ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಅಮಾಯಕರ ಜೀವ ಹಿಂಡುವ ಅಧಿಕಾರ
ಕೊಡಲಿಲ್ಲ ಯಾರಿಗೂ ಪ್ರೀತಿಯ ಸಹಕಾರ
ಮೆರೆದರು ತೋರಿಸಿ ಹಣದ ಅಹಂಕಾರ
ಮರೆತರು ಸೊಕ್ಕಿನಲಿ ಪ್ರೇಮದ ಮಮಕಾರ

ಕೊನೆಗಾಲದ ನೋವ ನೀ ಅನುಭವಿಸುವೆ
ಹುಟ್ಟು ಸಂಭ್ರಮ ಸಾವು ನಿಗೂಢ ಅರಿವೆ
ಸಾವಿನಲಿ ಕಾಯುವುದಿಲ್ಲ ನಿನ್ನ ಹಣವೇ
ಒಂದು ದಿನ ಶವವಾಗಿ ಮಣ್ಣಲ್ಲಿ ಕೊಳೆಯುವೆ

ಹೊತ್ತೋಯ್ಯುವುದಿಲ್ಲ ಮರಣದ ಕೊನೆಯಲ್ಲಿ
ಬೆಳಕಾಗು ದೀನ ದಲಿತರ ಸೇವೆಯಲಿ
ಕಾಯಕದಿ ಕೈಲಾಸ ನೋಡುವೆ ನೀನಿಲ್ಲಿ
ದುರಹಂಕಾರದಿ ಮಣ್ಣು ಲೋಕದ ಬಯಲಲಿ

ದುರಾಸೆಯ ಬದುಕಿನಲಿ ಮಾನವನ ಜೀವನ
ಅತಿ ಆಸೆಯಲಿ ಮಾಡದಿರು ಮೋಸತನ
ಕಾಣಬೇಕಿದೆ ನೂತನ ಜೀವನ ಪಾವನ
ಲಂಚಾವತಾರದ ನೀಚ ರಕ್ಕಸರಿಗೆ ಈ ಕವನ


About The Author

Leave a Reply

You cannot copy content of this page

Scroll to Top