ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ವರ್ತಮಾನ

“ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ವಿಶೇಷ ಲೇಖನ,ಆರ್ ಜಿ ಹಳ್ಳಿ ನಾಗರಾಜ

ಕನ್ನಡ ಸಂಗಾತಿ ಆರ್ ಜಿ ಹಳ್ಳಿ ನಾಗರಾಜ “ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ಕನ್ನಡ – ಕನ್ನಡಿಗ – ಕರ್ನಾಟಕದ ಅಸ್ಮಿತೆಯ ಸಂಕೇತವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ 112 ವರ್ಷಗಳ ಪ್ರಾಯ. ಮೈಸೂರಿನ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ಈ ಸಂಸ್ಥೆಯ ಧ್ಯೇಯೋದ್ದೇಶಗಳು ಆರೇಳು ದಶಕಗಳ ಕಾಲ ಸಮಸ್ಯೆ ಇಲ್ಲದೆ ನಡೆದುಕೊಂಡು ಹೋದವು. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ – ಇವುಗಳ ರಕ್ಷಣೆ ಹಾಗೂ ಅಭಿವೃದ್ಧಿಯ ಮುಖ್ಯ ಉದ್ದೇಶದಿಂದ 1915ರಲ್ಲಿ ಸ್ಥಾಪಿತವಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಅಂದಿನಿಂದಲೂ ಈ ಮಹಾ ಸಂಸ್ಥೆ ಅನೇಕ ವಿದ್ವಾಂಸರ, ನಾಡು ನುಡಿಯ ಅಭಿಮಾನಿಗಳ ಮತ್ತು ಸರಕಾರದ ಪ್ರೋತ್ಸಾಹ ಪಡೆದುಕೊಂಡು ಜನತೆಯಲ್ಲಿ ಹೊಸ ಹೊಸ ಉತ್ಸಾಹವನ್ನೂ ಭಾಷಾ ಅಭಿಮಾನವನ್ನೂ ಬೆಳೆಸುತ್ತ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತವಾಗಿ ಸಾಹಿತ್ಯ ಪರಿಷತ್ತಿನ ಇತಿಹಾಸ ಪ್ರಕಟಿಸಿದೆ. ಅದರ ದಾಖಲೆಯಲ್ಲಿ  – “ಕರ್ನಾಟಕ ಈಗಿರುವಂತೆ ಸಂಘಟಿತವಾಗುವುದಕ್ಕೆ ಮೊದಲು ಹಲವಾರು ಆಡಳಿತಗಳಡಿ ಹಂಚಿ ಹೋಗಿತ್ತು. ಮದರಾಸು, ಬೊಂಬಾಯಿ ಪ್ರಾಂತಗಳಿಗೆ ಹಾಗೂ ಮೈಸೂರು, ಹೈದರಾಬಾದ್ ಸಂಸ್ಥಾನಗಳಿಗೆ ಕನ್ನಡ ನಾಡಿನ ಕೆಲವು ಭಾಗಗಳು ಸೇರಿದ್ದವು. ಕೊಡಗು ಒಂದು ಪ್ರತ್ಯೇಕ ಆಡಳಿತಕ್ಕೆ ಒಳಪಟ್ಟಿತ್ತು. ಬ್ರಿಟಿಷ್ ಇಂಡಿಯಾ ಸರಕಾರದ ಆಡಳಿತಕ್ಕೆ ಒಳಪಟ್ಟಿದ್ದ ಮದರಾಸು, ಬೊಂಬಾಯಿ ಪ್ರಾಂತಗಳಲ್ಲಿ ದ್ವೀಪಗಳಂತೆ ಸೊಂಡೂರು, ಸವಣೂರು, ರಾಮದುರ್ಗ ಮುಂತಾದ ಹಿರಿ ಕಿರಿಯ ಸಂಸ್ಥಾನಗಳು ಇದ್ದವು. ಕನ್ನಡ ಜನ ಭಿನ್ನ-ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರು. ಅವರು ಆಡುತ್ತಿದ್ದ ಕನ್ನಡ ಭಾಷೆಯ ಮೇಲೆ ಅನ್ಯಭಾಷಾ ಪ್ರಭಾವ ಬಿದ್ದು, ಉಚ್ಚಾರಣೆಯಲ್ಲಿ ವ್ಯತ್ಯಾಸಗಳು ಉಂಟಾಗಿದ್ದವು. ಇವುಗಳ ಪರಿಣಾಮವಾಗಿ ವಿವಿಧ ಪ್ರದೇಶಗಳ ಕನ್ನಡಿಗರು ಅಪರಿಚಿತರಂತೆ ಕಾಣುತ್ತಿತ್ತು” ಎಂಬ ಅಂಶದ ಮೇಲೆ‌ ಬೆಳಕು ಚೆಲ್ಲುತ್ತದೆ. ಕನ್ನಡ ಭಾಷೆ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಕನಸು ಕಂಡ ಅನೇಕ ಹಿರಿಯ ಸಾಹಿತಿಗಳು ಸರ್ಕಾರ ನೀಡಿದ ಅನುದಾನದಲ್ಲಿ ಉಪನ್ಯಾಸ, ಪುಸ್ತಕ, ಪತ್ರಿಕೆ ಪ್ರಕಟಣೆ, ಕನ್ನಡ ಜನತೆ ಒಗ್ಗೂಡಲು ಸಾಹಿತ್ಯ ಸಮ್ಮೇಳನ ನಡೆಸುತ್ತಾ ಬಂದು ಜನಮನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಟ್ಟಿಯಾಗಿ  ನೆಲೆ ಊರಿತು. ಕನ್ನಡಿಗರ ವಿಶ್ವಾಸ ಗಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಶತಮಾನದ 70ರ ದಶಕದ ಕೊನೆಯಲ್ಲಿ ವಿವಾದಕ್ಕೊಳಗಾಗಿತ್ತು. ನಂತರ ಮತದಾರರಿಂದ ಆಯ್ಕೆಯಾಗಿ ಬಂದ ಅಧ್ಯಕ್ಷರು ಅದಕ್ಕೆ ಚ್ಯುತಿ ಬಾರದಂತೆ ಮುನ್ನಡೆಸಿಕೊಂಡು ಹೋದರು. ಆದರೆ, ಕಳೆದ 11 ವರ್ಷದಲ್ಲಿ ಬಂದ ಇಬ್ಬರು ಕಸಾಪ ರಾಜ್ಯಾಧ್ಯಕ್ಷರಿಂದ ಪರಿಷತ್ತಿಗೆ ಕಳಂಕ ಒದಗಿತು. ಆಡಳಿತ ವಿಫಲವಾಗಿವೆ. ಪ್ರಕಟಣೆ, ವಿಚಾರ ಸಂಕಿರಣ, ಸಮ್ಮೇಳನಗಳು ನೆನೆಗುದಿಗೆ ಬಿದ್ದಿವೆ. ಅಧಿಕಾರದಾಹ, ಸರ್ವಾಧಿಕಾರ, ಭ್ರಷ್ಠಾಚಾರ ಅಲ್ಲಿ ತಾಂಡವಾಡಿದೆ. ಕಸಾಪ ಮರ್ಯಾದೆ ಕಳೆಯಲು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಲ್ಲಿ ಭ್ರಷ್ಟಾಚಾರ ಎಸಗಿದ್ದು ಮೇಲು ನೋಟಕ್ಕೆ ಸಾಬೀತು ಆಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ  ಈ ದುಸ್ಥಿತಿಗೆ ನಿಕಟಪೂರ್ವ ಅಧ್ಯಕ್ಷ  ಮಾನ್ಯ ಮನು ಬಳಗಾರ ಅವರು ಕಾರಣ. ಅವರ ಅಧಿಕಾರದಾಹ, ಸ್ವಾರ್ಥಕ್ಕೆ ಕಸಾಪ ಬಲಿಯಾಯ್ತು. 3 ವರ್ಷ ಇದ್ದ ಅಧ್ಯಕ್ಷರ ಅವಧಿಯನ್ನು ಹಿಗ್ಗಿಸಿಕೊಂಡರು. ಪರಿಷತ್ತು ಅದರ ಪಾಡಿಗೆ ಅದು ನಡಕ್ಕೊಂಡು ಹೋಗ್ತಿತ್ತು. ಇವರು ಎಲ್ಲೋ ದ.ಕ.  ಜಿಲ್ಲೆಯ  ಮೂಲೆಯಲ್ಲಿ ಕಳ್ಳಾಟದಿಂದ ಸರ್ವ ಸದಸ್ಯರ ಸಭೆ ನಡೆಸಿ ಅಲ್ಲಿ ತನ್ನದೇ ಅವಧಿಯ 3 ವರ್ಷದ  ಅಧಿಕಾರವನ್ನು 5 ವರ್ಷಕ್ಕೆ ವಿಸ್ತರಿಸಿಕೊಂಡರು! ಆಯ್ತು, 5 ವರ್ಷವಾದ ನಂತರವಾದರೂ ಗೌರವದಿಂದ ನಿರ್ಗಮಿಸಬೇಕು ಬೇಕು ತಾನೆ? ಇಲ್ಲ! ಕಳ್ಳಿಗೊಂದು ಪಿಳ್ಳೆ ನೆವ ಅಂತ ಕರೋನಾ ಕಡೆ ಬೆರಳು ತೋರಿ, ನನಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಕಸಾಪ ಕೆಲಸ ಬೆಟ್ಟದಷ್ಟಿದೆ! ಅಂತ ಬೋಂಗ್ ಬಿಟ್ಟು ಬರೋಬ್ಬರಿ 6 ವರ್ಷ ಪೂರೈಸಿದರು ಈ ಮಹಾಶಯರು! ಅಲ್ಲಿಗೆ ಮೂರು ವರ್ಷಕ್ಕೆ  ಇನ್ನೊಬ್ಬರು ರಾಜ್ಯ, ಜಿಲ್ಲಾ ಅಧ್ಯಕ್ಷರಾಗಿ ಬರೋದನ್ನ ತಪ್ಪಿಸಿದ ಪಾಪ ಅಂಟಿಸಿಕೊಂಡು ನಿರ್ಗಮಿಸಿದರು. ಆದರೆ, “ನಾನು ಬಿಟ್ಟರೆ ಇನ್ನೊಬ್ಬರು ಈ ರಾಜ್ಯದಲ್ಲಿ ಕಸಾಪ ಅಧ್ಯಕ್ಷರಾಗಲು ಅರ್ಹರಿಲ್ಲ!” ಎಂಬ ಅಹಂನಿಂದ  ಮತ್ತೆ ಮುಂದಿನ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು‌ ಚಾಪೆ ಹಾಕಿ, ಕನಸು ಕಟ್ಟಿ ಹಲವು ಜಿಲ್ಲೆಗಳಲ್ಲಿ ಪ್ರವಾಸವನ್ನೂ ಮಾಡಿಯಾಯ್ತು. ನನ್ನನ್ನು ಒಳಗೊಂಡು ಹಲವರು “ಬಳಿಗಾರರು ಪುನಃ ಸ್ಪರ್ಧಿಸಿದರೆ ಠೇವಣಿ‌ ಕಳೆಯಿರಿ” ಎಂಬ ಅಭಿಯಾನ ಶುರು ಮಾಡಿದೆವು. ಬಹುಶಃ ನಮ್ಮ ಪ್ರತಿರೋಧ ಗೊತ್ತಾಗಿಯೋ, ನನ್ನಂತಹವರ ಹೊಡೆತ ತಾಳಲಾರದೆಯೋ  ಮುಂದೆ ಮತ್ತೊಬ್ಬರು ಸ್ಪರ್ಧಿಸುತ್ತಾರೆಂದು ಸಾಹಿತಿ ಒಬ್ಬರ  ಹೆಸರನ್ನ ತೇಲಿಬಿಟ್ಟು  ಜಾಗ ಖಾಲಿ ಮಾಡಿದರು. ಆದರೆ ಅವರು ಸಾತ್ವಿಕ ಸಾಹಿತಿ! ಕನ್ನಡ ಸಾಹಿತ್ಯ ಪರಿಷತ್ತು ಉಳಿಸಲು “ಕನ್ನಡ ನಾಡು – ನುಡಿ ಹೋರಾಟ ಸಮಿತಿ” ಭ್ರಷ್ಟಾತಿ ಭ್ರಷ್ಟ ಜೋಶಿ ವಿರುದ್ಧ ಹೋರಾಡುತ್ತಿದ್ದರೆ ನನಗೂ ಇದಕ್ಕು ಸಂಬಂಧ ಇಲ್ಲ ಎಂದು ತಮ್ಮಪಾಡಿಗೆ ತಾವಿದ್ದರು. ಇನ್ನೊಬ್ಬರು ಐಎಎಸ್ ಅಧಿಕಾರಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಹುರಿಯಾಳು. ಅವರಾಗಲಿ, ಅವರ ಬೆಂಬಲಿಗ “ಓರಟಗಾರ!”ರಾಗಲಿ “ಕಸಾಪಗೆ ಮಸಿ ಬಳಿದ ‘ಜೋಸಿ’ ವಿರುದ್ಧ ಒಂದೇ ಒಂದು ಹೇಳಿಕೆಯನ್ನು ಕೊಡಲಿಲ್ಲ! ಒಳ ಒಪ್ಪಂದ ಏನಾದರೂ‌ ಆಗಿರಲೂಬಹುದೇನೋ… ಗೊತ್ತಿಲ್ಲ. *ಜೋಶಿ ಇಚ್ಛೆಯಂತೆ ಬೈಲಾ!* ಪಕ್ಕಾ ಹಿಂದುತ್ವವಾದಿ ಮಹೇಶ ಜೋಶಿ ತನ್ನ ಅಂತರಂಗದ ಸನಾತನವಾದ, ಸರ್ವಾಧಿಕಾರದಿಂದ  ಸುಳ್ಳು ಹೇಳಿ, ಜನರಿಗೆ ಮಂಕು ಬೂದಿ ಎರಚಿ ಅಧ್ಯಕ್ಷರಾದವರು, ಎಲ್ಲರ ಠೇವಣಿ ಕಳೆದು ಗೆದ್ದು ಬಂದಿದ್ದೇನೆ ಎಂದು ಮೀಸೆ ತಿರುವಿದರು. ಸೋತ ಅಭ್ಯರ್ಥಿಯನ್ನು ನಿಕೃಷ್ಟವಾಗಿ ಕಂಡರು. ಹಿಯಾಳಿಸಿದರು. ದಿನದಿಂದ ದಿನಕ್ಕೆ ಸಾಹಿತ್ಯೇತರ ಚಟುವಟಿಕೆಗಳೆ ಹೆಚ್ಚಾದವು. ಅಸಾಹಿತಿಯಾದ ಈ ಮನುಷ್ಯ ಸಾಹಿತ್ಯ ಗಂಟು ಮೂಟೆ ಕಟ್ಟಿ ಏನೆಲ್ಲಾ ಕ್ರಿಮಿನಲ್ ಆಟ ಆಡಿದ ಅಂತ ನೋಡಿದೆವು…! ಇವರಿಗೆ ಸಾಹಿತ್ಯದ ಗಂಧಗಾಳಿ ಇಲ್ಲದಿದ್ದರಿಂದ, ಯಾವ ಸಾಹಿತಿಗೂ ಗೌರವ ಕೊಡಲಿಲ್ಲ. ಎಲ್ಲರನ್ನು ಕೇವಲವಾಗಿ ಕಂಡು, ದುರಹಂಕಾರದಿಂದ  ಠೇಂಕರಿಸುತ್ತ  ಏನೆಲ್ಲ ಭ್ರಷ್ಟಾಚಾರ ಎಸಗಿದ್ದು ಮಾಧ್ಯಮಗಳಲ್ಲಿ ಬಿಂಬಿತವಾಗಿದೆ. ಜೋಶಿ ಗೆದ್ದ ನಂತರ ಪರಿಷತ್ತಿನ “ನಿಬಂಧನೆ” (ಬೈಲಾ)  ತನ್ನಿಚ್ಚೆಯಂತೆ ಅಮೂಲಾಗ್ರ ತಿದ್ದುಪಡಿ ಮಾಡಿದ್ದು ಚರ್ಚೆಗೆ ಗ್ರಾಸವಾಯ್ತು. ನಾಮಕಾವಸ್ತೆಗೆ ಈ ಬೈಲಾ ತಿದ್ದುಪಡಿಗೆ ನಿವೃತ್ತ ನ್ಯಾಮೂರ್ತಿ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದರೂ, ಅಲ್ಲಿನ ಎಲ್ಲ ವಿಚಿತ್ರ ನಿಯಮಗಳು ಅಧ್ಯಕ್ಷನಿಗೆ ಪರಮಾಧಿಕಾರ  ಒಳಗೊಂಡಿದ್ದವು. ಇದಕ್ಕೆಲ್ಲ ಅಧ್ಯಕ್ಷ ಜೋಶಿಯ ಕೈವಾಡವೆ ಕಾರಣವಾಯ್ತು. *ಸಚಿವ ದರ್ಜೆ ಸ್ಥಾನ ಎಂಬ ಭೂತ* ಹಿಂದಿನ ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರರನ್ನು ಹಿಡಿದು, ಕೇಶವಕೃಪಾದಿಂದ ಪ್ರಭಾವ ಬೀರಿಸಿ ಸಚಿವದರ್ಜೆ ಸ್ಥಾನಮಾನ ಗಿಟ್ಟಿಸಿಕೊಂಡರು. ಈ ಸ್ಥಾನ ಸಿಕ್ಕಿದ್ದಕ್ಕೆ ಸರ್ಕಾರದ ಲೋಗೋ ಬಳಸಿ “ಸರ್ಕಾರದ ಸಚಿವದರ್ಜೆ ಸ್ಥಾನಮಾನದ ಅಧ್ಯಕ್ಷ ಸ್ಥಾನ!” ಅಂತ ಲೆಟರ್ ಹೆಡ್ ಮುದ್ರಿಸಿ, ಉನ್ನತದರ್ಜೆಯ ಅಧಿಕಾರಿಗಳನ್ನು  ಬ್ಲ್ಯಾಕ್ ಮೇಲ್ ಮಾಡಿದರು. ಅದರಲ್ಲು ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕಿದ ಉದಾಹರಣೆಯೂ ಇದೆ. ಸಚಿವದರ್ಜೆ ಸ್ಥಾನಮಾನ ಅತಿ ದುರುಪಯೋಗ ಆಗುವ‌ ದೂರುಗಳು ಬಂದಾಗ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಆ ಸಚಿವ ದರ್ಜೆ ಸ್ಥಾನಮಾನ ಕಿತ್ತಾಕಿಸಿದ್ದಾಯ್ತು. ಜೋಶಿ, ತನ್ನ ನಾಲ್ಕು ವರ್ಷದ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ವಿಚಾರ ಸಂಕಿರಣ, ಯುವ ಬರಹಗಾರರಿಗೆ ತರಬೇತಿ / ಶಿಬಿರ, ಮೌಲಿಕ ಪುಸ್ತಕ ಪ್ರಕಟಣೆ, ಶತಮಾನೋತ್ಸವ ಕಂಡ ಸಾಹಿತಿಗಳ ಸ್ಮರಣೆ – ಯಾವುದನ್ನೂ ಮಾಡಲಿಲ್ಲ. ಅಬ್ಬಾ! ಈ ಮನುಷ್ಯ ಎಷ್ಟೊಂದು ಮೆರೆದ…! ಹಲವು  ಜಿಲ್ಲಾಧ್ಯಕ್ಷರನ್ನು ಗಿರಿಗಿಟ್ಲೆ ಆಡಿಸಿ ಕಿರುಕುಳ ಕೊಟ್ಟಿದ್ದೇನು ಕಮ್ಮಿಯೆ? ಸಾಹಿತಿಗಳು, ಕನ್ನಡಪರ ಹೋರಾಟಗಾರರು ಪರಿಷತ್ತು ವಿರುದ್ಧ ಒಂದೆ ಒಂದು ಮಾತಾಡಲು ಅವಕಾಶ ಕೊಡದೆ, ಸಭೆ ಮಾಡಲೂ ಬಿಡದೆ ಅವರನ್ನು ಬೆದರಿಸಲು ಹಲವು ಲಾಯರ್ ನೋಟೀಸು ನೀಡಿದ್ದಾಯ್ತು. ಮಾನ ನಷ್ಟ ಮೊಕದ್ದಮೆ  ಹೂಡುವೆನೆಂದು ಬೆದರಿಸಿದ ಪತ್ರಗಳು ಬಂದವು. ತನ್ನ ವಿರುದ್ಧ   ಇದ್ದವರ ಆಜೀವ ಸದಸ್ಯತ್ವವನ್ನು ಏಕಪಕ್ಷೀಯವಾಗಿ ಕಿತ್ತಾಕಿದ್ದು ಆಯ್ತು. ಇದು ಆತನ ಸಣ್ಣತನ ಹಾಗೂ ಸೇಡಿನ ಮನೋಭಾವ ತೋರಿಸಿತ್ತು. *ಕೋಟಿಗಟ್ಟಲೆ ಹಣ ದುರುಪಯೋಗ!* ಆರಂಭದಿಂದಲೂ  ಕಸಾಪ  ಸಾಹಿತ್ಯ ಚಟುವಟಿಕೆಗಳಿಗೆ ಗಂಟುಮೂಟೆ ಕಟ್ಟಿ ಅಲ್ಲಿ “ಕಾನೂನಿನ ಕಡತಗಳ ಪೇರಿಸಿ”, ವಕೀಲರ ಕಚೇರಿಯನ್ನಾಗಿ ಮಾಡಿದ್ದನ್ನು ಯಾವ ಜಿಲ್ಲಾಧ್ಯಕ್ಷರು ಪ್ರಶ್ನೆ ಮಾಡದಂತೆ ಕಾಣಲಿಲ್ಲ. ಅವರನ್ನು ಭಯ, ಆತಂಕದಲ್ಲಿ ಇರಿಸಿದ್ದರು. ಕೇಂದ್ರ ಕಸಾಪ ಕಟ್ಟಡದ ಕಾಮಗಾರಿಯಲ್ಲಿ 7-8 ಕೋಟಿ ರೂ.ಗಳ ದುರುಪಯೋಗ ಆದ ಬಗ್ಗೆ ಸಾಹಿತಿಗಳು ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ಅದು ಭಾಗಶಃ ಸಾಬೀತು ಆಗಿದ್ದು ಈ ಅಪಾರ ನಷ್ಟವನ್ನು ಜೋಶಿ ತುಂಬಿಕೊಡಬೇಕು ಎಂಬ ಬೇಡಿಕೆಯನ್ನು ಇಡಲಾಗಿದೆ.ಕಸಾಪದ ಪುಟ್ಟ ಕಟ್ಟಡಕ್ಕೆ ಬರೋಬ್ಬರಿ 56 ಸಿಸಿ ಕ್ಯಾಮೆರಾ ಹಾಕಿಸಿ ಪರಿಷತ್ತನ್ನು ಕುಬ್ಜಗೊಳಿಸಿ ಕಣ್ಗಾವಲು ಇರಿಸಿದರು. (ಹೈಕೋರ್ಟು ನ್ಯಾಯಾಧೀಶರು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಿಸಿ ಕ್ಯಾಮೆರಾ ಬೇಕಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದರು!) *ನಾಲ್ವಡಿ ಅವರ ಫೋಟೋಗೆ ಖೋ!* ಅಧ್ಯಕ್ಷ ತಾನು ಕೂರುವ ಎ‌.ಸಿ. ಕೋಣೆ ಹಾಳು ಕೊಂಪೆಯನ್ನಾಗಿ ಮಾಡಲಾಗಿತ್ತು.  ಅಲ್ಲಿ ಕಬೋಡ್ ಕಂ ಬುಕ್ ರ್ಯಾಕಲ್ಲಿ  ಗಣಪತಿ ವಿಗ್ರಹ ಬಿಟ್ಟರೆ ಕಸಾಪದ ಒಂದು ಪ್ರಕಟಣೆಯೂ ಇಲ್ಲವಾಗಿತ್ತು! ಆ ಕೋಣೆಯಲ್ಲಿ ಕಸಾಪ ಹುಟ್ಟಿಗೆ ಕಾರಣರಾದ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋ ಸಹಾ ಇರಲಿಲ್ಲ! ಬದಲು ಭುವನೇಶ್ವರಿ ಫೋಟೋ, ಇನ್ನೊಂದು ಗೋಡೆಗೆ ಆಳೆತ್ತರದ ಗಣೇಶ ಫೋಟೊ ರಾರಾಜಿಸುತ್ತಿತ್ತು!  ಇದೆಲ್ಲ ಗಮನಿಸಿದ ಸಾಹಿತಿಗಳು ಆಡಳಿತಾಧಿಕಾರಿ ಕೆ‌.ಎ. ದಯಾನಂದ, ಐಎಎಸ್,  ಅವರಿಗೆ ಹೇಳಿದಾಗ, ಅವರಿಗೂ ಜೋಶಿ ಮಾಡಿದ ತಪ್ಪಿನ ಅರಿವಾಯ್ತು. ವಾರದಲ್ಲೇ ಖಾಲಿ ರ್ಯಾಕಿಗೆ ಕಸಾಪ ಪ್ರಕಟಣೆಗಳಾದ ನಿಘಂಟು, ಮೌಲಿಕ ಪುಸ್ತಕಗಳನ್ನು ಇರಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋಗೆ ವ್ಯವಸ್ಥೆ  ಮಾಡಿದರು. ಹಾಗೆಯೇ ಕಸಾಪ ಮಹಾದ್ವಾರದಲ್ಲಿ ಇದ್ದ ಮಹಾಕವಿ ಪಂಪನ  “ಮನುಷ್ಯ ಜಾತಿ ತಾನೊಂದೆ ವಲಂ” ಎಂಬ ಉದಾತ್ತ ಧ್ಯೇಯ ಹೊಂದಿದ್ದ ಕಮಾನನ್ನು ಜೋಶಿ, ಅಧಿಕಾರಕ್ಕೆ ಬಂದ ದಿನವೆ ಕಿತ್ತಾಕಿಸಿದ್ದನ್ನು ನೋವಿನಿಂದ ಹೇಳಿದ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು “ಮತ್ತೆ ಅದನ್ನು ಬರೆಯಿಸಿ ಮರು ಸ್ಥಾಪಿಸಿ” ಅಂದದ್ದನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಈಗ ಕಸಾಪ ಆಡಳಿತ ಕಚೇರಿ ಪ್ರವೇಶ ದ್ವಾರದಲ್ಲೆ ಹಾಕಿಸಿದ್ದಕ್ಕೆ ನಮಗೆಲ್ಲ ಸಂತೋಷವಾಗಿದೆ. ಆಡಳಿತಾಧಿಕಾರಿಗೆ ನಮ್ಮ “ಕನ್ನಡ ನಾಡು ನುಡಿ ಜಾಗೃತ ಸಮಿತಿ”  ಪರವಾಗಿ  ಧನ್ಯವಾದ ಹೇಳಲೆ ಬೇಕು. ಹಣ ದುರುಪಯೋಗದಿಂದಾಗಿ  ಜೋಶಿ ಮೇಲೆ ೧೭ ಗುರುತರವಾದ ಆಪಾದನೆ  ಮಾಡಿ ಸಹಕಾರ ಇಲಾಖೆಗೆ, ನ್ಯಾಯಾಲಯಕ್ಕೆ  ದೂರು ಸಲ್ಲಿಸಿದಾಗ, ಎಲ್ಲವೂ “ಸಾಬೀತಾಗಿ”; ಇದೇ ಈಗ  ಪ್ರಾಥಮಿಕ ಸದಸ್ಯತ್ವ ರದ್ದಾಗಲು ಕಾರಣವಾಯಿತು ಎಂಬುದು ವಾಸ್ತವದ ಸಂಗತಿ. ನ್ಯಾಯಾಲಯ ಜೋಶಿಯ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿದಂತೆ, ಭ್ರಷ್ಟಾಚಾರಕ್ಕು ಶಿಕ್ಷೆ ಕೊಟ್ಟು ಜೈಲಿಗೆ ಹಾಕಬೇಕು. ಜೋಸಿ  ನುಂಗಿದ ೭-೮ ಕೋಟಿ ರೂ.ಗಳ ವಸೂಲಿ ಮಾಡಬೇಕು. ಆಗಲೆ ನ್ಯಾಯಪರ ಹೋರಾಟಗಾರರಿಗೆ ಸಮಾಧಾನ ಎಂದು ಸಾಹಿತಿಗಳು ಹೇಳಿದ್ದಾರೆ. *ಸಾಹಿತಿಯನ್ನೆ ಆಯ್ಕೆ ಮಾಡಿ* ಕಸಾಪದ ೧೧೨ ವರ್ಷಗಳ ಪರಂಪರೆ, ಇತಿಹಾಸ ಇಬ್ಬರು “ಅಧಕ್ಷರ” ಕೈಗೆ ಸಿಕ್ಕು ಹಾಳಾಗಿ ಹೋಯ್ತು. ಮುಂದೆ ಬರುವವರಾದರೂ ಕಸಾಪ ಅಧಿಕಾರವನ್ನು ಬೈಲಾ ತಿದ್ದುಪಡಿ ಮಾಡಿ 3 ವರ್ಷಕ್ಕೆ ತರಲಿ. ಮುಂದೆ ಸಾಹಿತಿಯೊಬ್ಬರು ಅಧ್ಯಕ್ಷರಾಗಿ ಬಂದರೆ,  ಸರ್ವಾಧಿಕಾರಿ ಆಗಲಾರರು. ಎರಡು ಅವಧಿಯ ಅಧಿಕಾರಶಾಹಿ ಆಡಳಿತ ನೋಡಿದ ಸದಸ್ಯರು ಮೂರನೇಬಾರಿಯೂ ಅಧಿಕಾರಶಾಹಿ ಆಯ್ಕೆ ಮಾಡದೆ

“ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ವಿಶೇಷ ಲೇಖನ,ಆರ್ ಜಿ ಹಳ್ಳಿ ನಾಗರಾಜ Read Post »

ಕಾವ್ಯಯಾನ

ನಿರಂಜನ ನಾಯಕ ಅವರಕವಿತೆ “ನಾ ಯಾವುದ ನಂಬಲಿ?”

ಕಾವ್ಯ ಸಂಗಾತಿ ನಿರಂಜನ ನಾಯಕ “ನಾ ಯಾವುದ ನಂಬಲಿ?” ನಾ ಯಾವುದ ನಂಬಲಿ?ಕಣ್ಣಿಗೆ ರಾಚುವ ಬಣ್ಣದ ಭ್ರಮೆಯನ್ನೋ?ಕರ್ಣಕೆ ಅಪ್ಪಳಿಸುವ ಹುಸಿ ಪದಗಳ ಸದ್ದನ್ನೋ?ಇವೆಲ್ಲವ ಮೀರಿಆ ಎದೆಯಾಳದಿ ತುಡಿಯುವ ಪ್ರಜ್ಞೆಯ ದನಿಯನ್ನೋ? ದಮನಿಸುವ ಸಿಂಹಾಸನದ ದರ್ಪವನ್ನೋ?ಬೀದಿಯಲಿ ಧಗಧಗಿಸುವ ಕಿಚ್ಚಿನ ಜ್ವಾಲೆಯನ್ನೋ?ಎದೆಯತ್ತ ಗುರಿಯಿಟ್ಟ ಬಂದೂಕಿನ ನಾಲಗೆಯನ್ನೋ?ಅಥವಾನೆಲದ ಮೇಲೆ ಹೆಪ್ಪುಗಟ್ಟಿದ ನಿಸ್ಸಹಾಯಕ ನೆತ್ತರ ಗುರುತನ್ನೋ? ನಂಬಿಕೆ ಬೆಲೆಗೆ ಬಿಕರಿಯಾದ ಸರಕಾದಾಗ,ನನ್ನ ನಂಬಿಕೆಗಳು ಮಾರಾಟವಾಗಿ,ನನ್ನತನದ ಗುರುತನ್ನೇ ಕಳೆದುಕೊಂಡಾಗ…ನಾ ಬರಿಯ ಅಧಿಕಾರದ ಗುರುತಾದೆ!ಇಷ್ಟೆಲ್ಲದರ ನಡುವೆ ಕಳೆದುಹೋದನಾನು ಯಾರು?ನಾನು ಯಾರು? ನಿರಂಜನ ನಾಯಕ

ನಿರಂಜನ ನಾಯಕ ಅವರಕವಿತೆ “ನಾ ಯಾವುದ ನಂಬಲಿ?” Read Post »

ಕಾವ್ಯಯಾನ

ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ(ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)”

ಕಾವ್ಯ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ (ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)” ಬಾನಿನ ಬಾನು ಕಣ್ಣ‌ ತೆರೆದು ನೋಡಿದಭುವಿಯು ಭವದಿಂದ‌ ನಮಸ್ಕರಿಸಿದಳುತಳುಕಿ ಬಳುಕಿ ಗಿಡಬಳ್ಳಿಗಳ ನಾಚಿಸಿದಳುಆಗಸ ಬೊಗಸೆ ಪ್ರೀತಿ ಬೇಡಿದ ಮಿಥುನ ರಾಗಕೆ ಮಳೆಯ ಸ್ಪುರಿಸಿದಹಸಿರಿನಲಿ ಉಸಿರಾಗಿ ಜೀವ ಅಂಕುರಿಸಿತುಇಳೆಯಲಿ ಬೆಳೆಯ ಸಮೃದ್ಧಿ ಆವರಿಸಿತುಲೋಕಕೆ ಸಂತೋಷದ ಹೊಳೆ ಹರಿಸಿದ ಪರಿಸರವ ಪರಿಭ್ರಮಿಸುತ ಜ್ಞಾನಿಸಿದಸಂವತ್ಸರ ಋತುಗಳ ಕಾವ್ಯ ಬರೆದಜಗವನಾಳುವ ಒಡೆಯನಾಗಿ ಮೆರೆದಸಂಜೆಯಲಿ ದ್ಯಾನಸ್ಥನಾಗಿ ಬುದ್ದ ಎನಿಸಿದ ತೆರೆದು ನೋಡುವ ನೋಟವಿದುಪ್ರಕೃತಿ ಹೇಳುವ ಪಾಠವಿದು ಶ್ರೀದೇವಿ. ಮ.ಗುಮ್ಮಗೋಳ

ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ(ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)” Read Post »

ಇತರೆ

“ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ” ಜಯಲಕ್ಷ್ಮಿ ಕೆ

ಶರಣ ಸಂಗಾತಿ ಜಯಲಕ್ಷ್ಮಿ ಕೆ “ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ” ಕಾಯಕ ತತ್ವದ ಮೂಲಕ ವ್ಯಕ್ತಿಗತ ವಿಕಾಸದ ಪಥವನ್ನು  ಜಗತ್ತಿಗೆ ತೋರಿದ ಶರಣನೆಂದರೆ ವಚನಕಾರ ಹಡಪದ ಅಪ್ಪಣ್ಣ.  ಕ್ಷೌರ ಮಾಡುವ ವೃತ್ತಿಯ ಮೂಲಕ ಜನರ ಮುಖಗಳನ್ನು ಅಂದಗೊಳಿಸುತ್ತಿದ್ದ ಹಡಪದ ಅಪ್ಪಣ್ಣ  ತನ್ನ ವಚನ ಸಾಹಿತ್ಯದ ಮೂಲಕ ಜನರ ಮನದಲ್ಲಿ ಮನೆ ಮಾಡಿದ್ದ ಮೂಢನಂಬಿಕೆಗಳ  ಕೊಳೆ  ತೊಳೆದು ವೈಚಾರಿಕ ಚಿಂತನೆಗೆ ದಾರಿ ತೋರಿದನು. ವ್ಯಕ್ತಿಯಾಗಲಿ ಸಮಾಜವಾಗಲಿ  ಮೌಲ್ಯಗಳ ತಳಹದಿಯಲ್ಲಿ ಸಾಗುದರಿಂದ ಮಾತ್ರ     ಅಭಿವೃದ್ಧಿಯಾಗಲು ಸಾಧ್ಯ ಎಂಬುದನ್ನು ತನ್ನ ವೃತ್ತಿ ಮತ್ತು ಪ್ರವೃತ್ತಿಗಳ ಮೂಲಕ  ಜಗತ್ತಿಗೆ ಸಾರಿದವನು ಹಡಪದ ಅಪ್ಪಣ್ಣ. ಮಾಡುವ ಕೆಲಸ ಯಾವುದೇ ಇರಲಿ ಮೇಲು ಕೀಳು ಎಂದು ಭಾವಿಸದೆ , ತಮ್ಮ ಹೆಸರಿನ ಹಿಂದೆ ಕಾಯಕವನ್ನು ಅಂಟಿಸಿಕೊಂಡು ಆ ಕಾಯಕಕ್ಕೆ ಅಂತಿದ್ದ ಜಾತಿಯ ಲೇಪವನ್ನು ತೊಡೆದು ಹಾಕಿದವರು ವಚನಗಾರರು. ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ,  ಮೇಧಾರ ಕೇತಯ್ಯ ಮೊದಲಾದವರಂತೆ ಹಡಪದ ಅಪ್ಪಣ್ಣ ಕೂಡಾ ತನ್ನ ಕುಲಕಸುಬನ್ನು ಸತ್ಯ ಶುದ್ಧ ಕಾಯಕವನ್ನಾಗಿ ಪರಿವರ್ತಿಸಿಕೊಂಡವನು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳದ ಚೆನ್ನವೀರಪ್ಪ ಮತ್ತು ದೇವಕಮ್ಮ ದಂಪತಿಗಳ ಪುತ್ರನಾದ  ಹಡಪದ ಅಪ್ಪಣ್ಣನವರು ಚೆನ್ನಮಲ್ಲೇಶ್ವರರಿಂದ ದೀಕ್ಷೆಯನ್ನು ಪಡೆದರು. ಕಾಯಕ ನಿಷ್ಠೆಯಿಂದಲೇ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ಮೌಢ್ಯ ನಡವಳಿಕೆಗಳನ್ನು  ತೊಡೆದು ಹಾಕಿದ ಕೀರ್ತಿ ಶರಣ ಅಪ್ಪಣ್ಣನಿಗೆ ಸಲ್ಲುತ್ತದೆ. ತನ್ನ ವೃತ್ತಿಯ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಪ್ರಾಮಾಣಿಕವಾಗಿ ಕಾಯಕ ನಡೆಸುತ್ತಿದ್ದ ಹಡಪದ ಅಪ್ಪಣ್ಣ ಭಕ್ತಿ ಭಂಡಾರಿ ಬಸವಣ್ಣನವರ ರಕ್ಷಾ ಕವಚವಾಗಿ, ಅವರ ಬಲಗೈ ಭಂಟನಾಗಿ, “ವಿಶ್ವದ ಪ್ರ ಪ್ರಥಮ ಪ್ರಜಾಪ್ರಭುತ್ವ ಸಂಸತ್ತು ” ಎಂದೇ ಪ್ರಸಿದ್ಧವಾದ ಅನುಭವ ಮಂಟಪದಲ್ಲಿ ಬಸವಣ್ಣನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯಕ್ಷಮತೆ ಮೆರೆದವರು. ಬೆಳಗೆದ್ದು ಹಡಪದ( ಕ್ಷೌರಿಕ ) ನ ಮುಖವನ್ನು ನೋಡಿದರೆ ಅಪಶಕುನ ಎಂದು ಪರಿಭಾವಿಸಿದ್ದ ಆ ಕಾಲದಲ್ಲಿ ” ತಮ್ಮನ್ನು ಕಾಣಲು ಬರುವ ಯಾವ ವ್ಯಕ್ತಿಯಾದರೂ ಸರಿ, ಮೊದಲು ತನ್ನ ಕಾರ್ಯದರ್ಶಿ ಹಡಪದ ಅಪ್ಪಣ್ಣನನ್ನು ನೋಡಿಯೇ ತನ್ನ ಬಳಿಗೆ ಬರತಕ್ಕದ್ದು ” ಎನ್ನುವ ಬಸವಣ್ಣನವರ ನಿಯಮ ಅವರು ಶರಣ ಅಪ್ಪಣ್ಣನವರಿಗೆ ನೀಡಿದ್ದ ಆದ್ಯತೆ ಹಾಗೂ ಅವನ ಮೇಲಿನ ನಂಬಿಕೆ,ವಿಶ್ವಾಸ, ಗೌರವಾದರ ಸಂಕೇತವಾಗಿದೆ.  ಕಾಯಕ ನಿಷ್ಠೆ, ದಾಸೋಹ, ಆಚಾರ -ವಿಚಾರ ಇತ್ಯಾದಿಗಳ ಬಗೆಗಿನ  ಹಡಪದ ಅಪ್ಪಣ್ಣನ ಚಿಂತನೆಗಳು ಅವರು ರಚಿಸಿದ ವಚನಗಳಲ್ಲಿ ಬಿಂಬಿತವಾಗಿವೆ. ಜನ ಸಮುದಾಯದಲ್ಲಿದ್ದ ಮೂಢ ನಂಬಿಕೆ ಹಾಗೂ ಶೋಷಣೆಯನ್ನು   ವಚನಗಳ  ಮೂಲಕವೇ ತೀವ್ರವಾಗಿ ಖಂಡಿಸುತ್ತಾ,   ಪ್ರಾಮಾಣಿಕವಾಗಿ ತನ್ನ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಸಂತೋಷವಾಗಿದ್ದ ಹಡಪದ ಅಪ್ಪಣ್ಣನನ್ನು ಜಗಜ್ಯೋತಿ ಬಸವಣ್ಣನವರು ” ನಿಜ ಸುಖಿ ” ಎಂದೇ ಕರೆದರು. ಇವರು ಸುಮಾರು ಇನ್ನೂರ ಐವತ್ತು (250) ವಚನಗಳನ್ನು ರಚಿಸಿದ್ದು ಅವೆಲ್ಲವೂ ಕನ್ನಡ ಸಾಹಿತ್ಯ ಲೋಕಕ್ಕೆ ಸಂದ ಅಪೂರ್ವ ಕೊಡುಗೆಯೇ ಆಗಿವೆ. ” ನುಡಿದರೆ ಗುರುವಾಗಿ ನುಡಿಯಬೇಕುನಡೆದರೆ ಪರವಾಗಿ ನಡೆಯಬೇಕುಕುಳಿತರೆ ಲಿಂಗವಾಗಿ ಕುಳಿತಿರಬೇಕುಇದ್ದರೆ ಜಂಗಮನಾಗಿ ಇರಬೇಕುಈ ನಾಲ್ಕರ ಹೊಂದಿಕೆಯನ್ನರಿಯದವನು ಎಷ್ಟು ದಿನವಿದ್ದರೂ ಫಲವೇನು ಹೇಳಾ…ಬಸವ ಪ್ರಿಯ ಕೂಡಲ ಚೆನ್ನಬಸವಣ್ಣ..ಎನ್ನುವ ಶರಣ ಹಡಪದ  ಅಪ್ಪಣ್ಣ   ನಮ್ಮ ನಡೆ ನುಡಿ ಬದುಕೆಲ್ಲ ಗುರು ಲಿಂಗ ಜಂಗಮ ಎನ್ನುವ ತ್ರಿವಿಧಗಳಿಗೆ ಮೆಚ್ಚುಗೆಯಾಗುವಂತಿರಬೇಕು ಎಂದಿದ್ದಾರೆ.  ನಮ್ಮ ನಡೆಗೂ ನುಡಿಗೂ ಸಾಮರಸ್ಯವಿರಬೇಕು ಎನ್ನುವುದನ್ನು ” ನುಡಿದರೇನಯ್ಯಾ.. ನಡೆ ಇಲ್ಲದನ್ನಕ್ಕ…ನಡೆದರೇನಯ್ಯ ನುಡಿ ಇಲ್ಲದನ್ನಕ್ಕ ” ಎಂಬ ವಚನನ ಮುಖೇನ ಪ್ರತಿಪಾದಿಸಿದ್ದಾರೆ. ” ಮನವನರಿದವಂಗೆ ಮತದ ಹಂಗೇಕೋ… ನಿತ್ಯವನರಿದಂಗೆ ತೀರ್ಥದ ಹಂಗೇಕೋ ” ಎನ್ನುವ ಮೂಲಕ ಜಾತಿ ಮತ ದೇವರುಗಳ ವಿಚಾರವಾಗಿ ಜನ ಮನದಲ್ಲಿಇರಬೇಕಾದ ಅರಿವಿನ ಸ್ಪಷ್ಟ ಚಿತ್ರಣ ಮೂಡಿಸುತ್ತಾ ” ಅರಿವೆಂಬುದೇ ಆಚಾರ, ಆಚಾರವೆಂಬುದೇ ಅರಿವು ”  ಎಂದು ವಚನಗಳ ಮೂಲಕ ಸಾರಿದ್ದಾರೆ. ಹೆಸರು ಮತ್ತು ಕೀರ್ತಿ ನಮ್ಮನ್ನರಸಿ ಬರಬೇಕೇ ಹೊರತು ಮನುಷ್ಯ ಅವುಗಳನ್ನು ಅರಸಿ ಹೋಗಬಾರದು ಎನ್ನುವ ಅವರ ನಿಲುವು ” ವಂದನೆಗಾಗಿ ನಿಲ್ಲಬೇಡ, ನಿಂದೆಗಂಜಿ ಓದಬೇಡ, ” ಎನ್ನುವ ವಚನದ ಮೂಲಕ ವ್ಯಕ್ತವಾದರೆ ” ದ್ವಂದ್ವ ಬುದ್ಧಿಯ ಕಳೆದು ನಿಂತವನ ಬಸವ ಪ್ರಿಯ ಕೂಡಲಚೆನ್ನಬಸವಣ್ಣ ಪೊರೆವ ” ಎನ್ನುವ ವಚನದಲ್ಲಿ ನಾವು ಇತರರ ಸಮ್ಮುಖದಲ್ಲಿ ಆಡುವ ಮಾತಿಗೂ ಅವರ ಹಿಂದೆ ಅವರ ಬಗ್ಗೆ ಪರರೊಂದಿಗೆ ಆಡುವ ಮಾತಿಗೂ ವ್ಯತ್ಯಾಸವಿರಬಾರದು ಎನ್ನುವ ವಿವೇಕವಿದೆ.  ಕಲ್ಯಾಣ ಕ್ರಾಂತಿಯ ವರೆಗೂ ಬಸವಣ್ಣನ ಜೊತೆಯಲ್ಲಿಯೇ ಇದ್ದು ತದ ನಂತರ ಕೂಡಲಸಂಗಮಕ್ಕೆ ತೆರಳಿ ಅಲ್ಲಿ ಲಿಂಗೈಕ್ಯರಾದ ಹಡಪದ ಅಪ್ಪಣ್ಣನ ಸರಳ ವ್ಯಕ್ತಿತ್ವ ಮತ್ತು ಉದಾತ್ತ ಚಿಂತನೆಗಳು ಆದರ್ಶಪ್ರಾಯ ಮತ್ತು ಅನುಕರಣೀಯ. ತನ್ನ ಕಾಯಕ ಮತ್ತು ಸಾಹಿತ್ಯದಿಂದ ಸಾಮಾಜಿಕ ಕ್ರಾಂತಿಯನ್ನೇ ಹುಟ್ಟು ಹಾಕಿದ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಹಡಪದ ಅಪ್ಪಣ್ಣನವರ 892 ನೇ ಜನುಮ ದಿನಾಚರಣೆಯನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ. ಜಯಲಕ್ಷ್ಮಿ ಕೆಮಡಿಕೇರಿ.

“ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ” ಜಯಲಕ್ಷ್ಮಿ ಕೆ Read Post »

You cannot copy content of this page

Scroll to Top