ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಸಂಬಂಧಗಳ ಅರಿವು” ವಚನಚಿಂತನೆ, ಪೂರ್ಣಿಮಾ ಮಹೇಶ ಮುತ್ನಾಳ ಅವರಿಂದ

ವಚನ ಸಂಗಾತಿ ಪೂರ್ಣಿಮಾ ಮಹೇಶ ಮುತ್ನಾಳ “ಸಂಬಂಧಗಳ ಅರಿವು” ವಚನಚಿಂತನೆ, ನಂಬಿ ಬಂದವರೊಡನೆ ನಮ್ಮ ನಡೆ ಹೇಗಿರಬೇಕು? ಅಂತ ಒಂದು ಪ್ರಶ್ನೆ ಬಂದರೆ ಅದಕ್ಕೆ…… ಉತ್ತರವನ್ನು ಹುಡುಕುವ ಪ್ರಯತ್ನ ಯಾವ ರೀತಿ ಮಾಡಬಹುದು….. ಅಂತ ಅಕ್ಕನ ವಚನವೊಂದರಿಂದ ತಿಳಿಯಬಹುದು.ನಮ್ಮ ಜೀವನದಲ್ಲಿ ಅನೇಕರು ನಮ್ಮನ್ನು ನಂಬಿ, ಪ್ರೀತಿಯಿಂದ ಅಥವಾ ಆಸರೆಯನ್ನರಸಿ ಬರುತ್ತಾರೆ. ಆದರೆ ಅವರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು, ಅವರ ನಂಬಿಕೆಗೆ ಹೇಗೆ ನ್ಯಾಯ ಒದಗಿಸಬೇಕು ಎಂಬ ಪ್ರಶ್ನೆಗೆ ಉತ್ತರವಾಗಿ ಅಕ್ಕಮಹಾದೇವಿಯವರ ಈ ವಚನ ನಮಗೆ ಮಾರ್ಗದರ್ಶನ ನೀಡುತ್ತದೆ.“ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ,ಮನ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ!ಅರಿವು ನಿಮ್ಮಲ್ಲಿ ಸ್ಥಯವಾದ ಬಳಿಕ ನಾನಾರನರಿವೆ!ಚನ್ನಮಲ್ಲಿಕಾರ್ಜುನಾ ನಿಮ್ಮಲ್ಲಿ ನೀವಾಗಿ ನಿಮ್ಮಿಂದ ನಿಮ್ಮ ಮರೆದೆನಯ್ಯ.”ಈ ವಚನವು ಕೇವಲ ದೇವರಿಗಷ್ಟೇ ಸೀಮಿತವಾದ ಆಧ್ಯಾತ್ಮಿಕ ಅನುಭವವಲ್ಲ. ಇದನ್ನು ನಮ್ಮ ದೈನಂದಿನ ಲೌಕಿಕ ಜೀವನಕ್ಕೆ ಮತ್ತು ನಮ್ಮನ್ನು ನಂಬಿ ಬಂದ ಜನರೊಂದಿಗಿನ ಸಂಬಂಧಕ್ಕೆ ಅನ್ವಯಿಸಿಕೊಂಡಾಗ ಹಲವು ಮುಖ್ಯವಾದ ಜೀವನ ಮೌಲ್ಯಗಳು ದೊರೆಯುತ್ತವೆ.ಅವು ಹೇಗೆಂದರೆ…೧. ನಿಸ್ವಾರ್ಥ ಸೇವೆಯ ಬಗ್ಗೆ ಹೇಳಲಾಗಿದೆ.ಅಂದರೆ..ವಚನದಲ್ಲಿ “ತನು ನಿಮ್ಮ ರೂಪಾದ ಬಳಿಕ” ಎನ್ನಲಾಗಿದೆ. ಅಂದರೆ ಶರೀರವು ಪರಮಾತ್ಮನ ಇಚ್ಛೆಯಂತೆ ಪವಿತ್ರವಾದಾಗ, ಮಾಡುವ ಪ್ರತಿಯೊಂದು ಕಾಯಕವೂ ಪೂಜೆಯಾಗುತ್ತದೆ. ನಮ್ಮನ್ನು ನಂಬಿ ಬಂದ ಕುಟುಂಬದವರು, ಮಿತ್ರರು ಅಥವಾ ಆಶ್ರಿತರಿಗೆ ನಾವು ಮಾಡುವ ಸಹಾಯದಲ್ಲಿ ಯಾವುದೇ ಸ್ವಾರ್ಥವಿರಬಾರದು. “ನಾನು ಅವರಿಗೆ ಸಹಾಯ ಮಾಡುತ್ತಿದ್ದೇನೆ” ಎಂಬ ಅಹಂಕಾರವನ್ನು ತೊರೆದು, ಪ್ರೀತಿಯಿಂದ ನಡೆದುಕೊಳ್ಳುವುದೇ ನಿಜವಾದ ಧರ್ಮ.ಇದು ನಮ್ಮನ್ನು ನಂಬಿ ಬಂದವರಿಗೆ ನಾವು ಕೊಡುವ ಗೌರವ.೨. ಸಮಾನತೆಯ ಭಾವವನ್ನು ಹೇಳಲಾಗಿದೆ.. ಅಂದ್ರೆ“ಮನ ನಿಮ್ಮ ರೂಪಾದ ಬಳಿಕ” ಎಂದರೆ ಮನಸ್ಸಿನಲ್ಲಿ ದ್ವೇಷ, ಸ್ವಾರ್ಥ, ಮೇಲು-ಕೀಳೆಂಬ ಭೇದಭಾವಗಳಿಲ್ಲದಿರುವುದು. ಭಾರತೀಯ ಸನಾತನ ಚಿಂತನೆಯಲ್ಲೂ ಇದನ್ನೇ ಉಲ್ಲೇಖಿಸಲಾಗಿದೆ.ಹೇಗೆಂದರೆ ಈ ಶ್ಲೋಕದ ಮೂಲಕ ಅದನ್ನು ತಿಳಿಯಬಹುದು.“”ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ ।ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ॥””ಅಂದರೆ..”ಇವನು ನನ್ನವನು, ಅವನು ಬೇರೆಯವನು” ಎಂಬ ಸಣ್ಣತನದ ಯೋಚನೆ ಕಿರಿದಾದ ಮನಸ್ಸಿನವರಿಗೆ ಇರುತ್ತದೆ. ವಿಶಾಲ ಮನಸ್ಸಿನ ಉದಾರ ಗುಣದವರಿಗೆ ಇಡೀ ಜಗತ್ತೇ ಒಂದು ಕುಟುಂಬದಂತೆ ಕಾಣುತ್ತದೆ.ಅಕ್ಕಮಹಾದೇವಿ ಹೇಳುವಂತೆ ನಮ್ಮನ್ನು ಆಶ್ರಯಿಸಿ ಬಂದವರನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡದೆ, ಅವರಲ್ಲಿರುವ ಭಾವನೆಗಳನ್ನು ಗೌರವಿಸಬೇಕು. ಮನಸ್ಸಿನಲ್ಲಿ ನಿಷ್ಕಲ್ಮಷ ಪ್ರೀತಿ ಇದ್ದಾಗ ಮಾತ್ರ ಮತ್ತೊಬ್ಬರ ಕಷ್ಟ ನಮಗೆ ಅರ್ಥವಾಗುತ್ತದೆ.ಇಲ್ಲವಾದರೆ ಅವರು ಅನುಭವಿಸುವ ನೋವುಗಳು ನಮಗೆ ಅರ್ಥ ಆಗುವುದೇ ಇಲ್ಲ.೩. ಸನ್ಮಾರ್ಗ ಮತ್ತು ಅಭಯದ ಬಗ್ಗೆ ಹೇಳಲಾಗಿದೆ.“ಅರಿವು ನಿಮ್ಮಲ್ಲಿ ಸ್ಥಯವಾದ ಬಳಿಕ” ಎನ್ನುವುದು ಜ್ಞಾನ ಮತ್ತು ವಿವೇಕವನ್ನು ಸೂಚಿಸುತ್ತದೆ. ನಮ್ಮನ್ನು ನಂಬಿ ಬಂದವರಿಗೆ ನಾವು ನೀಡಬೇಕಾದ ಅತಿ ದೊಡ್ಡ ಕೊಡುಗೆ ಎಂದರೆ ಒಳ್ಳೆಯ ದಾರಿ ತೋರಿಸುವುದು ಮತ್ತು ಅಭಯ ನೀಡುವುದು.ಇದನ್ನೂ ಕೂಡ ಒಂದು ಶ್ಲೋಕದ ಮೂಲಕ ತಿಳಿದುಕೊಳ್ಳಬಹುದು.“”ಶರಣಾಗತ ದೀನಾರ್ಥ ಪರಿತ್ರಾಣ ಪರಾಯಣೇ ।ಸರ್ವಸ್ಯಾಪ್ತಿ ಹರೇ ದೇವಿ ನಾರಾಯಣಿ ನಮೋऽಸ್ತು ತೇ ॥””ಅಂದ್ರೆ..ನಮ್ಮನ್ನು ನಂಬಿ, ಆಸರೆಯನ್ನರಸಿ ಬಂದ ದೀನರನ್ನು ಮತ್ತು ಕಷ್ಟದಲ್ಲಿರುವವರನ್ನು ರಕ್ಷಿಸುವುದೇ ಅತ್ಯುನ್ನತ ಕರ್ತವ್ಯ ಎಂದು.ನಮ್ಮನ್ನು ನಂಬಿದವರ ಕಷ್ಟದಲ್ಲಿ ಆಸರೆಯಾಗಿ ನಿಂತು, ಸರಿ-ತಪ್ಪುಗಳ ಅರಿವು ಮೂಡಿಸಿ ಧೈರ್ಯ ತುಂಬುವುದು ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯ ಕರ್ತವ್ಯವಾಗಿದೆ.ಅವರಿಗೆ ಸರಿ ತಪ್ಪುಗಳ ಅರಿವು ಮೂಡಿಸದಿದ್ದರೆ..ಮುಂದೆಯೂ ಅದೇ ತಪ್ಪುಗಳನ್ನು ಮಾಡುವ ಸಂದರ್ಭಗಳನ್ನು ಎದುರಿಸಬಹುದು.೪. ನಿಷ್ಕಲ್ಮಷ ಪ್ರೇಮದ ಬಗ್ಗೆ ತಿಳಿಸಲಾಗಿದೆ .ವಚನದ ಕೊನೆಯಲ್ಲಿ “ನಿಮ್ಮಿಂದ ನಿಮ್ಮ ಮರೆದೆನಯ್ಯ” ಎಂದು ಅಕ್ಕಮಹಾದೇವಿ ಹೇಳುತ್ತಾರೆ. ಅಂದರೆ ‘ತಾನು’ ಎಂಬ ಅಹಂಕಾರ ಕರಗಿಹೋದಾಗ ಮಾತ್ರ ಸಂಬಂಧಗಳಲ್ಲಿ ಪೂರ್ಣತೆ ಸಾಧ್ಯ. ಲೌಕಿಕ ಜೀವನದಲ್ಲೂ ಅಷ್ಟೇ, “ನಾನು ಇಷ್ಟೆಲ್ಲಾ ಮಾಡಿದೆ” ನನ್ನಿಂದಲೇ ಇದೆಲ್ಲ ಸಾಧ್ಯವಾಗಿದ್ದು ಎಂಬ ಅಹಂ ಭಾವನೆ ಬಂದಾಗ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ. ನಮ್ಮನ್ನು ನಂಬಿದವರ ಬಳಿ ಅಹಂಕಾರ ತೋರದೆ, ಸಮರ್ಪಣಾ ಭಾವದಿಂದ ನಡೆದುಕೊಂಡಾಗ ಜೀವನವು ಶಾಂತಿ ಮತ್ತು ಸಂತೋಷದಿಂದ ಕೂಡಿರುತ್ತದೆ.ಕೊನೆಯದಾಗಿ ಹೇಳಬೇಕೆಂದರೆ..ಆಧ್ಯಾತ್ಮ ಎಂದರೆ ಎಲ್ಲವನ್ನೂ ತೊರೆದು ಕಾಡಿಗೆ ಹೋಗುವುದಲ್ಲ; ಲೌಕಿಕ ಜೀವನದಲ್ಲಿದ್ದುಕೊಂಡೇ ನಮ್ಮನ್ನು ನಂಬಿ ಬಂದವರನ್ನು ಪ್ರೀತಿಯಿಂದ, ವಿವೇಕದಿಂದ ಹಾಗೂ ಅಹಂಕಾರವಿಲ್ಲದೆ ನಡೆಸುವುದು. ಅಕ್ಕಮಹಾದೇವಿಯವರ ಈ ವಚನವು ನಮ್ಮ ನಡೆ-ನುಡಿಗಳನ್ನು ಶುದ್ಧವಾಗಿಟ್ಟುಕೊಂಡು, ಎಲ್ಲರನ್ನೂ ಗೌರವದಿಂದ ಕಾಣುವ ದಾರಿಯನ್ನು ತೋರಿಸುತ್ತದೆ. ಪೂರ್ಣಿಮಾ ಮಹೇಶ ಮುತ್ನಾಳ

“ಸಂಬಂಧಗಳ ಅರಿವು” ವಚನಚಿಂತನೆ, ಪೂರ್ಣಿಮಾ ಮಹೇಶ ಮುತ್ನಾಳ ಅವರಿಂದ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬರಿದಾದ ನನ್ನಯ ಬಾಳಿಗೆ ಬಂಗಾರವೇ ನೀನಾದೆ ಸಖಿಕಂಗಾಲಾದ ಭಾವ ಬಳ್ಳಿಗೆ ಇಂಗಾಲವೇ ನೀನಾದೆ ಸಖಿ ನನ್ನೆಲ್ಲ ಕಷ್ಟ ಸುಖಗಳಲ್ಲೂ ಅರ್ಧ ಪಾಲು ನಿನ್ನದೇ ಬಿಡುಉಸಿರಿಗೆ ಹೆಸರಾಗಿರುವ ಆಮ್ಲಜಕನವೇ ನೀನಾದೆ ಸಖಿ ನಾ ನೀ ಯಾರೊಬ್ಬರೂ ಇರದಿದ್ದರೆ ಜೀವನವೇ ನಿಸ್ಸಾರಸಸಾರವಲ್ಲದ ಸಂಸಾರಕೆ ಸಾರಜನಕವೇ ನೀನಾದೆ ಸಖಿ ಜತುನದಿ ಕಾದಿಟ್ಟ ಪೀರುತಿ ರತುನವಿದೆ ಎದೆಯಾಳದಲಿಆಶ್ರು ಗ್ರಂಥಿ ಪ್ರಚೋದಿಸುವ ಗಂಧಕವೇ ನೀನಾದೆ ಸಖಿ ನೀನಿರದೇ ಈ ಮಹಾಂತನ ಬಾಳು ಸಂಪೂರ್ಣವಾಗದುಎದೆ ತಳಮಳಕೆ ತುಕ್ಕು ತಂದ ಕಬ್ಬಿಣವೇ ನೀನಾದೆ ಸಖಿಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಇತರೆ, ಪ್ರಬಂಧ

“ಕರವಸ್ತ್ರದ ಕರಾಮತ್ತು” ಶೈಲಜಾ ಪ್ರಸಾದ್‌ ಅವರ ಲಲಿತ ಪ್ರಬಂಧ

ಪ್ರಬಂಧ ಸಂಗಾತಿ ಶೈಲಜಾ ಪ್ರಸಾದ್‌ “ಕರವಸ್ತ್ರದ ಕರಾಮತ್ತು” ಇದೇನಿದು, ಶೀರ್ಷಿಕೆ ಹೀಗಿದೆ ಅಂತ ಯೋಚಿಸ್ತಿದ್ದೀರ ?! ಲೇಖನ ಓದಿದ ಮೇಲೆ ನಿಮಗೇ ಗೊತ್ತಾಗುತ್ತೆ  ಈ ಮಾತೆಷ್ಟು ಸತ್ಯ ಅಂತ. ಅದರಲ್ಲೂ ಇಂದಿನ   ವಿಷಮ ಪರಿಸ್ಥಿತಿಯಲ್ಲಿ (`ಕರೋನ’ ವ್ಯಾಧಿ/ಕಾಯಿಲೆ ಎಂದು ಉದ್ದೇಶ ಪೂರ್ವಕವಾಗಿಯೇ ಹೇಳಿಲ್ಲ. ಎಲ್ಲೆಲ್ಲೂ ಅದರದ್ದೇ ಆವಾಜ್ ಕೇಳಿ…ಕೇಳಿ…. ಎಲ್ಲರಿಗೂ ಖಂಡಿತಾ ಬೇಸರವಾಗಿರುತ್ತೆ ಅಂತ ಗೊತ್ತು)ಪುಟ್ಟ/ದೊಡ್ಡ ಕರವಸ್ತ್ರವೊಂದು ನಮ್ಮ ದಿನನಿತ್ಯದ ಕೆಲಸ-ಕರ‍್ಯಗಳಲ್ಲಿ ಎಂತಹ ಪ್ರಮುಖ ಪಾತ್ರ ವಹಿಸುತ್ತದೆ ಅಂತ ಗಮನಿಸಿದರೆ ನಿಜಕ್ಕೂ ಆಶ್ಚರ್ಯವೆನಿಸುವುದರಲ್ಲಿ ಅನುಮಾನವೇ ಇಲ್ಲ. `ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಅಂತಾರೆ ಬಲ್ಲವರು. ಹಾಗೇ ಇದು ಚಿಕ್ಕ ವಸ್ತುವಾದರೂ ಇದರ ಕಾರ‍್ಯವ್ಯಾಪ್ತಿ ಬಹಳ ವಿಶಾಲವಾದದ್ದು.ಆದರೆ ಇಂದಿನ ಪೀಳಿಗೆಯ ಮಕ್ಕಳಿಗೆ ಈ ಕರವಸ್ತ್ರದ ಬಗ್ಗೆ , ಅದರ ವ್ಯಾಪಕವಾದ ಬಳಕೆಯ ಬಗ್ಗೆ ತಿಳಿದಿಲ್ಲವೆಂದು ನನ್ನ ಭಾವನೆ. ಜತೆಗೆ ಅವರಿಗೆ ಈ ಬಗ್ಗೆ ಆಸಕ್ತಿಯೂ ಇಲ್ಲವೆನಿಸುತ್ತದೆ. ಅವರಿಗೇನಿದ್ದರೂ `ಯೂಸ್ ಅಂಡ್ ಥ್ರೋ’ ಸಂಸ್ಕೃತಿಯ ಕಾಗದದ ಟಿಷ್ಯೂಗಳಷ್ಟೇ ಪರಿಚಿತ. ಆದರೆ ಇದರಿಂದ ಸುಮ್ಮನೆ ಕಸ, ತ್ಯಾಜ್ಯಗಳು ಹೆಚ್ಚುತ್ತವೆಯೇ ವಿನಃ  ಬೇರೇನೂ ಉಪಯೋಗವಿಲ್ಲ. ಒಂದೆಡೆ ಕಾಗದದ ಬಳಕೆಯನ್ನು ಕಡಿಮೆ ಮಾಡುವಂತೆ ಹೇಳುತ್ತ, ಇನ್ನೊಂದಡೆ ಟಿಷ್ಯುಗಳು, ಬಳಸಿ ಬಿಸಾಡುವ ತಟ್ಟೆ-ಲೋಟಗಳು….. ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ಜೊತೆ ಮಹಿಳೆಯರ ಸ್ಯಾನಿಟರಿ ಪ್ಯಾಡ್ ಮತ್ತು ಮಕ್ಕಳ/ ವೃದ್ಧರ ಡಯಾರ‍್ಗಳೂ  ಸೇರುತ್ತವೆ. ಇವೆಲ್ಲದ್ದಕ್ಕೂ ಪರ‍್ಯಾಯವಾಗಿ ಬಟ್ಟೆ/ ಬೇರೆ ಏನಾದರೊಂದನ್ನು ಬಳಸಬೇಕಾಗಿರುವುದು  ಇಂದಿನ ತುರ್ತುಅಗತ್ಯವಾಗಿದೆ.ಈಗ ನಮ್ಮ ಕಾಲದ (ಅಂದರೆ ೬೦-೭೦ ರ ದಶಕಗಳ ) ಕರವಸ್ತ್ರವೆಂಬ ಬಹೂಪಯೋಗಿ ವಸ್ತುವಿನ ಬಗ್ಗೆ, ಅದರ ಬಹುರೂಪಿ ಕಾರ‍್ಯಗಳನ್ನು  ಅವಲೋಕಿಸಿದರೆ ಅಚ್ಚರಿಯಾಗುತ್ತದೆ.ಈ ಸಂದರ್ಭದಲ್ಲಿ ಕವಿವರ‍್ಯರ ಪದ್ಯವೊಂದು ಅಯಾಚಿತವಾಗಿ ನೆನಪಿಗೆ ಬರುತ್ತದೆ. ಸಾಧಾರಣವಾಗಿ ನಮ್ಮ ಕಾಲದವರಿಗೆಲ್ಲಾ ಇದು ಗೊತ್ತೇ ಇರುತ್ತದೆ.”ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ವಿಭೂತಿಯಾದೆ…..ನೀನಾರಿಗಾದೆಯೋ ಎಲೆ ಮಾನವ…..”ಅನ್ನೋ ರೀತಿ ಈ ಕರವಸ್ತ್ರವು   ಎಲ್ಲಾ  ಕಾಲಕ್ಕೂ, ಸಮಯಕ್ಕೂ ಒದಗಿಬರುತ್ತದೆ.ಮೊದಲಿಗೆ ನಾವು(ಸ್ತ್ರೀ/ಪುರುಷರು) ಆಚೆ ಹೋಗುವಾಗ ಮರೆಯದೆ ಶುಭ್ರವಾಗಿ ಒಗೆದ ಕರವಸ್ತ್ರವನ್ನು ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿದೆ.ನಮಗೆ ಆಗ ಇದರಿಂದ  ಆಗುವ ಅನುಕೂಲತೆಗಳ ಅರಿವಾಗುತ್ತದೆ.ಹೊರಗಡೆ ಹೋದಾಗ ಮುಖ್ಯವಾಗಿ ಮಾಲ್ ಗಳಲ್ಲಿನ ವಾಷ್ರೂಂಗಳನ್ನು  ಬಳಸಿದ ನಂತರ ನಮ್ಮದೇ  ಶುಭ್ರವಾದ  ಕರ‍್ಚೀಫ್ ಅನ್ನು  ಬಳಸಿ ಸಾಮಾಜಿಕ  ಪ್ರಜ್ಞೆಯನ್ನು ಮೆರೆಯಬಹುದಾಗಿದೆ. ಇದರಿಂದ ಕೆಲವರಾದರೂ ಉತ್ತೇಜಿತರಾಗಿ  ತಂತಮ್ಮ ಕರವಸ್ತ್ರಗಳನ್ನು ಉಪಯೋಗಿಸಿದರೆ ಎಷ್ಟೋ ಟಿಷ್ಯೂಗಳ ಉಳಿತಾಯವಾಗಿ ಪರಿಸರಕ್ಕೆ ಉತ್ತಮ ಕೊಡುಗೆ ನಮ್ಮಿಂದ ಆದಂತಾಗುತ್ತದೆ. ವಿಧಿಯಿಲ್ಲದಾಗ ಟಿಷ್ಯೂಗಳನ್ನು ಬಳಸಲು ಅಡ್ಡಿಯೇನಿಲ್ಲವಲ್ಲ.ಇನ್ನು ಮಾರ್ಕ್ಕೆಟ್ಟಿಗೆ ಹೋದಾಗ ಚೀಲವನ್ನು ತೆಗೆದುಕೊಂಡು ಹೋಗಲು ಅಕಸ್ಮಾತ್ ಮರೆತುಹೋಗಿದ್ದರೆ, ಇವು ಆಪತ್ಭಾಂದವನಂತೆ ನೆರವಾಗುತ್ತದೆ. ಸಣ್ಣ ಪುಟ್ಟ ಸಾಮಾನುಗಳನ್ನು/ ತರಕಾರಿಯನ್ನು ಇದರಲ್ಲಿ  ಕಟ್ಟಿಕೊಳ್ಳಬಹುದು.ಬೇಸಿಗೆಯ ಕಾಲದಲ್ಲಿ ಈ ಪುಟ್ಟ  ಕರವಸ್ತ್ರವು ಬೆವರೊರೆಸಿಕೊಳ್ಳಲು  ಅಗತ್ಯವಾಗಿ ಬೇಕೇ ಬೇಕಲ್ಲವೇ? ಈಗಿನ ಪರಿಸ್ಥಿತಿಯಲ್ಲಿ ಕೆಮ್ಮು/ಸೀನು ಬಂದಾಗ ಅವಶ್ಯಕವಾಗಿ ಇರಲೇಬೇಕಾದ ವಸ್ತುವಿದು ಎಂದರೆ ತಪ್ಪಿಲ್ಲ.  ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಎಷ್ಟೋ ಜನರು ಮಾಸ್ಕ್ ಗಳ ಬದಲಿಗೆ ಇದನ್ನೇ ಬಳಸುವುದನ್ನು ಪ್ರತಿನಿತ್ಯ ನಾವು ನೋಡುತ್ತಿದ್ದೇವೆ. ಸ್ವಚ್ಛವಾಗಿ ಒಗೆದ ಕರವಸ್ತ್ರಗಳು ನಿಜಕ್ಕೂ ನಮಗೆ ಅನೇಕ ವಿಧಗಳಲ್ಲಿ ಉಪಯೋಗಕ್ಕೆ ಬರುತ್ತದೆ.`ಅವರವರ ಭಾವಕ್ಕೆ ಅವರವರ ಭಕುತಿಗೆ’ ಅನ್ನೋ ಮಾತಿನಂತೆ ಯಾರಿಗೆ ಹೇಗೆ ಬಳಸಲು ಸ್ಫೂರ್ತಿ ಸಿಗುತ್ತದೆಯೋ ಅದರಂತೆ ಬಳಸಲು ಅಡ್ಡಿಯೇನಿಲ್ಲವಲ್ಲ.! ಮಳೆಗಾಲದಲ್ಲಿ  ಕೊಡೆ ತೆಗೆದುಕೊಂಡು ಹೋಗಲು ಮರೆತರೆ ಆ ತಕ್ಷಣಕ್ಕೆ ನೆರವಿಗೆ ಬರುವುದೇ  ಕರವಸ್ತ್ರಅಲ್ಲವೇ?!ಹೀಗೆ ಬಹುರೂಪಿಯಾದ , ಎಲ್ಲಾ ಕಾಲಕ್ಕೂ/ಸಂದರ್ಭಕ್ಕೂ  ಸಲ್ಲುವ ಮಹಾನ್ ಕರವಸ್ತ್ರಕ್ಕೆ ನಾವು ಕೊಡಬೇಕಾದಷ್ಟು ಮಾನ್ಯತೆಯನ್ನು ನೀಡುತ್ತಿಲ್ಲವೆಂದು ನನ್ನ ಅನಿಸಿಕೆ. ನೀವೇನಂತೀರಾ ?! ಶೈಲಜಾ ಪ್ರಸಾದ್

“ಕರವಸ್ತ್ರದ ಕರಾಮತ್ತು” ಶೈಲಜಾ ಪ್ರಸಾದ್‌ ಅವರ ಲಲಿತ ಪ್ರಬಂಧ Read Post »

ಕಾವ್ಯಯಾನ, ಗಝಲ್

ಜಯಶ್ರೀ ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ ಜಯಶ್ರೀ ಭ.ಭಂಡಾರಿ ಗಜಲ್ ಹುಣ್ಣಿಮೆಯ ಚಂದಿರ ಬಾನಲಿ ಬಂದಿಹನು ಗೆಳೆಯ.ತಣ್ಣನೆಯ ಗಾಳಿಯಲಿ ಅಲೆಗಳ ತಂದಿಹನು ಗೆಳೆಯ. ಸಮುದ್ರದ ಮಧ್ಯದಲಿ ಮೋಹಕ ಬೆಳಕು ಹರಡಿದೆಯಲ್ಲವೇಕೌಮುದಿಯ ಸೊಬಗ‌‌ ಬೀರುತ ನಿಂದಿಹನು ಗೆಳೆಯ ಎತ್ತರದ ಸಾಲಿನಲಿ ಮಿನುಗುವ ದೀಪಗಳು ಕಾಣುತಿವೆ ಉತ್ತರದ ದಿಕ್ಕಿನಲಿ ಮಾರುತ ಕುಂದಿಹನು ಗೆಳೆಯ. ಒಟ್ಟಾಗಿ ಹೆಜ್ಜೆಗಳ ಸೇರಿಸುತ ಮೆಟ್ಟಿಲುಗಳ ಏರೋಣ ಪಟ್ಟಾಗಿ ಗೆಜ್ಜೆಯ ನಾದದಲಿ ಮಿಂದಿಹನು ಗೆಳೆಯ ಶಶಿಯ ಸನಿಹ ಜಯಳಿಗೆ ಲಜ್ಜೆಯ ತೋರಿದೆ ನಿಶೆಯ ಒಲವೇ ಸಂಭ್ರಮ ಎಂದಿಹನು ಗೆಳೆಯ  ಜಯಶ್ರೀ ಭ.ಭಂಡಾರಿ.

ಜಯಶ್ರೀ ಭ.ಭಂಡಾರಿ ಅವರ ಗಜಲ್ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸ್ವಾತಂತ್ರ್ಯ ಸೇನಾನಿ ದೇಶ ಭಕ್ತ ಲಿಂಗೈಕ್ಯ ಶ್ರೀ ರತ್ನಪ್ಪಣ್ಣ ಕುಂಬಾರ ರತ್ನಪ್ಪ ಭರಮಪ್ಪ ಕುಂಬಾರ (ದೇಶಭಕ್ತ ರತ್ನಪ್ಪಣ್ಣ ಕುಂಬಾರ) ಅವರು ಮಹಾರಾಷ್ಟ್ರದ ಇಚಲಕರಂಜಿಯ ಪ್ರಸಿದ್ಧ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಜಕಾರಣಿಯಾಗಿದ್ದರು. ದಕ್ಷಿಣ ಭಾರತದ ಹಲವು ಸಂಸ್ಥಾನಗಳ ವಿಲೀನಕ್ಕಾಗಿ ಶ್ರಮಿಸಿದ ಇವರನ್ನು “ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲ್” ಎಂದೂ ಕರೆಯಲಾಗುತ್ತದೆ.  ಡಾ. ರತ್ನಪ್ಪ ಕುಂಬಾರ ಅವರ ಜೀವನದ   ಪ್ರಮುಖ ವಿವರಗಳು .ಜನನ: 15 ಸೆಪ್ಟೆಂಬರ್ 1909, ನಿಮ್ಶಿರ್ಗಾಂವ್ (ಮಹಾರಾಷ್ಟ್ರ).ನಿಧನ: 23 ಡಿಸೆಂಬರ್ 1998 (ವಯಸ್ಸು 89). ಬಿರುದು: ದೇಶಭಕ್ತ. ರಾಜಕೀಯ ಪಕ್ಷ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್.   ಸಾಧನೆಗಳು ಮತ್ತು ಕೊಡುಗೆಗಳು ಸಂವಿಧಾನಕ್ಕೆ ಸಹಿ: ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ಭಾರತದ ಸಂವಿಧಾನದ ಅಂತಿಮ ಕರಡಿಗೆ ಸಹಿ ಹಾಕಿದ ಮಹನೀಯರಲ್ಲಿ ಇವರೂ ಒಬ್ಬರು. ಸ್ವಾತಂತ್ರ್ಯ ಹೋರಾಟ: 1942 ರ ಆಗಸ್ಟ್ 9 ರಂದು ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸಹಕಾರಿ ರಂಗ:  ಮಹಾರಾಷ್ಟ್ರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸಹಕಾರಿ ರಂಗದ ನಕ್ಷತ್ರವಾಗಿ ಬೆಳಗಿದ ಇವರು, ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಸಹಕಾರಿ ಸಂಸ್ಥೆಗಳ ಸ್ಥಾಪನೆಗೆ ಕಾರಣರಾದರು. ಪದ್ಮಶ್ರೀ ಪ್ರಶಸ್ತಿ: ಇವರ ಸಮಾಜ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 1985 ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ರಾಜಕೀಯ ಸೇವೆ: ಇವರು ಸಂಸತ್ ಸದಸ್ಯರಾಗಿ (MP) ಹಾಗೂ ಮಹಾರಾಷ್ಟ್ರ ಸರ್ಕಾರದ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.  ಸ್ವಾತಂತ್ರ್ಯಹೋರಾಟ ಡಾ. ರತ್ನಪ್ಪಣ್ಣ ಕುಂಬಾರ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ, ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಅತ್ಯಂತ ಸಕ್ರಿಯ ಮತ್ತು ಪ್ರಭಾವಶಾಲಿ ಪಾತ್ರ ವಹಿಸಿದ್ದರು. ಅವರ ಪ್ರಮುಖ ಸ್ವಾತಂತ್ರ್ಯ ಹೋರಾಟದ ವಿವರಗಳು : 1. ಬ್ರಿಟಿಷ್ ಮತ್ತು ರಾಜಪ್ರಭುತ್ವದ ವಿರುದ್ಧ ಹೋರಾಟ 2. ಕೊಲ್ಹಾಪುರ ಪ್ರಜಾ ಪರಿಷತ್: ರತ್ನಪ್ಪಣ್ಣನವರು ಕೊಲ್ಹಾಪುರ ಸಂಸ್ಥಾನದಲ್ಲಿ ರಾಜಪ್ರಭುತ್ವ ಮತ್ತು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಲು ‘ಕೊಲ್ಹಾಪುರ ರಾಜ್ಯ ಪ್ರಜಾ ಪರಿಷತ್’ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 3. ಪ್ರಜಾಪ್ರಭುತ್ವಕ್ಕಾಗಿ ಆಗ್ರಹ: ಸಂಸ್ಥಾನದ ಜನರಿಗೆ ಮೂಲಭೂತ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಮಾದರಿಯ ಆಡಳಿತ ಸಿಗಬೇಕೆಂದು ಅವರು ನಿರಂತರ ಚಳವಳಿ ನಡೆಸಿದರು. 4. . ಕ್ವಿಟ್ ಇಂಡಿಯಾ ಚಳವಳಿ (1942)ಭೂಗತ ಹೋರಾಟ: 1942ರಲ್ಲಿ ಮಹಾತ್ಮ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳವಳಿ ಘೋಷಿಸಿದಾಗ, ರತ್ನಪ್ಪಣ್ಣನವರು ಅದರಲ್ಲಿ ಸಕ್ರಿಯವಾಗಿ ಧುಮುಕಿದರು. ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಲು ಆದೇಶ ಹೊರಡಿಸಿದಾಗ, ಇವರು ಸುಮಾರು 6 ವರ್ಷಗಳ ಕಾಲ ಭೂಗತರಾಗಿ (Underground) ಹೋರಾಟ ಮುಂದುವರಿಸಿದರು. 5. ಸಶಸ್ತ್ರ ಮತ್ತು ಸೈದ್ಧಾಂತಿಕ ಪ್ರತಿರೋಧ: ಭೂಗತರಾಗಿದ್ದ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿಗಳ ಕಣ್ಣು ತಪ್ಪಿಸಿ ಯುವಕರನ್ನು ಸಂಘಟಿಸುವುದು, ಕ್ರಾಂತಿಕಾರಿ ಪತ್ರಿಕೆಗಳನ್ನು ಹಂಚುವುದು ಮತ್ತು ಸರ್ಕಾರದ ಖಜಾನೆಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟಿಸುವುದರಲ್ಲಿ ಇವರು ಮುಂಚೂಣಿಯಲ್ಲಿದ್ದರು. ಇವರನ್ನು ಹಿಡಿದುಕೊಟ್ಟವರಿಗೆ ಬ್ರಿಟಿಷ್ ಸರ್ಕಾರ ದೊಡ್ಡ ಮೊತ್ತದ ಬಹುಮಾನವನ್ನೂ ಘೋಷಿಸಿತ್ತು. 6. ಸಂಸ್ಥಾನಗಳ ವಿಲೀನ ಮತ್ತು “ದಕ್ಷಿಣ ಭಾರತದ ಪಟೇಲ್” ಎಂದು ಜನರಿಂದ ಅಭಿಮಾನದಿಂದ ಕರೆಯಿಸಿ ಕೊಂಡರು. 7. ಭಾರತ ಒಕ್ಕೂಟಕ್ಕೆ ಸೇರ್ಪಡೆ:  ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ (1947) ಕೊಲ್ಹಾಪುರ, ಸಾಂಗ್ಲಿ ಸೇರಿದಂತೆ ದಕ್ಷಿಣದ ಹಲವು ದೇಶಿ ಸಂಸ್ಥಾನಗಳು ಭಾರತ ಒಕ್ಕೂಟದೊಂದಿಗೆ ವಿಲೀನಗೊಳ್ಳಲು ನಿರಾಕರಿಸುತ್ತಿದ್ದವು. 8 ಕಠಿಣ ನಿರ್ಧಾರ: ರತ್ನಪ್ಪಣ್ಣನವರು ಈ ಸಂಸ್ಥಾನಗಳ ರಾಜರ ವಿರುದ್ಧ ಪ್ರಬಲ ಜನಪ್ರತಿಭಟನೆಗಳನ್ನು ಸಂಘಟಿಸಿ, ಅವರು ಭಾರತದೊಂದಿಗೆ ವಿಲೀನವಾಗುವಂತೆ ಒತ್ತಡ ಹೇರಿದರು. ಈ ಅದ್ಭುತ ಚಾಕಚಕ್ಯತೆ ಮತ್ತು ಸಾಹಸಕ್ಕಾಗಿ ಇವರನ್ನು “ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲ್” ಎಂದು ಕರೆಯಲಾಗುತ್ತದೆ. ಸ್ವಾತಂತ್ರ್ಯ ನಂತರದಲ್ಲಿನ ಕೊಡುಗೆಗಳು ಸಂವಿಧಾನ ರಚನೆಯಲ್ಲಿನ ಪಾತ್ರದ ವಿವರಗಳು ಭಾರತದ ಸಂವಿಧಾನ ರಚನೆಯಲ್ಲಿ ಡಾ. ರತ್ನಪ್ಪಣ್ಣ ಕುಂಬಾರ ಅವರು ಅತ್ಯಂತ ಗೌರವಾನ್ವಿತ ಮತ್ತು ಐತಿಹಾಸಿಕ ಪಾತ್ರವನ್ನು ವಹಿಸಿದ್ದರು.  ದೇಶಿ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸುವಲ್ಲಿ ಅವರು ತೋರಿದ ನಾಯಕತ್ವವನ್ನು ಗುರುತಿಸಿ, ಅವರನ್ನು ಸಂವಿಧಾನ ರಚನಾ ಸಭೆಯ (Constituent Assembly) ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು.  ಸಂವಿಧಾನ ರಚನೆಯಲ್ಲಿ ಅವರ ಪ್ರಮುಖ ಕೊಡುಗೆಗಳು ಮತ್ತು ಪಾತ್ರದ ವಿವರಗಳು  1. ಸಂವಿಧಾನದ ಮೂಲ ಪ್ರತಿಯ ಸಹಿ ಒಕ್ಕೂಟದ ಸದಸ್ಯರುಭಾರತದ ಸಂವಿಧಾನದ ರಚನೆ ಪೂರ್ಣಗೊಂಡ ನಂತರ, 24 ಜನವರಿ 1950 ರಂದು ಸಂವಿಧಾನದ ಅಂತಿಮ ಕರಡು (Final Draft) ಮತ್ತು ಮೂಲ ಪ್ರತಿಯ ಮೇಲೆ ಸಹಿ ಹಾಕಿದ ಭಾರತದ ಪ್ರಮುಖ ನಾಯಕರಲ್ಲಿ ರತ್ನಪ್ಪಣ್ಣ ಕುಂಬಾರ ಅವರೂ ಒಬ್ಬರು. ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ದೇಶದ ಅತ್ಯುನ್ನತ ಕಾನೂನು ಗ್ರಂಥಕ್ಕೆ ಸಹಿ ಹಾಕಿದ ಹೆಮ್ಮೆ ಇವರದ್ದಾಗಿದೆ.  ದೇಶಿ ಸಂಸ್ಥಾನಗಳ ಜನರ ಧ್ವನಿಯಾಗಿ ಪ್ರಾತಿನಿಧ್ಯಸಂಸ್ಥಾನಗಳ ಜನರ ಹಕ್ಕುಗಳು:  ಸಂವಿಧಾನ ರಚನಾ ಸಭೆಯಲ್ಲಿ ಬ್ರಿಟಿಷ್ ಭಾರತದ ಪ್ರಾಂತ್ಯಗಳ ಪ್ರತಿನಿಧಿಗಳ ಜೊತೆಗೆ ದೇಶಿ ಸಂಸ್ಥಾನಗಳ (Princely States) ಪ್ರತಿನಿಧಿಗಳೂ ಇದ್ದರು.  ರತ್ನಪ್ಪಣ್ಣನವರು ಕೊಲ್ಹಾಪುರ ಮತ್ತು ದಕ್ಷಿಣದ ಇತರ ಸಂಸ್ಥಾನಗಳ ಲಕ್ಷಾಂತರ ಸಾಮಾನ್ಯ ಜನರ ಧ್ವನಿಯಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಪ್ರಜಾಪ್ರಭುತ್ವದ ವಿಕೇಂದ್ರೀಕರಣ:  ರಾಜಪ್ರಭುತ್ವದ ಆಡಳಿತದಲ್ಲಿದ್ದ ಜನರಿಗೆ ಸಮಾನ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಸೌಲಭ್ಯಗಳು ಸಿಗಬೇಕೆಂದು ಅವರು ಪ್ರತಿಪಾದಿಸಿದರು. .ಕರಡು ಪರಿಶೀಲನೆ ಮತ್ತು ಚರ್ಚೆಗಳಲ್ಲಿ ಭಾಗವಹಿಸುವಿಕೆ ಸಂವಿಧಾನ ರಚನಾ ಸಭೆಯ ವಿವಿಧ ಸಮಿತಿಗಳ ಚರ್ಚೆಗಳಲ್ಲಿ ಭಾಗವಹಿಸಿದ ಇವರು, ಭಾರತದಂತಹ ವೈವಿಧ್ಯಮಯ ದೇಶಕ್ಕೆ ಬಲಿಷ್ಠ ಒಕ್ಕೂಟ ವ್ಯವಸ್ಥೆ (Federal Structure) ಎಷ್ಟು ಮುಖ್ಯ ಎಂಬುದರ ಕುರಿತು ತಮ್ಮ ನುಡಿಗಟ್ಟುಗಳನ್ನು ಹಂಚಿಕೊಂಡಿದ್ದರು. ಹಿಂದುಳಿದ ವರ್ಗಗಳು, ರೈತರು ಮತ್ತು ಶ್ರಮಿಕ ವರ್ಗದವರ ಆರ್ಥಿಕ ಸಬಲೀಕರಣಕ್ಕೆ ಸಂವಿಧಾನದಲ್ಲಿ ಸೂಕ್ತ ಅವಕಾಶಗಳಿರಬೇಕು ಎಂದು ಅವರು ಆಗ್ರಹಿಸಿದ್ದರು. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದು ಕೇವಲ ಸಂವಿಧಾನ ಬರೆಯುವುದಷ್ಟೇ ಅಲ್ಲದೆ, ಸ್ವಾತಂತ್ರ್ಯದ ನಂತರ ದೇಶದ ಮೊದಲ ಲೋಕಸಭೆಯ (1952-1957) ಸಂಸದರಾಗಿ (MP) ಆಯ್ಕೆಯಾಗಿ, ಸಂವಿಧಾನದ ಆಶಯಗಳನ್ನು ಕಾನೂನು ರೂಪದಲ್ಲಿ ಜಾರಿಗೆ ತರಲು ಶ್ರಮಿಸಿದರು.   ರತ್ನಪ್ಪಣ್ಣ ಕುಂಬಾರ ಅವರು ಸಂವಿಧಾನ ಸಭೆಯ ನಂತರ ದೇಶದ ಮೊದಲ ಲೋಕಸಭೆ ಸದಸ್ಯರಾಗಿ (MP) ಮಾಡಿದ ಅನೇಕ ಕೆಲಸಗಳ  ಲೆಕ್ಕ ಇಡಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಇಚಲಕರಂಜಿಯನ್ನು “ಮ್ಯಾಂಚೆಸ್ಟರ್ ಆಫ್ ಮಹಾರಾಷ್ಟ್ರ” ಆಗಿ ಬದಲಾಯಿಸಿದ ಅವರ ಸಹಕಾರಿ ಚಳವಳಿಯ  ದೂರದೃಷ್ಟಿ ರತ್ನಪ್ಪಣ್ಣನವರು ಸಹಕಾರಿ ರಂಗದಲ್ಲಿ ಕ್ರಾಂತಿ ಉಂಟು ಮಾಡಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿಯ (ಗಂಗಾನಗರ) ಕಬ್ನೂರ್‌ನಲ್ಲಿ ಈ ಬೃಹತ್ ಕಾರ್ಖಾನೆಯನ್ನು 1954 ರಲ್ಲಿ ಸ್ಥಾಪಿಸಿದರು.  ವಾಣಿಜ್ಯ ಕಾಲೇಜು ಸ್ಥಾಪನೆ. ಇಂತಹ ಅಪರೂಪದ ಅಪ್ಪಟ ಬಸವ ಭಕ್ತ ಸ್ವತಂತ್ರ ಸೇನಾನಿ ದೇಶಭಕ್ತ ಶ್ರೀ ರತ್ನಪ್ಪಣ್ಣ ಕುಂಬಾರ ಸಾವಿಲ್ಲದ ಶರಣರು  ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಇತರೆ, ಸಿನೆಮಾ

“ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಪುಟ್ಟಣ್ಣನ ಕತ್ತೆ!” ಗೊರೂರು ಅನಂತರಾಜು

ಸಿನಿಮಾ ಸಂಗಾತಿ ಗೊರೂರು ಅನಂತರಾಜು “ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಪುಟ್ಟಣ್ಣನ ಕತ್ತೆ!” ಅತ್ಯಂತ ಸೂಕ್ಷ್ಮ ಕಥಾನಕಗಳ ಮೂಲಕವೇ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವ ಸಿದ್ದು ಪೂರ್ಣಚಂದ್ರ ಇದೀಗ ಪುಟ್ಟಣ್ಣನ ಕತ್ತೆ ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಚಿತ್ರ ಈಗ ಪ್ರತಿಷ್ಠಿತ ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಈ ಸಿನಿಮೋತ್ಸವದಲ್ಲಿ  ಪುಟ್ಟಣ್ಣನ ಕತ್ತೆ ಚಿತ್ರ ಪ್ರದರ್ಶನಗೊಳ್ಳಲಿದೆ. ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಜಾಗತಿಕ ಮಟ್ಟದ ಘನತೆ ಗೌರವವಿದೆ. ಈ ಸಿನಿಮೋತ್ಸವಕ್ಕೆ ಸಿನಿಮಾ ಆಯ್ಕೆಯಾಗುವುದು ಮಹತ್ವದ್ದಾಗಿದೆ.   ಜಾಗತಿಕ ಮಟ್ಟದ ತುರುಸಿನ ಸ್ಪರ್ಧೆ ದಾಟಿ ಆಯ್ಕೆಯಾಗುವಲ್ಲಿ  ಗುಣಮಟ್ಟದ ಕಂಟೆಂಟು ಹೊಂದಿರಬೇಕು. ಈ ನಿಟ್ಟಿನಲ್ಲಿ ಕನ್ನಡ ಸಿನಿಮಾ ಪುಟ್ಟಣ್ಣನ ಕತ್ತೆ ಈ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವುದು ಕನ್ನಡ ಚಿತ್ರರಂಗಕ್ಕೆ  ಹೆಮ್ಮೆಯ  ಸಂಗತಿಯಾಗಿದೆ. ಕತ್ತೆಯೊಂದು ಕಥೆಯಲ್ಲಿ ಕೇಂದ್ರವಾಗಿ ಚಿತ್ರ ರೂಪುಗೊಂಡಿದೆ.   ಬೆಂಗಳೂರಿನಲ್ಲಿ  ಕತ್ತೆ ಹಾಲು ಮಾರುವವರು ಬರುತ್ತಿರುತ್ತಾರೆ. ಹೀಗೆ ಹಳ್ಳಿಯೊಂದರಿಂದ  ಕತ್ತೆಯೊಂದಿಗೆ ಪಟ್ಟಣ ಸೇರಿದವನ ಸುತ್ತ ಘಟಿಸುವ ಆಸಕ್ತಿದಾಯಕ ಸನ್ನಿವೇಶಗಳು ಈ ಸಿನಿಮಾದ ಆಂತರ್ಯದಲ್ಲಿದೆ. ಭೀಮೇಶ್ ಗೌಡ ಈ ಕಥನದ ಆತ್ಮದಂಥಾ ಪುಟ್ಟಣ್ಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನೀಶ್ ಆರ್ಯನ್ ಈ ಸಿನಿಮಾದ ನಾಯಕರಾಗಿ ಸಂಕೀರ್ಣ ಪಾತ್ರದಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ಫಿಲಂಸ್ ಬ್ಯಾನರ್ ಅಡಿಯಲ್ಲಿ ತನ್ಮಯ್ ಎಸ್ ಗೌಡ ನಿರ್ಮಾಣ ಮಾಡಿರುವರು. ಸಿದ್ದು ಪೂರ್ಣಚಂದ್ರ ಕಥೆ ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶನ ಮಾಡಿರುವರು.  ಅನೀಶ್ ಆರ್ಯನ್, ಭೀಮೇಶ್ ಗೌಡ, ಎನ್.ಟಿ ರಾಮಸ್ವಾಮಿ, ಕವಿತಾ ಕಂಬಾರ್, ವಿಭಾ, ಕಲಾರತಿ ಮಹದೇವ್, ರೋಹಿಣಿ, ರಶ್ಮಿ ಮೈಸೂರ್, ಲಕ್ಕಿ ಶಂಕರ್, ವಾಸು, ರಾಕಿ, ಮಂಡ್ಯ ಸಿದ್ದು ಮುಂತಾದವರ ತಾರಾಗಣವಿದೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ ಮತ್ತು  ದೀಪು ಸಿ.ಎಸ್  ಅವರ ಸಂಕಲನ ಈ ಚಿತ್ರಕ್ಕಿದೆ. -ಗೊರೂರು ಅನಂತರಾಜು,ಹಾಸನ.9449462879

“ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಪುಟ್ಟಣ್ಣನ ಕತ್ತೆ!” ಗೊರೂರು ಅನಂತರಾಜು Read Post »

ಕಾವ್ಯಯಾನ, ಗಝಲ್

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಅವರ ಗಜಲ್ ಅನುದಿನವೂ ನಿನ್ನ ಜೊತೆ ಕಾಲ ಕಳೆಯಲು ಹಂಬಲಿಸುತಿರುವೆನಿನ್ನಯ ಮಡಿಲಲಿ ಮಗುವಾಗಿ ಮಲಗಲು ಹಂಬಲಿಸುತಿರುವೆ ದೂರವನ್ನು ದೂರಲಾಗದೆ ಮಂಡಿಯೂರಿ ಕುಳಿತಿರುವೆ ಉಸಿರೆ  ನಮ್ಮ ಮೈಮನಗಳ ಸಾನಿಧ್ಯದಿ ಪೂಜಿಸಲು ಹಂಬಲಿಸುತಿರುವೆ ಏಳೇಳು ಲೋಕ ಕೇಳುವಂತೆ ಕೂಗುವ ಆಸೆ ಲವ್ ಯು ಎಂದುಜಗದಗಲಕೂ ಆರುಮೆ ಕಂಪನು ಹರಡಲು ಹಂಬಲಿಸುತಿರುವೆ ಬೇಬಿಮಾ ನಿನ್ನ ಹೆಸರನೆ ಜಪಿಸುತಿರುವೆ ಅವನಿಯಲಿ ಜೀವಿಸಲುಹಗಲಿರುಳು ನಾನು ಉಸಿರಾಡುವ ಉಸಿರಲು ಹಂಬಲಿಸುತಿರುವೆ ಅಡಗಿದೆ ಕಾಲದ ತೆಕ್ಕೆಯಲಿ ಕಿವಿಗೊಡು ಹೃದಯದ ರಿಂಗಣಕೆತನುಮನದಿ ಮಲ್ಲಿಗೆ ಸುಮವಾಗಿ ಅರಳಲು ಹಂಬಲಿಸುತಿರುವೆ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರವಾಹಿ ಸಂಗಾತಿ–43 ಡಾ.ವಿಶ್ವನಾಥ್‌ ಎನ್.‌ ನೇರಳೆಕಟ್ಟೆ ಅರ್ಜುನ ಉವಾಚ ಸೋದರರ ಪ್ರತಾಪದಿಂದ ಪ್ರಜ್ಞಾ ಶೂನ್ಯನಾದ ರಾಮಸೋದರ ಅಮ್ಮನ ಪ್ರಲಾಪವದು ಕುಶನನ್ನು ದಂಗುಬಡಿಸಿತು. ಕಾರಣ ಕೇಳಿದ ಅವಳ ಅಳುವಿಗೆ. ಲವ ಕುದುರೆಯನ್ನು ಕಟ್ಟಿಹಾಕಿದ್ದು, ಸೈನಿಕರು ಯುದ್ಧಕ್ಕೆ ಬಂದದ್ದು, ರಥದಲ್ಲಿ ಕುಶನನ್ನು ಹೊತ್ತೊಯ್ದದ್ದು ಎಲ ್ಲವನ್ನೂ ಹೇಳಿದಳು ಸೀತೆ. ರೋಷ ಹುಟ್ಟಿತು ಕುಶನಲ್ಲಿ. ಕವಚ, ಖಡ್ಗ, ಬಿಲ್ಲು, ಬಾಣ, ಕಿರೀಟ ಎಲ್ಲವನ್ನೂ ತರಹೇಳಿದ ತಾಯಿಯಲ್ಲಿ. ತಂದುಕೊಟ್ಟಳು. ‚ಲವನನ್ನು ಹೊತ್ತೊಯ್ದವನು ಯಾರೇ ಆಗಿದ್ದರೂ ಅವನನ್ನು ಎದುರಿಸಿ, ಲವನನ್ನು ಎದುರಿಸಿಕೊಂಡು ಬರುತ್ತೇನೆ‛ ಎಂದ ಕುಶ ವೀರಭಾವದಲ್ಲಿ ಹೊರಟ. ಸುತನನ್ನು º Àರಸಿ ಕಳುಹಿಸಿಕೊಟ್ಟಳು ಸೀತೆ.ವಾಯುವೇಗದಿಂದ ಹೋದ ಕುಶ ಶತ್ರುW À್ನ ¸ ೆÃನೆಯನ್ನು ಕಾಣುತ್ತಲೇ ಮುನ್ನುಗ್ಗಿದ. ಶತುಘ್ನನ ದಳಪತಿಯ ಮೇಲೆ ಬಾಣಗಳನ್ನು ಒಂದರ ಹಿಂದೆ ಒಂದರAತೆ ಬಿಟ್ಟ. ದಳಪತಿಗೆ ನಗ ಹೆಸರಿನ ತಮ್ಮನೊಬ್ಬನಿದ್ದ. ಅವನು ಕುಶನನ್ನು ಎದುರಿಸುವ ಉತ್ಸುಕತೆ ತೋರಿದ. ಕುಶನ ಬಾಣದ ಹೊಡೆತಕ್ಕೆ ಕೈಗಳನ್ನೂ, ಕಾಲುಗಳನ್ನೂ, ಅಂತಿಮವಾಗಿ ಶಿರವನ್ನೂ ಕಳೆದುಕೊಂಡು ಪ್ರಾಣಬಿಟ್ಟ.ಕ್ರೋಧಭಾವದವನಾದ ಶತ್ರುಘ್ನ. ಒಂಭತ್ತು ಬಾಣಗಳನ್ನು ಏಕಕಾಲಕ್ಕೆ ಪ್ರಯೋಗಿಸಿದ, ಕುಶನ ಮೇಲೆ. ಬಾಣಪುಂಜಗಳು ಪುಡಿಪುಡಿಯಾದವು ಪುಟ್ಟ ಪೋರ ತೋರಿದ ಪರಾಕ್ರಮಕ್ಕೆ. ಕುಶನ ಬಲು ಬಿರುಸಿನ ಬಾಣವದು ಬೀಳಿಸಿತು ಶತ್ರುಘ್ನನನ್ನು ಭೂಮಿಯ ಮೇಲೆ. ಎಲ ್ಲರ ಭುಜಬಲವನ್ನೂ ಮೀರಿನಿಲ್ಲುವ ದಿಟ್ಟತನವನ್ನು ತೋರಿದನಾಗ ರಾಮಸುತ.ಅಷ್ಟರಲ್ಲಿ ಲವನಿಗೆ ಪ್ರಜ್ಞೆ ಬಂತು. ಅಣ್ಣ ತಮ್ಮಂದಿರು ಜೊತೆ ಸೇರಿ ª ÀÄತ್ತೆ ಕುದುರೆಯನ್ನು ಕಟ್ಟಿಹಾಕಿದರು. ಈ ಮೊದಲಿಗಿಂತಲೂ ಹುರುಪಿನಿಂದ ಯುದ್ಧಕ್ಕೆ ಸಿದ್ಧರಾಗಿ ನಿಂತರು.‚ಒಡೆಯಾ, ನಿನ್ನ ಯಜ್ಞದ ಕುದುರೆಯದು ಭೂಮಿಯನ್ನು ವಿಘ್ನವಿಲ್ಲದೆ ಸುತ್ತಾಡಿತು. ಬಳಿಕ ಅದನ್ನು ಲವನೆಂಬ ಬಾಲಕ ಕಟ್ಟಿಹಾಕಿದ. ಬಿಡಿಸುವುದಕ್ಕೆ ಹೋದ ಸೇನೆಯನ್ನು ನಾಶಮಾಡಿದ. ಆಗ ಶತ್ರುಘ್ನ ಅವ£ Àನ್ನು ಸೆರೆಹಿಡಿದು ಕರೆತರುತ್ತಿರಬೇಕಾದರೆ ಯಾರೋ ಒಬ್ಬ ಬಾಲಕ ಬಂದು, ಬಾಣವನ್ನು ಪ್ರಯೋಗಿಸಿ, ನಿನ್ನ ತಮ್ಮ ಶತ್ರುಘ್ನನನ್ನು ರಥದಿಂದ ಬೀಳಿಸಿದ‛ ಎಂಬ ಸಂದೇಶ ರಾಮನನ್ನು v Àಲುಪಿತು.ಶ್ರೀರಾಮ ಆ ಮಾತನ್ನು ನಂಬಲಿಲ್ಲ. ಶತ್ರುಘ್ನನಂತಹ ಬಲಶಾಲಿಯನ್ನು ಗೆಲ್ಲುವವರಿಲ್ಲ ಈ ಲೋಕದಲ್ಲಿ ಎಂಬ ನಂಬಿಕೆ ಅವನದ್ದು. ಹುಸಿ ಸಂದೇಶವಿದು ಎಂದುಕೊAಡ. ಆದರೆ ಅದು ನಿಜವಾದದ್ದು ಎಂದು ತಿಳಿದಾಗ ಪರಮಾಶ್ಚರ್ಯಗೊಂಡ. ಲವಣಾಸುರನೆಂಬ ರಾಕ್ಷಸನನ್ನೇ ಕೊಂದ ಶತ್ರುಘ್ನನಿಗೆ ಬಾಲಕರಿಬ್ಬರು ಸವಾಲಾಗಿ ನಿಂತಿದ್ದಾರೆAದರೆ ಅವರು ಸಾಮಾನ್ಯದವರಲ್ಲ ಎನ್ನುವುದು ಸ್ಪಷ್ಟವಾಯಿತು ಅಂi ÉÆÃಧ್ಯಾಪತಿಗೆ. ಲಕ್ಷö್ಮಣನನ್ನು ಯುದ್ಧಕ್ಕೆ ಕಳುಹಿಸಿಕೊಟ್ಟ.ಕಾಲಜಿತುವೆಂಬ ಸೇನಾಧಿಪತಿಯನ್ನು ಜೊತೆಮಾಡಿಕೊಂಡು ಚತುರಂಗ ಬಲ ಸಹಿತನಾಗಿ ಕುಶ ಲವರ ವಿರುದ್ಧದ ಯುದ್ಧಕ್ಕೆ ಬಂದ ಲಕ್ಷö್ಮಣ. ಸಾವಿರ ಆನೆಗಳು. ಅದಕ್ಕೆ ನೂರು ಪಟ್ಟು ಹೆಚ್ಚು ರಥಗಳು. ರಥಗಳ ನೂರು ಪಟ್ಟಿನಷ್ಟು ಕುದುರೆಗಳು. ಕುದುರೆಗಳ ನೂರು ಪಟ್ಟಿನಷ್ಟು ಸೈನಿಕರು. ಇಂತಹ ಒಂದು ¸ ÉÃನೆಯನ್ನು ಹೊಂದಿದವರು ಭ್ರಮಿಗಳು ಎನಿಸಿಕೊಳ್ಳುತ್ತಿದ್ದರು. ಇಂತಹ ಸಾವಿರ ಭ್ರಮಿಗಳನ್ನು ಒಳಗೊಂಡಿತ್ತು ಲಕ್ಷö್ಮಣ ಸಾರಥ್ಯದ ಹಿರಿದು ಸೇನೆ.ಎದುರು ನಿಂತ ಅಗಾಧ ಸೇನೆ ಕುಶ ಲವರ ಕಣ್ಣಿಗೆ ರಾಚಿತು. ಅಮೋಘವಾದ ಅಸ್ತçವೊಂದಿಲ್ಲದೆ ಜಯಿಸುವುದು ಅಸಾಧ್ಯ ಎಂದು ತೋರಿತು ಲವನಿಗೆ. ಸಹೋದರನಲ್ಲಿ ಗುಟ್ಟಾಗಿ ತಾನು ಸೂಂi ÀÄðದೇವನ ಪ್ರಾರ್ಥನೆ ಮಾಡಿ ಕೋದಂಡವನ್ನು ಪಡೆದುಕೊಳ್ಳುವುದಾಗಿ ಹೇಳಿದ. ಪ್ರಾರ್ಥಿಸಿದ. ಲವನ ಮುಗ್ಧಭಕ್ತಿಗೆ ಒಲಿದ ಸೂಂi ÀÄðದೇವ. ದಿವ್ಯಾಸ್ತçವನ್ನು ಲವನಿಗೆ ಕೊಟ್ಟ.ಅದನ್ನು ಸಂತಸದಲ್ಲಿ ಕುಶನಿಗೆ ತೋರಿದ ಲವ. ಅಣ್ಣ ತಮ್ಮಂದಿರಿಬ್ಬರೂ ಬಲು ಹುರುಪಿನಲ್ಲಿ ಶತ್ರು ಸೈನ್ಯದೆಡೆಗೆ ದೃಷ್ಟಿ ಹರಿಸಿದರು. ನಿಮಿಷದಲ್ಲಿಯೇ ನಾಶಹೊಂದಿತು ಲಕ್ಷö್ಮಣ ಸೇನೆ.ಲಕ್ಷö್ಮಣ ಕುಶನೆದುರು ಹೋರಾಟಕ್ಕೆ ನಿಂತ. ಲವನನ್ನು ಎದುರಿಸುವ ಮನಸ್ಸು ಮಾಡಿದ ಸೇನಾಧಿಪತಿ ಕಾಲಜಿತು. ಸಂಪೂರ್ಣ ಸೇನೆಯೇ ಅತಿ ರೋಷದಿಂದ ಇಬ್ಬರು ಬಾಲಕರ ಮೇಲೆರಗಿತು. ಮೇಲೆ ಬಿದ್ದವರನ್ನೆಲ್ಲಾ ಕೊಂದುಹಾಕಿದ ಲವ. ಎಲ್ಲೆಲ್ಲೂ ಬಾಣಗಳ ಹಾರಾಟ. ಸೇನಾಗಡಲಿನಲ್ಲಿ ಕುಶ ಲವರ ಸಾಹಸದ ಈಜಾಟ. ಆನೆ ಕುದುರೆಗಳು ಧರೆಗುರುಳಿದವು. ಸೈನಿಕರ ಶಿರಗಳು ಅಳಿದುಹೋದವು.ಹೀಗೆ ಲವ ಕುಶರ ಸಾಹಸ ಸಾಗುತ್ತಿದ್ದಾಗಲೇ ಎದುರಾದವನು ರುಧಿರನೆಂಬ ಮಹಾ ರಾಕ್ಷಸ. ಶತ್ರುಘ್ನನಿಂದ ಮಡಿದಿದ್ದ ಲವಣಾಸುರನ ಸೋದರ ಮಾವನಾಗಿದ್ದ ಆತನ ಕಣ್ಣುಬಿದ್ದದ್ದು ಲವನ ಕೈಯ್ಯಲ್ಲಿದ್ದ ಕೋದಂಡದ ಮೇಲೆ. ಅದನ್ನು ಬಿರುಸಾಗಿ ಹಿಡಿದೆಳೆದವನು ಅಪಹರಿಸಿಕೊಂಡು ಗಗನ ಮಾರ್ಗವಾಗಿ ಹೊರಟ. ಲವ ಅಳುಕಲಿಲ್ಲ. ವಾಲ್ಮೀಕಿ ಮಹರ್ಷಿಗಳು ಬೋಧಿಸಿದ್ದ ಅಗ್ನಿಮಂತ್ರಧ್ಯಾನ ಮಾಡಿದ. ಸೇನೆಯನ್ನು ಎದುರಿಸುತ್ತಲೇ ರುಧಿರನನ್ನು ಕೊಂದು ತನ್ನ ದಿವ್ಯಾಸ್ತçವನ್ನು ಮರಳಿ ಪಡೆದುಕೊಂಡ.ಇತ್ತ ಲಕ್ಷö್ಮಣನ ಜೊತೆಗೆ ಯುದ್ಧ ಮಾಡುತ್ತಿದ್ದ ಕುಶ. ಸೀತಾಸುತನ ಬಾಣದ ಏಟಿಗೆ ಊರ್ಮಿಳಾ ರಮಣನ ರಥವದು ಎರಡು U Àಳಿಗೆ ಸತತವಾಗಿ ತಿರುಗಿತು. ‘ಬಾಲಕನಿವನು ಪರಾಕ್ರಮಿ’ ಎಂದು ಮೆಚ್ಚಿತು ಕುಶನನ್ನು, ಲಕ್ಷö್ಮಣನ ಮನಸ್ಸು. ತನ್ನ ಶೌರ್ಯವಷ್ಟೂ ಬೇಕು ಇವನನ್ನು ಸೋಲಿಸಲು ಎಂದು ತೋರಿತು ಸುಮಿತ್ರಾಸುತನಿಗೆ. ಬಲವಾಗಿಯೇ ಬಾಣ ಪ್ರಯೋಗಿಸಿದ. ಕುಶನ ಕಿರೀಟ ಕವಚಗಳು ಕೆಳಗೆ ಬಿದ್ದವು. ಎದುರಾದ ಆಘಾತವನ್ನು ಸರಳವಾಗಿಸಿಕೊಂಡ ಸೀತಾಸುತ. ‚ಕಿರೀಟ ಕವಚಗಳ ಕಾಟವಿಲ್ಲದೆ ನಿರಾಳನಾಗಿ ಯುದ್ಧ ಮಾಡಬಹುದಿನ್ನು‛ ಎಂದು ನಗುತ್ತಾ ನುಡಿದವನು ಲಕ್ಷö್ಮಣನ ಮೇಲೆ ಅಮೋಘಾಸ್ತçವನ್ನು ಪ್ರಯೋಗಿಸಿದ. ಪ್ರಜ್ಞೆ ಕಳೆದುಕೊಂಡು ಭೂಮಿಯನ್ನಪ್ಪಿದ ಶ್ರೀರಾಮ ಸಹೋದರ.ಕುಶ ಲವರ ಆರ್ಭಟಕ್ಕೆ ಲಕ್ಷö್ಮಣ ಸೇನೆಯದು ದಿಕ್ಕುದಿಕ್ಕಿಗೆ ಚೆಲ್ಲಾಪಿಲ್ಲಿಯಾಯಿತು. ಕುದುರೆಯನ್ನು ಕಟ್ಟಿಹಾಕಿದ್ದ ಬನದೆಡೆಗೆ ರಥವನ್ನು ಓಡಿಸಿದರು ಸೀತಾಸುತರು… ಡಾ.ವಿಶ್ವನಾಥ್‌ ಎನ್.ನೇರಳೆಕಟ್ಟೆ

Read Post »

ಇತರೆ, ಜೀವನ

ಜಯಶ್ರೀ ಜೆ ಅಬ್ಬಿಗೇರಿ ಅವರ ಲೇಖನ “ಕಷ್ಟದ ಹಾದಿಯೇ ಸುಖದ ಭವಿಷ್ಯ”

ಬದುಕಿನ ಸಂಗಾತಿ ಜಯಶ್ರೀ ಜೆ ಅಬ್ಬಿಗೇರಿ “ಕಷ್ಟದ ಹಾದಿಯೇ ಸುಖದ ಭವಿಷ್ಯ” ನಾವು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಸುಲಭವಾದ ಹಾದಿಗಳನ್ನೇ ಹುಡುಕುತ್ತೇವೆ. ಬೆಳಿಗ್ಗೆ ಬೇಗ ಏಳುವುದಕ್ಕಿಂತ ಮತ್ತೊಂದು ಚೂರು ಹೊತ್ತು ಮಲಗುವುದು ಸುಖ ನೀಡುತ್ತದೆ. ದೈಹಿಕ ಕಸರತ್ತು ಮಾಡುವುದಕ್ಕಿಂತ ಸೋಫಾದ ಮೇಲೆ ಕುಳಿತು ಮೊಬೈಲ್ ನೋಡುವುದು ಆರಾಮ ಎನಿಸುತ್ತದೆ. ಓದುವುದಕ್ಕಿಂತ ಟಿವಿ ನೋಡುವುದು ಸಲೀಸು. ಆದರೆ ನೆನಪಿಡಿ, ಇಂದು ನಾವು ಪಡುವ ಆ ತಾತ್ಕಾಲಿಕ ಸುಖವೇ ನಮ್ಮ ನಾಳಿನ ಭವಿಷ್ಯವನ್ನು ಕಷ್ಟಕ್ಕೆ ತಳ್ಳುತ್ತದೆ. ತದ್ವಿರುದ್ಧವಾಗಿ, ಇಂದು ಯಾರು ಬೆಳಿಗ್ಗೆ ಬೇಗ ಎದ್ದು ಕಷ್ಟಪಟ್ಟು ಓದುತ್ತಾರೋ, ಶ್ರಮಿಸುತ್ತಾರೋ ಅವರ ಭವಿಷ್ಯ ಸುಲಭ ಮತ್ತು ಸುಂದರವಾಗುತ್ತದೆ.“If you want easy future life, choose hard one now” (ನಿಮಗೆ ಸುಲಭವಾದ ಭವಿಷ್ಯ ಬೇಕಿದ್ದರೆ, ಇಂದೇ ಕಷ್ಟದ ಹಾದಿಯನ್ನು ಆರಿಸಿ) ಎಂಬ ಮಾತು ನಮ್ಮ ಇಡೀ ಜೀವನದ ಯಶಸ್ಸಿನ ಗುಟ್ಟನ್ನು ಸಾರುತ್ತದೆ. ನಿಸರ್ಗದ ನಿಯಮವೂ ಇದೇ ಆಗಿದೆ; ಕಲ್ಲೊಂದು ಕಷ್ಟಪಟ್ಟು ಉಳಿಪೆಟ್ಟುಗಳನ್ನು ತಿಂದರೆ ಮಾತ್ರ ಅದು ಸುಂದರ ಮೂರ್ತಿಯಾಗಿ ಪೂಜಿಸಲ್ಪಡುತ್ತದೆ, ಇಲ್ಲದಿದ್ದರೆ ಅದು ಬರೀ ಕಾಲಡಿ ಸಿಗುವ ಕಲ್ಲಾಗಿಯೇ ಉಳಿಯುತ್ತದೆ. ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕಷ್ಟದ ಹಾದಿಯ ಬಗ್ಗೆ ಒಂದು ಅದ್ಭುತವಾದ ಮಾತು ಹೇಳಿದ್ದಾರೆ: “ಚಿನ್ನವನ್ನು ಬೆಂಕಿಯಲ್ಲಿ ಸುಟ್ಟರೆ ಮಾತ್ರ ಅದು ಶುದ್ಧವಾಗುತ್ತದೆ. ಹಾಗೆಯೇ ಮನುಷ್ಯನು ಕಷ್ಟದ ಹಾದಿಯಲ್ಲಿ ಸಾಗಿದಾಗ ಮಾತ್ರ ಅವನೊಳಗಿನ ನಿಜವಾದ ಸಾಮರ್ಥ್ಯ ಹೊರಬರುತ್ತದೆ. “ಕನ್ನಡದ ಹೆಮ್ಮೆಯ ಕವಿ ಡಿ.ವಿ.ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಬದುಕಿನ ಹೋರಾಟವನ್ನು ಹೀಗೆ ವರ್ಣಿಸಿದ್ದಾರೆ: “ಹಾಸಿಗೆಯ ನೀನು ಹಾಸಿದಂತೆ ಮಲಗು ಮಗನೆ|ಕಷ್ಟಗಳ ಕಂಡು ನೀ ಬೆದರಿ ಓಡದಿರು||ಹೋರಾಟವೇ ಬದುಕು, ಗೆಲುವಿಗೆ ದಾರಿಯದು…|| “ಜಗತ್ತಿನ ಅತ್ಯಂತ ಶ್ರೇಷ್ಠ ಸಾಧಕರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಸಹ ಇದನ್ನೇ ಪ್ರತಿಪಾದಿಸುತ್ತಾರೆ, “ನೀವು ಬಡವರಾಗಿ ಹುಟ್ಟಿದರೆ ಅದು ನಿಮ್ಮ ತಪ್ಪಲ್ಲ, ಆದರೆ ನೀವು ಬಡವರಾಗಿಯೇ ಸತ್ತರೆ ಅದು ಖಂಡಿತ ನಿಮ್ಮದೇ ತಪ್ಪು”.ಅವರು ತಮ್ಮ ಯೌವನದಲ್ಲಿ ಸುಖ-ಭೋಗಗಳನ್ನು ತ್ಯಜಿಸಿ, ಹಗಲಿರುಳು ಕಷ್ಟಪಟ್ಟು ಕೋಡಿಂಗ್ ಮಾಡಿದ್ದರಿಂದಲೇ ಇಂದು ಜಗತ್ತನ್ನು ಆಳುತ್ತಿದ್ದಾರೆ. ನಿಮ್ಮ ಭವಿಷ್ಯವನ್ನು ಸುಂದರವಾಗಿಸಲು ಪ್ರಮುಖ ಸಲಹೆಗಳನ್ನು  ಇಲ್ಲಿ ನೀಡಲಾಗಿದೆ: ಕಂಫರ್ಟ್ ಝೋನ್‌ನಿಂದ (Comfort Zone) ಹೊರಬನ್ನಿ: ನಮಗೆ ಅಭ್ಯಾಸವಾಗಿರುವ ಸುಲಭದ, ಆರಾಮದಾಯಕ ಮತ್ತು ಸುರಕ್ಷಿತ ವಲಯದಿಂದ ಹೊರಬರುವುದು ಬದುಕಿನ ಮೊದಲ ಮೆಟ್ಟಿಲು. ಪ್ರತಿದಿನ ನಮಗೆ ಸುಲಭ ಎನಿಸುವ ಕೆಲಸಗಳನ್ನೇ ಮಾಡುತ್ತಾ ಕೂತರೆ ನಮ್ಮಲ್ಲಿ ಯಾವುದೇ ಬೆಳವಣಿಗೆ ಸಾಧ್ಯವಿಲ್ಲ. ನದಿಯ ನೀರು ಹರಿಯುವುದನ್ನು ನಿಲ್ಲಿಸಿದರೆ ಹೇಗೆ ಕಶ್ಮಲಗೊಳ್ಳುತ್ತದೆಯೋ, ಹಾಗೆಯೇ ಮನುಷ್ಯ ಹೊಸ ಸವಾಲುಗಳನ್ನು ಸ್ವೀಕರಿಸದಿದ್ದರೆ ಅವನ ಬುದ್ಧಿ ಮಂದವಾಗುತ್ತದೆ. ಬೆಳಿಗ್ಗೆ ಬೆಚ್ಚಗೆ ಹೊದ್ದುಕೊಂಡ ರಗ್ಗು ಬಿಟ್ಟು ಏಳುವುದು, ಎಲ್ಲರ ಮುಂದೆ ನಿಂತು ಮಾತನಾಡುವ ಧೈರ್ಯ ಮಾಡುವುದು, ಕಷ್ಟದ ಜವಾಬ್ದಾರಿಗಳನ್ನು ಹೆಗಲಿಗೆ ಹಾಕಿಕೊಳ್ಳುವುದು ಆರಂಭದಲ್ಲಿ ತುಂಬ ಕಠಿಣ ಎನಿಸುತ್ತದೆ. ಆದರೆ, ಜಗತ್ತಿನ ಮಹಾನ್ ಸಾಧಕರು ತಮ್ಮ ಆರಾಮದಾಯಕ ಜೀವನವನ್ನು ತ್ಯಜಿಸಿದ್ದರಿಂದಲೇ ಇತಿಹಾಸ ಸೃಷ್ಟಿಸಲು ಸಾಧ್ಯವಾಯಿತು. ನಮ್ಮ ಭಯವನ್ನು ಎದುರಿಸಿ, ನಮಗೆ ಕಷ್ಟವೆನಿಸುವ ಕೆಲಸಗಳನ್ನು ಮಾಡುತ್ತಾ ಹೋದಂತೆಲ್ಲ ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕಷ್ಟದ ಹಾದಿಯ ಮೊದಲ ಹೆಜ್ಜೆಯೇ ಈ ಸೋಮಾರಿತನದ ಆವರಣವನ್ನು ಒಡೆದು ಹೊರಬರುವುದಾಗಿದೆ. ದಿನದ ಆರಂಭ ಕಠಿಣ ಕೆಲಸದಿಂದಾಗಲಿ: ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಮನಸ್ಸು ಮತ್ತು ಮೆದುಳು ಅತ್ಯಂತ ಚುರುಕಾಗಿರುತ್ತವೆ. ಈ ಅಮೂಲ್ಯವಾದ ಸಮಯದಲ್ಲಿ ನಾವು ದಿನದ ಅತ್ಯಂತ ಕಷ್ಟದ ಅಥವಾ ನಮಗೆ ಬೇಸರ ತರಿಸುವ ದೊಡ್ಡ ಕೆಲಸವನ್ನು ಮೊದಲು ಕೈಗೆತ್ತಿಕೊಳ್ಳಬೇಕು. ಅನೇಕರು ಸುಲಭವಾದ ಕೆಲಸಗಳನ್ನು ಮೊದಲು ಮಾಡಿ, ಕಷ್ಟದ ಕೆಲಸಗಳನ್ನು ದಿನದ ಕೊನೆಗೆ ದೂಡುತ್ತಾರೆ. ಇದರಿಂದ ದಿನಪೂರ್ತಿ ಮನಸ್ಸಿನಲ್ಲಿ ಆ ಕಷ್ಟದ ಕೆಲಸದ ಬಗ್ಗೆ ಒಂದು ರೀತಿಯ ಆತಂಕ ಮತ್ತು ಒತ್ತಡ ಉಳಿದುಕೊಳ್ಳುತ್ತದೆ. ಅದೇ ನೀವು ಬೆಳಿಗ್ಗೆಯೇ ಆ ಬೆಟ್ಟದಂತಹ ಕಠಿಣ ಸವಾಲನ್ನು ಮುಗಿಸಿಬಿಟ್ಟರೆ, ಇಡೀ ದಿನ ಮನಸ್ಸು ಹಗುರವಾಗುತ್ತದೆ. ಉಳಿದ ಸುಲಭದ ಕೆಲಸಗಳು ನೀರಿನಂತೆ ಸಾಗಿಬಿಡುತ್ತವೆ. ಈ ಅಭ್ಯಾಸವು ನಿಮ್ಮಲ್ಲಿ ಅದ್ಭುತವಾದ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಇಂದಿನ ಕಠಿಣ ಪರಿಶ್ರಮ ನಾಳಿನ ಸುಲಭ ಬದುಕಿಗೆ ದಾರಿ ಮಾಡಿಕೊಡುತ್ತದೆ ಎಂಬ ನಂಬಿಕೆಯಿಂದ ಕಠಿಣ ಸವಾಲನ್ನು ನಗುನಗುತ್ತಾ ಎದುರಿಸಿ. ಶಿಸ್ತನ್ನು ಜೀವನದ ಉಸಿರಾಗಿಸಿಕೊಳ್ಳಿ (Self-Discipline): ಯಶಸ್ಸಿನ ಮಹಾಗೋಡೆಗೆ ಶಿಸ್ತು ಎಂಬುದು ಗಟ್ಟಿಯಾದ ಇಟ್ಟಿಗೆಯಿದ್ದಂತೆ. ಮೂಡ್ ಇದ್ದಾಗ ಮಾತ್ರ ಕೆಲಸ ಮಾಡುವುದು, ಇಲ್ಲದಿದ್ದರೆ ಸೋಮಾರಿಗಳಂತೆ ಕಾಲ ಕಳೆಯುವುದು ಯಶಸ್ವಿ ವ್ಯಕ್ತಿಯ ಲಕ್ಷಣವಲ್ಲ. ಮನಸ್ಸಿಗೆ ಇಷ್ಟ ಇರಲಿ, ಇಲ್ಲದಿರಲಿ, ಮಾಡಬೇಕಾದ ಕೆಲಸವನ್ನು ನಿಖರ ಸಮಯದಲ್ಲಿ ಮಾಡುವುದೇ ನಿಜವಾದ ಶಿಸ್ತು. ಜಗತ್ತಿನ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ದಿನಾಲೂ ನೂರಾರು ಗಂಟೆಗಳ ಕಾಲ ಮೈಮುರಿದು ಕಷ್ಟಪಟ್ಟು ಓಡಿದ್ದರಿಂದಲೇ ಕೇವಲ ಒಂಬತ್ತು ಸೆಕೆಂಡುಗಳಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಯಿತು. ಶಿಸ್ತಿನ ಹಾದಿ ಆರಂಭದಲ್ಲಿ ಮುಳ್ಳಿನ ಬೇಲಿಯಂತೆ ಕಂಡರೂ, ಕೊನೆಯಲ್ಲಿ ಅದು ಹೂವಿನ ತೋಟಕ್ಕೆ ಕರೆದೊಯ್ಯುತ್ತದೆ. ಇಂದಿನ ಕಠಿಣ ಶಿಸ್ತು ನಿಮ್ಮ ನಾಳಿನ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕುತ್ತದೆ. ನಿಮ್ಮ ದಿನಚರಿಯನ್ನು ನೀವೇ ನಿಯಂತ್ರಿಸದಿದ್ದರೆ, ಕಾಲ ನಿಮ್ಮನ್ನು ನಿಯಂತ್ರಿಸಿ ಕಷ್ಟಕ್ಕೆ ದೂಡುತ್ತದೆ. ತಕ್ಷಣದ ಸುಖಕ್ಕೆ ಮಾರುಹೋಗದಿರು (Delayed Gratification): ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ರೀಲ್ಸ್ ನೋಡುವುದು, ವಿಡಿಯೋ ಗೇಮ್ ಆಡುವುದು ಅಥವಾ ಜಂಕ್ ಫುಡ್ ತಿನ್ನುವುದು ನಮ್ಮ ಮನಸ್ಸಿಗೆ ತಕ್ಷಣದ ಸುಖ ನೀಡುತ್ತದೆ. ಆದರೆ, ಈ ತಾತ್ಕಾಲಿಕ ಸುಖಗಳು ದೀರ್ಘಾವಧಿಯಲ್ಲಿ ನಮ್ಮ ಆರೋಗ್ಯ ಮತ್ತು ಭವಿಷ್ಯವನ್ನು ಹಾಳುಮಾಡುತ್ತವೆ. ಇದನ್ನು ‘ಇನ್‌ಸ್ಟೆಂಟ್ ಗ್ರಾಟಿಫಿಕೇಶನ್’ ಎನ್ನುತ್ತಾರೆ. ಸಾಧಕರು ಎಂದಿಗೂ ಇಂತಹ ಕ್ಷಣಿಕ ಸುಖಗಳಿಗೆ ಬಲಿಯಾಗುವುದಿಲ್ಲ. ಅವರು ಇಂದಿನ ಸಣ್ಣ ಸುಖವನ್ನು ತ್ಯಜಿಸಿ, ಭವಿಷ್ಯದ ದೊಡ್ಡ ಯಶಸ್ಸಿನ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಓದುವಾಗ ಮೊಬೈಲ್ ಪಕ್ಕಕ್ಕಿಡುವುದು, ನಾಲಿಗೆಯ ರುಚಿಯನ್ನು ಹತೋಟಿಯಲ್ಲಿಡುವುದು ಕಷ್ಟದ ಕೆಲಸವೇ. ಆದರೆ, ಈ ಕಷ್ಟವನ್ನು ಯಾರು ಇಷ್ಟಪಟ್ಟು ಸಹಿಸಿಕೊಳ್ಳುತ್ತಾರೋ, ಅವರ ಜೀವನದ ಮುಂದಿನ ದಿನಗಳು ಅತ್ಯಂತ ಸುಖಮಯವಾಗಿರುತ್ತವೆ. ಬದುಕಿನ ಕ್ಯಾನ್ವಾಸ್‌ನಲ್ಲಿ ಸುಂದರ ಚಿತ್ರ ಮೂಡಬೇಕಾದರೆ ತಾಳ್ಮೆಯಿಂದ ಶ್ರಮಿಸಬೇಕು.ಸೋಲನ್ನು ಕಲಿಕೆಯ ಮೆಟ್ಟಿಲಾಗಿಸಿ:ಕಷ್ಟದ ಹಾದಿಯಲ್ಲಿ ಸಾಗುವಾಗ ಹೆಜ್ಜೆ ಹೆಜ್ಜೆಗೂ ಸೋಲುಗಳು, ಅಪಮಾನಗಳು ಎದುರಾಗುವುದು ಸಹಜ. ಸೋತ ತಕ್ಷಣ ಕೈಚೆಲ್ಲಿ ಕುಳಿತುಕೊಳ್ಳುವುದು ದುರ್ಬಲ ಮನಸ್ಸಿನ ಸಂಕೇತ. ಜಗತ್ತಿಗೆ ಬೆಳಕು ನೀಡಿದ ಮಹಾನ್ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ದೀಪ ಕಂಡುಹಿಡಿಯುವ ಮುನ್ನ ಸಾವಿರಾರು ಬಾರಿ ಸೋತಿದ್ದರು. ಆದರೆ ಅವರು ಅದನ್ನು ಸೋಲೆನ್ನದೆ, ಬಲ್ಬ್ ಮಾಡಲು ಬಾರದ ಸಾವಿರ ದಾರಿಗಳನ್ನು ಕಲಿತೆ ಎಂದು ಧನಾತ್ಮಕವಾಗಿ ಯೋಚಿಸಿದರು. ಸೋಲು ಎಂಬುದು ನಿಮ್ಮ ಜೀವನದ ಅಂತ್ಯವಲ್ಲ, ಅದು ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಕೃತಿ ನೀಡುವ ಮತ್ತೊಂದು ಅದ್ಭುತ ಅವಕಾಶ. ಸೋತಾಗ ಕುಗ್ಗದೆ, ಅದರಿಂದ ಪಾಠ ಕಲಿತು ಮತ್ತಷ್ಟು ಬಲಿಷ್ಠವಾಗಿ ಮುನ್ನಡೆಯಬೇಕು. ಕಷ್ಟಗಳನ್ನು ಎದುರಿಸಿ ನಿಂತಾಗ ಮಾತ್ರ ಮನುಷ್ಯನ ವ್ಯಕ್ತಿತ್ವ ಪರಿಪೂರ್ಣವಾಗಿ ವಿಕಸನಗೊಳ್ಳುತ್ತದೆ. ಪ್ರತಿದಿನ ೧% ಸುಧಾರಣೆ ಮಾಡಿಕೊಳ್ಳಿ: ಒಂದೇ ದಿನದಲ್ಲಿ ಜಗತ್ತನ್ನು ಬದಲಾಯಿಸಲು ಅಥವಾ ದೊಡ್ಡ ಸಾಧನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಪ್ರತಿದಿನ ನಿಮ್ಮ ಜ್ಞಾನ, ಕೌಶಲ್ಯ, ಆಲೋಚನೆ ಅಥವಾ ಆರೋಗ್ಯದಲ್ಲಿ ಕೇವಲ ಶೇಕಡಾ ಒಂದರಷ್ಟು ಕಷ್ಟಪಟ್ಟು ಸುಧಾರಣೆ ಮಾಡಿಕೊಳ್ಳುವುದು ಖಂಡಿತ ಸಾಧ್ಯ. ದಿನಕ್ಕೆ ಒಂದು ಪುಟ ಓದುವುದು, ದಿನಕ್ಕೆ ಹತ್ತು ನಿಮಿಷ ಹೊಸ ವಿಷಯ ಕಲಿಯುವುದು ಆರಂಭದಲ್ಲಿ ಸಣ್ಣದಾಗಿ ಕಂಡರೂ, ವರ್ಷದ ಕೊನೆಗೆ ಅದು ಮುನ್ನೂರ ಅರವತ್ತೈದು ಶೇಕಡಾದಷ್ಟು ದೊಡ್ಡ ಬದಲಾವಣೆಯನ್ನು ತರುತ್ತದೆ. ಈ ನಿರಂತರ ಪರಿಶ್ರಮವೇ ನಿಮ್ಮನ್ನು ಸಮಾಜದಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಮತ್ತು ಉನ್ನತವಾಗಿ ನಿಲ್ಲಿಸುತ್ತದೆ. ಹನಿ ಹನಿ ಸೇರಿದರೆ ಹಳ್ಳ ಎಂಬಂತೆ, ಇಂದಿನ ನಿಮ್ಮ ಸಣ್ಣ ಸಣ್ಣ ಕಠಿಣ ಪ್ರಯತ್ನಗಳು ನಾಳೆಯ ನಿಮ್ಮ ಬದುಕನ್ನು ಅತ್ಯಂತ ಸುಲಭ ಮತ್ತು ಸುಂದರ ರಾಜಮಾರ್ಗವನ್ನಾಗಿ ಬದಲಾಯಿಸುತ್ತವೆ.”ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂಬ ಹಳೆಯ ಗಾದೆಗಿಂತ, “ಹಾಸಿಗೆಯನ್ನು ದೊಡ್ಡದಾಗಿಸುವ ಕಷ್ಟದ ಹಾದಿಯನ್ನು ಇಂದೇ ಹಿಡಿಯಿರಿ” ಎಂಬ ಹೊಸ ಚಿಂತನೆ ನಮಗಿರಬೇಕು. ಇಂದು ಪಡುವ ಕಷ್ಟ, ನಾಳೆ ನಮಗೆ ರಾಜಮಾರ್ಗವನ್ನು ನಿರ್ಮಿಸಿಕೊಡುತ್ತದೆ. ಆದ್ದರಿಂದ ಇಂದಿನ ಕಠಿಣ ಪರಿಶ್ರಮವನ್ನು ಪ್ರೀತಿಯಿಂದ ಸ್ವೀಕರಿಸೋಣ, ಉಜ್ವಲ ಭವಿಷ್ಯವನ್ನು ನಮ್ಮದಾಗಿಸಿಕೊಳ್ಳೋಣ.

ಜಯಶ್ರೀ ಜೆ ಅಬ್ಬಿಗೇರಿ ಅವರ ಲೇಖನ “ಕಷ್ಟದ ಹಾದಿಯೇ ಸುಖದ ಭವಿಷ್ಯ” Read Post »

ಕಾವ್ಯಯಾನ, ಗಝಲ್

ಜಯಂತಿ. ಕೆ.ವೈ. ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ. ಕೆ.ವೈ. ಗಜಲ್ ಯಾರು ಯಾವಾಗ ಈ ನೆಲಕೆ ವಿದಾಯ ಹೇಳುವರೋ ಗೊತ್ತಿಲ್ಲಯಾವ್ಯಾವ ಕ್ಷಣಗಳನು ಹೇಗೆ ಕಳೆವರೋ ಗೊತ್ತಿಲ್ಲ ಬಾಲ್ಯದಾ  ಚಣಗಳ ಮರೆವರೋ ಗೊತ್ತಿಲ್ಲಅಮ್ಮನಾ ಮಡಿಲು ಮೀರಿ ಬೆಳೆವರೋ ಗೊತ್ತಿಲ್ಲ ಯೌವನದ ಉತ್ಸಾಹದಲಿ    ಎಲ್ಲವನೂ ಸಾಧಿಸುವರೋ ಗೊತ್ತಿಲ್ಲಉಲ್ಲಾಸದ ಚಣಗಳೊಂದಿಗೇಮಾಗುವರೋ  ಗೊತ್ತಿಲ್ಲ ಮಾಗಿದಾ ಹಾಗೆಲ್ಲ  ದಿನವಿಡೀ  ದುಡಿವರೋ ಗೊತ್ತಿಲ್ಲಮರೆಯಾದ ಸಂತೋಷವ ಅರಸುವರೋ ಗೊತ್ತಿಲ್ಲ ದುಡಿತದಲೆ ದಿನ  ಕಳೆದು ಬಿಡುವರೋ  ಗೊತ್ತಿಲ್ಲಸಂತಸವ ಮರೆತು ಬದುಕುವರೋ ಗೊತ್ತಿಲ್ಲ ಕಾಣೆಯಾದ ಆಪ್ತೇಷ್ಟರ ನಲ್ಮೆ ಹುಡುಕುವರೋ  ಗೊತ್ತಿಲ್ಲಹಮ್ಮು ಬಿಮ್ಮುಗಳಲ್ಲಿ ಅವಿತ ಅಕ್ಕರೆಯ ತಡಕಾಡುವರೋ ಗೊತ್ತಿಲ್ಲ ಬದುಕ ಪ್ರೀತಿಯು ಬತ್ತದಂತೆ ಕಾಯ್ದು ಉಳಿಸುವರೋ ಗೊತ್ತಿಲ್ಲ‘ಜಯೂ’ನ ಒಲವ ಒರತೆಯನು ಹೇಗೆ ಚಿಮ್ಮಿಸುವರೋ ಗೊತ್ತಿಲ್ಲ! ಜಯಂತಿ ಕೆ ವೈ

ಜಯಂತಿ. ಕೆ.ವೈ. ಅವರ ಗಜಲ್ Read Post »

You cannot copy content of this page

Scroll to Top