ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ಭಾರತಿ ಅಶೋಕ್‌ ಅವರ ಕವಿತೆ “ಮದ್ದಾಗಬಹುದಿತ್ತು”

ಕಾವ್ಯ ಸಂಗಾತಿ ಡಾ.ಭಾರತಿ ಅಶೋಕ್‌ “ಮದ್ದಾಗಬಹುದಿತ್ತು” ಈ ಹೊತ್ತಿಗುನಿನಗು  ಹೇಳದಮಾತೊಂದು ಎದೆಯಲ್ಲೇಉಳಿದು ಮುಳ್ಳಾಗಿ ಚುಚ್ಚು ತ್ತಿದೆ ಆಮಾತು ಏನೆಂದು ಕೇಳುವಸಹನೆ ಹೋಗಲಿ ಅಲ್ಲೇ ಉಳಿದು ಚುಚ್ಚಿದಗಾಯಕ್ಕಾದರೂ ಮದ್ದಾಗಬಹುದಿತ್ತು ಅದೆಲ್ಲಾ ಬಿಡುನಾನು ಹೇಳದೇ ಉಳಿದ ಮಾತೊಂದು ನನ್ನಲ್ಲೇ ಉಳಿದುಗಾಯವಾಗಿ ಈಗ ಬದುಕನ್ನೇಬಲಿ ಕೇಳುತ್ತಿದೆಎನ್ನುವ ಸತ್ಯದ  ಅರಿವು ನಿನಗಿಲ್ಲ ನನಗೋಸತ್ಯ ಅರುಹಿ ಗಾಯ ವಾಸಿ ಮಾಡಿಕೊಂಡು ಬದುಕನ್ನುಬದುಕಿಸಿಬಿಡುವ ತಹತಹಿಕೆ ಈಗಬದುಕಿನ ಬದಲಾಗಿನೀನೇ ಕೇಳಲಿ, ತಿಳಿಯಲಿ ಅರಿಯಲಿ ಎನ್ನುವ ಅಹಂನ್ನುಬಲಿ ಕೊಡವೆ. ಆ ಮಾತನ್ನು ನಿನ್ನಲ್ಲಿ ಹೇಳಿ ಬದುಕಿನೊಟ್ಟಿಗೆನಾನೂ ಗೆದ್ದುಬಿಡುವೆಈ ಹೊತ್ತಿಗುನಿನಗು  ಹೇಳದಮಾತೊಂದು ಎದೆಯಲ್ಲೇಉಳಿದು ಮುಳ್ಳಾಗಿ ಚುಚ್ಚು ತ್ತಿದೆ ಆಮಾತು ಏನೆಂದು ಕೇಳುವಸಹನೆ ಹೋಗಲಿ ಅಲ್ಲೇ ಉಳಿದು ಚುಚ್ಚಿದಗಾಯಕ್ಕಾದರೂ ಮದ್ದಾಗಬಹುದಿತ್ತು ಅದೆಲ್ಲಾ ಬಿಡುನಾನು ಹೇಳದೇ ಉಳಿದ ಮಾತೊಂದು ನನ್ನಲ್ಲೇ ಉಳಿದುಗಾಯವಾಗಿ ಈಗ ಬದುಕನ್ನೇಬಲಿ ಕೇಳುತ್ತಿದೆಎನ್ನುವ ಸತ್ಯದ  ಅರಿವು ನಿನಗಿಲ್ಲ ನನಗೋಸತ್ಯ ಅರುಹಿ ಗಾಯ ವಾಸಿ ಮಾಡಿಕೊಂಡು ಬದುಕನ್ನುಬದುಕಿಸಿಬಿಡುವ ತಹತಹಿಕೆ ಈಗಬದುಕಿನ ಬದಲಾಗಿನೀನೇ ಕೇಳಲಿ, ತಿಳಿಯಲಿ ಅರಿಯಲಿ ಎನ್ನುವ ಅಹಂನ್ನುಬಲಿ ಕೊಡವೆ. ಆ ಮಾತನ್ನು ನಿನ್ನಲ್ಲಿ ಹೇಳಿ ಬದುಕಿನೊಟ್ಟಿಗೆನಾನೂ ಗೆದ್ದುಬಿಡುವೆ ಡಾ.ಭಾರತಿ ಅಶೋಕ್

ಡಾ.ಭಾರತಿ ಅಶೋಕ್‌ ಅವರ ಕವಿತೆ “ಮದ್ದಾಗಬಹುದಿತ್ತು” Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಕಂಡ ಕನಸುಗಳು ನನಸಾಗಬೇಕು ಎಂದೇನೂ ಇಲ್ಲಬಯಸಿದುದೆಲ್ಲಾ ಸಿಕ್ಕು ಬಿಡಬೇಕು ಎಂದೇನೂ ಇಲ್ಲ ಅವ ಬಂದಾಗ ನಕ್ಕು ಹೋಗುವಾಗ ಅಳುವ ಕಾಲ ಕಳೆದಿದೆಸಮಯ ಎಂದಿಗೂ ನನ್ನ ಪರವಿರಬೇಕು ಎಂದೇನೂ ಇಲ್ಲ ಮೌನಕ್ಕೆ ಅಗಾಧವಾದ ಶಕ್ತಿಯಿದೆಯೆಂದು ನನಗೆ ತಿಳಿದಿದೆಮನದ ಭಾವಗಳ ಮಾತಲ್ಲೇ ಹೇಳಬೇಕು ಎಂದೇನೂ ಇಲ್ಲ ಮಾತಾಡಿದ ಮಾತು ಮರೆತಿಲ್ಲ ಮನದ ತುಂಬಾ ತುಂಬಿದೆರೂಪು ಕಣ್ಣಲ್ಲಿದೆ ಕಣ್ಣೆದುರೇ ಇರಬೇಕು ಎಂದೇನೂ ಇಲ್ಲ ಬದುಕನ್ನು ಬಂದಂತೆ ಸ್ವೀಕರಿಸುತ್ತಾ ಬಂದಿದ್ದಾಳೆ ಅರುಣಾಎಲ್ಲಾ ಕಥೆಗಳು ಸುಖಾಂತ್ಯವಾಗಬೇಕು ಎಂದೇನೂ ಇಲ್ಲ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

You cannot copy content of this page

Scroll to Top