ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

ಕವಿತಾ ಶ್ರೀನಿವಾಸ್ ನಾಯಕ್ “ಆಯ್ಕೆ”

ಲೇಖನ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್  ಆಯ್ಕೆ “ಆಯ್ಕೆ” ಎಂಬ ಪದ ಚಿಕ್ಕದಾದರೂ, ಅದರ ಅರ್ಥ ಮತ್ತು ಪರಿಣಾಮ ಬಹಳ ದೊಡ್ಡದು.ನಮ್ಮ ಜೀವನವೇ ಆಯ್ಕೆಗಳ ಮೇಲೆ ನಿಂತಿದೆ.ಮಾರುಕಟ್ಟೆಗೆ ಹೋದಾಗ ತಾಜಾ ತರಕಾರಿಯನ್ನು ಆಯ್ಕೆ ಮಾಡುತ್ತೇವೆ. ಅಂಗಡಿಯಲ್ಲಿ ದಿನನಿತ್ಯದ ಸಾಮಾನುಗಳನ್ನು ಗುಣಮಟ್ಟ ನೋಡಿ ಆಯ್ಕೆ ಮಾಡುತ್ತೇವೆ. ಬಟ್ಟೆ, ಮನೆ, ವಾಹನ, ಉದ್ಯೋಗ, ಶಿಕ್ಷಣ—ಪ್ರತಿಯೊಂದರಲ್ಲೂ ನಮ್ಮ ಆಯ್ಕೆ ಇರುತ್ತದೆ.ನೆಂಟಸ್ತಿಕೆ ಆಗುವಾಗ, ಹೆಣ್ಣು ಹಾಗೂ ಗಂಡಿನ ಯೋಗ್ಯತೆ, ಸಂಸ್ಕಾರ, ಶಿಕ್ಷಣ, ಸ್ವಭಾವ ಎಲ್ಲವನ್ನೂ ಗಮನಿಸಿ ಆಯ್ಕೆ ಮಾಡಲಾಗುತ್ತದೆ.ರಾಜಕೀಯದಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಜನಪ್ರತಿನಿಧಿಗಳ ಆಯ್ಕೆ ನಡೆಯುತ್ತದೆ. ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ವಿವಿಧ ಪದಾಧಿಕಾರಿಗಳ ಆಯ್ಕೆ ನಡೆಯುತ್ತದೆ. ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆ, ಕ್ರೀಡಾ ತಂಡದಲ್ಲಿ ಆಟಗಾರರ ಆಯ್ಕೆ, ಉದ್ಯೋಗದಲ್ಲಿ ಅಭ್ಯರ್ಥಿಗಳ ಆಯ್ಕೆ—ಹೀಗೆ ಜೀವನದ ಪ್ರತಿಯೊಂದು ಹಂತದಲ್ಲೂ ಆಯ್ಕೆ ಅನಿವಾರ್ಯ.ಸಾಮಾನ್ಯವಾಗಿ ನಾವು ಒಳ್ಳೆಯದನ್ನೇ, ಯೋಗ್ಯವಾದದ್ದನ್ನೇ ಅಥವಾ ಒಳ್ಳೆಯ ವ್ಯಕ್ತಿಯನ್ನೇ ಆಯ್ಕೆ ಮಾಡಲು ಬಯಸುತ್ತೇವೆ.ಆದರೆ, ಕೆಲವು ಆಯ್ಕೆಗಳು ಮನಸ್ಸಿಗೆ ನೋವು ಕೊಡುತ್ತವೆ.ಕೆಲವರು ಗೆಳೆತನದಲ್ಲಿ, ಪ್ರೀತಿಯಲ್ಲಿ ಅಥವಾ ಗಂಡ-ಹೆಂಡತಿಯ ಸಂಬಂಧದಲ್ಲಿಯೂ ಎದುರಿನ ವ್ಯಕ್ತಿಯನ್ನು ಮೊದಲ ಆದ್ಯತೆಯಾಗಿ ಅಲ್ಲ, ಕೇವಲ “ಆಯ್ಕೆ”ಯಾಗಿ ಇಟ್ಟುಕೊಳ್ಳುತ್ತಾರೆ.ಅವರಿಗೆ ಸಮಯ ಇದ್ದಾಗ ಮಾತ್ರ ನೆನಪಾಗುತ್ತದೆ. ಬೇಸರವಾದಾಗ ಮಾತ್ರ ಕರೆ ಮಾಡುತ್ತಾರೆ. ಬೇರೆಯವರು ಸಿಗದಿದ್ದಾಗ ಮಾತ್ರ ಮಾತನಾಡುತ್ತಾರೆ. ಅಗತ್ಯವಿದ್ದಾಗ ಮಾತ್ರ ಹತ್ತಿರವಾಗುತ್ತಾರೆ. ಕೆಲಸ ಮುಗಿದ ನಂತರ ಮತ್ತೆ ದೂರವಾಗುತ್ತಾರೆ.ಇಂತಹ ಸಂಬಂಧದಲ್ಲಿ ಪ್ರೀತಿ ಇರುವುದಿಲ್ಲ; ಸ್ವಾರ್ಥ ಮಾತ್ರ ಇರುತ್ತದೆ.ನಿಜವಾದ ಸಂಬಂಧ ಎಂದರೆ, ಅನುಕೂಲಕ್ಕೆ ತಕ್ಕಂತೆ ನೆನಪಾಗುವ ವ್ಯಕ್ತಿಯಾಗಿರುವುದಲ್ಲ. ಸುಖದಲ್ಲೂ ದುಃಖದಲ್ಲೂ ಜೊತೆಯಾಗುವ, ಗೌರವ ಕೊಡುವ, ವಿಶ್ವಾಸ ಉಳಿಸಿಕೊಳ್ಳುವ ವ್ಯಕ್ತಿಯಾಗಿರುವುದು.ಯಾರ ಜೀವನದಲ್ಲೂ “ಆಯ್ಕೆ”ಯಾಗಿ ಉಳಿಯುವುದಕ್ಕಿಂತ, “ಆದ್ಯತೆ”ಯಾಗಿ ಬದುಕುವುದು ಹೆಚ್ಚು ಮೌಲ್ಯಯುತ.ಏಕೆಂದರೆ, ನಮ್ಮನ್ನು ಬೇಕಾದಾಗ ಮಾತ್ರ ನೆನಪಿಸಿಕೊಳ್ಳುವವರಿಗಿಂತ, ಯಾವಾಗಲೂ ನಮ್ಮನ್ನು ಗೌರವಿಸುವವರೇ ನಿಜವಾದ ಸಂಬಂಧಗಳು.“ನಮ್ಮನ್ನು ಕೇವಲ ಒಂದು ‘ಆಯ್ಕೆ’ಯಾಗಿ ನೋಡುವವರ ಹಿಂದೆ ಓಡುವುದಕ್ಕಿಂತ, ನಮ್ಮನ್ನು ‘ಆದ್ಯತೆ’ಯಾಗಿ ಕಾಣುವವರನ್ನು ಗೌರವಿಸೋಣ. ಅದೇ ಸಂಬಂಧದ ನಿಜವಾದ ಮೌಲ್ಯ.” ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

ಕವಿತಾ ಶ್ರೀನಿವಾಸ್ ನಾಯಕ್ “ಆಯ್ಕೆ” Read Post »

ಕಾವ್ಯಯಾನ

ಡಾ. ನಟರಾಜ್ ಆರ್ಯ ಅವರ ಕವಿತೆ “ಅರಳಿಯ ನೆರಳು”

ಕಾವ್ಯ ಸಂಗಾತಿ ಡಾ. ನಟರಾಜ್ ಆರ್ಯ “ಅರಳಿಯ ನೆರಳು” ಬೆಟ್ಟ ಗುಡ್ಡದ ತೋಳಲಿಕೆರೆಯೂರ ಕೇರಿ;ಅರಳಿಯ ನೆರಳಲಿಊರು ಉಸಿರಾಡಿತು. ಕರುಗಳ ಮೊರೆ,ಒಲೆ ಹೊಗೆ,ಒನಕೆಯ ತಾಳಕೆಬೆಳಗು ಮೂಡಿತು. ಹುಟ್ಟು ಬಂದರೆಅರಳಿಯ ಕೆಳಗೆ;ಸಾವು ಬಂದರೂಅರಳಿಯ ಕೆಳಗೆ. “ಅರಳಿ ಕಡೀಬೇಡಯ್ಯ…ಒಳಗ ದೇವರಿರ್ತಾರೆ…”ಹಿರಿಯರ ನುಡಿಗಾಳಿಯಲಿ ತೇಲಿತು. ಹೊನ್ನಯ್ಯನ ಕೊಡಲಿಬೇರಿಗೆ ಇಳಿಯಿತು. ಕೊಂಬೆ ಮುರಿಯಿತು.ಗೂಡು ಉದುರಿತು.ಮರಿ ಬಿತ್ತು.ಊರು ಮೌನವಾಯಿತು. ತಾಯಿಹಕ್ಕಿ ಅತ್ತಿತು;ಗಾಳಿ ನಿಟ್ಟುಸಿರಿಟ್ಟಿತು;ಅರಳಿಯ ಎಲೆಗಳುಮಾತಿಲ್ಲದೆ ಉದುರಿದವು. ಅರಳಿ ಬಿದ್ದ ಮೇಲೆಬಿಸಿಲು ಹರಡಿತು;ಕೇರಿಯ ದಾರಿಯಲಿನೆರಳು ಕಳೆದುಹೋಯಿತು. ಹೂವಯ್ಯಕಣ್ಣು ಮುಚ್ಚಿದ. ಅರಳಿ ಬಿದ್ದ ಜಾಗದಲ್ಲಿಇಂದಿಗೂಗಾಳಿ ಬೀಸಿದರೆಮೌನ ಅಲುಗಾಡುತ್ತಿದೆ. ಡಾ. ನಟರಾಜ್ ಆರ್ಯ

ಡಾ. ನಟರಾಜ್ ಆರ್ಯ ಅವರ ಕವಿತೆ “ಅರಳಿಯ ನೆರಳು” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್‌ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್‌ ಗಜಲ್ ಮರೆಯಲಾಗುತ್ತಿಲ್ಲಾ ನಿನ್ನೂರಿನ ವಿಳಾಸವನು ದೊರೆಯೆಎಣಿಸಲಾಗುತ್ತಿಲ್ಲಾ ನೀ ಮಾಡಿದ ಗಾಯಗಳನು ದೊರೆಯೆ!! ಯಾರಿಗೇಳಿದರೆ ತಾನೇ ಕಳೆದೀತು,ಇಳಿದೀತು ಈ ದು:ಖ?ಹುಡುಕಲಾಗುತ್ತಿಲ್ಲಾ ಅಂತಹವನೊಬ್ಬ ಚಿಕಿತ್ಸಕನನು ದೊರೆಯೆ!! ಯಾರಿಗೆ ಗೊತ್ತಿತ್ತು,ಪ್ರೇಮದ ನಶೆಯೆಂದುಕೊಂಡೆತಿಳಿಯಲಾಗುತ್ತಿಲ್ಲಾ ನೀ ವಿಷವುಣಿಸಿ ಕೊಲ್ಲುವ ಕಲೆಯನು ದೊರೆಯೆ!! ನಗುವ ಅಭ್ಯಾಸವಿದ್ದವಳಿಗೆ ಅಳುವಿನ ಅಭ್ಯಂಜನ ಮಾಡಿಸಿದೆಒರೆಸಲಾಗುತ್ತಿಲ್ಲಾ ಕಡಲಂತೆ ಉಕ್ಕುವ ಕಂಬನಿಯನು ದೊರೆಯೆ!! ಪ್ರೀತಿಗೆ ಇಷ್ಟೊಂದು ಶಕ್ತಿಯೇ? ತಲಾಷೇ ಬೇಕಿಲ್ಲಾನಂಬಲಾಗುತ್ತಿಲ್ಲಾ ಹೀಗೂ ಸಾಯಬಹುದೆಂಬ ಸತ್ಯವನು ದೊರೆಯೆ!! ಮನಸ್ಸನ್ನು ಮುಟ್ಟಿ ನೋಡಿದರೆ ತಿಳಿಯ ಬಹುದಿತ್ತುಉಳಿಸಿಕೊಳ್ಳಲಾಗುತ್ತಿಲ್ಲಾ ನಿನಗೆ ಶಾಶ್ವತ ಪ್ರೀತಿಯನು ದೊರೆಯೆ!! ಬದುಕು ತೆರೆದಿಡುವ ಪಠ್ಯದೊಳಗೆ ಪ್ರೇಮ ಒಂದು ಭಾಗವೆಂಬುದ ಮರೆತೆಕಲಿಯಲಾಗುತ್ತಿಲ್ಲಾ ಇಷ್ಟಾದರೂ ಜಯಾ, ದ್ರೋಹ ಮಾಡುವುದನು ದೊರೆಯೆ!! ಜಯಂತಿ ಸುನಿಲ್

ಜಯಂತಿ ಸುನಿಲ್‌ ಅವರ ಗಜಲ್ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-36 ಡಾ.ವಿಶ್ವನಾಥ್‌ ಎನ್.ನೇರಳೆಕಟ್ಟೆ ಅರ್ಜುನ ಉವಾಚ ದಶರಥಸುತ ದಮನಿಸಿದ ದಶಕಂಠನನ್ನು   ಇಕ್ಷಾಕು ಮೊದಲಾದ ರಾಜಾಧಿರಾಜರನ್ನು ಹೊಂದಿದ ಶ್ರೇಷ್ಠಕುಲವಾಗಿತ್ತು ಸೂರ್ಯವಂಶ. ಅಯೋಧ್ಯೆಯನ್ನು ಆಧಾರವಾಗಿಟ್ಟುಕೊಂಡು ಇವರೆಲ್ಲರೂ ಆಳ್ವಿಕೆ ನಡೆಸಿದರು. ಹೀಗಿದ್ದ ರವಿಕುಲದಲ್ಲಿ, ಅಯೋಧ್ಯಾಪುರದಲ್ಲಿ ಪುತ್ರಕಾಮೇಷ್ಠಿ ಯಾಗದ ಫಲವಾಗಿ, ದಶರಥಪುತ್ರನಾಗಿ ಜನಿಸಿದ ಮಹಾವಿಷ್ಣು, ಶ್ರೀರಾಮಚಂದ್ರನೆಂಬ ಹೆಸರನ್ನು ಹೊತ್ತು. ಕೌಸಲ್ಯೆಯ ಗರ್ಭದೊಳಗಿಂದ ಈ ಇಳೆಗಿಳಿದ ಶ್ರೀರಾಮ ಬೆಳೆದದ್ದು ಲಕ್ಷಣ, ಭರತ, ಶತ್ರುಘ್ನರೆಂಬ ತಮ್ಮಂದಿರೊಡನೆ. ಕೌಶಿಕ ರಾಜನ ಯಾಗವನ್ನು ಕಾಪಾಡುವ ಹಿರಿದು ಹೊಣೆಯದು ಕಿರಿದು ವಯಸ್ಸಿನಲ್ಲಿಯೇ ಅವನದ್ದಾಯಿತು. ತಾಟಕಿಯೆಂಬ ರಕ್ಕಸಿಯನ್ನು ಕೊಂದ ಕೌಸಲ್ಯಾ ಸುತ. ಶಾಪದ ಫಲವಾಗಿ ಶಿಲೆಯಾಗಿದ್ದ ಗೌತಮ ಋಷಿಯ ಮಡದಿ ಅಹಲ್ಯೆಯನ್ನು ಉದ್ಧರಿಸಿದ ದಶರಥನಂದನ. ಮಿಥಿಲೆಯಲ್ಲಿ ನಡೆಯುತ್ತಿದ್ದ ಸೀತಾ ಸ್ವಯಂವರಕ್ಕೆ ಹೋದವನು ಶಿವಧನುಸ್ಸನ್ನು ಮುರಿದು, ಜನಕರಾಜನ ಸುತೆಯಾದ ಜಾನಕಿಯನ್ನು ಸತಿಯಾಗಿ ಪಡೆದ.ಹೀಗೆ ಬದುಕಿನಲ್ಲಿ ಏಳಿಗೆಯನ್ನು ಗಳಿಸುತ್ತಾ, ಪ್ರವರ್ಧಮಾನಕ್ಕೆ ಬರುತ್ತಿರುವ ಮಗ ಶ್ರೀರಾಮನಿಗೆ ಅಯೋಧ್ಯೆಯ ಪೂರ್ಣ ಜವಾಬ್ದಾರಿಯನ್ನು ನೀಡಬೇಕು ಎನಿಸಿತು ದಶರಥನಿಗೆ. ರಘುಕುಲತಿಲಕನ ಪಟ್ಟಾಭಿಷೇಕಕ್ಕೆ ಮುಹೂರ್ತವದು ನಿಗದಿಗೊಂಡಿತು. ಈ ವಿಚಾರವನ್ನು ಮಂಥರೆಯ ಮೂಲಕ ತಿಳಿದಳು ಕೈಕೇಯಿ. ದಶರಥನ ಪ್ರೀತಿಯ ರಾಣಿ. ಮಂಥರೆಯ ಮತ್ಸರದ ನುಡಿಯದು ಕೈಕೇಯಿ ಮನವನ್ನು ಮಥಿಸಿತು ಹೀನವಾಗಿ. ತನ್ನ ಮಗ ಭರತನಿಗೇ ಪಟ್ಟ ದೊರೆಯಬೇಕೆಂದು ಹಠ ಹಿಡಿದಳು ಗಂಡನಲ್ಲಿ. ಹಿಂದೆ ಅವಳಿಗೆ ಕೊಟ್ಟಿದ್ದ ಮಾತು ಈಗವನ ಬಾಯಿಯನ್ನು ಮುಚ್ಚಿಸಿತು. ಭರತನಿಗೆ ದೊರಕಿತು ಅಯೋಧ್ಯೆಯ ಸಿಂಹಾಸನ. ಪ್ರಭುವಾಗಬೇಕಿದ್ದ ಶ್ರೀರಾಮನದ್ದು ವನದೆಡೆಗಿನ ಗಮನ. ಜೊತೆಗಿದ್ದದ್ದು ಒಲವಿನ ಮಡದಿ ಸೀತೆ, ಪ್ರಿಯ ಸೋದರ ಲಕ್ಷö್ಮಣ.ವನವಾಸದ ಅವಧಿಯಲ್ಲಿ ಅದೆಷ್ಟೋ ರಕ್ಕಸರು ಕೊನೆಗಂಡರು, ರಾಮಬಾಣಕ್ಕೆ ಸಿಲುಕಿ. ಋಷಿಸಂತತಿಯದು ಸಂತಸ ಪಡೆಯಿತು, ಶ್ರೀರಾಮ ಸಹವಾಸದಲಿ.ಹೀಗೆ ರಾಮ, ಲಕ್ಷö್ಮಣ, ಸೀತೆಯರು ದಂಡಕಾರಣ್ಯದಲ್ಲಿದ್ದಾಗ ಅವರನ್ನು ಕಂಡವಳು ರಾವಣ ಸೋದರಿ ಶೂರ್ಪನಖಿ. ರಾಮನಲ್ಲಿ ಮನಸ್ಸಾಯಿತು ಆಕೆಗೆ. ಲಕ್ಷö್ಮಣನಲ್ಲಿಗೆ ಕಳುಹಿಸಿಕೊಟ್ಟ ರಾಮ, ಆ ದುಷ್ಟೆಗೆ ಬುದ್ಧಿ ಕಲಿಸುವ ತೆರದಿ. ಅಂಗಭAಗಕ್ಕೆ ಒಳಗಾಗಿ ಅವಮಾನಕ್ಕೀಡಾದವಳು ಸೀತೆಯ ಚೆಲುವನ್ನು ಹೊಗಳಿದಳು ರಾವಣನಲ್ಲಿ. ಕಾಮದಾಸೆಯಲ್ಲಿ ಅಂಕುಶ ಮೀರಿದ ಲಂಕೆಯ ಅಧಿಪತಿ, ಕಪಟ ವೇಷದಿಂದ ರಾಮ ಲಕ್ಷö್ಮಣರನ್ನು ಮರುಳುಗೊಳಿಸಿ, ಸೀತೆಯನ್ನು ಅಪಹರಿಸಿದ.ಕಾಣದಾದ ಸತಿಯನ್ನು ಹುಡುಕಿ ಹೊರಟ ಶ್ರೀರಾಮ ರಾವಣನನ್ನು ಎದುರಿಸಿ, ಬಿದ್ದಿದ್ದ ಜಟಾಯುವನ್ನು ಕಂಡ. ವಿವರವನ್ನು ಕೇಳಿದ. ಮಾರ್ಗಮಧ್ಯೆ ಕಬಂಧ ಎಂಬ ಅಸುರನನ್ನು ಕೊಂದ. ತನ್ನ ಆಗಮನಕ್ಕಾಗಿ ಕಾಯುತ್ತಿದ್ದ ಶಬರಿಗೆ ದರುಶನವನ್ನಿತ್ತು, ಅವಳನ್ನು ಧನ್ಯಗೊಳಿಸಿದ. ಆಂಜನೇಯ ಬಲವದು ಆ ಸಮಯದಲ್ಲಿಯೇ ಅವನನ್ನು ಸೇರಿತು. ವಾಲಿ ಸುಗ್ರೀವ ಸಹೋದರ ಕಲಹದಲ್ಲಿ ಭಾಗವಹಿಸಿ, ವಾಲಿಯನ್ನು ಕೊಂದ. ಸುಗ್ರೀವ ಸಹಾಯವನ್ನು ಸದಾ ತನ್ನದಾಗಿಸಿಕೊಂಡ. ಜಾಂಬವAತನ ನೆರವು ದೊರಕಿತು ರಘುಕುಲವೀರನಿಗೆ.ಜನಕಸುತೆಯನ್ನು ಹುಡುಕುವುದಕ್ಕೆ ಅಂಜನಾಸುತನನ್ನು ಕಳುಹಿಸಿಕೊಟ್ಟ. ಅಮಿತ ಬಲದಿಂದ ಸಮುದ್ರವನ್ನು ಉಲ್ಲಂಘಿಸಿದ ಹನುಮಂತ. ಶ್ರೀರಾಮಸತಿ ಸೀತೆಗೆ ಶ್ರೀರಾಮಾಂಕಿತದ ಮುದ್ರಿಕೆಯನ್ನಿತ್ತ. ಅವಳ ಸಂದೇಶವನ್ನು ಶ್ರೀರಾಮನಿಗೆ ತಿಳಿಸುವ ಮಾತುಕೊಟ್ಟ. ರಾವಣನ ಅಶೋಕವನವನ್ನು ಧೂಳೀಪಟ ಮಾಡಿದ. ತಡೆಯಲು ಬಂದ ರಕ್ಕಸರನ್ನು ಕೊಂದ. ಬಾಲಕ್ಕೆ ಬಿದ್ದ ಬೆಂಕಿಯಿAದ ಲಂಕೆಯನ್ನೇ ಸುಟ್ಟ. ಸೀತೆಯಿತ್ತ ಸಂದೇಶವನ್ನು ಶ್ರೀರಾಮನಿಗೆ ಹೇಳಿದ.ರಾಮ ರಾವಣರ ಮಧ್ಯೆ ನಡೆಯಿತದೋ ಘೋರ ಕಾಳಗ. ಅಸುರ ಕುಲದ ಹೆಸರೇ ಅಳಿದುಹೋಗುವಂತೆ ಪರಾಕ್ರಮ ತೋರಿದ ಶ್ರೀರಾಮಚಂದ್ರ. ರಾವಣ ಮರಣವನ್ನಪ್ಪಿದ. ವಿಭೀಷಣ ಲಂಕಾಧಿಪತಿ ಎನಿಸಿಕೊಂಡ.ರಾವಣ ಸೆರೆಯಲ್ಲಿದ್ದ ಸೀತೆಯನ್ನು ಮರಳಿ ತನ್ನವಳನ್ನಾಗಿಸಿಕೊಂಡ ಶ್ರೀರಾಮ ಅಯೋಧ್ಯೆಯನ್ನು ಮರಳಿ ಕಂಡ. ತನ್ನವರೆಲ್ಲರನ್ನೂ ನೋಡಿ ಹರ್ಷಗೊಂಡ. ಮಗನ ಮೈಯ್ಯಲ್ಲಿದ್ದ ಗಾಯಗಳನ್ನು ಕಂಡೊಡನೆಯೇ ಕೌಸಲ್ಯೆ ಕರುಳದು ನೊಂದಿತು. “ನಿನ್ನ ಕೋಮಲಕಾಯವನ್ನು ನೋಯಿಸಿದವರು ಯಾರು?” ಎಂದು ಕೇಳುತ್ತಾ, ಪೂರ್ಣ ನೊಂದಳು ರಾಮಮಾತೆ. ತಾಯಿಯನ್ನು ಸಂತೈಸಿದ ಅವಳ ಪ್ರಿಯಸುತ.ಅಯೋಧ್ಯೆಯ ಅಧಿಕಾರವದು ಈಗ ಶ್ರೀರಾಮನದ್ದಾಯಿತು. ಪಟ್ಟಾಭಿಷಿಕ್ತನಾದ ಪರಮ ಪಾವನ ಪುರುಷೋತ್ತಮ. ಒಂಭತ್ತು ಸಾವಿರ ವರ್ಷಗಳದು ಉರುಳಿಹೋದವು. ಶ್ರೀರಾಮನ ಆಳ್ವಿಕೆಯ ಆ ಕಾಲದಲ್ಲಿ ಪೂರ್ಣ ಅಯೋಧ್ಯೆ ಪರಿಪೂರ್ಣತೆಯನ್ನು ಹೊತ್ತುನಿಂತಿತು. ಎಲ್ಲಿ ನೋಡಿದರೂ ಸಮೃದ್ಧಿ, ಸಂಪನ್ನತೆ. ನೀತಿಶಾಸ್ತçಗಳಿಂದಲೇ ಹೆಸರು ಗಳಿಸಿತು ಅಯೋಧ್ಯೆ.ಹೀಗಿದ್ದಾಗಲೇ ರಘುಕುಲವದು ತನ್ನಿಂದ ಮುಂದಕ್ಕೆ ಮುಂದುವರಿಯಬೇಕೆAಬ ಬಯಕೆ ಮೂಡಿತು ರಾಮನಲ್ಲಿ. ಸಂತಾನದ ಅಪೇಕ್ಷೆ ಅವನದ್ದು. ಏಕಾಂತದಲ್ಲಿ ಸತಿ ಸೀತೆಯ ಜೊತೆಗೆ ಮನದ ಭಾವನೆಯನ್ನು ಹಂಚಿಕೊAಡ.“ಇಕ್ಷಾ÷್ವಕು ವಂಶ ಇದುವರೆಗೂ ಅವಿರತವಾಗಿ ಮುನ್ನಡೆಯುತ್ತಾ ಬಂದಿದೆ. ಈಗ ನಾನು ಮಕ್ಕಳನ್ನು ಪಡೆಯದೇ ಹೋದರೆ ನನ್ನಿಂದ ಈ ಕುಲ ಅಳಿಯಿತೆಂಬ ಕಳಂಕ ನನ್ನದಾಗುತ್ತದೆ. ಸಂಸಾರದ ಭ್ರಾಂತಿಯದು ತನ್ನಿಂದ ತೊಲಗಿಹೋಗಬೇಕಾದರೆ ಸಂತಾನದ ಏಳಿಗೆ ಆಗಬೇಕು. ಆದ್ದರಿಂದ ನಾವಿಬ್ಬರೂ ಕೂಡಿ ಸಂತಾನ ಪ್ರಾಪ್ತವಾಗಿಸಿಕೊಳ್ಳಬೇಕು ಎಂದು ಬಯಸುತ್ತಿದೆ ನನ್ನ ಮನಸ್ಸು” ಎಂದವನು ಅವಳ ಒಪ್ಪಿಗೆಯನ್ನು ಬಯಸಿದ.ಸೀತೆ ಚಿತ್ತವದು ತಾಯ್ತನದೆಡೆಗೆ ಆಕರ್ಷಿತವಾಗಿತ್ತು. ಮಗುವನ್ನು ಹೊಂದುವ ಸಹಜ ಆಸೆ ಅವಳದಾಗಿತ್ತು. ಅದನ್ನೇ ಹೇಳಿಕೊಂಡಳು ಪತಿಯಲ್ಲಿ. ಅವನ ಆಕಾಂಕ್ಷೆಯೇ ತನ್ನ ಆಕಾಂಕ್ಷೆ ಎಂದು ನುಡಿದಳು. ಮುದ್ದು ಶಿಶುವನ್ನು ಪಡೆಯುವ ಹಿರಿದು ಭಾಗ್ಯವದು ಸಕಲ ಹೆಂಗಳೆಯರಿಗೆ ದೊರೆಯುವುದೇ! ಎಂದು ಸಂದೇಹ ವ್ಯಕ್ತಪಡಿಸಿದ್ದಳು.ಹೀಗಿದ್ದಾಗಲೇ ಶ್ರೀರಾಮ ಆಸ್ಥಾನಕ್ಕೆ ಮುನಿಶ್ರೇಷ್ಠ ವಸಿಷ್ಠರ ಆಗಮನವಾಯಿತು. ಸಂತಾನದ ಬಯಕೆಯನ್ನು ಅವರಲ್ಲಿ ಹೇಳಿಕೊಂಡ ಶ್ರೀರಾಮ. “ನಿಮಗಿಬ್ಬರಿಗೂ ಸಂತಾನ ಭಾಗ್ಯವಿದೆ. ಮುಂದೆ ಒಳ್ಳೆಯದಾಗಲಿದೆ” ಎಂಬ ಒಳಿತಿನ ನುಡಿ ಅವರಿಂದ ಮೂಡಿಬಂತು. ಹರ್ಷಚಿತ್ತನಾದನು ಶ್ರೀರಾಮ. ಆಗಲೇ ವಸಂತಕಾಲವದು ಬಂತು…      ಡಾ.ವಿಶ್ವನಾಥ್‌ ಎನ್.ನೇರಳೆಕಟ್ಟೆ

Read Post »

You cannot copy content of this page

Scroll to Top