ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ24 ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನ ಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದಮಹಾನ್‌ ಚೇತನ *ಜಯದೇವಿ ತಾಯಿಯವರ ಸಮಾಜಮುಖಿ, ಸಾಹಿತ್ಯಿಕ ಹಾಗೂ ಭಕ್ತಿಮಯ ಬದುಕು*  ಜಯದೇವಿ ತಾಯಿಯವರ ವ್ಯಕ್ತಿತ್ವವು ಕೇವಲ ಕುಟುಂಬದ ಚೌಕಟ್ಟಿನೊಳಗೆ ಸೀಮಿತವಾಗಿರಲಿಲ್ಲ.   ಸಂಸಾರದ ಹೊಣೆ ಹೊತ್ತು… ಸಿದ್ದರಾಮೇಶ್ವರರ ಶ್ರೇಷ್ಠ ಭಕ್ತಿಯಾಗಿ, ತ್ರಿಭಾಷಾ ಪಾಂಡಿತ್ಯವನ್ನು ಪಡೆದು ,ಕನ್ನಡ ಸರಸ್ವತ ಲೋಕದ ಕಣ್ಣಾಗಿ, ಕನ್ನಡಿಗರ ತಾಯಿಯಾಗಿ , ಶ್ರೇಷ್ಠ ಶಿವಶರಣಿಯಾಗಿ ಬದುಕಿ… ಜನಮನಗಳಲ್ಲಿ ಅಳಿಯದ ಛಾಪು ಮೂಡಿಸಿದ ಮುಂದಿನ ಬದುಕನ್ನು ನೋಡೋಣ ಬನ್ನಿ …… *ಸವಿಧಾನ ಜೀವನ| ನೋವು ನಾವುಗೆಲಿದು ಪಾವನ ಬದುಕಿ -ನಂದನವನಲಿದು ಬೇವು ಬೆಲ್ಲಾಗಿ ಸವಿದೇನ*|| ಎನ್ನುತ ಸಮಾಜದ ನೋವು-ನಲಿವುಗಳಿಗೆ ಸದಾ ಸ್ಪಂದಿಸುತ್ತಿದ್ದ ಜಯದೇವಿ ತಾಯಿಯವರು ಅನೇಕ ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಬಡವರು, ನಿರ್ಗತಿಕರು, ಮಹಿಳೆಯರು ಹಾಗೂ ಯುವಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದರು. ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಶಿಕ್ಷಣ ಮತ್ತು ಸಂಸ್ಕಾರಗಳು ಬೆಳೆಯಬೇಕು ಎಂಬ ಆಶಯದಿಂದ ಹಲವು ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ವಿಶಿಷ್ಟವಾದುದು. ಜೀವನದ ಅನುಭವಗಳು, ಭಕ್ತಿ, ಸಾಮಾಜಿಕ ಚಿಂತನೆಗಳು ಮತ್ತು ಸ್ತ್ರೀ ಸಂವೇದನೆಗಳನ್ನು ತಮ್ಮ ಕೃತಿಗಳ ಮೂಲಕ ಜನರಿಗೆ ತಲುಪಿಸಿದರು. ಅವರ ಬರಹಗಳು ಕೇವಲ ಓದಿಗಾಗಿ ಅಲ್ಲ, ಬದುಕಿಗೆ ದಾರಿದೀಪವಾಗುವಂತಿದ್ದವು. ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಅವರ ಅಪಾರ ಪ್ರೀತಿಯು ಅನೇಕ ಮೌಲಿಕ ಕೃತಿಗಳ ಸೃಷ್ಟಿಗೆ ಕಾರಣವಾಯಿತು. *ಬರದೇನೆನ್ನುವ ಭಾವ| ಬರಿತಾಯ್ತೆನಗವ್ವ ಕರೆದೇನೆನ್ನುವ ಭಕುತಿ ಬಯಲಾಯ್ತ- ತಾಯವ್ವಕೊರಗೇನೆಂಬುವ ಮನ ಮಾಯಾಯಿತು||* ಎನ್ನುತ  ಶ್ರೀ ಸಿದ್ದರಾಮೇಶ್ವರಲಿ ಅಪಾರ ಭಕ್ತಿಯ ಲೀನರಾಗಿದ್ದರು. ಭಕ್ತಿ ಎಂದರೆ ಕೇವಲ ಪೂಜೆ-ಪುನಸ್ಕಾರಗಳಲ್ಲ, ಸಮಾಜ ಸೇವೆಯೇ ನಿಜವಾದ ದೇವರ ಸೇವೆ ಎಂಬ ತತ್ವವನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು .*ಕೃಪೆ ಮಾಡಿ ಎನಗೆ | ಶ್ರೀಪಾದವ ತೋರಿದನುಉಪಮೀಸ ಬಾರದ ಸಂತಸ -ಗೊಳಿಸಿದಆ ಪರಬ್ರಹ್ಮನಿಗೆ ಶರಣೆಂಬೆ||* ಎನ್ನುವಂತೆ ಸಮಾಜ ಸೇವೆಯೇ ದೇವರ ಸೇವೆಯಂತೆ ಸ್ವೀಕರಿಸಿದರು.ಸಿದ್ದರಾಮರ ಆದರ್ಶಗಳಾದ ದಾಸೋಹ, ಕಾಯಕ, ಸಮಾನತೆ ಮತ್ತು ಮಾನವ ಪ್ರೇಮವನ್ನು ತಮ್ಮ ಬದುಕಿನ ಮೂಲಕ ಸಾಕಾರಗೊಳಿಸಲು ಪ್ರಯತ್ನಿಸಿದರು.  ಈಗ ಒಂದೊಂದಾಗಿ ತಿಳಿದುಕೊಳ್ಳೋಣ. ಅವರ ಬದುಕಿನ ಅಧ್ಯಾಯಗಳು ನಿಸ್ವಾರ್ಥ ಸೇವೆ, ಆಧ್ಯಾತ್ಮಿಕತೆ ಮತ್ತು ಜನಪರ ಕಾಳಜಿಯ ಅಮೂಲ್ಯ ಕಥನಗಳಾಗಿವೆ.ಆದರ್ಶ ಗೃಹಿಣಿ, ಸಮಾಜಸೇವಕಿ, ಸಾಹಿತಿ ಮತ್ತು ಶ್ರೇಷ್ಠ ಭಕ್ತೆಯಾಗಿ ಜಯದೇವಿ ತಾಯಿಯವರು ನಡೆಸಿದ ಬದುಕು ಬಹುಮುಖ ಸಾಧನೆಯ ಪ್ರತೀಕವಾಗಿದೆ. *ಬಿಂಕಿನ ಮಾತಿಲ್ಲ ಕೊಂಕೀನ ನುಡಿಯಲ್ಲಕಿಂಕರಳ ಕೂಗು ಕೇಳಿರಿ,- ಶರಣರಲೆಂಖಿನ ನಾ ನೋಡಿ ನಂಬೀದ* ಎನ್ನುತ ಕಿಂಕರರಲಿ ಕಿಂಕರಳಾಗಿ ಕನ್ನಡಾಂಬೆಯ   ಸೇವೆಯಲ್ಲಿ ಜನಸೇವೆಯಲ್ಲಿ ತೊಡಗಿದರು.  ೧೯೪೯ರಲ್ಲಿ ಕಲ್ಬುರ್ಗಿಯಲ್ಲಿ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ೩೨ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು* ಶ್ರೀ ಉತ್ತಂಗಿ ಚನ್ನಪ್ಪನವರು* ಅಧ್ಯಕ್ಷತೆ ವಹಿಸಿದ್ದರು. ಇಲ್ಲಿ ತಾಯಿಯವರು ಮಹಿಳಾ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದರು. ೧೯-೨-೧೯೫೦ ರಂದು ಸೊಲ್ಲಾಪುರದಲ್ಲಿ ೩೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು ಇಲ್ಲಿ ಶ್ರೀ ಎಂ ಆರ್ ಶ್ರೀ ಅವರ ಅಧ್ಯಕ್ಷತೆ ವಹಿಸಿದ್ದರು. ಅಲ್ಲಿ ಮಹಿಳಾಪರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮುಂದೆ ೨೫-೧೨-೧೯೫೦ರಂದು ಮುಂಬೈಯಲ್ಲಿ ೩೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು ಇಲ್ಲಿ ರಾಷ್ಟ್ರಕವಿ* ಶ್ರೀ ಮಂಜೇಶ್ವರ ಗೋವಿಂದ ಪೈ *ಅವರು ಅಧ್ಯಕ್ಷತೆ ವಹಿಸಿದ್ದರು. ಇಲ್ಲಿಯೂ ಕೂಡ ಮಹಿಳೆಯರ ಸಮಾರಂಭಕ್ಕೆ ಅಧ್ಯಕ್ಷತೆ ವಹಿಸಿದ್ದರು.ಈ ಮೂರು ಸಮ್ಮೇಳನಗಳ ಮಹಿಳಾ ಗೋಷ್ಟಿಯಲ್ಲಿ ಜಯದೇವಿ ತಾಯಿಯವರು ಅಧ್ಯಕ್ಷತೆ ವಹಿಸಿದ್ದರು. ಜಯದೇವಿ ತಾಯಿಯವರ ಶಿಕ್ಷಣ ಕ್ರಾಂತಿ  ಸೊಲ್ಲಾಪುರದ ಇತಿಹಾಸದಲ್ಲೊಂದು ಸುವರ್ಣ ಅಧ್ಯಾಯ.೧೯೪೯ನೇ ವರ್ಷ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇನ್ನೂ ಕೆಲವು ವರ್ಷಗಳಷ್ಟೇ ಆಗಿದ್ದವು. ಸಮಾಜದಲ್ಲಿ ಬಡತನ, ಅಸಮಾನತೆ ಮತ್ತು ನಿರಕ್ಷರತೆ ವ್ಯಾಪಕವಾಗಿದ್ದ ಕಾಲ ಅದು. ವಿಶೇಷವಾಗಿ ಗಿರಣಿಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಕಾರ್ಮಿಕರು ಹಾಗೂ ದಲಿತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಜೀವನೋಪಾಯಕ್ಕಾಗಿ ದಿನವಿಡೀ ದುಡಿಯಬೇಕಾಗಿದ್ದ ಕಾರಣ ಅವರಿಗೆ ಶಾಲೆಯ ಮುಖವೇ ಕಾಣುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಜಯದೇವಿ ತಾಯಿಯವರು ಸಮಾಜದ ತಳಮಳವನ್ನು ಕಂಡು “ಶಿಕ್ಷಣವೇ ಬದುಕಿನ ಬೆಳಕು” ಎಂಬ ದೃಢ ನಂಬಿಕೆಯೊಂದಿಗೆ ಅವರು ಒಂದು ಮಹತ್ತರ ಸಾಮಾಜಿಕ ಚಳವಳಿಗೆ ಚಾಲನೆ ನೀಡಿದರು….. ಯಾವುದೇ ದೊಡ್ಡ ಕಟ್ಟಡವಿಲ್ಲ, ಸರ್ಕಾರದ ನೆರವಿಲ್ಲ. ಆದರೆ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಮತ್ತು ಮಾನವೀಯತೆ ಅವರಲ್ಲಿತ್ತು.ತಮ್ಮ ಮನೆಯ ಆವರಣದಲ್ಲಿಯೇ ಒಂದು ಸಣ್ಣ ಶಾಲೆಯನ್ನು ಆರಂಭಿಸುವ ಮೂಲಕ ಅವರು ಶಿಕ್ಷಣ ಯಜ್ಞಕ್ಕೆ ನಾಂದಿ ಹಾಡಿದರು. ಗಿರಣಿಯಲ್ಲಿ ದುಡಿಯುತ್ತಿದ್ದ ಸುಮಾರು ೩೦,೦೦೦ ಕಾರ್ಮಿಕರ ಕುಟುಂಬಗಳ ಮಕ್ಕಳು ಹಾಗೂ ದಲಿತ ಸಮುದಾಯದ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಕನಸನ್ನು ಕಂಡರು.ಆರಂಭದಲ್ಲಿ ಕೆಲವು ಅಡೆತಡೆಗಳು ಬಂದರೂ ತಾಯಿಯವರ ಪ್ರೀತಿ, ತಾಳ್ಮೆ ಮತ್ತು ಸೇವಾ ಭಾವದಿಂದ ಆ ಪ್ರಯತ್ನ ಬೇಗನೆ ಜನಮನ ಗೆದ್ದಿತು. ನಂತರ* ಕಾರ್ಮಿಕ ಸಾಕ್ಷರತಾ ಸಮಿತಿಯ* ಸಹಯೋಗದೊಂದಿಗೆ ವಿವಿಧ ಪ್ರದೇಶಗಳಲ್ಲಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲು ಮುಂದಾದರು. ಮೊದಲಿಗೆ ೨೫ ಕೇಂದ್ರಗಳು ಆರಂಭವಾದವು.  ಕೇಂದ್ರಗಳಲ್ಲಿ ಮಕ್ಕಳ ಜೊತೆಗೆ ಅಕ್ಷರಜ್ಞಾನವಿಲ್ಲದ ಕಾರ್ಮಿಕರಿಗೂ ಓದು-ಬರಹ ಕಲಿಸಲಾಗುತ್ತಿತ್ತು. ಶಿಕ್ಷಣವನ್ನು ಸಮಾಜದ ಕೊನೆಯ ವ್ಯಕ್ತಿಗೂ ತಲುಪಿಸಬೇಕು ಎಂಬುವದು ಅವರ ಉದ್ದೇಶವಾಗಿತ್ತು. ತಾಯಿಯವರ ಪರಿಶ್ರಮ ಮತ್ತು ಜನರ ವಿಶ್ವಾಸದಿಂದ ಈ ಚಳವಳಿ ದಿನದಿಂದ ದಿನಕ್ಕೆ ವಿಸ್ತರಿಸಿತು. ೨೫ ಕೇಂದ್ರಗಳಾಗಿದ್ದವು ಮುಂದೆ ೧೨೫  ಶಿಕ್ಷಣ ಕೇಂದ್ರಗಳಾಗಿ ಬೆಳೆದವು. ಸಾವಿರಾರು ಮಕ್ಕಳು ಮತ್ತು ವಯಸ್ಕರು ಈ ಕೇಂದ್ರಗಳ ಮೂಲಕ ಅಕ್ಷರಜ್ಞಾನ ಪಡೆದರು. ಶಿಕ್ಷಣದ ಬೆಳಕು ಮನೆಮನೆಗೂ ಹರಡಿತು.ಈ ಕಾರ್ಯ  ಶಾಲೆಗಳನ್ನು ಆರಂಭಿಸಿದ ಸಾಧನೆಯೊಂದಿಗೆ….*ಅದು ಸಮಾಜ ಪರಿವರ್ತನೆಯ ಚಳವಳಿಯಾಗಿತ್ತು. * ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳಿಗೆ ಹೊಸ ಭವಿಷ್ಯಕೆ ದಾರಿ ಮಾಡಿಕೊಟ್ಟರು  ಬಡವರ ಮನೆಗಳಲ್ಲಿ ಆಶಾಕಿರಣ ಮೂಡಿಸಿದ ಪ್ರಯತ್ನವಾಗಿತ್ತು. ಅನೇಕ ಕುಟುಂಬಗಳ ಬದುಕಿನ ದಿಕ್ಕನ್ನೇ ಬದಲಿಸಿದ ಮಹಾನ ಸೇವೆಯಾಗಿತ್ತು.ಆದ್ದರಿಂದಲೇ ಜಯದೇವಿ ತಾಯಿಯವರು ಕೈಗೊಂಡ ಶೈಕ್ಷಣಿಕ ಅಭಿಯಾನ ಸೊಲ್ಲಾಪುರದ ಶೈಕ್ಷಣಿಕ ಇತಿಹಾಸದಲ್ಲೇ ಒಂದು ದಾಖಲೆಯ ಸಾಧನೆಯಾಗಿ ಗುರುತಿಸಲ್ಪಟ್ಟಿದೆ.  ಒಬ್ಬ ಮಹಿಳೆ ತನ್ನ ಮನೆಯ ಆವರಣದಲ್ಲಿ ಆರಂಭಿಸಿದ ಸಣ್ಣ ಶಿಕ್ಷಣ ಸೇವೆ ಮುಂದೆ ೧೨೫ ಕೇಂದ್ರಗಳ ಮಹಾ ಚಳವಳಿಯಾಗಿ ಬೆಳೆದು ಸಾವಿರಾರು ಜನರ ಬದುಕನ್ನು ಬೆಳಗಿಸಿತು ಎಂಬುದು ನಿಜಕ್ಕೂ ಅಪೂರ್ವ ಸಾಧನೆ.ಜಯದೇವಿ ತಾಯಿಯವರ ಈ ಕಾರ್ಯ ನಮಗೆ ಶಿಕ್ಷಣದ ಮಹತ್ವವನ್ನು ಯಾವ ರೀತಿಯಲ್ಲಿ, ಒಬ್ಬ ವ್ಯಕ್ತಿಯ ಸಂಕಲ್ಪ ಸಮಾಜದ ಇತಿಹಾಸವನ್ನೇ ಬದಲಾಯಿಸಬಲ್ಲದು ಎಂಬುದನ್ನೂ ಸಾರುತ್ತದೆ. ಅವರ ಜೀವನವು ಸೇವೆ, ತ್ಯಾಗ ಮತ್ತು ಶಿಕ್ಷಣದ ಮೂಲಕ ಸಮಾಜೋತ್ಥಾನ ಮಾಡಿದ  ಆದರ್ಶದ ಪ್ರತೀಕವಾಗಿದೆ. ಶಿಕ್ಷಣವು ಎಲ್ಲರಿಗೂ ಲಭಿಸಬೇಕು, ಸಮಾನತೆಯನ್ನು ಮೂಡಿಸಬೇಕು ಅನ್ನುವ ಉದ್ದೇಶ ಶಿಕ್ಷಣದ ತಳಹದಿಯಾಗಿರಬೇಕು ಅನ್ನುತ್ತಿದ್ದರು. *ಜಗವು ಒಂದಾಗಲಿ |ನಗುತ ಕೈಗೂಡಿಸಿರಿಬಗೆಯಲಿ ಅಣ್ಣತಮ್ಮರಂತೆ ಲೋಕದಿಹಗೆ ಎಂಬ ಭಾವ ಅಳಿಯಲಿ||* (ಮುಂದುವರೆಯುವುದು) ಸವಿತಾ ದೇಶಮುಖ

Read Post »

ಕಾವ್ಯಯಾನ

ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.”

ಕಾವ್ಯ ಸಂಗಾತಿ ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.” ಭೂಪಟದ ಗೆರೆಗಳಲಿರಕ್ತದ ಕಲೆಗಳ ಹಸಿವು,ಅಧಿಕಾರದ ಅಮಲಿಗೆಅನಾಥ ಮಗುವಿನ ಅಳುವೇ ನೈವೇದ್ಯ, ಉಕ್ಕಿನ ಹಕ್ಕಿಗಳ ಅಬ್ಬರಕೆಮಣ್ಣಾದವು ಬದುಕು,ಗೆಲುವಿನ ಪಟಾಕಿ ಅಡಿಯಲ್ಲಿಹೂತುಹೋದವು ಸಾವಿರ ಉಸಿರು, ತುತ್ತು ಅನ್ನದ ಪಾತ್ರೆಯಲಿಬೆಂದು ಹೋದವು ಮದ್ದು-ಗುಂಡು,ಮನೆಮಠದ ನೆನಪುಗಳಿಗೆಈಗ ಸ್ಮಶಾನವೇ ಕಡೆಯ ಉಡುಗೊರೆ, ದೇಶಪ್ರೇಮದ ಘೋಷಣೆಯಲಿಕಾಣದಾದವು ಒಲವಿನ ಕಣ್ಣು,ಯುದ್ಧದ ಬೂದಿಯಲಿ ಉಳಿದದ್ದುಬರಿಯ ಬೂದುಬಣ್ಣದ ಮಣ್ಣು, ಗಡಿ ದಾಟದ ಕನಸುಗಳಿಗೆಬಾಂಬುಗಳೇ ಅಂತಿಮ ವಿರಾಮ,ಗೆದ್ದವನ ಅಟ್ಟಹಾಸದಲಿಸತ್ತವನ ಹೆಸರಿಗಿಲ್ಲ ಆರಾಮ, ಬಂಕರಿನ ಕತ್ತಲಲಿ ಬಿಕ್ಕಳಿಸುತಿದೆ ಬಾಲ್ಯ,ಸಮಾಧಿಯ ಮೇಲೆ ನಿಂತು ನಗುತ್ತಿದೆ ಸಾಮ್ರಾಜ್ಯ;ಗೆದ್ದವನ ಇತಿಹಾಸದಲಿ ರಕ್ತದ ವಾಸನೆ,ಸತ್ತವನ ಮನೆಯಲಿ ಬರಿ ಗೋಡೆಯ ಮೌನ ರೋಧನೆ…. ನಾಮದೇವ ಕಾಗದಗಾರ

ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.” Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್ ಮುಂಗಾರಿನ ಕರಿ ಮುಗಿಲು ಜಲಧಾರೆಯ ಸುರಿಸುತಿದೆ ನೋಡಾಇಳೆಯ ಮೊಗದಿ ನಗೆ ಮೊಗ್ಗು ಬಿರಿದು ಕಂಪು ಹರಡುತಿದೆ ನೋಡಾ ನೀಲಿ ಆಕಾಶದಿ ನೇಸರ ಮೂಡಿಸಿದ ಹೊಂಬಣ್ಣದ ಹೊನಲುಪ್ರಕೃತಿ ಮಡಿಲಲಿ ಮುಂಜಾವು ಪಕ್ಷಿಗಳ ಗಾನ ಕೇಳುತಿದೆ ನೋಡಾ ಒಲವಿನ ಚೈತ್ರ ಬರುವಿಗೆ ಬನವು ಹಸಿರುಟ್ಟು ಹೂ ಅರಳಿಸಿದೆನಿಸರ್ಗದ ಸೊಬಗು ಪ್ರೇಮಿಯ ಎದೆಯವೀಣೆ  ಮಿಡಿಯುತಿದೆ ನೋಡಾ ಧಾರಿಣಿಯ ಹೃದಯ ಸೂರ್ಯ ಕೋಪಕೆ ನಲುಗಿ ನರಳುತಿದೆ  ಮೌನದಿಬಿದ್ದ ಮಳೆಯ ರಭಸಕೆ ನದಿಯು ಕಡಲಾಗಿ ಮೊರೆಯುತಿದೆ ನೋಡಾ ಬೀಸುವ ಸುಳಿಗಾಳಿ ಪಾರಿಜಾತದ  ಪರಿಮಳ ತರುತಿದೆ ಸಂಜೆಇರುಳು ತಿರುಗುವ ತಿರೆಯಲಿ ಚಂದ್ರ ಪ್ರಭೆಯು ಕಾಣುತಿದೆ‌ ನೋಡಾ ( ಸಂಜು ಕೋಳೂರ ಹಳಿಯಾಳ ರಾಗಸಂಯೋಜನೆ ಮಾಡಿದ್ದಾರೆ ) ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ “ಹಸಿರು ತೇರು”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ “ಹಸಿರು ತೇರು” ಹಸಿರು ತೇರು ಹೊರಟಿದೆ,ಭುವಿಯೆಲ್ಲ ಹಬ್ಬವಾಗಿದೆ;ಮರದ ನೆರಳು ಹರಡಿದೆ,ಮನದೊಳಗೆ ಮುದತಂದಿದೆ. ಗಿಡವ ನೆಟ್ಟು ಬೆಳಸೋಣ,ಗಿರಿಯ ಸೊಬಗು ಉಳಿಸೋಣ;ನದಿಯ ನಗುವು ಕೇಳೋಣ,ನಾಳೆಯ ಬದುಕು ಕಾಪಾಡೋಣ. ಎಲೆಯ ನಾದವು ವೀಣೆಯದು,ಹೂವಿನ ಪರಿಮಳ ಗೀತೆಯದು;ಹಕ್ಕಿಯ ಕಲರವ ವೇದವದು,ಪ್ರಕೃತಿಯ ಮಡಿಲೇ ಸ್ವರ್ಗವದು. ಮಳೆ ಸುರಿಯಲು ಕಾಡಿರಬೇಕು,ಕಾಡು ಬೆಳೆಯಲು ನಾವಿರಬೇಕು;ಉಸಿರು ಉಳಿಯಲು ಮರವಿರಬೇಕು,ಜಗವು ಉಳಿಯಲು ಹಸಿರಿರಬೇಕು. ಬನ್ನಿ ಎಲ್ಲರು ಕೈಜೋಡಿಸಿ,ಭೂಮಿತಾಯಿಯ ಪ್ರೀತಿಗೋಸ್ಕರ;ಹಸಿರು ತೇರನು ಎಳೆಯೋಣ,ಭವ್ಯ ಭವಿಷ್ಯವ ಕಟ್ಟೋಣ. ಹಸಿರು ನಮ್ಮ ಉಸಿರಾಗಲಿ,ಹಸಿರು ನಮ್ಮ ಹೆಸರಾಗಲಿ;ಹಸಿರು ತೇರು ಸಾಗುತಿರಲಿ,ಭುವಿಯೆಲ್ಲ ನಗುತಿರಲಿ. ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ “ಹಸಿರು ತೇರು” Read Post »

ಕಾವ್ಯಯಾನ

ಆದಪ್ಪ ಹೆಂಬಾ ಅವರ ಕವಿತೆ “ಜಗದೊಡೆಯಮುನಿದರೇ….”

ಕಾವ್ಯ ಸಂಗಾತಿ ಆದಪ್ಪ ಹೆಂಬಾ “ಜಗದೊಡೆಯಮುನಿದರೇ….” ಇನಿತು ಮುನಿಯದೆಎನಿತು ದಣಿಯದೆನಗುತಲಿಹನು ನೇಸರಹೊನ್ನ ಬೆಳಕುಅರುಣ ಕಿರಣಚೆಲ್ಲುತಿಹನು ದಿನಕರ|| ಮತಿಹೀನ ಮನುಜಭೂಮಾತೆಯ ತನುಜಅಮ್ಮನೆಂಬುದ ನೋಡದೇಹೊನ್ನ ಮಣ್ಣನು ಅಗೆಯುತಲಿರುವೆಹಸಿರು ವನಸಿರಿಯ ಬಗೆಯುತಲಿರುವೆಬೆತ್ತಲಾಗುತಿಹಳು ಅಮ್ಮ ನಿನಗಿನ್ನು ಕಾಣದೆ|| ಜಗವ ಬೆಳಗುವಅವನ ಕಣ್ಣಿಗೇ ಮಣ್ಣಂತೆಕಾಣಲೊಲ್ಲದು ತಿಳಿಯಲೊಲ್ಲದುನಿಮ್ಮಗಳ ಕಪ್ಪು ರಂಗಿನಾಟಕೊಂಚ ತಾಳಿಪಾಪದ ಫಲ ಉಣ್ಣುವಿರಂತೆ|| ನೇಸರನೊಬ್ಬಮಹಾ ಮರೆಗುಳಿನಿತ್ಯ ಬರುವನುಎಲ್ಲವ ಮರೆತುಮತ್ತೆ ಮುಳುಗುವನುಬೇಸರದಿ ಮುನಿದು|| ಜಗದೊಡೆಯ ಮುನಿದರೆಉಳಿಗಾಲ ನಮಗಿಲ್ಲಯೋಚಿಸಿ ಮುಂದಡಿ ಇಡಿಮಿಂಚಿ ಹೋದರೆ ಕಾಲಚಿಂತಿಸಿಯೂ ಫಲವಿಲ್ಲ|| ಇಂದಿದೆಯೋಮುಂದಿದೆಯೋಎಂದಿದೆಯೋಮನುಕುಲದ ಮಾರಿಹೋಮತಿಳಿದೇಳು ಸಿಡಿದೇಳು ಕೂಗೇಳುತಡೆಯೋಣ ಭೂರಮೆಯ ನಾಶವನ್ನ|| ಆದಪ್ಪ ಹೆಂಬಾ

ಆದಪ್ಪ ಹೆಂಬಾ ಅವರ ಕವಿತೆ “ಜಗದೊಡೆಯಮುನಿದರೇ….” Read Post »

ಕಾವ್ಯಯಾನ

ತೇಜಾವತಿ .ಎಚ್ .ಡಿ. ಅವರ ಕವಿತೆ “ಸೀಮೆ ಜಾಲಿ”

ಕಾವ್ಯ ಸಂಗಾತಿ ತೇಜಾವತಿ .ಎಚ್ .ಡಿ. “ಸೀಮೆ ಜಾಲಿ” ಅಂಕುಡೊಂಕಾದ ಕರಿ ನಾಗರಗಳಾಗಿಉದಯರಶ್ಮಿಗೆ ಮೈಯೊಡ್ಡಿರುವರಸ್ತೆಯ ಇಕ್ಕೆಲಗಳಲ್ಲಿದಶದಿಕ್ಕಿಗೂ ಕಬಂಧ ಬಾಹುಗಳನ್ನು ಚಾಚಿರುವಸಾಲು ಸಾಲು ಸೀಮೆಜಾಲಿಯ ಮರಗಳುಮೈತುಂಬಾ ಮುಳ್ಳು, ಕೆಸರು ದುರ್ನಾತ ಅವುಗಳ ನಡುವಲ್ಲೊಂದು ಪುಟ್ಟ ರಾಯಸಕ್ಕರಿ ಮರ ತಲೆಯೆತ್ತಿ ನಿಂತು ಸೂರ್ಯನೆಡೆಗೆ ಮುಖಮಾಡಿ ಕಂಗೊಳಿಸಿಚಿಗುರು ಹೂ ಮಿಡಿ ಕಾಯಿಹಣ್ಣು ತೊಟ್ಟು ಹಸಿರು ಉಟ್ಟು ಸಂಭ್ರಮಿಸಿದೆ ಅದೇ ಕೊಳಕು ಅದೇ ಕೆಸರು ಅದೇ ಗಾಳಿ ಅದೇ ಬಿಸಿಲನ್ನು ಉಂಡುಬರಡು ಭೂಮಿಯಲ್ಲಿ ತಂಪೆರೆದು ಅತ್ಮಾಭಿಮಾನವ ಸೂಸುತ್ತಿದೆಪರಿಸರದ ಹಂಗು ತೊರೆದು ಸುತ್ತಲಿದ್ದರೇನಂತೆ ಸೀಮೆಜಾಲಿ ಮುಳ್ಳು ಕಳ್ಳಿ ತಾನು ಮಧುಫಲವನ್ನೇ ನೀಡುವೆನೆಂದುಭೀಷ್ಮಪ್ರತಿಜ್ಞೆ ಮಾಡಿದೆಮುಳ್ಳಿನ ನಡುವೆ ಸುಳಿವ ಹೂಗಳಿಗೆ ಅಲ್ಲಿಂದಲೇ ಹರಕೆಯ ಕೊಟ್ಟಿದೆ ಜಾಲಿಯ ಮರದಾಗಗುಬ್ಬಿ ಗೂಡು ಕಟ್ಟಲಿಕಟ್ಟಿದ ಗೂಡು ನೂರಾಗಿಹಕ್ಕಿಗಳ ಬಾಳು ಹಸನಾಗಲಿ ಹಸನಾದ ಬದುಕು ಹೊನ್ನಾಗಿ ಸುಡು ಬಿಸಿಲ ಈ ನಾಡು ತಂಪಾಗಲಿ ತೇಜಾವತಿ .ಎಚ್ .ಡಿ. ಕ

ತೇಜಾವತಿ .ಎಚ್ .ಡಿ. ಅವರ ಕವಿತೆ “ಸೀಮೆ ಜಾಲಿ” Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ “ನೀಲಿ ನೀಲಿ ಆಕಾಶ”

ಕಾವ್ಯಸಂಗಾತಿ ಮನ್ಸೂರ್ ಮುಲ್ಕಿ “ನೀಲಿ ನೀಲಿ ಆಕಾಶ” ನೀಲಿ ನೀಲಿ ಆಕಾಶ ಚುಕ್ಕಿಗಳಿಲ್ಲದೆ ಹೊಳೆಯುವುದೇಸೂರ್ಯನು ಕೊಡದಿರೆ ಆ ಶಾಖ ಚಂದಿರ ಸುಮ್ಮನೆ ಹೊಳೆಯುವನೇ ಹೂವುಗಳಿರದ ತೋಟಗಳು ಪರಿಮಳ ಬೀರಲು ಸಾಧ್ಯವೇಜೇನುಗಳಿರುವ ಗೂಡಿನಲಿ ಸಿಹಿಗಳು ಸಿಗದೇ ಇರುವುದೇ ಪ್ರೀತಿಯೇ ಇರದ ಹೃದಯದಲಿ ನಗುವನ್ನು ಕಾಣಲು ಸಾಧ್ಯವೇನಂಬಿಕೆ ಇಲ್ಲದ ಬದುಕಿನಲಿ ನೆಮ್ಮದಿ ಹುಡುಕಲು ಸಾಧ್ಯವೇ ವಿಶ್ವಾಸದ ನಡೆಯಲಿ ಬೆರೆತಾಗ ಜೀವನ ಸಾರ್ಥಕ ಆಗದೇಸೃಷ್ಟಿಗಳೆಲ್ಲ ಹೇಳುವುದು ಶಾಶ್ವತವಾದ ಸತ್ಯವೇ ನದಿಯು ಸಾಗರ ಸೇರದೆ ಭೂಮಿಯ ಒಡಲಲ್ಲಿ ನಿಲ್ಲುವುದೇಗಾಳಿಯು ಸನಿಹಕ್ಕೆ ಬರದಿರಲು ಉರಿಯುವ ದೀಪವು ಕೂಡ ಶಾಶ್ವತವೇ ಪ್ರೀತಿ ಇರದ ಮನುಜನಲಿ ಬದುಕಿನ ಅರ್ಥವು ತಿಳಿಯುವುದೇನ್ಯಾಯದ ಬದುಕೇ ಜಗದ ನಿಯಮ ಎಂದು ಮನುಜನು ಅರಿಯುವನೇ ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ “ನೀಲಿ ನೀಲಿ ಆಕಾಶ” Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು” ತಿರುಗಿ ಬಾರದ  ಪುಟಗಳು,ನೆನಪಿನ ಬಂಡಿಯಲಿ ಮರೆ ಕ್ಷಣಗಳು,ಚಿನ್ನದ ರಥದಲ್ಲಿ ಓಡಿದ  ಬಾಲ್ಯ,ಇಂದಿನ ನೆನಪಲಿ ಅರಳಿದ ಕಾವ್ಯ. ಕೆಸರಲಿ ಹೊರಳಾಡಿದ  ದಿನಗಳು,ಹಸಿರಲಿ ಓಡಿದ  ಹೆಜ್ಜೆಗಳು,ಅಮ್ಮನ ಮಡಿಲ ಸವಿ ನಿದ್ದೆಯ ಸುಖ, ಇಂದು ಬರಿ ನೆನಪಿನ ಮುಖ. ಗೆಳೆಯರ ಜೊತೆಗೂಡಿ ನಕ್ಕ  ದಿನಗಳು,ಕಾಗದದ ದೋಣಿ ತೇಲಿದ ದಿನಗಳು,ಚಿಂತೆಯಿಲ್ಲದ ನಿರಾತಂಕದ ನಗೆ,ಮರಳಿ ಬಾರದು  ಸಂಭ್ರಮ ಜಗತ್ತಿನೆಡೆಗೆ. ಕಾಲ ಚಕ್ರ ಉರುಳುತ ಸಾಗಿದೆ,ವರ್ತಮಾನದ ಬದುಕು ಯಾಂತ್ರಿಕ,ಹಳೆಯ ದಿನಗಳ ನೆನೆದ ಮನಕೆ, ಮಧುರ ಮೌನ ಆವರಿಸಿದೆ ತನಗೆ. ಹಿಂತಿರುಗಿ ನೋಡಿದೆ  ನೆನಪಿನ ಸಾಲು,ಕಳೆದು ಹೋದ  ದಿನಗಳು ಜೀವನದ ಹಾಲು.ಬಾಲ್ಯ ಯೌವನ ಮುಪ್ಪು  ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು” Read Post »

ನಿಮ್ಮೊಂದಿಗೆ

“ಇಂದಿರಾ ಲಂಕೇಶ್ ನಿಧನ”

ವ್ಯಕ್ತಿ ಸಂಗಾತಿ ಇಂದಿರಾ ಲಂಕೇಶ್ ನಿಧನ “ಹುಳಿ ಮಾವು ಮತ್ತು ನಾನು” ಕೃತಿಯ  ಲೇಖಕಿ ಮತ್ತು ಸಾಹಿತಿ ,ಪತ್ರಕರ್ತ  ಪಿ. ಲಂಕೇಶ್ ಅವರ ಧರ್ಮಪತ್ನಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ಇಂದು  ನಿಧನರಾಗಿದ್ದಾರೆ.  ‘ಲಂಕೇಶ್ ಪತ್ರಿಕೆ’ಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಅವರು, ‘ಹುಳಿಮಾವು ಮತ್ತು ನಾನು’ ಕೃತಿಯ ಮೂಲಕವೂ ಗುರುತಿಸಿಕೊಂಡಿದ್ದರು. ಕನ್ನಡ ಸಾರಸ್ವತ ಲೋಕದ ಮಹತ್ವದ ಲೇಖಕ ,  ಹಿರಿಯ ಪತ್ರಕರ್ತ ಹಾಗೂ ಖ್ಯಾತ ಬರಹಗಾರ ಪಿ. ಲಂಕೇಶ್ ಅವರ ಧರ್ಮಪತ್ನಿ, ಲೇಖಕಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ಸೋಮವಾರ (ಜೂನ್ 15, 2026) ಮುಂಜಾನೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.  ಬೆಂಗಳೂರಿನ ರಾಜಾಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದು, ಇವರ ನಿಧನದಿಂದ ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಒಂದು ಮಹತ್ವದ ಪರಂಪರೆಯ ಕೊಂಡಿ ಕಳಚಿದಂತಾಗಿದೆ.  ಗೌರಿ ಲಂಕೇಶ್ ( ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ) ,ಕವಿತಾ ಲಂಕೇಶ್ (ಚಿತ್ರನಿರ್ದೇಶಕಿ), ಇಂದ್ರಜಿತ್ ಲಂಕೇಶ್ (ಚಿತ್ರನಿರ್ದೇಶಕ ಹಾಗೂ ಪತ್ರಕರ್ತ) ಸೇರಿದಂತೆ ಅಪಾರ ಬಂಧು-ಮಿತ್ರರು ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ತಾಯಿ ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ, ಸಾಹಿತ್ಯ ಹಾಗೂ ಚಲನಚಿತ್ರ ರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಲಂಕೇಶ್ ಪತ್ರಿಕೆಯ ಯಶಸ್ಸಿನ ಹಿಂದಿನ ಮಹಾಶಕ್ತಿಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಲಂಕೇಶ್ ಪತ್ರಿಕೆ’ಯ ಆರಂಭದ ದಿನಗಳಿಂದಲೂ ಇಂದಿರಾ ಲಂಕೇಶ್ ಅವರು ಪತಿ ಪಿ. ಲಂಕೇಶ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಕೇವಲ ವೈವಾಹಿಕ ಜೀವನದಲ್ಲಷ್ಟೇ ಅಲ್ಲದೆ, ಪತ್ರಿಕೆಯ ಆಡಳಿತ, ಮುನ್ನಡೆ ಹಾಗೂ ಪ್ರಕಾಶನದ ಜವಾಬ್ದಾರಿಯನ್ನು ತೆರೆಮರೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. 2000 ಇಸವಿಯಲ್ಲಿ ಪಿ. ಲಂಕೇಶ್ ಅವರ ನಿಧನದ ನಂತರ ಮತ್ತು ತದನಂತರದ ದಿನಗಳಲ್ಲಿ ಹಿರಿಯ ಪುತ್ರಿ, ದಿ. ಗೌರಿ ಲಂಕೇಶ್ ಅವರ ಅಗಲಿಕೆಯ ನಂತರವೂ ಧೃತಿಗೆಡದ ಇಂದಿರಾ ಅವರು, ಕುಟುಂಬ ನಿರ್ವಹಣೆ ಜೊತೆಗೆ,  ಸಾಹಿತ್ಯ  ಮತ್ತು ಪತ್ರಿಕೋದ್ಯಮದ ಪರಂಪರೆಯನ್ನು ಮುನ್ನಡೆಸಿದ್ದರು. ನಾಗರಾಜ್‌ ಹರಪನಹಳ್ಳಿ

“ಇಂದಿರಾ ಲಂಕೇಶ್ ನಿಧನ” Read Post »

ಇತರೆ, ಜೀವನ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ

ಸಂಬಂಧಗಳ ಸಂಗಾತಿ ವನಜ ಮಹಾಲಿಂಗಯ್ಯ “ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” *ಬೆಳಗಾಗೆದ್ದು Good Morning ಕಳಿಸೋ ನೂರು ಜನ ಇದಾರೆ. ಆದ್ರೆ ರಾತ್ರಿ ನಿದ್ದೆ ಬರದೇ ಒದ್ದಾಡಿದಾಗ ಮಾತಾಡೋ ಒಬ್ಬನೂ ಇಲ್ಲ.* ಇದೇ ಇವತ್ತಿನ ಸಂಬಂಧಗಳ ಸ್ಥಿತಿ.ಯಾಕೆ ಹೀಗಾಯ್ತು? ಮುಂದೆ ಓದುತ್ತಾ ಹೋಗಿ.ಮೊಬೈಲ್ ಮೊದಲಾಯ್ತು, ಮನುಷ್ಯ ಎರಡನೆಯವನಾದ*ಒಂದೇ ಮನೆಯಲ್ಲಿ ನಾಲ್ಕು ಜನ ಇದ್ರೂ ನಾಲ್ಕು ಮೂಲೆಯಲ್ಲಿ ಕುಳಿತು ನಾಲ್ಕು ಮೊಬೈಲ್ ನೋಡ್ತಾರೆ. ಅಪ್ಪನಿಗೆ ಮಗ ಏನ್ ಓದ್ತಿದ್ದಾನೆ ಗೊತ್ತಿಲ್ಲ. ಮಗನಿಗೆ ಅಮ್ಮನ ಆರೋಗ್ಯದ ಚಿಂತೆ ಇಲ್ಲ. ಊಟದ ಟೇಬಲ್‌ನಲ್ಲಿ ಮಾತಿಗಿಂತ ರೀಲ್ಸ್ ಮುಖ್ಯವಾಯ್ತು. “ಸಂಪರ್ಕ ಇದೆ, ಸಂಬಂಧ ಇಲ್ಲ.”. ಸಲುಗೆ ಸ್ವಾತಂತ್ರ್ಯವಾಯ್ತು ಹೇಗೆ ಅಂದರೆ,“ನನ್ನ ಲೈಫ್, ನನ್ನ ರೂಲ್ಸ್” ಅಂತ ಮಕ್ಕಳು ಅಂದ್ರೆ, “ನಮ್ಮ ಕಾಲದಲ್ಲಿ ಹೀಗಿರಲಿಲ್ಲ” ಅಂತ ಹೆತ್ತವರು ಅಂದ್ರೆ. ಇಬ್ಬರ ಮಧ್ಯೆ ಗೋಡೆ ಬೆಳೆಯುತ್ತೆ. 8-9 ತಿಂಗಳು ಹೊತ್ತು ಹೆತ್ತ ತಾಯಿಯ ಮಾತಿಗಿಂತ 3 ದಿನದ ಹಿಂದೆ Insta ದಲ್ಲಿ ಪರಿಚಯವಾದವನ ಮೆಸೇಜಿಗೆ ಬೆಲೆ ಜಾಸ್ತಿ ಆಯ್ತು. “ಹೆತ್ತವರ ಪ್ರೀತಿ ಹಳೇದಾಯ್ತು, ಅಪರಿಚಿತರ ಮಾತು ಹೊಸದಾಯ್ತು.” ಈಗ ಎಲ್ಲವೂ Instant. ನೂಡಲ್ಸ್ 2 ನಿಮಿಷ, ಪ್ರೀತಿ 2 ದಿನ. ಸಣ್ಣ ಜಗಳಕ್ಕೆ Block, ಸಣ್ಣ ತಪ್ಪಿಗೆ Disconnect. ಸಂಬಂಧ ಕಟ್ಟೋಕೆ ವರ್ಷ ಬೇಕು, ಮುರಿಯೋಕೆ ಒಂದು Status ಸಾಕು. “ಕ್ಷಮಿಸೋ ಮನಸ್ಸು ಸತ್ತು, ಅಹಂ ಬೆಳೆದು ನಿಂತಿದೆ.”“ಹೋಲಿಕೆ ರೋಗ ಇದ್ದಂತೆ”“ಅವನ ಮಗ BMW ತಂದ, ನನ್ನವನು ಯಾಕೆ ತರಲಿಲ್ಲ?” ಅಂತ ಅಪ್ಪ. “ಅವಳ ಗಂಡ ವಿದೇಶಕ್ಕೆ ಕರ್ಕೊಂಡು ಹೋದ, ನೀನು ಯಾಕೆ ಹೋಗಲಿಲ್ಲ?” ಅಂತ ಹೆಂಡತಿ. ಪಕ್ಕದ ಮನೆ ಹುಲ್ಲು ಯಾವಾಗಲೂ ಹಸಿರು. “ನಮ್ಮ ಬಳಿ ಇರೋದರ ಬೆಲೆ ಮರೆತು, ಇಲ್ಲದ್ದಕ್ಕೆ ಹಂಬಲಿಸೋಕೆ ಶುರು ಮಾಡಿದ್ವಿ.”ದುರಂತ ಏನು ಗೊತ್ತಾ?ಮನೆ ತುಂಬಾ ಜನ ಇದ್ದರೂ ಒಂಟಿತನ. ಅಪ್ಪ ಅಮ್ಮ ದುಡಿದು ದುಡಿದು ಮಕ್ಕಳಿಗೆ ಎಲ್ಲಾ ಕೊಟ್ಟರೂ, ಕೊನೆಗೆ ವೃದ್ಧಾಶ್ರಮ. ಮಕ್ಕಳು ಪ್ರೀತಿಗಾಗಿ ಪರದಾಡಿ, ಕೊನೆಗೆ ಮೋಸ ಹೋಗಿ ಜೀವ ಕಳೆದುಕೊಳ್ಳೋದು. *ಗೋಡೆ ಕಟ್ಟೋಕೆ ಗೊತ್ತಿದ್ದ ನಮಗೆ, ಸೇತುವೆ ಕಟ್ಟೋಕೆ ಮರೆತು ಹೋಯ್ತು. ದಿನಾ 15 ನಿಮಿಷ ಮೊಬೈಲ್ ದೂರ ಇಟ್ಟು ಮನೆಯವರ ಜೊತೆ ಕೂತು ಮಾತಾಡಿ. ಊಟ ಒಟ್ಟಿಗೆ ಮಾಡಿ.   ಬುದ್ಧಿ ಹೇಳೋಕಿಂತ ಮೊದಲು, ಮಕ್ಕಳ ಮನಸ್ಸಿನ ಮಾತು ಕೇಳಿ. ಹೆತ್ತವರ ನೋವು ಅರ್ಥ ಮಾಡಿಕೊಳ್ಳಿ.  :ತಪ್ಪು ಮಾಡದ ಮನುಷ್ಯ ಇಲ್ಲ. ಒಂದು ತಪ್ಪಿಗೆ ಸಂಬಂಧವನ್ನೇ ಕಡಿದುಕೊಳ್ಳಬೇಡಿ.  ಸಮಯ ಕೊಡಿ, ದುಡ್ಡು, ಬಟ್ಟೆ, ಬೈಕ್ ಕೊಟ್ರೆ ಸಾಲದು. ನಿಮ್ಮ ಸಮಯ, ನಿಮ್ಮ ಪ್ರೀತಿ ಕೊಡಿ.  ಮೆಚ್ಚುಗೆ ಸೂಚಿಸಿ: “ಥ್ಯಾಂಕ್ಸ್ ಕಣೋ”, “ಚೆನ್ನಾಗಿ ಮಾಡಿದ್ದೀಯ” ಅನ್ನೋ ಎರಡು ಮಾತು ಸಂಬಂಧ ಗಟ್ಟಿ ಮಾಡುತ್ತೆ. ಕೊನೆಯ ಮಾತು:ಸಂಬಂಧ ಅಂದ್ರೆ AC ರೂಮಲ್ಲಿಡೋ ಹೂವಿನ ಹಾಗಲ್ಲ. ಬಿಸಿಲು, ಮಳೆ, ಗಾಳಿ ಎಲ್ಲಾ ತಾಗಬೇಕು. ಜಗಳ ಬರಬೇಕು, ಮುನಿಸು ಬರಬೇಕು, ಆದ್ರೆ ಬಿಟ್ಟು ಹೋಗೋ ಯೋಚನೆ ಬರಬಾರದು.*ಮೊಬೈಲ್‌ನಲ್ಲಿ ಸಾವಿರ Friend Request ಇರಬಹುದು. ಆದ್ರೆ ಕಷ್ಟ ಅಂದಾಗ ಹೆಗಲು ಕೊಡೋದು ರಕ್ತ ಸಂಬಂಧ, ಮನಸ್ಸಿನ ಸಂಬಂಧ ಮಾತ್ರ.*ಸಂಬಂಧಗಳು ಸರಿಯಿಲ್ಲ ಅಂದ್ರೆ, ಸರಿ ಮಾಡೋಕೆ ಶುರು ಮಾಡೋಣ. ಇವತ್ತಿಂದ, ಈಗಿಂದ, ನಮ್ಮಿಂದಲೇ. ವನಜಾ ಮಹಾಲಿಂಗಯ್ಯ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ Read Post »

You cannot copy content of this page

Scroll to Top