ್  ಕಳೆದ ವಾರ ಜೂನ್ 18ರಂದು ಇಡೀ ದೇಶವನ್ನು ಬೆಕ್ಕಸ ಮಕ್ಕಳಬೆರಗಾಗಿಸಿದ, ನೋವಿನಲ್ಲಿ ಅದ್ದಿದ ಘಟನೆಯೊಂದು ಮಹಾರಾಷ್ಟ್ರ ರಾಜ್ಯದ ಪುಣೆಯ ಹೊರವಲಯದಲ್ಲಿ ನಡೆಯಿತು. ಇನ್ನೇನು ಕೆಲವೇ ತಿಂಗಳಲ್ಲಿ ತಾನು ಮದುವೆಯಾಗುವ ನಿಶ್ಚಿತ ವರ ಕೇತನ್ ಅಗರವಾಲ್ ನನ್ನು ಆತನ ನಿಶ್ಚಿತ ವಧು ಸಿಯಾ ಗೋಯಲ್ ನಾನೂರು ಅಡಿ ಎತ್ತರದ ಕೋಟೆಯ ಮೇಲಿನಿಂದ ತಳ್ಳಿ ಸಾಯಿಸಿದ ಘಟನೆಯ ವರದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವೆಲ್ಲರೂ  ನೋಡಿದ್ದೇವೆ.ನಿಖರ ಮಾಹಿತಿಗಳ ಪ್ರಕಾರ ಕೇತನ್ ಅಗರವಾಲ್ ಎಂಬ600 ಕೋಟಿ ಬೆಲೆ ಬಾಳುವ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ ಶ್ರೀಮಂತ ಯುವಕನ ಕೊಲೆಯನ್ನು ಆತನ ಬಾವಿಪತ್ನಿಯೇ ಮಾಡಿದ್ದಾಳೆ… ಹಾಗೆ ಆತನನ್ನು ಕೊಲ್ಲಲು ಆಕೆ ನೀಡಿದ ಕಾರಣ ಆತ ಬಕ್ಕ ತಲೆಯವನಾಗಿದ್ದ ಎಂದು. ಜೊತೆಗೆ ಆಕೆಯ ಪ್ರೇಮಿಯ ಕುಮ್ಮಕ್ಕು ಕೂಡ ಈ ಕೃತ್ಯದ ಹಿಂದೆ ಇತ್ತು…. ಹಾಗೂ ಇದನ್ನು ಅವರಿಬ್ಬರೂ ಸೇರಿ ಸಂಚು ಮಾಡಿದ್ದರು. ಆದರೆ ಮನೋವಿಜ್ಞಾನ ಹೇಳುವುದು ಹೀಗೆ… ಯಾವುದೇ ಒಬ್ಬ ವ್ಯಕ್ತಿಯು ಕೇವಲ ಒಂದು ದಿನದಲ್ಲಿ ಮೋಸ ಮಾಡುವ, ಸತ್ಯವನ್ನು ಮುಚ್ಚಿಡುವ, ಕುತಂತ್ರ ಮಾಡುವುದನ್ನು ಕಲಿಯುವುದಿಲ್ಲ.ಈ ರೀತಿಯ ಒಂದು ಕಲಿಕೆಗೆ ಸಾಕಷ್ಟು ಸಮಯದ ಅವಶ್ಯಕತೆ ಇರುತ್ತದೆ. ಇದೊಂದು ಮನೋ ದೈಹಿಕ ಸಾಮರ್ಥ್ಯವಾಗಿದ್ದು ಇದನ್ನು ಕಲಿಯಲು ಸಾಕಷ್ಟು ಗ್ರಹಿಕೆಯ, ಸಮಯದ, ಅನುಭವದ ಅವಶ್ಯಕತೆ ಇರುತ್ತದೆ.ತನ್ನ ಹುಟ್ಟು ಹಬ್ಬವನ್ನು ಆಚರಿಸಲು ಪುಣೆಯ  ಹತ್ತಿರದ ಲೋಹಗಢ ಕೋಟೆಗೆ ತನ್ನ ನಿಶ್ಚಿತ ವರನನ್ನು ಕರೆದೊಯ್ದ ಆಕೆ ಫೋಟೋಶೂಟ್ ಮಾಡುವ ನೆಪದಲ್ಲಿ  ಆತನನ್ನು ನ 400 ಅಡಿ ಎತ್ತರದಿಂದ ತಳ್ಳಿ ಕೊಲೆ ಮಾಡಿದ್ದಾಳೆ.ನಂತರ ತಾನೇ ಖುದ್ದಾಗಿ ಪೊಲೀಸರಿಗೆ ಫೋನ್ ಮಾಡಿದ ಆಕೆ  ಮಾಹಿತಿಯನ್ನು ನೀಡಿದ್ದಾಳೆ. ಘಟನೆಯ ನಂತರ ಮುಂದುವರೆದ ಬೆಳವಣಿಗೆಯಲ್ಲಿ ಯುವಕನ ಅಂತ್ಯಕ್ರಿಯೆಯ ಎರಡು ದಿನಗಳ ನಂತರ ಕೇತನ್ ಅಗರವಾಲನ ಮನೆಗೆ ಆಕೆ ಭೇಟಿ ನೀಡಿದ್ದಾಳೆ. ಈ ಕುರಿತು ಪ್ರಶ್ನಿಸಿದಾಗ ಆಕೆಯ ವಿಭಿನ್ನ ಉತ್ತರಗಳನ್ನು ಆಲಿಸಿದ ಯುವಕನ ಸಹೋದರಿಗೆ ಅನುಮಾನ ಉದ್ಭವಿಸಿದೆ.ಅಂತೆಯೇ ತನ್ನ ಅನುಮಾನವನ್ನು ಆಕೆ ತನ್ನ ತಾಯಿಯೊಂದಿಗೆ ಹಂಚಿಕೊಂಡಿದ್ದು ನಂತರ ಕುಟುಂಬದ ಸದಸ್ಯರೆಲ್ಲರೂ ಈ ಕುರಿತು ಮಾತನಾಡಿಕೊಂಡಿದ್ದಾರೆ.ಕೇಸನ್ನು ಪುನರ್ ಪರಿಶೀಲಿಸಲು ಯುವಕನ ತಾಯಿ ಪೊಲೀಸರಲ್ಲಿ  ದೂರನ್ನು ನೀಡಿದರು. ಈಗಾಗಲೇ ಈ ಕೇಸಿನ ಕುರಿತು  ಕೊಂಚ ಗುಮಾನಿಯನ್ನು ಹೊಂದಿದ್ದ ಪೊಲೀಸರಿಗೆ ಈ ದೂರಿನಿಂದ ಮತ್ತಷ್ಟು ಪುಷ್ಟಿ ದೊರೆಯಿತು. ಸಿ ಸಿ ಟಿವಿಗಳ ಮೂಲಕ ಘಟನೆಯನ್ನು ಪುನರ್ ಪರಿಶೀಲಿಸಿದ ಪೊಲೀಸರು ಬಿರು ಬೇಸಿಗೆಯ ಸಮಯದಲ್ಲಿಯೂ ಹೂಡಿ ಧರಿಸಿ ಓಡಾಡುತ್ತಿದ್ದ ಓರ್ವ ಯುವಕನನ್ನು ಗುರುತಿಸಿದ್ದಾರೆ. ಸಿಯಾಳನ್ನು ಈ ಕುರಿತು ಪ್ರಶ್ನಿಸಿದಾಗ ಆಕೆ ತಡಬಡಾಯಿಸಿದ್ದನ್ನು ಕಂಡು ಅನುಮಾನದಿಂದ ವಿಚಾರಣೆ ನಡೆಸಿದರು.  ಸಿಯಾ ಹಾಗೂ ಆಕೆಯ ಪ್ರಿಯಕರನ ನಡುವಿನ ಸರಿ ಸುಮಾರು 2000 ಫೋನ್ ಕರೆಗಳನ್ನು, ವಾಟ್ಸಾಪ್ ಸಂದೇಶಗಳನ್ನು  ಪರಿಶೀಲಿಸಿದ ನಂತರ ಆರೋಪಿಯಾಗಿ ಸಿಯಾ ಮತ್ತು ಆಕೆಯ ಪ್ರಿಯಕರನನ್ನು  ಬಂಧಿಸಿದರು.ಆರಂಭದಲ್ಲಿ ತನ್ನ ಮೇಲೆ ಬಂದ ಎಲ್ಲ ಅಪವಾದಗಳನ್ನು ತಿರಸ್ಕರಿಸಿದ ಆಕೆ ಅಂತಿಮವಾಗಿ ತನ್ನ ಪ್ರಿಯಕರನ ಒತ್ತಾಯ ಹಾಗೂ ಹೇಳಿಕೆಯ ಮೇರೆಗೆ ಈ ಕೃತ್ಯವನ್ನು ಮಾಡಿರುವುದಾಗಿ ಒಪ್ಪಿಕೊಂಡರು.ಮರಣ ಹೊಂದಿದ ತನ್ನ ಮಗನ ಮುಖದ ಭಾಗವು180 ಡಿಗ್ರಿಯಷ್ಟು ತಿರುಚಿಕೊಂಡಿದ್ದು  ಬೆನ್ನಿನ ಭಾಗದಲ್ಲಿ ಮುಖ ಜಜ್ಜಿದಂತೆ ತೋರುತ್ತಿತ್ತು. ಬೇಡವಾದರೆ ಬಿಡಬೇಕಿತ್ತು… ಈಗ ನನ್ನ ಮಗನನ್ನು ಯಾರು ತಂದು ಕೊಡುತ್ತಾರೆ ಎಂದು ಅಳುವ ತಾಯಿಯ ಆಕ್ರಂದನ, ನನ್ನನ್ನು ಕಾಳಜಿ ಮಾಡಬೇಕಾದ ನನ್ನ ಮಗ ಇನ್ನಿಲ್ಲವಾಗಿ ಹೋದ.. ಅದೂ ಕುತಂತ್ರದಿಂದ ಎಂಬ ನೋವನ್ನು ಬದುಕಿನ ಕೊನೆಯವರೆಗೂ ಭರಿಸಬೇಕಾದ ತಂದೆಯ ಅಳಲು, ಸೋದರನನ್ನು ಕಳೆದುಕೊಂಡು ತಬ್ಬಲಿತನದ ಭಾವವನ್ನು ಹೊಂದಿರುವ ಸಹೋದರಿಯ ದುಃಖಭರಿತ ಆಕ್ರೋಶ ಒಂದೆಡೆ ಕಂಡರೆ, ಮತ್ತೊಂದೆಡೆ ತಮ್ಮ ಮಗಳ ಕೃತ್ಯದಿಂದ ಮನನೊಂದಿರುವ ತಂದೆ ತಾಯಿಯರು ಆಕೆಯನ್ನು ಕೂಡ ಅದೇ 400 ಅಡಿ ಎತ್ತರದ ಪರ್ವತದಿಂದ ನೂಕಿ ಸಾಯಿಸಿ ಬಿಡಬೇಕು ಎಂದು ತಮ್ಮ ನೋವನ್ನು ಆಕೆಯ ಪಾಲಕರು ಹೊರ ಹಾಕಿದ್ದಾರೆ. ಈ ಕುರಿತು ಆಳವಾಗಿ ಪ್ರಶ್ನಿಸಿದರೆ ಆಕೆ ಎಂದೂ ತನಗೆ ಈ ಸಂಬಂಧ ಇಷ್ಟವಿಲ್ಲ ಎಂದು ತೋರ್ಪಡಿಸಿರಲಿಲ್ಲ ಎಂದು ಹೇಳುತ್ತಾರೆ. ವಿವಾಹದ ಕುರಿತು ಅತ್ಯಂತ ಸಂತಸವನ್ನೆ ತೋರಿದ್ದಳು…. ಆಕೆಗೆ ಒಬ್ಬ ಬಾಯ್ ಫ್ರೆಂಡ್ ಇರುವ ಸಂಗತಿ ಕೂಡ ನಮಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಮುಂದಿನ ಕಾನೂನಾತ್ಮಕ ಪರಿಣಾಮಗಳು ಏನೇ ಇರಲಿ ಆದರೆ ಮಾನವಿಕ ಮನೋವಿಜ್ಞಾನವನ್ನು ಸ್ವಲ್ಪವಾದರೂ ಓದಿಕೊಂಡಿರುವವರಿಗೆ ಬರುವ ಮೊದಲ ಪ್ರಶ್ನೆ…. ಎರಡು ವಿಭಿನ್ನ ಬದುಕುಗಳನ್ನು ಓರ್ವ ಹರೆಯದ ವ್ಯಕ್ತಿ ಅದು ಹೇಗೆ ಬದುಕುತ್ತಿದ್ದ ಎಂಬುದು ?ನಿಶ್ಚಿತಾರ್ಥದಲ್ಲಿ ನಗು ನಗುತ್ತಾ ಪಾಲ್ಗೊಂಡ ಯುವತಿ, ತನ್ನ ಮುಂದಿನ ಬದುಕನ್ನು ಜೊತೆಯಾಗಿ ಕಳೆಯುವ ಭಾವಿ ಪತಿಯ ಮನೆಯವರೊಂದಿಗೆ ಹಬ್ಬ ಉತ್ಸವಗಳಲ್ಲಿ ಪಾಲ್ಗೊಂಡಿರುವ, ಅವರ ಪ್ರೀತಿ, ನಂಬಿಕೆ ವಿಶ್ವಾಸ, ಆಶೀರ್ವಾದಗಳನ್ನು ಪಡೆದುಕೊಂಡಿರುವ, ಮದುವೆಯ ಪೂರ್ವಭಾವಿ ತಯಾರಿಯಲ್ಲಿ ತೊಡಗಿಕೊಂಡಿರುವ, ನಿಶ್ಚಿತ ವರನೊಂದಿಗೆ  ವಿವಾಹ ಪೂರ್ವ ಫೋಟೋ ಶೂಟ್ನಲ್ಲಿ ಭಾಗವಹಿಸಿರುವ ಬದುಕಿನ ಒಂದು ಮುಖ  ಇದ್ದರೆ, ಇದಕ್ಕೆ ತದ್ವಿರುದ್ಧವಾಗಿ ಬೇರೊಬ್ಬ ಯುವಕನೊಂದಿಗೆ ಪ್ರೀತಿಯನ್ನು ಹೊಂದಿದ್ದು,  ಆ ಪ್ರೀತಿಯನ್ನು ಯಾರಿಗೂ ಜಾಹೀರು ಮಾಡದೆ ಹೋದರೂ ಕೂಡ ಅದೇ ವ್ಯಕ್ತಿಯೊಂದಿಗೆ ಸೇರಿ ತಾನು ಮದುವೆಯಾಗಲಿರುವ ಯುವಕನನ್ನು ಕೊಲೆಗೈಯುವ ಸಂಚನ್ನು ಹೂಡಿ ಅದರಲ್ಲಿ ಯಶಸ್ವಿಯಾಗಿ ಎಲ್ಲರ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸಿದ ಮತ್ತೊಂದು ಹೇಯ ಮುಖ ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ.ಪ್ರಶ್ನೆ ಇರುವುದು ತಪ್ಪು ಯಾರದು?  ಯಾಕೆ ಹೀಗಾಯ್ತು ? ಎಂದು ಕೇಳಿಕೊಳ್ಳುವುದರಲ್ಲಿಲ್ಲ… ಬದಲಾಗಿ ಇಂತಹ ತಪ್ಪುಗಳು ಆಗಲು ಕಾರಣವೇನು? ಎಂಬುದನ್ನು ಅರಿತು ಮುಂದೆ ಈ ರೀತಿಯ ತಪ್ಪುಗಳು ಆಗದೇ ಇರಲು ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ಅರಿಯೋಣ.ಯಾವುದೇ ಮಕ್ಕಳಾದರೂ ಹುಟ್ಟಿನಿಂದಲೇ ಆಗಲಿ, ಇಲ್ಲವೇ ಚಿಕ್ಕಂದಿನಿಂದಲೇ ಆಗಲಿ ಇತರರನ್ನು ನೋಯಿಸುವ, ಮೋಸ ಮಾಡುವ,, ಕುತಂತ್ರಗಳನ್ನು ಬಳಸುವ, ತಪ್ಪಿಸಿಕೊಳ್ಳುವ ತಂತ್ರಗಳನ್ನು ಕಲಿತಿರುವುದಿಲ್ಲ.ಬಹಳಷ್ಟು ಬಾರಿ ಮನೆಯಲ್ಲಿ ಶಾಲೆ ಕಾಲೇಜುಗಳಲ್ಲಿ ಕಲಿಸುವುದನ್ನೇ ಕಲಿಯದ ಮಕ್ಕಳು ತಾವು ನೋಡಿರುವುದನ್ನು, ಗ್ರಹಿಸಿರುವುದನ್ನು …ಮತ್ತಿತರ ಸಾಮಾಜಿಕ ಸಿದ್ಧ ಮಾದರಿಗಳನ್ನು ನೋಡಿ ಕಲಿಯುತ್ತಾರೆ. * ನಮ್ಮ ಮಕ್ಕಳು ನಮ್ಮನ್ನು ಪ್ರತಿದಿನ ಪ್ರತಿ ಕ್ಷಣ ಗಮನಿಸುತ್ತಿರುತ್ತಾರೆ.*ನಾವು ಸಮಸ್ಯೆಗಳನ್ನು ಯಾವ ರೀತಿ ನಿಭಾಯಿಸುತ್ತೇವೆ, *ಕಠಿಣ ಪರಿಸ್ಥಿತಿಗಳಲ್ಲಿ ಯಾವ ರೀತಿ ವರ್ತಿಸುತ್ತೇವೆ ಎಂಬುದು ಅವರ ಗಮನದಲ್ಲಿ ಸದಾ ಇರುತ್ತದೆ. *ಅನಿವಾರ್ಯ ಪರಿಸ್ಥಿತಿಯಲ್ಲಿಯು ನಾವು ಸತ್ಯವನ್ನೇ ಮಾತನಾಡುತ್ತೇವೆಯೇ ಎಂಬುದನ್ನು ಅವರು ನೋಡುತ್ತಿರುತ್ತಾರೆ.* ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಳ್ಳುತ್ತೇವೆಯೇ? ಇಲ್ಲವೇ? ಎಂಬುದನ್ನು ಅವರು ಗಮನಿಸುತ್ತಿರುತ್ತಾರೆ. * ನಾವು ಮಾಡುವ ತಪ್ಪುಗಳು, ಅದಕ್ಕಾಗಿ ನಾವು ಕೊಡುವ ಸುಳ್ಳು ನೆಪಗಳು ಇಲ್ಲವೇ ಸಮರ್ಥನೆಗಳು, ವಿಷಯವನ್ನು ಮುಚ್ಚಿಡುವುದು, ತಮ್ಮ ಮೇಲೆ ಬರಬಹುದಾದ ತಪ್ಪನ್ನು ಬೇರೆಯವರ ಮೇಲೆ ನಿರ್ಧಾಕ್ಷಿಣ್ಯವಾಗಿ ಹಾಕುವುದು ಹಾಗೂ ಮುಖ್ಯವಾಗಿ ಸಮಯವು ಎಲ್ಲವನ್ನು ಮುಚ್ಚಿ ಹಾಕುತ್ತದೆ ಎಂದು ನಂಬುವುದು ಮಕ್ಕಳ ವಿಕಲ ಮಾನಸಿಕತೆಯನ್ನು ತೋರುತ್ತದೆ. ಮಕ್ಕಳು ಕೇವಲ ತಮ್ಮ ಪಾಲಕರ ವಂಶವಾಹಿಗಳನ್ನು ಹಾಗೂ ಸ್ವಭಾವಗಳನ್ನು ಮಾತ್ರ ತಮ್ಮೊಂದಿಗೆ ಮುಂದುವರೆಸಿಕೊಂಡು ಹೋಗುವುದಿಲ್ಲ… ಬದಲಾಗಿ ಅವರು ತಮ್ಮ ಪಾಲಕರು ಬದುಕುವ ರೀತಿ ನೀತಿಗಳನ್ನು ತಮ್ಮದಾಗಿಸಿಕೊಂಡು ನಡೆಯುತ್ತಾರೆ. ಪ್ರಾಮಾಣಿಕತೆ ಮತ್ತು ಅಪ್ರಾಮಾಣಿಕತೆಗಳಲ್ಲಿ ಯಾವುದನ್ನು ಹೆಚ್ಚಾಗಿ ತಮ್ಮ ಪಾಲಕರು  ಹೊಂದಿರುತ್ತಾರೆ ಎಂಬುದನ್ನು ಅವರು ತಮ್ಮ ಪಾಲಕರ ಅರಿವಿಗೆ ಬಾರದಂತೆ  ಸದಾ ಗಮನಿಸುತ್ತಿರುತ್ತಾರೆ.ಇಲ್ಲಿ ಆ ಯುವತಿ ತನಗೆ ಇಷ್ಟವಿಲ್ಲದ ಈ ಸಂಬಂಧವನ್ನು ನಿರಾಕರಿಸಬಹುದಿತ್ತು… ಹಾಗೆ ಹೇಳುವ ಮೂಲಕ ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದಲ್ಲದೇ ಯುವಕನ ಪ್ರಾಣವನ್ನು ಕೂಡ ಉಳಿಸಬಹುದಾಗಿತ್ತು. ಒಂದು ಇಡೀ ಕುಟುಂಬವನ್ನು ನೋವಿಗೆ ತಳ್ಳುವುದರ ಜೊತೆಗೆ  ತನ್ನದೇ ಕುಟುಂಬದ ಘನತೆ ಗೌರವಗಳನ್ನು ಬೀದಿ ಪಾಲು ಮಾಡುವುದನ್ನು ತಪ್ಪಿಸಬಹುದಿತ್ತು. ಈ ಸಂಬಂಧ ತನ್ನನ್ನು ಸಂತೋಷಗೊಳಿಸಿದೆ ಎಂದು ಎಲ್ಲರ ಮುಂದೆ ಹುಸಿ ನಗುವುದರ ಬದಲು ಇರುವ ವಿಷಯವನ್ನು ತನ್ನ ಕುಟುಂಬಕ್ಕೆ, ತನ್ನ ಭಾವಿ ಪತಿಗೆ ಹೇಳಿ  ಆಗುವ ಅನಾಹುತವನ್ನು ತಪ್ಪಿಸಬಹುದಾಗಿತ್ತು. ಪಾಲಕರಾಗಿ ನಾವು ನಮ್ಮ ಮಕ್ಕಳನ್ನು ಬೆಳೆಸುವಲ್ಲಿ ಬಹಳಷ್ಟು ಜಾಗರೂಕತೆಯನ್ನು ವಹಿಸಬೇಕು. ನಮ್ಮ ಮಕ್ಕಳಿಗೆ ಉನ್ನತ ಅಂಕಗಳನ್ನು ಗಳಿಸಬೇಕು ಎಂದು ಹೇಳುವ ಹೆಮ್ಮೆಯ ಪಾಲಕರು ನಾವಾದರೆ ಸಾಲದು. ಗೌರವಾನ್ವಿತ ನೌಕರಿ ಪಡೆಯುವ/ ಒಳ್ಳೆಯ ಕುಟುಂಬದ ವ್ಯಕ್ತಿಯನ್ನು ಸಂಗಾತಿಯಾಗಿ ಪಡೆಯುವ ಕುರಿತು ಮಾತ್ರ ಕಲಿಸಿದರೆ ಸಾಲದು. ಮಕ್ಕಳು ತಮ್ಮ ಒಳ್ಳೆಯ ಮೌಲ್ಯಗಳನ್ನು ಮಾತ್ರ ಬಿಂಬಿಸಿದರೆ ಸಾಲದು… ಬದಲಾಗಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದನ್ನು ಕಲಿಸಲೇಬೇಕು. ತಮ್ಮ ಆಯ್ಕೆಯ ಕುರಿತು ಪುನರ್ ಪರಿಶೀಲನೆ ಮಾಡುವುದನ್ನು, ತಮಗಿಷ್ಟವಿಲ್ಲದ ವಿಷಯವನ್ನು ಬೇಡ ಎಂದು ತಳ್ಳಿ ಹಾಕುವ ಧೈರ್ಯವನ್ನು, ತಮಗೆ ಒಗ್ಗದ ಆಹಾರವನ್ನು ಬೇಡ ಎಂದು ತಳ್ಳುವಷ್ಟೇ ಧೈರ್ಯದಿಂದ ತಮಗಿಷ್ಟವಿಲ್ಲದ ವೈವಾಹಿಕ ಸಂಬಂಧದಿಂದ ಹೊರಟು ಹೋಗುವ ದಾಸ್ಟಿಕತೆಯನ್ನು ಪ್ರದರ್ಶಿಸಬೇಕು.ಹೊಣೆಗಾರಿಕೆ ಎಂಬುದು ಇಪ್ಪತ್ತನೇ ವರ್ಷದಲ್ಲಿ ಬರುವುದಲ್ಲ ಹುಟ್ಟಿದ ಮಗು ತನ್ನ ಐದನೇ ವರ್ಷದಿಂದಲೇ ತನ್ನ ವೈಯಕ್ತಿಕ ನಿಲುವುಗಳನ್ನು, ಸಾಮಾಜಿಕ ಬದ್ಧತೆಯನ್ನು, ಮೌಲ್ಯದ ಬದುಕನ್ನು ರೂಡಿಸಿಕೊಳ್ಳಲು ಪಾಲಕರು ಮಕ್ಕಳಿಗೆ ಸರಿಯಾದ ದಾರಿಯನ್ನು ತೋರಬೇಕು ಸಾಮಾಜಿಕ ಹೊಣೆಗಾರಿಕೆಯು ಮಗುವಿಗೆ ಐದನೇ ವರ್ಷದಲ್ಲಿ  ಕಲಿಕೆಯ ಭಾಗವಾಗಿ ದೊರೆತರೆ ಹತ್ತನೇ ವಯಸ್ಸಿನಲ್ಲಿ ಅದು ಮತ್ತಷ್ಟು ಬಲಿಷ್ಠವಾಗುತ್ತದೆ. ಹದಿಹರೆಯದ ಸಮಯದಲ್ಲಿ ಅವರ ಸಾಮಾಜಿಕ ಬದ್ಧತೆಯು ವಿಭಿನ್ನ ಹಂತಗಳಲ್ಲಿ ಪರೀಕ್ಷಿಸಲ್ಪಡುತ್ತದೆ ಮತ್ತೆ 20ನೇ ವಯಸ್ಸಿನ ಹೊತ್ತಿಗೆ ಅವರ ಬದುಕಿನ ಮೌಲ್ಯವನ್ನು ಮಾಪನ ಮಾಡಲಾಗುತ್ತದೆ.ಮನುಷ್ಯನ ಬದುಕಿನ ಕಲಿಕೆಗಳು ನಾವಂದುಕೊಂಡಷ್ಟು ಸರಳವಾಗಿಲ್ಲ ನಿಜ… ಆದರೆ ಅತ್ಯಂತ ಸಂಕೀರ್ಣವಾಗಬಾರದು ಎಂಬ ತಿಳುವಳಿಕೆ ಪಾಲಕರಾದ ನಮಗಿರಲೇಬೇಕು.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸುತ್ತಲ ವಾತಾವರಣಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂಬ ಹೊಣೆಗಾರಿಕೆ ಆತನಂತೆ ಆಗಿದ್ದು, ಎಷ್ಟೋ ಬಾರಿ ನಮ್ಮ ಬದುಕಿನ ಆಯ್ಕೆಗಳು ನಮ್ಮನ್ನು ರೂಪಿಸುತ್ತದೆ. ನಮ್ಮ ಮನದ ಭಾವಗಳು ಕನ್ನಡಿಯ ಪ್ರತಿಬಿಂಬದಂತೆ ನಮ್ಮನ್ನು ಈ ಸಮಾಜಕ್ಕೆ ತೋರುತ್ತವೆ.ನಾವು ಹೊಂದಿರುವ ಸ್ನೇಹಿತರು ಸಂಬಂಧಗಳು ನಮ್ಮ ವ್ಯಕ್ತಿತ್ವ ನಮ್ಮ ಬದುಕಿನ ಕುರಿತಾದ ನಮಗಿರುವ ಅವಗಾಹನೆಗಳು ಮತ್ತಿತರ ಹಲವಾರು ವಿಷಯಗಳು ಮನುಷ್ಯನ ವರ್ತನೆ ಆದರೆ ಎಲ್ಲಕ್ಕಿಂತ ಮಿಗಿಲಾಗಿ ಸದಾ ನಿಮ್ಮನ್ನು ಗಮನಿಸುವ ಎರಡು ಜೋಡಿ ಕಣ್ಣುಗಳು ನಿಮ್ಮನ್ನೇ ಪ್ರತಿಬಿಂಬಿಸುತ್ತವೆ ಹಾಗೂ ಹಾಗೆ ಪ್ರತಿಬಿಂಬಿಸುವ ಕಣ್ಣುಗಳು ನಿಮ್ಮ ಮಕ್ಕಳದ್ದೇ ಆಗಿರುತ್ತವೆ. ನಿಮ್ಮ ಮಕ್ಕಳು ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳಿಗೆ ನೀವು ಮಾತ್ರ ಜವಾಬ್ದಾರರು ಎಂದು ತಿಳಿದುಕೊಳ್ಳುವ ಮುನ್ನ ಬದುಕಿನಲ್ಲಿ ಸರಿ ಮತ್ತು ತಪ್ಪು ಎಂಬ ಎರಡು ಕವಲು ದಾರಿಗಳ ನಡುವೆ ನಿಮ್ಮ ಮಗು ಸಿಲುಕಿಕೊಂಡಾಗ ಮೌಲ್ಯವನ್ನು ತಮ್ಮದಾಗಿಸಿಕೊಂಡ ಮಕ್ಕಳು ಕಷ್ಟವಾದರೂ ಸರಿ, ಸರಿಯಾದ ಮಾರ್ಗವನ್ನು ಆಯ್ದುಕೊಳ್ಳುತ್ತಾರೆ. ತಪ್ಪು ಹಾದಿಯಲ್ಲಿ ನಡೆಯುವ ಆಯ್ಕೆಯನ್ನು ತಮ್ಮದಾಗಿಸಿಕೊಂಡವರು ಆರಂಭದಲ್ಲಿ ಸುಖವನ್ನೇ ಸೂರೆಗೊಂಡರೂ ಕೂಡ ಅನಿಶ್ಚಿತತೆಯ ಬದುಕು ಅವರದ್ದಾಗುತ್ತದೆ. ನಿಮ್ಮ ಮಕ್ಕಳ ಬದುಕನ್ನು  ಮೌಲ್ಯಗಳಿಂದ ತುಂಬ ಬೇಕೇ ಹೊರತು ಭಯದಿಂದಲ್ಲ.ಒಂದು ಪ್ರಾಮಾಣಿಕ ಸಂಭಾಷಣೆ, ಚರ್ಚೆಯು ಸಂಬಂಧವನ್ನು ಉಳಿಸಬಲ್ಲದು …. ಆದರೆ ಒಂದು ಸುಳ್ಳು ಎಲ್ಲವನ್ನು ನಾಶಪಡಿಸಬಲ್ಲದು. ಒಬ್ಬ ವ್ಯಕ್ತಿಯ ತಪ್ಪು ನಿರ್ಧಾರ ಸಾಕಷ್ಟು ಜೀವಿಗಳ ಬದುಕಿನಲ್ಲಿ ಬಿರುಗಾಳಿಯನ್ನು ಎಬ್ಬಿಸಬಲ್ಲದು. ಆದ್ದರಿಂದ ಪಾಲಕರೇ…. ನಿಮ್ಮ ಮಕ್ಕಳು ಬದುಕಿನಲ್ಲಿ ಯಶಸ್ವಿಯಾಗಿದ್ದಾರೆಯೇ ಎಂದು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಬೇಡಿ… ಬದಲಾಗಿ ನಿಮ್ಮ ಮಕ್ಕಳು ಭಾವನಾತ್ಮಕವಾಗಿ ಪ್ರಾಮಾಣಿಕವಾಗಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಮಕ್ಕಳು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆಯೇ ? ತಮ್ಮ ಆಯ್ಕೆಯ ಪರಿಣಾಮಗಳ ಹೊಣೆಯನ್ನು ಹೊರುತ್ತಾರೆಯೇ  ಎಂದು ಪ್ರಶ್ನಿಸಿಕೊಳ್ಳಿ. ಬಹುಶಹ ಆಸ್ತಿ ಅಂತಸ್ತುಗಳಿಗಿಂತ ಹೆಚ್ಚಿನದಾಗಿ ನಾವು ನಮ್ಮ ಮಕ್ಕಳಿಗೆ ಕೊಡಬೇಕಾದದ್ದು ಮೌಲ್ಯಗಳು ಎಂಬ ತಲೆತಲಾಂತರವಾಗಿ  ಮುಂದುವರಿಸಲಾಗುವ ಆಸ್ತಿ.ನಾವು ನಮ್ಮ ಮಕ್ಕಳಿಗೆ ಕೇವಲ ಓದು, ಯಶಸ್ಸು, ವಿಧೇಯತೆಗಳನ್ನು ಮಾತ್ರ ಕಲಿಸಿದರೆ ಸಾಲದು ಧೈರ್ಯದಿಂದ ಬದುಕುವ,

“ಒಂದು ಕೊಲೆ ಮತ್ತು ಆತ್ಮವಿಮರ್ಶೆ” ವೀಣಾ ಹೇಮಂತ್ ಗೌಡ ಪಾಟೀಲ್  Read Post »

ಇತರೆ

“ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

ವಚನ ಸಂಗಾತಿ “ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ *ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು* ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರುಇರುಳು  ನಾಲ್ಕು ಜಾವ ವ್ಯಸನಕ್ಕೆ  ಕುದಿವರು.ಅಷ್ಟವಿಧಾರ್ಚನೆ ಷೋಢಶೋಪಚಾರಎಂಬರಲ್ಲದೆತಮ್ಮನಿಕ್ಕಿ ನಿಧಾನವ ಸಾಧಿಸುವರ ಆರನೂ ಕಾಣೆಕೂಡಲ ಚೆನ್ನ ಸಂಗಮ ದೇವಾ –  ಚೆನ್ನ ಬಸವಣ್ಣ *ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು* ಭವಿ ನಾಲ್ಕು ಜಾವ ಅಂದರೆ ದಿನದ ಹನ್ನೆರಡು ಗಂಟೆಗಳ ಕಾಲ ತನ್ನ ಹೊಟ್ಟೆ ಉಪಜೀವನ ಬಗ್ಗೆ ಚಿಂತಿಸುತ್ತಾನೆ . ಆಹಾರ ಸಂಗ್ರಹ ಹಣ ಧನ ಕನಕ ಕ್ರೋಢೀಕರಿಸುವುದು  ,ಮನೆ ಕಟ್ಟುವುದು ಆಸ್ತಿ ಮಾಡುವುದು ಮಕ್ಕಳ ಮಡದಿಯ ಸೌಖ್ಯವನ್ನು ಬಯಸುವುದು .ತನ್ನ ಇಂದ್ರಿಯ ಚಾಪಲ್ಯಕ್ಕೆ ಮಾರು ಹೋಗಿ ಅದಕ್ಕೆ ಬೇಕಾದ ವಸ್ತು ವಿಷಯಗಳನ್ನು ಅನುಭವವಿಸಲು ಪರಿ ತಪಿಸುತ್ತಾನೆ  . ಭವಿಯು ಪ್ರಾಪಂಚಿಕ ವಿಷಯಾದಿಗಳಲ್ಲಿ ತನ್ನ ಮೂಲ ಬೌದ್ಧಿಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ.ಕೇವಲ ತನ್ನ ಹೊಟ್ಟೆ ಹೊರೆಗೆ ಐಹಿಕ ಸುಖಕ್ಕೆ ಕುದಿಯುತ್ತಾನೆ ಚಡಪಡಿಸುತ್ತಾನೆ. *ಇರುಳು  ನಾಲ್ಕು ಜಾವ ವ್ಯಸನಕ್ಕೆ  ಕುದಿವರು ಹಗಲಿನಲ್ಲಿ ಸಂಪಾದಿಸಿದ ಹಣ ಧನ ಆಸ್ತಿ ಹೇಗೆ ವ್ಯಯ ಮಾಡಬೇಕು ಎಂಬ ಲೆಕ್ಕದಲ್ಲಿ ಸದಾ ವಿಚಾರಿಸುವ ಭವಿ ,ರಾತ್ರಿಯಿಡಿ ವ್ಯಸನಕ್ಕೆ ಜಾರುತ್ತಾನೆ ಕನಸಿನಲ್ಲಿಯೂ ಕೂಡ ತಾನು ಪಡೆಯಬಹುದಾದ ಪದಾರ್ಥಿಕ ಸಂಗ್ರಹಣೆ ಆಸ್ತಿ ಅವುಗಳನ್ನು ಪಡೆಯುವ ತಂತ್ರಗಾರಿಕೆ ಬಗ್ಗೆ   ರಾತ್ರಿ ನಾಲ್ಕು ಜಾವ ಅಂದರೆ ಒಂದು ಜಾವಕ್ಕೆ ನಾಲ್ಕು ಗಂಟೆ ಸಮಯ ನಿಗಧಿಯಾಗಿರುತ್ತದೆ .ಸಂಪಾದಿಸಿದ ಆಸ್ತಿಯನ್ನು ವ್ಯಸನದಲ್ಲಿ ಕಳೆಯುವದರಲ್ಲಿ ಕುದಿಯುತ್ತಿರುವ ಮನುಷ್ಯ ತನ್ನ ನೆಮ್ಮದಿ ಶಾಂತಿ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆ .ವ್ಯಸನ ದುರಾಭ್ಯಾಸದಲ್ಲಿ ತೊಡಗಿರುವ ಭವಿ ತಾನು ಗಳಿಸಿದ ಸಂಪತ್ತು ಆಸ್ತಿ ಎಲ್ಲಿ ತನ್ನ ಬಿಟ್ಟು ಹೋಗುತ್ತದೆ ಎಂದು ಸದಾ ಚಿಂತಿಸುತ್ತಾನೆ.ಆಗ ಮನುಷ್ಯ ತಾನು ಹಗಲು ಇರುಳು ವ್ಯಾಕುಲಕ್ಕೆ   ಒಳಗಾಗುತ್ತಾನೆ .ಹಗಲಿನಲ್ಲಿಯೂ ಹಂಬಲಿಸುವ ಮನ ರಾತ್ರಿಯಿಡಿ ಮತ್ತೆ ಚಿಂತಾಕ್ರಾಂತನಾಗುತ್ತಾನೆ . *ಅಷ್ಟವಿಧಾರ್ಚನೆ ಷೋಢಶೋಪಚಾರ ಎಂಬರಲ್ಲದೆ*   ಅನ್ಯ ಮಾರ್ಗದಿಂದ ಗಳಿಸಿದ ಆಸ್ತಿ ಹಣ ಸಂಪತ್ತು ಅವುಗಳ ಪಡೆದ ವಾಮ ಮಾರ್ಗಕ್ಕೆ ಸ್ವಲ್ಪ ಮಟ್ಟಿಗೆ ಶಾಂತಿ ಸಮಾಧಾನ ಹೊಂದಲು ಬಾಹ್ಯದಲ್ಲಿ ಅಷ್ಟವಿಧಾರ್ಚನೆ   ಹಾಗೂ ಅರ್ಘ್ಯ ಪಾದ್ಯ ದೂಪ ದೀಪ ನೈವೆದ್ಯ ಮುಂತಾದ ಷೋಢಶೋಪಚಾರ ಮುಂತಾದ ಒಣ ಆಚರಣೆಯಿಂದ ಭವಿ ಸಮಾಧಾನಪಡಲು ಯತ್ನಿಸುತ್ತಾನೆ. ತನ್ನ ಪ್ರತಿಷ್ಠೆಗೆ   ಆಡಂಭರದ ಪೂಜೆಯಲ್ಲಿ ತೊಡಗುತ್ತಾನೆ. ಇಂದು ಅನೇಕ ಶ್ರೀಮಂತರು ಸಂಸ್ಕಾರವಿಲ್ಲದಿದ್ದರೂ ಲಿಂಗಕ್ಕೆ ಸಮಾಜಕ್ಕೆ ಅನೇಕ ರೀತಿಯ ಆಚರಣೆಯ ಮೂಲಕ ತಮ್ಮ ಸ್ವಾಮ್ಯತ್ವವನ್ನು ಹೊಂದುತ್ತಾರೆ.ಪೂಜೆ ಪ್ರವಚನ ಕೀರ್ತನೆ ಸಾಮೂಹಿಕ ಪ್ರಸಾದ ಇದು ಹೊರಗೆ ಡಾಂಭಿಕವಾಗಿ ತೋರುವ ಇಂತಹ ಆಚರಣೆಗಳು ಲಿಂಗಕ್ಕೆ ಹೊರಗೆ .  *ತಮ್ಮನಿಕ್ಕಿ ನಿಧಾನವ ಸಾಧಿಸುವರ ಆರನೂ ಕಾಣೆ  ಕೂಡಲ ಚೆನ್ನ ಸಂಗಮ ದೇವಾ* ಸಂಸ್ಕಾರ ರಹಿತ ಭಾವ ಶುದ್ಧವಿಲ್ಲದವನ ಗಳಿಕೆ ಕಿಲ್ಬಿಷ ಉಂಟು ಮಾಡುತ್ತದೆ. ತನ್ನ ಚೈತನ್ಯವನ್ನು ನಂಬಿ ಸಮಷ್ಟಿಯ ನಿರಂತರ ಅಭಿವೃದ್ಧಿಗೆ ಸ್ವಾನುಭವ ಮಾಡುವ ಭಕ್ತ ಶ್ರೇಷ್ಠನಾಗುತ್ತಾನೆ. ಅಂತೆಯೇ ಲಕ್ಷಕೊಬ್ಬ ಭಕ್ತ ಕೋಟಿಗೊಬ್ಬ ಶರಣ ಎಂದಿದ್ದಾರೆ ಚೆನ್ನ ಬಸವಣ್ಣನವರು. ತನ್ನದೆನ್ನುವುದು  ಸತ್ಯ ಸಮತೆ ಶಾಂತಿ ತರ್ಕ ವೈಚಾರಿಕತೆ ಎಂಬ ಪ್ರಾಮಾಣಿಕ ಪ್ರಜ್ಞೆ ಅದುವೇ ನಿಜವಾದ ಆಸ್ತಿ ಖನಿಜ . ಉತ್ತಮ ಭಾವಗಳನ್ನು ಹೊಂದಿದ ಭಕ್ತನು ತನ್ನ ಉತ್ತಮ ಗುಣಗಳನ್ನು ಒತ್ತೆಯಿಟ್ಟು ನೆಮ್ಮದಿ ಶಾಂತಿ ಸಂತಸ ಎಂಬ   ನಿಧಾನವನ್ನು ಆಸ್ತಿಯನ್ನು ಗಳಿಸುವನು ,ಆದರೆ ಅಂತಹ ವ್ಯಕ್ತಿಗಳನ್ನು ಲಿಂಗ ಸಾಕ್ಷಿಯಾಗಿ ನಾನು ಕಾಣಲಾರೆನು ಎಂದು ಚೆನ್ನ ಬಸವಣ್ಣನವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ.ಸಮಾಜದಲ್ಲಿ ಒಳ್ಳೆಯ ನಡತೆ ಸಚ್ಚಾರಿತ್ರ್ಯಕ್ಕೆ ಬೆಲೆಕೊಡುವವರು ಕಡಿಮೆಯಾಗಿದ್ದಾರೆ ಲಾಂಛನ ಆಡಂಭರದ ಪೂಜೆ ಶ್ರೀಮಂತರ ಅಟ್ಟಹಾಸದಲ್ಲಿ ಲಿಂಗ ತತ್ವಮಸುಕಾಗುತ್ತಿದೆ ಎಂದೆನ್ನುವ ಭೀತಿ ಶರಣ ಚೆನ್ನ ಬಸವಣ್ಣನವ ವಚನದಲ್ಲಿ ಕಾಣಬಹುದು. ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ

“ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-23 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಗೆಳತಿಯ ಸಹಾಯ ತಾಯಿ ಊಟ ಮಾಡಿದ ನಂತರ ಅಕ್ಕ ತಂಗಿಯರಿಬ್ಬರೂ ಹೊರಡಲು ಅನುವಾದರು….. “ಅಮ್ಮಾ…. ನಾವಿಬ್ಬರೂ ಹೊರಗೆ ಹೋಟೆಲ್ ನಲ್ಲಿ ಊಟ ಮಾಡುತ್ತೇವೆ….ತಂಗಿ ದೊಡ್ಡಕ್ಕನ ಮನೆಗೆ ಹೋಗುತ್ತಿದ್ದಾಳೆ…. ಅಕ್ಕನಿಗೂ ನೀನು ಆಸ್ಪತ್ರೆಯಲ್ಲಿ ಇರುವ ವಿಷಯ ತಿಳಿಸಬೇಕಿದೆ…. ಅಲ್ಲಿಂದ ಹಾಗೇ ನಾನು ಆಶ್ರಮಕ್ಕೆ ತೆರಳುತ್ತಿದ್ದೇನೆ…. ಸಂಜೆ ನಿನ್ನೊಂದಿಗಿರಲು ಬರುತ್ತೇನೆ…. ನನ್ನ ಗೆಳತಿಯೊಬ್ಬಳು ಅನಾಥಾಶ್ರಮದಲ್ಲಿ ಇರುವುದರಿಂದ ನಿನ್ನ ಜೊತೆ ನನಗಿರಲು ಅವಕಾಶವಾಗಿದೆ… ಆಕೆ ಇತ್ತೀಚೆಗೆ ಬಂದಿದ್ದರು ಕೂಡ ಎಷ್ಟೋ ವರ್ಷಗಳ ಗೆಳತಿಯಂತೆ ನನ್ನ ಸಹಾಯಕ್ಕೆ ಹೆಗಲು ಕೊಡುತ್ತಿದ್ದಾಳೆ… ಆದರೂ ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಿದೆ…. ಎಂದು ಮಗಳು ತಿಳಿಸಿದಾಗ, ಸರಿ ಎನ್ನುವಂತೆ ತಲೆಯಾಡಿಸಿದಳು ಸುಮತಿ. ಏನೋ ನೆನಪಾದಂತೆ ಅನಿಸಿ….. ಒಂದು ನಿಮಿಷ ಇರು ಮಗೂ… ನನ್ನ ವಿಧವಾ ಪೆನ್ಷನ್ ಬರುವುದಿದೆಯಲ್ಲ…. ಅದನ್ನು ಹೇಗೆ ಪಡೆದುಕೊಳ್ಳುವುದು?… ನಾನು ಇಲ್ಲಿ ಆಸ್ಪತ್ರೆಯಲ್ಲಿದ್ದೇನೆ…. ನನ್ನ ಸಹಿ ಇಲ್ಲದೆ ಆ ರೂ.50 ಸಿಗುವುದಿಲ್ಲ…. ನನ್ನ ಕಷ್ಟವನ್ನು ಅರಿತ ನಮ್ಮೂರಿನ ಪೋಸ್ಟ್ ಮಾಸ್ಟರ್ ನನ್ನಿಂದ ಅರ್ಜಿಯನ್ನು ಹಾಕಿಸಿ, ಈ ವಿಧವಾ ಪೆನ್ಷನ್ ಬರುವಂತೆ ಮಾಡಿದ್ದರು…. ಅವರ ಈ ಸಹಾಯವನ್ನು ನಾನೆಂದಿಗೂ ಮರೆಯುವುದಂತೆ ಇಲ್ಲ…. ಎಂದು ಸುಮತಿ ಅಂದಾಗ, ಮಕ್ಕಳಿಗೆ ತಾಯಿ ಹೇಳಿದ್ದು ಸರಿ ಅನಿಸಿತು. ತಾಯಿ ಈ ವಿಧವಾ ಪೆನ್ಷನ್ ಗಾಗಿ ಕಚೇರಿಗಳಿಗೆ ಓಡಾಡಿದ್ದು ನೆನಪಾಯಿತು…. ಅದಕ್ಕಾಗಿ ನಮ್ಮ ಹೋಬಳಿಯ ಪೋಸ್ಟ್ ಮಾಸ್ಟರ್ ಮಾಡಿದ ಸಹಾಯ ಅಷ್ಟಿಷ್ಟಲ್ಲ. ಅವರ ಪರಿಶ್ರಮದಿಂದ ನಮ್ಮ ತಾಯಿಗೆ ತಿಂಗಳಿಗೆ 50 ರೂಪಾಯಿ ವಿಧವಾ ಪೆನ್ಷನ್ ಬರುತ್ತಿದೆ. ಕೆಲವೊಮ್ಮೆ ಪ್ರತಿ ತಿಂಗಳೂ ಬರದೇ ಎರಡು ಮೂರು ತಿಂಗಳಿನ ಹಣ ಒಟ್ಟಾಗಿ ಬರುತ್ತಿತ್ತು.  ಅದನ್ನು ತಾಯಿ ನಮಗಾಗಿ ತಿಂಡಿ ತಿನಿಸುಗಳನ್ನು ಮಾಡಿಕೊಡಲು ಅಥವಾ ಬಟ್ಟೆ-ಬರೆ ಕೊಡಿಸಲು ಖರ್ಚು ಮಾಡುತ್ತಿದ್ದಳು. ಈವರೆಗೂ ನಾವು ಗಮನಿಸಿದಂತೆ ನಮ್ಮ ತಾಯಿ ಅದರಿಂದ ಒಂದು ನಯಾ ಪೈಸೆಯನ್ನು ಕೂಡ ತನಗಾಗಿ ಖರ್ಚು ಮಾಡಿಕೊಂಡಿರಲಿಲ್ಲ. ಈ ಹಣವು ಕೂಡ ತಾಯಿಗೆ ಕೆಲವೊಮ್ಮೆ ಆಪದ್ಬಾಂಧವನಂತೆ ಸಹಾಯ ಮಾಡಿದ್ದೂ ಇದೆ. ಅದೂ ಕೂಡ ನಮಗಾಗಿ, ಎನ್ನುವುದನ್ನು ನೆನೆದಾಗ ಮಕ್ಕಳಿಬ್ಬರ ಕಣ್ಣುಗಳು ಹನಿ ಗೂಡಿದವು. ತಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ಈಗಲೂ ನಮ್ಮ ತಾಯಿಗೆ ನಮ್ಮದೇ ಚಿಂತೆ ಅಲ್ಲವೇ?…..”ನೋಡೋಣ ಅಮ್ಮಾ…. ನಾನು ದೊಡ್ಡಕ್ಕನ ಮನೆಯಿಂದ ನಮ್ಮ ಮನೆಗೆ ಹಿಂತಿರುಗುವಾಗ ಪೋಸ್ಟ್ ಮಾಸ್ಟರ್ ಮನೆಗೆ ಹೋಗಿ ಈ ಬಗ್ಗೆ ತಿಳಿದುಕೊಳ್ಳುತ್ತೇನೆ”…. ಎಂದು ಮೂರನೇ ಮಗಳು ಹೇಳಿದಳು. ಸರಿ ಎನ್ನುವಂತೆ ತಲೆ ಆಡಿಸಿದಳು ಸುಮತಿ. ಅಕ್ಕತಂಗಿಯರಿಬ್ಬರೂ ಆಸ್ಪತ್ರೆಯಿಂದ ಹೊರ ನಡೆದರು.  ತಂಗಿಯ ಜೊತೆಗೆ ಬಸ್ ನಿಲ್ದಾಣದವರೆಗೂ ಬಂದು, ಅವಳನ್ನು ದೊಡ್ಡಕ್ಕನ ಮನೆಯ ಕಡೆಗೆ ಹೋಗುವ ಬಸ್ ಹತ್ತಿಸಿ ತಾನು ಆಶ್ರಮದ ಕಡೆಗೆ ನಡೆದಳು. ದೊಡ್ಡಕ್ಕನ ಮನೆಗೆ ಹೋದ ತಂಗಿಯು ಅಮ್ಮನ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ತಿಳಿಸಿದಳು. ಅಮ್ಮನ ಅನಾರೋಗ್ಯದ ಬಗ್ಗೆ ತಿಳಿದು ಅವಳಿಗೂ ಬಹಳ ಸಂಕಟವಾಯಿತು….. “ಬಾವ ಕೆಲಸಕ್ಕೆ ಹೋಗಿದ್ದಾರೆ…. ಸಂಜೆ ಅವರು ಬಂದ ನಂತರ ನಾನು ಮತ್ತು ಬಾವ ಆಸ್ಪತ್ರೆಗೆ ಹೋಗುತ್ತೇವೆ”…. ಎಂದಳು ದೊಡ್ಡಕ್ಕ.  ದೊಡ್ಡಕ್ಕನ ಮಾತಿಗೆ ಹೂಂಗುಟ್ಟಿದಳು. ತನ್ನ ಎರಡನೇ ಅಕ್ಕ ಉಳಿದ ವಿಷಯಗಳನ್ನು ತಾನೇ ದೊಡ್ಡಕ್ಕನಿಗೆ ತಿಳಿಸುತ್ತೇನೆ ಎಂದು ಹೇಳಿದ್ದರಿಂದ ಅವಳು ಹೆಚ್ಚಾಗಿ ಇನ್ನೇನೂ ಹೇಳಲಿಲ್ಲ. ಸ್ವಲ್ಪ ಹೊತ್ತು ಅಕ್ಕನ ಮನೆಯಲ್ಲಿದ್ದು ಮಕ್ಕಳ ಜೊತೆ ಕಾಲ ಕಳೆದು ನಂತರ ಸಕಲೇಶಪುರದ ಬಸ್ ನಿಲ್ದಾಣಕ್ಕೆ ಬಂದು ತನ್ನ ಊರ ಕಡೆಗೆ ಹೋಗುವ ಬಸ್ ಹತ್ತಿ ಒಬ್ಬಳೇ ಊರ ಕಡೆಗೆ ಹೊರಟಳು. ಒಬ್ಬಳೇ ಬಸ್ಸ್ ನಲ್ಲಿ ಕುಳಿತು ಕಿಟಕಿಯ ಆಚೆಗೆ ನೋಡುತ್ತಾ ನಿಟ್ಟಿಸಿರು ಬಿಟ್ಟಳು. ನಮ್ಮ ತಾಯಿ ಇಷ್ಟು ಬೇಗ ನಮ್ಮಿಂದ ದೂರವಾಗುತ್ತಾಳೆಯೇ? ಎನ್ನುವ ವಿಷಯ ಮನಸ್ಸಿಗೆ ಬಂದಾಗ ಅವಳಿಗ ಅರಿವಿಲ್ಲದಂತೆಯೇ ಕಣ್ಣುಗಳಿಂದ ನೀರು ಜಾರಿತು. ಯಾರಿಗೂ ಕಾಣದೆಂದು ಕಿಟಕಿಯ ಆಚೆ ನೋಡುತ್ತಾ ಕುಳಿತಳು. ಮನದ ತುಂಬಾ ನೋವು ಮಡುಗಟ್ಟಿತ್ತು. ಬಸ್ಸು ಯಾವಾಗ ಊರಿಗೆ ತಲುಪಿತು ಎಂಬುದು ತಿಳಿಯಲಿಲ್ಲ. ಬಸ್ಸಿನಿಂದ ಇಳಿದು ಮನೆ ತಲುಪಿದಳು. ಇಂದೇಕೋ ಮನೆ ಎಂದಿಗಿಂತ ಬಿಕೋ ಎನ್ನುವಂತೆ ಇತ್ತು. ತೀವ್ರ ಮೌನ ಆವರಿಸಿದಂತೆ ಅನಿಸಿತು. ಅಮ್ಮ ಬೇಗ ಆರೋಗ್ಯಪೂರ್ಣಳಾಗಿ ಮನೆಗೆ ಹಿಂದಿರುಗುತ್ತಾಳೆ ಎನ್ನುವ ಆಸೆಯನ್ನು ಹೊತ್ತು ಒಬ್ಬಳೇ ಹೇಗೋ ಕಾಲ ಕಳೆಯುತ್ತಿದ್ದಳು. ಆದರೆ ಈಗ ಜೊತೆಗೆ ನೋವನ್ನು ಮರೆಯಲು ಅಕ್ಕನ ಹೆಗಲೂ ಇಲ್ಲ. ಅಮ್ಮನೂ ಇಲ್ಲ. ಹೊರಡುವಾಗ ದೊಡ್ಡಕ್ಕ….” ಇವತ್ತು ಇಲ್ಲೇ ಇರೇ… ಒಬ್ಬಳೇ ಮನೆಗೆ ಹೋಗಬೇಡ…. ಎಂದರೂ ಕೇಳಲಿಲ್ಲ ನಾನು…. ಏನು ಮಾಡುವುದು ಇಲ್ಲಿ ನಾನು ಶಾಲೆಗೆ ಹೋಗದಿದ್ದರೆ ಅಮ್ಮನ ಕೆಲಸ ಕೈ ಬಿಟ್ಟು ಹೋಗುತ್ತದೆ…..ನನಗೂ ಈಗ ಜೊತೆಗೆ ಅಕ್ಕಂದಿರಿಬ್ಬರಲ್ಲಿ ಯಾರಾದರೂ ಬೇಕಿತ್ತು…. ಈ ನೋವನ್ನು ನಾನೊಬ್ಬಳೇ ಸಹಿಸಲಾರೆ… ಏನು ಮಾಡಲಿ?…” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾ ಹಾಸಿಗೆ ಮೇಲೆ ದೊಪ್ಪನೆ ಉರುಳಿದಳು. ಇತ್ತ ಆಶ್ರಮಕ್ಕೆ ಹೋದವಳಿಗೆ ತಂಗಿಯನ್ನು ಒಬ್ಬಳನ್ನೇ ಮನೆಗೆ ಕಳುಹಿಸಿದ್ದರ ಬಗ್ಗೆ ಬಹಳ ಬೇಸರವಿತ್ತು. ಆದರೆ ಏನು ಮಾಡುವುದು? ಅನ್ಯಮಾರ್ಗವಿರಲಿಲ್ಲ. ಆಶ್ರಮಕ್ಕೆ ಬಂದ ಕೂಡಲೇ ಅವಳ ಗೆಳತಿ ಅವಳ ತಾಯಿಯ ಬಗ್ಗೆ ವಿಚಾರಿಸಿಕೊಂಡಳು. ಈಗ ಈ ಗೆಳತಿಯ ಜೊತೆಯೇ ಈ ಹುಡುಗಿಗೆ ಆಧಾರ. ಅವಳ ಹೆಗಲ ಮೇಲೆ ತಲೆ ಇಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿದಳು. ಅವಳು ಇವಳ ತಲೆಯನ್ನು ನೇವರಿಸುತ್ತಾ ಸಮಾಧಾನಪಡಿಸಿದಳು. ಸ್ವಲ್ಪ ಹೊತ್ತಿನ ನಂತರ ಸುಮತಿಯ ಮಗಳು ಆಶ್ರಮದ ಮಕ್ಕಳ ಓದಿನ ಕಡೆಗೆ ಗಮನಹರಿಸಿದಳು. ಅವಳು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಗೆಳತಿ ಅಡುಗೆ ಮಾಡುತ್ತಿದ್ದಳು. ಅಷ್ಟೊತ್ತಿಗೆ ಸಂಜೆಯಾಗಿತ್ತು. ಮಾಡಿದ ಅಡುಗೆಯನ್ನು ಗೆಳತಿ ಈ ಹುಡುಗಿಗೆ ಬಡಿಸಿ, ಒಂದು ಪುಟ್ಟ ಡಬ್ಬಿಯಲ್ಲಿ ತಾನು ಮಾಡಿದ ಈರುಳ್ಳಿ ಸೋಗೆಯ ಪಲ್ಯವನ್ನು ತುಂಬಿಕೊಟ್ಟು….. “ಇಲ್ಲಿಯ ಉಳಿದ ಕೆಲಸವನ್ನು ಮಾಡಿ, ಮಕ್ಕಳ ಕಲಿಕೆಗೆ ನಾನು ಸಹಾಯ ಮಾಡುತ್ತೇನೆ…. ನೀನು ಆಸ್ಪತ್ರೆಗೆ ತೆರಳಿ ನಿನ್ನ ತಾಯಿಯ ಯೋಗ ಕ್ಷೇಮವನ್ನು ನೋಡಿಕೋ…. ಎಂದಳು. ತನಗೆ ಈ ಸಮಯದಲ್ಲಿ ಆಸರೆಯಾಗಿ ಬಂದ ತನ್ನದೇ ಪ್ರಾಯದ ಗೆಳತಿಯನ್ನು ಬಿಗಿಯಾಗಿ ಅಪ್ಪಿಕೊಂಡು…. ಯಾವ ಜನ್ಮದಲ್ಲಿ ನೀನು ನನಗೆ ಅಕ್ಕ ಅಥವಾ ತಂಗಿ ಆಗಿದ್ಯೋ ತಿಳಿಯದು… ನಿನ್ನ ಈ ಋಣವನ್ನು ನಾನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಗೆಳತಿ…. ಎಂದು ಹೇಳುತ್ತಾ ತನ್ನ ಕೃತಜ್ಞತೆಯನ್ನು ತಿಳಿಸಿದಳು…. “ಹೇಯ್ ಇದೆಲ್ಲಾ ಏನೂ ದೊಡ್ಡ ಕೆಲಸವಲ್ಲ…. ನನಗೂ ತಾಯಿ ಇದ್ದಾಳೆ… ನಿನ್ನ ನೋವು ನನಗೂ ಅರ್ಥವಾಗುತ್ತೆ…. ನಡಿ ಮೊದಲು ಆಸ್ಪತ್ರೆಗೆ ಹೋಗು…. ಎಂದು ಹೇಳುತ್ತಾ ಬಾಗಿಲವರೆಗೂ ಜೊತೆಗೆ ಬಂದು ಬಿಳ್ಕೊಟ್ಟಳು.

Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ “ವಚನಕಾರರ ಹರಿಕಾರ:ಫಗು ಹಳಕಟ್ಟಿ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ವಚನಕಾರರ ಹರಿಕಾರ:ಫಗು ಹಳಕಟ್ಟಿ” ನಾಡಿನ ನೆಲದ ನಂದಾದೀಪ,ನುಡಿಯ ಬೆಳಕಿನ ಶಾಶ್ವತ ರೂಪ;ಫಗು ಹಳಕಟ್ಟಿ ಮಹನೀಯರ ಹೆಸರು,ಕನ್ನಡಿಗರ ಹೃದಯದ ಚಿರಸ್ಮರಣೆ// ಧಾರವಾಡದ ಧರೆಗೆ ಜನಿಸಿ,ಧೀಮಂತ ಚಿಂತನೆ ಹೊತ್ತು ಬೆಳೆದು;ಸರಳ ಬದುಕಿನ ಸತ್ಯದ ದಾರಿಯಲ್ಲಿ,ಸಾಹಿತ್ಯ ಸೇವೆಯೇ ಜೀವನವಾಗಿಸಿ// ವಚನಗಳ ಅಮೃತವನು ಹುಡುಕುತ್ತ,ಹಳ್ಳಿ-ಹಳ್ಳಿ ಹೆಜ್ಜೆ ಇಟ್ಟರು;ತಾಳೆಗರಿ, ಹಸ್ತಪ್ರತಿ, ಹಳೆಯ ಗ್ರಂಥಗಳಲಿ,ಅಮೂಲ್ಯ ನಿಧಿಯನು ಕಾಪಾಡಿದರು// ಚದುರಿದ ವಚನ ಮುತ್ತುಗಳನು,ಒಂದೊಂದು ಹಾರವ ಮಾಡಿ ಜೋಡಿಸಿ;ಶರಣರ ಸಂದೇಶದ ಸಿರಿಯನ್ನು,ಜಗದ ಮುಂದೆ ಬೆಳಗಿಸಿದರು// ಶ್ರಮವೇ ಅವರ ಉಸಿರಾಯಿತು,ಸೇವೆಯೇ ಅವರ ಜೀವನವಾಯಿತು;ನಿರಹಂಕಾರದ ನಗುವಿನೊಳಗೆ,ಜ್ಞಾನಜ್ಯೋತಿ ಸದಾ ಹೊಳೆಯಿತು// ವ್ಯಕ್ತಿತ್ವದ ಎತ್ತರ ಬೆಟ್ಟದಷ್ಟು,ವಿನಯದ ಆಳ ಸಾಗರದಷ್ಟು;ಕಾಯಕವೇ ಕೈಲಾಸವೆಂಬ ತತ್ತ್ವವನು,ತಮ್ಮ ಬದುಕಿನಲ್ಲೇ ತೋರಿದರು// ವಚನ ಸಾಹಿತ್ಯದ ರಕ್ಷಕರಾಗಿ,ಕನ್ನಡದ ಕಾವಲುಗಾರರಾದರು;ಶರಣರ ಚಿಂತನೆ ಚಿರಂಜೀವಿಯಾಗಿ,ಮುಂದಿನ ಪೀಳಿಗೆಗೆ ಉಡುಗೊರೆಯಾದರು// ಫಗು ಹಳಕಟ್ಟಿ ಎಂಬ ಹೆಸರು,ಕನ್ನಡದ ಕಿರೀಟದ ಹೊಳೆಯುವ ರತ್ನ;ವಚನಗಳ ಬಟ್ಟೆ ನೇಯ್ದ ಮಹಾಶಿಲ್ಪಿ,ಸಾಹಿತ್ಯ ಲೋಕದ ಅಮರ ಚೇತನ// ನಾವು ಹೋಗೋಣ ಅವರ ಹಾದಿಯನು,ನಾವು ಬೆಳಗೋಣ ಜ್ಞಾನದ ದೀಪವನು;ವಚನಗಳ ಮೌಲ್ಯ ಉಳಿಸೋಣ ಎಲ್ಲರೂ,ಫಗು ಹಳಕಟ್ಟಿ ಆದರ್ಶವನು ಪಾಲಿಸೋಣ ಸದಾಕಾಲ// ವಚನಗಳ ವನದ ಕಾವಲುಗಾರ,ಕನ್ನಡ ನುಡಿಯ ಅಪರೂಪದ ಸೇವಕ;ಫಗು ಹಳಕಟ್ಟಿ ಚಿರಸ್ಮರಣೀಯ,ಸಾಹಿತ್ಯಾಕಾಶದ ಧ್ರುವತಾರೆ// ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಅವರ “ವಚನಕಾರರ ಹರಿಕಾರ:ಫಗು ಹಳಕಟ್ಟಿ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ “ನ್ಯಾಯದ ಕೂಗು”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನ್ಯಾಯದ ಕೂಗು” ಬಡಿಯೋಣ ನ್ಯಾಯದ ಕದಮೌನದ ಗೋಡೆ ಕುಸಿಯುವ ತನಕ,ಮುಖವಾಡಧಾರಿಗಳನಿಜಮುಖ ಬೆಳಕಿಗೆ ಬರುವ ತನಕ,! ಎಚ್ಚೆದ್ದು ಕೊಳ್ಳೋಣ….ನಿದ್ರಿಸಿದ ಮನಸ್ಸುಗಳನ್ನೆಬ್ಬಿಸಿ,ಕಪಟದ ನೆರಳಲ್ಲಿ ಬೆಳೆದಶಾಂತಿ ಕದಡುವ ದುಷ್ಟರ ಓಡಿಸಿ,! ಹೋರಾಡೋಣ….ಸುಳ್ಳಿನು ಬಿತ್ತುವ ಕಣಿವೆಗಳಲ್ಲಿ,ದ್ವೇಷದ ಬೆಳೆಯನು ಬೆಳೆಸುವಕಾಣದ ಕೈಗಳ ವಿರುದ್ಧ ಸಟೆದು ನಿಂತು,! ಧ್ವನಿಯಾಗೋಣ….ನಿಶ್ಯಬ್ದದ ಕಣ್ಣೀರಿಗೆ ಧ್ವನಿಯಾಗಿ,ನ್ಯಾಯದ ಹಾದಿಯಲಿ ನಡೆವಶೋಷಿತರ ನಂಬಿಕೆಗಳ ಪರ ನಿಂತು,! ಚಿಂತಿಸಿ ಬಾಳೋಣ…ಸತ್ಯದ ದೀಪಗಳ ಎಲ್ಲೆಡೆ ಬೆಳಗಿಸಿ,ಮೋಸದ ಜಾಲವನು ಬೀಸಿದಕೈಗಳಿಗೆ ಕಾನೂನಿನ ಬಿಸಿ ಮುಟ್ಟಿಸಿ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ “ನ್ಯಾಯದ ಕೂಗು” Read Post »

ಕಾವ್ಯಯಾನ

ಕಾವ್ಯ ಸುಧೆ ಅವರ ಕವಿತೆ “ನನ್ನಾತ್ಮ ಸಖ”

ಕಾವ್ಯ ಸಂಗಾತಿ ಕಾವ್ಯ ಸುಧೆ “ನನ್ನಾತ್ಮ ಸಖ” ಏಕಾಂತದಲ್ಲಿ ಜೊತೆಯಾದವನು ನೀನುಭವಸಾಗರವ ದಾಟಿಸಿದವ ನೀನು.ದಣಿದಾಗ ಮೈದಡವಿ ಮಲಗಿಸಿದವ ನೀನು,ನನ್ನೆಲ್ಲಾ ಕನಸಿಗೆ ಕಾವಲಾದವನು ನೀನು. ಮನನೊಂದಾಗ ಸಾಂತ್ವಾನಿಸಿದವ ನೀನುಬೇಸರಕೆ ನನ್ನ ಹಾಡಾದವ ನೀನುಲೋಕದ ನಜರಿಗೆ ಎದೆಗೊಟ್ಟು ನಿಂತವ ನೀನು,ಸೋತೆನಾ ಎಂದಾಗ ಗೆಲುವು ತಂದವ ನೀನು ಕನ್ನಡಿಯಲ್ಲಿ ಪ್ರತಿಬಿಂಬವಾಗಿ ನಕ್ಕವನು ನೀನುಉಸಿರಿನ ಜಪದಲ್ಲಿ ಓಂಕಾರವಾಗಿ ಮಿಡಿದವ ನೀನುನನ್ನೊಳಗೆ ನಾ ಹುಡುಕಿ ಕಂಡುಕೊಂಡ ಸತ್ಯನನ್ನೊಳಗಿನ……..ನನ್ನಾತ್ಮಸಖ ನೀನು ! ಕಾವ್ಯ ಸುಧೆ

ಕಾವ್ಯ ಸುಧೆ ಅವರ ಕವಿತೆ “ನನ್ನಾತ್ಮ ಸಖ” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-32 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅಸುರರನ್ನು ಮಣಿಸಿದೆ ಅಂಜನಾಸುತನ ಬಲದಿಂದ ನಮ್ಮೆಡೆಗೆ ಮುನ್ನುಗ್ಗಿಬರುತ್ತಿದ್ದ ದೈತ್ಯಸೇನೆಯಲ್ಲಿ ಅಪರಿಮಿತ ಬಲದ ರಾಕ್ಷಸಿಯರೂ ಇದ್ದರು. ಯುದ್ಧಕ್ಕೆ ಸಿದ್ಧನಾಗಿ ನಿಂತಿದ್ದ ನನ್ನ ರಥದಲ್ಲಿದ್ದ ಧ್ವಜವದು ಅವರ ಕ್ರೂರದೃಷ್ಟಿಗೆ ಬಿತ್ತು. ನಾನು ಹನುಮಧ್ವಜಧಾರಿ. ನನ್ನ ರಥದ ಬಾವುಟದಲ್ಲಿದ್ದವನು ಆ ಶ್ರೀರಾಮನ ಪ್ರಿಯಭಂಟ ಹನುಮಂತ. ರಕ್ಕಸಿಸಮೂಹವದು ಅಳುಕಿತು ಮಾರುತಸುತನನ್ನು ಕಂಡೊಡನೆಯೇ. ಅಂದು ಸಾಗರ ಉಲ್ಲಂಘನದ ಆ ಸಮಯದಲ್ಲಿ ತನ್ನನ್ನು ನುಂಗಿದ ರಾಕ್ಷಸಿಯ ದೇಹ ಸೀಳಿದವನು ಆಂಜನೇಯ. ಲಂಕೆಗೆ ಹೋದ ಬಳಿಕ ಅಲ್ಲಿ ಎದುರಾದ ರಕ್ಕಸಿ ಪಡೆಗೆ ರಾಕ್ಷಸ ರೂಪ ತೋರಿದವನು ವಾಯುಪುತ್ರ. ಆ ಭೀಕರ ನೆನಪು ಮೂಡಿತು ನನ್ನನ್ನು ಎದುರಿಸಲು ಬಂದಿದ್ದ ರಾಕ್ಷಸಿಯರಿಗೆ.ಅಂದು ಲಂಕಿಣಿಯನ್ನು ಬಲವಾಗಿ ಒದೆದ ಬಲಶಾಲಿ ಹನುಮಂತ ಇಂದಿಲ್ಲಿಗೆ ಮತ್ತೆ ಬಂದಿದ್ದಾನೆ ಎಂಬ ಭ್ರಮೆಗೆ ಒಳಗಾದ ರಕ್ಕಸಿಯೊಬ್ಬಳು ದೂರದೂರಕ್ಕೆ ಓಡಿದಳು, ರಣದ ಆಸಕ್ತಿಯನ್ನೇ ತೊರೆದವಳಂತೆ, ಮರಣ ಭಯಕ್ಕೆ ಒಳಗಾದವಳಂತೆ.ಬಾಲಕ್ಕೆ ಬಿದ್ದ ಬೆಂಕಿಯಿAದ ಲಂಕೆಗೆ ಬೆಂಕಿಯಿತ್ತ ಹನುಮ ಸಾಹಸ ನೆನಪಾಯಿತು ಇನ್ನೊಬ್ಬ ರಕ್ಕಸಿಗೆ. “ಮೊದಲೇನಿದ್ದರೂ ನನ್ನ ಮನೆಯನ್ನು ಉಳಿಸಿಕೊಳ್ಳುತ್ತೇನೆ. ಆಮೇಲೆ ಯುದ್ಧದ ಮಾತು” ಎಂದು ಬೊಬ್ಬೆ ಹೊಡೆದವಳು ತನ್ನ ಮನೆಗೆ ಓಡಿದಳು. ಮನೆಯೊಳಗಿದ್ದ ಸರಕನ್ನೆಲ್ಲಾ ಹೊರಗೆಸೆಯಲು ಶುರುಮಾಡಿದಳು.“ರಕ್ಕಸಿಯ ನೆರಳನ್ನು ಸಹಿಸುವುದಿಲ್ಲ ಈ ಕಪಿ” ಎಂದ ಇನ್ನೊಬ್ಬ ರಾಕ್ಷಸಿ ತನ್ನ ನೆರಳದು ಭೂಮಿಯ ಮೇಲೆ ಬೀಳದಂತಹ ತಾಣವನ್ನು ಹುಡುಕಿ ಅಲ್ಲಿ ಹೋಗಿ ನಿಂತಳು.ಹೀಗೆ ಯುದ್ಧಾಸಕ್ತರಾಗಿ ಬಂದ ರಕ್ಕಸಿಯರಿಗೆ ಭೀತಿ ಮೂಡಲು ನನ್ನ ಧ್ವಜದಲ್ಲಿದ್ದ ಹನುಮ ಕಾರಣನಾದ. ಹೀಗಿದ್ದಾಗಲೇ ಹನುಮನಿಗೆ ಹೆದರುವವಳು ತಾನಲ್ಲ ಎಂದು ಗತ್ತು ಗಾಂಭೀರ್ಯದಿAದ ಮುಂದೆ ಬಂದಳು ಒಬ್ಬ ರಕ್ಕಸಿ. ತನ್ನ ದೈತ್ಯ ಮೊಲೆಗಳಿಂದಲೇ ಶತ್ರು ಸೈನ್ಯವನ್ನು ಪುಡಿಗಟ್ಟುತ್ತೇನೆ ಎಂದು ಅಬ್ಬರಿಸಿದಳು. ಹಾಗೆ ಹೇಳಿದವಳು ಯೋಜನಸ್ತನಿಯೆಂಬ ರಾಕ್ಷಸಿ. ಅರ್ಜುನ ಸೇನೆಯನ್ನು ನಾಶಮಾಡಲು ನನ್ನ ಹೊಟ್ಟೆಯಿದು ಸಾಕು ಎಂದು ಆರ್ಭಟಿಸಿದಳು ಲಂಬೋದರಿ ಎಂಬ ನಿಶಾಚರಿ ದೈತ್ಯೆ. ಹೀಗೆ ಇವರಿಬ್ಬರೂ ಹೊಟ್ಟೆ, ಮೊಲೆಗಳನ್ನು ಮುಂದುಮಾಡಿಕೊAಡು, ಉಳಿದ ಅಸುರ ಪಡೆಯೊಡನೆ ನಮ್ಮ ಸೇನೆಯನ್ನು ನಾಶಪಡಿಸುವ ಉತ್ಸಾಹ ತೋರಿದರು.ಆಗಲೇ ಭೀಕರ ರೂಪದಲ್ಲಿ ಬಂದ ಭೀಷಣ ಮಹಾಸ್ತçಗಳ ಮಳೆಯನ್ನೇ ಕರೆದ, ನನ್ನ ಮೇಲೆ. ಬಗೆಬಗೆಯ ಮೃಗಗಳ ರೂಪವನ್ನು ತಾಳಿ ಬೆದರಿಸುವ ಯತ್ನ ಮಾಡಿದ. “ನನಗೆ ಜನ್ಮ ಕೊಟ್ಟವನಿಗೆ ಮರಣವನ್ನು ತಂದಿಟ್ಟವನು ನಿನ್ನ ಅಣ್ಣ ಭೀಮ. ನೀನೆಂತು ಪ್ರಾಣ ಉಳಿಸಿಕೊಳ್ಳುವೆಯೋ ನೋಡುತ್ತೇನೆ. ನಿನ್ನನ್ನು ಹಿಡಿದು ನರಮೇಧ ಯಾಗಕ್ಕೆ ಬಲಿಪಶುವಾಗಿಸದೆ ಬಿಡುವುದಿಲ್ಲ” ಎಂದು ಭೂಮಿ ನಡುಗುವಂತೆ ಬೊಬ್ಬಿರಿದ ಭೀಷಣ.ಅವನ ಭೀಕರ ಬೊಬ್ಬೆಯದು ನನ್ನಲ್ಲಿ ನಗು ಮೂಡಿಸಿತು. ನನ್ನ ರಕ್ಷೆಗಾಗಿ ಉಗ್ರವಾದ ಬಾಣವೊಂದನ್ನು ಹೂಡಿದೆ. ನನ್ನ ಒಂಟಿ ಬಾಣದ ಏಟಿಗೆ ಜಂಟಿ ಜಂಟಿಯಾಗಿ ತತ್ತರಿಸಿಹೋದರು ಅಸುರರು. ಒಂದರ ಹಿಂದೊAದರAತೆ ಶರಗಳನ್ನು ಪ್ರಯೋಗಿಸುತ್ತಲೇ ಹೋದೆ ಅಸುರರ ಮೇಲೆ.ಬಿರುಗಾಳಿ ಬೀಸಿದಾಗ ಮೋಡಗಳೆಲ್ಲಾ ಚದುರಿಹೋಗುವಂತೆ ದಿಕ್ಕುದಿಕ್ಕಿಗೆ ಹೋಗಿಬಿದ್ದರು ಅಸುರರು. ಕೆಲವರ ಅಂಗಾAಗಗಳು ಮುರಿದುಹೋದವು. ಕೈಕಾಲುಗಳನ್ನು ಕಳೆದುಕೊಂಡರು ಕೆಲವರು. ಕೆಲವರ ದೇಹದಲ್ಲಿ ನಾನು ಪ್ರಯೋಗಿಸಿದ ಬಾಣಗಳು ನೆಟ್ಟಿದ್ದವು. ವೇದನೆಗಳನ್ನು ತಾಳಲಾರದೆ ಕೆಲವರು ಪ್ರಾಣಬಿಟ್ಟರು. ಜೀವ ಉಳಿಸಿಕೊಳ್ಳುವುದಕ್ಕಾಗಿ ಗಿಡಮರಗಳ ಆಶ್ರಯ ಪಡೆದರು ಕೆಲವರು. ಯುದ್ಧರಂಗದಿAದಲೇ ಓಡಿಹೋಗಿ ಉಳಿದೆವು ತಾವು ಎಂದು ಬೀಗಿದರು ಕೆಲವರು.ಈಗ ನನಗೆ ನನ್ನ ಧ್ವಜದಲ್ಲಿ ಕುಳಿತಿದ್ದ ಹನುಮನ ನಿಜ ನೆರವು ದೊರಕಿತು. ಸ್ತನ, ಉದರಗಳಿಂದ ಸೈನಿಕರನ್ನು ಬಡಿಬಡಿದು ಕೊಲ್ಲುತ್ತಿದ್ದ ಯೋಜನಾಸ್ತನಿ, ಲಂಬೋದರಿಯರೆAಬ ರಕ್ಕಸಿಯರನ್ನು ಕಂಡು ಅಚ್ಚರಿಪಟ್ಟ ಅಂಜನಾಸುತ. ಹಿಂದಿನ ನೆನಪೆಲ್ಲವೂ ಬಂತು ಅವನಿಗೆ. ನಸುನಕ್ಕ. ತನ್ನ ಬಾಲವನ್ನು ಅಸುರರಿದ್ದ ದಿಕ್ಕುದಿಕ್ಕಿಗೆ ಬಡಿದ. ಹನುಮಂತನ ಬಾಲದ ಬಲವಾದ ಏಟಿಗೆ ಇನ್ನೂ ಶಕ್ತಿ ಮೂಡದ ಬಾಲರಂತಾಗಿಹೋದರು ರಕ್ಕಸರು. ಜೋರುಜೋರಾಗಿ ಚೀರುತ್ತಾ ಪ್ರಾಣ ಕಳೆದುಕೊಂಡರು. ಎಲ್ಲೆಡೆಯೂ ಅಸುರರ ಉಗ್ರರೂಪವನ್ನು ತೋರುತ್ತಿದ್ದ ರಣರಂಗವೀಗ ಜೀವಂತ ಅಸುರರಿಲ್ಲದೆಯೇ ಶೂನ್ಯವಾಗಿ ತೋರುತ್ತಿತ್ತು. ಅಸುರರನ್ನು ಕೊಲ್ಲುವ ಬಯಲಾಟದೆಡೆಗೆ ಮನಸ್ಸು ಮಾಡಿದ್ದ ಹನುಮಂತ ಈಗ ಅಸುರ ತಾಣವನ್ನು ಬಯಲು ಬಯಲಾಗಿಸಿದ್ದ.ತನ್ನವರನ್ನು ಕಳೆದುಕೊಂಡ ಭೀಷಣ ಭೀತಿಗೆ ಒಳಗಾದ. ತಾನು ಹೀಗೆಯೇ ಇದ್ದರೆ ತನ್ನ ಪ್ರಾಣವೂ ಉಳಿಯಲಾರದು ಎನ್ನುವುದು ದೃಢವಾಯಿತು ಅವನಿಗೆ. ಮಾಯಾವಿಯಾಗಿ ಕೈಚಳಕ ತೋರಿಸಲು ನಿರ್ಧಾರ ಮಾಡಿದ.ತಕ್ಷಣವೇ ಅಲ್ಲೊಂದು ಪುಣ್ಯಾಶ್ರಮ ಕಾಣಿಸಿಕೊಂಡಿತು. ಅಸುರ ರೂಪವನ್ನು ಕಳಚಿಕೊಂಡ ಭೀಷಣ ಮುನಿರೂಪದಲ್ಲಿ ಕಾಣಿಸಿಕೊಂಡ. ಅದೀಗ ಯುದ್ಧರಂಗವಾಗಿರಲಿಲ್ಲ. ಅಸುರ ಪಟ್ಟಣವಾಗಿರಲಿಲ್ಲ. ಎಲ್ಲೆಡೆಯೂ ಗಂಗಾನದಿಯ ನೀರಿನ ಹರಿವು. ಮುನಿಗಳ ಕುಟೀರಗಳು. ಯಜ್ಞಕುಂಡದಿದೆದ್ದ ಹೊಗೆ. ಹೂವಿನ ಗಿಡಗಳು. ಹಣ್ಣಿನ ಮರಗಳು. ಭೀಷಣನ ಭೀಕರತೆಯನ್ನು ಕಣ್ಣಾರೆ ಕಂಡಿದ್ದ ನನ್ನ ಕಣ್ಣಿಗೂ ಭ್ರಾಂತಿ ಮೂಡುವಂತಹ ವಾತಾವರಣವಲ್ಲಿ ನಿರ್ಮಾಣಗೊಂಡಿತ್ತು.ಮುನಿಯ ವೇಷದಲ್ಲಿ ನನ್ನೆದುರು ಬಂದ ಭೀಷಣ “ಅಸುರರನ್ನು ಕೊಲ್ಲುವುದು ಸರಿಯಲ್ಲ. ಹಿಂಸೆಯನ್ನು ಮಾಡದಿರು. ದೇವರ ಅರ್ಚನೆಯ ಮೂಲಕ ಸನ್ಮಾರ್ಗದಲ್ಲಿ ಸಾಗು” ಎಂದು ಕಪಟ ಬೋಧನೆ ಮಾಡಿದ.ತಕ್ಷಣವೇ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಅವನ ಮೂಲರೂಪವೇ ಒದಗಿಬಂತು. ಮುನಿಯಾಗಿದ್ದವ ಮತ್ತೆ ಅಸುರನಾದ. ಒಡನೆಯೇ ಆಕ್ರಮಿಸಿ ಅವನ ಪಟ್ಟಣದಲ್ಲಿದ್ದ ಸಂಪತ್ತೆಲ್ಲವನ್ನೂ ಸೂರೆಗೊಂಡೆ. ಅದನ್ನು ಹಸ್ತಿನಾವತಿಗೆ ಕಳುಹಿಸಿಕೊಟ್ಟೆ. ಕುದುರೆಯ ಜೊತೆಗೆ ಮುಂದಕ್ಕೆ ಸಾಗಿದ ನಮ್ಮನ್ನು ಕರಬೀಸಿ ಕರೆಯುತ್ತಿತ್ತು ಮಣಿಪುರ… ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

ಇತರೆ

“ಹಳ್ಳಿ ಹಾಡು-ಪಟ್ಟಣದ ಪಾಡು ನಮ್ಮೂರ ನಮಗ ಪಾಡು” ಶ್ರೀದೇವಿ. ಮ.ಗುಮ್ಮಗೋಳ

ವಿಶೇಷ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಹಳ್ಳಿ ಹಾಡು-ಪಟ್ಟಣದ ಪಾಡು ನಮ್ಮೂರ ನಮಗ ಪಾಡು” ನಮ್ಮ ನಾದನಿ ಬಹಳ ದಿನಗಳ ನಂತರ ನಮ್ಮ ಮನಿಗೆ ಬಂದಿದ್ದಳು. ಬಿಸಿಲಲ್ಲಿ ಬೆವಿತು ಬೆವಿರಿಳಿದು ತನ್ನ ಸೀರೆಯ ಸೆರಗಿನಿಂದ ಮುಖ ಒರಿಸ್ಕೊತ  “ಏನವ್ವ ನಿನ್ನ ಮನಿ ಹುಡುಕುದರಾಗ ಸಾಕಾ ಸಾಕಾಗಿ ಹೊತು… ಯಾರ ಕೇಳಿದರೂ ಗೊತ್ತಿಲ್ಲ ಅಂತ ಹೇಳಿತಾರ….  ಅದ… ನಮ್ಮ ಹಳ್ಳಿಯೊಳಗ ಆದರ… ಹೆಸರ ಹೇಳಿದರ….. ಮನಿತನಕಾ ತಂದ ಮುಟ್ಟಸ್ತಾರು..” ಅಂದಳು. ನಾವು ನಮ್ಮ ಬಜೆಟ್ಟಗೆ ಅನುಕೂಲ ಆಗುವ ಹಾಗೆ ದೂರದ ಜಾಸ್ತಿ ಮನೆಗಳಿಲ್ಲದ ಒಂದು ಎಕ್ಷಟೆನ್ಸನ್ (extension area) ದಲ್ಲಿ ಮನಿ ತುಗೊಂಡಿದ್ದಿವಿ.  ಮನಿ ಓಪನಿಂಗಗೆ ಬಂದವಳು ಮತ್ತೆ ಬಹಳ ದಿನಗಳ ಮೇಲೆ ಮನಿಗೆ ಬಂದಿದ್ದರಿಂದ ಮನೆಯ ಗುರುತು ಅವಳಿಗೆ ಸಿಗಲಿಲ್ಲ. ಅದುಲ್ಲದೇ ಇನ್ನೊಂದು ಕಾರಣ ಅಷ್ಟರಲ್ಲೆ ಮತ್ತೊಂದಿಷ್ಟು ಮನೆಗಳು ನಿರ್ಮಾಣವಾಗಿ ಅದೂ ಮನೆಗಳೆಲ್ಲ ಒಂದೆ ರೀತಿ ಇದ್ದು ಅವಳಿಗೆ ಗುರುತು ಸಿಗದ‌ ಹಾಗಾಗಿತ್ತು. ನಾನು “ಒಂದು ಪೊನ್ ಹಚ್ಚಬಾರದಾ… ನಾನ ಕರ್ಕೊಂಡ ಬರ್ತಿದ್ನಿ…”  ಅಂದಾಗ “ಪೊನ್ ತಂದಿಲ್ಲ ಗಂಡನ ಕಡೆ ಐತಿ ಮನೆಯೊಳಗ ಬೇಕಲ್ಲಾ” ಅಂದ್ಲು.  ನಮ್ಮ ನಾದನಿ ಹಳ್ಳಿಯೊಳಗ ರೈತರು. ಹೊಲಮನಿ ಕೆಲಸ ಮಾಡಕೊಂಡ ಇದ್ದವರು ಪಾಪ ಅವರಿಗೆ ನಮ್ಮ ಹಾಗೆ, ನೌಕರಿದವರಿಗೆ… ಮನೆಗೊಂದು.. ಹೊರಗೊಂದು.. ಅಂತ ಎಲ್ಲಿ ಪೊನ್ ಇರಬೇಕು. ಒಂದ ದಿನ ಇದ್ದವಳೆ ಹೊರಟು ನಿಂತಳು.   ಇನ್ನೊಂದೆರಡು ದಿನ ಇರಿ ಅಂದಾಗ ನಮ್ಮ ನಾದನಿ ಮಾತಡ್ತಾ  “ನಮಗ ಇಲ್ಲಿ ಹೊತ್ತ ಹೋಗಂಗಿಲ್ಲ. ಯಾವತ್ತಲೂ ಬಾಗಲ ಹಾಕ್ಕೊಂಡ ಇರತಿರಿ‌. ಆಜು ಬಾಜು ಯಾರದಾರೂ..‌‌ಅನ್ನುದು ಕೂಡ ಗೊತ್ತ ಇರಂಗಿಲ್ಲ. ಆದರ ಹಳ್ಯಾಗ ಒಂದ‌ ಇರುವಿ ಸತ್ತರು…. ಇಡೀ ಊರಿಗೆ ಗೊತ್ತಾಗ್ತೈತಿ. ನಮಗ ಆಜು ಬಾಜುದಾರ ಜೋಡಿ ಮಾತಾಡ್ಲಿಲ್ಲ ಅಂದರ ಏನೊ… ಕಳಕೊಂಡಂಗ ಆಗ್ತೈತಿ. ಇಲ್ಲಿ ಗೊಡ್ಡ ಎಮ್ಮಿ ತಂದು ಕಟ್ಟ ಹಾಕದಂಗ ಆಗ್ತೈತಿ. ಏನಂದರೂ ನಮ್ಮ ಹಳ್ಳಿ ನಮಗ ಚಂದ..ನಮ್ಮೂರು ನಮಗ ಪಾಡು..” ಅಂದು ಜಾನಪದದ ಹಾಡು “ನಮ್ಮ ಹಳ್ಳಿ ಊರ ನಮಗ ಪಾಡ….ಯಾತಕ್ಕವ್ವ ಹುಬ್ಬಳ್ಳಿ ಧಾರವಾಡ….” ಎಂದು ಅವರು ತಮ್ಮ ಬಾಯಿಂದಲೇ ಸುಂದರ ಜಾನಪದ ಹಾಡೊಂದನ್ನು ಗುಣಗುಣಿಸತ ಹೊರಟರು. ನಾನು ಹಳ್ಳಿಯಲ್ಲೆ ಹುಟ್ಟಿ ಬೆಳದವಳಾದರೂ ಈ ಶಹರದ ಐಶಾರಾಮಿ ಜೀವನಕೆ ಅರಾಮಾಗಿದ್ದೆ. ನನ್ನ ಮನಸ್ಸು ಹಳ್ಳಿ ಮತ್ತು ಶಹರದ ಜೀವನವನ್ನ ತಕ್ಕಡಿಯೊಳಗಿಟ್ಟು ತೂಗತೊಡಗಿತು. ಶಹರ ಜೀವನ ಚಂದೊ ಹಳ್ಳಿ ಜೀವನ ಚಂದೊ ಅಂತ.  ಶಹರದಲ್ಲಿರುವವರು ನಮಗ ಹಳ್ಳಿಗ ಹೋದರ ಹಗೆದಾಗ ಹಾಕದಂಗ ಆಗ್ತೈತಿ… ಯಾಕಂದರ ಮಕ್ಕಳಗ ನಮಗ ನೋಡಾಕ ಟಿ.ವಿ. ಇರುದಿಲ್ಲ.  ನಮಗಿಂತ ಮಕ್ಕಳು “ಮಮ್ಮಿ ಇಲ್ಲಿ ನೋಡಾಕ ಟ.ವಿ.ನ ಇಲ್ಲ. ಯಾವಾಗ ಊರಿಗೆ ಹೋಗೊವದು…..” ಅಂತ ಅಲವತ್ತು ಕೊಳ್ಳಲು ಶುರು ಮಾಡುತ್ತವೆ.  ಒಂದ ವೇಳೆ ಟಿ.ವಿ. ಇದ್ದರೂ ನಾವ ಹೋದ ಟೈಮಿಗೆ ಕರೆಂಟ ಇರುದಿಲ್ಲ.  ಹಳ್ಳಿಯೊಳಗ ಹಗಲ ಹೊತ್ತನಾಗ ಅಲ್ಲದ ರಾತ್ರಿ ಹೊತ್ತು ಕರೆಂಟ ಇಲ್ಲದ ಮುಖ ಕರ್ರಗ ಮಾಡಕೊಂಡ‌ ಕೂಡಬೇಕಾಗ್ತೈತಿ.   ಇನ್ನ ಮೊಬೈಲ್ ನಾಗ ವ್ಯಾಟ್ಸಪ್  ಪೇಸಬುಕ್ ತಿಕ್ಕಬೇಕಂದ ಇಂಟರ್ ನೆಟ್ ದಿಕ್ಕಲ್ಲದ ದಿಕ್ಕೆಟ್ಟು ಹೋಗಿರ್ತದ.   ವ್ಯಾಟ್ಸಪ್ ಹೆಟ್ಸಪ್ (hatsup) ಆಗಿರ್ತದ ಇನ್ನ ಪೇಸಬುಕ್ಕು ಪೇಕಬುಕ್(fake book) ಆಗಿರ್ತದ.  ವರ್ಷದಾಗ ಎರಡೊ ಮೂರೊ ಬಾರಿ ಊರಿಗೆ ಹೋದವರಿಗೆ ಅಕ್ಕಪಕ್ಕದವರು ಯಾರು ಅಂತ ಗೊತ್ತಿರುದಿಲ್ಲ. ಗೊತ್ತಾಗುದೊರೊಳಗ ಮನಿ ಹೆಣ್ಣಮಗಳು ಮದುವೆಯಾಗಿ ಗಂಡನ ಮನಿ ಸೇರಿರ್ತಾಳು. ಇನ್ನೂ ಇದ್ದ ಮನಿಗೆ ಹೊಸ ಸೊಸ್ತೇರು ಬಂದು ಯಾರಿವರು ಅಂತ ಮುಖ ಮುಖ ನೋಡೋಕಂತ ನಿಲ್ಲಬೇಕಾಗ್ತೈತಿ.   ಇನ್ನ ಸಿಟಿಯೊಳಗ ನಮ್ಮಷ್ಟಕ ನಾವ ಇರೊದರಿಂದ ದ್ವೇಷ, ಅಸೂಯೆ ಅನ್ನುದು ಇರುದಿಲ್ಲ ನೋಡ್ರಿ.  ಹಳ್ಯಾಗ ಜನ ಸಂದರ್ಭ ಬಂದರ ಜೀವಕ ಜೀವಾ ಕೊಡಾಕು ತಯಾರಿರ್ತಾರ.  ಆದರ ಇನ್ನೊಂದು ಭಯ ಅಂದರ ಒಬ್ಬರಿಗೊಬ್ಬರ ಆಗಲಿಲ್ಲಾ ಅಂದರ ಮಹಾಭಾರತನ ನಡಿದು ಜೀವಾ ಕೊಡೊರು ಜೀವಾ ತೆಗ್ಯಾಕ ತೈಯಾರ ಇರ್ತಾರ. ನಮ್ಮ ನಾದನಿ ಹೇಳಿದ್ದ.. ಪಾಪ ದ್ವೇಷಕ್ಕ ಅವರ ಸಂಬಂಧಿಕರ ಒಬ್ಬ ಹುಡುಗ ಮದುವೆ ಹಿಂದಿನ ದಿನವೇ ಹೆಣವಾಗಿ ಹೋಗಿದ್ದ. ಇಲ್ಲಿ ಬಟನ್ ಆನ ಮಾಡಿರ ಸಾಕೂ ಮುಖ ತೊಳಕೊಳ್ಳಾಕ, ಜಳಕಕ ಬಿಸಿ ನೀರು. ಯಾವಾಗ ಏನಬೇಕೊ ಅದು ಟಕ್ ಅಂತ ಬಂದ ಬೀಳ್ತೈತಿ. ಕಡೆಗೆ ರೊಕ್ಕ ಕೊಟ್ಟ ಆದರೂ ಟ್ಯಾಂಕರ್ ಮೂಲಕ ನೀರ ಹಾಕಿಸ್ಕೊಬಹುದು.   ಆದರ ಹಳ್ಳಯೊಳಗ ನೀರ ಅಂದರ ಬಂಗಾರ ಇದ್ದಂಗ‌.  “ನಾವ ಇಲ್ಲಿ ಮುಖ ತೊಳಕಾಳಕ ತಿಕಾ ತೊಳೊಕೊಳಾಕ ಒಂದ ಚರಗಿ ನೀರ ಬಳಸ್ಬೇಕು” ಅಂತ ನಮ್ಮ ನಾದನಿ ಹೇಳತಿದ್ಲು. ಅಲ್ಲಿ ಒಂದ…. ಮಗ್ಗನ್ಯಾಗ ಮುಖ ತಿಕಾ ತೊಳಕೊದರೊಳಗ… ಹಳ್ಳಿಗ ಬಂದ ಸಿಟಿ ಜನ ಎರಡ.. ತಾಸಿಗೆ ಓಡಿ ಸಿಟಿ ಸೇರ್ತಾರ‌.  ಹಬ್ಬ ಹುಣ್ಣವಿ, ಮದುವಿ ಮುಂಜವಿ ಅಂತ ಹಳ್ಳಿಗೆ ಬಂದ ಸಿಟಿ ಜನ ಹಳ್ಳಿಯಲ್ಲಿರುವ ಹಚ್ಚು ಹಸುರಿನ ಹೊಲ, ಗದ್ದೆ, ಮಾವು, ಚಿಕ್ಕು, ಪೇರಲ ತೋಟಗಳು, ಸ್ವಚ್ಚಗಾಳಿ, ಪ್ರಕೃತಿ ಸೌಂದರ್ಯ ಕಣ್ಣತುಂಬಿಕೊಂಡು ಬಾಯಿ ತುಂಬ ಹೊಗಳುವರು ಅಹಾ…..ಎನ್.. ಚಂದದ ಅಂತ.  ಆದರ ಅಲ್ಲಿ ಅದನ್ನೆಲ್ಲಾ ಇದ್ದು ಮಾಡುವ ರೈತನಿಗೆ ಗೊತ್ತು ಕಸ ತಗದು, ಬೀಜ ಬಿತ್ತಿ ಹಸಿರು ಉಸಿರಾಗಬೇಕಾದರ ಅವನ ಎಷ್ಟ ಬೆವರ ಹರಸಿರತಾನು ಅಂತ. ರೈತನ ಬದುಕು ಒಂದು ಹೆಣ್ಣು‌ ಒಂಬತ್ತ ತಿಂಗಳು ಹೊಟ್ಟಿಯೊಳಗ ಜೀವ ಹೊತ್ತು ತನ್ನ ರಕ್ತ ಬಸಿದು ಇನ್ನೊಂದು ಜೀವಕ್ಕ ಜೀವ ಕೊಟ್ಟಂಗ. ಜೀವನ ಕೊಟ್ಟಂಗ. ಆದರ ಗ್ರಾಮ ಜೀವನ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಹಾಗೆ ದೂರದಿಂದ ನೋಡಾಕ ಚಂದ ಆದರ ಜೀವನ ದುಸ್ತರ.   ಹಳ್ಳಿಯೊಳಗ ಹುಟ್ಟಿ ಬೆಳದ ನನಗೂ ಈಗ ಸಿಟಿ ಜೀವನಕ್ಕ ಒಗ್ಗೊಂಡು ಹಳ್ಳಿ ಜೀವನಾ ಅಂದರ ಎಷ್ಟ ಕಷ್ಟ ಅದ ಅನಸ್ತದ.  ಆದರೂ ಪಂಚಮಿ, ಗಣೇಶ ಚೌತಿ, ಮಹಾನವಮಿ, ದೀಪಾವಳಿ ಬಂದಾಗಲೆಲ್ಲ ಹಳ್ಳಿ ನೆನಪಾಗ್ತದ.  ಸಂಪ್ರದಾಯ, ಹಬ್ಬ- ಹರಿದಿನ ಅವು ನಿಜವಾಗಲೂ ಉಳಕೊಂಡಿದ್ದು ಹಳ್ಳಯೊಳಗ.  ಹಬ್ಬದ ಸಡಗರ ಸಂಭ್ರಮ ಇರುದು ಗ್ರಾಮದೊಳಗ.  ಹಬ್ಬ ಹರಿದಿನ ಬಂತು ಅಂದರ ಹಳ್ಳಿ ನೆನಪು… ಬಾಲ್ಯದ ನೆನಪುಗಳು.. ಕಣ್ಣ ಮುಂದ ಬಂದು ಕಾಡ್ತಾವ. ಏನ ಹೇಳು ಸಿಟಿಯೊಳಗ ಹಬ್ಬ ಹಬ್ಬ ಅನಸುವ ಹಂಗ ಇರುದಿಲ್ಲ. ಇಲ್ಲಿ ನಾವು ಮನಿ ಬಿಟ್ಟರ ಗುಡಿ ಗುಂಡಾರ ಒಂದ ಸುತ್ತ ಬಂದರ ಮುಗದ ಹೋತು… ಹಬ್ಬ ಮುಗದ ಹೋತು…..  ಹಳ್ಳಿಯೊಳಗ ಹಂಗಲ್ಲ ಹಬ್ಬ ಬಂತ ಅಂದರ ಇಡೀ ಓಣಿ… ಇಡೀ ಊರ… ಒಂದ ಕುಟುಂಬದಂಗ ಹಬ್ಬದ ಸಂಭ್ರಮ ಪಡತಾರ. ಒಬ್ಬರಿಗೊಬ್ಬರ ತಮ್ಮ ನೋವು, ನಲಿವುಗಳನ್ನ ಹಂಚಿಗೊಳ್ಳತಾರ. ನಾವು ಸಣ್ಣವರಿದ್ದಾಗ ನಮ್ಮ ಹಳ್ಳಿಯೊಳ ದೀಪಾವಳಿಯೊಳಗ ಬೆಳಿಗ್ಗೆ ನಾಲ್ಕ ಗಂಟೆಗೆ ಎದ್ದು ಪಾಂಡವರನ ಮಾಡೂದು, ಬಾಗಿಲಿಗೆ ರಂಗೋಲಿ ಹಾಕೊದು ಮಾಡ್ತಿದ್ವಿ. ಹಳ್ಳಿಯೊಳಗ ಅದರಾಗ ನಮ್ಮ ಬೆಳವಲ ಕಡೆ ಪಡಸಾಲಿಗೆ ಎರಡು ಮಗ್ಗಲು ಕಟ್ಟಿ ಇರುವವು. ಕಟ್ಟಿಗೆ ಮುಂದಕ್ಕೆ ಸಾಲಾಗಿ ಕಂಬಗಳು. ಆ ಕಂಬಗಳ ಮದ್ಯೆ ಲಕ್ಷ್ಮಿ ಕೂಡಿಸುವದು ವಾಡಿಕೆ.  ನಮ್ಮಣ್ಣ ಲಕ್ಷ್ಮಿ ಕೂಡಿಸುವ ಮುಂದಿರುವ ಕಂಬಗಳಿಗೆ ಹೊಲದೊಳಗಿನ ಚೆಂಡ ಹೂವಿನ ಗಿಡಗಳನ್ನ ತಂದು ಕಟ್ಟಿ ಅದಕ್ಕ ಲೈಟಿನ ಸರಾ ಜೋಡಿಸುತ್ತಿದ್ದ.  ಅದು ಜಗಮಗಾ ಅಂತ ಹೊಳೆಯುವದು ನೋಡಿದರ… ಗಿಡದಾಗ ನಕ್ಷತ್ರ ಹೊಳದಂಗ ಅನಸತಿತ್ತು.  ಅದನ್ನ ನೋಡುದ… ಕಣ್ಣಿಗೆ ಹಬ್ಬ.   ಇನ್ನ ಬಾಗಲಮುಂದ ಬಣ್ಣದ ದೊಡ್ಡ ಲೈಟ ಹಾಕಿದರ ಊರ ಸಣ್ಣ ಸಣ್ಣ ಹುಡಗರೆಲ್ಲಾ ಅದರ ಕೆಳಗ ನಿಂತು “ಲೇ… ಇಲ್ಲ ನೋಡು ನನ್ನ ಅಂಗಿ ಬಣ್ಣ ಹಸರ ಹೊಗಿ ನೀಲಿ ಕಾಣಕ್ಕತ್ತೈತಿ…..ಲೇ ನಿಂದು ಹಳದಿ ಹೋಗಿ ಹಸರಾಗೈತಿ….ಎನ್ ಮಜಾ ಅದ… “ಅನ್ನವರು. ಇನ್ನ ಮಹಾನವಮಿಯೊಳಗಿನ ಸಂಭ್ರಮನ ಬೇರೆ. ದಸರಾ ಕೊನೆ ದಿನ ಬನ್ನಿ ಕೊಡೊದು ಇರತಿತ್ತು. ಮನೆಯ ಗಂಡಸರು ಎಲ್ಲರೂ ಕೂಡಿ ಪಲ್ಲಕ್ಕಿ‌ ಜೊತೆಗೆ  ಹೋಗಿ ಊರ ಹೊರಗಿನ ಬನ್ನಿ ಗಿಡಕ್ಕ ಪೂಜಾ ಮಾಡಿ ಬನ್ನಿ ಹರಿದುಕೊಂಡು‌ ಬರುವರು. ಬಾಗಿಲಿಗೆ ಬಂದ ಅವರಿಗೆ‌ ಕುಂಕುಮ ಹಚ್ಚಿ, ಆರತಿ ಬೆಳಗುತ್ತಿದ್ದೇವು. ಬನ್ನಿಯನ್ನ ಆರತಿ ತಟ್ಟೆಯಲ್ಲಿ ಇಡುತ್ತಿದ್ದರು.  ಅದನ್ನ ದೇವರ ಮುಂದೆ ಇಟ್ಟು ನಮಸ್ಕಾರ ಮಾಡುತ್ತಿದ್ದೇವು. ನಂತರ ಅದನ್ನ ತೆಗೆದುಕೊಂಡು ಮೊದಲು ಮನೆಯ ಹಿರಿಯರಿಗೆ, ತಂದೆ ತಾಯಿಗೆ ಕೊಟ್ಟು ಕಾಲಿಗೆ ನಮಸ್ಕಾರ ಮಾಡಿ ಅವರ ಆಶಿರ್ವಾದ ಪಡೆದು ಓಣಿಗೆಲ್ಲಾ ಕೊಡಲು ಹೋಗುತ್ತಿದ್ದೇವು.   ನಾವು ಓಣಿಯೊಳಗ ಪ್ರತಿಯೊಬ್ಬರ ಮನಿಗೆ ಹೋಗಿ “ನಾವು ನೀವು ಬಂಗಾರ ತುಗೊಂಡ… ಬಂಗಾರದಂಗ ಇರೂನ…” ಎಂದು ಹೇಳಿ ಬಂಗಾರ ಕೊಟ್ಟು ಅವರ ಕಾಲಿಗೆ ಬಿದ್ದು ಅವರ ಆಶಿರ್ವಾದ ಪಡಿತಿದ್ವಿ.  ಪ್ರತಿಯೊಬ್ಬರು ಒಂದಿಲ್ಲ ಒಂದ ರೀತಿ ನಮಗ ಸಂಬಂಧಿಕರಂಗ ಇರತಿದ್ದರು. ಚಿಗವ್ವ-ಚಿಕ್ಕಪ್ಪ, ದೊಡ್ಡಪ್ಪ-ದೊಡ್ಡವ್ವ, ಮಾಮಾ-ಮಾಮಿ, ಅಕ್ಕ-ಅಣ್ಣ … ಹಿಂಗ ಪ್ರತಿಯೊಬ್ಬರನು ಕರಿತಿದ್ವಿ. ಅದೊಂತರ ಸಡಗರ ಬಾಯಲ್ಲಿ‌ ಅದನ್ನ ವ್ಯಕ್ತಪಡಿಸಲು ಸಾದ್ಯವಿಲ್ಲ. ಇನ್ನ ಪಂಚಮಿ ಬಂದರ ಹುಡಗೀಯರ ಸಂಭ್ರಮನ ಸಂಭ್ರಮ. ಎಲ್ಲರೂ ಸೇರಿ‌ ಆಲದ ಮರದ ಜೋಕಾಲಿ ಆಡುದು.  ಮನಿಯೊಳಗ ಜಂತಿಗೆ ದಾರದಿಂದ ಉಂಡಿ ಕಟ್ಟುದು. ಜೋರ ಜೀಕೊತ ಉಂಡಿ ಬಾಯಿಗಿಟ್ಟು ಜಿದ್ದ ಗೆಲ್ಲವದ ಒಂದ ಹೇಳಲಾರದ ಖುಷಿ.  ಗಂಡಮಕ್ಕಳು ಲಿಂಬಿಹಣ್ಣು ಜಿದ್ದ ಕಟ್ಟಿ ಆಡತ್ತಿದ್ದರು. ಬಣ್ಣದ ವೇಷ ಹಾಕೊಂಡು ಹುಡಗರು ಮನಿಮನಿಗೆ ಹೋಗಿ‌ ತಮ್ಮ ವೇಷಭೂಷಣ ತೊರಿಸಿ ಉಂಡಿ ಕೇಳತಿದ್ದರು.  ಶಾಲೆಯೊಳಗೂ ಅಷ್ಟೆ ದಿನಕ್ಕೊಂದು ಕಾರ್ಯಕ್ರಮ ಇರತಿತ್ತು.   ಈಗೆಲ್ಲ ಅವು ಕೇವಲ ನನಗ ನೆನಪು ಮಾತ್ರ.  ಒಟ್ಟಿನಲ್ಲಿ ಸಮಾಜಿಕವಾಗಿ, ಇದ್ದದ್ದರಲ್ಲೆ ಸಂಭ್ರಮ ಸಂತೋಷದಿಂದ ಬದುಕಬೇಕು,‌‌ ಜೀವನದ ನಿಜವಾದ ಸವಿಯನ್ನ ಸವಿಬೇಕಂದರ ಹಳ್ಳಿ ಜೀವನ ಬೇಕು ಅನಸ್ತದ.  ಆದರ ಶಿಕ್ಷಣ, ಉದ್ಯೋಗ, ಸ್ವಾವಲಂಬನೆ, ಪ್ರಗತಿಯಡೆಗೆ‌‌ ಸಾಗಬೇಕು ಅನ್ನುವನು ಶಹರದತ್ತ ಮುಖ ಮಾಡುತ್ತಾನೆ. ಅಲ್ಲಿ ತನ್ನ ನೆಲೆಯನ್ನ ಬದುಕನ್ನ ಕಂಡುಕೊಳ್ಳುತ್ತಾನೆ.  ಶಹರದ ಯಾಂತ್ರಿಕ ಬದುಕಿನಲ್ಲಿ ಆರ್ಥಿಕವಾಗಿ ಪ್ರಗತಿ, ಸಾಮಜಿಕ ಸ್ವಾವಲಭನೆ ಇದ್ದರೂ ಅವನ ವೈಯಕ್ತಿಕ ಬದುಕು ಸಂಕುಚಿತಗೊಳ್ಳುತ್ತಾ ಹೋಗುತ್ತದೆ.  ಆಡಂಬರತೆ ಇದ್ದರೂ ನಿಜವಾದ ಖುಷಿ, ಸಂತೊಷಗಳಿಂದ ವಂಚಿತನಾಗಿತ್ತಾನೆ. ಆದರೆ ಹಳ್ಳಿಯಲ್ಲಿ ಸಿಗುವ ಆಡಂಬರವಿಲ್ಲದ ಮುಗ್ಧ ಸ್ವಚ್ಛಂದ ಕ್ಷಣಗಳಲ್ಲಿ ಸಿಗುವ ಖುಷಿ ಸಂತೊಷ ಎಲ್ಲಿಯೂ ಸಿಗಲಾರದಂತು ಸತ್ಯ. ಶ್ರೀದೇವಿ. ಮ.ಗುಮ್ಮಗೋಳ

“ಹಳ್ಳಿ ಹಾಡು-ಪಟ್ಟಣದ ಪಾಡು ನಮ್ಮೂರ ನಮಗ ಪಾಡು” ಶ್ರೀದೇವಿ. ಮ.ಗುಮ್ಮಗೋಳ Read Post »

You cannot copy content of this page

Scroll to Top