ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಜಯಂತಿ ಸುನಿಲ್‌ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್‌ ಗಜಲ್ ಮರೆಯಲಾಗುತ್ತಿಲ್ಲಾ ನಿನ್ನೂರಿನ ವಿಳಾಸವನು ದೊರೆಯೆಎಣಿಸಲಾಗುತ್ತಿಲ್ಲಾ ನೀ ಮಾಡಿದ ಗಾಯಗಳನು ದೊರೆಯೆ!! ಯಾರಿಗೇಳಿದರೆ ತಾನೇ ಕಳೆದೀತು,ಇಳಿದೀತು ಈ ದು:ಖ?ಹುಡುಕಲಾಗುತ್ತಿಲ್ಲಾ ಅಂತಹವನೊಬ್ಬ ಚಿಕಿತ್ಸಕನನು ದೊರೆಯೆ!! ಯಾರಿಗೆ ಗೊತ್ತಿತ್ತು,ಪ್ರೇಮದ ನಶೆಯೆಂದುಕೊಂಡೆತಿಳಿಯಲಾಗುತ್ತಿಲ್ಲಾ ನೀ ವಿಷವುಣಿಸಿ ಕೊಲ್ಲುವ ಕಲೆಯನು ದೊರೆಯೆ!! ನಗುವ ಅಭ್ಯಾಸವಿದ್ದವಳಿಗೆ ಅಳುವಿನ ಅಭ್ಯಂಜನ ಮಾಡಿಸಿದೆಒರೆಸಲಾಗುತ್ತಿಲ್ಲಾ ಕಡಲಂತೆ ಉಕ್ಕುವ ಕಂಬನಿಯನು ದೊರೆಯೆ!! ಪ್ರೀತಿಗೆ ಇಷ್ಟೊಂದು ಶಕ್ತಿಯೇ? ತಲಾಷೇ ಬೇಕಿಲ್ಲಾನಂಬಲಾಗುತ್ತಿಲ್ಲಾ ಹೀಗೂ ಸಾಯಬಹುದೆಂಬ ಸತ್ಯವನು ದೊರೆಯೆ!! ಮನಸ್ಸನ್ನು ಮುಟ್ಟಿ ನೋಡಿದರೆ ತಿಳಿಯ ಬಹುದಿತ್ತುಉಳಿಸಿಕೊಳ್ಳಲಾಗುತ್ತಿಲ್ಲಾ ನಿನಗೆ ಶಾಶ್ವತ ಪ್ರೀತಿಯನು ದೊರೆಯೆ!! ಬದುಕು ತೆರೆದಿಡುವ ಪಠ್ಯದೊಳಗೆ ಪ್ರೇಮ ಒಂದು ಭಾಗವೆಂಬುದ ಮರೆತೆಕಲಿಯಲಾಗುತ್ತಿಲ್ಲಾ ಇಷ್ಟಾದರೂ ಜಯಾ, ದ್ರೋಹ ಮಾಡುವುದನು ದೊರೆಯೆ!! ಜಯಂತಿ ಸುನಿಲ್

ಜಯಂತಿ ಸುನಿಲ್‌ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್(ರವಿ ಸರ್ ಅವರ ಗಜಲ್ ಒಂದರಿಂದ ಪ್ರೇರಿತ ) ಬಣ್ಣವಿಲ್ಲವೆಂದು ಬಯ್ಯುವ ಬಿಳಿ ಪುಟದೊಳಗೂ ತುಸು ಚಂದವಿದೆಲೋಪಗಳಿವೆಯೆಂದು ನಾ  ಜರಿವ ಜಗದೊಳಗೂ ತುಸು ಚಂದವಿದೆ ಎಲ್ಲಾ ರಾಗಗಳನು, ಯಾರು ಹಾಡುವವರಿದ್ದಾರಿಲ್ಲಿ ಹೇಳುಯಾರೂ ಗುನುಗುನಿಸದ ಪದ್ಯದೊಳಗೂ ತುಸು ಚಂದವಿದೆ ಆಕಾಶಕ್ಕೂ, ಅನುದಿನ ಆನಂದ ನೀಡಲು ಸಾಧ್ಯವಾಗುವುದೇಕಪ್ಪೆಂದು ಕಡೆಗಣಿಸಿದ ಮೋಡದೊಳಗೂ ತುಸು ಚಂದವಿದೆ ವರ್ಣನೆಗೂ ನಿಲುಕದ  ಮಾತುಗಳಿಗಿಲ್ಲಿ ಬರವಿಲ್ಲ ನಿಜಪದಗಳಿಂದ ಮುನಿಸಿಕೊಂಡ ಮೌನದೊಳಗೂ ತುಸು ಚಂದವಿದೆ ಜಂಜಾಟವಿಲ್ಲದ ಜೀವನ ಬರೀ ಕಲ್ಪನೆಯಷ್ಟೇ ವಾಣಿನೋವು ತುಂಬಿದ ನಯನದೊಳಗೂ ತುಸು ಚಂದವಿದೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಗಜಲ್ ವಿದಾಯ ಹೇಳಲೇ ಕವಲೊಡೆದ ದಾರಿಗೆದೂರ ಸರಿಯಲೇ ಒಲವಿರದ ದಾರಿಗೆ ಘಮವಿಲ್ಲದ ಪಾರಿಜಾತ ನೊಂದಿದೆಕಳಚಿ ಹೋಗಲೇ ನಾಕವಿರದ ದಾರಿಗೆ ಪಡೆದುದೆಲ್ಲ ನಶ್ವರವಾಗಿ ಮೌನವಾದೆಮರೆತು ಬಿಡಲೇ ಸುಖವಿರದ ದಾರಿಗೆ ಕಲ್ಪನೆಯ ಭಾವನೆಗಳ ಬಳ್ಳಿ ರೋಧಿಸಿದೆಹರಿದು ತೊರೆಯಲೇ ನಲಿವಿರದ ದಾರಿಗೆ ತಪ್ಪಿದೆ ಯಾನದ ಹರಿಗೋಲು ಮಾಜಾಕಳೆದು ಕೂಡಲೇ ಕರುಣೆವಿರದ ದಾರಿಗೆ ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

‌ ಕಾವ್ಯ ಸಂಗಾತಿ. ಜ್ಯೋತಿ ಮಾಳಿ ಬೆಳಗಾವಿ ಗಜಲ್ ಕುಳಿತು ಮಾತನಾಡಿಸಿ ಎದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆನಕ್ಕು ನಗಿಸಿ ಮನವನು ಗೆದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಹೋದರೆ ಹೋಗಿ ನಿಮಗೂ ಏನೊ ಅನಿವಾರ್ಯತೆಗಳುಇರಬಹುದುಭಾವ ಬಸಿದ ಕವಿತೆಗಳನು ಕದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ನೊಂದು ಬೆಂದು ನರಳಿದ ಗಾಯಗಳ ಗುರುತು ಸಿಗದಂತೆಅಳಿಸಿ ಹಾಕಿದಿರಿಕಲಕಿದ ಕೊಳ ತಿಳಿಯಾಗಿಸಿ ಇದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಬೇಸರಗೊಂಡ  ಜೀವಗಳಿಗೆ ಎಡೆಯ ತುಂಬ ಸಂತಸವನುಮನದಿ ಬಡಿಸಿದಿರಿಹಾಲುಣಿಸಿ ಹಾಲಾಹಲ ಮೆದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಹೃದಯ ಹೃದಯಗಳನು ಬೆಸೆದು ಹಂದರವನು ಹಾಕಿ ಕರೆದುಕೂರಿಸಿದಿರಿಜ್ಯೋತಿ ಬೆಳಕಿನಲಿ ತಮವು ಬಿದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಸುಕನಸು ಅವರ‌ ಗಜಲ್

ಕಾವ್ಯ ಸಂಗಾತಿ ಸುಕನಸು ಗಜಲ್ ಬಾ ಅಪರಿಚಿತರಾಗೊಣ  ಮತ್ತೊಮ್ಮೆ ಗೆಳೆಯನೀ ಮರೆತು ಸಹ ಸಿಗದಿರು ಇನ್ನೊಮ್ಮೆ ಗೆಳೆಯ ಸದಾ ನಿನ್ಹೆಸರ ಜಪಿಸುವ ಮನಕೇನು ಸಂತೈಸಲಿನೆನಪುಗಳ ಕೊಂದ್ಹೋಗೂ ಬಂದೊಮ್ಮೆ ಗೆಳೆಯ ಜೊತೆ ಇಟ್ಟ ಹೆಜ್ಜೆಗಳ ಲೆಕ್ಕ ಎಲ್ಲಿದೆ ಸಂತೃಪ್ತಿಯಷ್ಟೆಮುಂದೆಂದೂ ಸಿಗದಂತೆ ಶಪಥ ಮಾಡೊಮ್ಮೆ ಗೆಳೆಯ ಮನ ತಬ್ಬಿಬಾಗಿದೆ ತಳ್ಳಿ ಹೋದ ಕಾರಣ ತಿಳಿಯದೆತೊರೆದು ಹೋದ ನೆಪ ಹೇಳಿ ಹೋಗೊಮ್ಮೆ ಗೆಳೆಯ ಸುಮದ ಪರಿಮಳವೆ ಅಪಾರವಾಯಿತು ನವಿರಲ್ಲವಒಲವಿಲ್ಲ ಲಾಲಶೆಯಷ್ಟೆಯೆಂದು ಹೇಳೊಮ್ಮೆ ಗೆಳೆಯ ಸುಕನಸು

ಸುಕನಸು ಅವರ‌ ಗಜಲ್ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ನಮ್ಮ ನೆತ್ತರಿನ ಬಣ್ಣ ಒಂದೇಯಾಗಿದ್ದರೂಉತ್ತರ ಆಶೋತ್ತರಗಳು ಬೇರೆ ಬೇರೆಅಡಿ ಇಡುವ ನೆಲವು ಒಂದೇಯಾಗಿದ್ದರೂಗಮ್ಯ ತಾಣ ನಿಲ್ದಾಣಗಳು ಬೇರೆ ಬೇರೆ ಬುದ್ಧಿಶಕ್ತಿಯ ಲವಲೇಶವಿರದ ಪ್ರಾಣಿಗಳುಸಹಬಾಳ್ವೆಗೆ ತಮ್ಮನ್ನು ಒಡ್ಡಿಕೊಂಡಿವೆಸುತ್ತ ಸುಳಿವ ಗಾಳಿ ಒಂದೇಯಾಗಿದ್ದರೂಒಳ ನೋಟ ಒಕ್ಕೂಟಗಳು ಬೇರೆ ಬೇರೆ ಭಾಷಣ ಬರವಣಿಗೆಯಲ್ಲಷ್ಟೇ ಸಮತೆಯಹೂರಣ ತೋರಣಗಳನ್ನು ಕಂಡಿದ್ದೇವೆಕುಡಿಯುವ ಜಲವು ಒಂದೇಯಾಗಿದ್ದರೂಯೋಚನೆ ಯೋಜನೆಗಳು ಬೇರೆ ಬೇರೆ ಒಡಹುಟ್ಟಿದವರೇ ಬೆಳೆದೊಡನೆ ಕಾದಾಡಿದಾಯಾದಿಗಳಾಗುವುದಿಲ್ಲಿ ಮಾಮೂಲಿಭಾರತೀಯರೆಂದೂ ಒಂದೇಯಾಗಿದ್ದರೂಇಲ್ಲಿ ಆಚಾರ ವಿಚಾರಗಳು ಬೇರೆ ಬೇರೆ ಸರ್ವಜನಾಂಗದ ತೋಟದಲ್ಲಿ ಕುಂಬಾರಶಾಂತಿ ಹುಡುಕಿ ಹುಡುಕಿ ಸೋತಿದ್ದಾನೆಭಾವೈಕ್ಯದ ಬಾವುಟ ಒಂದೇಯಾಗಿದ್ದರೂಜಾತಿ ಜೆಂಡಾ ಅಜೆಂಡಾಗಳು ಬೇರೆ ಬೇರೆ ಎಮ್ಮಾರ್ಕೆ

ಎಮ್ಮಾರ್ಕೆ ಗಜಲ್ Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಅವರ ಗಜಲ್‌

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಗಜಲ್‌ ನೋಟವು ಒಲವಾಗಿ ಪ್ರೇಮದ ಮಳೆಯುಹರಿದು ಬರಲಿಮೀಟಲು ಹೃದಯದ ವೀಣೆಯ ತಂತಿಯುಹರುಷ ತರಲಿ ಕಂಗಳ ನಿವೇದನೆ ಮನವ ಕಾಡದೇಹೇಳು ಒಮ್ಮೆಸಂಗಾತಿ ಬಳಿಯಿರೆ ಹೊಸತು ಕಲ್ಪನೆತೇರನು ಏರಲಿ ತನುವ ಸೋಕಿದಾಗ ಅವ್ಯಕ್ತ ಕಂಪನಮಧುರ ಅನುಭೂತಿತನನ ಹಾಡುತಿರೆ ಎದೆಯ ಭಾವವುನಲ್ಲನ ಸೇರಲಿ ಅಡಗಿ ಕುಳಿತಿಹ ಸುಪ್ತ ಮನಸ್ಸುಸಾಗರದ ಅಲೆಯುಮೂಡಿದ ಅನುರಾಗ ಅರಳಿ ಹೂವಂಥನಗುವ ಬೀರಲಿ ಒಪ್ಪಿದ ಇನಿಯನ ಸೊಬಗಿನ     ನುಡಿಗೆರೆಪ್ಪೆಯು ಬಾಗಿದೆಅಪ್ಪಿದೆ ಕರಗಳು ಬಿಗಿದು ಓರಣದಿಮಧುವ ಹೀರಲಿ ಮರೆತು ಜಗವನು  ಕರಗಿ ಹೋಗುವಉತ್ಕಟ ಬಯಕೆಬೆರೆತ ಕನಸಿಗೆ ಮೊಳಕೆ ಚಿಗುರಿಮೇಲಕೆ ಹಾರಲಿ ನಿತ್ಯವೂ ಆರಾಧನೆ ಗುಡಿಯ ಒಳಗೆವಿರಾಜಿಪ ದೇವಗೆಸತ್ಯದ ನಿವೇದನೆ ರಾಧೆಯ ಬಾಳಲಿಶುಭವ ಕೋರಲಿ  ಅನುರಾಧಾ ರಾಜೀವ್

ಅನುರಾಧಾ ರಾಜೀವ್ ಅವರ ಗಜಲ್‌ Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಕಂಡ ಕನಸುಗಳು ನನಸಾಗಬೇಕು ಎಂದೇನೂ ಇಲ್ಲಬಯಸಿದುದೆಲ್ಲಾ ಸಿಕ್ಕು ಬಿಡಬೇಕು ಎಂದೇನೂ ಇಲ್ಲ ಅವ ಬಂದಾಗ ನಕ್ಕು ಹೋಗುವಾಗ ಅಳುವ ಕಾಲ ಕಳೆದಿದೆಸಮಯ ಎಂದಿಗೂ ನನ್ನ ಪರವಿರಬೇಕು ಎಂದೇನೂ ಇಲ್ಲ ಮೌನಕ್ಕೆ ಅಗಾಧವಾದ ಶಕ್ತಿಯಿದೆಯೆಂದು ನನಗೆ ತಿಳಿದಿದೆಮನದ ಭಾವಗಳ ಮಾತಲ್ಲೇ ಹೇಳಬೇಕು ಎಂದೇನೂ ಇಲ್ಲ ಮಾತಾಡಿದ ಮಾತು ಮರೆತಿಲ್ಲ ಮನದ ತುಂಬಾ ತುಂಬಿದೆರೂಪು ಕಣ್ಣಲ್ಲಿದೆ ಕಣ್ಣೆದುರೇ ಇರಬೇಕು ಎಂದೇನೂ ಇಲ್ಲ ಬದುಕನ್ನು ಬಂದಂತೆ ಸ್ವೀಕರಿಸುತ್ತಾ ಬಂದಿದ್ದಾಳೆ ಅರುಣಾಎಲ್ಲಾ ಕಥೆಗಳು ಸುಖಾಂತ್ಯವಾಗಬೇಕು ಎಂದೇನೂ ಇಲ್ಲ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ ಗಜಲ್ ಮಳೆಯ ಹನಿಯೊಂದು ಮುತ್ತಿಕ್ಕಿತ್ತು ಧರೆಗೆಕಾನನದ ಹೂವೊಂದು ಅರಳಿತ್ತು ಕೊನೆಗೆ ಪ್ರಕೃತಿ ಸೊಬಗ ಸವಿಯಲು ಕಾದು ನಿಂತಿಹೆಹರ್ಷದಿ ನವಿಲೊಂದು ನರ್ತಿಸಿತ್ತು ಮಳೆಗೆ ಅಲ್ಲೊಂದು ಕುಹೂ ಗಾನ ಮೈಮರೆಸಿತ್ತು ಕ್ಷಣನಿನ್ನೊಲವಿನ ಓಲೆಯೊಂದು ತಲುಪಿತ್ತು ನನಗೆ ಮೇಘ ಸಂದೇಶದೊಳು ರವಾನಿಸುವ ತವಕಪ್ರೇಮದ ಬಾಣವೊಂದು ಚುಚ್ಚುತ್ತಿತ್ತು ಎದೆಗೆ ಒಲವಿನ ಜಾಲದೊಳು ಸಿಲುಕಿಹಳು ರೇಖೂಮಳೆಬಿಲ್ಲ ಬಣ್ಣವೊಂದು ಸಿಂಗರಿಸಿತ್ತು ಮುಡಿಗೆ ರೇಖಾಕ್ಷರ 

ಡಾ.ರೇಖಾ ಉದಯ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಅವರ ಗಜಲ್

ಕಾವ್ಯ ಸಂಗಾತಿ ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಗಜಲ್ *ಸಪ್ತ* ಸಾಗರ ದಾಟಿ ಪರ್ಯವಸಾನಗೊಂಡ *ಹಾದಿಯಿದು* ಪ್ರೇಮ*ಗುಪ್ತ* ಬಯಕೆಯ ಮೀಟಿ ಆಲಾಪಗೊಂಡ *ಶೃತಿಯಿದು* ಪ್ರೇಮ ಹೃದಯದಂಗಳದಲ್ಲಿ ಮಲ್ಲಿಗೆ ಬಳ್ಳಿ ನೆಟ್ಟವನು ನೀನಲ್ಲವೆ ಒಡೆಯ*ಸುಪ್ತ* ಮನವ ಮತ್ತೆ ಮತ್ತೆ ತೀಡಿ *ಲಯಗೊಂಡ* ಭಾವವಿದು ಪ್ರೇಮ ತನ್ನ ತಾ ಅರಿವಿನ ಮೊರೆಗೆ ಕಿವಿ ತೆರೆದು ಕೇಳಿದವರಾರು?*ಕ್ಲುಪ್ತ* ಕಲ್ಪನೆ ಕಟಿ ಕಟಿದು ಕೆನೆಗೊಂಡ *ಚತ್ರವಿದು* ಪ್ರೇಮ ಸುಟ್ಟು ಬೂದಿಯಾಗುವ ಹಂಬಲಕೆ ಕೊನೆ ಮೊದಲಿಲ್ಲ ಗೆಳತಿ*ತಪ್ತ* ಸ್ವರವ ಕುಡಿ ಕುಡಿದು ಹದಗೊಂಡ *ಗುನುಗಿದು* ಪ್ರೇಮ ಜಗದಲಿ ಅದೆಷ್ಟು ಮಧುಪಾತ್ರೆಗಳು ಬರಿದಾಗಿವೆ ನೋಡು ಹಸೀನಾ..*ತೃಪ್ತ* ಹೃದಯವ ಹುರಿದು ಮೆದುಮಾಡಿಕೊಂಡ *ನೈವೇದ್ಯವಿದು* ಪ್ರೇಮ -ಡಾ.ಹಸೀನಾ ಹೆಚ್.ಕೆ, ಶಿವಮೊಗ್ಗ

ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಅವರ ಗಜಲ್ Read Post »

You cannot copy content of this page

Scroll to Top