ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅನುವಾದ

ತೆಲುಗು ಕವಿತೆ “ನ್ಯೂ ಸಿಲಬಸ್” ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿ,ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್

ಅನುವಾದ ಸಂಗಾತಿ “ನ್ಯೂ ಸಿಲಬಸ್” ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ ನ್ಯೂ ಸಿಲಬಸ್ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ ಈಗ ನಾವೆಲ್ಲರೂ ಕೇಳಲೇಬೇಕು!ಮಕ್ಕಳು ಹೇಳುತ್ತಿರುವುದನ್ನು ಕೇಳಬೇಕು.ನಿನ್ನೆಯವರೆಗೂ ಈ ಮಕ್ಕಳೆಲ್ಲ ತಡಬಡ ಹೆಜ್ಜೆ ಹಾಕುತ್ತಾ,ಮುದ್ದಾದ ಮಾತುಗಳನ್ನಾಡುತ್ತಾ,ತುಟಿಗಳ ಮೇಲೆ ಮುಗ್ಧತೆಯನ್ನು ಜೀವಂತವಾಗಿರಿಸಿಕೊಂಡು,‘ಮಮ್ಮಿ’, ‘ಪಾಪ್ಪಾ’ ಎಂದು ಓಡಿ ಬಂದವರೇ.ಅವರನ್ನು ಇನ್ನು ಮುಂದೆ ಅದೇ ದೃಷ್ಟಿಯಿಂದ ನೋಡಬೇಕಾಗಿಲ್ಲ.ನಮ್ಮ ಬಾಡಿಗೆ ಯೋಚನೆಗಳಲ್ಲಿ ಅವರನ್ನು ಮುಳುಗಿಸಬೇಕಾಗಿಲ್ಲ.ಮಕ್ಕಳಿಗೂ ಕನಸುಗಳಿರುತ್ತವೆ,ಬಣ್ಣಗಳು, ರಾಗಗಳೂ ಇರುತ್ತವೆ.ಮಕ್ಕಳನ್ನು ಬೆಳೆಸುವುದೆಂದರೆ ಅಂಕಗಳು, ರ್ಯಾಂಕ್‌ಗಳು..ಪ್ಲೇಸ್‌ಮೆಂಟ್‌ಗಳಷ್ಟೇ ತಾನೇ ನಮಗೆ ತಿಳಿದಿದ್ದು?ಆದರೆ ಈ ಮೂರು ಎಲೆಗಳ ಆಟವನ್ನು ದಾಟಿನಾಲ್ಕು ದಿಕ್ಕುಗಳನ್ನೂ ಈ ಮಕ್ಕಳೇ ಕಂಡುಕೊಂಡಿದ್ದಾರೆ.ಸಿಸ್ಟಮ್‌ನಲ್ಲಿ ಹುಡುಕಬೇಕಾದದ್ದು ‘ಮೌಲ್ಯ’ ವಲ್ಲ,ನಾವು ಕಳೆದುಕೊಂಡ ‘ಬಾಲ್ಯ’ ಎನ್ನುತ್ತಿದ್ದಾರೆ,ಆ ದಿಕ್ಕಿನತ್ತ ನಮ್ಮನ್ನು ನೋಡಲು ಕರೆಯುತ್ತಿದ್ದಾರೆ.ಫ್ರೇಮ್‌ಗಳಲ್ಲಿ ನಾವಿರಲಾರೆವು, ಬಾಕ್ಸ್‌ಗಳಲ್ಲಿ ಬಂಧಿಯಾಗಿರಲಾರೆವು ಎಂದುಖಡಾಖಂಡಿತವಾಗಿ ಹೇಳುತ್ತಿದ್ದಾರೆ.ನಾವು ಕಂಡ ದೂರವನ್ನು ಮೀರಿದ ದಿಗಂತಗಳನ್ನುಅವರು ಕಾಣುತ್ತಿದ್ದಾರೆ.ನಾವು ರೂಢಿಸಿಕೊಂಡ ಲೋಕವನ್ನು ಸಮಾಧಿ ಮಾಡಿ,ತಾವು ಕನಸು ಕಾಣುವ ಹೊಸ ಜಗತ್ತನ್ನು ನೋಡಲು ಹೇಳುತ್ತಿದ್ದಾರೆ.ಭ್ರಷ್ಟಾಚಾರ, ಅಕ್ರಮ, ಅನ್ಯಾಯ, ದೌರ್ಜನ್ಯ—ನಮ್ಮ ಜಾತಿಗೆ ‘ವೆರಿ ನಾರ್ಮಲ್’ .ಆದರೆ ಮಕ್ಕಳು ಈಗ ಅವುಗಳನ್ನು ‘ಅಬ್‌ನಾರ್ಮಲ್’ ಎನ್ನುತ್ತಿದ್ದಾರೆ.ಅವರು ‘ಜೆನ್ ಜೀ’ಗಳು ಅಲ್ಲವೇ!‘ ಜೀ ಹುಜೂರ್’ ಎಂಬ ಗುಲಾಮಗಿರಿಯನ್ನು ಬಿಟ್ಟು,ಆತ್ಮಗೌರವದಿಂದ ಬದುಕುತ್ತಾ,ತಮ್ಮ ಭಾಷೆಯ ಎಬಿಸಿಡಿಗಳನ್ನು ನಮ್ಮನ್ನು ಕಲಿಯಲು ಹೇಳುತ್ತಿದ್ದಾರೆ.‘ಟೆಕ್ನೋ ಕಿಡ್ಸ್’ ಆಗಿ ಬೆಳೆಸಿದ್ದೇವೆ ಅಲ್ಲವೇ…ಇವರಿಗೇನು ಭಾವನೆಗಳಿರುತ್ತವೆ ಅಂದುಕೊಂಡಿದ್ದೇವೆ.ರೋಬೋ ಪೀಳಿಗೆ,ಇವರಿಗೇನು ಅನುಬಂಧಗಳಿರುತ್ತವೆ ಅಂದುಕೊಂಡಿದ್ದೇವೆ.ಆದರೆ ‘ಜಂತರ್ ಮಂತರ್’ ಸಾಕ್ಷಿಯಾಗಿ ಹೇಳುತ್ತಿದ್ದಾರೆ—ಅವರ ಭಾವನೆಗಳು ಈ ಮಣ್ಣಿನೊಂದಿಗೆ..ಈ ಅಣಕಿಸಲ್ಪಟ್ಟ ಜನರೊಂದಿಗೆ..ತಮ್ಮನ್ನು ಸುತ್ತುವರಿದ ಪ್ರಕೃತಿಯೊಂದಿಗೆ..‘ಪ್ರಶಾಂತ’ವಾದ ನಾಳೆಯೊಂದಿಗೆ ಹೆಣೆದಿವೆ!ಇದನ್ನು ಕೇವಲ ‘ಪೇಪರ್ ಲೀಕ್’ ಕನ್ನಡಕದಿಂದಷ್ಟೇ ನೋಡಬೇಡಿ,ಅವರು ಕಳೆದುಕೊಂಡ ವ್ಯವಸ್ಥೆಯ ಮೇಲಿನಅಪನಂಬಿಕೆಯ ಪರಾಕಾಷ್ಠೆಯಾಗಿ ನೋಡಿ.ಟಿಯರ್ ಗ್ಯಾಸ್, ವಾಟರ್ ಗನ್, ಲಾಠಿಚಾರ್ಜ್‌ಗಳುಅವರ ಮನೋಬಲದ ಮುಂದೆತಲೆಬಾಗಲೇಬೇಕು ಎಂಬುದನ್ನು ಅರಿತುಕೊಳ್ಳಿ.ಇದು‘ಜನ್’ ತರಂಗ – ‘ಮನ್’ ತರಂಗ.ಈಗ ಅವರಿಗೆ ನಾವುಗಳೇ ಮಕ್ಕಳು!ಕ್ಲೈಮ್ಯಾಕ್ಸ್‌ಗೆ ಬಂದಿರುವ ಈ ಕಥೆಯಲ್ಲಿಬೇಕಾಗಿರುವುದು ‘ಐಮ್ಯಾಕ್ಸ್’ ಸೀನ್‌ಗಳಲ್ಲ,‘ಜೆನ್ ಜೀ’ ಗುರುಕುಲದ ಪಾಠಗಳು!ಅವರ ಸಿಲಬಸ್ ಅನ್ನು ಅವರ ಭಾಷೆಯಲ್ಲೇ ಕಲಿಯೋಣ ಬನ್ನಿ.ಈ ವಯಸ್ಸಿನಲ್ಲಿ ಮತ್ತೊಮ್ಮೆ ಮಕ್ಕಳಾಗಿ,ಬುದ್ಧಿಯಲ್ಲಿ ಹಿರಿಯರಾದ ಅವರ ಗುರುತ್ವದಲ್ಲಿಹೊಸ ಗಾಳಿಯನ್ನು ಉಸಿರಾಡೋಣ.ಹೊಸ ಲೋಕದಲ್ಲಿ ಹೊಸ ಆಧಾರ್ ಕಾರ್ಡ್‌ಗೆ ಅರ್ಜಿ ಹಾಕೋಣ,ನಮ್ಮ ಪಾಸ್‌ಪೋರ್ಟ್ ಅನ್ನುಮತ್ತೊಮ್ಮೆ ಹೊಸದಾಗಿ ನಾವೇ ಹುಡುಕಿಕೊಳ್ಳೋಣ.ಬನ್ನಿ ಹೋಗೋಣ,‘ಜೆನ್ ಜಿ’ ಗುರುಕುಲಗಳಿಗೆ..‘ಮತ್ತೊಮ್ಮೆ ಹುಟ್ಟೋಣವೇ?’

ತೆಲುಗು ಕವಿತೆ “ನ್ಯೂ ಸಿಲಬಸ್” ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿ,ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ Read Post »

ಕಾವ್ಯಯಾನ

ವೆಂಕಟೇಶ್ ಈಡಿಗರ ಅವರ ಕವಿತೆ “ಮೌನ ಯಾನ”

ಕಾವ್ಯ ಸಂಗಾತಿ ವೆಂಕಟೇಶ್ ಈಡಿಗರ “ಮೌನ ಯಾನ” ಮೌನವದು ಸ್ಪಷ್ಟತೆ ಇಲ್ಲದಅನರ್ಥಗಳ ನಿರ್ಭಾವ  ಸ್ಥಿತಿಸಮ್ಮತಿಯೂ  ಅಲ್ಲದಅಸಮ್ಮತಿ ಸೂಚಿಸದ ದ್ವಂದ್ವ ನೀತಿ ಮನಸ್ಸು ಬಲವಾದಾಗ ಪ್ರತಿಕಾರದುರ್ಬಲವೆಂದರೆ ಅಂಗಿಕಾರಇಲ್ಲದಿರೆ ನಪುಂಸಕತೆಯ ನಿರಾಕಾರವಿವರಿಸಲಾಗದ ಅನಿರ್ಧಿಷ್ಟವಧಿ  ಮುಷ್ಕರ ಮನದಿಂಗಿತಗಳನು ಬಲಿಕೊಟ್ಟುಒಳಬೇಗುದಿಯಲ್ಲಿ ಬೇಯುವನೋಯುವ ನಿಶಕ್ತ ರೂಪವದುತನ್ನತನವ ದಹಿಸಿಕೊಂಡು ಬಂದುದ್ದನ್ನುಅಪ್ಪಿ ಸಪ್ಪೆಯಾಗುವ ಸಂತೆಯೊಳಗಿನ ವಸ್ತು ಜ್ಞಾನವೋ ಅಜ್ಞಾನವೋ ಎಂದರುಹಲುಹಿಂಜರಿದುˌ ಸ್ವಾಭಿಮಾನಕೆ ಕಟ್ಟು ಬಿದ್ದು ಇದ್ದುದರಲ್ಲಿಯೇ ಎಲ್ಲವನ್ನೂ ಕಾಣುವದಿವ್ಯ ರೂಪ   ದೃಢತೆಯ ಅಪರೂಪಮನಸ್ಸು ವಿಚಲಿತಗೊಂಡ ಕೂಪˌ ವಿಕೋಪ ಮೌನವದು  ವಿಶ್ವರೂಪಹೊಸ ಮನ್ವಂತರಕೆ ಮುನ್ನುಡಿಬರೆಯಲುಮೈದಾಳಿದ ಮಹಾ ಸಂಕಲ್ಪˌಇದಕಾಗಿ ಇರಬೇಕು ಆತ್ಮಬಲದಜ್ಞಾನದೀಪˌ  ಅದುವೇ ಅವನಜೀವನದ ಮುನ್ನಡೆಗೆ ದಾರಿದೀಪ ಮತಿಗೆಡದಿರಲಿ ಮನದ ಮೌನದೃತಿಗೆಡದೆ ಮುನ್ನಡೆಯಲಿ ಜ್ಞಾನಮೌನದಲ್ಲಿಯೂ ಧ್ಯಾನಸ್ಥನಾಗಿಬೆಳಗಲಿ ಲೋಕದೊಳಿತಿನ ಸುಜ್ಞಾನಉಳಿಸಿ ಬೆಳೆಸಲಿ ಮಾನ ಸಮ್ಮಾನಮೌನವೇ ಧ್ಯಾನವಾಗಿˌ ಜ್ಞಾನವಾಗಿಬಿತ್ತಿ ಅಂಕುರಗೊಂಡು ಸುಜ್ಞಾನದ ಸಮಾಜ ನಿರ್ಮಿಸಲಿ ಮೌನ. ವೆಂಕಟೇಶ್ ಈಡಿಗರ

ವೆಂಕಟೇಶ್ ಈಡಿಗರ ಅವರ ಕವಿತೆ “ಮೌನ ಯಾನ” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ರಾಜಕೀಯ ಜೀವನ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯು ೧೯೫೧ ಅಕ್ಟೋಬರ್ 25ರಿಂದ ೧೯೫೨ರ ಫೆಬ್ರವರಿ 21ರವರೆಗೆ ನಡೆಯಿತು. ಇದು ಸ್ವಾತಂತ್ರ್ಯಾನಂತರದ ಮೊದಲ ರಾಷ್ಟ್ರೀಯ ಚುನಾವಣೆಯಾಗಿದ್ದು… ರಾಷ್ಟ್ರೀಯ ಕಾಂಗ್ರೆಸ್ ಭರ್ಜರಿ ಜಯದ ತಯಾರಾಯಲ್ಲಿ ಇತ್ತು. ಸ್ವಾತಂತ್ರ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಾಗ ದೇಶದಾದ್ಯಂತ ರಾಜಕೀಯ ಚಟುವಟಿಕೆಗಳು ಅತಿಯಾಗಿ ಚುರುಕುಗೊಂಡಿದ್ದವು. ಆ ಸಂದರ್ಭದಲ್ಲಿ ಜಯದೇವಿ ತಾಯಿಯವರು ಕೂಡ ಅನೇಕ ರಾಷ್ಟ್ರೀಯ ನಾಯಕರಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪಕ್ಷದ ಕಾರ್ಯಕರ್ತೆಯಾಗಿ,…. ಪ್ರಮುಖ ನಾಯಕರು ಮತ್ತು ಜನರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸಿದರು.  ಸಂಘಟನಾ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯಿಂದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿಶ್ವಾಸವನ್ನು ಗಳಿಸಿದ್ದರು. ಆ ಸಮಯದಲ್ಲಿ ಮಹಾರಾಷ್ಟ್ರ ಪ್ರಾಂತ ಕಾಂಗ್ರೆಸ್ ಸಮಿತಿಯ  ಅಧ್ಯಕ್ಷರಾಗಿದ್ದ ಹಿರಿಯ ನಾಯಕರು ಜಯದೇವಿ ತಾಯಿಯವರ ಕಾರ್ಯಕ್ಷಮತೆಯನ್ನು ಗಮನಿಸಿ, ಅವರನ್ನು ಚುನಾವಣೆಗೆ ಸ್ಪರ್ಧಿಸಲು ಆಹ್ವಾನಿಸಿದರು. ರಾಜಕೀಯವಾಗಿ ಉಜ್ವಲ ಭವಿಷ್ಯ ಮತ್ತು ಮಂತ್ರಿ ಸ್ಥಾನವೂ ಅವರಿಗೆ ಸುಲಭವಾಗಿ ದೊರೆಯಬಹುದಾಗಿತ್ತು.ಅಂದಿನ ಕೆಲವು ನಾಯಕರು, ಕರ್ನಾಟಕದ ಪರವಾಗಿ ಅವರು ನಡೆಸುತ್ತಿದ್ದ ಹೋರಾಟವನ್ನು ಮೃದುಗೊಳಿಸಲು ಹಾಗೂ ಅವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರಿಸಿಕೊಳ್ಳುವ ಯೋಚನೆಯನ್ನೂ ಮಾಡಿಕೊಂಡಿದ್ದರು ಎನ್ನಲಾಗುತ್ತದೆ. ಜಯದೇವಿ ತಾಯಿಯವರು ಅಧಿಕಾರದ ಆಸೆಗೆ ಮಣಿಯುವ ವ್ಯಕ್ತಿತ್ವ ಹೊಂದಿರಲಿಲ್ಲ. ಅವರ ದೃಷ್ಟಿಯಲ್ಲಿ ಹುದ್ದೆ, ಅಧಿಕಾರ ಮತ್ತು ವೈಯಕ್ತಿಕ ಗೌರವಕ್ಕಿಂತ ನಾಡು-ನುಡಿ ಮತ್ತು ಜನರ ಹಿತವೇ ಶ್ರೇಷ್ಠವಾಗಿತ್ತು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದಾಗ ಅವರು ನೀಡಿದ ಉತ್ತರ ಅವರ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತದೆ.ಅವರು ಸ್ಪಷ್ಟವಾಗಿ ಹೀಗೆ ಹೇಳಿದರು…. “ರಾಜ್ಯಸಭೆಯಲ್ಲಿ ಸೋಲ್ಲಾಪುರ ಕರ್ನಾಟಕದ ಭಾಗವಾಗಲೇಬೇಕು ಎಂದು ಧೈರ್ಯವಾಗಿ ಹೇಳುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ಅನುಮತಿ ನನಗೆ ಇದ್ದರೆ ಮಾತ್ರ ನಾನು ಚುನಾವಣೆಗೆ ಸಹಕರಿಸಲು ಸಿದ್ಧ.”ಈ ಮಾತುಗಳು ಜಯದೇವಿ ತಾಯಿಯವರ ಅಚಲ ನಿಲುವಿಗೆ ಸಾಕ್ಷಿಯಾಗಿವೆ. ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಮಂತ್ರಿಯಾಗುವುದು ಮುಖ್ಯವಲ್ಲ……ಗಡಿ ಭಾಗದ ಕನ್ನಡಿಗರ ನ್ಯಾಯಸಮ್ಮತ ಹಕ್ಕುಗಳ ಪರವಾಗಿ ಸಂಸತ್ತಿನಲ್ಲಿಯೂ ಧ್ವನಿ ಎತ್ತಲು ಅವಕಾಶ ದೊರೆಯಬೇಕೆಂಬುದು ಅವರ ಏಕೈಕ ಆಶಯವಾಗಿತ್ತು.ಜಯದೇವಿ ತಾಯಿಯವರು ಅಧಿಕಾರಕ್ಕಾಗಿ ತಮ್ಮ ತತ್ವಗಳನ್ನು ಎಂದಿಗೂ ಬಿಟ್ಟುಕೊಡದ ನಾಯಕಿಯಾದರು.  ಅವರ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮುಖ್ಯ ಕಾರಣವೆಂದರೆ ಗಡಿ ಭಾಗದ ಕನ್ನಡಿಗರ ಹಕ್ಕುಗಳ ರಕ್ಷಣೆ… ಕನ್ನಡಿಗರ ಆಸ್ತಿ ತ್ವದ ರಕ್ಷಣೆ ಆಗಬೇಕು ಅಖಂಡ ಕರ್ನಾಟಕದ ನಿರ್ಮಾಣ ಮಾಡುವ ಉದ್ದೇಶವಾಗಿತ್ತು. ಕರ್ನಾಟಕದವರ ಪರವಹಿಸಿ ಮಾತನಾಡುತ್ತಿದ್ದ ಜಯದೇವಿತಾಯಿಯವರನ್ನು ಶಾಂತಗೊಳಿಸಲು ಆಗಿನ ಎಂಪಿ ಸಿಸಿ ಅಧ್ಯಕ್ಷರಾಗಿದ್ದ ಹಿರೇಯವರು ಚುನಾವಣೆಯಲ್ಲಿ ನಿಲ್ಲಲು ಜಯದೇವಿ ತಾಯಿಯವರಿಗೆ ಕೇಳಿದರು. ಜಯದೇವಿತಾಯಿಯವರು ಸ್ಪರ್ಧಿಸಿಸಲು ಒಪ್ಪದಿದ್ದಾಗ ಹೀರೆಯವರು..”ತಾಯಾಯವರೆ ನೀವು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ನೀವು ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸದಿದ್ದರೆ, ನಿಮ್ಮ ಅಭಿಪ್ರಾಯದಂತೆ ಜನಸೇವೆಗೆ ಸಮರ್ಥರಾಗಿರುವ ವ್ಯಕ್ತಿಯೊಬ್ಬರನ್ನು ಸೂಚಿಸಿ” ಎಂದು ಕೇಳಿದರು. ಆಗ ಜಯದೇವಿ ತಾಯಿಯವರು ಯಾವುದೇ ವೈಯಕ್ತಿಕ ಲಾಭ ಅಥವಾ ರಾಜಕೀಯ ಲೆಕ್ಕಾಚಾರವಿಲ್ಲದೆ *ಮಹಾರಾಣಿ ನಿರ್ಮಲಾರಾಜೆ ಭೋಸಲೆ ಅವರ ಹೆಸರನ್ನು ಶಿಫಾರಸು ಮಾಡಿದರು.ನಿರ್ಮಲಾರಾಜೆ ಭೋಸಲೆ *ಅವರು ಅಕ್ಕಲಕೋಟೆ ಸಂಸ್ಥಾನದ ಮಹಾರಾಣಿಯಾಗಿದ್ದರು. ಅರಮನೆಯ ವೈಭವದ ಜೀವನದಲ್ಲಿದ್ದವರು…. ಅವರಲ್ಲಿದ್ದ ನಾಯಕತ್ವತೆ,ಸಂವೇದನಾ ಶೀಲತೆ ಮತ್ತು ಸೇವಾ ಮನೋಭಾವವು ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕೆಂದು ಜಯದೇವಿ ತಾಯಿಯವರು ನಿರ್ಮಲಾ ರಾಜಯೆವರಿಗೆ ಹೇಳಿದರು  “ಅರಮನೆಯ ನಾಲ್ಕು ಗೋಡೆಗಳೊಳಗೆ ಜೀವನವನ್ನು ಸೀಮಿತಗೊಳಿಸದೆ, ಜನರ ನಡುವೆ ಬೆರೆತು ಅವರ ಕಷ್ಟ-ಸುಖಗಳನ್ನು ಅರಿಯಬೇಕು” ಎಂದು ಅವರು ನಿರ್ಮಲಾ ರಾಜೆಯವರನ್ನು ಪ್ರೇರೇಪಿಸಿದರು.ಜಯದೇವಿ ತಾಯಿಯವರ ಪ್ರೋತ್ಸಾಹದಿಂದ ನಿರ್ಮಲಾ ರಾಜೆಯವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ ಶಿಕ್ಷಣ, ಮಹಿಳಾ ಕಲ್ಯಾಣ, ಸಾರ್ವಜನಿಕ ಸೇವೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಮಾಜಸೇವೆಯ ಅನುಭವವು ಅವರಿಗೆ ಜನಜೀವನದ ನೈಜ ಸಮಸ್ಯೆಗಳ ಪರಿಚಯವನ್ನು ನೀಡಿತು. ಈ ಸಾಮಾಜಿಕ ಸೇವೆಯ ಪಯಣವೇ ಮುಂದೆ ಅವರನ್ನು ರಾಜಕೀಯ ಕ್ಷೇತ್ರಕ್ಕೂ ಕೊಂಡೊಯ್ದಿತು. ಜನಸೇವೆಯನ್ನು ಇನ್ನಷ್ಟು ವ್ಯಾಪಕವಾಗಿ ಮಾಡಲು ರಾಜಕೀಯವೂ ಒಂದು ಸಾಧನ ಎಂಬ ಅರಿತಿದ್ದ ಜಯದೇವಿ ತಾಯಿಯವರು ನಿರ್ಮಲಾರಾಜೆ ಭೋಸಲೆ ಅವರ  ನಾಯಕತ್ವದ ವಿಶಿಷ್ಟ ಗುಣ ಔದಾರ್ಯವೆಂದು ತೋರಿಸಿಕೊಟ್ಟರು.  ಸಮಾಜಕ್ಕೆ ಉತ್ತಮ ನಾಯಕತ್ವ ನೀಡಬಲ್ಲ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಬೆಳೆಸುವ ಮಹತ್ತರ ಕಾರ್ಯವನ್ನು ಮಾಡಿದರು. ನಿಜವಾದ ನಾಯಕ ಎಂದರೆ ಸ್ವತಃ ಮುಂದೆ ನಿಲ್ಲದೇ ಮತ್ತೊಬ್ಬ ನಾಯಕನನ್ನು ರೂಪಿಸುವ ಸಾಮರ್ಥ್ಯವೂ ಹೊಂದಿರಬೇಕು ಎಂಬುದಕ್ಕೆ ಜಯದೇವಿ ತಾಯಿಯವರ ಜೀವನವೇ ಅತ್ಯುತ್ತಮ ಉದಾಹರಣೆಯಾಗಿದೆ.  ಕನ್ನಡ ನಾಡಿನ ಗಡಿಭಾಗಗಳ ಬಗ್ಗೆ ಅವರಿಗೆ ಅಪಾರವಾದ ಕಾಳಜಿ. ಅಕ್ಕಲಕೋಟ, ಸೊಲ್ಲಾಪುರ ಸೇರಿದಂತೆ ಕನ್ನಡಿಗರ ಬದುಕು, ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ಪ್ರದೇಶಗಳು ಕರ್ನಾಟಕದೊಂದಿಗೆ ಉಳಿಯಬೇಕು ಎಂಬುದು ಅವರ ಆಂತರಿಕ ಬಯಕೆಯಾಗಿತ್ತು. ಅಕ್ಕಲಕೋಟ ಮತ್ತು ಸೊಲ್ಲಾಪುರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಗೊತ್ತುವಳಿ ತರಲು ನಿರ್ಮಲ ರಾಜಯೆಅವರು ಕಾರಣರಾದರು ಎಂಬ ಸುದ್ದಿ ಜಯದೇವಿ ತಾಯಿಯವರ ಕಿವಿಗೆ ಬಿದ್ದಾಗ, ಅದು ಅವರ ಮನಸ್ಸಿನ ಮೇಲೆ ಬಿದ್ದ ದೊಡ್ಡ ಹೊಡೆತವಾಗಿತ್ತು.ಯಾಕೆಂದರೆ, ತಾವು ನಂಬಿ ಬೆಳೆಸಿದ ವ್ಯಕ್ತಿಯೇ ತಮ್ಮ ಮನಸ್ಸಿಗೆ ವಿರುದ್ಧವಾದ ನಿಲುವು ತೆಗೆದುಕೊಂಡಿದ್ದಾರೆ ಎಂಬ ನೋವು ಒಂದು ಕಡೆಯಾಯಿತು. “ನಾವು ಯಾರಿಗಾಗಿ ಹೋರಾಡಿದೆವು?ಯಾರನ್ನು ನಂಬಿ ಮುಂದೆ ಕಳುಹಿಸಿದೆವು?ನಮ್ಮ ನಾಡಿನ ನೋವನ್ನು ಹೇಳಬೇಕಾದವರೇ ನಮ್ಮ ನಾಡಿನ ಗಡಿಯನ್ನು ಬೇರೆಯವರ ಪಾಲಾಗಿಸುವ ಮಾತಿಗೆ ಹೇಗೆ ಕೈಜೋಡಿಸಿದರು?”ಎಂದರು .ಜಯದೇವಿ ತಾಯಿಯವರಿಗೆ ಸಾಮಾನ್ಯ ರಾಜಕೀಯ ಭಿನ್ನಾಭಿಪ್ರಾಯವಾಗಿರಲಿಲ್ಲ.ಅಕ್ಕಲಕೋಟ, ಸೊಲ್ಲಾಪುರ  ಕೇವಲ ಭೂಪಟದ ಮೇಲಿನ ಪ್ರದೇಶಗಳಾಗಿರದೆ…..ಅಲ್ಲಿ ಕನ್ನಡದ ಉಸಿರಿತ್ತು. ಕನ್ನಡಿಗರ ಬದುಕಿತ್ತು. ತಲೆಮಾರುಗಳಿಂದ ಬೆಳೆದು ಬಂದ ಭಾಷೆ, ಸಂಸ್ಕೃತಿ, ನೆನಪುಗಳು, ಸಂಬಂಧಗಳು ಇದ್ದವು.ಆ ನೆಲದ ಬಗ್ಗೆ ಅವರಿಗಿದ್ದ ಭಾವನೆ ತಾಯಿಗೆ ತನ್ನ ಮಗುವಿನ ಮೇಲಿರುವ ಮಮತೆಯಂತಿತ್ತು. ತಾವು ಪ್ರೀತಿಸಿದ ನಾಡಿಗಾಗಿ ಹೋರಾಡುವವರನ್ನು ಹುಡುಕಿ, ಅವರನ್ನು ಮುಂದೆ ತಂದು, ಅವರ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಒಬ್ಬ ಹಿರಿಯ ಹೋರಾಟಗಾರ್ತಿಯ ಮನಸ್ಸಿಗೆ ಇದು ಎಷ್ಟು ದೊಡ್ಡ ಆಘಾತವಾಯಿತು. ಜಯದೇವಿ ತಾಯಿಯವರ ರಾಜಕೀಯ ಜೀವನದಲ್ಲಿ ಒಂದು ಕಹಿ ಅಧ್ಯಾಯವಾಗಿದ್ದರೂ, ಅದು ಅವರ ಕನ್ನಡಾಭಿಮಾನವನ್ನು ಕುಗ್ಗಿಸಲಿಲ್ಲ.ಬದಲಿಗೆ ಅವರ ಮನಸ್ಸಿನಲ್ಲಿ ಇನ್ನಷ್ಟು ಗಟ್ಟಿಯಾದ ಸಂಕಲ್ಪ ಮೂಡಿಸಿತು….ಗಡಿ ಕಳೆದುಕೊಂಡರೂ ಕನ್ನಡ ಕಳೆದುಕೊಳ್ಳಬಾರದು.ಭೂಭಾಗದ ಮೇಲೆ ಹಕ್ಕು ಕಳೆದುಕೊಂಡರೂ ಭಾಷೆಯ ಮೇಲಿನ ಪ್ರೀತಿ ಕಳೆದುಕೊಳ್ಳಬಾರದು.ರಾಜಕೀಯದಲ್ಲಿ ಸೋಲು ಬಂದರೂ ನಾಡಿನ ಪರವಾದ ಹೋರಾಟದಲ್ಲಿ ಹಿಂದೆ ಸರಿಯಬಾರದೆಂದ ತಮ್ಮ ಹೊರಾಟ ಮುಂದುವರಿಸಿದರು. ಅವರ ಜೀವನ ನಮಗೆ ಹೇಳುವ ಸಂದೇಶ ಒಂದೇ“ಪದವಿ ಬದಲಾಗಬಹುದು…ರಾಜಕೀಯದವರು ಬದಲಾಗಬಹುದು…ಆದರೆ ಹೆತ್ತ ತಾಯಿಯ ಮೇಲಿನ ಪ್ರೀತಿ, ನಾಡಿನ ಮೇಲಿನ ಅಭಿಮಾನ ಮತ್ತು ನುಡಿಯ ಮೇಲಿನ ನಿಷ್ಠೆ ಬದಲಾಗಬಾರದು.”ಸೊಲ್ಲಾಪುರ ಮತ್ತು ಅಕ್ಕಲಕೋಟ,ಜತ್ತದ ನೆಲದ ಮೇಲೆ ಕನ್ನಡದ ಹೆಜ್ಜೆಗುರುತು ಉಳಿಯಬೇಕು ಎಂಬ ಅವರ  ಕನಸನ್ನು ತಮ್ಮ ಹೃದಯದಿಂದ ಎಂದಿಗೂ ಅಳಿಸಿರಲಿಲ್ಲ.ಅದೇಷ್ಟೋ ಬಾರಿ ಕಣ್ಣೀರಿನು ಹಾಕಿದರುಅದು ತನ್ನ ನಾಡು ತನ್ನ ಕೈಯಿಂದ ಜಾರಿಹೋಗುತ್ತಿರುವುದನ್ನು ಕಂಡ ಕನ್ನಡ ತಾಯಿಯ ಹೃದಯದ ನೊಂದಿತ್ತು. *ಕನ್ನಡ ತಾಯಿಗಾಗಿ |ಕಣ್ಣೀರ ಸುರಿದಾವಉನ್ನತ ನಾಡು ಒಂದು ಗೂಡಿಸಲು- ಸಿದ್ದರಾಮಅನ್ನ ನೀರಿನ ಪರಿವೆ ಹರಿಸಿದಿರಿ||* ಅದಕ್ಕಾಗಿಯೇ ಜಯದೇವಿ ತಾಯಿಯವರು ಇಂದಿಗೂ ನಿಸ್ವಾರ್ಥ ಸೇವೆ, ಕನ್ನಡಾಭಿಮಾನ ಮತ್ತು ತತ್ವನಿಷ್ಠ ರಾಜಕೀಯದ ಪ್ರತೀಕವಾಗಿ ಸ್ಮರಿಸಲ್ಪಡುತ್ತಾರೆ. (ಮುಂದುವರೆಯುವುದು) ಸವಿತಾ ದೇಶಮುಖ  .

Read Post »

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಅವರ ಕವಿತೆ “ನಕ್ಕಿತು ಕನ್ನಡಿ”

ಕಾವ್ಯ ಸಂಗಾತಿ ಲಲಿತಾ ಪ್ರಭು ಅಂಗಡಿ “ನಕ್ಕಿತು ಕನ್ನಡಿ” ಕಂಡದ್ದು ಕಂಡಹಾಗೆತೋರಿದರೆಕೆಂಡದಂತ ಕೋಪಕನ್ನಡಿ ಸರಿಗಿಲ್ಲಭೂತಗನ್ನಡಿ ಎನ್ನುವಭೂತಗಳ ಕಂಡು ನಿಜವನರಿಯದ ನಿತ್ಯನಡೆವ ನಾಟಕದ ರೂವಾರಿಗಳ ಕಂಡುರಾವುಗನ್ನಡಿಯ ಹಿಂದೆಮನದ ಕನ್ನಡಿ ಮುಚ್ಚಿದ ವಿಚಾರವಾದಿಗಳ ಕಹಿಸತ್ಯವ ಕಂಡು ಜನಸಾಮಾನ್ಯರನು ಮಳ್ಳುಮಾಡುವ ವಿವೇಕಿಗಳಅವಿವೇಕತೆಯ ಕಂಡುವಿವೇಕ ಇದ್ದರೂ ತಪ್ಪನ್ನುತಪ್ಪೆಂದು ಒಪ್ಪದವರ ಕಂಡು ಅವರಿವರನು ಬಳಸಿಕೊಂಡುಶಾಂತಿ ನೆಮ್ಮದಿ ಸೌಹಾರ್ದಹಾಳು ಮಾಡುವ ಮತಿಹೀನರ ಮಂಗನಾಟದಲಿಮುಗ್ಧಜನರ ಬಲಿಪಶು ಕಂಡು ಇದ್ದದ್ದು ಇದ್ದಂಗ ತೋರಿದರೂ ಮತ್ತೊಂದು ಬಣ್ಣ ಹಚ್ಚಿ ಕನ್ನಡಿಯ ಬಿಂಬ ಸರಿಯಿಲ್ಲ ಎನ್ನುವ ಸೈಲೆಂಟ ಕಿಲ್ಲರ್  ಮನಸುಗಳ ವಿಕ್ರತ ಮನಸು ಕಂಡುಮುಸು ಮುಸು ಕನ್ನಡಿ ನಕ್ಕಿತುಕನ್ನಡಿ ನಕ್ಕಿತುಲಲಿತಾ ಪ್ರಭು ಅಂಗಡಿ ಮಂಬಯಿ.

ಲಲಿತಾ ಪ್ರಭು ಅಂಗಡಿ ಅವರ ಕವಿತೆ “ನಕ್ಕಿತು ಕನ್ನಡಿ” Read Post »

ಇತರೆ, ಜೀವನ

“ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ವಿಶೇಷ ಲೇಖನ ಜಯಶ್ರೀ. ಜೆ. ಅಬ್ಬಿಗೇರಿ

ವಿಶೇಷ ಸಂಗಾತಿ ಜಯಶ್ರೀ. ಜೆ. ಅಬ್ಬಿಗೇರಿ “ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ಒಂದು ಹಳ್ಳಿಯಲ್ಲಿ ಸೋಮಣ್ಣ ಎಂಬ ಒಬ್ಬ ಕೃಷಿಕನಿದ್ದನು. ಅವನು ತುಂಬಾ ದಯಾಳುವಾಗಿದ್ದರೂ, ಅತಿಯಾದ ಸೋಮಾರಿಯಾಗಿದ್ದನು. “ನಾಳೆ ಮಾಡೋಣ ಬಿಡು” ಎಂದು ಪ್ರತಿಯೊಂದು ಕೆಲಸವನ್ನೂ ಮುಂದೂಡುವುದು ಅವನ ಹವ್ಯಾಸವಾಗಿತ್ತು.ಒಂದು ದಿನ ಅವನ ಹಳ್ಳಿಗೆ ಒಬ್ಬ ಸಾಧು ಬಂದರು. ಸೋಮಣ್ಣನ ಬಡತನ ಮತ್ತು ಸೋಮಾರಿತನವನ್ನು ಕಂಡು ಅವರಿಗೆ ಮರುಕ ಉಂಟಾಯಿತು. ಸಾಧುಗಳು ಅವನಿಗೆ ಒಂದು ಕಪ್ಪಾದ ವಿಚಿತ್ರ ಕಲ್ಲನ್ನು ನೀಡಿ ಹೀಗೆ ಹೇಳಿದರು, “ಸೋಮಣ್ಣ, ಇದು ಕೇವಲ ಕಲ್ಲಲ್ಲ, ಇದೊಂದು ‘ಪರಸಮಣಿ’ ಇದನ್ನು ನೀನು ಯಾವುದೇ ಕಬ್ಬಿಣಕ್ಕೆ ಮುಟ್ಟಿಸಿದರೂ ಅದು ಚಿನ್ನವಾಗುತ್ತದೆ. ಆದರೆ ನೆನಪಿಡು, ನಾನು ನಾಳೆ ಸಂಜೆ ಸರಿಯಾಗಿ ಆರು ಗಂಟೆಗೆ ಇದನ್ನು ಮರಳಿ ಪಡೆಯಲು ಬರುತ್ತೇನೆ. ಅಷ್ಟರೊಳಗೆ ನಿನಗೆ ಎಷ್ಟು ಬೇಕೋ ಅಷ್ಟು ಚಿನ್ನ ಮಾಡಿಕೊ ಹಾಗೂ ನಿನ್ನ ಬಡತನ ನೀಗಿಸಿಕೊ” ಎಂದು ಹೇಳಿ ಹೊರಟರು.ಸೋಮಣ್ಣನಿಗೆ ಅಪಾರ ಸಂತೋಷವಾಯಿತು. ಅವನು ಯೋಚಿಸಿದನು, “ನನ್ನ ಬಳಿ ನಾಳೆ ಸಂಜೆಯವರೆಗೆ ಸಮಯವಿದೆಯಲ್ಲ! ಈಗ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ನಾಳೆ ಬೆಳಿಗ್ಗೆ ಮಾರುಕಟ್ಟೆಗೆ ಹೋಗಿ ತುಂಬಾ ಕಬ್ಬಿಣ ತಂದು, ಚಿನ್ನವಾಗಿ ಬದಲಾಯಿಸುತ್ತೇನೆ.”ಮಾರನೇ ದಿನ ಬೆಳಿಗ್ಗೆ ಎದ್ದ ಸೋಮಣ್ಣ, “ಇನ್ನೂ ತುಂಬಾ ಸಮಯವಿದೆ, ಮಧ್ಯಾಹ್ನ ಹೋದರಾಯಿತು” ಎಂದುಕೊಂಡು ಆರಾಮವಾಗಿ ಊಟ ಮಾಡಿ ನಿದ್ದೆ ಹೋದನು. ಮಧ್ಯಾಹ್ನ ಮೂರು ಗಂಟೆಗೆ ಎದ್ದಾಗ ಅವನಿಗೆ ಮಾರುಕಟ್ಟೆಗೆ ಹೋಗಿ ಕಬ್ಬಿಣ ತರಬೇಕು ಎಂದು ನೆನಪಾಯಿತು. ಆದರೆ ಸೋಮಾರಿತನದಿಂದಾಗಿ, “ಸಂಜೆಯಾಗಲು ಇನ್ನು ಮೂರು ಗಂಟೆ ಇದೆಯಲ್ಲ, ನಿಧಾನವಾಗಿ ಹೋಗೋಣ” ಎಂದುಕೊಂಡು ನಿಧಾನವಾಗಿ ಹೆಜ್ಜೆ ಹಾಕಿದನು.ಅವನು ಮಾರುಕಟ್ಟೆಗೆ ತಲುಪಿ, ಕಬ್ಬಿಣವನ್ನು ಖರೀದಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ಸರ‍್ಯ ಮುಳುಗುತ್ತಿದ್ದನು. ಅವನು ಓಡೋಡುತ್ತಾ ಮನೆಗೆ ಬಂದು ಕಬ್ಬಿಣಕ್ಕೆ ಆ ಮಾಂತ್ರಿಕ ಕಲ್ಲನ್ನು ಮುಟ್ಟಿಸಲು ಹೋದನು.ಆದರೆ ಅಷ್ಟರಲ್ಲೇ ಸರಿಯಾಗಿ ಸಂಜೆ ಆರು ಗಂಟೆಯಾಗಿತ್ತು!ಸಾಧುಗಳು ಅವನ ಮನೆ ಬಾಗಿಲಿಗೆ ಬಂದು ನಿಂತಿದ್ದರು. ಅವರು ಸೋಮಣ್ಣನ ಕೈಲಿದ್ದ ಮಾಂತ್ರಿಕ ಕಲ್ಲನ್ನು ಮರಳಿ ಪಡೆದರು. ಸೋಮಣ್ಣನು ಅಳುತ್ತಾ, “ಸ್ವಾಮಿ, ನನಗೆ ಇನ್ನೊಂದು ಐದು ನಿಮಿಷ ಕೊಡಿ, ನಾನು ಕಬ್ಬಿಣವನ್ನು ಚಿನ್ನ ಮಾಡಬೇಕು” ಎಂದು ಬೇಡಿಕೊಂಡನು.ಅದಕ್ಕೆ ಸಾಧುಗಳು ಶಾಂತವಾಗಿ ಹೇಳಿದರು, “ಸೋಮಣ್ಣ, ಯಾರು ಸಮಯದ ಬೆಲೆಯನ್ನು ಅರಿಯುವುದಿಲ್ಲವೋ, ಅವರಿಗೆ ಅದೃಷ್ಟವೂ ಒಲಿಯುವುದಿಲ್ಲ. ನಿನಗೆ ಪರ‍್ತಿ ಒಂದು ದಿನ ಸಿಕ್ಕರೂ ನೀನು ಸಮಯವನ್ನು ವ್ರ‍್ಥ ಮಾಡಿದೆ. ಕಳೆದುಹೋದ ಸಮಯ ಮತ್ತು ಕಳೆದುಕೊಂಡ ಅವಕಾಶಗಳು ಮತ್ತೆ ಎಂದಿಗೂ ಮರಳಿ ಬರುವುದಿಲ್ಲ.”ಸೋಮಣ್ಣನಿಗೆ ತನ್ನ ಸೋಮಾರಿತನದ ಅರಿವಾಯಿತು, ಆದರೆ ಅಷ್ಟರಲ್ಲೇ ಸಮಯ ಮೀರಿಹೋಗಿತ್ತು.ಕಥೆಯ ನೀತಿ:ಸಮಯವು ಅತ್ಯಂತ ಅಮೂಲ್ಯವಾದದ್ದು. ಇಂದಿನ ಕೆಲಸವನ್ನು ಇಂದೇ ಮಾಡಬೇಕು. ನಾಳೆಗೆ ಮುಂದೂಡುವ ಅಭ್ಯಾಸವು ನಮ್ಮ ಯಶಸ್ಸಿನ ದಾರಿಗೆ ಅತಿ ದೊಡ್ಡ ಶತ್ರು.ಶ್ರೇಷ್ಠ ಸಾಧಕಇತಿಹಾಸದ ಶ್ರೇಷ್ಠ ಸಾಧಕರ ಜೀವನವನ್ನು ಗಮನಿಸಿದರೆ, ಅವರು ಎಂದಿಗೂ ನಾಳೆಗಾಗಿ ಕಾಯಲಿಲ್ಲ ಎಂಬ ಸತ್ಯ ನಮಗೆ ಮನವರಿಕೆಯಾಗುತ್ತದೆ. ಭಾರತದ ಹೆಮ್ಮೆಯ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರು ಸಮಯ ಪಾಲನೆಗೆ ಮತ್ತು ತತ್‌ಕ್ಷಣದ ರ‍್ತವ್ಯ ಪ್ರಜ್ಞೆಗೆ ಹೆಸರಾಗಿದ್ದರು. ಒಮ್ಮೆ ಅವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹಳಿಯ ಶಬ್ದದಲ್ಲಾದ ಸಣ್ಣ ವ್ಯತ್ಯಾಸವನ್ನು ಆ ಕ್ಷಣದಲ್ಲೇ ಗ್ರಹಿಸಿ ತಕ್ಷಣವೇ ರೈಲಿನ ಅಪಘಾತ ಸರಪಳಿಯನ್ನು ಎಳೆದರು. “ನಾಳೆ ನೋಡೋಣ” ಅಥವಾ “ಮುಂದಿನ ನಿಲ್ದಾಣದಲ್ಲಿ ಹೇಳೋಣ” ಎಂದು ಅವರು ಅಂದು ಉದಾಸೀನತೆ ತೋರಿದ್ದರೆ ನೂರಾರು ಜೀವಗಳು ಬಲಿಯಾಗುತ್ತಿದ್ದವು. ಅವರು ಇಂದಿನ ಕ್ಷಣದ ಮಹತ್ವವನ್ನು ಅರಿತು ಕರ‍್ಯಪ್ರವೃತ್ತರಾದ ಕಾರಣಕ್ಕೇ ದೊಡ್ಡ ದುರಂತ ತಪ್ಪಿತು. ಇದನ್ನೇ ಮಹಾತ್ಮರು “ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈ ಕ್ಷಣವೇ ಮಾಡು” ಎಂದು ಬಣ್ಣಿಸಿದ್ದಾರೆ.ಚಲನಶೀಲ ಬದುಕಿನ ಯಶಸ್ಸಿನ ಸೂತ್ರಬದುಕಿನ ಹಾದಿಯಲ್ಲಿ ಸಮಯ ಮತ್ತು ಅವಕಾಶಗಳು ನದಿಯ ನೀರಿನಂತೆ, ಅವು ಸದಾ ಹರಿಯುತ್ತಲೇ ಇರುತ್ತವೆ. “ಹೋದ ಆಯುಷ್ಯ, ಚಲಿಸಿದ ನದಿ ಮತ್ತು ಕಳೆದುಹೋದ ಸಮಯ ಎಂದಿಗೂ ಮರಳಿ ಬರುವುದಿಲ್ಲ” ಎಂಬ ಪ್ರಕೃತಿಯ ಕಠೋರ ನಿಯಮವನ್ನು ನಾವು ಅರಿತಾಗ ಮಾತ್ರ ಪ್ರಸ್ತುತ ಕ್ಷಣದ ನಿಜವಾದ ಮೌಲ್ಯ ನಮಗೆ ತಿಳಿಯುತ್ತದೆ. ಮನುಷ್ಯನ ಅತಿ ದೊಡ್ಡ ದರ‍್ಬಲ್ಯವೆಂದರೆ ಆಲಸ್ಯ ಮತ್ತು ಮುಂದೂಡುವಿಕೆ. ಇಂದು ಸಿಕ್ಕ ಅವಕಾಶವನ್ನು ನಾಳೆಗೆ ಮುಂದೂಡುವಾಗ ನಾವು “ಇದ್ದಾಗ ಇರದ ಮೌಲ್ಯ, ಹೋದಾಗ ತಿಳಿಯಿತು” ಎಂಬ ಗಾದೆ ಮಾತನ್ನು ಮರೆತುಬಿಡುತ್ತೇವೆ. ಇಂದಿನ ಸುಂದರ ಕ್ಷಣಗಳನ್ನು, ಸಂಬಂಧಗಳನ್ನು ಅಥವಾ ಸಿಕ್ಕ ಸುರ‍್ಣಾವಕಾಶಗಳನ್ನು ನರ‍್ಲಕ್ಷಿಸಿ ನಾಳೆಯ ಭ್ರಮೆಯಲ್ಲಿ ಬದುಕುವುದೇ ಜೀವನದ ಅತಿ ದೊಡ್ಡ ಸೋಲು.ನಮ್ಮ ವಿದ್ಯರ‍್ಥಿ ಜೀವನವಿರಲಿ ಅಥವಾ ವೃತ್ತಿ ಬದುಕಿರಲಿ, ನಮಗೆ ಸಿಗುವ ಸಣ್ಣ ಅವಕಾಶವನ್ನೂ ಕಡೆಗಣಿಸಬಾರದು.ನಾಳೆಯ ಭ್ರಮೆಯಲ್ಲಿಇಂದಿನ ಸುಂದರ ಕ್ಷಣಗಳನ್ನು, ಸಂಬಂಧಗಳನ್ನು ಅಥವಾ ಸಿಕ್ಕ ಸುರ‍್ಣಾವಕಾಶಗಳನ್ನು ನರ‍್ಲಕ್ಷಿಸಿ ನಾಳೆಯ ಭ್ರಮೆಯಲ್ಲಿ ಬದುಕುವುದೇ ಜೀವನದ ಅತಿ ದೊಡ್ಡ ಸೋಲು.ನಮ್ಮ ಕಣ್ಣೆದುರಿನ ನಿತ್ಯ ಸತ್ಯಗಳು:💡 ಬೆಳಕಿನ ಬೆಲೆ: ಹಗಲಿಡೀ ಸರ‍್ಯನ ಬೆಳಕಿದ್ದಾಗ ಅದರ ಬೆಲೆ ನಮಗೆ ತಿಳಿಯುವುದಿಲ್ಲ, ಆದರೆ ರಾತ್ರಿಯ ಕತ್ತಲಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಹೋದಾಗ ಮಾತ್ರ ಒಂದೇ ಒಂದು ಸಣ್ಣ ಮೇಣದಬತ್ತಿಯ ಬೆಳಕು ಎಷ್ಟು ಅಮೂಲ್ಯ ಎಂಬುದು ಮನವರಿಕೆಯಾಗುತ್ತದೆ. ನೀರಿನ ಮೌಲ್ಯ: ನಲ್ಲಿಯಲ್ಲಿ ನೀರು ಬರುತ್ತಿರುವಾಗ ಬೇಕಾಬಿಟ್ಟಿ ಪೋಲು ಮಾಡುವ ನಾವು, ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಬಂದಾಗ ಮಾತ್ರ ನೀರಿನ ನಿಜವಾದ ಯೋಗ್ಯತೆಯನ್ನು ಅರಿಯುತ್ತೇವೆ.ಅಮ್ಮನ ಕೈರುಚಿಪ್ರತಿದಿನ ಅಮ್ಮ ಪ್ರೀತಿಯಿಂದ ಮಾಡುವ ಅಡುಗೆಯಲ್ಲಿ ನಾವು ನೂರು ತಪ್ಪುಗಳನ್ನು ಹುಡುಕುತ್ತೇವೆ, ಆದರೆ ಮನೆಯಿಂದ ದೂರದ ಊರಿಗೆ ಹೋಗಿ ಹೋಟೆಲ್ ಊಟ ತಿಂದಾಗ ಮಾತ್ರ ಅಮ್ಮನ ಕೈರುಚಿಯ ನಿಜವಾದ ಮೌಲ್ಯ ನೆನಪಾಗಿ ಕಣ್ಣೀರು ಬರುತ್ತದೆ. ಸಂಬಂಧಗಳು, ಆರೋಗ್ಯ ಮತ್ತು ಸಮಯ ನಮ್ಮ ಕೈಯಲ್ಲಿದ್ದಾಗಲೇ ಅವುಗಳನ್ನು ಗೌರವಿಸಬೇಕುಸಣ್ಣ ಅವಕಾಶಚಲನಚಿತ್ರ ರಂಗದ ಮಹಾನಾಯಕ ಅಮಿತಾಭ್ ಬಚ್ಚನ್ ಅವರು ೯೦ರ ದಶಕದಲ್ಲಿ ತಮ್ಮದೇ ಕಂಪನಿಯ ನಷ್ಟದಿಂದಾಗಿ ಸಂಪರ‍್ಣ ದಿವಾಳಿಯಾಗಿದ್ದರು. ಆ ಕಠಿಣ ಸಮಯದಲ್ಲಿ ಅವರಿಗೆ ದೂರರ‍್ಶನದ ‘ಕೌನ್ ಬನೇಗಾ ಕರೋಡ್ ಪತಿ’ ಕರ‍್ಯಕ್ರಮದ ಆಫರ್ ಬಂದಾಗ, ಅದನ್ನು ಸಣ್ಣ ಅವಕಾಶವೆಂದು ಅವರು ತಳ್ಳಿಹಾಕಲಿಲ್ಲ. ಅಂದು ಸಿಕ್ಕ ಆ ಒಂದು ಅವಕಾಶವನ್ನು ಅತ್ಯಂತ ಶ್ರದ್ಧೆಯಿಂದ ಬಳಸಿಕೊಂಡಿದ್ದರಿಂದಲೇ ಅವರು ಮತ್ತೆ ಯಶಸ್ಸಿನ ಶಿಖರಕ್ಕೇರಲು ಸಾಧ್ಯವಾಯಿತು. ಅವರು ಅಂದು ಇಂದಿನ ಅವಕಾಶವನ್ನು ಕಳೆದುಕೊಂಡಿದ್ದರೆ ನಾಳೆಯ ವೈಭವ ಸಿಗುತ್ತಿರಲಿಲ್ಲ.ಹೆಚ್ಚಿನ ಸಮಯನಮ್ಮ ಹಿರಿಯರು “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂದು ಸುಮ್ಮನೆ ಹೇಳಿಲ್ಲ; ಸಿಕ್ಕ ಅವಕಾಶವನ್ನು ಆರಂಭದಲ್ಲೇ ಬಳಸಿಕೊಳ್ಳುವ ಜಾಣ್ಮೆ ನಮ್ಮದಾಗಬೇಕು.ಅದೇ ರೀತಿ, ಬಡತನ ಮತ್ತು ಕಡು ನಿರಾಶೆಯಲ್ಲಿದ್ದ ಲೇಖಕಿ ಜೆ.ಕೆ. ರೌಲಿಂಗ್ ಅವರು ತಮಗೆ ಕಲ್ಪನೆಗಳು ಮೂಡಿದ ತಕ್ಷಣ ಸಿಕ್ಕ ಹರಿದ ಕಾಗದದ ಚೂರುಗಳ ಮೇಲೆಯೇ ಹ್ಯಾರಿ ಪಾಟರ್ ಕಥೆಯನ್ನು ಬರೆಯಲು ಶುರು ಮಾಡಿದರು. ಒಂದು ವೇಳೆ ಅವರು ಮನಸ್ಸಿನ ಸ್ಥಿತಿ ಸರಿಯಿಲ್ಲ ಎಂದು ಇಂದಿನ ಬರವಣಿಗೆಯನ್ನು ನಾಳೆಗೆ ಮುಂದೂಡಿದ್ದರೆ, ಜಗತ್ತಿನ ಅತ್ಯಂತ ಯಶಸ್ವಿ ಸಾಹಿತ್ಯ ಸರಣಿ ಎಂದಿಗೂ ಸೃಷ್ಟಿಯಾಗುತ್ತಿರಲಿಲ್ಲ. ಬದುಕಿನಲ್ಲಿ “ಸಮಯವು ಹಣಕ್ಕಿಂತ ಹೆಚ್ಚು ಅಮೂಲ್ಯವಾದುದು; ನೀವು ಹೆಚ್ಚು ಹಣವನ್ನು ಗಳಿಸಬಹುದು, ಆದರೆ ಹೆಚ್ಚಿನ ಸಮಯವನ್ನು ಗಳಿಸಲು ಸಾಧ್ಯವಿಲ್ಲ” ಎಂಬ ಸತ್ಯಕ್ಕೆ ರೌಲಿಂಗ್ ಅವರ ಜೀವನವೇ ಸಾಕ್ಷಿ.ಕೊನೆಯದಾಗಿ ಹೇಳಬೇಕೆಂದರೆ,“ಇಂದು” ಎಂಬುದು ಪ್ರಕೃತಿ ನಮಗೆ ನೀಡಿರುವ ಅಮೂಲ್ಯವಾದ ಉಡುಗೊರೆ. “ದೂರವಿರುವ ಬೆಟ್ಟ ಕಣ್ಣಿಗೆ ನುಣುಪಾಗಿ ಕಾಣುವುದು ಸಹಜ, ಆದರೆ ಬಾಯಾರಿಕೆ ಇಂಗಿಸುವುದು ನಮ್ಮ ಕಾಲ ಬುಡದಲ್ಲಿ ಹರಿಯುವ ಸಣ್ಣ ತೊರೆ ಮಾತ್ರ” ಎಂಬಂತೆ, ನಾಳೆಯ ಸುಳ್ಳು ಭರವಸೆಗಳಿಗಾಗಿ ಇಂದಿನ ವಾಸ್ತವವನ್ನು ಕಳೆದುಕೊಳ್ಳಬಾರದು. ಸಂಬಂಧಗಳು, ಆರೋಗ್ಯ ಮತ್ತು ಸಮಯ ನಮ್ಮ ಕೈಯಲ್ಲಿದ್ದಾಗಲೇ ಅವುಗಳನ್ನು ಗೌರವಿಸಬೇಕು. ಇಂದು ಸಿಕ್ಕ ಅವಕಾಶವನ್ನು ಇಂದೇ ಸದುಪಯೋಗಪಡಿಸಿಕೊಂಡು, ನಾಳೆಯ ಪಶ್ಚಾತ್ತಾಪದಿಂದ ಮುಕ್ತಿ ಪಡೆದು ಯಶಸ್ಸಿನತ್ತ ಹೆಜ್ಜೆ ಇಡುವುದೇ ನಿಜವಾದ ಬುದ್ಧಿವಂತಿಕೆ. ಜಯಶ್ರೀ. ಜೆ. ಅಬ್ಬಿಗೇರಿ

“ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ವಿಶೇಷ ಲೇಖನ ಜಯಶ್ರೀ. ಜೆ. ಅಬ್ಬಿಗೇರಿ Read Post »

ಕಾವ್ಯಯಾನ

ಪರವಿನಬಾನು ಯಲಿಗಾರ‌ ಅವರ ಕವಿತೆ “ನೆರೆ-ಬರ”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ‌ “ನೆರೆ-ಬರ” ಇದೋ ನೋಡಿ ….ಈ ವರ್ಷದ ಸೋಜಿಗ ,ಒಂದು ಕಡೆ ನೆರೆ , ಇನ್ನೊಂದು ಕಡೆ ಬರ .ಇರುವುದೊಂದೇ ಬಾನು , ಇರುವುದೊಂದೇ ಭುವಿನಡುವೆ ಎನೀ  ಅಂತರ….. ? ಒಂದೆಡೆ ಬರಗಾಲದ ಭೀತಿ ,ಇನ್ನೊಂದೆಡೇ  ಪ್ರವಾಹಕೆ ಆಹುತಿಬೇಡವೆಂದು ಗೋಳಾಡಿದರು , ಮುನಿದ ಮಾರಿಯ ಹಾಗೆ ಸುರಿಯುತಿಹುದು ಬಿಡದೆ ಮಹಾಮಳೆ ,ಕಣ್ಣು ಮಿಟುಕಿಸಿದ್ದೆ ತಡ , ಕಂಡಿದ್ದೆಲ್ಲವು ಅವಶೇಷ ,ಸುತ್ತ ನೋಡಿದರೂ ಜಲ ದಿಗ್ಬಂಧನ…… ಜೀವಮಾನದ ಗಳಿಕೆ ಕೊಚ್ಚಿ ಹೋಯಿತು ,ಗಳಿಸಿದ ಧನ ಕನಕಕ್ಕೆಇಲ್ಲದ ಹಾಗಾಯಿತು ಕಿಮ್ಮತ್ತುನಾನು , ನನ್ನವರು , ನನ್ನದು ಎನ್ನುವ ಮೋಹ ಪಾಶಸಡಿಲಗೊಂಡು ,  ನಶ್ವರ ಜಗದ ಸತ್ಯ ದರ್ಶನ….. ಕಾಳಿಲ್ಲದೆ , ಕೂಳಿಲ್ಲದೆ  ಕಂಗೆಟ್ಟ ಜೀವ ಕುಲನೀರಿಲ್ಲದೆ ಸೊರಗುತ್ತಿದೆ ಹಸಿರ ಬಸಿರುವರುಣದೇವನ ಕೃಪೆಗೆ ನಡೆದಿವೆ ಹಲವು ಪುಜೆಗಳು…. ಸುರಿಯುವ ಸುಳಿವೇ ಕೊಡದ ಮಳೆರಾಯಆಡುತಿರುವ ನಮ್ಮೊಡನೆ  ಜೂಟಾಟಹಸಿವು , ದಾಹಕೆ  ಅದೆಷ್ಟು ಬಲಿ  ಬಿಳುವುದೊ ತಿಳಿಯದು , ….. ತಾಪಮಾನದ ಹೆಚ್ಚಳಕೆ  ಪುರಾಣ ಐತಿಹ್ಯದ ಕೇದಾರನಾಥನೆ ಕರಗುತ್ತಿದ್ದಾನೆಭೂ ಲೋಕವಿಗ ಅಸುರ ಲೋಕ ,ಸತ್ಯ ಮಿತ್ಯದಲೆಕ್ಕದಲ್ಲಿ ಸತ್ಯ ಶೂನ್ಯವಾಗಿದೆ .ಸೃಷ್ಠಿ ಕರ್ತನ ಅಣತಿ ಮೀರಬಹುದೆ?ಪುಣ್ಯದ ದಿನಗಳು ಕಳೆದಾಗ ,ಉಳಿಯುವ ಶೇಷವೆ ಕರ್ಮ ….. ಪರವಿನಬಾನು ಯಲಿಗಾರ

ಪರವಿನಬಾನು ಯಲಿಗಾರ‌ ಅವರ ಕವಿತೆ “ನೆರೆ-ಬರ” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಅಂಕಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸಮಾಜವಾದಿ ಚಿಂತಕರು,ಗಾಂಧಿವಾದಿಡಾ ಕುಮಾರ ಸಪ್ತರ್ಷಿ ಗ್ರಾಮ ರಾಜ್ಯದ ಕನಸು ಕಂಡ ಅಪ್ಪಟ ಗಾಂಧಿವಾದಿ ಡಾ. ಕುಮಾರ ಸಪ್ತರ್ಷಿ ಅವರು ಮಹಾರಾಷ್ಟ್ರದ ಪ್ರಸಿದ್ಧ ಹಿರಿಯ ಸಮಾಜವಾದಿ ಚಿಂತಕರು, ಗಾಂಧಿವಾದಿ ಹೋರಾಟಗಾರರು ಮತ್ತು ಯುವ ನಾಯಕರಾಗಿದ್ದರು. ಅವರು ಮಹಾರಾಷ್ಟ್ರದ ಸಾಮಾಜಿಕ, ರಾಜಕೀಯ ಮತ್ತು ಪ್ರಗತಿಪರ ಚಳವಳಿಗಳಲ್ಲಿ ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ದುರದೃಷ್ಟವಶಾತ್, ಅವರು ತಮ್ಮ 85ನೇ ವಯಸ್ಸಿನಲ್ಲಿ 18 ಜುಲೈ 2026 ರಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿನಿಧನರಾದರು. 1941ರ ಆಗಸ್ಟ್ 21ರಂದು ಜನಿಸಿದ ಸಪ್ತರ್ಷಿ ಅವರು ಬಿಹಾರದ ಗಯಾದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ತಮ್ಮ ಸಾಮಾಜಿಕ ಜೀವನವನ್ನು ಆರಂಭಿಸಿದರು; ಅಲ್ಲಿ ಅವರು ಬರಗಾಲದಿಂದ ತೊಂದರೆಗೀಡಾದ ಜನರಿಗಾಗಿ ಸಹಾಯ ಕೇಂದ್ರವೊಂದನ್ನು ನಡೆಸುತ್ತಿದ್ದರು. ಅವರು 1967ರ ನವೆಂಬರ್‌ನಲ್ಲಿ ‘ಯುಕ್ರಂದ್’ (Yukrand) ಸಂಘಟನೆಯನ್ನು ಸ್ಥಾಪಿಸಿದರು. ಮಹಾರಾಷ್ಟ್ರದ ಇತಿಹಾಸದಲ್ಲಿ ‘ಯುಕ್ರಂದ್’ ಕಾಲಘಟ್ಟವು ಮಹತ್ವದ ಸ್ಥಾನವನ್ನು ಹೊಂದಿದೆ, ಏಕೆಂದರೆ ಇದು ಸಾಮಾಜಿಕ ನ್ಯಾಯದ ವಿಷಯವನ್ನು ಬಲವಾಗಿ ಎತ್ತಿಕೊಂಡ ಸಮಾಜವಾದಿ ನಾಯಕರ ಗುಂಪಾಗಿತ್ತು. ಜಾತಿ ತಾರತಮ್ಯದ ವಿಷಯದಲ್ಲಿ ಈ ಸಂಘಟನೆಯು ಎಷ್ಟು ಸಕ್ರಿಯವಾಗಿತ್ತೆಂದರೆ, ಮುಂದಿನದಿನಗಳಲ್ಲಿಅದು ‘ದಲಿತ ಪ್ಯಾಂಥರ್’ ಜೊತೆಗೂಡಿ ಜಂಟಿ ಹೋರಾಟಗಳನ್ನು ನಡೆಸಿತು. ಕುಮಾರ ಸಪ್ತರ್ಷಿ ಅವರ ಜೀವನ ಮತ್ತು ಪ್ರಮುಖ ಕಾರ್ಯಗಳ  ಪ್ರಮುಖ ಸಾಧನೆಗಳು ಮತ್ತು ಸಂಘಟನೆಗಳು ಯುವಕ ಕ್ರಾಂತಿ ದಳ (ಯುಕ್ರಾಂದ್): ಯುವಕರಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಪ್ರಗತಿಪರ ಆಲೋಚನೆಗಳನ್ನು ಬೆಳೆಸಲು ಅವರು 1967 ರಲ್ಲಿ ಈ ಪ್ರಭಾವಿ ಯುವ ಸಂಘಟನೆಯನ್ನು ಸ್ಥಾಪಿಸಿದರು. ಮಹಾರಾಷ್ಟ್ರ ಗಾಂಧಿ ಸ್ಮಾರಕ ನಿಧಿ: ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ, ಗಾಂಧಿವಾದಿ ತತ್ವಗಳನ್ನು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಸ ಪೀಳಿಗೆಗೆ ತಲುಪಿಸಲು ಶ್ರಮಿಸಿದರು.ಸಾಮಾಜಿಕ ಹೋರಾಟಗಳು: ಭ್ರಷ್ಟಾಚಾರ, ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ್ದ ಅವರು, ವಿವಿಧ ಆಂದೋಲನಗಳ ಭಾಗವಾಗಿ ಸುಮಾರು 35 ಕ್ಕೂ ಹೆಚ್ಚು ಬಾರಿ ಜೈಲು ಸೇರಿದ್ದರು.  ತುರ್ತು ಪರಿಸ್ಥಿತಿಯ (Emergency) ಸಮಯದಲ್ಲಿ ಅವರು ‘ಮಿಸಾ’ (MISA) ಕಾಯ್ದೆಯಡಿ ಯೆರವಾಡ ಜೈಲಿನಲ್ಲಿ ಬಂಧಿಯಾಗಿದ್ದರು. ರಾಜಕೀಯ ಮತ್ತು ಸಾಹಿತ್ಯಿಕ ಕೊಡುಗೆಶಾಸಕರಾಗಿ ಸೇವೆ: 1977 ರಲ್ಲಿ ಜನತಾ ಪಕ್ಷವನ್ನು ಸೇರಿ, 1978 ರ ವಿಧಾನಸಭಾ ಚುನಾವಣೆಯಲ್ಲಿ ಅಹಮದ್‌ನಗರ ಕ್ಷೇತ್ರದಿಂದ ಶಾಸಕರಾಗಿ (MLA) ಆಯ್ಕೆಯಾಗಿದ್ದರು. *ಪತ್ರಿಕೋದ್ಯಮ ಮತ್ತು ಸಾಹಿತ್ಯ: ಪ್ರಗತಿಪರ ವಿಚಾರಗಳನ್ನು ಹರಡಲು ‘ಸತ್ಯಾಗ್ರಹಿ ಪತ್ರಿಕೋದ್ಯಮ’ (Satyagrahi Vichardhara) ಎಂಬ ಮರಾಠಿ ಮಾಸಿಕ ಪತ್ರಿಕೆಯ ಸಂಪಾದಕರಾಗಿ ದೀರ್ಘಕಾಲ ಕೆಲಸ ಮಾಡಿದರು. ಅವರು ‘ಸಂಕಲ್ಪ’, ‘ಯಾತ್ರಿ’ ಮತ್ತು ‘ಡೇಸ್ ಅಟ್ ಯೆರವಾಡ ಯೂನಿವರ್ಸಿಟಿ’ ಸೇರಿದಂತೆ ಹಲವು ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದಾರೆ. ವೃತ್ತಿಯಿಂದ ವೈದ್ಯರಾಗಿದ್ದರೂ (Medical Doctor), ತಮ್ಮ ಇಡೀ ಜೀವನವನ್ನು ಸಮಾಜ ಸೇವೆ, ಜಾತಿ ನಿರ್ಮೂಲನೆ ಮತ್ತು ಸಮಾನತೆಯ ಹೋರಾಟಕ್ಕಾಗಿ ಮುಡುಪಾಗಿಟ್ಟಿದ್ದರು. ಸಮಾಜವಾದದ ಗಟ್ಟಿ ಕೊಂಡಿಯೊಂದು ಕಳಚಿತಿದೆ. ಬುದ್ಧ ಬಸವ ಮಹಾತ್ಮಾ ಗಾಂಧಿ ಬಾಬಾಸಾಹೇಬ ಅಂಬೇಡ್ಕರ ಅವರ ವಿಚಾರ ಧಾರೆಗೆ ಆಕರ್ಷಿತರಾದ ಇವರು ಜೀವನದಲ್ಲಿ ಬಡವರ ಪರವಾಗಿ ಧ್ವನಿ ಎತ್ತಿದರು. ಜೆಪಿ ಚಳುವಳಿಯ ಮಹಾರಾಷ್ಟ್ರದ ಉಸ್ತುವಾರಿ ವಹಿಸಿದ ಅಪ್ಪಟ ಭಾರತೀಯ ಸಂಸ್ಕೃತಿ ಚಿಂತಕ ಸಮಾಜವಾದಿ ಈಗ ನೆನಪು ಮಾತ್ರ. ಇತ್ತೀಚೆಗೆ ಶ್ರೀ ಸಂಜಯ ಇಂಡೆ ಅವರ ಮೂಲಕ ಬಸವ ತಿಳುವಳಿಕೆ ಮತ್ತು ತತ್ವಜ್ಞಾನದ ಒಂದು ದಿನದ ಕಾರ್ಯಾಗಾರವನ್ನು ಪುಣೆಯ ಗಾಂಧಿ ಭವನದಲ್ಲಿ ಮಾಡಲು ಅವರ ಮೂಲಕ ನನಗೆಸೂಚಿಸಿದ್ದರು. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಕಾವ್ಯ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಕಾವ್ಯ” ಕಾವ್ಯ ನನ್ನಲ್ಲಿದೆ ನಿನ್ನಲ್ಲಿದೆ ಕಾವ್ಯ ಮನದ ಮಿಡಿತಲ್ಲಿದೆಹೃದಯದ ತುಡಿತದೊಳಿದೆಎದೆ ಕದದ ಬಡಿತದಲ್ಲಿದೆ. ಕಾವ್ಯ ಬೀಸುವ ಕಲ್ಲಿನ ಸದ್ದೊಳುಕೇರುವ ಮರದ ಕಾಳಿನಲ್ಲಿಹುದುಬಿಂದಿಗೆ ಬಾವಿಯೊಳು ಮುಳುಗವುದರಲ್ಲಿದೆ. ಕಂದನ ಹಸಿವಿನ ಅಳುವಿನಲಿತಾಯಿ ರಮಿಸಲು ಹಾಡುವ ರಾಗದೊಳುಕಾವ್ಯ ಅಪ್ಪನ ಅಗಾಧ ಪ್ರೀತಿಯಲ್ಲಿದೆ. ರೈತನುಳುವ ನೇಗಿಲದ ಹದದಲ್ಲಿಕುಂಟಿ ಕೂರಗಿಯ ತಾಳದಲಿಕಾವ್ಯಕೂ ಜನನವಿಹುದಲ್ಲಿ ಹಲ್ಲುದುರಿ ಹಣ್ಣಾದ ಅಜ್ಜ ಅಜ್ಜಿಯ ನಗುವಲಿಕೈಗಾಸರೆಯಾದ ಕೋಲಿನಲಿದೆ ಕಾವ್ಯಹಿರಿಯರ ಹರಕೆಯೊಳಿದೆಬದುಕಿನ ಬವಣೆಯೊಳಿದೆ. ಕಾವ್ಯದ ಕಟ್ಟುವವರ ಮನದಲಿದೆಸುಪ್ತ ಮನಸ್ಸಿನಾಳದಲಿ ಹುದುಗಿದೆಹುಟ್ಟಿನಲಿದೆ ಗುಟ್ಟಿನಲ್ಲಿದೆಸಾವಿನಂಚಿನಲ್ಲಿಯೂ ಇದೆ. ಕಲ್ಪನಾ ಎಸ್ ಪಾಟೀಲಕಾವ್ಯಧರೆ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಕಾವ್ಯ” Read Post »

ಇತರೆ

ಕವಿತಾ ಶ್ರೀನಿವಾಸ್ ನಾಯಕ್ “ಆಯ್ಕೆ”

ಲೇಖನ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್  ಆಯ್ಕೆ “ಆಯ್ಕೆ” ಎಂಬ ಪದ ಚಿಕ್ಕದಾದರೂ, ಅದರ ಅರ್ಥ ಮತ್ತು ಪರಿಣಾಮ ಬಹಳ ದೊಡ್ಡದು.ನಮ್ಮ ಜೀವನವೇ ಆಯ್ಕೆಗಳ ಮೇಲೆ ನಿಂತಿದೆ.ಮಾರುಕಟ್ಟೆಗೆ ಹೋದಾಗ ತಾಜಾ ತರಕಾರಿಯನ್ನು ಆಯ್ಕೆ ಮಾಡುತ್ತೇವೆ. ಅಂಗಡಿಯಲ್ಲಿ ದಿನನಿತ್ಯದ ಸಾಮಾನುಗಳನ್ನು ಗುಣಮಟ್ಟ ನೋಡಿ ಆಯ್ಕೆ ಮಾಡುತ್ತೇವೆ. ಬಟ್ಟೆ, ಮನೆ, ವಾಹನ, ಉದ್ಯೋಗ, ಶಿಕ್ಷಣ—ಪ್ರತಿಯೊಂದರಲ್ಲೂ ನಮ್ಮ ಆಯ್ಕೆ ಇರುತ್ತದೆ.ನೆಂಟಸ್ತಿಕೆ ಆಗುವಾಗ, ಹೆಣ್ಣು ಹಾಗೂ ಗಂಡಿನ ಯೋಗ್ಯತೆ, ಸಂಸ್ಕಾರ, ಶಿಕ್ಷಣ, ಸ್ವಭಾವ ಎಲ್ಲವನ್ನೂ ಗಮನಿಸಿ ಆಯ್ಕೆ ಮಾಡಲಾಗುತ್ತದೆ.ರಾಜಕೀಯದಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಜನಪ್ರತಿನಿಧಿಗಳ ಆಯ್ಕೆ ನಡೆಯುತ್ತದೆ. ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ವಿವಿಧ ಪದಾಧಿಕಾರಿಗಳ ಆಯ್ಕೆ ನಡೆಯುತ್ತದೆ. ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆ, ಕ್ರೀಡಾ ತಂಡದಲ್ಲಿ ಆಟಗಾರರ ಆಯ್ಕೆ, ಉದ್ಯೋಗದಲ್ಲಿ ಅಭ್ಯರ್ಥಿಗಳ ಆಯ್ಕೆ—ಹೀಗೆ ಜೀವನದ ಪ್ರತಿಯೊಂದು ಹಂತದಲ್ಲೂ ಆಯ್ಕೆ ಅನಿವಾರ್ಯ.ಸಾಮಾನ್ಯವಾಗಿ ನಾವು ಒಳ್ಳೆಯದನ್ನೇ, ಯೋಗ್ಯವಾದದ್ದನ್ನೇ ಅಥವಾ ಒಳ್ಳೆಯ ವ್ಯಕ್ತಿಯನ್ನೇ ಆಯ್ಕೆ ಮಾಡಲು ಬಯಸುತ್ತೇವೆ.ಆದರೆ, ಕೆಲವು ಆಯ್ಕೆಗಳು ಮನಸ್ಸಿಗೆ ನೋವು ಕೊಡುತ್ತವೆ.ಕೆಲವರು ಗೆಳೆತನದಲ್ಲಿ, ಪ್ರೀತಿಯಲ್ಲಿ ಅಥವಾ ಗಂಡ-ಹೆಂಡತಿಯ ಸಂಬಂಧದಲ್ಲಿಯೂ ಎದುರಿನ ವ್ಯಕ್ತಿಯನ್ನು ಮೊದಲ ಆದ್ಯತೆಯಾಗಿ ಅಲ್ಲ, ಕೇವಲ “ಆಯ್ಕೆ”ಯಾಗಿ ಇಟ್ಟುಕೊಳ್ಳುತ್ತಾರೆ.ಅವರಿಗೆ ಸಮಯ ಇದ್ದಾಗ ಮಾತ್ರ ನೆನಪಾಗುತ್ತದೆ. ಬೇಸರವಾದಾಗ ಮಾತ್ರ ಕರೆ ಮಾಡುತ್ತಾರೆ. ಬೇರೆಯವರು ಸಿಗದಿದ್ದಾಗ ಮಾತ್ರ ಮಾತನಾಡುತ್ತಾರೆ. ಅಗತ್ಯವಿದ್ದಾಗ ಮಾತ್ರ ಹತ್ತಿರವಾಗುತ್ತಾರೆ. ಕೆಲಸ ಮುಗಿದ ನಂತರ ಮತ್ತೆ ದೂರವಾಗುತ್ತಾರೆ.ಇಂತಹ ಸಂಬಂಧದಲ್ಲಿ ಪ್ರೀತಿ ಇರುವುದಿಲ್ಲ; ಸ್ವಾರ್ಥ ಮಾತ್ರ ಇರುತ್ತದೆ.ನಿಜವಾದ ಸಂಬಂಧ ಎಂದರೆ, ಅನುಕೂಲಕ್ಕೆ ತಕ್ಕಂತೆ ನೆನಪಾಗುವ ವ್ಯಕ್ತಿಯಾಗಿರುವುದಲ್ಲ. ಸುಖದಲ್ಲೂ ದುಃಖದಲ್ಲೂ ಜೊತೆಯಾಗುವ, ಗೌರವ ಕೊಡುವ, ವಿಶ್ವಾಸ ಉಳಿಸಿಕೊಳ್ಳುವ ವ್ಯಕ್ತಿಯಾಗಿರುವುದು.ಯಾರ ಜೀವನದಲ್ಲೂ “ಆಯ್ಕೆ”ಯಾಗಿ ಉಳಿಯುವುದಕ್ಕಿಂತ, “ಆದ್ಯತೆ”ಯಾಗಿ ಬದುಕುವುದು ಹೆಚ್ಚು ಮೌಲ್ಯಯುತ.ಏಕೆಂದರೆ, ನಮ್ಮನ್ನು ಬೇಕಾದಾಗ ಮಾತ್ರ ನೆನಪಿಸಿಕೊಳ್ಳುವವರಿಗಿಂತ, ಯಾವಾಗಲೂ ನಮ್ಮನ್ನು ಗೌರವಿಸುವವರೇ ನಿಜವಾದ ಸಂಬಂಧಗಳು.“ನಮ್ಮನ್ನು ಕೇವಲ ಒಂದು ‘ಆಯ್ಕೆ’ಯಾಗಿ ನೋಡುವವರ ಹಿಂದೆ ಓಡುವುದಕ್ಕಿಂತ, ನಮ್ಮನ್ನು ‘ಆದ್ಯತೆ’ಯಾಗಿ ಕಾಣುವವರನ್ನು ಗೌರವಿಸೋಣ. ಅದೇ ಸಂಬಂಧದ ನಿಜವಾದ ಮೌಲ್ಯ.” ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

ಕವಿತಾ ಶ್ರೀನಿವಾಸ್ ನಾಯಕ್ “ಆಯ್ಕೆ” Read Post »

ಕಾವ್ಯಯಾನ

ಡಾ. ನಟರಾಜ್ ಆರ್ಯ ಅವರ ಕವಿತೆ “ಅರಳಿಯ ನೆರಳು”

ಕಾವ್ಯ ಸಂಗಾತಿ ಡಾ. ನಟರಾಜ್ ಆರ್ಯ “ಅರಳಿಯ ನೆರಳು” ಬೆಟ್ಟ ಗುಡ್ಡದ ತೋಳಲಿಕೆರೆಯೂರ ಕೇರಿ;ಅರಳಿಯ ನೆರಳಲಿಊರು ಉಸಿರಾಡಿತು. ಕರುಗಳ ಮೊರೆ,ಒಲೆ ಹೊಗೆ,ಒನಕೆಯ ತಾಳಕೆಬೆಳಗು ಮೂಡಿತು. ಹುಟ್ಟು ಬಂದರೆಅರಳಿಯ ಕೆಳಗೆ;ಸಾವು ಬಂದರೂಅರಳಿಯ ಕೆಳಗೆ. “ಅರಳಿ ಕಡೀಬೇಡಯ್ಯ…ಒಳಗ ದೇವರಿರ್ತಾರೆ…”ಹಿರಿಯರ ನುಡಿಗಾಳಿಯಲಿ ತೇಲಿತು. ಹೊನ್ನಯ್ಯನ ಕೊಡಲಿಬೇರಿಗೆ ಇಳಿಯಿತು. ಕೊಂಬೆ ಮುರಿಯಿತು.ಗೂಡು ಉದುರಿತು.ಮರಿ ಬಿತ್ತು.ಊರು ಮೌನವಾಯಿತು. ತಾಯಿಹಕ್ಕಿ ಅತ್ತಿತು;ಗಾಳಿ ನಿಟ್ಟುಸಿರಿಟ್ಟಿತು;ಅರಳಿಯ ಎಲೆಗಳುಮಾತಿಲ್ಲದೆ ಉದುರಿದವು. ಅರಳಿ ಬಿದ್ದ ಮೇಲೆಬಿಸಿಲು ಹರಡಿತು;ಕೇರಿಯ ದಾರಿಯಲಿನೆರಳು ಕಳೆದುಹೋಯಿತು. ಹೂವಯ್ಯಕಣ್ಣು ಮುಚ್ಚಿದ. ಅರಳಿ ಬಿದ್ದ ಜಾಗದಲ್ಲಿಇಂದಿಗೂಗಾಳಿ ಬೀಸಿದರೆಮೌನ ಅಲುಗಾಡುತ್ತಿದೆ. ಡಾ. ನಟರಾಜ್ ಆರ್ಯ

ಡಾ. ನಟರಾಜ್ ಆರ್ಯ ಅವರ ಕವಿತೆ “ಅರಳಿಯ ನೆರಳು” Read Post »

You cannot copy content of this page

Scroll to Top