ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮೋಡಗಳೇ ಎಲ್ಲಿಗೆ ಹೋದಿರಿ,  
ನಮ್ಮ ಊರ ನೀವು ಮರೆತೆರಾ?  
ಬಾವಿಯಲ್ಲೂ ಒಂದನಿ ನೀರಿಲ್ಲ,  
ಕೆರೆಯಲ್ಲೂ  ಹನಿ ನೀರಿಲ್ಲ.

ಅಡಿಕೆ ಬಾಳೆ ತೆಂಗು ಒಣಗುತಿದೆ
ಆದರೆ ಅಲ್ಲಿ….ರಾಜಕೀಯ ಕುಣಿದಾಡುತಿದೆ
ಬಡವನ ಕೂಗು ಕೇಳಲವರಿಗೆ ಸಮಯವೆಲ್ಲಿದೆ?
ನಿನಗಾದರೂ ಕೇಳಲಿ ರೈತರ ಕೂಗು ಮಳೆಯೇ
 
ಬಾ ಮಳೆಯೇ ಬಾ ಮಳೆಯೇ
ಬಾ ಬೇಗ ಭೂಮಿ ಕಾದಾರಿದೆ.

ಬೆಳೆ ಇಲ್ಲದೆ ರೈತ ಅಳುತಿರುವ,
ಮಗುವಿಗೆ ನೀರಿಲ್ಲದೆ ತಾಯಿ ಪರಿತಪಿಸುವ,  
ಒಣಗಿದ ಮರದ ಕೆಳಗೆ ಹಕ್ಕಿಯೂ ಸುಮ್ಮನಿದೆ,  
ಮಳೆಯೇ ಬೇಗ ಬಾ, ನಮ್ಮ ಕಣ್ಣೀರು ಒರೆಸು.

 ಬಾ ಮಳೆಯೇ ಬಾ ಮಳೆಯೇ
ಬಾ ಬೇಗ ಭೂಮಿ ಕಾದಾರಿದೆ.

ಭೂಮಿ ತಾಯಿ ಬಾಯಾರಿದ್ದಾಳೆ,  
ಬಿತ್ತಿದ ಬೀಜ ಕಾಯುತ್ತಿದೆ,  
ಒಂದೇ ಒಂದು ಹನಿ ಮಳೆಗಾಗಿ,  
ಇಡೀ ಊರೇ ಕೈಮುಗಿದು ನಿಂತಿದೆ.

ಮಳೆಯೇ ಬಾ, ಮಳೆಯೇ ಬಾ,  
ಜೀವನಕ್ಕೆ ಜೀವ ತುಂಬಲು ಬಾ ಭುವಿಗೆ .
ನೀನು ಬಂದರೆ  ನಮಗೆಲ್ಲ ಅನ್ನ ನೀರು
ನೀ ಬಾರದಿದ್ದರೆ  ನಮಗೆಲ್ಲಿ  ಬದುಕು

ಬಾ ಮಳೆಯೇ ಬಾ ಮಳೆಯೇ
ಬಾ ಬೇಗ ಭೂಮಿ ಕಾದಾರಿದೆ.


About The Author

Leave a Reply

You cannot copy content of this page

Scroll to Top