ರೇಷ್ಮಾ ಕಂದಕೂರ ಅವರ ಕವಿತೆ “ಎತ್ತ ಸಾಗುತ್ತಿದೆ”
ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಎತ್ತ ಸಾಗುತ್ತಿದೆ” ಎತ್ತ ಸಾಗುತ್ತಿದೆ ನವ ಸಮಾಜಸಮಾನತೆ ಗಾಳಿಗೆ ತೂರಿನಾಗರಿಕತೆಯ ಕುರುಹುಗಳ ಅರಿಯದೆಮಾನವೀಯತೆಯ ಬೆತ್ತಲಾಗಿಸಿದೆ . ಅರೆಬೆತ್ತಲೆ ಮೈ ಮನಮನಸಾ ಇಚ್ಛೆಯ ಮೆರವಣಿಗೆಸಾಮರಸ್ಯ ಕುರುಡಾಗಿಸಿವಿಕೃತ ಮನಸ್ಸಿನ ಅನಾವರಣ. ನಶೆಯ ಗುಂಗಲಿಸಮಾಜಿಕ ಜಾಲತಾಣಗಳಿಗೆ ಮುಗಿ ಬಿದ್ದುಜವಾಬ್ದಾರಿ ಮರೆತುಕರುಳ ಕುಡಿಗಳು ಹೊಂಚು ಹಾಕುತ್ತಿವೆ. ಬಿಕೋ ಎನ್ನುತ್ತಿವೆ ಹಳ್ಳಿ ಹಾಡುಹೂಬಳ್ಳಿ ಗಳು ಮುಳ್ಳು ಮೊನಚಾಗಿಹಿರಿಯ ಜೀವಗಳು ಹಪಹಪಿಸುತ್ತಿವೆಜೀವ ಕೊಂಡಿ ಕಳಚುತಿದೆ. ಎಲ್ಲೆಂದರಲ್ಲಿ ಕಾರ್ಖಾನೆಕೆಲಸದ ಆಸೆಗೆ ಭೂಮಿ ಮಾರಿಕೊಂಡುಉಸಿರಾಡಲು ಕಲುಷಿತ ಗಾಳಿಹೊಟ್ಟೆ ಹೊರೆಯಲು ಜೀತದಾಳು. ರಕ್ತ ಸಂಬಂಧಕೆ ಆಗುಂತಕರಾಗಿತಮ್ಮವರನೆ ಹೆಣವಾಗಿಸಿಮನೆಯಲ್ಲಿ ಹೂಳುವರೆಲ್ಲವಿಕೃತ ಮನಸುಗಳು. ಉಡ್ವೇಗಕೆ ತಲೆದೂಗಿಹಸುಳೆಗಳು ನರಳಾಟಕಾಮಂಧತೆಯ ಅನಾವರಣಅಕ್ರಮ ದಂದೆಗಳ ತಾಣ. ಮದ್ದು ಗುಂಡುಗಳ ಹಾವಳಿಕೆಂಡ ಮಂಡಲ ವಾಗಿಸಿದೆನೆತ್ತರು ಹರಿಸಿಒತ್ತರಿಸಿದ ನೋವು ಕೇಳುವವರಾರು. ಪ್ರಾರ್ಥನೆಯಲು ಹಿಂಸಾಚಾರಬೋಧನೆಯಲು ಭಿನ್ನಾಚಾರಉಂಡ ಮನೆಗೆ ಕನ್ನ ಹಾಕುವ ವಿಚಾರ ತಿಳಿಯುತ್ತಿಲ್ಲ ನವ ಸಮಾಜಕೆಹರುಕ ಬಟ್ಟೆ ತೊಟ್ಟುಮೈ ತೋರಿಸುತಬದ್ಧತೆ ಇಲ್ಲದ ಪರಿಪಾಠತರಾವರಿ ಮೋಹಕೆ ಬಲಿಯಾಗುತಿದೆ. ರೇಷ್ಮಾ ಕಂದಕೂರ
ರೇಷ್ಮಾ ಕಂದಕೂರ ಅವರ ಕವಿತೆ “ಎತ್ತ ಸಾಗುತ್ತಿದೆ” Read Post »



