ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎಮ್ಮಾರ್ಕೆ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ನಾ ನಿನ್ನ ಹಿಂಬಾಲಿಸುತಿರಲು ಹಿಂತಿರುಗಿ ನೋಡಬಾರದೇನೀ ನನ್ನನೇ ಆವರಿಸುತಿರಲು ಒಂಟಿತನವ ದೂಡಬಾರದೇ ಮನೆಯ ದೀಪ ಬೆಳಗುವವಳೇ ಮನದ ತಾಪ ಕಳೆವವಳೇಮನಸೊಳು ಮನೆಯ ಮಾಡಿ ಕನಸಿನಲ್ಲೂ ಕಾಡಬಾರದೇ ಬಾರೆಂದು ಕೂಗುವವಳೇ ಬಾಳ ಜೋಕಾಲಿ ತೂಗುವವಳೇರಾಗ ದ್ವೇಷಗಳ ಮರೆಸುವ ಹಾಡೊಂದನು ಹಾಡಬಾರದೇ ಕಷ್ಟಸುಖದಲಿ ಕೈ ಹಿಡಿವವಳೇ ಜೊತೆಯಾಗಿ ದುಡಿವವಳೇನದಿ ಸಾಗರ ಸೇರುವಂತೆಯೇ ಬಂದೆನ್ನನು ಕೂಡಬಾರದೇ ಐರಾಣಿಯ ಹೊರುವವಳೇ ರಾಣಿಯಾಗಿ ಮೆರೆಯುವಳೇಕಡಿತನ ಕುಂಬಾರನ ಜತೆಗಿರುವ ಆಣೆಯ ಮಾಡಬಾರದೇ ಎಮ್ಮಾರ್ಕೆ

ಎಮ್ಮಾರ್ಕೆ ಗಜಲ್ Read Post »

ಕಾವ್ಯಯಾನ

ನಾಗರಾಜ ಬಿ ನಾಯ್ಕ “ರೆಪ್ಪೆಯಾಚೆಯ ಚಿತ್ರಗಳು…….”

ಕಾವ್ಯ ಸಂಗಾತಿ ನಾಗರಾಜ ಬಿ ನಾಯ್ಕ “ರೆಪ್ಪೆಯಾಚೆಯ ಚಿತ್ರಗಳು…….” ಎರಡು ಕಣ್ಣುಗಳಕಾಂತಿಯಲ್ಲಿ ಹರಡಿದಚಿತ್ರಗಳ ಹುಡುಕುತ್ತಾಸಾಗಿದರೆ ಕಾಣದ ಮಾತಿನ ಮೌನಓರೆನೋಟದ ಬಿಗುಮಾನರೆಪ್ಪೆಯಾಚೆಗಿನ ಕುಡಿನೋಟದೂರದುತ್ತರದ ಮಾತುಗಳಲ್ಲಿ ಅವಿತ ಒಂದು ಮಾತಿನ ಕಥೆಸಾಲುಗಳಲ್ಲಿ ಹುಡುಕಾಡಿಕೊನೆಯಲ್ಲಿ ಸಿಕ್ಕ ಒಂಟಿ ಪದಮುಖದೊಳಗೆ ಒಲವಿನಒರತೆಯ ಚೆಲ್ಲಿ ನಗುವಾದಮೊಗದ ನಲಿವಿನ ಇರುಳುಕತ್ತಲೆಗೆ ಎಸೆದಬೆಳಕಿನ ಹೊಸ ಸಾಲಿನದೀಪದ ಹಣತೆಯ ಸಮಯದಿಟವಾದ ಹಕ್ಕಿ ಗೂಡಿನಸಂವೇದನೆ ಮತ್ತು ಹೊಸತನಎಲ್ಲವೂ ಅಂಕು ಡೊಂಕುದಾರಿಯ ನಿರಂತರಚಲನೆಯ ಪ್ರಯತ್ನರೆಪ್ಪೆಯೊಗಳಗಿನ ಗತದನಡುವೆ ಕಾಣದೇ ಮೌನವಾಗಿಉಳಿವ ಸಣ್ಣ ಇರುವೆಪಯಣದ ಪರಿಚಯಪ್ರಶ್ನೆ ಪರಿವೀಕ್ಷಣೆಯ ಆಚೆದೃಢವಾಗಿ ನಿಂತ ಪುಟ್ಟ ದೋಣಿರೆಪ್ಪೆಯ ಒಳಗೆ ಕುಳಿತಚಿತ್ರಗಳಲ್ಲಿ ಕಾಣದ ಗೆರೆಗಳಕಾಣುವ ಚಿತ್ರಗಳು ಸುಮ್ಮನೇನಮ್ಮದು ಎಂಬಂತೆ……… ನಾಗರಾಜ ಬಿ ನಾಯ್ಕ. 

ನಾಗರಾಜ ಬಿ ನಾಯ್ಕ “ರೆಪ್ಪೆಯಾಚೆಯ ಚಿತ್ರಗಳು…….” Read Post »

ಕಾವ್ಯಯಾನ

ರಾಧಾ ಹನುಮಂತಪ್ಪ ಟಿ ಹರಿಹರ ಅವರ ಕವಿತೆ “ಎ.ಐ. ತಮ್ಮಾ”

ಕಾವ್ಯ ಸಂಗಾತಿ ರಾಧಾ ಹನುಮಂತಪ್ಪ ಟಿ ಹರಿಹರ “ಎ.ಐ. ತಮ್ಮಾ” *ಎಐ ತಮ್ಮ ಎಐ ತಮ್ಮ ನೀನು ಎಲ್ಲಿಂದ ಬಂದೆ ಎಲ್ಲಿಂದ ಬಂದೆ ಹೇಳು ನಿನಗಿಷ್ಟು ಮಾಹಿತಿ ಎಲ್ಲಿಂದ ಬಂತು ಹೇಳು* *ನಿಮಿಷ ಸೆಕೆಂಡ್ ಗಳಲ್ಲಿ ನಮ್ಮಯ ಪ್ರಶ್ನೆಗೆ ಉತ್ತರವ ಹೇಗೆ ಹುಡುಕುವೆಯಾ ತಮ್ಮ ಹೇಗೆ ಹುಡುಕುವೆಯಾ ತಮ್ಮ ಹೇಳು* *ನೆಮ್ಮದಿ ಶಾಂತಿ ಬೇಕು ಎಂದರೂ ಅದಕ್ಕೆ ಪ್ರತಿಯಾಗಿ ಉತ್ತರವ ಕೊಡುವ ನಿನ್ನ ಚಾಣಾಕ್ಷ ಬುದ್ಧಿಗೆ ನಾನು ಸೋತೆನು ತಮ್ಮ ನಾನು ಸೋತೆನು ತಮ್ಮ ನೀ ಎಲ್ಲಿರುವೆ ಹೇಳು* *ಎಲ್ಲ ಕ್ಷೇತ್ರಗಳಲ್ಲೂ ನಿನ್ನದೇ ಹಾವಳಿ ತಮ್ಮ ಈ ಮನುಷ್ಯನೇ ಮಾಡಿದನಂತೆ ನಿನ್ನನು ಇದು ನಿಜವೇ ತಮ್ಮ ಇದು ನಿಜವೇ ತಮ್ಮ ನೀನು ಹೇಳು* *ಎಐ ತಮ್ಮ ನೀನು ಎಲ್ಲಿಂದ ಬಂದೆ ನಿನ್ನಿಂದ ಸಕಲ ಜೀವಿಗಳ ಕುಲಕ್ಕೆ ತೊಂದರೆ ಯಾಗದು ಎಂದು ಹೇಳು ತಮ್ಮ ತೊಂದರೆ ಯಾಗದು ಎಂದು ಹೇಳು ಎಐ ತಮ್ಮ ಹೇಳು* ರಾಧಾ ಹನುಮಂತಪ್ಪ ಟಿ ಹರಿಹರ

ರಾಧಾ ಹನುಮಂತಪ್ಪ ಟಿ ಹರಿಹರ ಅವರ ಕವಿತೆ “ಎ.ಐ. ತಮ್ಮಾ” Read Post »

ಕಾವ್ಯಯಾನ

ಜಿ.ಎಸ್.ಕಲಾವತಿಮಧುಸೂದನ ಅವರ ಕವಿತೆ “ಸಮಾಧಾನ ಸಮಾಧಾನ ಸಮಾಧಾನ”

ಕಾವ್ಯ ಸಂಗಾತಿ ಜಿ.ಎಸ್.ಕಲಾವತಿಮಧುಸೂದನ ಸಮಾಧಾನ ಸಮಾಧಾನ ಸಮಾಧಾನ ಸದಾ ನಿನದೇ ಧ್ಯಾನ..ಎಷ್ಟೆಂದು ಬೇಡಲಿ ನಿನ್ನ ದಾನ..! ಬೇಡಿದಷ್ಟು ನೀಡುತಲೇ ಕಾಯಲು ಹವಣಿಸುವುದೇ ನಿನ್ನ ಸದ್ಗುಣ. ಎಷ್ಟೆಂದು ಪಾಡಿ ಪೊಗಳಲಿ ನಿನ್ನ ಗುಣಗಾನ.. ಗಾನಯಾನದಲಿ ತೇಲುವಲಿ ಯಾರಿಲ್ಲವು ನಿನ್ನ ಸಮಾನ..ಅಗುಳಗುಳ ನುಂಗಲು ಬೇಕು ದಿನದಿನವು ನಿನ್ನ ಅನುಸಂಧಾನ. ಅಣುವಣುವಿಗೂ ಚಣಚಣವು ದಿನದಿನವು ಜಲಜಭವದ ಅವನಿಯೊಳು ಮುಳುಗಿರಲು ಕರಪಿಡಿದೆತ್ತುವೆ ಸಾವಧಾನ.. ನೀನಿರದೇ ಇರಲು ಸಾಧನೆಗೆ ಎಲ್ಲೆಡೆಯು ಮಾನ…ಹರಣ..! ಕುಕೃತ್ಯ ಕುಟಿಲಗಳ ನಿವಾರಿಸಲು ಪ್ರೇರಣ..ನವನವೀನ ನಿತ್ಯ ನೂತನಕೆ ಬೇಕು ಸದಾ ನಿನ್ನ ಕರುಣ..! ನಿನ್ನ ಮರೆತು ನಡೆವ ಪ್ರತಿ ಚಣವು ಪ್ರತಿ ಕಣವು ಜೀವನ್ಮರಣ.. ಬದುಕೇ ಅಶಾಂತಿಯ ರಣಾಂಗಣ…!!ನಿನ್ನ ಮರೆತು ನಡೆಯದಂತೆಬೇಡುವಗೆ ಮಾಣಿಸು ಸದಾ ನಿನ್ನ ಸ್ಮರಣ.. ಸುಂದರ ಸುಮಧುರ ಶಾಂತಿ ನೆಮ್ಮದಿ ಪ್ರೀತಿ ವಾತ್ಸಲ್ಯಗಳ ಬಾಂಧವ್ಯದ ಬದುಕುಗಳ ಸಂಬಾಳಿಸಿ ಉಳಿಸಿ ಬೆಳೆಸಲು ನೀನೇ ಸಾದನ..ದಿನದಿನವೂ ಜೊತೆ ಸಾಗಿ ಹರಸಿ ಹರಿಸು  ನಿನ್ನ ಕರುಣ.. ಕಣಕಣದಲಿ ನೆಲೆಯಾಗಲಿ ಶಾಂತಿಯ ಸದನ..! ಜಿ.ಎಸ್.ಕಲಾವತಿ ಮಧುಸೂದನ

ಜಿ.ಎಸ್.ಕಲಾವತಿಮಧುಸೂದನ ಅವರ ಕವಿತೆ “ಸಮಾಧಾನ ಸಮಾಧಾನ ಸಮಾಧಾನ” Read Post »

ಕಾವ್ಯಯಾನ

ಸರಸ್ವತಿ ಕೆ ನಾಗರಾಜ್ ಅವರ ಕವಿತೆ “ಖಾಲಿ ಹಾಳೆಯ ಮೇಲೊಂದು ಕನಸು”

ಕಾವ್ಯ ಸಂಗಾತಿ ಸರಸ್ವತಿ ಕೆ ನಾಗರಾಜ್ “ಖಾಲಿ ಹಾಳೆಯ ಮೇಲೊಂದು ಕನಸು” ಒಮ್ಮೊಮ್ಮೆ ನಾ ಬರೆಯಲು ಕುಳಿತಾಗ,ಪೆನ್ನಿಗಿಂತ ಮೊದಲು ಮೌನವೇ ಹರಿದುಬರುತ್ತದೆ.ಹಾಳೆಯ ಮೇಲಿನ ಖಾಲಿ ಜಾಗದಲ್ಲಿ,ಮನದ ಮಾತುಗಳು ನೆರಳಾಗಿ ನಿಂತುಕೊಳ್ಳುತ್ತವೆ. ಹೇಳದೆ ಉಳಿದ ಕನಸುಗಳು,ಹಾಳೆಯ ಮೇಲೆ ಉಸಿರಾಡುತ್ತವೆ.ಕಳೆದುಹೋದ ಕ್ಷಣಗಳ ನೆರಳು,ಮತ್ತೆ ನೆನಪಾಗಿ ಕುಳಿತುಕೊಳ್ಳುತ್ತದೆ. ಒಮ್ಮೊಮ್ಮೆ ನಾ ಬರೆಯಲು ಕುಳಿತಾಗ,ನಾನು ಕವಿತೆ ಬರೆಯುವುದಿಲ್ಲ…ನನ್ನೊಳಗಿನ ಒಡೆದ ಮೌನವೇ,ತನ್ನ ಕಥೆಯನ್ನು ತಾನೇ ಹೇಳುತ್ತದೆ. ನಾ ಬರೆಯಲು ಕುಳಿತಾಗ,ಹಾಳೆಯೇ ಕನ್ನಡಿ ಆಗಿ ನಿಲ್ಲುತ್ತದೆ.ನನ್ನೊಳಗಿನ ನಿಜ ಮುಖವನ್ನು,ನಿಶ್ಶಬ್ದವಾಗಿ ತೋರಿಸಿಬಿಡುತ್ತದೆ. ಬರೆಯುತ್ತಾ ಬರೆಯುತ್ತಾ ಕೊನೆಯಲ್ಲಿ,ನಾನು ಕವಿತೆ ಮುಗಿಸುವುದಿಲ್ಲ…ನನ್ನೊಳಗಿನ ಬದುಕೇ ಮತ್ತೆ,ಹೊಸ ನಾನಾಗಿ ಆರಂಭವಾಗುತ್ತದೆ. ಬರೆಯುವ ಪ್ರತಿಯೊಂದು ಸಾಲಿನೊಳಗೆ,ಮತ್ತೆ ಹುಟ್ಟುವ ನಾನೇ ಅಡಗಿದ್ದೇನೆ.ನನ್ನನ್ನೆ  ನಾ  ಮತ್ತೆ ಮತ್ತೆ ಹುಡುಕುತ್ತೇನೆ. ಸರಸ್ವತಿ ಕೆ ನಾಗರಾಜ್.

ಸರಸ್ವತಿ ಕೆ ನಾಗರಾಜ್ ಅವರ ಕವಿತೆ “ಖಾಲಿ ಹಾಳೆಯ ಮೇಲೊಂದು ಕನಸು” Read Post »

ಕಾವ್ಯಯಾನ

ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ”ಏನಿದು ಯುದ್ದ?

ಕಾವ್ಯ ಸಂಗಾತಿ ಶುಭಲಕ್ಷ್ಮಿ ಆರ್ ನಾಯಕ “ಏನಿದು ಯುದ್ದ? ಏನಿದು ಯುದ್ದ ಎಲ್ಲಡೆ ನಾಶಸುಡುತಲಿ ಬಂದಿದೆ ಜಗವನ್ನು//ಪ//ಬೇಕಿದೆ ಶಾಂತಿಯ ಹರಡುವ ಹಣತೆಯುತೊಡೆಯಲು ಕವಿದಿಹ ತಮವನ್ನು //ಅ.ಪ// ಉಗುಳುತ ಕೆಂಡವ ಕಾರುತ ದ್ವೇಷವದಹಿಸಿದೆ ಬುವಿಯನು ಮದದಲ್ಲಿನಾನು ನನ್ನದು ಎಂಬುವ ಸ್ವಾರ್ಥವುಉರಿಸಿದೆ ಮತ್ಸರ ಸೊಕ್ಕಿನಲಿ//ಪ// ಪ್ರಕೃತಿ ನಾಶದ ಅರಿವೇ ಇರದೆನಡೆದಿದೆ ಮನುಜನ ಕಾದಾಟಗಾಳಿಯು ತುಂಬಿದ ಬಲೂನಿನ ತೆರದಲಿನಡೆದಿದೆ ಇವನ ಹಾರಾಟ// ಸುಡುವುದೆ ಸಾಧನೆ ಎಂಬುವ ಮನಸಲಿಎಲ್ಲವ ದಹಿಸುತ ಸಾಗಿಹರುಧ್ವಂಸವ ಮಾಡಿ ಬೀಗುತ ಸೊಕ್ಕಲಿತಾವೇ  ಉತ್ತಮರು ಎನ್ನುವರು//ಪ// ಯುದ್ಧದ ದಾಹಕೆ ಸಂಕುಲವೆಲ್ಲರೋಧಿಸಿ ಪ್ರಾಣವ ಬಿಟ್ಟಿಹುದುಸುಂದರ ಲೋಕಕೆ ಎಂದೂ ಭರಿಸದನಷ್ಟವೆ ಇಂದಿಗೆ ಆಗಿಹುದು// ಯುದ್ಧವ ನಿಲ್ಲಿಸಿ ಶಾಂತಿಯ ಬದುಕನುಸಾಗಿರಿ ಜಗದಲಿ ಒಲವಿನಲಿಶಾಂತಿಗೆ ದೊರೆಯುವ ಮನ್ನಣೆ ಇಳೆಯಲಿಎಲ್ಲಿಯೂ ಇಲ್ಲ ಅರಿವಿರಲಿ// ಶುಭಲಕ್ಷ್ಮಿ ಆರ್ ನಾಯಕ

ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ”ಏನಿದು ಯುದ್ದ? Read Post »

ಕಾವ್ಯಯಾನ

ರೇಖಾಪ್ರಕಾಶ್ ಅವರ ಕವಿತೆ “ಹೆಣ್ಣಿನ ಅಂತರಂಗ”

ಕಾವ್ಯ ಸಂಗಾತಿ ರೇಖಾಪ್ರಕಾಶ್ “ಹೆಣ್ಣಿನ ಅಂತರಂಗ” ಉಮ್ಮಳಿಸಿ ಬರುವ ದುಃಖಕ್ಕೆ,ಎದೆಗಪ್ಪಿಕೊಂಡು ಸಾಂತ್ವನ ಹೇಳುವವರಿಲ್ಲ ಇಲ್ಲಿ,ಅವಕಾಶ ಸಿಕ್ಕಿತೆಂದು ಬಿಗಿದಪ್ಪಲು ಬರುವವರೆ ಎಲ್ಲ ಮನದ ನೋವಿಗೆ ಮುಲಾಮು ಸವರುವವರಿಲ್ಲ ಇಲ್ಲಿಮದ್ದರೆಯುವ ನೆಪದಲ್ಲಿಮನವ ಕಲಕಿ ರಾಡಿ ಎಬ್ಬಿಸಿದವರೇ ಹೆಚ್ಚು ಮುರಿದ ಮನಸ್ಸುಗಳಮರು ಜೋಡಿಸುವವರಿಲ್ಲ ಇಲ್ಲಿಜೋಡಿಸುವ ನೆಪದಲ್ಲಿ ಸೂಜಿಯಿಂದ ಚುಚ್ಚಿ ನೋಯಿಸಿದವರೇ ಹೆಚ್ಚು ನಿಜ! ನಿನ್ನೊಲವಲ್ಲಿ ನಾ ಬಂಧಿಯಾಗಲಿಲ್ಲಉಸಿರುಗಟ್ಟುವಂತೆ ಬಿಗಿದಪ್ಪಿದ ಆ….ಆಲಿಂಗನವ ಒಲವೆಂದೊಪ್ಪಲಿ ಹೇಗೆ? ಹೆಣ್ಣಿನ ಅಂತರಾಳವನ್ನರಿಯದವನುಆತ್ಮಸಖನೇಗಾಗುವನು? ಎದೆಯೊಳಗೆ ನಡೆಯುವತುಮುಲಗಳೊಂದಿಗೆಸ್ಪರ್ದಿಸಲಾಗದೆಒಳಗೊಳಗೇ ನೊಂದು, ಬೆಂದು, ಕುದ್ದು, ಆವಿಯಾಗಿಹಿಂಗಿದ ಕಂಬನಿಯ ಗೆರೆಗಳು ಮುಖದಲ್ಲಿ ಮೂಡಿಸಿದ್ದು ಪ್ರೇತಕಳೆಹಾ!…. ಕಣ್ಣಿಂದ ಸುರಿದದ್ದು ಬರೀ ಕಂಬನಿಯಲ್ಲನೋವಿನ, ಅಸಹಾಯಕತೆಯರಕ್ತ ಕಣ್ಣೀರು ಸ್ವಾರ್ಥವೇ ತುಂಬಿರುವ ಈ ಜಗದೊಳಗೆನಿಸ್ವಾರ್ಥ ಪ್ರೀತಿಯ ನೀರೀಕ್ಷಿಸಿದಮೂರ್ಖಳು ನಾನುಮೂರ್ಖರ ದಿನದಂದು ಶುಭಾಶಯ ಕೋರಿಬಿಡಿ ಎನಗೊಂದು. ರೇಖಾಪ್ರಕಾಶ್

ರೇಖಾಪ್ರಕಾಶ್ ಅವರ ಕವಿತೆ “ಹೆಣ್ಣಿನ ಅಂತರಂಗ” Read Post »

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಮುಂಬೈ ಅವರ ಕವಿತೆ “ಎಂದೊಹಾಡಿದ ಭಾವಕೆ”

ಕಾವ್ಯಸಂಗಾತಿ ಲಲಿತಾ ಪ್ರಭು ಅಂಗಡಿ ಮುಂಬೈ “ಎಂದೊಹಾಡಿದ ಭಾವಕೆ” ಎಂದೊ ಹಾಡಿದ ಭಾವಕೆಇಂದು ತಾಳತೀಡಿಮಧುರ ನೆನಪು ಕಾಡಿದೆ ಹೃದಯ ತಂತಿ ಮೀಟಿದೆಸ್ವರ ಭಾವನೆಗಳಿಗೆಆಲಾಪ ಹಚ್ಚಿ ಗುನುಗುತಿದೆ ಕಟ್ಟಿ ಹಾಕಿದ ಬಿಗಿಗಂಟುಸಡಿಲಿಸಿ ಸನಿಹ ಬಂದುಸರಿಗಮಪದ ಸವಿಜೇನಿಂದ  ಸನಿದಪ ಹೇಳುತಿದೆಭಾವನೆಗಳಿಗೆ ಬಣ್ಣ ಹಚ್ಚಿ ಹಾಡಬಯಸಿದೆ ರೆಕ್ಕೆ ಬಿಚ್ಚಿ ಹಾರಾಡಬಯಸಿದನೆನಪಿನ ದೋಣಿಯ ಆ ಹಾಡುಕಾಡಿ ಕಾಡಿ ಕುಣಿಯುತಿದೆಗೆಜ್ಜೆಯ ಗುಂಗಿಗೆತಾಳ ಹಾಕಿ ತಕದಿಮಿ ಹೇಳುತಿದೆಹಾಡಿ ಆಲಾಡಿತೇಲಾಡಬಯಸಿದೆ ಕೊಚ್ಚಿ ಹೋಗುವ ಆಸೆಗಳಿಗೆಆಸರೆಯಾಗಿ  ಕೈಹಿಡಿದುದಿಕ್ಸೂಚಿಯಂತೆ ಬಾಳ ಬಳ್ಳಿಬೆಳಗುವ ಉತ್ಸಾಹಕೆಮತ್ತೆ ಚಿಗುರಿ ಚೈತ್ರಗೀತೆ ಹಾಡಿದೆ ಒಣಗಿದರೂ ಕೊಸರಿ ಉಸುರಿಸುವಜೀವನೋತ್ಸಹಕೆ ಪಲ್ಲವಿ ಬರೆದುಕತೆಯ ಬದುಕಿಗೆಸುಂಗಧ ತೀಡಿಕಾವ್ಯ ಲಹರಿಯಾಗಿಹಾಡಾಗಿ ಒಡಮೂಡಿದೆ. ಲಲಿತಾ ಪ್ರಭು ಅಂಗಡಿ.

ಲಲಿತಾ ಪ್ರಭು ಅಂಗಡಿ ಮುಂಬೈ ಅವರ ಕವಿತೆ “ಎಂದೊಹಾಡಿದ ಭಾವಕೆ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ನ್ಯಾಯದ ಕೂಗು”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನ್ಯಾಯದ ಕೂಗು“ ಬಡಿಯೋಣ ನ್ಯಾಯದ ಕದಮೌನದ ಗೋಡೆ ಕುಸಿಯುವ ತನಕಮುಖವಾಡ ಧರಿಸಿದ ದ್ವಂದ್ವ ನೀತಿಗಳನಿಜಮುಖ ಬೆಳಕಿಗೆ ಬರುವ ತನಕ,! ಎಚ್ಚೆದ್ದು ಕೊಳ್ಳೋಣ….ನಿದ್ರಿಸಿದ ಮನಸ್ಸುಗಳನ್ನೆಬ್ಬಿಸಿಕಪಟದ ನೆರಳಲ್ಲಿ ಬೆಳೆದಶಾಂತಿ ಕದಿಯುವ ನೆರಳನ್ನು ಓಡಿಸಿ,! ಹೋರಾಡೋಣ….ಸುಳ್ಳಿನ ಬೀಜ ಬಿತ್ತುವ ಕಣಿವೆಗಳಲ್ಲಿದ್ವೇಷದ ಬೆಳೆ ಬೆಳೆಸುವನೀಚ ಶಕ್ತಿಗಳ ವಿರುದ್ಧ ಸಟೆದು ನಿಂತು,! ಧ್ವನಿಯಾಗೋಣ….ನಿಶ್ಯಬ್ದದ ಕಣ್ಣೀರು ಕೇಳುವ ಧ್ವನಿನ್ಯಾಯ ನೀತಿಯ ಹಾದಿಯಲಿ ನಡೆಯುವಶೋಷಿತ ಜನರ ನಂಬಿಕೆಯ ಪರವಿದ್ದು,! ಚಿಂತಿಸಿ ಬಾಳೋಣ…ಸತ್ಯದ ದೀಪ ಹಚ್ಚಿ ಹೆಜ್ಜೆ ಹಾಕಿಮೋಸದ ಜಾಲ ಹರಡುವ ಕೈಗಳನ್ನುಜ್ಞಾನದ ಬೆಳಕಿನಲ್ಲಿ ಕರಗಿಸಿ‌ ಬಿಡಲು.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ”ನ್ಯಾಯದ ಕೂಗು” Read Post »

ಕಾವ್ಯಯಾನ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್ ಅವಳ ಮಡಿಲಲಿ ಮಲಗಿ ನೋವುಗಳ ಮರೆಯುವ ಹಂಬಲಅವಳ ಕಂಗಳಲಿ ನಕ್ಷತ್ರವಾಗಿ  ಹೊಳೆಯುವ ಹಂಬಲ ಮನದಲಿ ಅಡಗಿವೆ  ಹೇಳಲಾಗದ ನೂರು ಮಾತುಗಳುಅವಳ ಭಾವನೆಗಳಿಗೆ ರಾಗವಾಗಿ ಬೆರೆಯುವ ಹಂಬಲ ತಿಳಿ ಕೊಳಕೆ ಕಲ್ಲೆಸೆಯುವ ಜನಗಳೇ ಬಹಳ ಜಗದಲಿಅವಳ ಎದೆ ಕಡಲ ಅಲೆಗಳ ತಳಮಳ ಅರಿಯುವ ಹಂಬಲ  ಮದಿರೆ ತುಂಬಿದ  ಬಣ್ಣದ ಹೂಜಿಗಳು ಕರೆಯುತಿವೆ ಇಂದುಅವಳ  ಒಲವ ಕೈಯ ಅಮೃತ ತುತ್ತು ಪಡೆಯುವ ಹಂಬಲ ಮುಖವಾಡ ಧಾರಿಗಳ ಮಧ್ಯೆ  ಬಾಳು ಸಾಗಿದೆ ನೋಡುಅವಳ ಬದುಕಲಿ ಶಾಂತ ಪ್ರಭೆಯಾಗಿ ಉಳಿಯುವ ಹಂಬಲ ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

You cannot copy content of this page

Scroll to Top