ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು”

ಕಾವ್ಯ ಸಂಗಾತಿ ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು” ಯುಗಗಳು ಉರುಳಿದರೂ ಮರೆಯದ ಆಸರೆ,ಅಮ್ಮನ ಸೀರೆಯ ಆ ಒಂದು ಸೆರಗು;ಅದರೊಳು ಅಡಗಿತ್ತು ಜಗದೊಳಗಿನ ಮಮತೆ,ಕಣ್ಣೀರ ಒರೆಸುತ್ತಿದ್ದ ದಿವ್ಯ ಬೆರಗು. ಬಿಸಿ ಪಾತ್ರೆಗೆ ಹಿಡಿಕೆಯಾಗಿದ್ದ ಆ ತುದಿ,ಮಗುವಿನ ಮುಖದ ಮಸಿ ತೊಳೆಯುವ ನದಿ;ನಾಚಿಕೆಗೆ ಅಡಗುದಾಣ, ಚಳಿಗೆ ಹೊದಿಕೆ,ಅಮ್ಮನ ಸೆರಗೊಂದೇ ಬಾಳಿನ ಅಸ್ತಿತ್ವದ ನಂಬಿಕೆ. ಗಂಟು ಹಾಕಿದರೆ ಕಳೆದುದ ಕರುಣಿಸುವ ಮಾಯೆ,ಕಾಸು ಬಚ್ಚಿಟ್ಟ ಚಲಿಸುವ ಬ್ಯಾಂಕಿನ ಛಾಯೆ;ಸುಡುವ ಕಣ್ಣಿಗೆ ಉಸಿರಿನ ಬಿಸಿ ಒತ್ತುವ ಸಾಂತ್ವನ,ಆ ಸೆರಗಿನ ನೆರಳಲ್ಲೇ ಅರಳಿತ್ತು ಧನ್ಯ ಬಾಲ್ಯದ ಜಗತ್ತಿನ ಪಯಣ. ಆದರೆ… ಕಾಲದ ಚಕ್ರ ಉರುಳಿದೆ ಇಂದು,ಉಡುಗೆ ತೊಡುಗೆಯ ರೂಪ ಬದಲಾಗಿದೆ ಅಂದು;ಜೀನ್ಸಿನ ಜೇಬಲಿ ಜಾಗವಿಲ್ಲ ಆ ಸೆರಗಿಗೆ,ಆಧುನಿಕತೆಯ ಓಟದಲಿ ಕಳೆದುಹೋಯಿತೇ ಆ ನೆರಳಿಗೆ? ಬಟ್ಟೆಯ ಸೆರಗು ಇಲ್ಲದಿರಬಹುದು ಜೀನ್ಸಿನ ಅಂಚಿನಲ್ಲಿ,ಆದರೆ ಅಮ್ಮನ ಮಮತೆ ಎಂದೂ ಕಮ್ಮಿಯಾಗದು ನೆನಪಿನಲ್ಲಿ;ಸೆರಗಿನ ಗಂಟಿನ ಹಣವೀಗ ಬ್ಯಾಂಕಿನ ಖಾತೆಯಾಗಿದೆ,ಕಣ್ಣೀರ ಒರೆಸುತ್ತಿದ್ದ ಕೈಗಳು ಈಗ ಹೆಗಲಿಗೆ ಹೆಗಲು ನೀಡಿದೆ. ರೂಪ ಬದಲಾದರೂ ಕರುಳಿನ ಕುಡಿ ಪ್ರೀತಿ ಬದಲಾಗದು,ಅಮ್ಮನ ಅಪ್ಪುಗೆಯ ಬೆಚ್ಚನೆಯ ಆಶ್ರಯ ಎಂದೂ ಮುಗಿಯದು;ಸೀರೆಯ ಸೆರಗಿಗೆ ತಲೆಬಾಗುತ್ತಲೇ ಇಂದಿನ ತಾಯ್ತನವನ್ನೂ ಗೌರವಿಸೋಣ,ಯುಗ ಯಾವುದೇ ಆದರೂ ಅಮ್ಮನ ಪ್ರೀತಿಯೇ ಜಗದ ಶಕ್ತಿ ಎನ್ನೋಣ. ಸುಮಲತಾ ಗಡಿಯಪ್ಪನವರ

ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು” Read Post »

ಕಾವ್ಯಯಾನ

ಡಾ.ಶಶಿಕಾಂತ.ಪಟ್ಟಣ ಪುಣೆ “ಹುಡುಕುತ್ತಿರುವೆ”

ಕಾವ್ಯ ಸಂಗಾತಿ ಡಾ.ಶಶಿಕಾಂತ.ಪಟ್ಟಣ ಪುಣೆ “ಹುಡುಕುತ್ತಿರುವೆ” ಸೂರ್ಯ ಉದಯಿಸುತ್ತಾನೆಈಗ ಕೋಳಿ ಕೂಗುವದಿಲ್ಲ.ಓಡುತ್ತಿದ್ದಾರೆ ಬದುಕಿನ ಬೆನ್ನ ಹತ್ತಿರೈಲು ಬಸ್ ಆಟೋದಲ್ಲಿ ಪಯಣಕಾರ್ಖಾನೆಗೆ ಜನರ ಜಂಗುಳಿ.ಕೈಯಲ್ಲಿ ಮೊಬೈಲ್ ವಾಟ್ಸ್ ಆಪ್ಜನರು ಮುಖ ಕೆಳಗಿಟ್ಟು ಬದುಕುತ್ತಾರೆ.ನಗುವುದೇ ಕಡಿಮೆ .ದುಗುಡು ತಳಮಳ ಆತಂಕ .ದೇಶದಲ್ಲಿ ಬರ ಬಡತನ ‘ಸುದ್ಧಿ ಮಾಧ್ಯಮಗಳ ಅಬ್ಬರ .ದಿನಸಿ ಅಂಗಡಿಯ ಮುಂದೆ ಸಾಲು.ಗುಡಿ ಮಸೀದೆ ಚರ್ಚು ಭಿಕ್ಷುಕರು.ಜಾತ್ರೆ ಹಬ್ಬ ಮೊಹರಮ್ಮಿನ ಕುಣಿತ.ಕಳೆದುಕೊಂಡಿದ್ದೇವೆ ಜೀವ ಜಾಲವಕಾಣುತ್ತಿಲ್ಲ ಸಂತಸ  ನೆಮ್ಮದಿ ದಿನಗಳು.ಹುಡುಕುತ್ತಿರುವೆ ನನ್ನ ನಾನುಹೊಲದ ಗದ್ದೆಯ ಮಧ್ಯೆಅಚ್ಚ ಹಸುರಿನ ಪೈರುಕೆರೆ ತುಂಬಿದ ನೀರು .ಪಕ್ಷಿ ಇಂಚರ ಧ್ವನಿಯ ಕೊರಳು .ಹುಡುಕುತ್ತಿರುವೆ ಹುಡುಕುತ್ತಲೇ ಇರುವೆ ಡಾ.ಶಶಿಕಾಂತ.ಪಟ್ಟಣ ಪುಣೆ

ಡಾ.ಶಶಿಕಾಂತ.ಪಟ್ಟಣ ಪುಣೆ “ಹುಡುಕುತ್ತಿರುವೆ” Read Post »

ಕಾವ್ಯಯಾನ

ಎನ್.ಜಯಚಂದ್ರನ್ ಅವರ ಕವಿತೆ “ಅಂತರ”

ಕಾವ್ಯ ಸಂಗಾತಿ -ಎನ್.ಜಯಚಂದ್ರನ್ “ಅಂತರ” ಒಂದೇ ಊರು, ಒಂದೇ ಗಾಳಿ,ಆದರೂ ಮನಸುಗಳು ದೂರದ ದ್ವೀಪಗಳು. ಮುಖದಲ್ಲಿ ನಗುಗಳ ಹೂವಿದ್ದರೂ,ಒಳಗೆ ನೋವಿನ ಮಳೆ ಸುರಿಯುತ್ತದೆ. ಕೈಗಳು ಕೈ ಹಿಡಿಯುವ ಕಾಲದಲ್ಲಿ,ಹೃದಯಗಳು ಏಕೆ ದೂರವಾಗಿವೆ? ಮಾತುಗಳು ಸಾವಿರ ಹರಿದರೂ,ಅರ್ಥಗಳು ಮಧ್ಯೆ ಕಣ್ಮರೆಯಾಗಿವೆ. ಗೋಡೆಗಳು ಮನೆಗಳಲ್ಲಿ ಮಾತ್ರವಲ್ಲ,ಮನಸ್ಸಿನೊಳಗೂ ಎತ್ತರವಾಗಿವೆ. ಸ್ವಾರ್ಥದ ನೆರಳು ಬೆಳೆದಂತೆ,ಸಂಬಂಧಗಳ ಬೆಳಕು ಮಂಕಾಗಿದೆ. ಒಬ್ಬರ ನೋವು ಮತ್ತೊಬ್ಬರಿಗೆ,ಕೇವಲ ಸುದ್ದಿಯ ಸಾಲಾಗುತ್ತಿದೆ. ಪ್ರೀತಿಯ ನದಿ ಒಣಗಿದ ಜಾಗದಲ್ಲಿ,ಅಹಂಕಾರದ ಮರಳು ಬೀಸುತ್ತಿದೆ. ಆದರೂ ಎಲ್ಲೋ ಒಂದು ಮೂಲೆದಲ್ಲಿ,ಮಾನವೀಯತೆ ಇನ್ನೂ ಉಸಿರಾಡುತ್ತಿದೆ. ಮನಸು ಮನಸಿಗೆ ಸೇರುವ ದಿನದಲ್ಲಿ,ಈ ಭೀಕರ ಅಂತರ ಕರಗಿಹೋಗುತ್ತದೆ.  ಎನ್.ಜಯಚಂದ್ರನ್ 

ಎನ್.ಜಯಚಂದ್ರನ್ ಅವರ ಕವಿತೆ “ಅಂತರ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ಕಂಗಳ ಕಾಟ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು. ಕಂಗಳ ಕಾಟ ಗೆಳತಿ……ಕಥೆಯ ನೂರುಬಯಕೆಗಳ ಬೇಡಲು ಸಾವಿರಅದೇನೊ ಕಾಡಿತು ಸವಿಯ ಸಾರಹೊಳೆವ ನಿನ್ನಯ ಕಂಗಳ ಕಾಟದಲಿಸೋತು ಬೆರಗಿದೆನು, ನಿನ್ನ ದರ್ಶನಕ್ಕೆ,! ಗೆಳತಿ…ವ್ಯಥೆಯು ನೂರುಕಥೆಯ ಕವನ ಬರೆಯಲುಪ್ರಣಯದಾಟ ಪ್ರೀತಿ ಬೆಸೆದುಕಪ್ಪು ಪರದೆಯೊಳಗೆ ಮಿಟುಕಿದಕಂಗಳ ನೋಟವು ನನ್ನ ಸೆಳೆಯಿತು.!! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ”ಕಂಗಳ ಕಾಟ” Read Post »

ಕಾವ್ಯಯಾನ

ಅಶ್ಫಾಕ್ ಪೀರಜಾದೆ ಅವರ ಗಜಲ್

ಕಾವ್ಯ ಸಂಗಾತಿ ಅಶ್ಫಾಕ್ ಪೀರಜಾದೆ ಗಜಲ್ ಕಲರವರದ ನಂತರ ಕಲಹ ಮತ್ತೆ ಕಾಡಿದೆಎದೆಯ ಒಳಗಿನ ಗಾಯ ಮತ್ತೆ ಚಿಗುರಿದೆ ನೋವ ತೆರೆತೆರೆಯಾಗಿ ಸಾಗರ ಸೇರುತಿರೆನೀರಿನಲಿ ಮೀನ ಹೆಜ್ಜೆ ಮತ್ತೆ ಮೂಡಿದೆ ತಾವರೆಗಳು ಅಪರಾತ್ರಿ ಬಿಕ್ಕಳಿಸುತಿವೆತಂಗಾಳಿ ನಿಂತು ಬೆಂಕಿ ಮತ್ತೆ ಸುರಿದಿದೆ ಬರೆದುಕೊಂಡ ಬಂದ ಹಣೆಬರ ಇದುತಪ್ಪಿಸಬೇಕೆಂದ್ರೂ ತಪ್ಪದೆ ಮತ್ತೆ ಬರುತಿದೆ ದೂರದಿ ಶಾಂತವಾಗಿ ಕಾಣುವ ಸಮುದ್ರಕುದಿಯುವ ಲಾವಾರಸ ಮತ್ತೆ ತುಂಬಿದೆ ಕಲ್ಲಿಗೆ ಹೃದಯವಲ್ಲ ಕಣ್ಣು ಬಂದರೆ ಸಾಕುಅಪೀಯ ಪಾಡು ಹಾಡಾಗಿ ಮತ್ತೆ ಬಂದಿದೆ ಅಶ್ಫಾಕ್ ಪೀರಜಾದೆ.

ಅಶ್ಫಾಕ್ ಪೀರಜಾದೆ ಅವರ ಗಜಲ್ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಒಮ್ಮೆಬರುವೆಯಾ?”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಒಮ್ಮೆಬರುವೆಯಾ?” ನನ್ನ ಪ್ರಾಣದ ಇನಿಯಎಲ್ಲಿರುವೆ  ಬರುವೆಯಾಬಿಳಿ ಗೋಡೆಯ ನಡುವೆ ನಾನುನೆರಳಾಗಿ ಕರಗುತ್ತಿರುವೆ ಒಮ್ಮೆ ನನ್ನ ಕಣ್ಣೊಳಗೆಚಂದ್ರ ಬೆಳಕು ಹುಡುಕಿದವನು ನೀನುಇಂದು ಒಣಗಿದ ಹೂವಿನಂತೆನನ್ನನ್ನು ದಾರಿಯಂಚೆ ಬಿಟ್ಟೆ ಕೂದಲು ಉದುರಿದ ರಾತ್ರಿಕನ್ನಡಿಯೊಳಗೆ ನಿಂತಿದ್ದು ನಾನು ಅಲ್ಲಬೆಂಕಿಗೆ ಬಿದ್ದ ಕನಸೊಂದುನಿಧಾನವಾಗಿ ಬೂದಿಯಾಗುತ್ತಿತ್ತು ಔಷಧದ ವಾಸನೆಯ ನಡುವೆನನ್ನ ಉಸಿರು ಮುಳ್ಳಿನ ಹಾಸಿಗೆಸಾವಿಗಿಂತ ಹೆಚ್ಚು ಕಾಡಿದ್ದುನೀ ಮೌನವಾಗಿ ದೂರಾದ ಹೆಜ್ಜೆ ನನ್ನ ಎದೆಯೊಳಗೆ ಈಗರಕ್ತವಲ್ಲ ವಿರಹ ಹರಿಯುತ್ತಿದೆಕಣ್ಣೀರಲ್ಲ ಇದುಒಡೆದ ಹೃದಯ ಕರಗಿದ ಶಬ್ದ ಒಮ್ಮೆ ಅಪ್ಸರೆ ಎಂದ ತುಟಿಗಳುಇಂದು ನನ್ನ ಹೆಸರನ್ನೇ ಮರೆತಿವೆನಾನು ಒಣ ಮರದ ನೆರಳುನೀ ಬೇಸತ್ತ ಹಕ್ಕಿಯ ಹಾರಾಟ ಕಿಟಕಿಯಾಚೆ ಚಂದ್ರ ಸುಡುತ್ತಾನೆಒಳಗೇ ನೆನಪುಗಳು ಹೊತ್ತಿ ಉರಿಯುತ್ತವೆನೀ ಬಾರದ ಪ್ರತಿರಾತ್ರಿನನ್ನ ಜೀವ ಸ್ವಲ್ಪ ಸ್ವಲ್ಪ ಸಾಯುತ್ತದೆ ನನ್ನ ಪ್ರಾಣದ ಇನಿಯಒಮ್ಮೆ ಬರುವೆಯಾಕೊನೆಯ ಉಸಿರ ತುದಿಯಲ್ಲಿನಿನ್ನ ಹೆಸರೇ ಇನ್ನೂ ತೂಗುತ್ತಿದೆ ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಒಮ್ಮೆಬರುವೆಯಾ?” Read Post »

ಕಾವ್ಯಯಾನ, ಗಝಲ್

ಕಲ್ಪನಾ ಎಸ್ ಪಾಟೀಲ ಅವರ ಗಜಲ್

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ ಗಜಲ್ ಮುತ್ತಿನಂತೆ ಮಿನುಗುವ ನಗು ನಿನ್ನದು ಗೆಳೆಯಮನದಾಳದಿ ಮೂಡಿದ ಸೌಂದರ್ಯ ನೀ ಗೆಳೆಯ ಸಾಗರದ ಗರ್ಭದಿ ಹುಟ್ಟಿದ ಅಮೂಲ್ಯ ರತ್ನ ನೀನುನನ್ನ ಹೃದಯದೊಳಗಿನ ಪ್ರೀತಿಯಂತೆ ಶುದ್ಧ ನೀನು ಕನಸಿನ ಕಿರಣದಲ್ಲಿ ಹೊಳೆಯುವ ಮುತ್ತಿನ ಹೊಳೆನಿನ್ನ ಕಂಗಳಲ್ಲಿ ಕಾಣುವ ಪ್ರೀತಿಯ ಮುತ್ತಿನ ಮಳೆ ನಿಶ್ಶಬ್ದದ ಮಾತುಗಳಲ್ಲಿ ಮೂಡುವ ಸೊಗಸಿದುಮುತ್ತಿನ ಲೆಕ್ಕ ಬಾಕಿ ಇಟ್ಟಿಹುದೇನು ನಿನ್ನ ಮನಸದು ಜೀವನ ಸಾಗರದಿ ನೀನೇ ನನ್ನ ಮೊದಲ ಮುತ್ತುನಿನ್ನ ಜೊತೆಗಿದ್ದರದೆ ಕಾವ್ಯಧರೆಗೆ ಸತ್ಯ ಸುಖದ ಹೊತ್ತು ಕಲ್ಪನಾ ಎಸ್ ಪಾಟೀಲಕಾವ್ಯಧರೆ

ಕಲ್ಪನಾ ಎಸ್ ಪಾಟೀಲ ಅವರ ಗಜಲ್ Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ “ಸಂತೃಪ್ತಿ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಸಂತೃಪ್ತಿ” ಅರವತ್ತೆಪ್ಪತ್ತರ ಅಜ್ಜಿತಲೆಮೇಲೆ ಬಿಳಿ ಹೆರಳುಬಾಯಲ್ಲಿ ಹಳದಿ ಹಲ್ಲುತುಟಿಯಂಚಿನಿಂದ ಸೋರುವ ಮೆಲ್ಲುಈ ಕಿವಿಯಿಂದ ಆ ಕಿವಿಯ ತನಕ ನಗು ನಗುವ  ಸೆಲೆ ಬಂದ ವಿದೇಶಿ ಯಾತ್ರಿಕನಿಗೆ ಕೇಳುವಳು ಮಾರ್ಗದರ್ಶಿಯಾಗಿಹಲೋ ಸರ್ ಹೌ ಡು ಯು ಡುಮತ್ತು ವಾಟ್ ಕ್ಯಾನ್ ಐ ಡು! ನಗುತ ಹೇಳುವಳು ನಮಗೆಇದು ನನ್ನ ದಿನ ನಿತ್ಯದ ಕಾಯ!ಯಾವ ಗೀತೆಯೂ ಬೇಡ ನನಗೆಯಾವ ಭೂಲೋಕದೈಸಿರಿಯೂ ಬೇಡದಿನ ಪೂರ್ತಿ ಹೃದಯ ತಣಿಯುವ ಈ ದುಡಿಮೆಯೇ ಸಾಕು ವಿರಾಮದಲ್ಲಿ ನನ್ನ ಐಚ್ಛಿಕದ ತಿನಿಸು ಬೇಕುಕಂಡವರೊಡನೆ ಮನ ಬಿಚ್ಚಿ ಮಾತನಾಡ ಬೇಕು. ರಾತ್ರಿ ಮಲಗುವ ಸಮಯಮೇಲಕ್ಕೆ ಹೋಗಿರುವ ಗಂಡನೆಲಕ್ಕಿಳಿದು ತನ್ನಮನದಾಳ ತಣಿಸುವ ಸಮಯ. ದೂರದಲ್ಲಿಯ ಮಕ್ಕಳುಜೀವಿಸಲಿ ಅವರದ್ದೇ ಜೀವನಅವರವರಿಗೆನನಗ್ಯಾಕೆ ಅವರ ಚಿಂತೆ.   ಬಂದಾಗ ಮೊಮ್ಮಕ್ಕಳು ತಾಪ್ರೀತಿ ಹರಿಬಿಡುವ ಸಮಯಬೆಳದಿಂಗಳು ಚೆಲ್ಲಾಡುವ ಸಮಯಪಾಟಿ ಪಾಟಿ ಎಂದು ಮುದ್ದಾಡುವ ಸಮಯ ಇಂದು ಇಂದಿಗೆನಾಳೆ ನಾಳೆಗೆಕಲಿಯಲಿಕ್ಕೇನಿಲ್ಲ ಈಕೆಗೆಮುದ್ದುಕ್ಕಿ ಬರುವುದು ಈಕೆಯಜೀವನ ಸಂಗೀತಕ್ಕೆ,ಜೀವನ ಪ್ರೀತಿಗೆ ,ಈಕೆಯ ಜೀವನ ಛಾತಿಗೆ.   ಹಾರೈಕೆಯಿಷ್ಟೇಇಂಥ ಆತ್ಮೋನ್ನತಿ ನಮ್ಮೆಲ್ಲರಿಗೂ  ಸಿಗಲೆಂದು ,ಅವಳ ಹೃದಯ ಪೂರ್ವಕ ನಗುನಮಗೂ ಬರಲೆಂದು!! ಕರುಣಿಸಲಿ ಆತ ಸದ್ಗತಿ ಈಕೆಗೆಅವಳದ್ದೇ ದಿನದಂದುಅವಳದ್ದೇ ಬಯಕೆಯಂತೆ ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ “ಸಂತೃಪ್ತಿ” Read Post »

ಕಾವ್ಯಯಾನ

ಡಾ.ದಾನಮ್ಮ ಝಳಕಿ ಅವರ ಕವಿತೆ “ಬದುಕು”

ಕಾವ್ಯ ಸಂಗಾತಿ ಡಾ.ದಾನಮ್ಮ ಝಳಕಿ “ಬದುಕು” ಬದುಕು…ಗಾಳಿಗೆ ತೂಗುವ ದೀಪವಾದರೂಭರವಸೆಯ ಬೆಳಕು. ಬದುಕು…ಮುರಿದ ಕನಸುಗಳ ಮಣ್ಣಿನೊಳಗೆಮತ್ತೆ ಮೊಳಕೆಯೊಡೆಯುವ ಭರವಸೆಯ ಬೀಜ. ಬದುಕು…ಒಮ್ಮೆ ಕಣ್ಣೀರಿನ ನದಿ,ಮತ್ತೊಮ್ಮೆ ನಗುವಿನ ಸಮುದ್ರ.ಆದರೂ ಎರಡನ್ನೂ ದಾಟಿ ಸಾಗುವಮನದ ಹಠದ ನೌಕೆ. ಬದುಕು…ತಾಯಿಯ ಮಮತೆಯ ಮೃದುವಾದ ಸ್ಪರ್ಶ,ತಂದೆಯ ಬೆವರಿನ ಉಪ್ಪಿನ ಸತ್ಯ.ಸ್ನೇಹದ ನೆರಳಲ್ಲಿ ಅರಳುವ ನಗು,ಪ್ರೀತಿಯ ಮೌನದಲ್ಲಿ ಹುಟ್ಟುವ ಸ್ವರ್ಗ. ಬದುಕು…ಸಾವಿರ ಬಾರಿ ಸೋತರೂಮತ್ತೆ ಎದ್ದು ನಡೆಯುವ ಹೆಜ್ಜೆಯ ಧೈರ್ಯ.ಕತ್ತಲ ರಾತ್ರಿ ಎಷ್ಟು ದಟ್ಟವಾದರೂಬೆಳಗಿನ ಸೂರ್ಯ ಬರುವನೆಂಬ ನಂಬಿಕೆ. ಬದುಕು…ಹೂವಿನಷ್ಟು ಮೃದುವಾದರೂಕಲ್ಲಿನಷ್ಟು ಕಠಿಣ.ಒಮ್ಮೆ ಗಾಯ ಕೊಡುವುದು,ಮತ್ತೊಮ್ಮೆ ಅದೇ ಗಾಯಕ್ಕೆ ಮದ್ದು ಆಗುವುದು. ಬದುಕು…ಉಸಿರು ಇರುವವರೆಗಿನ ಪ್ರಯಾಣವಲ್ಲ,ನಾವು ಹೋದ ಮೇಲೂಬೇರೊಬ್ಬರ ಹೃದಯದಲ್ಲಿ ಉಳಿಯುವಒಂದು ಒಳ್ಳೆಯ ನೆನಪಿನ ಹೆಸರು.ಡಾ. ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಅವರ ಕವಿತೆ “ಬದುಕು” Read Post »

ಕಾವ್ಯಯಾನ

ನಿರಂಜನ ನಾಯಕ ಅವರ ಕವಿತೆ “ನಗರ ಜಾಗರಣೆ”

ಕಾವ್ಯ ಸಂಗಾತಿ ನಿರಂಜನ ನಾಯಕ “ನಗರ ಜಾಗರಣೆ” ನಗರ ಬೆಳೆಯುತಲಿದೆಉಕ್ಕಿ ಹರಿದ ಮೋರಿಯಂತೆ,ಸಿಕ್ಕ ಸಂದುಗಳಲಿ ಜಾರುತಾದುರ್ನಾತದೊಂದಿಗೆಜಾಗರಣೆ ಖಾತ್ರಿಯಾಗಿ! ಮುಚ್ಚದ ಕಣ್ಣುಗಳೆದುರುಮೆಚ್ಚುಗೆಯಾಗದ ಮುಖಗಳು;ಮನದ ಖಗ-ಮಿಗಗಳುಮಾಯಾಮೃಗಗಳಂತೆಮರೆಯಾಗುತಿವೆ. ಕಾಲು ಚಾಚಿಬಿದ್ದಿಹ ರಸ್ತೆಗಳಿಗೆತಡೆಒಡ್ಡುವ ಗೋಡೆಗಳು,ಬಣ್ಣ ಮಾಸುತ್ತಾಅಪರಿಚಿತವಾಗುತಿವೆ. ಇಕ್ಕೆಲದ ಅಂಗಡಿಗಳಎಗ್ಗಿಲ್ಲದ ವ್ಯಾಪಾರ,ಕುರುಡನ ತಟ್ಟೆಯಮೂರು ಕಾಸುಗಳನುಅಣಕಿಸುತಿದೆ! ನಿರಂಜನ ನಾಯಕ

ನಿರಂಜನ ನಾಯಕ ಅವರ ಕವಿತೆ “ನಗರ ಜಾಗರಣೆ” Read Post »

You cannot copy content of this page

Scroll to Top