ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಥಾಗುಚ್ಛ

ಸಣ್ಣ ಕಥೆ “ರಂಗಣ್ಣನ ಮಂಗ” ಉತ್ತಮ ಎ ದೊಡ್ಮನಿ

ಕಥಾ ಸಂಗಾತಿ ಉತ್ತಮ ಎ ದೊಡ್ಮನಿ “ರಂಗಣ್ಣನ ಮಂಗ”           ಒಂದು ಊರಿನಲ್ಲಿ ಒಬ್ಬ ರಂಗಣ್ಣ ಎನ್ನುವವನಿದ್ದ. ಇರಲು ಒಂದು ಚಿಕ್ಕ ಮನೆ. ಅದನ್ನು ಮನೆ ಅಂದರೆ ಮನೆ, ಜೋಪಡಿ ಅಂದರೆ ಜೋಪಾಡಿ, ನೀವು ಏನಾದರೂ ಅನ್ಕೋಬಹುದು, ಆದರೆ ರಂಗಣ್ಣನಿಗೆ ಮಾತ್ರ ಅದು ಮನೆನೇ.      ಅವನಿಗೆ ನನ್ನವರು-ತನ್ನವರು ಎಂದು ಹೇಳಿಕೊಳ್ಳುವರು ಯಾರು ಇರಲಿಲ್ಲ. ಇಷ್ಟಾ ಆದರೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಇಲ್ಲದಿದ್ದರೆ ಮರಗಮ್ಮನ ಕಟ್ಟೆಯ ಮೇಲೆ ಕುಳಿತು ಯಾರಾದರೂ ಕೊಟ್ಟ ಬೀಡಿ ಸೇದುತ್ತಾ ಕಾಲ ಮ್ಯಾಲ ಕಾಲ ಹಾಕಿ ಮಲಗ್ತೀದ್ದ. ಊಟ ಸಿಕ್ಕರೆ ತಿನ್ನುತ್ತಿದ್ದ, ಇಲ್ಲ ಅಂದರೆ ಇಲ್ಲ. ಬದುಕ ಅಂದುರು ಹಿಂಗೆ ಇರಬೇಕು ಅನ್ನೋ ನಿಯಮ-ಗಿಮಾ ಏನ್ ಇರಲಿಲ್ಲ.       ಆಗಾಗ ಊರ ಪಕ್ಕದ ಕಾಡಿಗೆ ಹೋಗಿ ಒಣ ಕಟ್ಟಿಗೆಗಳನ್ನು ಆರಿಸಿಕೊಂಡು ಹೋಟೆಲ್‌ಗೆ ಮಾರುತ್ತಿದ್ದ. ಅದಕ್ಕೆ  ಒಂದು ಕಪ್ ಚಹಾ, ಕೆಲವೊಮ್ಮೆ ನಾಸ್ಟಾ ಸಿಗುತ್ತಿತ್ತು. ಅದೇ ಅವನ ಸಂಬಳ.ಆ ಹೋಟೆಲ್ ತೊಗರಿ ಕಟ್ಟಿಗೆಯಿಂದ ಕಟ್ಟಿದ ಅದರ ಮೇಲೆ ನಾಲ್ಕು  ಪತ್ರಾ. ಚಹಾ ಗ್ಲಾಸ್ ತೊಳೆದಿದ ನೀರಿನಲ್ಲಿ  ನಾಯಿಗಳು, ಹಂದಿಗಳು ಖಾಯಂ ಠಿಕಾಣಿ. ಕೋಳಿಗಳು ನೆಂಟರ ಹಾಗೆ  ಬಂದು ದಣಿಯೂ ಹಾರಿಸ್ಕೊತಿವು. ಒಳಗೆ ನೊಣಗಳದ್ದೇ ಜಾತ್ರೆ.      ರಂಗಣ್ಣ ಹೋಟೆಲ್ ಒಳಗೆ ಹೋಗ್ತಾ ಇರಲಿಲ್ಲ. ಅವನಿಗೋಸ್ಕರ ಹೊರಗೇ ಒಂದು ಗ್ಲಾಸ್ ಇಟ್ಟಿರುತ್ತಿದ್ದರು. ಅದರಲ್ಲಿ ಚಹಾ ಕುಡಿದು, ತಾನೆ ತೊಳೆದು ಅದೇ ಜಾಗದಲ್ಲಿ ಇಟ್ಟು ಹೊರಡುತ್ತಿದ್ದ.ಅವಾ ಏನು ಹುಟ್ಟಿನಿಂದ ಕುಂಟನಲ್ಲ. ಚಿಕ್ಕವನಿದ್ದಾಗ ಅಪ್ಪುನ ಜೊತೆ ದನ ಮೇಯಿಸಲು ಹೋಗಿ ತೆಗ್ಗಿನಲ್ಲಿ ಬಿದ್ದಿದ್ದ. ಆಗ ಸರಿಯಾದ ಚಿಕಿತ್ಸೆ ಸಿಗದೇ ಕುಂಟಾಗಿದ್ದ. ಊರವರು ದಯೆಯಿಂದ ಸರ್ಕಾರದ ಅಂಗವಿಕಲ ವೇತನ ಮಾಡಿಸಿಕೊಟ್ಟಿರು. ಅದು ಯಾರ ಅಂತ ಅವನೀಗ ಗೊತ್ತಿಲ್ಲ. ಅದೇ ಅವನ ಬದುಕಿನ ಒಂದು ಆಧಾರವಾಗಿತ್ತು. ಹೀಗೆ ಯಾರಿಗೂ ತೊಂದರೆ ಕೊಡದೆ, ಯಾರ ಮೇಲೂ ಆಸೆ ಇಡದೆ ರಂಗಣ್ಣ ತನ್ನ ಬದುಕು ಸಾಗಿಸುತ್ತಿದ್ದ.     ಒಂದು ದಿನ ಬೆಳಗ್ಗೆ ಎದ್ದು, ಹೋಟೆಲ್‌ನಲ್ಲಿ ಚಹಾ ಕುಡಿದು, ಬೀಡಿ ಹಚ್ಚಿಕೊಂಡು ಕಟ್ಟಿಗೆ ತರಲು ಕಾಡಿಗೆ ಹೋದ. ಅಲ್ಲಲ್ಲಿ ಬಿದ್ದಿದ್ದ ಒಣ ಕಟ್ಟಿಗೆಗಳನ್ನು ಕೂಡಿಸಿ ಹೊರೆ ಕಟ್ಟಲು ಮುಂದಾದಾಗ, ಹತ್ತಿರದಿಂದ ಸಣ್ಣದ್ದೊಂದು ಧ್ವನಿ ಕೇಳಿಸಿತು.”ಏನಿರಬಹುದು?” ಎಂದು ಸುತ್ತಲೂ ನೋಡಿದ.ಮುಳ್ಳಿನ ಗಿಡದ ನಡುವೆ ಒಂದು ಮಂಗ್ಯಾನ ಮರಿ ಸಿಕ್ಕಿಕೊಂಡು ಕಿರುಚುತ್ತಿತ್ತು.”ಅಯ್ಯೋ ಪಾಪ!” ಎಂದು ಓಡಿಹೋಗಿ ಮುಳ್ಳುಗಳನ್ನು ಬದಿಗಿಟ್ಟು ಅದನ್ನು ಎಚ್ಚರಿಕೆಯಿಂದ ಹೊರತೆಗೆದ.       ಕಟ್ಟಿಗೆಯ ಹೊರೆ ತಲೆಯ ಮೇಲೆ ಹೊತ್ತು ಊರ ಕಡೆ ಹೊರಟ.ಆದರೆ ಆ ಮರಿ ಅವನ ಹಿಂದೆ ಹಿಂದೆ ಬರತೊಡಗಿತು. ಓಡಿಸಿದರೂ ಅದು ಹೋಗಲಿಲ್ಲ.ಕೊನೆಗೆ ನಗುತ್ತಾ, “ನನಗೂ ಯಾರಿಲ್ಲ… ನಿನಗೂ ಯಾರಿಲ್ಲ… ಇನ್ನು ನಾವು ಇಬ್ಬರೂ ದೋಸ್ತುರು” ಎಂದು ಹೇಳಿ ತನ್ನ ಹೆಗಲ ಮೇಲೆ ಕೂರಿಸಿಕೊಂಡ.ಅಲ್ಲಿಂದಲೇ ಅವರಿಬ್ಬರ ಬದುಕು ಒಂದಾಯಿತು.      ರಂಗಣ್ಣ ಹೆಗಲ ಮೇಲೆ ಕುಳಿತ ಮಂಗ್ಯಾನ ಮರಿ ಊರಿಗೆ ಬಂದಾಗ ಎಲ್ಲರ ಕಣ್ಣು ಅವರಿಬ್ಬರ ಮೇಲೆಯೇ ನೆಟ್ಟಿತು.ಹೋಟೆಲ್ ಮುಂದೆ ಕಟ್ಟಿಗೆಯ ಹೊರೆ ಇಳಿಸುತ್ತಿದ್ದಂತೆ ಭೀಮಣ್ಣಗೌಡ ನಗುತ್ತಾ, “ಏನಪ್ಪಾ ರಂಗ, ಇವತ್ತ ಇದೇನು ನಿಂದು ಹೊಸ ಅವತಾರ?” ಎಂದ.ಪಕ್ಕದಲ್ಲೇ ನಿಂತಿದ್ದ ತುರುಕೂರು ಮುಲ್ಲಾ, “ಅಯ್ಯೋ… “ರಂಗಕ್ಕೆ ಉಪ್ಪಾರ ಮಂಗ್ಯಾ” ಎಂದು ತಮಾಷೆ ಮಾಡಿದ.ಅಲ್ಲಿದ್ದವರೆಲ್ಲ ನಕ್ಕರು. ರಂಗಣ್ಣ ಮಾತ್ರ ಯಾರ ಮಾತಿಗೂ ಉತ್ತರಿಸದೆ ಮುಗುಳ್ನಗುತ್ತಾ ಕಟ್ಟಿಗೆಯನ್ನು ಇಳಿಸಿ ತನ್ನ ಜೋಪಡಿಯ ಕಡೆ ನಡೆದುಹೋದ.         ಮನೆಗೆ ಬಂದ ಕೂಡಲೆ ಮರಿಯನ್ನು ಕೆಳಕ್ಕಿಳಿಸಿದ. ಅದರ ಕಾಲಿಗೆ ಸಣ್ಣ ಗಾಯವಾಗತ್ತು ಅರಸೀಣ ಹಚ್ಚಿ, ಹಳೆಯ ಬಟ್ಟೆಯ ತುಂಡಿನಿಂದ ಮೆಲ್ಲಗೆ ಕಟ್ಟಿದ.ಒಂದು ಹಳೆಯ ತಟ್ಟೆಯಲ್ಲಿ ನೀರು ಹಾಕಿ ಅದರ ಮುಂದೆ ಇಟ್ಟ. ನಂತರ ಮನೆಯಲ್ಲಿ ತಿನ್ನಲು ಏನಾದರೂ ಇದೆಯೇ ಎಂದು ಹುಡುಕಿದ.ಕೊನೆಗೆ ಪಕ್ಕದ ಮನೆಯ ಪಾರವ್ವ ಹಿಂದಿನ ರಾತ್ರಿ ಕೊಟ್ಟಿದ್ದ ಒಣ ರೊಟ್ಟಿ ಸಿಕ್ಕಿತು. ಅದನ್ನು ಚಿಕ್ಕಚಿಕ್ಕ ತುಂಡುಗಳಾಗಿ ಮುರಿದು ಮಂಗದ ಮುಂದೆ ಇಟ್ಟ.ಮೊದಲು ಅದು ಅನುಮಾನದಿಂದ ನೋಡಿತು. ನಂತರ ಹಸಿವಿನಿಂದ ನಿಧಾನವಾಗಿ ತಿನ್ನತೊಡಗಿತು. ರೊಟ್ಟಿಯನ್ನೂ ಅದರ ಜೊತೆ ಹಂಚಿಕೊಂಡ.         ಕಾಡಿಗೆ ಹೋಗಿ ಬಂದ ಆಯಾಸದಿಂದ ರಂಗಣ್ಣ ಬಾಗಿಲು ಮುಂದ ಮಾಡಿ ನೆಲದ ಮೇಲೆಯೇ ಅಡ್ಡಾದ.ಮಂಗ್ಯಾನ ಮರಿಗೆ ಮಾತ್ರ ಹೊಸ ಮನೆಯ ಕುತೂಹಲ.ಒಮ್ಮೆ ಈ ಮೂಲೆಗೆ, ಮತ್ತೊಮ್ಮೆ ಆ ಮೂಲೆಗೆ ಓಡುತ್ತಾ, ಗೋಡೆಯ ಮೇಲೆ ಹತ್ತಿ ಇಳಿಯುತ್ತಾ, ಪಾತ್ರೆಗಳನ್ನು ಮುಟ್ಟುತ್ತಾ ಆಟವಾಡತೊಡಗಿತು.ರಂಗಣ್ಣ ಕಣ್ಣು ಮುಚ್ಚಿದರೆ ಸಾಕು, ಅದು ಬಂದು ಅವನ ಎದೆ ಮೇಲೆ ಹತ್ತುತ್ತಿತ್ತು.ಕಿವಿ ಎಳೆಯುತ್ತಿತ್ತು.ಕೂದಲು ಹಿಡಿದು ಎಳೆಯುತ್ತಿತ್ತು.“ಅಯ್ಯೋ… ಇದು ಮಲಗೋಕೂ ಬಿಡಂಗ ಕಾಣಲ್ಲ!” ಎಂದು ನಗುತ್ತಾ ಅದನ್ನು ತಬ್ಬಿಕೊಂಡ.        “ಇದು ಯಾವಾಗ ಬೇಕಾದರೂ ಓಡಿಹೋಗಬಹುದು. ಅದಕ್ಕೆ ಕಟ್ಟಿ ಹಾಕಲು ಚೈನ್ ಮಾಡಿ ಜೊತೆ ತಗೊಂಡು ಓಡಾಡಬಹುದು, ಜೊತೆಯಲ್ಲೇ ಇಟ್ಟುಕೊಳ್ಳಬಹುದು.”ಎಂದುಕೊಂಡು ಮಂಗವನ್ನು ಬಗಲಲ್ಲಿ ಎತ್ತಿಕೊಂಡು ಕಂಬಾರ ನಾಗಪ್ಪನ ಮನೆ ಕಡೆ ಹೊರಟ.ನಾಗಪ್ಪನ ಮನೆಗೆ ಹೋಗುವ ದಾರಿ ಶಾಲೆಯ ಮುಂದೆ ಹಾದು ಹೋಗುತ್ತಿತ್ತು.ಅಷ್ಟರಲ್ಲಿ ಶಾಲೆ ಆಟಕೆ ಬಿಡಲಾಗಿತ್ತು.ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದರು.        ರಂಗಣ್ಣನ ಹೆಗಲ ಮೇಲೆ ಕುಳಿತಿದ್ದ ಮಂಗವನ್ನು ಕಂಡ ತಕ್ಷಣ ಎಲ್ಲ ಮಕ್ಕಳು ಓಡಿಬಂದರು.”ಮಂಗ… ಮಂಗ…!” ಎಂದು ಕೂಗುತ್ತಾ ಅದರ ಹಿಂದೆ ಬಿದ್ದರು.ಮೊದಲು ಮಂಗ ಹೆದರಿತು.ಟಿಸ್ ಟಿಸ್ ಅಂತ ಅವುರ ಮ್ಯಾಲೆ ಜಿಗಿದಾಗೆ ಮಾಡದು. ಸ್ವಲ್ಪ ಹೊತ್ತಿನಲ್ಲೇ ಮಕ್ಕಳ ಜೊತೆ ಆಟವಾಡಲು ಶುರುಮಾಡಿತು.ಒಬ್ಬನ ತಲೆಯ ಮೇಲೆ ಹಾರಿ ಕುಳಿತಿತು.ಇನ್ನೊಬ್ಬನ ಕೈಯಲ್ಲಿದ್ದ ಕಡಲೆ ಕಸಿದುಕೊಂಡಿತು.ಮಕ್ಕಳು ನಗುತ್ತಾ ಅದರ ಹಿಂದೆ ಓಡಿದರು.ಶಾಲೆಯ ಮೈದಾನವೇ ಕ್ಷಣಾರ್ಧದಲ್ಲಿ ಸಂಭ್ರಮದಿಂದ ತುಂಬಿತು.ರಂಗಣ್ಣ ಮಾತ್ರ ನಿಂತು ಮಕ್ಕಳ ಖುಷಿಯನ್ನು ನೋಡಿ ಮನಸಾರೆ ನಕ್ಕ.”ಇದು ನನಗಿಂತ ಬೇಗ ಊರವರ ಮನಸ್ಸು ಗೆದ್ದಿತಲ್ಲ…” ಎಂದು ತನ್ನೊಳಗೆ ಮಾತಾಡಿಕೊಂಡ.ಅಲ್ಲಿಂದ ನಿಧಾನವಾಗಿ ನಾಗಪ್ಪನ ಮನೆಯ ಕಡೆ ಹೆಜ್ಜೆ ಹಾಕಿದ.        ನಾಗಪ್ಪನ ಮನೆಯ ಮುಂದೆ ಹೋಗಿ ರಂಗಣ್ಣ ನಿಂತ.“ನಾಗಪ್ಪಣ್ಣ… ಓ ನಾಗಪ್ಪಣ್ಣ…” ಎಂದು ಎರಡು-ಮೂರು ಸಲ ಕೂಗಿದ.ಒಳಗಿಂದ ಕಬ್ಬಿಣದ ಮೇಲೆ ಸುತ್ತಿಗೆಯ ಸದ್ದು ನಿಂತಿತು.”ಯಾರು?” ಎಂದು ಹೊರಗೆ ಬಂದ ನಾಗಪ್ಪ, ರಂಗಣ್ಣನ ಹೆಗಲ ಮೇಲೆ ಕುಳಿತಿದ್ದ ಮಂಗವನ್ನು ನೋಡಿ ಕಕ್ಕಾಬಿಕ್ಕಿಯಾದ.“ಏನಯ್ಯ ರಂಗಾ! ಇದು ಎಲ್ಲಿಂದ ತಂದೆ?”“ಕಾಡಲ್ಲಿ ಮುಳ್ಳಿಗೆ ಸಿಕ್ಕಿಕೊಂಡಿತ್ತು. ಪಾಪ ಅಳ್ತಿತ್ತು. ಬಿಡಿಸಿಕೊಂಡು ಬಂದೆ. ಈಗ ನನ್ನ ಜೊತೆಯಲ್ಲೇ ಇರ್ತದೆ. ಇದಕ್ಕೊಂದು ಸಣ್ಣ ಚೈನ್ ಮಾಡಿಕೊಡು.”ನಾಗಪ್ಪ ನಕ್ಕ.“ನಿನಗೇ ಗತಿಯಿಲ್ಲ. ಈಗ ಇದನ್ನೂ ಸಾಕ್ತೀಯಾ?”ಅಷ್ಟರಲ್ಲಿ ಅಲ್ಲೇ ಕುಳಿತಿದ್ದ ಕುರುಬರ ಬೀರಣ್ಣ,“ನಾಯಿ ಸಾಕೋರು, ಬೆಕ್ಕು ಸಾಕೋರು ನೋಡಿದ್ದೇವೆ. ನೀನು ಮಂಗ ಸಾಕ್ತೀಯಪ್ಪಾ! ಊರಲ್ಲಿ ನೀನೇ ಭಾರಿ.”       ರಂಗಣ್ಣ ಮಾತ್ರ ಮಂಗದ ತಲೆಯನ್ನು ಸವರುತ್ತಾ,“ಇದಕ್ಕೂ ಜೀವ ಇದೆ ಬೀರಣ್ಣ. ಇದಕ್ಕೂ ಪ್ರೀತಿ ಬೇಕಲ್ಲ…” ಎಂದ.ಆ ಒಂದು ಮಾತಿಗೆ ಅಲ್ಲಿದ್ದವರು ಕ್ಷಣಕಾಲ ಮೌನರಾದರು.ಅಷ್ಟರಲ್ಲಿ ಅಡುಗೆ ಮನೆಯಿಂದ ನಾಗಪ್ಪನ ಹೆಂಡತಿ ಹೊರಬಂದಳು.”ಏನ್ರಿ ಇಷ್ಟೊಂದು ಗದ್ದಲ?”ಅವಳ ಕಣ್ಣು ಮಂಗದ ಮರಿಯ ಮೇಲೆ ಬಿತ್ತು.“ಅಯ್ಯೋ… ಎಷ್ಟು ಮುದ್ದಾಗಿದೆ!” ಎಂದು ಅದನ್ನು ಎತ್ತಿಕೊಳ್ಳಲು ಕೈ ಚಾಚಿದಳು.ಮಂಗ ಹೆದರಿ ಓಡಿ ಹೋಗಿ ರಂಗಣ್ಣನ ಬೆನ್ನ ಹಿಂದೆ ಅಡಗಿತು.ನಾಗಪ್ಪ ನಗುತ್ತಾ,ನೋಡಪ್ಪ ಈ ಹೆಂಗಸುರ ಕಂಡೂರಾ ಗಂಡದೇರು ಅಷ್ಟೇ ಅಂಜತರ ಅನ್ಕೊಂಡಿದ್ದೆ, ಆದುರು ಈ ಮಂಗ್ಯಾಗಳು ಹೇದುರ್ತಾವ ಅಂತ ನಾಗಪ್ಪ. ಎಲ್ಲರೂ ಒಮ್ಮೆಲೇಗೆ ಕೊಳ್ಳ ಅಂತ ನಕ್ಕುರು.ಹೌದು ಹೌದು ಬಾರಿ ಅಂಜತಿರಿ ಅಂತ ಒಳಗೆ ಹೋಗಿ ಒಂದು ತಟ್ಟೆಯಲ್ಲಿ ಬಿಸಿ ರೊಟ್ಟಿ, ಸ್ವಲ್ಪ ಪಲ್ಯ, ಒಂದು ಬಟ್ಟಲಲ್ಲಿ ನೀರು ತಂದು ರಂಗಣ್ಣನ ಮುಂದೆ ಇಟ್ಟಳು.”ಮೊದಲು ನೀನು ಊಟ ಮಾಡು. ಆಮೇಲೆ ಚೈನ್ ಮಾಡಿಸಿಕೋ.”ರಂಗಣ್ಣ ಕೃತಜ್ಞತೆಯಿಂದ ಅವಳನ್ನು ನೋಡಿದ.      ಏ ಬೀರಪ್ಪ ನಿಂಗೊತ್ತಿಲ್ಲ ಈ ಹೆಣ್ಣು ಮಕ್ಕಳು. ನಾ ಯಾರ್ ಹೇಳು, ಕಂಬಾರ ನಾಗಪ್ಪ. ಕಬ್ಬಿಣ ಕಾಸಿ ಬಗ್ಗಿಸೋದೆ ನನ್ನ ಕೆಲಸ, ಯಾವಾಗ-ಹೇಗೆ-ಎಲ್ಲಿ ಬಡಿಬೇಕಂತ ನನಗೆಲ್ಲಾ ಗೊತ್ತು. ಹೌದಪ್ಪ ಎಲ್ಲರಿಗೂ ನಿನ್ನ ಧೈರ್ಯ ಇರಬೇಕಲ್ಲ. ಈಗ  ಈ ಕೆಲಸ ಬಿಟ್ಟು ಊರಿನ ಗಂಡುಸರಿಗ-ಮುಂದ ಮದಿ ಆಗವರಿಗೆ ಪಾಠ ಮಾಡ “ಹೆಂಡತಿಯರಿಗೆ ಹದ್ದಬಸ್ತನಲ್ಲಿ ಹೇಗ  ಇಡುವುದು ಅಂತ” ಗಿರಾಕಿ ಬಹಳ ಆತದ. ಹೇ ಹುಚ್ಚ ಅದಕ್ಕೆ ನೀವೆಲ್ಲ ಫೇಲ್ ಆತಿರಿ ನೋಡು, ನಾವೂ ಮಾಡೋದು ಅವರಿಗೆ ಗೊತ್ತಾಗಬಾರದು. ಎಲ್ಲಾ ಸೀಕ್ರೆಟ್ ಇರಬೇಕು. ಇದೆಲ್ಲ ಗೊತ್ತಾದರೆ ನನ್ನ ದುಖಾನ ಬಂದಾತದ. ಸರಿ ಏನಾದ್ರೂ ಮಾಡು ನಾ ಹೋಗ್ತೀನಿ, ಚಾ ಗ್ಲಾಸ್ ಅಲ್ಲೇ ಕಟ್ಟಿ ಮೇಲೆ ಇಟು, ರೊಕ್ಕ ಆಮೇಲೆ ಕೂಡ್ತಿನಿ ಅಂತ,  ಕೊಡಲಿ ಹೆಗಲ ಮ್ಯಾಲ್ ಇಟ್ಟುಕೊಂಡು ಹೊರಟ         ಊಟ ಮುಗಿದ ಮೇಲೆ ನಾಗಪ್ಪ ಸಣ್ಣ ಕಬ್ಬಿಣದ ಸರ ಮಾಡಿ, ಕುತ್ತಿಗೆಗೆ ನೋವಾಗದಂತೆ ಮೃದುವಾಗಿ ಚೈನ್ ಹಾಕಿದ ಕೂಡಲೇ ಅದು ಎರಡು ಹೆಜ್ಜೆ ಹಿಂದೆ ಸರಿದು, ಮತ್ತೆ ರಂಗಣ್ಣನ ಹೆಗಲ ಮೇಲೆ ಹಾರಿ ಕುಳಿತಿತು.ಈ ಪ್ರೀತಿಗೆ ಚೈನ್ ಬೇಕಾಗಲ್ಲ. ಆದರೆ ಊರು ದೊಡ್ಡದು. ಕಳೆದು ಹೋದರೆ ಹುಡುಕೋಕಾಗಲ್ಲ.”ಆ ಮಾತು ಕೇಳಿ ನಾಗಪ್ಪನ ಮುಖದಲ್ಲಿ ಮೆಚ್ಚುಗೆಯ ನಗು ಮೂಡಿತು.ಅಲ್ಲಿದ್ದ ಎಲ್ಲರಿಗೂ ಮೊದಲ ಬಾರಿಗೆ ರಂಗಣ್ಣನ ಸರಳ ಮನಸ್ಸಿನ ಆಳ ಅರ್ಥವಾಯಿತು.           ಅಂದು ಸಂಜೆ ರಂಗಣ್ಣ ಮಂಗವನ್ನು ಹೆಗಲ ಮೇಲೆ ಕೂರಿಸಿಕೊಂಡು ಊರೊಳಗೆ ನಡೆದಾಗ, ಮಕ್ಕಳು ಹಿಂದೆ ಹಿಂದೆ ಓಡಿದರು.ಯಾರೋ ಕಡಲೆ ಕೊಟ್ಟರು.ಇನ್ನೊಬ್ಬರು ಬಾಳೆಹಣ್ಣು ಕೊಟ್ಟರು.ಹೋಟೆಲ್‌ನವನು ಬ್ರೆಡ್ ಕೊಟ್ಟ.ಮಂಗ ಎಲ್ಲವನ್ನೂ ಮೊದಲು ರಂಗಣ್ಣನ ಕೈಗೆ ಕೊಟ್ಟು, ಅವನು ಕೊಟ್ಟ ನಂತರವೇ ತಿನ್ನುತ್ತಿತ್ತು.ಅದನ್ನು ನೋಡಿದ ತುರುಕೂರು ಮುಲ್ಲಾ ನೋಡ್ರಿ ಗೌಡ ಮನಷ್ಯರು ಅಂತೂ ಜೋಡಿ ಆಲಿಲ್ಲ, ಈ ಮೂಕ ಪ್ರಾಣಿ ಜೋಡಿಯಿತ್ತು.        ಏನ್ ಮಾಡೋದು ಅವುನ ಅವ್ವ ಸಂಡಸ್ ಮಾಡುಕು ಹೋದಾಗ ಹಾವು ಕಚ್ಚಿ ಸತ್ತುಳು. ಅದೇ ಟೆನ್ಶನ್ ದಾಗ ಇದ್ದು ಇದ್ದು ಹೀಗ ಆದ. ಅದಕ್ಕೆ ಗೌಡ್ರೆ ನೀವು ನಮ್ಮೂರಿಗೊಂದು ಶೌಚಾಲಯ ಕಟ್ಟಿಸಬೇಕು. ಗಂಡಸರಿಗೆ ಅಲ್ಲದೆ ಹೋದರೂ ಈ ಹೆಣ್ಣು ಮಕ್ಕಳಿಗಾದರೂ ಶೌಚಾಲಯ ಕಟ್ಟಿಸಬೇಕು. ಗಂಡಸುರು ಎಲ್ಲದುರು ಹೋಗ್ತಾರ ಪಾಪ ಈ ಹೆಂಗಸುರದು ಹೈರಾಣ ಆದಾ.      ನೀ ಹೇಳೋದ ಕರೆ ಅದಾರೋ. ಪಂಚಾಯಿತಿಯಿಂದ ಕಟ್ಟುಸ್ತೇವು ಅಂತೇಳಿ ರೊಕ್ಕ ತೊಗೋತಾರೆ, ಕಟ್ಟಿಸಿದುರು ಅದರಲ್ಲಿ ಕೂಡಲ್ಲ ಮತ್ತೆ ಹೊರಗೆ ಹೋಗ್ತಾರೆ.   ಈ ನಮ್ಮ ಹಳ್ಳಿ, ಜನ ಮಡಿ-ಮೈಲಿಗೆ ಅದು ಇದು ಅಂತ ಹೇಳಿ.   ನಾ ಏನು ಕೈಹಿಡಿದು ಕುಡಿಸುಕಾಗುತ್ತಾ ಮುಲ್ಲಾ. ನೀವು ಹೇಳೋದು ಕರೆಯಾದರೆ ಜನರಿಗೆ ಬುದ್ಧಿ ಬರಬೇಕು ಗೌಡ್ರೆ. ಅಂತ ಹೇಳಿ ಅವರು ಲೆಕ್ಕದಲ್ಲಿ ಬೆಳಗ್ಗಿನ ಚಾ ಕುಡಿದು ಅವುನು ಕೈಯಾಗ ಸಂಡಾಸ್ಹೊ ಡಬ್ಬಾ ಹಿಡಕೊಂಡು ಹಳ್ಳುದ ಕಡೆ ಹೊರಟು ಹೋದ.         ಕಾಲ ಕಳೆಯುತ್ತಾ ಹೋಯಿತು.ಮಂಗ ಈಗ ರಂಗಣ್ಣನ ಸಾಕುಪ್ರಾಣಿಯಷ್ಟೇ ಅಲ್ಲ, ಅವನ ನೆರಳೇ ಆಗಿತ್ತು.ರಂಗಣ್ಣ ಎಲ್ಲಿಗೆ ಹೋದರೂ ಅದು ಹೆಗಲ ಮೇಲೆಯೇ ಇರುತ್ತಿತ್ತು. ಕಟ್ಟಿಗೆ ತರಲು

ಸಣ್ಣ ಕಥೆ “ರಂಗಣ್ಣನ ಮಂಗ” ಉತ್ತಮ ಎ ದೊಡ್ಮನಿ Read Post »

ಕಾವ್ಯಯಾನ, ಗಝಲ್

ಸುಕನಸು ಅವರ ಗಜಲ್

ಕಾವ್ಯ ಸಂಗಾತಿ ಸುಕನಸು ಗಜಲ್ ನಾನಿರದ ಬದುಕಲಿ ನೀ ಸಂತಸದಿಂದಿದ್ದರೆ ಬೇರೇನು ಬೇಕೆನಗೆನಿನ್ನದೆ ಲೋಕದಲಿ ನೀ ಬಯಸಿದಂತಿದ್ದರೆ ಬೇರೇನು ಬೇಕೆನಗೆ ಒಲವ ಮಳೆಯಲಿ ಜೊತೆ ನೆನೆದ ನೆನಪು ನನ್ನ ಪಾಲಿಗಿದೆಯಲ್ಲಲಾಲಸೆ ಮತ್ತಿನಲಿ ನೀ ಓಲಾಡುತಲಿದ್ದರೆ ಬೇರೇನು ಬೇಕೆನಗೆ ಹಾರೈಸುವೆ ನಿನ್ನ ಸಂಕಷ್ಟದ ದೆಸೆಗಳು ನನ್ನೊಂದಿಗೆ ತೆರಳಲಿಸುಯೋಗದೊಂದಿಗೆ ನಿನ್ನ ಗೆಳೆತನವಿದ್ದರೆ ಬೇರೇನು ಬೇಕೆನಗೆ ಕಂಡೆನಂದೇ ನಾ ಜೊತೆಯಲಿರೆ ಅನ್ಯರೆಡೆಗೆ ವಾಲಿದ ನಿನ್ನ ಒಲವಅವರೊಲವೊಂದಿಗೆ ಹೊಂದಾಣಿಕೆಯಿದ್ದರೆ ಬೇರೇನು ಬೇಕೆನಗೆ ನೀ ಬಯಸಿದ ಬಯಕೆಗಳ ನಾ ಪೂರೈಸಲು ಸೋತೆನೇನೊ ನಲ್ಲನಿನ್ನಿಚ್ಚೆಗೆ  ರೂಪಕೊಡುವ ಗೆಣಿಕಾರರಿದ್ದರೆ ಬೇರೇನು ಬೇಕೆನಗೆ ಮಲ್ಲಿಗೆ ಸುಮ ಪರಿಮಳಕಷ್ಟೆ, ಮುಡಿದವರ ನಸೀಬು ತಿದ್ದಲಾಗದುಅದೃಷ್ಟದೊಂದಿಗೆ ನಿನ್ನ  ಒಪ್ಪಂದವಾಗಿದ್ದರೆ ಬೇರೇನು ಬೇಕೆನಗೆ ಸುಕನಸು

ಸುಕನಸು ಅವರ ಗಜಲ್ Read Post »

ಇತರೆ

ಆರಂಭವಾಗಲಿ ಬದಲಾವಣೆ ನಮ್ಮಿಂದಲೇ……ಜಯಶ್ರೀ ಜೆ ಅಬ್ಬಿಗೇರಿ

ಪ್ರೇರಣಾ ಸಂಗಾತಿ ಜಯಶ್ರೀ ಜೆ ಅಬ್ಬಿಗೇರಿ ಆರಂಭವಾಗಲಿ ಬದಲಾವಣೆ  ನಮ್ಮಿಂದಲೇ…… ನಾವೆಲ್ಲ ಜಗತ್ತು ಬದಲಾಗಬೇಕು ಎಂದು ಬಯಸುತ್ತೇವೆ.ಆದರೆ ನಾವು ಬದಲಾಗಲು ಬಯಸುವುದಿಲ್ಲ.ಈ ಮಾತು ವಿಚಿತ್ರ ಆದರೂ ಸತ್ಯ. ನೀನು, ಮೊದಲು ಆ ಬದಲಾವಣೆಯಾಗಿ ಬದಲಾಗು” (Be the change you want to see in the world) ಎಂಬ ಮಹಾತ್ಮ ಗಾಂಧೀಜಿಯವರ ಈ ಮಾತು ಕೇವಲ ಘೋಷಣೆಯಲ್ಲ; ಅದು ಬದುಕಿನ ಪರಮ ಸತ್ಯ.ನಾವು ಜಗತ್ತನ್ನು ದೂಷಿಸುವ ಮುನ್ನ ನಮ್ಮ ಅಂತರಂಗವನ್ನು ಒಮ್ಮೆ ಇಣುಕಿ ನೋಡಲು ಕಲಿಯಬೇಕಿದೆ. ಒಂದು ಪುಟ್ಟ ಪ್ರೇರಣಾದಾಯಕ ಕಥೆಯೊಂದನ್ನು ಓದಿದ್ದುನೆನಪಾಗುತ್ತಿದೆ. ನೀವೂ ಓದಿ. ಒಮ್ಮೆ ಕಡಲತೀರದಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿತ್ತು. ಅಲೆಗಳ ಆರ್ಭಟಕ್ಕೆ ಸಿಲುಕಿ ಲಕ್ಷಾಂತರ ನಕ್ಷತ್ರ ಮೀನುಗಳು  ತೀರದ ಮರಳಿನ ಮೇಲೆ ಬಂದು ಬಿದ್ದಿದ್ದವು. ಸೂರ್ಯನ ಶಾಖ ಹೆಚ್ಚಾಗುತ್ತಿದ್ದಂತೆ ಅವು ನೀರಿಲ್ಲದೆ ಒದ್ದಾಡಿ ಸಾಯತೊಡಗಿದವು.ಅದೇ ದಾರಿಯಲ್ಲಿ ಸಾಗುತ್ತಿದ್ದ ಒಬ್ಬ ವೃದ್ಧ, ಮರಳಿನ ಮೇಲೆ ಬಿದ್ದಿದ್ದ ಮೀನುಗಳನ್ನು ನೋಡಿ ನಿಟ್ಟುಸಿರು ಬಿಟ್ಟರು. ಆದರೆ, ಅಷ್ಟರಲ್ಲೇ ಒಬ್ಬ ಪುಟ್ಟ ಬಾಲಕ ಅಲ್ಲಿಗೆ ಬಂದ. ಅವನು ಮರಳಿನ ಮೇಲಿದ್ದ ಮೀನುಗಳನ್ನು ಒಂದೊಂದಾಗಿ ಎತ್ತಿ ಪ್ರೀತಿಯಿಂದ ಸಮುದ್ರದ ನೀರಿಗೆ ಎಸೆಯತೊಡಗಿದ. ಇದನ್ನು ನೋಡಿದ ವೃದ್ಧ ಬಾಲಕನ ಹತ್ತಿರ ಬಂದು, “ಮಗುವೇ, ಇಲ್ಲಿ ಲಕ್ಷಾಂತರ ಮೀನುಗಳಿವೆ. ನೀನು ಕೆಲವೇ ಕೆಲವು ಮೀನುಗಳನ್ನು ಉಳಿಸಿದರೆ ಈ ವಿಶಾಲ ಜಗತ್ತಿಗೆ ಏನು ವ್ಯತ್ಯಾಸವಾಗುತ್ತದೆ?” ಎಂದು ಕೇಳಿದ. ಬಾಲಕ ನಸುನಕ್ಕು, ಮತ್ತೊಂದು ಮೀನನ್ನು ಕೈಗೆತ್ತಿಕೊಂಡು ನೀರಿಗೆ ಎಸೆದ. ನಂತರ ವೃದ್ಧರ ಕಣ್ಣುಗಳನ್ನು ದಿಟ್ಟಿಸಿ ನೋಡಿ, “ಇಡೀ ಜಗತ್ತಿಗೆ ವ್ಯತ್ಯಾಸವಾಗದೇ ಇರಬಹುದು, ಆದರೆ ನಾನು ನೀರಿಗೆ ಎಸೆದ ಆ ಒಂದು ಮೀನಿನ ಜೀವಕ್ಕೆ ಇಡೀ ಜಗತ್ತೇ ಬದಲಾದಂತಾಯಿತಲ್ಲವೇ?” ಎಂದನು.ವೃದ್ಧನಿಗೆ ತನ್ನ ತಪ್ಪಿನ ಅರಿವಾಯಿತು. ಅವನೂ ಬಾಲಕನೊಂದಿಗೆ ಕೈಜೋಡಿಸಿದನು. “ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಹಬ್ಬ.” ಎಂಬಂತೆ, ಆ ಪುಟ್ಟ ಬಾಲಕನ ಒಂದು ಸಣ್ಣ ಪ್ರಯತ್ನದಹೆಜ್ಜೆ ಅಂದು ಸಾವಿರಾರು ಜೀವಗಳನ್ನು ಉಳಿಸಿತು. ಮುನ್ನುಡಿಬದಲಾವಣೆಗೆ ನಾವೇಮುನ್ನುಡಿ ಬರೆಯಬೇಕು.ಬದಲಾವಣೆ ನಮ್ಮಿಂದಲೇ ನಾವು ಪ್ರತಿದಿನ ಸಮಾಜದಲ್ಲಿನ ಭ್ರಷ್ಟಾಚಾರ, ಸ್ವಾರ್ಥ, ಪರಿಸರ ಮಾಲಿನ್ಯ ಮತ್ತು ದ್ವೇಷದ ಬಗ್ಗೆ ಮಾತನಾಡುತ್ತೇವೆ.ಸಮಾಜವನ್ನು,ವ್ಯವಸ್ಥೆಯನ್ನು ದೂಷಿಸುವುದು ಹೂವಿನ ಮೇಲಿನ ಇಬ್ಬನಿಯನ್ನು ಒರೆಸಿದಷ್ಟೇ ಸುಲಭ. ಆದರೆ, “ನಾನು ಸಮಾಜಕ್ಕೆ ಏನು ನೀಡುತ್ತಿದ್ದೇನೆ?” ಎಂದು ಯೋಚಿಸಿ, ಸಮಾಜಕ್ಕೆ ಕೊಡುಗೆ ನೀಡುವುದು ತುಂಬಾ ಕಷ್ಟದ ಕೆಲಸ.ಹಾಗೆ ನೋಡಿದರೆ ಅಂಥವರ ಸಂಖ್ಯೆಯುವಿರಳ. “ಕತ್ತಲೆಯನ್ನು ಶಪಿಸುತ್ತಾ ಕೂರುವುದಕ್ಕಿಂತ ಒಂದು ಪುಟ್ಟ ಹಣತೆಯನ್ನು ಹಚ್ಚುವುದು ಲೇಸು.” ಮನೆ ಕಸ ನಮ್ಮ ಮನೆ ಮತ್ತುಮನೆಯ ಮುಂದೆ ನಾವು ಕಸ ಗೂಡಿಸಿ ಪಕ್ಕದ ಮನೆಯವರ ಮುಂದೆ ಚೆಲ್ಲಿದರೆ ಏನು ಮಾಡಿದಂತಾಯಿತು? ಕಸ ಗುಡಿಸಿದ್ದು ವ್ಯರ್ಥ.ಆ ಕಸ ಗಾಳಿಗೆ ಎಲ್ಲೆಲ್ಲೂ ಹಾರಿ ಹೋಗುತ್ತದೆ.ಊರಿನ ಅಂಗಳಮತ್ತಷ್ಟು ಹೊಲಸಾಗುತ್ತದೆ.ನಾವು ಕಸವನ್ನು ಡಬ್ಬಿಗೆ ಹಾಕಿದರೆಇಡೀ ನಗರವೇ ಸ್ವಚ್ಛವಾಗುತ್ತದೆ. ಪ್ರತಿಬಿಂಬ ನಾವು ಇತರರಿಗೆ ಗೌರವ ನೀಡಿದರೆ, ಅವರು ನಮಗೆ ಗೌರವ ನೀಡುತ್ತಾರೆ. ಗೌರವ ಕೇಳಿ ಪಡೆಯುವುದಲ್ಲ. ಅದು ಕೊಟ್ಟು ಪಡೆಯುವಂಥದ್ದು.ನಾವು ಇತರರಿಗೆ ಪ್ರೀತಿ ನೀಡಿದರೆಸಮಾಜ ನಮಗೆ ಪ್ರೀತಿಯನ್ನು ಉಡುಗೊರೆಯಾಗಿ ನೀಡುತ್ತದೆ. ಸಮಾಜ ಎಂಬುದು ನಮ್ಮದೇ ಪ್ರತಿಬಿಂಬ. ನಾವು ಸುಂದರವಾಗಿದ್ದರೆ ಜಗತ್ತೂ ಸುಂದರವಾಗಿಯೇ ಕಾಣುತ್ತದೆ. ಪ್ರಾಜ್ಞರ ದೃಷ್ಟಿ ಕುವೆಂಪು ಹೇಳಿದಂತೆ: “ಮನುಜಮತ, ವಿಶ್ವಪಥದತ್ತ ಸಾಗಬೇಕಾದರೆ ಮೊದಲು ವ್ಯಕ್ತಿತ್ವದ ವಿಕಾಸವಾಗಬೇಕು. ನಿನ್ನ ಅಂತರಂಗದ ದೀಪವನ್ನು ಮೊದಲು ಹಚ್ಚಿಕೋ, ಜಗತ್ತಿನ ಕತ್ತಲೆ ತಾನಾಗಿಯೇ ಸರಿಯುತ್ತದೆ. “ಡಿ. ವಿ.ಜಿ ಅವರು ಮಂಕುತಿಮ್ಮನ ಕಗ್ಗದಲ್ಲಿ :”ತಿದ್ದಿಕೊಳು ನಿನ್ನ ಒರಟು ನಡೆನುಡಿಗಳನು,ಜಗವ ತಿದ್ದುವ ಸಾಹಸಕೆ ಹೋಗದಿರು ಮನುಜ… ಎಂದಿದ್ದಾರೆ. “ಸ್ವಾಮಿ ವಿವೇಕಾನಂದ: “ನಿನ್ನನ್ನು ನೀನು ನಂಬು. ಇಡೀ ಜಗತ್ತನ್ನು ಬದಲಾಯಿಸುವ ಶಕ್ತಿ ನಿನ್ನ ಒಂದು ಸಣ್ಣ ಸಂಕಲ್ಪದಲ್ಲಿದೆ.” ಹರಿಕಾರ “ಬದಲಾವಣೆಯ ಹಾದಿಯಲ್ಲಿ ನೀ ಮೊದಲ ಹೆಜ್ಜೆಯಾಗು, ಒಣಗಿದ  ಮರಭೂಮಿಗೆ ನೀ ತಂಪಿನ ಹನಿಯಾಗು.ದೂಷಿಸಬೇಡ ಜಗದ ಕತ್ತಲನು ಮೌನದಿ ಕೊರಗಿ,ಉರಿಯುವ ಹಣತೆಯಾಗಿ ನೀ ಜಗಕೆ ಬೆಳಕಾಗು.ಕಲ್ಲನ್ನು ನುಣುಪುಗೊಳಿಸುವ ಶಿಲ್ಪಿಯಂತೆ, ನಿನ್ನ ನಡೆ-ನುಡಿ ಇರಲಿ. ಈ ಕಾವ್ಯದಂತೆ.ಜಗವ ಗೆಲ್ಲುವ ಆತುರ ಬಿಡು ಓ ಗೆಳೆಯಾ,ನಿನ್ನ ನೀ ಗೆದ್ದರೆ ಜಗವೇ ನಿನ್ನಂತೆ…!! ಕೊನೆ ಮಾತು ಜಗತ್ತನ್ನು ಬದಲಾಯಿಸಲು ನಾವ್ಯಾರೂ ಮೇಧಾವಿಗಳು ಆಗಬೇಕೆಂದಿಲ್ಲಸಿರಿವಂತರು ಆಗಬೇಕೆಂದಿಲ್ಲ.ಅಗತ್ಯವಿದ್ದವರಿಗೆಒಂದು ಪುಟ್ಟ ಸಹಾಯ,ನೊಂದವರಿಗೆ ಹೆದರದಿರಿ, ನಾವು ನಿಮ್ಮೊಂದಿಗೆ ಇರುತ್ತೇವೆ ಎಂಬ ಒಂದು ಸಾಂತ್ವನದ ಮಾತು.ಮುಖದ ಮೇಲೊಂದು ಸದಾ ಸಣ್ಣದೊಂದುನಗು ಸಾಕು.ಕೇವಲ ಒಬ್ಬ ಒಳ್ಳೆಯ ‘ಮನುಷ್ಯ’ನಾದರೆ ಸಾಕು. ನಾವು ಬಯಸುವ ಪ್ರೀತಿ, ಶಾಂತಿ, ಕರುಣೆ ಮತ್ತು ಪ್ರಾಮಾಣಿಕತೆ ಮೊದಲು ನಮ್ಮ ದಿನನಿತ್ಯದ ಬದುಕಿನಲ್ಲಿ ಮೂಡಿಬರುತ್ತದೆ.ನಮ್ಮ ಕಿರುನಗೆ ಒಬ್ಬರ ದುಃಖವನ್ನು ಮರೆಸಬಹುದು, ನಮ್ಮ ಒಂದು ಒಳ್ಳೆಯ ಮಾತು ಧೃತಿಗೆಟ್ಟ ಜೀವಕ್ಕೆ ಆಸರೆಯಾಗಬಹುದು. ಪೀಠಿಕೆ ಬದಲಾವಣೆಯ ಮಹಾಕಾವ್ಯಕ್ಕೆ ನಾವೇ ಪೀಠಿಕೆ ಬರೆಯಬೇಕು.ವಿನಃ ಬೇರೆ ಯಾರೋ ಬರೆಯುತ್ತಾರೆಂದು ಕಾಯುತ್ತ ವ್ಯವಸ್ಥೆಯನ್ನು ಬೈಯುತ್ತಾ ಕುಳಿತುಕೊಳ್ಳಬಾರದು.ಹಾಗಾದರೆ ತಡವೇಕೆ ಇಂದಿನಿಂದಲೇ ನಮ್ಮಿಂದಲೇ ಆಗಲಿ ಬದಲಾವಣೆಯಆರಂಭ. ಸಂತಸ ಸಮೃದ್ಧಿ ತರಲಿ  ಶುಭಾರಂಭ. ಜಯಶ್ರೀ ಜೆ ಅಬ್ಬಿಗೇರಿ

ಆರಂಭವಾಗಲಿ ಬದಲಾವಣೆ ನಮ್ಮಿಂದಲೇ……ಜಯಶ್ರೀ ಜೆ ಅಬ್ಬಿಗೇರಿ Read Post »

ಕಥಾಗುಚ್ಛ

“ಅಂತರಂಗದ ಸೋಲು” ಸಣ್ಣ ಕಥೆ ಶೇಖರಗೌಡ ವೀ ಸರನಾಡಗೌಡರ್.

ಕಥಾ ಸಂಗಾತಿ “ಅಂತರಂಗದ ಸೋಲು” ಶೇಖರಗೌಡ ವೀ ಸರನಾಡಗೌಡರ್. ಯಶಸ್ವಿನಿ ದೊಡ್ಡ ಪರದೆಯ ಟೀವಿಯಲ್ಲಿ ಯಾವುದೋ ಸಿನಿಮಾವೊಂದನ್ನು ನೋಡತೊಡಗಿದ್ದಳು. `ಸಾಕು, ಟೀವಿ ಆಫ್‍ಮಾಡಿ ಮಲಗಿಬಿಟ್ಟರಾಯಿತು’ ಎಂದು ಅಂದುಕೊಂಡಳಾದರೂ, ಅದೊಂದು ಭಾರೀ ಶೃಂಗಾರಭರಿತ ಮೂವಿಯಾಗಿದ್ದರಿಂದ ಹಾಗೇ ವೈಭವೋಪೇತ ಸೋಫಾದ ಮೇಲೆ ಅಡ್ಡಾಗಿ ಚಿತ್ರ ನೋಡಲು ಮುಂದಾದಳು. ದಿನಾಲೂ ರಾತ್ರಿ ಬಹಳ ಎಂದರೆ ಹತ್ತೂವರೆ, ಹನ್ನೊಂದಕ್ಕೆ ಹಾಸಿಗೆ ಸೇರಿಕೊಳ್ಳುತ್ತಿದ್ದಳು. `ಹೇಗೂ ವೀಕೆಂಡ್ ಅಲ್ವಾ…? ಆಫೀಸ್ ಇಲ್ಲವಲ್ಲ? ತಡವಾಗಿ ಮಲಗಿ ನಾಳೆ ಬೆಳಗ್ಗೆ ತಡವಾಗಿ ಏಳಬಹುದು. ಅದಲ್ಲದೇ, `ಕರೆದು ಕಟ್ಟಿಹಾಕುವವರಿಲ್ಲ, ತುರಿಸಿ ಮೇವು ಹಾಕುವವರಿಲ್ಲ’ ಎಂಬ ದನದಂತೆ ನಾನು. ತಡವಾಗಿ ಮಲಗಿದರೆ ನನಗಿಲ್ಲಿ ಯಾರೂ ಹೇಳುವವರಿಲ್ಲ, ಯಾವಾಗ ಎದ್ದರೂ ಯಾರೂ ಕೇಳುವವರಿಲ್ಲ. ಸುದೀರ್ಘ ಒಂಟಿ ಜೀವನಕ್ಕೆ ಒಗ್ಗಿಹೋಗಿದ್ದೇನೆ. ನನ್ನದೇ ಪ್ರಮೀಳಾ ರಾಜ್ಯ ಅಲ್ಲವೇ…?’ ಅಂತ ಮನದೊಳಗೇ ಅಂದುಕೊಂಡು ಯಶಸ್ವಿನಿ ಸಿನಿಮಾ ನೋಡುವುದನ್ನು ಮುಂದುವರಿಸಿದಳು. ಅಬ್ಬಾ…! ಮೈನವಿರೇಳಿಸುವ ಶೃಂಗಾರಭರಿತ ದೃಶ್ಯಗಳು…! ಯುವ ಪ್ರೇಮಿಗಳ ಪ್ರೀತಿ, ಪ್ರೇಮದ ಕಾವ್ಯ ಅದಾಗಿತ್ತು. ರಸಪೂರಿ ಮಾವಿನ ಹಣ ್ಣನಂಥಹ ನಾಯಕಿ, ಸುರಸುಂದರಾಂಗ ಎನ್ನುವಂಥಹ ನಾಯಕ. ಗಜನಿಂಬೆ ಹಣ ್ಣನ ಮೈಬಣ್ಣದ ನಾಯಕಿಯ ಸೊಬಗಿನ ತುಂಬಿದೆದೆ ಚಿತ್ರದುದ್ದಕ್ಕೂ ಮುಕ್ಕಾಲು ಭಾಗ ತೆರೆದೇ ಕೊಂಡಿತ್ತು. ಕೃಶೋದರಿಯ ಬಡ ನಡು ತುಂಬಾನೇ ಆಕರ್ಷಕವೇ. ಸಿನಿಮಾದುದ್ದಕ್ಕೂ ಶೃಂಗಾರಭರಿತ ಕಾವ್ಯ ಸಾಹಿತ್ಯದಲ್ಲಿ ಹೊರಹೊಮ್ಮುತ್ತಿದ್ದ ಹಾಡುಗಳಲ್ಲಿ ನಾಯಕ, ನಾಯಕಿಯರಿಬ್ಬರೂ ತುಂಡುಡುಗಳಲ್ಲೇ ಮಿಂಚುತ್ತಿದ್ದುದು ಚಿತ್ರದ ಹೈಲೈಟ್ ಆಗಿತ್ತು. ನಾಯಕಿಯ ನಳಿದೋಳುಗಳು, ಹೊಕ್ಕಳ ಗುಳಿ, ಸಪೂರ ಬಲಿಷ್ಠ ತೊಡೆಗಳು, ತುಂಬು ಜಘನ ಪ್ರೇಕ್ಷಕರ ಮನಗಳಿಗೆ ಕಚಗುಳಿ ಇಡುವಂತಿದ್ದವು. ಕಾವ್ಯಕನ್ನಿಕೆ, ಸೌಂದರ್ಯದೇವತೆ ರತಿದೇವಿಯಂತೆ ವಿಜೃಂಭಿಸುತ್ತಿದ್ದಳು ನಾಯಕಿ. ವಯಸ್ಸಾದವರು ಜೊಲ್ಲು ಸುರಿಸುತ್ತಾ ನೋಡುವಂತಿತ್ತು ನಾಯಕಿಯ ಮೈಮಾಟ. ನಾಯಕ, ನಾಯಕಿಯ ಪ್ರೀತಿ-ಪ್ರೇಮದ ತುಂಟಾಟದ ದೃಶ್ಯಗಳನ್ನು ನೋಡುತ್ತಿದ್ದಂತೆ ಯಶಸ್ವಿನಿಯ ಮೈಯಲ್ಲಿ ಕಾವೇರತೊಡಗಿತು. `ಅಬ್ಬಾ…! ಮೈ ಎಲ್ಲಾ ನವಿರೇಳುತ್ತಿದೆಯಲ್ಲ…? ಮೈಯಲ್ಲಿ ರೋಮಾಂಚನದಲೆಗಳು ಅಬ್ಬರಿಸಿ ಪುಟಿದೇಳುತ್ತಿವೆಯಲ್ಲ…? ಎದೆಯ ಬಡಿತ ಮುಗಿಲೆತ್ತರಕ್ಕೆ ಜಿಗಿಯುತ್ತಿದೆಯಲ್ಲ…? ಉಸಿರಾಟ ಜೋರಾಗುತ್ತಿದೆಯಲ್ಲ? ಹೃದಯದ ಲುಬ್-ಡುಬ್ ಅತಿವೇಗದ ಲಯ ಕಂಡುಕೊಳ್ಳುತ್ತಿದೆ ಎಂದು ಅನಿಸುತ್ತಿದೆ. ತುಂಬಾನೇ ಥ್ರಿಲ್ ಕೊಡುತ್ತಿದೆಯಲ್ಲ…? ಇಂಥಹ ಥ್ರಿಲ್ ಇದೆಯಾ ಗಂಡು-ಹೆಣ ್ಣನ ಶೃಂಗಾರ ಲೀಲೆಯಲ್ಲಿ…? ಶೃಂಗಾರ ಲೀಲೆಯ ಇಂಥಹ ಥ್ರಿಲ್‍ಗಳಿಂದ ವಂಚಿತಳಾಗಿ ನಾನು ಕರುಬುತ್ತಿರುವೆನಲ್ಲ…? ನನ್ನ ಉತ್ಕøಷ್ಠ ಯೌವನ ಕರಗಿ ಹೋಗುತ್ತಿದೆ. ಇನ್ನೇನು ನಾಲ್ಕಾರು ವರ್ಷಗಳಲ್ಲಿ ಮೆನೋಫಾಸ್ ಘಟ್ಟವನ್ನೂ ತಲುಪುವೆನೇನೋ? ಅದೃಷ್ಟ ಹೀನ ನತದೃಷ್ಟ ಹೆಣ್ಣು ನಾನು. ಎಲ್ಲವೂ ಇದ್ದು, ಏನೂ ಇಲ್ಲದವಳಂತಾಗಿದ್ದೇನೆ. ಹೆಸರೋ, `ಯಶಸ್ವಿನಿ.’ ಬಹಳಷ್ಟು ರಂಗಗಳಲ್ಲಿ ಯಶಸ್ಸು ಪಡೆದಿರುವೆನಾದರೂ ನನ್ನ ಪರ್ಸನಲ್ ಲೈಫಿನಲ್ಲಿ ಹೀನಾಯ ಸೋಲನ್ನು ಅನುಭವಿಸಿ ಪೇಚಾಡುತ್ತಿರುವೆ. ಈ ಸೋಲಿಗೆ ಯಾರು ಕಾರಣ…? ಯಾರೇಕೆ ಕಾರಣರಾಗುತ್ತಾರೆ? ನನ್ನ ಸೋಲಿಗೆ ನಾನೇ ಕಾರಣ ಅಷ್ಟೇ. ನಾನೇ ಅಂದರೆ ನನ್ನ, `ಅಹಂ’ ವೈಯಕ್ತಿಕ ಜೀವನದ ಸೋಲಿಗೆ ಕಾರಣ ತಾನೇ…? ಹೌದು, ಹೌದು, ಹೌದು. ನನ್ನ ಅಪರಿಮಿತ ಅಹಂ ನನ್ನ ವೈಯಕ್ತಿಕ ಜೀವನದ ಹಳಸುವಿಕೆಗೆ ಕಾರಣ.’ ಯದ್ವಾ-ತದ್ವಾ ಯೋಚನೆಗಳು ಯಶಸ್ವಿನಿಯ ಮನಸ್ಸನ್ನು ಮುತ್ತಿಕ್ಕಿ ಕಾಡತೊಡಗಿದವು.*****ಹಿಮ್ಮುಖವಾಗಿ ಚಲಿಸಲಾರಂಭಿಸಿದ ಯಶಸ್ವಿನಿಯ ಮನದಲ್ಲಿ ನೆನಪಿನ ಅಲೆಗಳ ಮಹಾಪೂರ ಭೋರ್ಗರೆಯತೊಡಗಿತು.“ನನ್ನ ಹೆಸರು, `ಯಶಸ್ವಿನಿ’ ಅಂತ ಆಗಲೇ ಹೇಳಿರುವೆನಲ್ಲ…? ಮೂವತ್ತೈದು ವಸಂತ ಋತುಗಳು ನನ್ನ ಜೀವನದಲ್ಲಿ ವಸಂತನಾಗಮನವಿಲ್ಲದೇ ಹಾಗೇ ಸಪ್ಪಗೇ ಕಳೆದು ಹೋದವು. ಈಗ ಮೂವತ್ತಾರರ ಹರೆಯದಲ್ಲಿ ನನ್ನ ಬಾಳಬಂಡಿಗೆ ಕಡೆಗೀಲೇ ಇಲ್ಲದಂತಾಗಿದೆ. ಸಾಮಾನ್ಯ ಕುಟುಂಬವೊಂದರಲ್ಲಿ ಮೂರನೇ ಮಗುವಾಗಿ ಜನಿಸಿದವಳು ನಾನು. ಅಪ್ಪ ಕೈಲಾಸ್, ಅಮ್ಮ ವಿಜಯಲಕ್ಷ್ಮಿ. ಅಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಅಮ್ಮ ಗೃಹಿಣ . ಹೆತ್ತವರಿಗೆ ನಾನು ಮೂರನೆಯವಳೆಂದು ಹೇಳಿದೆನಲ್ಲ, ನನಗೆ ಧೀರಜ್ ಎಂಬ ಅಣ್ಣನಿದ್ದಾನೆ. ಅಕ್ಕ ಸಮತಾ ಇದ್ದಾಳೆ. ಅಣ್ಣ ಧೀರಜನಿಗೂ, ನನಗೂ ಎಂಟು ವರ್ಷಗಳ ಅಂತರವಿದ್ದರೆ, ಅಕ್ಕ ಸಮತಾಳಿಗೆ ನನಗೆ ಕೇವಲ ಎರಡು ವರ್ಷಗಳ ಅಂತರ ಅಷ್ಟೇ. ಮೂವರಲ್ಲಿ ನಾನೇ ರೂಪವತಿ. ಚಿಕ್ಕವಳಿದ್ದಾಗಿನಿಂದ ಅಣ್ಣ, ಅಕ್ಕನಿಗೆ ಇಲ್ಲದಿದ್ದರೂ ನನಗೆಲ್ಲವೂ ಬೇಕು ಎಂಬ ಹಟಮಾರಿತನದ ಸ್ವಭಾವದವಳು. ಮುದ್ದಾದ ಚೆಲುವಿನ ಹುಡುಗಿ ಎಂದು ಅಪ್ಪ, ಅಮ್ಮ ನನ್ನನ್ನು ಅತೀ ಮುದ್ದಿನಿಂದಲೇ ಬೆಳೆಸಿದರು. ಚಿಕ್ಕಳಿದ್ದಾಗಿನಿಂದಲೂ ನನ್ನ ಬಲಗೆನ್ನೆ ಗುಳಿಗೆನ್ನೆಯೇ. ಆ ಗುಳಿಗೆನ್ನೆ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಯೌವನ ಮೈ, ಮನಗಳಲ್ಲಿ ಅರಳತೊಡಗಿತ್ತು. ಎದೆಯ ಕುಸುಮಗಳು ಅರಳಲು ಮುಂದಾಗುತ್ತಿದ್ದಂತೆ ನನ್ನ ಅಪರಿಮಿತ ರೂಪರಾಶಿಗೆ ನಾನೇ ನನ್ನ ಬೆನ್ನನ್ನು ಚಪ್ಪರಿಸಿಕೊಳ್ಳುತ್ತಿದ್ದೆ. ಸಾಧಾರಣ ರೂಪಿನ ಅಕ್ಕನನ್ನು ನನ್ನೊಂದಿಗೆ ಹೋಲಿಸಲು ಸಾಧ್ಯವೇ ಇರಲಿಲ್ಲ. ನನಗರಿವಿಲ್ಲದಂತೆ ನಾನು ಆಗಿನಿಂದಲೇ ಜಂಬದ ಕೋಳಿಯಂತಾಗತೊಡಗಿದ್ದೆ. ಧೀರಜ್ ಎಂಎ ಬಿಎಡ್ ಮಾಡಿಕೊಂಡು ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ಸೇರಿಕೊಂಡ. ಅಕ್ಕ ಇಂಜನಿಯರಿಂಗ್ ಪದವಿಗೆ ಸೇರಿಕೊಂಡಳು. ನಾನೂ ಅಷ್ಟೇ. ಪಿಯುಸಿ ನಂತರ ಇಂಜನಿಯರಿಂಗ್ ಕೋರ್ಸಿಗೇ ಸೇರಿಕೊಂಡೆ. ಅಣ್ಣ ಉದ್ಯೋಗಕ್ಕೆ ಸೇರಿದ ಮೂರನೇ ವರ್ಷವೇ ಮದುವೆಯಾಗಿ ಜೀವನದಲ್ಲಿ ಸೆಟ್ಲಾದ. ಅತ್ತಿಗೆಯಾಗಿ ಬಂದವಳು ನಮ್ಮ ಮನೆಯ ಅಂತಸ್ತಿಗಿಂತ ಕೆಳಗಿನ ಮಟ್ಟದ ಅಂತಸ್ತಿನ ಮನೆತನದವಳು. ರೂಪದಲ್ಲೂ ಅಷ್ಟಕಷ್ಟೇ. `ಅಣ್ಣಾ, ಇದೇನಿದು ಇಂಥಹ ಆರ್ಡಿನರಿ ಹುಡುಗಿಯನ್ನು ಆಯ್ಕೆಮಾಡಿಕೊಂಡೆಯಲ್ಲ, ಇದು ನನಗ್ಯಾಕೋ ಸರಿಕಾಣುತ್ತಿಲ್ಲ…?’ ಅಂತ ಅಂದಿದ್ದಕ್ಕೆ, `ರೂಪವನ್ನು ಅರೆದುಕೊಂಡು ಕುಡಿಯಲು ಆಗುತ್ತದೆಯೇ…? ನಿನ್ನತ್ತಿಗೆಯಾಗುವವಳು ರೂಪವತಿಯೇ ಇರುವಳೆಂದು ನನ್ನ ಕಣ್ಣುಗಳ ಜೊತೆಗೆ ಹೃನ್ಮನಗಳೂ ಹೇಳುತ್ತಿವೆ. ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಇರುತ್ತದೆ. ರೂಪಕ್ಕಿಂತ ಗುಣ ಮುಖ್ಯ ಎಂಬುದು ನನ್ನ ಅನಿಸಿಕೆ. ಗಂಡ, ಹೆಂಡತಿ ಇಬ್ಬರೂ ಜೊತೆಗೂಡಿಕೊಂಡು ಅರ್ಥಪೂರ್ಣ ಜೀವನ ಸವೆಸಿದರೆ ಸಾಕಲ್ಲವೇ…?’ ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದ. ಅದರಂತೆ ಅಣ್ಣ-ಅತ್ತಿಗೆಯರದು ಈಗ ಆದರ್ಶ ಸಂಸಾರವೇ. ಅತ್ತಿಗೆ ಸೌಭಾಗ್ಯಳಿಗೆ, `ನಮ್ಮ ಯಶೂ ತುಂಬಾನೇ ರೂಪವತಿ, ಶಾಣ್ಯಾಕಿ’ ಎಂದು ಸಂಬಂಧಿಕರ ಜೊತೆಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುತ್ತಾಳೆ. ನಾನೆಂದರೆ ತುಂಬಾ ಪ್ರೀತಿ ಅವಳಿಗೆ.ಇಂಜನಿಯರಿಂಗ್ ಕೋರ್ಸ ಮುಗಿಯುವಷ್ಟರಲ್ಲಿ ಚೆಲುವಿನ ನನ್ನ ಮೈಯಲ್ಲಿ ಯೌವನ ತುಂಬಿ ತುಳುಕಾಡಲು ಮುಂದಾಗಿತ್ತು. ಯೌವನಮದ, ರೂಪಮದಗಳು ನನ್ನ ಮನಸ್ಸಿನಲ್ಲಿ ನೆಲೆನಿಂತು ಠಳಾಯಿಸತೊಡಗಿದವು. ತುಂಬಿದ ಕಾಶ್ಮೀರಿ ಸೇಬಿನ ಗುಳಿಗೆನ್ನೆ ನನ್ನ ಆಕರ್ಷಕ ಮೈಮಾಟಕ್ಕೆ ಇಂಬು ಕೊಡುತ್ತಿತ್ತು. `ನನ್ನಂಥಹ ಚೆಲುವೆ ಯಾರಿಲ್ಲ’ ಎಂಬ ಅಹಂ ಅಂಕುರಿಸಿ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯತೊಡಗಿತು. ಪದವಿ ಮುಗಿಯುತ್ತಿದ್ದಂತೆ ಸಮತಾಳಿಗೆ ಒಳ್ಳೆಯ ಕಂಪನಿಯಲ್ಲಿ ದೊಡ್ಡ ಪ್ಯಾಕೇಜಿನ ಕೆಲಸವೂ ಸಿಕ್ಕಿತು. ನನಗೂ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದಲ್ಲದೇ ಸಮತಾಳಿಗಿಂತ ನನ್ನ ಪ್ಯಾಕೇಜ್ ಹೆಚ್ಚೇ ಇದೆ.ಅಕ್ಕನೂ ಕೆಲಸಕ್ಕೆ ಸೇರಿದ ಮೂರನೇ ವರ್ಷವೇ ಮದುವೆಗೆ ಅಣ ಯಾದಳು. ಅವಳ ಮತ್ತು ನನ್ನ ಮದುವೆಯನ್ನು ಒಂದೇ ಸಲಕ್ಕೆ ಮಾಡಬೇಕೆಂದಿದ್ದ ಅಪ್ಪ-ಅಮ್ಮನಿಗೆ, `ನನಗಷ್ಟು ಬೇಗ ಮದುವೆಯಾಗುವ ಮನಸ್ಸು, ಆಸಕ್ತಿ ಇಲ್ಲ. ಅಕ್ಕನ ಮದುವೆ ಮಾಡಿಬಿಡಿ. ನನಗೆ ಮದುವೆ ಬೇಕೆಂದಾಗ ತಿಳಿಸುವೆ’ ಎಂದು ಹೇಳಿದ್ದೆ. ನನ್ನ ಹಟಮಾರಿತನದ ಸ್ವಭಾವಕ್ಕೆ ಮಣ ದಿದ್ದರು. ಅಕ್ಕನೂ ಆರಿಸಿಕೊಂಡಿದ್ದು ತನಗಿಂತ ಕಡಿಮೆ ರೂಪಿನ ಚೆಲುವನನ್ನು. ನನಗೆ ಹೋಲಿಸಿದರೆ ಅಕ್ಕನ ರೂಪವೂ ಅಷ್ಟಕಷ್ಟೇ. ಅವನೂ ಐಟಿ ಕಂಪನಿಯೊಂದರಲ್ಲಿ ಇಂಜಿನಿಯರ್. `ಏನೇ ಅಕ್ಕ, ನೀನು ಮಧುಸಾಗರನೊಂದಿಗೆ ಮದುವೆಯಾಗಲು ಒಪ್ಪಿಕೊಂಡಿದ್ದು ನನಗೇಕೋ ಅಷ್ಟಾಗಿ ಸರಿಕಾಣುತ್ತಿಲ್ಲ. ತೀರಾ ಸಾಮಾನ್ಯ ರೂಪಿನ ಹುಡಗ ಅವನು. ಮೇಲಾಗಿ ಅವನ ಪ್ಯಾಕೇಜ್ ನಿನಗಿಂತಲೂ ಬಹಳಷ್ಟು ಕಡಿಮೆಯೇ. ಅವನಿಗೆ ಹೇಳಿಕೊಳ್ಳುವಂಥಹ ಆಸ್ತಿ-ಅಂತಸ್ತೂ ಸಹ ಇಲ್ಲ. ಮೇಲಾಗಿ ಅವನಿಗೆ ಒಬ್ಬ ತಂಗಿಯ ಮದುವೆಯ ಜವಾಬ್ದಾರಿಯೂ ಇದೆ. ಏನೋಪ್ಪ, ನಿನ್ನ ನಿರ್ಧಾರ ಸರಿ ಇಲ್ಲ ಎಂದು ನನಗನಿಸುತ್ತಿದೆ’ ಎಂದು ಉದ್ದುದ್ದ ಭಾಷಣ ಬಿಗಿದಿದ್ದೆ. `ನೋಡು ಯಶೂ, ಮದುವೆ ಯಶಸ್ವಿಯಾಗುವುದು ಜೀವನ ಸಂಗಾತಿಯನ್ನು ಹುಡುಕುವುದಿಂದಲ್ಲ. ಸರಿಯಾದ ಜೀವನ ಸಂಗಾತಿ ಆಗುವುದರಿಂದ. ನನ್ನ ಆಯ್ಕೆ ಸೂಪರ್ರಾಗೇ ಇದೆ. ಹುಡುಗ ನನ್ನ ಕಣ್ಣಲ್ಲಿ ಚೆಲುವನೇ. ಮನಸ್ಸು, ಮನಸ್ಸುಗಳು ಒಂದಾದರೆ ಸಂಸಾರ ಆನಂದ ಸಾಗರವೇ. ಅವನ ನಡೆ-ನುಡಿ ಎಲ್ಲವೂ ಸ್ಫಟಿಕದಷ್ಟೇ ಶುಭ್ರ. ಆಫ್ಟರ್ ಆಲ್ ಲೈಫ್ ಈಜ್ ಯಾನ್ ಅಡ್ಜೆಸ್ಟಮೆಂಟ್ ಅಲ್ಲವೇ? ಪರಸ್ಪರ ಹೊಂದಿಕೊಂಡು ಜೀವನ ರಥ ಎಳೆದರೆ ದಾಂಪತ್ಯವು ಮಧುರವಾಗೇ ಸಾಗುತ್ತದೆ. ನೀನೇನೂ ಚಿಂತಿಸಬೇಡ. ನಮ್ಮದೂ ಒಂದು ಆದರ್ಶ ದಾಂಪತ್ಯ ಎಂದು ಮುಂದಿನ ದಿನಗಳಲ್ಲಿ ಸಾಬೀತುಮಾಡಿ ತೋರಿಸುತ್ತೇನೆ.’ ಸಮತಾ ದಿಟ್ಟವಾಗಿ ಉತ್ತರಿಸಿದ್ದಳು ನನ್ನ ಅನುಮಾನದ ಪ್ರಶ್ನೆಗಳಿಗೆ. ಮುಂದಿನ ದಿನಗಳಲ್ಲಿ ಅವಳು ಹೇಳಿದಂತೆ ನಡೆದೂ ತೋರಿಸತೊಡಗಿದಳು. ಅವಳದು ಅನ್ಯೋನ್ಯ ದಾಂಪತ್ಯ ಜೀವನವೇ. ಅವಳೀಗ ಎರಡು ಮುದ್ದು ಮಕ್ಕಳ ತಾಯಿಯೂ ಹೌದು.*****ಕಾಲೇಜ್ ಜೀವನ ಅಂದರೇ ಒಂಥರ ಕಲರ್ಫುಲ್ ಜೀವನ ಅಲ್ಲವೇ? ಅರಳುತ್ತಿರುವ ಚೆಲುವಿನ ಮೈಮನಗಳಲ್ಲಿ ಬಣ್ಣಬಣ್ಣದ ಕನಸುಗಳು ಅಂಕುರಿಸಿ ಬೆಳೆಯುವ ಕಾಲ ತಾನೇ…? ಕಾಲೇಜಿನೆಲ್ಲೆಡೆ ಹೂವುಗಳಂತೆ ಅರಳಿದ ಯುವಕ-ಯುವತಿಯರ ಮುಖಗಳು; ಬಿಸಿಲಲ್ಲಿ ಬೆಂದ ಭೂಮಿ ಮೊದಲ ಮಳೆಗಾಗಿ ಹಾತೊರೆಯುವಂತೆ ಎಲ್ಲರ ಹೃದಯಗಳು ಪ್ರೀತಿಯ ಮಳೆಗಾಗಿ ಕಾಯುತ್ತಿದ್ದ ವಸಂತಕಾಲ. ಪ್ರೀತಿಯ ನಿರೀಕ್ಷೆ ಬಲು ಸುಂದರ. ನನ್ನ ಕಥೆಯೂ ಬೇರೆ ಏನಿರಲಿಲ್ಲ. ನಾನು ಎರಡನೆಯ ವರ್ಷದ ಪಿಯುಸಿಯಲ್ಲಿದ್ದಾಗ ರಸಾಯನ ಶಾಸ್ತ್ರದ ಉಪನ್ಯಾಸಕರಾಗಿ ರಾಜಶೇಖರ್ ಎನ್ನುವ ಹ್ಯಾಂಡ್ಸಮ್ ಗೈ ಬಂದಿದ್ದರು. ಹ್ಯಾಂಡ್ಸಮ್ ಎಂದರೆ ನಿಜವಾಗಿಯೂ ತುಂಬಾನೇ ಹ್ಯಾಂಡ್ಸಮ್. ಮನ್ಮಥನ ಅಪರಾವತಾರವೇ. ನಾವು ಗೆಳತಿಯರೆಲ್ಲ ಅವರಿಗೆ ಸ್ಮಾರ್ಟೀ ಎಂದೇ ಸಂಬೋಧಿಸುತ್ತಿದ್ದೆವು ನಮ್ಮೊಳಗೇ. ತುಂಬಾ ಚೆನ್ನಾಗಿ ಪಾಠಮಾಡುತ್ತಿದ್ದರು. ಎಲ್ಲಾ ವಿದ್ಯಾರ್ಥಿಗಳ ಜೊತೆಗೆ ಆತ್ಮೀಯವಾಗಿ ಮಾತಾಡುತ್ತಿದ್ದರು. ನನ್ನ ಜೊತೆಗೂ ತುಂಬಾನೇ ಆತ್ಮೀಯವಾಗಿ ಮಾತಾಡುತ್ತಿದ್ದರಲ್ಲದೇ, `ಯುವರ್ ಪರ್ಫಾರ್ಮೆನ್ಸ್ ಈಜ್ ಎಕ್ಷಲೆಂಟ್ ಎಂದು ಹೇಳುತ್ತಿದ್ದರಲ್ಲದೇ ಯುವ್ ಆರ್ ದಿ ಮೋಸ್ಟ್ ಬ್ಯೂಟಿಫುಲ್ ಗರ್ಲ ಆಫ್ ದಿ ಕಾಲೇಜ್’ ಅಂತಾನೂ ಒಮ್ಮೆ ಉದ್ಘರಿಸಿ ನನ್ನನ್ನು ಆಶ್ಚರ್ಯ ಚಕಿತಳನ್ನಾಗಿ ಮಾಡಿದ್ದೂ ಉಂಟು. ಆಗಷ್ಟೇ ನಾನು ಬಿಇ ಮುಗಿಸಿಕೊಂಡು ಕೆಲಸಕ್ಕೆ ಸೇರಿಕೊಂಡಿದ್ದೆ. ಅದೊಂದು ದಿನ ಏಕಾಯೇಕಿ ರಾಜಶೇಖರ್ ಸರ್ ನಮ್ಮ ಕಂಪನಿಯ ಕ್ಯಾಂಪಸ್ಸಿಗೆ ಬಂದಿದ್ದರು. ಅವರು ಮೊದಲಿಗಿಂತ ಇನ್ನೂ ಹ್ಯಾಂಡ್ಸಮ್ಮಾಗಿ ಕಂಡರು. ಕ್ಯಾಂಟೀನಿನಲ್ಲಿ ಚಹ ಹೀರುತ್ತಿದ್ದಾಗ ನನ್ನೊಂದಿಗೆ ಒಂದಿಷ್ಟು ಪರ್ಸನಲ್ಲಾಗಿ ಮಾತಾಡುವುದಿದೆ ಎಂದು ಮಾತಿಗೂ ಇಳಿದಿದ್ದರು.“ಯಶಸ್ವಿನಿಯವರೇ, ನೇರವಾಗಿ ವಿಷಯವನ್ನು ಪ್ರಸ್ತಾಪಿಸಿಬಿಡುತ್ತೇನೆ. ನಾನು ನಿಮ್ಮ ಪಿಯು ಟೂದ ಮೊದಲ ತರಗತಿ ತೆಗೆದುಕೊಂಡ ದಿನದಿಂದಲೂ ನಿಮ್ಮನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ನಿಮ್ಮ ಪದವಿ ಮುಗಿಯಲಿ ಎಂದು ಸುಮ್ಮನಿದ್ದೆ. ನೀವೀಗ ಪದವಿ ಮುಗಿಸಿಕೊಂಡು ಕೆಲಸವನ್ನೂ ಮಾಡುತ್ತಿರುವಿರಿ. ಈ ನಡುವೆ ನನ್ನ ಮದುವೆಗಾಗಿ ಹಲವಾರು ಸಂಬಂಧಗಳ ಪ್ರಸ್ತಾವಗಳು ಬಂದವಾದರೂ ಮೊದಲು ನಿಮ್ಮ ಅಭಿಪ್ರಾಯ ತಿಳಿದುಕೊಂಡು ಮುಂದೆ ವಿಚಾರಮಾಡಿದರಾಯಿತು ಎಂದಂದುಕೊಂಡು ಬಂದ ಪ್ರಸ್ತಾವಗಳನ್ನು ತಿರಸ್ಕರಿಸಿದ್ದೂ ಆಯಿತು. ಹಾಗೇ ಇನ್ನೊಂದು ಮಾತು. ನಿಮ್ಮ ಉದ್ಯೋಗ ಹೆಚ್ಚುಕಡಿಮೆ ಬೆಂಗಳೂರಿನಲ್ಲೇ ಮುಂದುವರಿಯುತ್ತದೆ. ನೀವು ನನ್ನ ಪ್ರಸ್ತಾವಕ್ಕೆ ಒಪ್ಪಿಗೆ ಕೊಟ್ಟರೆ ನಾನು ಬೆಂಗಳೂರಿನಲ್ಲಿ ಕೆಲಸಕ್ಕೆ ಪ್ರಯತ್ನಿಸುವೆ. ಇಬ್ಬರೂ ಒಂದೇ ಕಡೆಗೆ ಇರಲು ಅನುಕೂಲವಾಗುತ್ತದೆ. ನನ್ನ ದಾಂಪತ್ಯ ಜೀವನದ ಕನಸು ನಿಮ್ಮ ನಿರ್ಧಾರದ ಮೇಲೆ ಅವಲಂಬಿಸಿದೆ” ಎಂದೆನ್ನುತ್ತಾ ನನ್ನ ಮೊಗವನ್ನೇ ದಿಟ್ಟಿಸತೊಡಗಿದ್ದರು ರಾಜಶೇಖರ್ ಸರ್. ನನಗೆ ಒಂಥರ ದಿಗ್ಭ್ರಮೆ. ನಾನೂ ಅವರನ್ನೇ ತೀಕ್ಷ್ಣವಾಗಿ ನೋಡತೊಡಗಿದೆ. `ಇದು ಜೀವಮಾನದ ಪ್ರಶ್ನೆ. ತತಕ್ಷಣ ನಿರ್ಧಾರ ತೆಗೆದುಕೊಳ್ಳುವುದಾದರೂ ಹೇಗೆ…?’ ಮನದಲ್ಲೇ ಯೋಚಿಸಿದೆ.“ಸರ್, ಇದು ಯೋಚಿಸುವಂಥಹ ವಿಷಯವೇ. ಒಂದುವಾರದ ಸಮಯ ಕೊಡಿರಿ. ಯಾವುದಕ್ಕೂ ನನ್ನ ಅಭಿಪ್ರಾಯ ತಿಳಿಸುವೆ” ಎಂದಿದ್ದೆ ತುಸು ಹೊತ್ತಿನ ಮೌನದ ಬ್ರೇಕ್‍ನ ನಂತರ.“ಸರಿ ಅಷ್ಟೇ ಮಾಡಿರಿ. ನಿಮ್ಮ ಸಕಾರಾತ್ಮಕ ನಿರ್ಣಾಯದ ಮಾತಿನ ದಾರಿ ಕಾಯುವೆ. ನಿರಾಶೆ ಮಾಡಬೇಡಿರಿ ಈ ಪ್ರೇಮಿಯನ್ನು…” ವಿನೀತಭಾವದಲ್ಲಿ ಹೇಳಿದ್ದರು ರಾಜಶೇಖರ್ ಸರ್. ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದೆವು.    ಆ ರಾತ್ರಿ ನಾನು ಸರಿಯಾಗಿ

“ಅಂತರಂಗದ ಸೋಲು” ಸಣ್ಣ ಕಥೆ ಶೇಖರಗೌಡ ವೀ ಸರನಾಡಗೌಡರ್. Read Post »

ಕಾವ್ಯಯಾನ

ರತ್ನರಾಯಮಲ್ಲ “ನಿನ್ನ ಪಾದಗಳಿಗೆ ನನ್ನ ಪ್ರೇಮ”

ಕಾವ್ಯ ಸಂಗಾತಿ ರತ್ನರಾಯಮಲ್ಲ “ನಿನ್ನ ಪಾದಗಳಿಗೆ ನನ್ನ ಪ್ರೇಮ” ಭೀಮನ ಅಮಾವಾಸ್ಯೆಯಂದುನನ್ನ ಪಾದಗಳ ಮೇಲೆನೀ ಹೂವಿಟ್ಟಾಗನಿನ್ನ ಬೆರಳ ತುದಿಯ ಸ್ಪರ್ಶದಲ್ಲಿನನ್ನ ಹೃದಯನಿನ್ನ ಹೆಸರನ್ನೇ ಜಪಿಸಿತ್ತು ನೀ ಅದನ್ನು ಪೂಜೆ ಎಂದೆ,ನನಗದು ಪೂಜೆಯಾಗಿರಲಿಲ್ಲನನ್ನ ಬದುಕಿಗೆನೀ ನೀಡಿದ ಪ್ರೀತಿಯಮೌನ ಪ್ರಮಾಣವಾಗಿತ್ತು ನಿನ್ನ ಕಂಗಳಲ್ಲಿಆ ಕ್ಷಣ ಕಂಡ ಭಕ್ತಿಗಿಂತನಿನ್ನ ಹೃದಯದಲ್ಲಿದ್ದನನ್ನ ಮೇಲಿನ ಪ್ರೀತಿಯೇನನ್ನನ್ನು ಹೆಚ್ಚು ತಲೆಬಾಗಿಸಿತ್ತು ಇಂದು ಬೇಬಿಮಾ…ನಿನ್ನ ಪಾದಗಳ ಮುಂದೆಕೈಗಳನ್ನಿಡುವ ಸರದಿ ನನ್ನದು ನೀ ಇಷ್ಟು ವರ್ಷನನ್ನ ಬದುಕಿನ ದಾರಿಯಲ್ಲಿನನ್ನೊಂದಿಗೆ ನಡೆದಿರುವೆಈಗ ನಿನ್ನ ಪಾದಗಳಿಗೆ ಹೂವಿಡುವಾಗಆ ಹೂವಿನೊಂದಿಗೆನನ್ನ ಕೃತಜ್ಞತೆಯನ್ನೂ ಇಡುವೆ. ಕಷ್ಟದ ದಿನಗಳಲ್ಲಿ ಮುಖ ನೋಡಿಕೊಂಡೇನನ್ನ ನೋವನ್ನು ಅರಿತವಳು ನೀನುನನ್ನ ಸೋಲಿನ ದಿನಗಳಲ್ಲಿ“ನಾನಿದ್ದೇನೆ” ಎಂದುನನ್ನ ಕೈ ಹಿಡಿದವಳು ನೀನು. ನಾನು ಕುಗ್ಗಿದಾಗನನ್ನೊಳಗೆ ಧೈರ್ಯ ತುಂಬಿದವಳುನಾನು ಮೌನವಾದಾಗನನ್ನ ಮೌನವನ್ನು ಓದಿದವಳುನಾನು ಗೆದ್ದಾಗನನಗಿಂತ ಹೆಚ್ಚು ಸಂತೋಷಪಟ್ಟವಳು ನೀನೇ ಅಲ್ಲವೇ ಬೇಬಿಮಾ… ನನ್ನ ಬಾಳ ಬಾಗಿಲಿಗೆನೀ ಕಾಲಿಟ್ಟ ದಿನದಿಂದಈ ಮನೆಕೇವಲ ಗೋಡೆಗಳ ಮನೆಯಲ್ಲನಿನ್ನ ನಗುವಿನಿಂದಮನೆಯಾಯಿತುನಿನ್ನ ಮಮತೆಯಿಂದಮಂದಿರವಾಯಿತುನಿನ್ನ ಹೆಜ್ಜೆ ಗುರುತುಗಳಿಂದನನ್ನ ಬದುಕಾಯಿತು ನಿನ್ನ ಪಾದದ ಗೆಜ್ಜೆಯ ನಾದವೇನನ್ನ ಬೆಳಗಿನ ರಾಗನಿನ್ನ ಹೆಜ್ಜೆಯ ಸದ್ದೇನನ್ನ ಸಂಜೆಯ ನಿರೀಕ್ಷೆನೀ ಹತ್ತಿರವಿದ್ದರೆಮೌನವೂ ಮಾತಾಗುತ್ತದೆನೀ ದೂರವಿದ್ದರೆಮಾತುಗಳಿದ್ದರೂಮನಸ್ಸು ಮೌನವಾಗುತ್ತದೆ ಬಾ ಬೇಬಿಮಾ…ನಿನ್ನ ಪಾದಗಳನ್ನುಒಮ್ಮೆ ನನ್ನ ಮಡಿಲಲ್ಲಿರಿಸುಹೂವಿಡುವ ನೆಪದಲ್ಲಿನಿನ್ನ ಕೈ ಹಿಡಿದುಒಂದು ಮಾತು ಹೇಳಬೇಕು“ನನ್ನ ಬದುಕಿಗೆನೀ ಬಂದದ್ದುನನ್ನ ಅದೃಷ್ಟವಲ್ಲನನ್ನ ಬದುಕೇನಿನ್ನಿಂದ ಅದೃಷ್ಟವಾಯಿತು” ನಿನ್ನ ಪಾದಗಳಿಗೆನಾನು ಬಾಗುವಾಗನಿನ್ನ ಭಗವಂತನಾಗಿ ಇರುವುದಿಲ್ಲನಿನ್ನ ಪ್ರೀತಿಯಲ್ಲಿಜೀವಮಾನವಿಡೀಸೋತು ಬದುಕಲು ಬಯಸುವಒಬ್ಬ ಪ್ರೇಮಿಯಾಗಿ ಬಾಗುವೆ ನೀ ನನ್ನ ಅರ್ಧಾಂಗಿಯೆಂದುಹೇಳುವುದು ಬಹಳ ಸಣ್ಣ ಮಾತುನೀ ನನ್ನ ಬದುಕಿನಅರ್ಧವಲ್ಲ ಬೇಬಿಮಾ—ನನ್ನ ಬದುಕಿನಪೂರ್ಣ ಅರ್ಥ ನೀನು ನನ್ನ ನಗುವಿನ ಹಿಂದೆನಿನ್ನ ಮಮತೆಯಿದೆನನ್ನ ಧೈರ್ಯದ ಹಿಂದೆನಿನ್ನ ನಂಬಿಕೆಯಿದೆನನ್ನ ಪ್ರತಿಯೊಂದು ಹೆಜ್ಜೆಯ ಹಿಂದೆನಿನ್ನ ಮೌನ ಪ್ರಾರ್ಥನೆಯಿದೆ ನಾನು ಹೊರಗೆಜಗತ್ತಿನ ಮುಂದೆಎಷ್ಟೇ ದೊಡ್ಡವನಾಗಿ ನಿಂತರೂಮನೆಗೆ ಮರಳಿದಾಗನಿನ್ನ ಒಂದು ನೋಟಕ್ಕಾಗಿಕಾಯುವ ಸಾಮಾನ್ಯ ಮನುಷ್ಯ ನಾನು ನಿನ್ನ ಪಾದಗಳ ಮೇಲೆಒಂದು ಹೂವಿಡುವೆಅದರೊಳಗೆನನ್ನ ಕೃತಜ್ಞತೆಒಂದು ಮುತ್ತಿಡುವೆಅದರೊಳಗೆನನ್ನ ಜೀವಮಾನ ಪ್ರೀತಿ ಒಂದು ಕ್ಷಣಕಣ್ಣುಮುಚ್ಚುವೆಆ ಕ್ಷಣದಲ್ಲಿನನ್ನ ಮನಸ್ಸುಒಂದೇ ಒಂದು ಪ್ರಾರ್ಥನೆ ಮಾಡುವುದು “ದೇವರೇ,ಮುಂದಿನ ಏಳೇಳು ಜನ್ಮಗಳಲೂಮತ್ತೆ ಈ ಮಲ್ಲಿಗೆ ಸುಮವನ್ನೇ ಕೊಡುಅವಳ ಪಾದಗಳ ಬಳಿಯೇಮತ್ತೊಮ್ಮೆ ನನ್ನ ಬದುಕನ್ನುಆರಂಭಿಸುವ ಅವಕಾಶ ಕೊಡು” ನಿನ್ನ ಪಾದಪೂಜೆನನ್ನ ಭಕ್ತಿಯಲ್ಲ ಬೇಬಿಮಾ;ನೀ ನನ್ನನ್ನುಎಷ್ಟು ಪ್ರೀತಿಸಿದ್ದೀಯೋಅದಕ್ಕಿಂತಲೂ ಹೆಚ್ಚು ಪ್ರೀತಿಯಿಂದನಿನ್ನನ್ನು ಗೌರವಿಸುವನಮ್ಮ ದಾಂಪತ್ಯದ ಹಬ್ಬ ಇದುಗಂಡ ಹೆಂಡತಿಗೆ ಬಾಗಿದ ಕ್ಷಣವಲ್ಲಎರಡು ಹೃದಯಗಳುಒಬ್ಬರಿಗೊಬ್ಬರು“ನೀ ಇಲ್ಲದೆ ನಾನು ಪೂರ್ಣನಲ್ಲ”ಎಂದು ಅಪ್ಪಿಕೊಂಡ ಕ್ಷಣ ನೀ ಬರಿ ನನ್ನ ಹೆಂಡತಿಯಲ್ಲ…ನನ್ನ ಉಸಿರು,ನನ್ನ ನೆಮ್ಮದಿ,ನನ್ನ ಮೌನದ ಭಾಷೆ,ನನ್ನ ಕಣ್ಣೀರಿನ ಅರ್ಥ,ನನ್ನ ನಗುವಿನ ಕಾರಣ,ನನ್ನ ಸುಕನಸು,ನನ್ನ ಬದುಕು… ನನ್ನ ಕೊನೆಯ ಉಸಿರಿನವರೆಗೂನಿನ್ನ ಕೈ ನನ್ನ ಕೈಯಲ್ಲಿರಲಿನನ್ನ ಕೊನೆಯ ಹೆಜ್ಜೆಯವರೆಗೂನಿನ್ನ ಹೆಜ್ಜೆ ನನ್ನ ಹೆಜ್ಜೆಯ ಜೊತೆಯಿರಲಿಜೊತೆ ಜೊತೆಯಾಗಿ ಈ ಸಂಸಾರ ನೌಕೆ ಸಾಗಿಸೋಣ ರತ್ನರಾಯಮಲ್ಲ

ರತ್ನರಾಯಮಲ್ಲ “ನಿನ್ನ ಪಾದಗಳಿಗೆ ನನ್ನ ಪ್ರೇಮ” Read Post »

ಕಾವ್ಯಯಾನ, ಗಝಲ್

ಗಜಲ್(ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.) ಬಾಗೇಪಲ್ಲಿ

ಕಾವ್ಯ ಸಂಗಾತಿ ಬಾಗೇಪಲ್ಲಿ ಗಜಲ್ (ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.) ಜೀವನದಿ ಒಮ್ಮೆ ಪ್ರೇಮವೆಂಬ ಸುಳಿಗೊಮ್ಮೆ ಬೀಳಿರಿವಿರಹದ ಬಗ್ಗೆ ಹೇಗೆಂದು ನಂತರ ನೀವಯೇ ಹೇಳಿರಿ ಮನೋರಮೆಯ ಒಮ್ಮೆ ಏಕಾಂತದಿ ಭೇಟಿಮಾಡಿಅಗಲಿಗೆಯ ಸಮಯದಿ ನೋವಾದರೆ ತಾಳ್ಮೆ ತಾಳಿರಿ ಒಳ್ಳೆಯ ಗಂಡ ಚಂದದ ಪತ್ನಿ ಎಲ್ಲವೂ ಮಾತಷ್ಟೇದಕ್ಕಿದ ಹೆಣ್ಣ ಚಂದ ಹೆಂಡತಿಯಾಗಿಸಿ ಬಾಳ ಬಾಳಿರಿ ಹೊಂದಿಕೆಯ ಬಾಳಲಿ ನಿಜ ಸುಖವಿದೆ ತಿಳಿದಿರಲಿಸುಪ್ರೇಮ ಲೋಕವನು ಮಹಾರಾಜನಂತೆ ಅಳಿರಿ ಬತ್ತದ ಗದ್ದೆಯಲಿ ನಡೆದಂತೆ ಜೀವನ ಜಾರಬಹುದುಕೆಸರಲಿ ಬಿದ್ದರೂ ಸ್ವ ಸಂಬಾಳಿಸಿಕೊಂಡು ಏಳಿರಿ ಕೃಷ್ಣಾ! ಗೀತೆಯ ವಾಕ್ಯದಂತೆ ಜಾಗೃತ ಜಾಗೃತರಾಗಿರಿಭುವಿಯ ಸುಖದಲಿ ಸ್ವರ್ಗ ಸುಖವ ಕೂಡಿ ಕಳೀರಿ. ಬಾಗೇಪಲ್ಲಿ

ಗಜಲ್(ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.) ಬಾಗೇಪಲ್ಲಿ Read Post »

ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ ” ನನಗೊಂದು ವರ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ ” ನನಗೊಂದು ವರ” ಮಾತುಗಳಿಲ್ಲದ ಮೌನದಲ್ಲೂ,ಮನದ ಭಾವತಿಳಿಯುವೆ ನೀನು.ಕಷ್ಟದ ಹಾದಿಯ ಪಯಣದಲ್ಲೂ, ಜೊತೆಯಲಿನಡೆವೆ ನೀನು. ನಗುವಿನ ಅಲೆಯಲ್ಲಿ ಜೊತೆಯಾಗಿ ತೇಲಿ,ಕಣ್ಣೀರಿನ ಹನಿಗೂ ಹೆಗಲಾದೆ ನೀನು.ಲೋಕವೇ ಎದುರಾಗಿ ನಿಂತರೂ ಕೂಡ,ನನ್ನ ಹೆಜ್ಜೆಗೆ ಶಕ್ತಿ ತುಂಬುವೆ ನೀನು. ಕಾಲದ ಚಕ್ರವುಉರುಳಿದರೂ ,ನಮ್ಮೀ ಪ್ರೀತಿಯಬಂಧವು ಅಜರಾಮರ.ನಿನ್ನೊಲವ ಸನಿಹವೇ ನನಗೊಂದು ವರ.ಶ್ರಮ ಪೂಜೆಬಸವನಿಗೆ ಹೂಹಾರ ಉಷಾರಾಣಿ ಗುರುಪ್ರಸಾದ್

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ ” ನನಗೊಂದು ವರ” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾನ್‌ ಚೇತನ ಸೊಲ್ಲಾಪುರದಿಂದ ದೆಹಲಿಯವರೆಗೆ *ಜವಾಹರ ನೆಹರು ಪಂಡಿತರಿಗೆ ನುಡದೇವಅವರವರ ನುಡಿಯಲಿ ರಾಜ್ಯವ, ನಡೆಯಲಿ ಅವಿಭಾಜ್ಯ ಭಾರತಕೆ ಬಲ ಬರಲಿ||*ಡಾ.ಜಯದೇವಿತಾಯಿ ೧೯೫೨ರ ಸಮಯ…… ಸಾರ್ವತ್ರಿಕ ಚುನಾವಣೆಯ ನಂತರ ವರ್ಷದ ಅಂತ್ಯದವರೆಗೂ ಆಂಧ್ರ ಮತ್ತು ಕರ್ನಾಟಕವನ್ನು ಪ್ರತ್ಯೇಕ ಪ್ರಾಂತ್ಯಗಳಾಗಿ ರಚಿಸಬೇಕು ಎಂಬ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಆರಂಭದಲ್ಲಿ ಮನವಿ, ಅರ್ಜಿ ಮತ್ತು ವಿನಂತಿಗಳ ಮೂಲಕ ಬೇಡಿಕೆಯನ್ನು ವ್ಯಕ್ತಪಡಿಸುತ್ತಿದ್ದರೂ, ನಂತರ ಹೋರಾಟ ಮತ್ತು ಪ್ರತಿಭಟನೆಯಂತಹ ಕಾರ್ಯಾಚರಣೆಗಳು ಆರಂಭವಾದವು.ಆಂಧ್ರದ ಪ್ರತ್ಯೇಕ ರಾಜ್ಯಕ್ಕಾಗಿ ಪೊಟ್ಟಿ ಶ್ರೀರಾಮುಲು ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದರು. ದೀರ್ಘಕಾಲ  ೬೮ ದಿನ ಉಪವಾಸ ಮಾಡಿದರು ….೬೮ ನೆ ದಿನ‌ ಅವರು  ನಿಧನರಾದರು.  ಅವರ ಸಾವಿನಿಂದ ಆಂಧ್ರದಲ್ಲಿ ತೀವ್ರ ಪ್ರತಿಭಟನೆಗಳು ನಡೆದವು. ಇದರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಯಿತು.ಹೈದರಾಬಾದನ ನಾನಲ ನಗರದಲ್ಲಿ ನಡೆದ ಅಧಿವೇಶನದಲ್ಲಿ ಅಖಿಲ ಭಾರತ ಕಾಂಗ್ರೆಸ ಸಮಿತಿಯು ಆಂಧ್ರ ಪ್ರಾಂತ್ಯ ರಚನೆಯ ಬೇಡಿಕೆಯನ್ನು ಪರಿಗಣಿಸಿತು. ನಂತರ ಪ್ರಧಾನಿ ನೆಹರು ಸಂಸತ್ತಿನ ಡಿಸೆಂಬರ ಅಧಿವೇಶನದಲ್ಲಿ ಪ್ರತ್ಯೇಕ ಆಂಧ್ರ ರಾಜ್ಯ ರಚನೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಕರ್ನಾಟಕದ ಬಗ್ಗೆ ಯಾವ ಮಾತನ್ನು ಅವರು  ಎತ್ತಲಿಲ್ಲ. ಅದರ ಪರಿಣಾಮವಾಗಿ ಮಾರ್ಚ್‌ನಲ್ಲಿ ಪ್ರತ್ಯೇಕ ಆಂಧ್ರ ಪ್ರಾಂತ್ಯ ರಚನೆಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ್ಯ ರಚನೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಇದರಿಂದ ಕನ್ನಡಿಗರಲ್ಲಿ ಅಸಮಾಧಾನ ಮತ್ತು ಆಕ್ರೋಶ ಹೆಚ್ಚಾಯಿತು. ಆಂಧ್ರದ ಬೇಡಿಕೆಗೆ ಸ್ಪಂದಿಸಿ ಪ್ರತ್ಯೇಕ ಆಂಧ್ರ ರಾಜ್ಯ ರಚನೆಗೆ ಮುಂದಾದ ಕೇಂದ್ರ ಸರ್ಕಾರವು, ಕರ್ನಾಟಕ ಏಕೀಕರಣದ ಬೇಡಿಕೆಯನ್ನು ಕಡೆಗಣಿಸುತ್ತಿದೆ ಎಂದು ಕನ್ನಡಿಗರು ಭಾವಿಸಿದರು.  ಪರಿಣಾಮವಾಗಿ ಕನ್ನಡಿಗರು ಕಾಂಗ್ರೆಸ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿ, ವಿಶಾಲ ಕರ್ನಾಟಕವನ್ನು ರಚಿಸಬೇಕು ಎಂಬ ಬೇಡಿಕೆಯನ್ನು ಇನ್ನಷ್ಟು ಬಲವಾದದ ಆಶಯ ಮುಂದಿಟ್ಟರು. ಈ ಹೋರಾಟವೇ ಮುಂದೆ ಕರ್ನಾಟಕ ಏಕೀಕರಣ ಚಳವಳಿಗೆ ಮತ್ತಷ್ಟು ವೇಗ ನೀಡಿತು.ಈ ಘಟನೆ ಕರ್ನಾಟಕ ಏಕೀಕರಣ ಚಳವಳಿಯ ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಘಟ್ಟವಾಗಿದೆ. ಕನ್ನಡ ಮಾತನಾಡುವ ಪ್ರದೇಶಗಳು ವಿವಿಧ ಆಡಳಿತಗಳ ಅಡಿಯಲ್ಲಿ ಚದುರಿಹೋಗಿದ್ದವು. ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ ಕರ್ನಾಟಕ, ಮದ್ರಾಸ ಪ್ರಾಂತ್ಯದ ಕನ್ನಡ ಪ್ರದೇಶಗಳು ಹೀಗೆ ಕನ್ನಡಿಗರು ಒಂದೇ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದರೂ ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಆದ್ದರಿಂದ ಎಲ್ಲ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಅಖಂಡ ಕರ್ನಾಟಕ ರಾಜ್ಯ ನಿರ್ಮಿಸಬೇಕು ಎಂಬ ಹಂಬಲ ಜನರಲ್ಲಿ ಬಲವಾಗುತ್ತಿತ್ತು. ನವೆಂಬರ ೧೯೫೨ರ ಅವಧಿಯಲ್ಲಿ ಈ ಬೇಡಿಕೆ ಕೇವಲ ಸಭೆ, ಮನವಿ ಮತ್ತು ನಿರ್ಣಯಗಳಿಗೆ ಸೀಮಿತವಾಗದೆ ತ್ಯಾಗ ಮತ್ತು ಹೋರಾಟದ ಹಂತಕ್ಕೆ ತಲುಪಿತು.  ಅದರಗುಂಟೆ ಶಂಕರಗೌಡರು, ದೊಡ್ಡಮೇಟಿ ಅಂದಾನಪ್ಪ, ತಲ್ಲೂರ ರಾಯಣ್ಣಗೌಡರು ಮುಂತಾದ ಏಕೀಕರಣ ಹೋರಾಟಗಾರರು ಅಖಂಡ ಕರ್ನಾಟಕದ ರಚನೆಗಾಗಿ ಮರಣಾಂತ ಉಪವಾಸ ವ್ರತ ಕೈಗೊಂಡರು. ತಮ್ಮ ಜೀವವನ್ನೇ ಪಣಕ್ಕಿಟ್ಟು ಸರ್ಕಾರದ ಗಮನ ಸೆಳೆಯಲು ಅವರು ಮುಂದಾದರು.ಈ ಉಪವಾಸ ಸತ್ಯಾಗ್ರಹವು ಕನ್ನಡಿಗರ ಬಹುದಿನಗಳ ಆಶಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಒಂದು ಪ್ರಬಲ ಅಹಿಂಸಾತ್ಮಕ ಹೋರಾಟವಾಗಿತ್ತು. ಉಪವಾಸಿಗರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದಂತೆ ಏಕೀಕರಣ ಹೋರಾಟಗಾರರು ಮತ್ತು ಕನ್ನಡಾಭಿಮಾನಿಗಳಲ್ಲಿ ಆತಂಕ ಹೆಚ್ಚಾಯಿತು. ಇಂಥ  ಸಂದರ್ಭದಲ್ಲಿ ಜಯದೇವಿ ತಾಯಿಯವರು ಹೋರಾಟಗಾರರ ಬೆನ್ನಿಗೆ ದೃಢವಾಗಿ ನಿಂತರು. ಹೋರಾಟಗಾರರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾಗ ಅವರಿಗೆ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ನೀಡುವುದು ಅಗತ್ಯವಾಗಿತ್ತು. ಜಯದೇವಿ ತಾಯಿಯವರು* ತಮ್ಮ ರಕ್ತದಿಂದಲೇ ಹಸ್ತಾಕ್ಷರ ಹಾಕಿ ಉಪವಾಸ ಸತ್ಯಾಗ್ರಹಿಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು* ಎಂಬುದು ಅವರ ಹೋರಾಟದ ತೀವ್ರತೆ ಮತ್ತು ಬದ್ಧತೆಯನ್ನು ತೋರಿಸುವ ಅಪೂರ್ವ ಘಟನೆ. ಇದು “ಕರ್ನಾಟಕ ಏಕೀಕರಣಕ್ಕಾಗಿ ನಡೆಯುವ ನಿಮ್ಮ ಹೋರಾಟಕ್ಕೆ ನನ್ನ ಜೀವದ ಕೊನೆಯ ಹನಿಯವರೆಗೂ ಬೆಂಬಲವಿದೆ” ಎಂಬ ಸಂಕಲ್ಪದ ಸಂಕೇತವಾಗಿತ್ತು. ಅವರ ಈ ನಡೆ ಹೋರಾಟಗಾರರಲ್ಲಿ ಹೊಸ ಉತ್ಸಾಹ ಮೂಡಿಸಿತು. ಮಹಿಳೆಯರು ಕೂಡ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದು, ಅಗತ್ಯವಾದರೆ ವೈಯಕ್ತಿಕ ತ್ಯಾಗಕ್ಕೂ ಸಿದ್ಧರಾಗಬಹುದು ಎಂಬ ಸಂದೇಶವನ್ನು ಅವರು ಸಮಾಜಕ್ಕೆ ನೀಡಿದರು. *ನುಡಿನಾಡ ಮಾಡುವಗ |ಗಡಿನಾಡ ಮರಿಬ್ಯಾಡ್ರಿಬೇಡಿದೆವು ನ್ಯಾಯವ ಕೊಡಿರೆಂತ -ಸರ್ಕಾರಕತೊಡಕ ಇಡಬ್ಯಾಡರಿ ಕಡೆ ತನಕ||*ಎಂದು ಹಾಡುತ್ತಾ ಜಯದೇವಿ ತಾಯಿಯವರು ಸರ್ಕಾರಕ್ಕೆ ಎಚ್ಚರಿಸಲು ಪ್ರಯತ್ನಿಸಿದರು. ಹೋರಾಟದ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಕೇವಲ ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದರಿಂದ ಪ್ರಯೋಜನವಿಲ್ಲ ಎಂಬ ಅರಿವು ಮೂಡಿತು. ಕರ್ನಾಟಕದ ಏಕೀಕರಣದ ಪ್ರಶ್ನೆಯನ್ನು ನೇರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ಕೊಂಡೊಯ್ಯಬೇಕಾಗಿತ್ತು. ಆದ್ದರಿಂದ ಜಯದೇವಿ ತಾಯಿಯವರು ತಮ್ಮ ಸಂಗಡಿಗರೊಂದಿಗೆ ಸೊಲ್ಲಾಪುರದಿಂದ ದೆಹಲಿಯವರೆಗೆ ಯಾತ್ರೆ ಕೈಗೊಳ್ಳುವ ನಿರ್ಧಾರ ಮಾಡಿದರು.  ಪ್ರವಾಸ ಕನ್ನಡಿಗರ ನೋವು, ಅಸಮಾಧಾನ ಮತ್ತು ಅಖಂಡ ಕರ್ನಾಟಕದ ಆಶಯವನ್ನು ದೇಶದ ರಾಜಧಾನಿಗೆ ಕೊಂಡೊಯ್ಯುವ ಪ್ರತೀಕಾತ್ಮಕ ರಾಜಕೀಯ…ಸಾಮಾಜಿಕ ಯಾತ್ರೆಯಾಗಿತ್ತು. ದಾರಿಯುದ್ದಕ್ಕೂ ಕನ್ನಡಿಗರ ಸಮಸ್ಯೆಗಳನ್ನು ಜನರಿಗೆ ತಿಳಿಸುವುದು, ಕರ್ನಾಟಕ ಏಕೀಕರಣದ ಅಗತ್ಯವನ್ನು ವಿವರಿಸುವುದು ಮತ್ತು ಕೇಂದ್ರ ನಾಯಕರ ಗಮನ ಸೆಳೆಯುವುದು ಈ ಪ್ರಯತ್ನದ ಉದ್ದೇಶವಾಗಿತ್ತು. *ನಾಡೊಂದುಗೂಡಿಸಿ ಕೊಡಿರೆಂದು ಹೊಂದಿಸಿಬೇಡ ಹೋದೆವ ದಿಲ್ಲಿಯ ಸರ್ಕಾರಕನುಡಿದೇವ “ಕನ್ನಡ ನಾಡೊಂದೇ “*ಎಂದು ಹಾಡಿದ ಜಯದೇವಿ ತಾಯಿಯವರು ಸೊಲ್ಲಾಪುರದಿಂದ ದೆಹಲಿಯವರೆಗೆ ಸಾಗಿದ ಈ ಪ್ರಯತ್ನವು ಒಂದು ಮಹತ್ವದ ಸಂದೇಶವನ್ನು ನೀಡಿತು….ಕರ್ನಾಟಕ ಏಕೀಕರಣವು ಕನ್ನಡಿಗರ ಸಾಮೂಹಿಕ ಹಕ್ಕು ಮತ್ತು ಭಾವನೆಯಾಗಿದೆ. ಜಯದೇವಿ ತಾಯಿಯವರಂತಹ ಮಹಿಳಾ ಹೋರಾಟಗಾರ್ತಿಯರು ಈ ಹಂತದಲ್ಲಿ ವಹಿಸಿದ ಪಾತ್ರ ವಿಶೇಷವಾದದ್ದು. ಅವರು ಭಾಷಣಗಳನ್ನು ಮಾಡುತ್ತಾ, ಸಮಾಲೋಚನೆಗಳನ್ನು ಆಯೋಜಿಸುತ್ತಾ … ಅಲ್ಲಲ್ಲಿ ಸಭೆಗಳನ್ನು ನಡೆಸಿ,ಉಪವಾಸ ಸತ್ಯಾಗ್ರಹಿಗಳಿಗೆ ನೈತಿಕ ಬೆಂಬಲ ನೀಡುತ…,, ಜನರಲ್ಲಿ ಜಾಗೃತಿ ಮೂಡಿಸಿದರು ಮತ್ತು ಕೇಂದ್ರದ ಮಟ್ಟದಲ್ಲಿ ಕರ್ನಾಟಕದ ಧ್ವನಿ ಕೇಳಿಸುವಂತೆ ಮಾಡಲು ಪ್ರಯತ್ನಿಸಿದರು.ಈ ಘಟನೆಯು ಜಯದೇವಿ ತಾಯಿಯವರ ಧೈರ್ಯ ಮತ್ತು ಕೆಚ್ಚೆದೆಯ  ಮನೋಭಾವಕ್ಕೆ ಸಾಕ್ಷಿಯಾಗಿದೆ. ಜಯದೇವಿ ತಾಯಿಯವರು ಅಖಂಡ ಕರ್ನಾಟಕದ ನಿರ್ಮಾಣಕ್ಕಾಗಿ ನಡೆಸಿದ ಹೋರಾಟವು  ಕನ್ನಡಪರ ಚಿಂತಕರೊಂದಿಗೆ ನಿರಂತರವಾಗಿ ಚರ್ಚಿಸಿ, ಒಗ್ಗಟ್ಟಿನಿಂದ ಹೋರಾಟ ನಡೆಸಿದರು. ಸರ್ವಶ್ರೀ ಎಸ್. ನಿಜಲಿಂಗಪ್ಪ, ಎಸ್. ಆರ್. ಕಂಠಿ, ಹಳ್ಳಿಕೇರಿ ರುದ್ರಪ್ಪ, ಬಿ. ಡಿ. ಜತ್ತಿ ಮುಂತಾದ ಪ್ರಮುಖ ನಾಯಕರು ಜಯದೇವಿ ತಾಯಿಯವರೊಂದಿಗೆ ಆಗಾಗ ಸಮಾಲೋಚನೆ ನಡೆಸುತ್ತಿದ್ದರು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ಒಂದಾಗಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು ಎಂಬುದು ಎಲ್ಲರ ಪ್ರಮುಖ ಆಶಯವಾಗಿತ್ತು.ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಹೋರಾಟವನ್ನು ಹೇಗೆ ಸಂಘಟಿಸಬೇಕು, ಜನರಲ್ಲಿ ಕನ್ನಡ ನಾಡಿನ ಏಕೀಕರಣದ ಬಗ್ಗೆ ಜಾಗೃತಿ ಹೇಗೆ ಮೂಡಿಸಬೇಕು, ಸರ್ಕಾರದ ಮೇಲೆ ಒತ್ತಡ ಹೇಗೆ ತರಬೇಕು, ಕನ್ನಡ ಭಾಷಿಕ ಪ್ರದೇಶಗಳ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ಹೇಗೆ ತರಬೇಕು ಎಂಬುದರ ಕುರಿತು ತಾಯಿಯವರು ಮತ್ತು ನಾಯಕರು ಸುದೀರ್ಘವಾಗಿ ಚರ್ಚಿಸುತ್ತಿದ್ದರು.  ಜನಜಾಗೃತಿ ಹಾಗೂ ವಿವಿಧ ಹೋರಾಟಗಳ ಮೂಲಕ ಕನ್ನಡಿಗರ ಒಗ್ಗಟ್ಟಿನ ಧ್ವನಿಯನ್ನು ಬಲಪಡಿಸುವ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿತ್ತು.ಇದೇ ಅವಧಿಯಲ್ಲಿ ಭಾರತ ಸರ್ಕಾರವು ಫಜಲ ಅಲಿ ಅವರ ನೇತೃತ್ವದಲ್ಲಿ ರಾಜ್ಯ ಪುನರ ರಚನಾ ಆಯೋಗವನ್ನು ರಚಿಸಿತು. ಭಾಷಾವಾರು ರಾಜ್ಯಗಳ ರಚನೆಯ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಯಾವ ರೀತಿಯಲ್ಲಿ ಪುನರ್‌ವ್ಯವಸ್ಥೆಗೊಳಿಸಬೇಕು ಎಂಬ ಪ್ರಶ್ನೆ ಅತ್ಯಂತ ಮಹತ್ವದ್ದಾಗಿತ್ತು.ಈ ಸಂದರ್ಭದಲ್ಲಿ ಜಯದೇವಿ ತಾಯಿಯವರು ತಮ್ಮ ನಿಲುವನ್ನು ಸ್ಪಷ್ಟವಾಗಿ ಮಂಡಿಸುವುದರ ಜೊತೆಗೆ, ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರು. ರಾಜ್ಯ ಪುನರ ರಚನಾ ಆಯೋಗದ ಸದಸ್ಯರಾಗಿದ್ದ ಶ್ರೀ ಕೆ. ಎಂ. ಫಣಿಕ್ಕರ ಅವರೊಂದಿಗೆ ಜಯದೇವಿ ತಾಯಿಯವರು ಹಲವು ಬಾರಿ ಸುದೀರ್ಘವಾಗಿ ಚರ್ಚಿಸಿದರು. ಕನ್ನಡಿಗರು ಯಾವ ಯಾವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಆ ಪ್ರದೇಶಗಳ ಭಾಷಾ-ಸಾಂಸ್ಕೃತಿಕ ಸಂಬಂಧಗಳು ಹೇಗಿವೆ, ಕನ್ನಡ ಭಾಷಿಕ ಪ್ರದೇಶಗಳನ್ನು ಒಂದೇ ಆಡಳಿತದ ಅಡಿಯಲ್ಲಿ ತರಬೇಕಾದ ಅಗತ್ಯವೇನು, ಜನರ ಆಶಯವೇನು ಎಂಬುದರ ಕುರಿತು ಅವರು ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ಕರ್ನಾಟಕದ ಏಕೀಕರಣವು  ಆಡಳಿತಾತ್ಮಕ ಬದಲಾವಣೆ‌ಯ ಜೊತೆ ಜೊತೆಯಾಗಿ  ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಕನ್ನಡಿಗರ ಭಾವನಾತ್ಮಕ ಏಕತೆಯ ಪ್ರಶ್ನೆ ಎಂಬುದನ್ನು ತಾಯಿಯವರು  ಹೇಳುತ್ತಿದ್ದರು.ಹೀಗೆ ಹಿರಿಯ ನಾಯಕರೊಂದಿಗೆ ನಿರಂತರ ಚರ್ಚೆ, ಜನಜಾಗೃತಿ, ಹೋರಾಟ ಮತ್ತು ರಾಜ್ಯ ರಚನಾ ಆಯೋಗದೊಂದಿಗೆ ವಿಚಾರ ವಿನಿಮಯ ನಡೆಸುವ ಮೂಲಕ ಜಯದೇವಿ ತಾಯಿಯವರು ಅಖಂಡ ಕರ್ನಾಟಕ ನಿರ್ಮಾಣದ ಮಹತ್ವದ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದರು. ಅವರ ಪ್ರಯತ್ನ  ಚದುರಿಹೋಗಿದ್ದ ಕನ್ನಡಿಗರೆಲ್ಲರೂ ಒಂದೇ ನಾಡಿನ ಅಡಿಯಲ್ಲಿ ಒಂದಾಗಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಗೌರವ ದೊರೆಯಬೇಕು ಎಂಬ ಗಾಢವಾದ ಕನ್ನಡಾಭಿಮಾನವಿತ್ತು.  ಇಂತಹ ಅನೇಕ ಹೋರಾಟಗಾರರ ನಿರಂತರ ಪ್ರಯತ್ನಗಳ ಫಲವಾಗಿಯೇ ಮುಂದೆ ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣದ ಕನಸು ನನಸಾಗುವ ದಾರಿ ಸುಗಮವಾಯಿತು.(ಮುಂದುವರೆಯಲಿದೆ) ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಅಪ್ಪಟ ರಾಷ್ಟ್ರ ಪ್ರೇಮಿ ಜೈ ಹಿಂದ್ ಘೋಷಣೆ ಜನಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲಾ ರಾಜ್ಯಗಳ ಧರ್ಮೀಯರ ಕೊಡುಗೆ ಅಪಾರವಾಗಿದೆ. ಮಹಾತ್ಮಾ ಗಾಂಧಿ ನೆಹರು ವಲ್ಲಭಭಾಯಿ ಪಟೇಲ್ ಸುಭಾಷ್ ಚಂದ್ರ ಬೋಸ್ ಹೀಗೆ ಬೇರೆ ಬೇರೆ ನಾಯಕರ ನೇತೃತ್ವದಲ್ಲಿ ಸಂಗ್ರಾಮ ಹೋರಾಟ ನಡೆದಿವೆ. ಇಂತಹ ಒಂದು ಅಪರೂಪದ ಹೋರಾಟವೇ  ಭಾರತೀಯ ರಾಷ್ಟ್ರೀಯ ಸೇನೆಯ (INA) ಇದನ್ನು ಸ್ಥಾಪಿಸಿದವರು. ಸುಭಾಷ್ ಚಂದ್ರ ಬೋಸ್. ಇವರ ಕರೆಗೆ ಓಗೊಟ್ಟು  ಸಾವಿರಾರು ಯುವಕರು ಭಾರತೀಯ ಸೇನೆಯನ್ನು ಸೇರಿದರು. ಹಿಂದೂ ಮುಸ್ಲಿಂ ಸಿಖ್ ಇಸಾಯಿ ಮುಂತಾದ ಬೇರೆ ಬೇರೆ ಧರ್ಮದವರ ನಂಬಿಕೆಯುಳ್ಳ ಯುವಕರ ಪಡೆ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು . ಅವರೆಲ್ಲರ ಆಚರಣೆ ವಿಚಾರ ಭಿನ್ನ ಭಿನ್ನವಾಗಿ ಕಂಡು ಬಂದವು. ಕೆಲವರು ಬೆಳಿಗ್ಗೆ ಎದ್ದು ಕೂಡಲೇ ರಾಮ್ ರಾಮ್ ಎನ್ನುತ್ತಿದ್ದರು ಇನ್ನೂ ಕೆಲವರು ವಾಲೀಕುಂ ಸಲಾಂ ಎನ್ನುತ್ತಿದ್ದರು. ಸಿಖ್ ಜನಾಂಗ ಅಕಾಲಿ ಎನ್ನುತ್ತಿದ್ದರು ಹೀಗೆ ಒಂದೇ ಭಾರತೀಯ ಸೇನಾ  ಸಂಸ್ಕೃತಿಯಲ್ಲಿ ಭಿನ್ನ ಭಿನ್ನವಾಗಿ ಸೈನಿಕರು ಘೋಷಣೆ ಅಥವಾ ತಮ್ಮ ತಮ್ಮ ಬೆಳಗಿನ ನಮಸ್ಕಾರಗಳನ್ನು ಹೇಳುತ್ತಿದ್ದರು. ಇದನ್ನು ಏಕ ರೂಪದಲ್ಲಿ ಅಳವಡಿಸಲು ಸುಭಾಷ್ ಚಂದ್ರ ಬೋಸರು ಚಿಂತಿಸ ಹತ್ತಿದರು ಆಗ ಇವರ ನೆರವಿಗೆ ಬಂದವರೇ ಅಬಿದ್ ಹಸನ್ ಸಫ್ರಾನೀ ಎಂಬ. ಮುಸ್ಲಿಂ ಯುವಕ. ಹಲವು ದಿನಗಳ ವರೆಗೆ. ಯೋಚನೆ ಮಾಡಿ ಜೈ ಹಿಂದುಸ್ತಾನಿ ಎಂದು ಆರಂಭದಲ್ಲಿ ಘೋಷಣೆ ಕೂಗಿದರೂ ಸಹಿತ ಮುಂದೆ ಅದನ್ನು ಜೈ ಹಿಂದ್ ಎಂಬ ಘೋಷಣೆಗೆ ಮಾರ್ಪಾಡಿಸಿದವರು  ಅಬಿದ ಹಸನ್ ಸಫ್ರಾನಿ . ಅಬಿದ್ ಹಸನ್ ಸಫ್ರಾನಿ (Zain-al-Abdin Hasan) ಅವರು ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಕಟ ಒಡನಾಡಿ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ (INA) ಪ್ರಮುಖ ಅಧಿಕಾರಿಯಾಗಿದ್ದರು. ಇಡೀ ದೇಶವನ್ನು ಒಗ್ಗೂಡಿಸಿದ ‘ಜೈ ಹಿಂದ್’ (Jai Hind) ಎಂಬ ಪ್ರಸಿದ್ಧ ಘೋಷಣೆಯನ್ನು ಸೃಷ್ಟಿಸಿದ ರೂವಾರಿ ಇವರೇ ಆಗಿದ್ದಾರೆ. ಆರಂಭಿಕ ಜೀವನ ಮತ್ತು ಶಿಕ್ಷಣ ಜನನ:  ಇವರು 11 ಏಪ್ರಿಲ್ 1911 ರಂದು ಹೈದರಾಬಾದ್‌ನ ಶ್ರೀಮಂತ ಮತ್ತು ಬ್ರಿಟಿಷ್ ವಿರೋಧಿ ನಿಲುವು ಹೊಂದಿದ್ದ ಕುಟುಂಬದಲ್ಲಿ ಜನಿಸಿದರು. ಮೂಲ ಹೆಸರು:  ಇವರ ನಿಜವಾದ ಹೆಸರು ‘ಝೈನ್-ಅಲ್-ಅಬ್ದಿನ್ ಹಸನ್’.ಶಿಕ್ಷಣ: ಇವರ ತಾಯಿ ಬ್ರಿಟಿಷರ ಮೇಲಿನ ವಿರೋಧದಿಂದಾಗಿ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ಕಳುಹಿಸದೆ ಜರ್ಮನಿಗೆ ಕಳುಹಿಸಿದರು. ಅಲ್ಲಿ ಅಬಿದ್ ಅವರು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ನೇತಾಜಿ ಒಡನಾಟ ಮತ್ತು ಐಎನ್‌ಎ (INA) ಪಾತ್ರಪ್ರೇರಣೆ:  ಜರ್ಮನಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾಷಣದಿಂದ ಪ್ರೇರಿತರಾಗಿ, ತಮ್ಮ ಎಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಸಬ್‌ಮರೀನ್ ಪ್ರಯಾಣ:  ಎರಡನೇ ಮಹಾಯುದ್ಧದ ಸಮಯದಲ್ಲಿ ನೇತಾಜಿ ಅವರೊಂದಿಗೆ ಜರ್ಮನಿಯಿಂದ ಜಪಾನ್‌ಗೆ ಅತ್ಯಂತ ಅಪಾಯಕಾರಿ 90 ದಿನಗಳ ಸಬ್‌ಮರೀನ್ (ಜಲಾವೃತ ನೌಕೆ) ಪ್ರಯಾಣ ಕೈಗೊಂಡ ಏಕೈಕ ಭಾರತೀಯ ಇವರಾಗಿದ್ದಾರೆ.’ಸಫ್ರಾನಿ’ ಹೆಸರಿನ ಹಿನ್ನೆಲೆ: ಐಎನ್‌ಎ ಧ್ವಜ ವಿನ್ಯಾಸದ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸೈನಿಕರ ನಡುವೆ ಭಿನ್ನಾಭಿಪ್ರಾಯ ಮೂಡದಂತೆ ಕೋಮು ಸೌಹಾರ್ದತೆಯನ್ನು ಸಾರಲು, ಹಿಂದೂಗಳ ಪವಿತ್ರ ಬಣ್ಣವಾದ ಕೇಸರಿಯನ್ನು (Saffron) ಸೂಚಿಸಿ, ತಮ್ಮ ಹೆಸರಿನೊಂದಿಗೆ ‘ಸಫ್ರಾನಿ’ ಎಂದು ಸೇರಿಸಿಕೊಂಡರು. ‘ಜೈ ಹಿಂದ್’ ಘೋಷಣೆಯ ಜನ್ಮ ಭಾರತೀಯ ಸೈನಿಕರನ್ನು ಧರ್ಮ ಮತ್ತು ಪ್ರಾಂತ್ಯಗಳ ಭೇದವಿಲ್ಲದೆ ಒಂದೇ ಗೌರವ ವಂದನೆಯಲ್ಲಿ ಸ್ವಾಗತಿಸಲು ನೇತಾಜಿ ಬಯಸಿದ್ದರು.ಆಗ ಅಬಿದ್ ಹಸನ್ ಅವರು “ಜೈ ಹಿಂದೂಸ್ತಾನ್ ಕಿ” ಎಂಬ ನುಡಿಗಟ್ಟನ್ನು ಸುಧಾರಿಸಿ “ಜೈ ಹಿಂದ್” (ಭಾರತಕ್ಕೆ ಜಯವಾಗಲಿ) ಎಂಬ ಸಂಕ್ಷಿಪ್ತ, ಶಕ್ತಿಯುತ ಘೋಷಣೆಯನ್ನು ಸೃಷ್ಟಿಸಿದರು. ನೇತಾಜಿ ಇದನ್ನು ತಕ್ಷಣವೇ ಒಪ್ಪಿಕೊಂಡು ಐಎನ್‌ಎಯ ಅಧಿಕೃತ ವಂದನೆಯನ್ನಾಗಿ ಮಾಡಿದರು. ರಾಜತಾಂತ್ರಿಕ ವೃತ್ತಿಜೀವನ  (Diplomat)ಸ್ವಾತಂತ್ರ್ಯದ ನಂತರ, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕೋರಿಕೆಯ ಮೇರೆಗೆ ಇವರು ಭಾರತೀಯ ವಿದೇಶಾಂಗ ಸೇವೆಗೆ (IFS) ಸೇರಿದರು.ಈಜಿಪ್ಟ್, ಡೆನ್ಮಾರ್ಕ್, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ (Ambassador) ಅತ್ಯುತ್ತಮ ಸೇವೆ ಸಲ್ಲಿಸಿ 1969 ರಲ್ಲಿ ನಿವೃತ್ತರಾದರು. Nidhana ಈ ಮಹಾನ್ ದೇಶಭಕ್ತರು 9 ಮೇ 1984 ರಂದು ತಮ್ಮ ಸ್ವಂತ ನಗರವಾದ ಹೈದರಾಬಾದ್‌ನಲ್ಲಿ ನಿಧನರಾದರು. ಇತ್ತೀಚೆಗೆ ಅವರ ಸಾಹಸಮಯ ಜೀವನದ ಕುರಿತು Abid Hasan Safrani Netaji’s Comrade-in-Arms ಎಂಬ ಪುಸ್ತಕವನ್ನು ಅವರ ಕುಟುಂಬದವರು ಪ್ರಕಟಿಸಿದ್ದಾರೆ. ಇಂತಹ ಅಪರೂಪದ ಪ್ರಬುದ್ಧ ಪ್ರಾಮಾಣಿಕ ಭಾರತೀಯ ಸೇನಾ ಪಡೆ ಸೇನಾನಿ ಇತಿಹಾಸಗಳ ಪುಟದಲ್ಲೂ ಸೇರ್ಪಡೆಗೊಂಡಿಲ್ಲ. __________________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ 

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-39 ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಅರಮನೆಯ ತೊರೆದಳು, ಅರಣ್ಯವನು ಸೇರಿದಳು “ದುಃಖಿ ನೀನಾಗದೆ ಆ ಜಾನಕಿಯನ್ನು ಗಂಗಾನದಿಯ ದಡದಲ್ಲಿರುವ ಕಾಡಿನಲ್ಲಿ ಬಿಟ್ಟುಬರಬೇಕು. ಕಾಡಿನಲ್ಲಿ ಋಷಿಪತ್ನಿಯರ ಸಂಗದಲ್ಲಿ ಕಾಲವನ್ನು ಕಳೆಯುವ ಬಯಕೆಯನ್ನು ಹಿಂದೊಮ್ಮೆ ನನ್ನಲ್ಲಿ ತೋಡಿಕೊಂಡಿದ್ದಳು. ಈಗ ಅದನ್ನೇ ನೆಪವಾಗಿಸಿಕೊಂಡು ಅವಳನ್ನಿಲ್ಲಿಂದ ಕರೆದೊಯ್ದು ಕಾನನದಲ್ಲಿ ಬಿಟ್ಟು ಬಾ” ರಾಮನುಡಿಯದು ಕರ್ಣಕಠೋರವಾಯಿತು ಲಕ್ಷ್ಮಣನ ಪಾಲಿಗೆ.ಅಣ್ಣನ ಆಜ್ಞೆಯನ್ನು ಅವಗಣಿಸಲಾಗದ ಅನಿವಾರ್ಯತೆ ಒಂದೆಡೆಯಲ್ಲಿ. ಅಣ್ಣ ಹೇಳಿದಂತೆಯೇ ನಡೆದುಕೊಂಡರೆ ತಾಯಿಯನ್ನು ವಧಿಸಿದ ಮಹಾಪಾತಕಿಯಂತಾಗುತ್ತೇನೆ ತಾನು ಎಂಬ ಅಳುಕು ಇನ್ನೊಂದೆಡೆಯಲ್ಲಿ. ಅತ್ತಿಗೆಯನ್ನು ಕಾನನದಲ್ಲಿ ಬಿಟ್ಟು ಬರುವೆನೋ, ಬಾರೆನೋ ಎಂಬ ಇಬ್ಬಂದಿತನವದು ಸಂಕಟಕ್ಕೀಡುಮಾಡಿತು ಸುಮಿತ್ರೆಯ ಸುತನನ್ನು. ಶರೀರ ಅದುರಿತು. ಚದುರಿತು ಶೋಕಭಾವ ಮನದ ತುಂಬ. ಕೊರಳು ಬಿಗಿಯಿತು. ಸುರಿಯಿತು ದುಃಖಸೂಚಿತ ಅಶ್ರು ಕಣ್ಣಿನಿಂದ.ಈ ಸ್ಥಿತಿಯಲ್ಲಿ ಲಕ್ಷಣನಿರಬೇಕಾದರೆ ಶ್ರೀರಾಮನ ಕಠೋರ ಕಣ್ಣುಗಳು ಕಠಿಣಾತಿಕಠಿಣವಾಗಿ ದಿಟ್ಟಿಸಿದವು ತಮ್ಮನನ್ನು. “ನಾನೇ ಅವಳನ್ನು ತೊರೆಯುವ ನಿರ್ಧಾರ ಮಾಡಿರುವಾಗ ನಿನಗೇನು ಸಮಸ್ಯೆ! ಹೋಗು ಅವಳನ್ನು ಬಿಟ್ಟು ಬಾ ಅರಣ್ಯದಲ್ಲಿ” ಎಂದು ದಯೆಯಿಲ್ಲದೆ ನುಡಿದ ಶ್ರೀರಾಮ. ಪ್ರಜೆಗಳಿಗನುಗುಣವಾಗಿ ನಡೆದುಕೊಳ್ಳಬೇಕೆಂಬ ಒತ್ತಡವೇ ಅವನನ್ನು ಆ ಬಗೆಯಲ್ಲಿ ಕಾರುಣ್ಯಶೂನ್ಯನಾಗಿಸಿತೋ ಏನೋ!ನೋವಿನ ಭಾವದಿಂದಲೇ ರಥವನ್ನು ಸಿದ್ಧಪಡಿಸಿದ ಲಕ್ಷ್ಮಣ. ಸೀತೆಯಿದ್ದ ರಾಜಮಂದಿರಕ್ಕೆ ಬಂದ. ಅವಳ ಮೊಗವನ್ನು ನೋಡುವ ಧೈರ್ಯ ಬರಲಿಲ್ಲ ಅವನಿಗೆ. ತಲೆಬಾಗಿಸಿಯೇ ನಿಂತು ಅವಳಲ್ಲಿ “ಮಾತೆಯೇ, ಕಾನನಕ್ಕೆ ಹೋಗಬೇಕೆಂದು ಬಯಸಿದವಳು ನೀನು. ನಿನ್ನಿಚ್ಛೆಯನ್ನು ಪೂರೈಸಲೆಂದು ಈಗ ನನ್ನಣ್ಣ ಶ್ರೀರಾಮ ನಿನ್ನನ್ನು ಕಾಡಿಗೆ ಕಳುಹಿಸುವ ಮನಸ್ಸು ಮಾಡಿದ್ದಾನೆ. ರಥವನ್ನೇರು. ಈಗಲೇ ಪಯಣ ಆರಂಭವಾಗಲಿ” ಎಂದು ಶೋಕಛಾಯೆಯನ್ನು ಬೀರಿ ನುಡಿದ ಲಕ್ಷ್ಮಣಆ ಕ್ಷಣದಲ್ಲಿ ಅವಳ ಮನಸ್ಸಿಗಾದ ಸಂತಸವದು ಲಕ್ಷö್ಮಣನ ನಿಜಭಾವವನ್ನು ತೋರಗೊಡಲೇ ಇಲ್ಲ. ಅತಿಯಾಗಿ ಸಂಭ್ರಮಿಸಿದಳು ಧರಣಿಸುತೆ. ತನ್ನ ಮನದಿಚ್ಛೆಯನ್ನು ತನ್ನ ಮನದೊಡೆಯ ಇಷ್ಟು ಬೇಗ ಪೂರೈಸಿದ ಎಂಬ ಸಂತೃಪ್ತಿ ಅವಳದಾಯಿತು. ನಿಜವನ್ನು ತಿಳಿಯದೆಯೇ ಹರ್ಷದಲ್ಲಿ ನಲಿಯುತಿರುವ ಸೀತೆಯನ್ನು ಕಂಡು ಇನ್ನಷ್ಟು ಮರುಗಿದ ಲಕ್ಷö್ಮಣ.ಆಶ್ರಮದ ಋಷಿಪತ್ನಿಯರಿಗೆ ಕೊಡಲೆಂದು ಅನೇಕಾನೇಕ ವಸ್ತುಗಳನ್ನು ತೆಗೆದಿಟ್ಟುಕೊಂಡಳು. ಶ್ರೀರಾಮನ ಪಾದುಕೆಗಳನ್ನು ಜೊತೆಗಿರಿಸಿಕೊಂಡಳು. ಅರಮನೆಯ ಗುರು ಹಿರಿಯರಿಗೆ ವಂದಿಸಿದಳು. ಅನುನಯದಿಂದ ಎಲ್ಲರನ್ನೂ ಮಾತನಾಡಿಸಿದಳು. ಅಯೋಧ್ಯೆಗೆ ವಿದಾಯ ಹೇಳಿದಳು ಸೀತೆ. ಲಕ್ಷö್ಮಣ ನಡೆಸುತ್ತಿದ್ದ ರಥವದು ಸೀತೆಯನ್ನು ಅಯೋಧ್ಯೆಯಿಂದ, ಶ್ರೀರಾಮನಿಂದ ದೂರ ದೂರ ದೂರವಾಗಿಸಿತು.ರಥದಲ್ಲಿದ್ದ ಪತಾಕೆಯದು ನೋಡಲಾರೆ ಜಾನಕಿಯ ಈ ಹೀನಸ್ಥಿತಿಯನ್ನು ಎಂಬAತೆ ತಲೆಯನ್ನು ಕೊಡಹುತ್ತಿತ್ತು. ‘ಯುದ್ಧದಲ್ಲಿ ಶತ್ರುಗಳನ್ನು ಕೊಂದು ಮೆರೆಯಲೆಂದು ಏರುತ್ತಿದ್ದ ರಥವಿದು. ಇಂದು ಸೀತಾಮಾತೆಯನ್ನು ಕಾಡಿಗೆ ಕಳುಹಿಸಿಬರಲು ಇದನ್ನು ಏರುವಂತಾಯಿತಲ್ಲಾ!’ ಎಂಬ ಯೋಚನೆ ಲಕ್ಷö್ಮಣನಲ್ಲಿ ಮೂಡಿತು. ಮರುಕಪಟ್ಟ ಸೌಮಿತ್ರಿ. ‘ಹೇಗೆ ಇವಳನ್ನು ಕಾಡಿಗೆ ಬಿಟ್ಟುಬರುವೆನೋ! ಯಾಕೆ ಈ ಕಾರ್ಯವನ್ನು ನನಗೆ ವಹಿಸಿದನೋ ನನ್ನಣ್ಣ!’ ಎಂದು ಹಾಗೆಯೇ ಹಲುಬಿದ.ಆಗಲೇ ನರಿಯ ಕೂಗು ಕೇಳಿಬಂತು. ಕುಳಿತಿದ್ದ ಮೃಗಗಳು ಮೇಲೆದ್ದು ರಥದ ಮುಂದುಗಡೆ ದಾರಿಯನ್ನು ದಾಟಿದವು. ಸೀತೆಯ ಬಲದ ಕಣ್ಣು ಅದುರಿತು. ಏನಿದು ಈ ಬಗೆಯ ಅಪಶಕುನಗಳು ಎನಿಸಿತು ಅವಳಿಗೆ. ಹೇಳಿಕೊಂಡಳು ಲಕ್ಷö್ಮಣನಲ್ಲಿ. ಆ ಕ್ಷಣದಲ್ಲಿ ಅವಳಲ್ಲಿ ಮೂಡಿಬಂದದ್ದು ರಾಮಯೋಚನೆ. ತನ್ನೊಡೆಯ ಶ್ರೀರಾಮನಿಗೆ ಒಳ್ಳೆಯದೇ ಆಗಲಿ; ಕೆಡುಕು ಅವನನ್ನು ಬಾಧಿಸದಿರಲಿ ಎಂದು ಬಯಸಿದಳು ಭೂಮಿಸುತೆ.ರಥವೀಗ ಬಹುದೂರ ಸಾಗಿಬಂದಿತ್ತು. ಸೀತಾಮಾತೆಯ ಕಣ್ಣೆದುರಿಗೆ ಈಗ ಕಂಡವಳು ಗಂಗಾಮಾತೆ. ಪರಮ ನಿಷ್ಕಲ್ಮಶ ಪರಿಯಲ್ಲಿ ಪರಮ ಪಾವನೆಯಾಗಿ ಹರಿಯುತ್ತಿದ್ದಳು. ರಥದಿಂದಿಳಿದ ಲಕ್ಷö್ಮಣ ಸೀತೆ ಗಂಗಾನದಿಗೆ ನಮಸ್ಕರಿಸಿದರು. ದೋಣಿಯನ್ನೇರಿದ ಅವರನ್ನು ಗಂಗಾಮಾತೆ ತನ್ನ ಬೆನ್ನಮೇಲೆಯೇ ಹೊತ್ತು ಇನ್ನೊಂದು ತೀರಕ್ಕೆ ಸೇರಿಸಿದಳು.ಆ ತೀರದಲ್ಲಿದ್ದದ್ದು ದಟ್ಟವಾದ ಕಾಡು. ಭಯ ಮೂಡಿಸುವಂತಿತ್ತು ಆ ನಿಬಿಡ ಕಾನನದ ನಿಲುವು. ರಾಮಕಾಂತೆಯ ಕಾಂತಿವೆತ್ತ ಕಣ್ಣಿಗೆ ಆ ಕಾಂತಾರ ತೋರಿತು ಭೀಕರವಾಗಿ. ರಾಮನಾಮವನ್ನು ಜಪಿಸತೊಡಗಿದಳು ಭೀತಿಗೆ ಈಡಾಗಿ. ಅಂಜಿದಳು. ಅಳುಕಿದಳು.“ಇಲ್ಲಿ ಮುನಿಗಳ ಆಶ್ರಮಗಳು ಕಾಣಿಸುತ್ತಿಲ್ಲ. ಋಷಿಪತ್ನಿಯರು ಕಣ್ಣಿಗೆ ತೋರುತ್ತಿಲ್ಲ. ಹೋಮಧೂಮಗಳಿಲ್ಲ. ಋಷ್ಯಾಶ್ರಮಕ್ಕೆ ನನ್ನನ್ನು ಕರೆದೊಯ್ಯದೆ ಮನಕ್ಕೆ ಶ್ರಮವನ್ನು ನೀಡುವ ಈ ದಟ್ಟ ಕಾಡಿಗೇಕೆ ಕರೆತಂದೆ ನನ್ನನ್ನು?” ಎಂದು ಕೇಳಿದಳು ಲಕ್ಷö್ಮಣನಲ್ಲಿ.ಅವನು ಮೌನಿಯಾಗಿರುವಾಗಲೇ “ಪರಮ ಪಾವನರಾದ ನನ್ನ ಪತಿಯನ್ನು ತೊರೆದುಬಂದ ನನಗೆ ಪುಣ್ಯಾಶ್ರಮ ಕಣ್ಣಿಗೆ ಬೀಳುವುದಾದರೂ ಹೇಗೆ!” ಎಂದು ಹೇಳಿದಳು.ಧಿಕ್ಕರಿಸಿ ತೊರೆದ ಶ್ರೀರಾಮನನ್ನು ಹೊಗಳುವ ಅವಳ ಮುಗ್ಧತೆ ಇನ್ನಿಲ್ಲದ ದುಃಖ ಮೂಡಿಸಿತು ಲಕ್ಷö್ಮಣನಲ್ಲಿ. ಅವನ ಅಧರಗಳು ಅದುರಿದವು. ಕಣ್ಣೀರ ಹನಿಗಳು ಸುರಿದವು. ಉದರದೊಳಗೆ ಕತ್ತಿಯಾಡಿಸಿದಂತಹ ಅನುಭವ ಅವನದ್ದಾಯಿತು. ಹೃದಯ ಕರಗಿತು. ಮನವು ಮರುಗಿತು. ಎದೆಯೊಳಗಿನ ಮಾತು ಹೊರಬರದಾಯಿತು. ‘ಹೇಗೆ ಹೇಳದಿರಲಿ ನಿಜವಿಚಾರವನ್ನು ಈ ಮುಗುದೆಗೆ!’ ಎಂದು ಅತೀವ ವೇದನೆಗೊಳಗಾದ ರಾಮನ ಪ್ರಿಯ ಅನುಜ ಲಕ್ಷö್ಮಣ.ಸಂತಸದ ಸೀತೆಯನ್ನು ಸೋತ ಸೀತೆಯಾಗಿಸುವ ಮಾತುಗಳದೋ ಹೊರಬಂದವು ಲಕ್ಷö್ಮಣನಿಂದ. “ಮಾತೆಯೇ, ಇದುವರೆಗೂ ನಾನು ನಿನ್ನಿಂದ ಮುಚ್ಚಿಟ್ಟ ವಿಚಾರವಿದು. ಲೋಕಾಪವಾದಕ್ಕೆ ಹೆದರಿ ನಿನ್ನನ್ನು ತೊರೆದು ಕಳುಹಿಸಿದ್ದಾನೆ ಶ್ರೀರಾಮ. ನಿನ್ನನ್ನು ಕಾಡಿನಲ್ಲಿಯೇ ಬಿಟ್ಟುಹೋಗುವ ಹೊಣೆಯನ್ನವನು ವಹಿಸಿದ್ದು ನನಗೆ. ಅವನ ಆಜ್ಞೆಯನ್ನು ಮೀರಲಾಗದೆ ನಿನ್ನನ್ನು ಈ ದಟ್ಟ ಕಾನನಕ್ಕೆ ಕರೆತಂದಿದ್ದೇನೆ. ಇನ್ನು ಎಲ್ಲಿಗಾದರೂ ಹೋಗು ನೀನು” ಎಂದ ಕಣ್ಣೀರು ಹರಿಸುತ್ತ, ಸುಮಿತ್ರಾಸುತ. ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

You cannot copy content of this page

Scroll to Top