ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಆರೋಗ್ಯ, ಇತರೆ

“ವಿಶ್ವ ಆರೋಗ್ಯ ದಿನಾಚರಣೆ” ಗಾಯತ್ರಿ ಸುಂಕದ

ಆರೋಗ್ಯ ಸಂಗಾತಿ ಗಾಯತ್ರಿ ಸುಂಕದ “ವಿಶ್ವ ಆರೋಗ್ಯ ದಿನಾಚರಣೆ” ನಮ್ಮ ಆರೋಗ್ಯದ ಬಗ್ಗೆ  ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 22ರಂದು ವಿಶ್ವ ಆರೋಗ್ಯ ದಿನಾರಣೆ ಆಚರಿಸಲಾಗುತ್ತಿದೆ.Sound mind in sound body. ಅನ್ನುವ ಹಾಗೆ ಆರೋಗ್ಯಕರ ಶರೀರದಲ್ಲಿ ಮಾತ್ರ ಆರೋಗ್ಯಕರ  ಮನಸ್ಸು ಇರಲು ಸಾಧ್ಯ. ಇದರ ಬಗ್ಗೆ ಜಾಗೃತಿ. ಮೂಡಿಸಲು ವಿಶ್ವ ಆರೋಗ್ಯ ದಿನಾಚಣೆ  ಆಚರಿಸಲಾಗುತ್ತಿದೆ.ದೈಹಿಕ ಆರೋಗ್ಯ ;- ಯೋಗ,ಧ್ಯಾನ ಪ್ರಾಣಾಯಾಮ, ಉತ್ತಮ ಮತ್ತು ಮಿತವಾದ. ಆಹಾರ ನಮ್ಮ ದೈಹಿಕ ಆರೋಗ್ಯವನ್ನು ಸುಸ್ಥಿತಿ ಯಲ್ಲಿ ಇಡುತ್ತದೆ.ಮಾನಸಿಕ ಆರೋಗ್ಯ;- ವಿನಾ ಕಾರಣ ಇನ್ನೊಬ್ಬರ ಮೇಲೆ ದ್ವೇಷ ಇಟ್ಟು ಕೊಂಡರೆ ಅದು ನಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ. ಉತ್ತಮ ಸಂಗೀತ,ಓದು,ಬರವಣಿಗೆ, ನಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುತ್ತವೆ. ಸಾಮಾಜಿಕ ಆರೋಗ್ಯ ;- ಮನುಷ್ಯನು ಮೂಲತಃ  ಸಂಘ ಜೀವಿ.  ಇಲ್ಲಿ ಮನುಷ್ಯನು ಸಂಭಂಧಗಳೊಡನೆ ಬದುಕುತ್ತಾನೆ.ಉತ್ತಮ ತಿಳುವಳಿಕೆ,ಸಹಕಾರ, ನಮ್ಮನ್ನು  ಉತ್ತಮ ಪ್ರಜೆಗಳನ್ನಾಗಿ ಮಾಡುತ್ತವೆ. ಸಾಮಾಜಿಕ ಜಾಲತಾಣ ಗಳಲ್ಲಿ ಬರೆಯುವುದು, ಓದುವುದು, ಪರಸ್ಪರ ಚರ್ಚಿಸುವುದು ನಮ್ಮಲ್ಲಿ ಹೊಸತನ ತುಂಬುತ್ತವೆ. ನಮ್ಮಲ್ಲಿದ್ದ ಒಂಟಿತನ ಹೋಗಲಾಡಿಸಲು ಸಹಾಯ ಮಾಡುತ್ತದೆ.ಎಷ್ಟೋ ಜನರು ತಮ್ಮ ಒಂಟಿತನ ಹೋಗಲಾಡಿಸಲು ಸಾಮಾಜಿಕ ಜಾಲ ತಾಣಗಳಲ್ಲಿ ಖುಷಿ ಕಂಡು ಕೊಳ್ಳುತ್ತ್ತಾರೆ.ಸಾಂಸ್ಕೃತಿಕ ಆರೋಗ್ಯ ;-  ಉತ್ತಮ ಸಂಗೀತ, ಸಾಂಸ್ಕೃತಿಕ  ಕಾರ್ಯಕ್ರಮಗಳು, ಸಭೆ ಸಮಾರಂಭಗಳಲ್ಲಿ ಭಾಗ ವಹಿಸುವುದು ನಮ್ಮಲ್ಲಿ ಕ್ರಿಯಾ ಶೀಲತೆ ತುಂಬುತ್ತವೆ.ಬನ್ನಿ, ಉತ್ತಮ ಆರೋಗ್ಯ ಅಳವಡಿಸಿ ಕೊಳ್ಳೋಣ. ಗಾಯತ್ರಿ ಸುಂಕದ

“ವಿಶ್ವ ಆರೋಗ್ಯ ದಿನಾಚರಣೆ” ಗಾಯತ್ರಿ ಸುಂಕದ Read Post »

ಕಾವ್ಯಯಾನ

ಅರುಣಾ ನರೇಂದ್ರ “ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ”

ಕಾವ್ಯ ಸಂಗಾತಿ ಅರುಣಾ ನರೇಂದ್ರ “ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ” ಇಲ್ಲಿ ಇವರೆಲ್ಲರೂ ಹೊಟ್ಟೆ ತುಂಬಿದವರೇ ಇದ್ದಾರೆ ಸೋನಂ ಹಸಿವಿನ ಬೆಲೆ ತುಸುವಾದರೂ ತಿಳಿಯದವರೇ ಇದ್ದಾರೆ ಸೋನಂ ಉಪವಾಸ ಸತ್ಯಾಗ್ರಹಗಳಿಗೆ ಹಿರೇಮಣಿಗಳು ಹೇಗೆ ಮಣಿದಾರುಕೇವಲ ಕುರ್ಚಿಗಾಗಿ ಹಣಾ ಹಣಿ ನಡೆಸಿದವರೇ ಇದ್ದಾರೆ ಸೋನಂ ಬಾಳಿ ಬೆಳಗಬೇಕಾದ ಮಕ್ಕಳ ಕಳೆದುಕೊಂಡವರು ಅಳುತ್ತಿದ್ದಾರೆಯಾರಿಗಿದೆ ಬಾಧಕ ಕರುಳು ಅರಿಯದವರೇ ಇದ್ದಾರೆ ಸೋನಂ ಇಲ್ಲಿ ಪ್ರಶ್ನೆ ಪತ್ರಿಕೆ ಸೋರುತ್ತದೆ ಅಲ್ಲಿ ಅತ್ಯಾಚಾರ ನಡೆಯುತ್ತದೆ ಅನೈತಿಕತೆಯನೇ ಹೊತ್ತುಕೊಂಡು ಮೆರೆದವರೇ ಇದ್ದಾರೆ ಸೋನಂ ಕ್ಷೀಣಿಸುತ್ತಿರುವ ನಿನ್ನ ಉಸಿರಿಗಾಗಿ ನಾವು ಉಸಿರು ಬಿಗಿ ಹಿಡಿದಿದ್ದೇವೆಜೀವ ಹೋಗಿ ನೆತ್ತರು ಹರಿದರೂ ನಮ್ಮನು ನೋಡದವರೇ ಇದ್ದಾರೆ ಸೋನಂ ದುಡಿದುಣ್ಣುವ ಶ್ರಮಿಕರು ಜೊತೆಗಿದ್ದು ಹಕ್ಕಿಗಾಗಿ ಹೋರಾಡುತ್ತೇವೆ ನ್ಯಾಯ ನೀತಿ ಪ್ರೀತಿ ಎಂದರೆ ಗೊತ್ತಿಲ್ಲದವರೇ ಇದ್ದಾರೆ ಸೋನಂ ಕೆಟ್ಟು ನಾರುತಿರುವ ವ್ಯವಸ್ಥೆಗೆ ರೋಸಿ ಹೋಗಿದ್ದಾಳೆ ಅರುಣಾ ಶೈಕ್ಷಣಿಕ ಬದಲಾವಣೆ ತರಲು ಒಲ್ಲದವರೇ ಇದ್ದಾರೆ ಸೋನಂ ಅರುಣಾ ನರೇಂದ್ರ

ಅರುಣಾ ನರೇಂದ್ರ “ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ” Read Post »

ಇತರೆ

ಊಸರವಳ್ಳಿ ವಿಶೇಷ ಲೇಖನ ಕವಿತಾ ಶ್ರೀನಿವಾಸ್ ನಾಯಕ್

ವಿಶೇಷ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್ ಊಸರವಳ್ಳಿ ಊಸರವಳ್ಳಿ ತನ್ನ ರಕ್ಷಣೆಗೆ ಬಣ್ಣ ಬದಲಾಯಿಸುತ್ತದೆ. ಅದು ಪ್ರಕೃತಿಯ ಕೊಟ್ಟ ಗುಣ. ಆದರೆ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಬಣ್ಣ ಬದಲಾಯಿಸಲು ಆರಂಭಿಸಿದಾಗ, ಸಂಬಂಧಗಳು, ನಂಬಿಕೆ ಮತ್ತು ಮಾನವೀಯತೆ ಗಾಯಗೊಳ್ಳುತ್ತವೆ. ಕೆಲವರು ನಮ್ಮ ಎದುರು ತುಂಬಾ ಸಿಹಿಯಾಗಿ ಮಾತನಾಡುತ್ತಾರೆ. “ನೀವು ಇಲ್ಲದಿದ್ದರೆ ನಾವು ಏನೂ ಅಲ್ಲ” ಎಂದು ಹೊಗಳುತ್ತಾರೆ. ಆದರೆ ನಾವು ಬೆನ್ನು ತಿರುಗಿಸಿದ ಕ್ಷಣದಲ್ಲೇ ಅದೇ ನಾಲಿಗೆ ನಮ್ಮ ಬಗ್ಗೆ ವಿಷ ಉಗುಳುತ್ತದೆ. ಸಂದರ್ಭ ಬದಲಾದರೆ ಮಾತು ಬದಲಾಗುತ್ತದೆ, ಲಾಭ ಕಂಡರೆ ನಿಲುವು ಬದಲಾಗುತ್ತದೆ, ಅಧಿಕಾರ ಕಂಡರೆ ಮುಖವೇ ಬದಲಾಗುತ್ತದೆ. ಇಂತಹವರನ್ನು ನೋಡಿದಾಗ ನೆನಪಾಗುವುದು ಊಸರವಳ್ಳಿಯೇ. ಆದರೆ ಒಂದು ವ್ಯತ್ಯಾಸ ಇದೆ. ಊಸರವಳ್ಳಿ ಬದುಕಲು ಬಣ್ಣ ಬದಲಾಯಿಸುತ್ತದೆ; ಕೆಲವು ಮನುಷ್ಯರು ಮತ್ತೊಬ್ಬರನ್ನು ಬಳಸಿಕೊಳ್ಳಲು ಬಣ್ಣ ಬದಲಾಯಿಸುತ್ತಾರೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿಯೂ ಇದೇ ದೃಶ್ಯ. ಮುಂದೆ ಹೊಗಳಿಕೆ, ಹಿಂದೆ ಟೀಕೆ. ಕೆಲಸ ಇದ್ದಾಗ ಆತ್ಮೀಯತೆ, ಕೆಲಸ ಮುಗಿದ ನಂತರ ಅಪರಿಚಿತನಂತೆ ವರ್ತನೆ. ನಿಜವಾದ ಸ್ನೇಹಕ್ಕಿಂತ ಸ್ವಾರ್ಥದ ಸಂಬಂಧಗಳು ಹೆಚ್ಚಾಗುತ್ತಿರುವುದು ವಿಷಾದದ ಸಂಗತಿ. ಆದರೆ ಬಣ್ಣ ಬದಲಾಯಿಸುವವರಿಗಿಂತ, ಯಾವ ಪರಿಸ್ಥಿತಿಯಲ್ಲೂ ತಮ್ಮ ಮೌಲ್ಯ ಮತ್ತು ವ್ಯಕ್ತಿತ್ವವನ್ನು ಬದಲಿಸದವರು ಸಮಾಜದ ನಿಜವಾದ ಸಂಪತ್ತು. ಅವರು ಕಡಿಮೆ ಇರಬಹುದು, ಆದರೆ ಅವರ ಮೇಲಿನ ನಂಬಿಕೆ ಎಂದಿಗೂ ಕಡಿಮೆಯಾಗುವುದಿಲ್ಲ. ಜೀವನದಲ್ಲಿ ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ. ಆದರೆ ನಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವುದು ಮಾತ್ರ ನಮ್ಮ ಕೈಯಲ್ಲಿದೆ. ಸಂದರ್ಭಕ್ಕೆ ತಕ್ಕಂತೆ ಅಭಿಪ್ರಾಯ ಬದಲಾಗಬಹುದು, ಆದರೆ ಸ್ವಾರ್ಥಕ್ಕಾಗಿ ಗುಣ ಬದಲಾದರೆ ಅದು ವ್ಯಕ್ತಿತ್ವದ ಸೋಲು. ಆದ್ದರಿಂದ ಊಸರವಳ್ಳಿಯಂತೆ ಬಣ್ಣ ಬದಲಾಯಿಸುವುದಕ್ಕಿಂತ, ಮರದಂತೆ ಗಟ್ಟಿಯಾಗಿ ನಿಂತು ನೆರಳು ಕೊಡುವ ವ್ಯಕ್ತಿಯಾಗೋಣ. ಬಣ್ಣ ಬದಲಾಯಿಸುವ ಬದುಕಿಗಿಂತ, ನಂಬಿಕೆಗೆ ಪಾತ್ರವಾಗುವ ಬದುಕು ಹೆಚ್ಚು ಮೌಲ್ಯಯುತ.ವಂದನೆಗಳೊಂದಿಗೆ…ಕವಿತಾ ಶ್ರೀನಿವಾಸ್ ನಾಯಕ್ಕಾರ್ಕಳ, ಉಡುಪಿ ಜಿಲ್ಲೆ.

ಊಸರವಳ್ಳಿ ವಿಶೇಷ ಲೇಖನ ಕವಿತಾ ಶ್ರೀನಿವಾಸ್ ನಾಯಕ್ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-35 ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಮುನಿಸು ಮಾತಿನ ಮಳೆಗರೆದೆ ಮಣಿಪುರದರಸನ ಮೇಲೆ ನ್ನನ್ನು ತಂದೆಯೆಂದು ಕರೆದು ನನ್ನ ಶುದ್ಧ ಚಾರಿತ್ರ್ಯಕ್ಕೆ ಧಕ್ಕೆ ತಂದನಲ್ಲಾ ಎಂಬ ಕೋಪ ಕಾಡಿತು ನನ್ನನ್ನು. ನನ್ನ ಆಪ್ತರ ಕಣ್ಣನನಗೆ ಸಂಬಂಧಪಡದವನು ನಲ್ಲಿ ನನ್ನ ಮಗನೆಂದೆನಿಸಿ ಯುದ್ಧ ವಿಮುಖನಾಗಿ, ಶರಣಾಗತಿಯನ್ನು ಸಾರಿ ಈ ವೀರಾರ್ಜುನನ ಪರಾಕ್ರಮದ ಹೆಸರಿಗೆ ಕಳಂಕ ತಂದನಲ್ಲಾ ಎಂಬ ಕ್ರೋಧವೂ ಮೂಡಿತು. ನನ್ನನ್ನು ಅವಮಾನಕ್ಕೆ ಈಡುಮಾಡಿದವನ ಚಿತ್ತವನ್ನು ಕ್ಷಣಕ್ಷಣ ಕಣಕಣ ನೋಯಿಸಿ, ಅವನ ಮನಕ್ಕೆ ಮರಣವನ್ನು ತರಬೇಕೆಂಬ ಬಗೆಯ ಉತ್ಸುಕತೆ ನನ್ನದಾಯಿತು. ಆಗದವರನ್ನು ಕೊಲ್ಲುವುದರಲ್ಲಿ ಎರಡು ಬಗೆಗಳಿವೆ. ಬಾಣ ಖಡ್ಗಗಳಿಂದ ಶರೀರವನ್ನು ಘಾಸಿಗೊಳಿಸಿ, ಗಾಯಕ್ಕೆ ಸಿಲುಕಿದ ದೇಹಕ್ಕೆ ಉಪ್ಪು ಸವರಿ ಇನ್ನಿಲ್ಲದ ಯಾತನೆಯನ್ನು ನೀಡಿ ಸಾಯಿಸುವುದು ಒಂದು ಬಗೆ. ಹಾಗೇನೂ ಮಾಡದೆ ನುಡಿಯ ಕಿಡಿಗಳನ್ನು ಸೂಸಿ, ಟೀಕೆಯ ಬೆಂಕಿಯನ್ನು ಎದೆಗಿಟ್ಟು, ಅಪಹಾಸ್ಯದ ಜ್ವಾಲೆಯನ್ನೆಬ್ಬಿಸಿ ಉರಿಉರಿಸಿ ಹಾಕುವುದು ಇನ್ನೊಂದು ಬಗೆ. ಯುದ್ಧಕ್ಕೆ ನಿಂತ ವೀರನಲ್ಲ ಬಭ್ರುವಾಹನ. ಮಾತಿನ ಬಾಣಗಳಿಂದಲೇ ಅವನ ಪ್ರಾಣ ತೆಗೆಯುವುದು ಸರಿಯೆಂದು ತೋರಿತು ನನಗೆ.ನನ್ನ ಪಾದದ ಬಳಿಯಲ್ಲಿ ಕುಳಿತಿದ್ದ ಅವನನ್ನು ಬಲವಾಗಿ ಒದೆದೆ. “ಎಲವೋ ಹೇಡಿ. ನನಗೆ ಜನಿಸಿದವ ನೀನಾಗಿದ್ದರೆ ಈ ಪರಿಯಲ್ಲಿ ಯುದ್ಧಕ್ಕೆ ಹೆದರಿ ಶರಣು ಬರುತ್ತಿರಲಿಲ್ಲ. ಮೊದಲು ಅಶ್ವವನ್ನು ಕಟ್ಟಿದವನು ನೀನು. ಈಗ ಯುದ್ಧ ಮಾಡದೆಯೇ ಅದನ್ನು ಬಿಟ್ಟು ಕಳುಹಿಸುವುದಕ್ಕೆ ಸಿದ್ಧನಾಗಿದ್ದೀಯಲ್ಲಾ! ನೀನಂತೂ ನನ್ನ ಮಗನಲ್ಲ” ಎಂದೆ ರೋಷಾವೇಶದಿಂದ.ನನ್ನ ಕಾಲಿನ ಒದೆತಕ್ಕೆ ಎರಡು ಹೆಜ್ಜೆಗಳಷ್ಟು ಆಚೆಗೆ ಬಿದ್ದ ಬಭ್ರುವಾಹನ. ಅರ್ಜುನನ ಮಗ ನೀನೆಂಬ ಯೋಚನೆಯನ್ನು ಅವನಲ್ಲಿ ಬಿತ್ತಿದವಳು ಅವನ ತಾಯಿ. ಅವಳ ಮಾತನ್ನು ಕೇಳಿಸಿಕೊಂಡು ತಾನೇ ಅವನಿಲ್ಲಿಗೆ ಬಂದದ್ದು! ಹಾಗಿರುವಾಗ ಅವಳನ್ನೂ ತೆಗಳದೇ ಇರಬಾರದು ಎನಿಸಿತು. ಅವನು ಹೇಳಿದ ಹೆಸರೇನದು?! ಚಿತ್ರಾಂಗದೆ! ಅದೇ ಹೆಸರನ್ನು ಮುಂದುಮಾಡಿಕೊAಡು ಬೈಯ್ಯತೊಡಗಿದೆ.“ಆ ಚಿತ್ರಾಂಗದೆಗೆ ವೈಶ್ಯನಿಂದ ಜನಿಸಿದ ಪುತ್ರ ನೀನು. ಅದಂತೂ ಖಚಿತ. ನನಗೆ ಜನಿಸಿದವನಲ್ಲ. ನನ್ನ ಮಗನಾಗಿದ್ದರೆ ಕ್ಷಾತ್ರಧರ್ಮವನ್ನು ಬಿಟ್ಟು ಈ ಬಗೆಯಲ್ಲಿ ವರ್ತಿಸುತ್ತಿರಲಿಲ್ಲ” ಎಂದು ಅಬ್ಬರಿಸಿದೆ, ಅವನ ಕರುಳ ಬಳ್ಳಿಯನ್ನು ಹಿಡಿದೆಳೆದು.ನಾನವನ ತಾಯಿಯನ್ನು ನಿಂದಿಸಿದ್ದು ಅತಿಯಾಗಿಯೇ ನೋಯಿಸಿತು ಅವನನ್ನು. ಅವನ ಮುಖಭಾವದಲ್ಲಿಯೇ ಅದು ಗೋಚರವಾಗುತ್ತಿತ್ತು. ನೆಲದ ಮೇಲೆ ಬಿದ್ದವನಿಗೆ ಇನ್ನೊಂದು ಬಲವಾದ ಹೊಡೆತವಿಕ್ಕಿದರೆ ಪೂರ್ಣವಾಗಿ ಮಣ್ಣುಮುಕ್ಕುತ್ತಾನೆ ಎಂಬ ಯೋಚನೆ ಬಂತು. ಯಾರೇ ಆಗಿರಲಿ, ಇನ್ನೊಬ್ಬರ ಜೊತೆಗಿನ ಕೀಳು ಹೋಲಿಕೆಯನ್ನು ಸಹಿಸಲಾರರು. ಇದು ನನಗೆ ಗೊತ್ತಿತ್ತು. ನನ್ನ ಮಗನೆಂದು ಸುಳ್ಳು ಹೇಳಿಕೊಂಡು ಬಂದವ ಈ ಬಭ್ರುವಾಹನ. ನನ್ನ ನಿಜತನಯನಾದ ಅಭಿಮನ್ಯುವಿನ ಪರಾಕ್ರಮವನ್ನು ಮುಂದುಮಾಡಿಯೇ ಇವನನ್ನು ಹಿಂದಕ್ಕೆಳೆಯುತ್ತೇನೆ ಎಂದುಕೊAಡೆ.“ಸುಭದ್ರೆಗೆ ನನ್ನಿಂದ ಜನಿಸಿದವ ಅಭಿಮನ್ಯು. ಕುರುಕ್ಷೇತ್ರ ಯುದ್ಧವದು ನಡೆಯುತ್ತಿದ್ದಾಗ ಏಕಾಂಗಿಯಾಗಿ ಚಕ್ರವ್ಯೂಹದ ಒಳಹೊಕ್ಕ. ಯುದ್ಧದ ಸಹವಾಸವಿದು ನಿನಗೆ ಬೇಡ ಎಂಬ ಧರ್ಮರಾಯನ ಮಾತಿಗೂ ಕಿವಿಗೊಡಲಿಲ್ಲ. ಅಂತಹ ಪರಾಕ್ರಮಿಯಾಗಿದ್ದ ಅವನು. ಶತ್ರುಸೇನೆಯನ್ನು ಪುಡಿಗಟ್ಟಿ ವೀರಮರಣವನ್ನು ಹೊಂದಿದ. ಅಂತಹ ಸಮರ್ಥನನ್ನು ನನ್ನ ಮಗ ಎಂದು ಒಪ್ಪಿಕೊಳ್ಳುತ್ತೇನೆ. ಅದುಬಿಟ್ಟು ನಿನ್ನಂಥ ಹೇಡಿಯನ್ನು ಮಗನೆಂದು ಸ್ವೀಕರಿಸಲಾದೀತೇ!” ಎಂದು ಚುಚ್ಚಿದೆ.ಸಂತಸದಿAದ, ತುಂಬು ಆನಂದದಿAದ ನನ್ನ ಬಳಿಗೆ ಬಂದಿದ್ದವನು ಬಭ್ರುವಾಹನ. ಅವನ ಮೊಗದ ನಲಿವದು ಕಡಿಮೆಯಾಗುತ್ತಾ ಆಗುತ್ತಾ ನೋವಿನ ಛಾಯೆ ದಟ್ಟವಾಗತೊಡಗಿತ್ತು. ನನಗಿನ್ನೂ ಸಮಾಧಾನ ಆಗಿರಲಿಲ್ಲ.“ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಜನಿಸುತ್ತದೆ. ನರಿ ಹುಟ್ಟುವುದಿಲ್ಲ. ವೀರನೆಂದು ಜಗತ್ತು ಗುರುತಿಸುತ್ತದೆ, ಗೌರವಿಸುತ್ತದೆ ನನ್ನನ್ನು. ನನ್ನಂತಹ ಪರಾಕ್ರಮಿಗೆ ಮಗನಾಗಿ ನಿನ್ನಂತಹ ಕಡುಹೇಡಿ ಜನಿಸುವುದು ಸಾಧ್ಯವೇ! ಕದನಗೈಯ್ಯದೆ ಕುದುರೆಯನ್ನು ಬಿಟ್ಟುಕೊಡುವ ಮನಸ್ಸು ಮಾಡಿದೆಯೇಕೆ! ಸಾಹಸಿಗಳನ್ನು ಸೋಲಿಸುವ ಸಾಮರ್ಥ್ಯ ಇರುವ ವೀರರಿಗೆ ಸೇನೆ ಬೇಕು; ಛತ್ರ ಚಾಮರಗಳ ಸೊಗಸಿರಬೇಕು. ಆದರೆ ನಿನಗೆ ಚತುರಂಗ ಬಲವೇಕೆ! ಛತ್ರ ಚಾಮರಗಳು ಅದೇಕೆ! ಶತ್ರುಗಳನ್ನು ಕೊಲ್ಲಲು ನೆರವಾಗುವ ಆಯುಧಗಳಾದರೂ ಬೇಕೇ ನಿನಗೆ! ಜೀವದಾಸೆಯನ್ನು ಬಿಡು. ಹೋಗು” ಎಂದು ಹಂಗಿಸಿದೆ ಅವನನ್ನು.ಅವನ ತಾಯಿಯನ್ನು ಆಗ ಬೈದದ್ದು ಸಾಲದು ಎನಿಸಿತು. ಮತ್ತೆ ಬೈದೆ. “ನಿನ್ನ ಮಾತೆ ಚಿತ್ರಾಂಗದೆ ನರ್ತಕಿಯಾಗಿರಬೇಕು. ಯಾವುದೋ ಗಂಧರ್ವನಾಯಕನ ಮಗಳಾಗಿರಬೇಕು. ಅವಳು ನಟನೆಯಲ್ಲಿ ಪರಿಣತಿ ಪಡೆದವಳಿರಬೇಕು. ಇಲ್ಲವಾದರೆ ನೀನು ಈ ಬಗೆಯಲ್ಲಿ ಮಣಿಪುರವನ್ನು ಆಳುವ ಅರಸನ ನಟನೆಯನ್ನು ಮಾಡಲು ಸಾಧ್ಯವಿಲ್ಲ. ನಿನ್ನದಿದು ನಿಜ ರಾಜ ಪರಾಕ್ರಮವಲ್ಲ. ಶಕ್ತಿವಂತನ ನಟನೆಯಷ್ಟೇ ನಿನ್ನದು. ಬಹಳ ಪೌರುಷ ತೋರಿದ್ದೀಯ ಬಿಡು! ಕುದುರೆಯನ್ನು ತಡೆದ ಹೋರಾಡಿದ ಅರಸರೆಲ್ಲಾ ಇಲ್ಲಿಯೇ ಇದ್ದಾರೆ. ಅವರ ಮುಂದೆ ಹೋಗು” ಎಂದು ಕುಹಕದ ನುಡಿಯನ್ನಾಡಿದೆ.ನನ್ನ ಬಿರುಸಿನ ನುಡಿಗೆ ಕನಲಿದ ಕಳ್ಳಸುತ ಬಭ್ರುವಾಹನ. ಸುಬುದ್ಧಿಯಲ್ಲಿ ತನ್ನ ದುಃಖವನ್ನು ತೋಡಿಕೊಂಡ. ನನ್ನ ಬಾಯಿಯಿಂದ ಹೊರಬಿದ್ದ ಪ್ರತಿಯೊಂದು ಅಕ್ಷರಗಳೂ ಬತ್ತಳಿಕೆಯಿಂದ ಹೊರಬಂದ ಬಾಣಗಳಂತೆ ಅವನನ್ನು ನೋಯಿಸಿದ್ದವು. ಅವನನ್ನು ಮಾತ್ರವೇ ಬೈದಿದ್ದರೆ ಸಹಿಸಿಕೊಳ್ಳುತ್ತಿದ್ದನೋ ಏನೋ, ಅವನ ತಾಯಿಯನ್ನು ತೆಗಳಿದ್ದನ್ನು ಸಹಿಸಿಕೊಳ್ಳುವುದಕ್ಕಾಗಲಿಲ್ಲ ಅವನಿಗೆ.“ನನ್ನ ತಾಯಿಯನ್ನೇ ಬೈದೆಯಲ್ಲಾ! ನಿನ್ನ ತಲೆಯನ್ನು ಉರುಳಿಸದೆ ಬಿಡುವವನು ನಾನಲ್ಲ. ಇದಂತೂ ನಿಜ” ಎಂದು ಪ್ರತಿಜ್ಞೆಗೈದವನು ತನ್ನವರ ಜೊತೆಗೆ ಅಲ್ಲಿಂದ ಹೊರಟುಹೋದ. ನನಗೆ ಮರಳಿಸಲೆಂದು ಅವನು ತಂದಿದ್ದ ಕುದುರೆಯದು ಮತ್ತೆ ಮರಳಿ ಅವನ ಲಾಯವನ್ನು ಸೇರಿಕೊಂಡಿತು.ನನ್ನವರ ಜೊತೆಗೆ ಶಿಬಿರಕ್ಕೆ ಮರಳಿದ ನನ್ನೊಳಗೆ ಬಭ್ರುವಾಹನ ನುಡಿಯ ನರ್ತನ. ಅವನು ಹೇಳಿದ್ದ ಮಾತದು ನಿಜವಿರಬಹುದೇ! ಎಂಬ ಯೋಚನೆ ಮತ್ತೆ ಮತ್ತೆ ಕಾಡಿತು. ಬಭ್ರುವಾಹನ ನನ್ನೊಡನೆ ಯುದ್ಧ ಹೂಡದೆ ಇನ್ನು ಸುಮ್ಮನಿರುವವಂತೂ ಅಲ್ಲ ಎನ್ನುವುದು ದೃಢವಾಗಿತ್ತು. ಅವನು ನನ್ನ ಮಗನೇ ಆಗಿದ್ದರೆ ನನ್ನೊಂದಿಗಿನ ಅವನ ಯುದ್ಧ ಹಿಂದೆ ತ್ರೇತಾಯುಗದಲ್ಲಿ ಲವಕುಶರು ಶ್ರೀರಾಮನ ಜೊತೆಗೆ ಹೋರಾಡಿದಂತಿರುತ್ತದೆ ಎನಿಸಿತು. ನನ್ನೊಳಗೀಗ ಶ್ರೀರಾಮ ಕಥನದ ಹಿರಿದಕ್ಷರಗಳು ಮೂಡತೊಡಗಿದವು… ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

You cannot copy content of this page

Scroll to Top