ಕಾವ್ಯ ಸಂಗಾತಿ
ಡಾ. ಹೆಚ್. ನಟರಾಜ್ ಆರ್ಯ
“ಸ್ವರ್ಗ ಮನದೊಳಿದೆ”


ಕಾಣದ ಸ್ವರ್ಗಕೆ
ಹಂಬಲವೇಕೆ
ಕಾಣುವ ಬದುಕನು
ಕಳೆವೆಯೇಕೆ
ಹುಟ್ಟಿದ ಉಸಿರು
ಹೊರಡಲೇಬೇಕು
ಈ ನಿತ್ಯ ಸತ್ಯವನು
ಮರೆವೆಯೇಕೆ
ನರಕದ ಭಯಕೆ
ನಡುಗುವೆಯೇಕೆ
ಮನದ ಗಾಯಕ್ಕಿಂತ
ದೊಡ್ಡದೇನಿದೆ
ಮೂರ್ತಿಯಲ್ಲ
ಅಮೂರ್ತದಲ್ಲ
ಕೊನೆಯ ತೀರ್ಪು
ಆತ್ಮಸಾಕ್ಷಿಯಲ್ಲವೇ
ಕೈಯಲಿ ಕರುಣೆ
ಮನದಲಿ ಪ್ರೀತಿ
ಬದುಕಲಿ ಮಾನವತೆ
ಸಾಕಲ್ಲವೇ
ಕಾಣುವ ಬದುಕೇ
ಕೈಯಲ್ಲಿರುವುದು
ಪ್ರೀತಿ ಇರುವೆಡೆ
ಸ್ವರ್ಗ ಇರುವುದು
ಮೂರು ದಿನದ ಬದುಕು
ನಗುನಗುತಾ ಸಾಗಲಿ
ಒಬ್ಬರ ನೋವಿಗೆ
ಇನ್ನೊಬ್ಬ ಕಾರಣವಾಗದಿರಲಿ
ಸ್ವರ್ಗ ನರಕವೆಲ್ಲ
ಮನದೊಳಿವೆ
ಮಾಡಿದ ಒಳಿತುಗಳೇ
ಉಳಿಯಲಿವೆ
ಡಾ. ಹೆಚ್. ನಟರಾಜ್ ಆರ್ಯ




Very true. It shows the reality of our life. God bless you.