ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಿಶಿರ

ಕವಿತೆ ಶಿಶಿರ ಎಂ.ಆರ್. ಅನಸೂಯ ನೆನಪಿಸುತ್ತಿಲ್ಲಶಿಶಿರದಇಬ್ಬನಿ ಹನಿಮುತ್ತಿನ ಮಣಿಯಕಾಡುತ್ತಿದೆಯಲ್ಲಇಬ್ಬನಿಯಹಿಮ ಕೊರೆವ ಚಳಿಯಲ್ಲೇರಾಜಧಾನಿಯ ಬಯಲಲ್ಲೇಕೂತ ರೈತನ ಪಾಡು !ಜತೆಯಲ್ಲೇಕಲ್ಲು ಮನದ ರಾಜನೂ ! ನೆನಪಿಸುತ್ತವೆಶಿಶಿರದಬೋಳು ಮರಗಳುಭರವಸೆ ಕಾಣದಕೃಷಿಕನ ಬವಣೆಯ ಬದುಕುಲಾಠಿ ಎತ್ತಿದ ಕೈಗೂರೊಟ್ಟಿಯಿತ್ತ ಅನ್ನದಾತನ ಕೂಗುಕೇಳಿಸದುಜಾಣ ಕಿವುಡಿನ ದೊರೆಗೆ ************************

ಶಿಶಿರ Read Post »

ಕಾವ್ಯಯಾನ

ಸಂ ‘ಕ್ರಾಂತಿ’

ಕವಿತೆ ಸಂ ‘ಕ್ರಾಂತಿ’ ತೇಜಾವತಿ ಹೆ್ಚ್.ಡಿ. ಪುರಾಣದ ನೋಟದಲಿ,ವಿಜ್ಞಾನವು ಇಣುಕಿಸಂಪ್ರದಾಯ ಮಾತನಾಡಿ,ಕೃತಜ್ಞತೆ ಕೈಹಿಡಿದನವ ಬದುಕಿನ ಸಂ’ಕ್ರಾಂತಿ’ಎಳ್ಳು-ಬೆಲ್ಲದೊಂದಿಗೆ ಕರಣದಲಿ ಕಳೆದುಹೋದಹೊಸ ಹುರುಪಿನ ಶ್ರವಣ ಪುಷ್ಯ ವೇಷ ಧರಿಸಿ ಹೊರಬರುತಿದೆ ನವಕ್ರಾಂತಿ ಧರೆ ಪರಿಭ್ರಮಿಸುವ ಗಳಿಗೆದಿನ ರಾತ್ರಿಹಗಲು ಇರುಳುಬೆಳಗು ಕತ್ತಲುಹೀಗೆ ಮಾಸ ಅಯನಗಳ ವರ್ತನೆಉತ್ತರಾಯಣ ತಿರುಗಿ ಸಂಕ್ರಮಣ ಮೂಡಿಬೆಳೆಯ ತಲೆಯ ಇಳೆಗೆ ಬಾಗಿಸುತಸೂರ್ಯರಶ್ಮಿ ಹೊಳಪು ನವಭಾವದ ಕಂಪು ಎಲ್ಲವುಗಳಂತಲ್ಲ ಈ ಹಬ್ಬ!ವರ್ಷವಿಡೀ ತನ್ನೊಡೆಯನಿಗಾಗಿ ದುಡಿದು ದಣಿದಜಾನುವಾರುಗಳ ಅಲಂಕರಿಸಿ,ಪೂಜಿಸಿಮೆರವಣಿಗೆ ಮಾಡಿ,ಕಿಚ್ಚು ಹಾಯಿಸಿಗೋವಿಗೂ ಕೃತಜ್ಞತೆಯ ಅರ್ಪಿಸುವ ಕಾಯಕಬ್ಬ ಹಾಡು ಪಾಡುಎಳ್ಳು ಬೆಲ್ಲ ಹಂಚುವನವೀನ ಪುರಾತನ ಮೌಲ್ಯಿಕರಿಸುವ ಪೃಥ್ವಿರಾಶಿ ರಾಶಿ ಹೊಳಪುಮಿರಿಮಿರಿ ಮಿಂಚುವ ಭೂಸೆರಗುತರತರ ಹೊಳೆವ ಹಸಿರು ಬಣ್ಣದೈಸಿರಿ ಸಂಕ್ರಾಂತಿ ಮೆರಗು ಈಗೀಗಮಾರ್ಗಶಿರ ಮಾರುದ್ದ ಮರೆತುಎಳ್ಳು-ಬೆಲ್ಲ ದಾರಿಲಿ ಉಳಿದುಮಿರಿ ಮಿರಿ ಮಿಂಚುವ ಕಣ್ಣಿಗೆಕಾಡಿಗೆ ಜೋಳ ಪಿಸುನಕ್ಕುಹಸಿರು ಬಸಿರಾಗದೇಪ್ರೇಮ ಕಳೆಕಟ್ಟುತ್ತಿದೆ ಭಾವನೆಗಳ ಬರಿದಾಗಿಅವನಿಯೂ ಅಷ್ಟೇ ಹೂ ಗಂಧ ಸಾಂಬ್ರಾಣಿಗಳ ಕರಕಲು ಮೆತ್ತಿಕೊಂಡಿದೆ ಕೊನೆಗೆ ನನ್ನವನ ಆಸೆಸಂಕ್ರಾಂತಿಯ ಸಂಸ್ಕೃತಿ ಮೂಡಿಸಂಪ್ರದಾಯ ಪ್ರೀತಿಯೊಂದಿಗೆ ಹೂರಣ ಹಬ್ಬಲಿ ವಿಶ್ವಾಸ-ಕೃತಜ್ಞತೆಜೊತೆಯಾಗಿ ಸಂ’ಕ್ರಾಂತಿ’ ನಡೆದುಹೋಗಲಿಸಂಕ್ರಾಂತಿ ಅಂಥದ್ದೇ ಆಗಿರಲಿ,ಬಣ್ಣ ಹೇಗಾದರೂ ಸರಿಸೆರಗು ಹಸಿರಾಗಲಿಹಸಿರು ಉಸಿರಾಗಲಿ

ಸಂ ‘ಕ್ರಾಂತಿ’ Read Post »

ಕಾವ್ಯಯಾನ

ಏಕತಾರಿಯ ಸಂಚಾರಿ ಸ್ವರಗಳು

ಕಾತ್ಯಾಯಿನಿ ಕುಂಜಿಬೆಟ್ಟು ಬರೆಯುತ್ತಾರೆ
ಹೊರ ದಾರಿಯಲ್ಲಿ ನೀನು ನಡೆದು ದೂರ ಹೋಗಿ ಬಿಡು
ನಿನ್ನದೇ ಕನಸುಗಳ ಊರಿಗೆ
ಕಡಲಾಚೆಯ ಆ ದೇಶಕೆ

ಏಕತಾರಿಯ ಸಂಚಾರಿ ಸ್ವರಗಳು Read Post »

ಇತರೆ, ಪ್ರಬಂಧ

ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ

ಲಲಿತ ಪ್ರಬಂಧ ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ… ಟಿ.ಎಸ್.ಶ್ರವಣಕುಮಾರಿ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ’ ಎಂದು ಹೇಳುವಂತೆ ‘ಸಲಾಂ ಸಾಬಿಗೂ ಸಂಕ್ರಾಂತಿಗೂ ಏನು ಸಂಬಂಧ’ ಎಂದು ಹುಬ್ಬೇರಿಸುತ್ತೀರೇನೋ! ಪ್ರತಿ ಸಂಕ್ರಾಂತಿಗೂ ಸಲಾಮನನ್ನು ನೆನಸಿಕೊಳ್ಳದೆ ನನಗೆ ಸಂಕ್ರಾಂತಿ ಹಬ್ಬ ಆಗುವುದೇ ಇಲ್ಲ. ಈಗೊಂದೈವತ್ತು ವರ್ಷಗಳ ಹಿಂದೆ ಜನಸಾಮಾನ್ಯರಿಗೆ ಶಿವಮೊಗ್ಗದಲ್ಲಿ ಸಂಚಾರಕ್ಕೆ ಇದ್ದದ್ದು ಎರಡೇ ರೀತಿ. ಮೊದಲನೆಯದು ನಟರಾಜ ಸರ್ವೀಸ್ ಅಂದರೆ ಕಾಲ್ನಡಿಗೆಯಲ್ಲಿ ಹೋಗುವುದು; ಇನ್ನೊಂದು ಕುದುರೆ ಗಾಡಿ. ಕಾರೆನ್ನುವುದು ಅತಿ ಶ್ರೀಮಂತರ ಸೊತ್ತು ಬಿಡಿ; ನಮದಲ್ಲ. ಊರಲ್ಲಿ ಎಷ್ಟು ಕಾರಿದ್ದವೆಂದರೆ ಓಡಾಡುತ್ತಿದ್ದ ಕಾರು ಇಂತವರದೇ ಎಂದು ಹೇಳುವಷ್ಟು! ಸೈಕಲ್ಲುಗಳು ಸ್ಕೂಟರಿನ ಸ್ಥಾನಮಾನವನ್ನು ಪಡೆದಿದ್ದವು. ಅಲ್ಲಿಲ್ಲಿ ಸುವೇಗಾದಂತಹ ಮೊಪೆಡ್ ಗಳು ‘ನಾವೂ ಇದ್ದೀವಿ’ ಎಂದು ಮುಖದೋರುತ್ತಿದ್ದವು. ಇಷ್ಟೆಲ್ಲಾ ಪರಟಾವಣೆ ಏತಕ್ಕೆಂದರೆ ನಾವೆಲ್ಲಾ ನಟರಾಜ ಸರ್ವೀಸಿನವರೇ ಆದರೂ, ನಮ್ಮಮ್ಮ ಮಾತ್ರ ಎಲ್ಲಿಗೆ ಹೋಗುವಾಗಲೂ ಅವರಿಗೆ ಕುದುರೆಗಾಡಿಯೇ ಬೇಕಿತ್ತು. ನಾವ್ಯಾರಾದರೂ ಅಮೀರ್ ಅಹ್ಮದ್ ಸರ್ಕಲ್ಲಿನವರೆಗೆ ಹೋಗಿ ತಂದು ಕೊಡಬೇಕಿತ್ತು. ಅಲ್ಲಿ ನಿಲ್ಲುತ್ತಿದ್ದ ಗಾಡಿಗಳಲ್ಲಿ ಮೊದಲ ಆಯ್ಕೆ ಸಲಾಮನ ಗಾಡಿ… ಕುದುರೆಯೆಂದರೆ ಸದಾ ಕಣ್ಮುಂದೆ ಬರುವ ಮಿರುಗುತ್ತಿದ್ದ ಕಂದು ಬಣ್ಣದ ಕುದುರೆ; ಹಸಿರು ಬಣ್ಣದ ಗಾಡಿಗೆ ಕೆಂಪಂಚಿನ ಮೇಲೆ ಚಿತ್ತಾರದ ಹೂಗಳು; ಗಾಡಿಯೊಳಗೆ ಹುಲ್ಲಿನ ಮೇಲೆ ಹಾಸಿದ್ದ ಗೋಣಿ ತಾಟು; ಅದರ ಮೇಲೊಂದು ಪುಟ್ಟ ಜಮಖಾನ ನಮ್ಮ ಸಲಾಮನ ರಥ. ಸಲಾಂ ನಮ್ಮಮ್ಮನ ಪರಮ ಶಿಷ್ಯರಲ್ಲೊಬ್ಬನಾಗಿದ್ದ. ಸರಿ; ಈಗ ನಮ್ಮ ಸಂಕ್ರಾಂತಿಗೆ ಮತ್ತೆ ಬರೋಣ. ಎಳ್ಳು, ಸಕ್ಕರೆ ಅಚ್ಚನ್ನು ತಯಾರಿಸಿಕೊಂಡಾದ ಮೇಲೆ ಮತ್ತೆ ಸಲಾಮನ ಗಾಡಿಯ ವಿಷಯಕ್ಕೆ ಬರೋಣ. ಹೆಂಗಸರಿಗಂತೂ ಈ ಹಬ್ಬ ಬಂದರೆ ಅದೆಷ್ಟು ಸಂಭ್ರಮವೋ.. ಹೊಸವರ್ಷ ಆರಂಭವಾಗುವಾಗಲೆ ಮನೆಗೆ ತರುವ ತಿಂಗಳ ದಿನಸಿ ಸಾಮಾನಿನ ಪಟ್ಟಿಯಲ್ಲಿ ಸಕ್ಕರೆ, ಬೆಲ್ಲ, ಹುರಿಗಡಲೆ, ಕಡಲೇ ಬೀಜ, ಕೊಬ್ಬರಿ ಮತ್ತು ಎಳ್ಳು ತಮ್ಮ ಹೆಸರನ್ನು ಬರೆಸಿಕೊಂಡು ಬಿಡುತ್ತಿದ್ದವು. ಜನವರಿ ಹದಿನಾಲ್ಕರಂದು ಇಲ್ಲವೇ ಹದಿನೈದರಂದು ಬರುವ ಸಂಕ್ರಾತಿ ಹಬ್ಬಕ್ಕೆ ಎರಡು ವಾರ ಮೊದಲೇ ಭರದಿಂದ ಸಿದ್ಧತೆಗಳು ಆರಂಭವಾಗುತ್ತಿದ್ದವು. ಆಗೆಲ್ಲಾ ಈಗಿನಷ್ಟು ಬೆಳ್ಳಗಿರುವ ಬೆಲ್ಲ ಸಿಗುತ್ತಿರಲಿಲ್ಲ. ಇರುವುದರಲ್ಲಿ ಬೆಳ್ಳಗಿರುವ ಬೆಲ್ಲವನ್ನು ಹುಡುಕಿಕೊಂಡು ಹೋಗಿ ತರಬೇಕಿತ್ತು. ಹೆಚ್ಚುವುದಕ್ಕೆ ಅಚ್ಚು ಬೆಲ್ಲವೇ ಸರಿ; ಹಿಡಿತಕ್ಕೂ ಸಿಗುತ್ತಿತ್ತು; ಹೆಚ್ಚು ಪುಡಿಯೂ ಆಗುತ್ತಿರಲಿಲ್ಲ. ಕೆಲವರು ಬೆಳ್ಳಗೆ ಕಾಣಬೇಕೆಂದು (ಅಥವಾ ಆ ರುಚಿಯೇ ಅವರಿಗೆ ಇಷ್ಟವಾಗುತ್ತಿತ್ತೇನೋ) ಬೆಲ್ಲದ ಬದಲು ಸಕ್ಕರೆಯ ಪಾಕವನ್ನು ತಟ್ಟೆಗೆ ಹೊಯ್ದು, ಕತ್ತರಿಸಿ ಎಳ್ಳಿನ ಮಿಶ್ರಣಕ್ಕೆ ಬೆರಸುತ್ತಿದ್ದರು. ಕೊಬ್ಬರಿ ವಿಪರೀತ ಗಟ್ಟಿ ಇರಬಾರದು; ಹೆಚ್ಚಲು ಅನುವಾಗುವಂತೆ ಸ್ವಲ್ಪ ಮೆತ್ತಗಿರಬೇಕು; ಬೆಳ್ಳಗಿರಬೇಕು; ಮುಗ್ಗುಲು ವಾಸನೆಯಾಗಲೀ, ಕೆಂಬಣ್ಣವಾಗಲೀ ಸಂಪೂರ್ಣವಾಗಿ ವರ್ಜ್ಯ. ಹೆಚ್ಚಿದ ನಂತರ ಬೆಲ್ಲ, ಕೊಬ್ಬರಿ ಎರಡೂ ಗರಿಗರಿಯಾಗುವ ಹಾಗೆ ಐದಾರು ದಿನ ಬಿಸಿಲಲ್ಲಿ ಒಣಗಬೇಕು. ಕಡಲೇ ಬೀಜವನ್ನು ಹುರಿಯುವುದೂ ಒಂದು ನಾಜೂಕಿನ ವಿಷಯವೇ. ಮಂದ ಉರಿಯಲ್ಲಿ ಬಿಡದೇ ಕೈಯಾಡುತ್ತಾ ಹುರಿಯಬೇಕು. ಇಲ್ಲವಾದರೆ ಸೀಯುವ ಕಾಳುಗಳು ಅಧಿಕ. ಸೀಯದಂತೆ ಕಾಪಾಡಲು ಕೆಲವರು ಮರಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಂಡು ಅದರ ಜೊತೆಯಲ್ಲಿ ಕಡಲೇಬೀಜವನ್ನು ಹಾಕಿ ಹುರಿದು ಜರಡಿಯಾಡಿ ತೆಗೆದುಕೊಳ್ಳುತ್ತಿದ್ದರು. ಈ ರೀತಿ ಹುರಿದದ್ದು ಒಂದೇ ಸಮನಾಗಿ ಹದವಾಗಿ ಬಾದಾಮಿಯ ಬಣ್ಣಕ್ಕೆ ಬರುತ್ತಿತ್ತು; ರುಚಿಯೂ ಉತ್ಕೃಷ್ಟವಾಗಿರುತ್ತಿತ್ತು. ನಮ್ಮ ಮನೆಯ ಬಳಿಯಿದ್ದ ಅಯ್ಯಂಗಾರರ ಮನೆಯಲ್ಲಿ ಕಾಫಿ ಬೀಜ ಹುರಿಯುವ ಒಲೆ ಇತ್ತು. ಒಂದು ಇಜ್ಜಿಲು ಒಲೆಯ ಮೇಲೆ ಅಡ್ಡಡ್ಡವಾಗಿ ಸಿಲೆಂಡರಿನಾಕಾರದ ಒಂದು ಮುಚ್ಚುಳವಿರುವ, ಹಿಡಿಕೆಯಿರುವ ಡಬ್ಬಿ; ಅದು ಒಲೆಯ ಕೆಂಡದ ಮೇಲೆ ಒಂದು ಅಂತರದಲ್ಲಿ ಕೂರುವಂತ ವ್ಯವಸ್ಥೆ. ಅದರೊಳಗೆ ಕಡಲೆಬೀಜವನ್ನು ತುಂಬಿ ಒಲೆಯ ಮೇಲಿಟ್ಟು ಹಿಡಿಕೆಯನ್ನು ತಿರುಗಿಸುತ್ತಿದ್ದರೆ ಆ ಡಬ್ಬಿ ಸುತ್ತುತ್ತಾ ಒಂದೇ ಹದದಲ್ಲಿ ಶಾಖವನ್ನು ಪಡೆದುಕೊಂಡು ಹದವಾಗಿ ಹುರಿದುಕೊಳ್ಳುತ್ತಿತ್ತು. ಇಂತಹ ಯಾವುದಾದರೂ ಒಂದು ರೀತಿಯಲ್ಲಿ ಕಡಲೇಕಾಯನ್ನು ಹುರಿದ ನಂತರ ಅದನ್ನು ಶುಭ್ರವಾದ ಒಂದು ಗೋಣಿ ಚೀಲದ ಮೇಲೆ ಹರಡಿಕೊಂಡು, ಅದರ ಮೇಲೆ ಮರದ ಮಣೆಯನ್ನು ಇಟ್ಟು ಉಜ್ಜಿದರೆ ಕಾಳುಗಳು ಸಿಪ್ಪೆಯನ್ನು ಬಿಟ್ಟುಕೊಂಡು ಬೇಳೆಗಳಾಗಿ ಒಡೆದುಕೊಳ್ಳುತ್ತಿದ್ದವು. ಆಮೇಲೆ ಅದನ್ನು ಮರದಲ್ಲಿ ಕೇರಿ, ಸಿಪ್ಪೆಯನ್ನೂ ನೂಕನ್ನೂ ತೆಗೆದು ಕೆಟ್ಟುಹೋದ, ಚೂರುಚೂರಾದ, ಸೀದುಹೋದ ಕಾಳುಗಳನ್ನೆಲ್ಲಾ ಆರಿಸಿ ತೆಗೆದು ಹಸನು ಮಾಡಬೇಕಿತ್ತು. ಈ ಕೆಲಸಕ್ಕೆ ನಾವು ಮಕ್ಕಳೆಲ್ಲಾ ಅತ್ಯಂತ ಉತ್ಸುಕರಾಗಿ ಸಹಾಯ ಮಾಡುತ್ತಿದ್ದೆವು. ಒಡೆದ, ಸ್ವಲ್ಪ ಸೀದ ಕಾಳುಗಳೆಲ್ಲಾ ನಮ್ಮ ಹೊಟ್ಟೆಗೇ ತಾನೆ! ಹಾಗಾಗಿ ಅಲ್ಪ ಸ್ವಲ್ಪ ಮುಕ್ಕಾದ ಕಾಳುಗಳಿಗೂ ಎಳ್ಳಿನೊಂದಿಗೆ ಬೆರೆಯುವ ಸೌಭಾಗ್ಯವಿರುತ್ತಿರಲಿಲ್ಲ. ಹುರಿಗಡಲೆಯಾದರೂ ಅಷ್ಟೇ ಹುರಿಯುವ ಕೆಲಸವೊಂದು ಇರುತ್ತಿರಲಿಲ್ಲ. ಹೀಗೆ ಆರಿಸುವಾಗ ಇನ್ನೂ ಸಿಪ್ಪೆಯಿಟ್ಟುಕೊಂಡ ಕಾಳುಗಳು, ಒಡೆದವು, ಕಡೆಗೆ ಸ್ವಲ್ಪ ಸೀಳಿಕೊಂಡವು ಕೂಡಾ ನಮ್ಮ ನೈವೇದ್ಯಕ್ಕೇ! ಆರಿಸುವಾಗ ಎಂಜಲು ಮಾಡಿಕೊಂಡು ತಿನ್ನಬಾರದು; ಎಲ್ಲವನ್ನೂ ಒಂದು ತಟ್ಟೆಗೋ, ಬಟ್ಟಲಿಗೋ ಹಾಕಿಕೊಂಡು ನಂತರ ತಿನ್ನಬಹುದು ಎನ್ನುವ ಅಮ್ಮನ ನಿಬಂಧನೆಗೆ, ಯಾವ ಪ್ರತಿರೋಧವೂ ಇಲ್ಲದೆ ಒಪ್ಪಿಕೊಂಡು ನಮಗೆ ಸಾಕೆನಿಸುವಷ್ಟು ಸರಕು ಸಿಕ್ಕ ತಕ್ಷಣ ಕೆಲಸ ಸಾಕಾಯಿತೆಂದು ಎದ್ದೋಡುತ್ತಿದ್ದೆವು. ಎಷ್ಟನ್ನು ಮಾಡಿಕೊಟ್ಟಿದ್ದರೆ ಅಷ್ಟೇ ಅಮ್ಮನ ಪುಣ್ಯ! ಎಳ್ಳನ್ನು ಶುದ್ಧಮಾಡುವುದೂ ಎರಡು ದಿನದ ಕೆಲಸವೇ. ಹಿಂದಿನ ದಿನವೇ ಎಳ್ಳನ್ನು ನೀರಿನಲ್ಲಿ ನೆನೆಯಿಟ್ಟು, ಮಾರನೆಯ ದಿನ ಬೆಳಗಿನ ಕೆಲಸವನ್ನೆಲ್ಲ ಮುಗಿಸಿಕೊಂಡು ಒಂದು ಶುಭ್ರವಾದ ಗೋಣಿಯ ಮೇಲೆ ನೆಂದ ಎಳ್ಳನ್ನು ಸ್ವಲ್ಪ ಸ್ವಲ್ಪವನ್ನೇ ಹಾಕಿಕೊಳ್ಳುತ್ತಾ ಅದು ಬೆಳ್ಳಗಾಗುವ ತನಕ ಉಜ್ಜುತ್ತಿದ್ದರು. ಎಳ್ಳು ಎಷ್ಟು ಬೆಳ್ಳಗಾಗಿದೆ ಎನ್ನುವುದರ ಮೇಲೆ ಉಜ್ಜುವವರ ಕಲಾನೈಪುಣ್ಯ ನಿರ್ಧಾರವಾಗುತ್ತಿತ್ತು. ಎಷ್ಟೋ ಜನರು ಕರಿಎಳ್ಳನ್ನು ಉಜ್ಜಿ ಬೆಳ್ಳಗೆ ಮಾಡಿರುವುದನ್ನೂ ನೋಡಿದ್ದೇನೆ. ಹೀಗೆ ಉಜ್ಜಿದ ಎಳ್ಳಿನ ಸಿಪ್ಪೆಯನ್ನೆಲ್ಲಾ ಕೇರಿ ಆರಿಸಿ ನಂತರ ಮಂದ ಉರಿಯ ಮೇಲೆ ಬಾಣಲೆಯ ಮೇಲೆ ಸ್ವಲ್ಪ ಸ್ವಲ್ಪವನ್ನೇ ಹಾಕಿಕೊಂಡು, ಹೊಸ ಪೊರಕೆ ಕಡ್ಡಿಯನ್ನು ಮಧ್ಯಭಾಗಕ್ಕೆ ಕಟ್ಟಿಕೊಂಡು, ಕಡ್ಡಿಯ ಕಡೆಯ ಭಾಗದಿಂದ ಅದನ್ನು ಘಮ್ಮೆನ್ನುವ ಹಾಗೆ, ಹದವಾಗಿ ಹುರಿಯುತ್ತಿದ್ದರು. ಹೀಗೆ ವಾರ, ಹತ್ತು ದಿನದ ಶ್ರಮದ ನಂತರ ಸಂಕ್ರಾಂತಿ ಎಳ್ಳು ತಯಾರಾಗುತ್ತಿತ್ತು. ಯಾರ ಮನೆಯ ಎಳ್ಳು ಬಂದರೂ ಅದರ ಬಣ್ಣ, ರುಚಿ, ವಾಸನೆಗಳ ಮೌಲ್ಯಮಾಪನವಾಗಿ ಅವರ ಪರಿಶ್ರಮವು ವಿಮರ್ಶೆಗೆ ಒಳಗಾಗುತ್ತಿತ್ತು! ಪೂರ್ತಿ ತಯಾರಾಗಿರುವ ಮಿಶ್ರಣ, ಇಲ್ಲವೇ ಅಭಿರುಚಿಗೆ ತಕ್ಕಂತೆ ಬೆರೆಸಿಕೊಳ್ಳಲು ಸಿದ್ಧಪಡಿಸಿದ ವಸ್ತುಗಳು ಸಿಗುತ್ತಿರುವ ಈ ದಿನಗಳಲ್ಲಿ ಅಂದಿನ ಕಷ್ಟವೂ ಇಲ್ಲ; ಸಂಭ್ರಮವೂ ಇಲ್ಲ ಬಿಡಿ. ಇನ್ನು ಸಕ್ಕರೆ ಅಚ್ಚನ್ನ ತಯಾರಿಸುವುದಂತೂ ಒಂದು ದೊಡ್ಡ ಕಲೆಯೇ. ಪರಿಶ್ರಮವೂ ಬಹಳ. ಹಳಕುಹಳಕಾದ ಸಕ್ಕರೆಯನ್ನು ಅದು ಮುಳುಗುವಷ್ಟೇ ನೀರಿನಲ್ಲಿ ನೆನೆಯಿಟ್ಟು ನಂತರ ಅದನ್ನು ಕುದಿಸಿ, ಕುದಿಯುತ್ತಿರುವಾಗ ಒಮ್ಮೆ ಹಾಲು ಹಾಕಿ ಅದನ್ನು ಬೆಳ್ಳಗಿರುವ ಪಂಚೆಯ ಬಟ್ಟೆಯಲ್ಲಿ ಶೋಧಿಸಿಕೊಂಡು, ನಂತರ ಇನ್ನೊಮ್ಮೆ ಮೊಸರು ಹಾಕಿ ಕುದಿಸಿ ಶೋಧಿಸಿದ ಮೇಲೆ ಪಾಕ ಎಷ್ಟು ಬೆಳ್ಳಗಾಯಿತೆಂಬುದರ ಮೇಲೆ ಇನ್ನೊಮ್ಮೆ ಕುದಿಸಿ ಶುಚಿಮಾಡಬೇಕೇ ಎನ್ನುವುದು ನಿರ್ಧಾರವಾಗುತ್ತಿತ್ತು. ಅಟ್ಟದ ಮೇಲಿಟ್ಟಿದ್ದ ಮರದ ಅಚ್ಚುಗಳನ್ನು ಹಿಂದಿನ ದಿನವೇ ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಯಲು ಬಿಡುತ್ತಿದ್ದರು. ಇನ್ನು ಅಚ್ಚು ಹಾಕುವ ಕಾರ್ಯಕ್ರಮಕ್ಕಂತೂ ಕನಿಷ್ಟ ಇಬ್ಬರಾದರೂ ಬೇಕೇ ಬೇಕು. ನಾಲ್ಕೈದು ಜನ ಸೇರಿದರೆ ಕೆಲಸ ಸುಲುಭ. ಹಾಗಾಗಿ ಅಕ್ಕಪಕ್ಕದವರೆಲ್ಲಾ ಸೇರಿಕೊಂಡು ಸಂತೋಷವಾಗಿ, ಸಹಕಾರಿ ಮನೋಭಾವದಿಂದ ಮಾಡುತ್ತಿದ್ದುದೇ ಹೆಚ್ಚು. ಶುದ್ಧವಾದ ಪಾಕವನ್ನು ಒಂದೋ ಎರಡೋ ಸೌಟನ್ನು ಒಂದು ತಪ್ಪ ತಳದ ಪಾತ್ರೆಗೆ ಹಾಕಿಕೊಂಡು ಪುಟ್ಟ ಇಜ್ಜಿಲ ಒಲೆಯ ಮೇಲೋ, ಇಲ್ಲವೇ ಬತ್ತಿಯ ಸೀಮೆಣ್ಣೆಯ ಸ್ಟೌವ್ ಮೇಲೋ ಬಿಸಿ ಮಾಡುತ್ತಾ, ಆಗಾಗ ಪಾಕದ ಹದ ನೋಡುತ್ತಾ, ಪಾಕ ಸೌಟಿನಿಂದ ಪಾತ್ರೆಯವರೆಗೆ ಒಂದು ನೂಲಿನಂತೆ ನಿಂತರೆ ಅದು ಪಾಕದ ಸರಿಯಾದ ಹದ. ತಕ್ಷಣ ಅದನ್ನು ಕಂಚಿನ ಬೋಗುಣಿಗೆ ಸುರಿದುಕೊಂಡು ಸಿದ್ಧಮಾಡಿಟ್ಟುಕೊಂಡಿದ್ದ ಇನ್ನೊಂದು ಒಬ್ಬೆ ಪಾಕವನ್ನು ಒಲೆಯ ಮೇಲಿಟ್ಟು, ಬೋಗುಣಿಯಲ್ಲಿದ್ದ ಪಾಕವನ್ನು ಸೌಟಿನಿಂದ ತಿಕ್ಕುತ್ತಾ ಅದು ಮಂದ ಬಿಳಿಛಾಯೆಗೆ ತಿರುಗಿದೊಡನೆ, ನೀರಿನಿಂದ ಹೊರತೆಗೆದು ಮಲ್ ಪಂಚೆಯ ಬಟ್ಟೆಯಲ್ಲಿ ಒರೆಸಿ ಜೋಡಿಸಿ ದಾರ ಕಟ್ಟಿಯೋ, ರಬ್ಬರ್ ಬ್ಯಾಂಡ್ ಹಾಕಿಕೊಂಡೋ ತಯಾರಾಗಿ ಮಣೆಯ ಮೇಲೆ ಕುಳಿತಿರುತ್ತಿದ್ದ ಅಚ್ಚಿನ ಬಾಯಿಗೆ ನಾಜೂಕಾಗಿ ಸುತ್ತಲೂ ಚೆಲ್ಲದಂತೆ, ಹಾಗೆ ಸುರಿಯುವಾಗ ಪಾಕ ಪೂರ್ತಿಯಾಗಿ ಒಳಸೇರುವಂತೆ ಕುಟ್ಟಿ ಕುಟ್ಟಿ ಅದು ತುಂಬುವಷ್ಟು ಪಾಕವನ್ನು ತುಂಬಿಸುವುದು ಜಾಣತನದ ಕಲೆಯೇ. ಅದು ಒಣಗಿದ ಮೇಲೆ ಮೇಲಿನ ಹೆಚ್ಚಿನ ಭಾಗವನ್ನು ಹೆರೆದು, ಅದರ ಕಟ್ಟನ್ನು ಬಿಚ್ಚಿ ನಾಜೂಕಾಗಿ ಹಿಡಿದುಕೊಂಡು, ಎಚ್ಚರಿಕೆಯಿಂದ ಅಚ್ಚಿನಿಂದ ಬಿಡಿಸಿ ತಟ್ಟೆಯ ಮೇಲಿರಿಸಿದರೆ ಅಲ್ಲಿಗೆ ಅದರ ಕೆಲಸ ಸಂಪೂರ್ಣ. ಕೆಲವೊಮ್ಮೆ ಕೋಳಿಯ ಕಾಲೋ, ಬಸವನ ಮೂತಿಯೋ, ಮೀನಿನ ಬಾಲವೋ ಮುರಿದು ಕೈಗೆ ಬರುತ್ತಿತ್ತು. ಆಗ ತಕ್ಷಣವೇ ತಿಕ್ಕುತ್ತಿದ್ದ ಬಿಸಿ ಪಾಕದಲ್ಲಿ ಅದರ ಅಂಟಿಕೊಳ್ಳಬೇಕಿರುವ ಭಾಗವನ್ನು ಸ್ವಲ್ಪ ಅದ್ದಿ ಇನ್ನೊಂದು ಭಾಗಕ್ಕೆ ಅಂಟಿಸಿ, ಹಾಗೆಯೇ ಇಟ್ಟುಕೊಂಡಿದ್ದು, ಸ್ವಲ್ಪ ಅಂಟಿಕೊಂಡ ನಂತರ ತಟ್ಟೆಯ ಮೇಲೆ ಕೆಲಕಾಲ ಮಲಗಿಸಿದರೆ ಶಸ್ತ್ರಕ್ರಿಯೆಯಾದ ರೋಗಿ ಆರೋಗ್ಯವಂತನಾಗಿ ಏಳುವಂತೆ, ಸ್ವಲ್ಪ ಕಾಲದ ನಂತರ ಎದ್ದು ನಿಲ್ಲಲು ಶಕ್ತವಾಗುತ್ತಿದ್ದವು. ಈ ಶಸ್ತ್ರಕ್ರಿಯೆ ವಿಫಲವಾದರೆ ಕೋಳಿ, ಮೀನು, ಮಂಟಪ, ಜಿಂಕೆಗಳೆಲ್ಲಾ ಸುತ್ತಲೂ ಬಕಗಳಂತೆ ಕಾಯುತ್ತಿದ್ದ ಮಕ್ಕಳ ಬಾಯಿ ಪಾಲಾಗುತ್ತಿದ್ದವು! ಮಣೆಯ ಮೇಲೆ ಅಲ್ಪ ಸ್ವಲ್ಪ ಚೆಲ್ಲಿದ್ದ ಪಾಕ ಮತ್ತು ಮಕ್ಕಳ ಬಾಯಿಗೆ ಬೀಳದೆ ಉಳಿದುಕೊಂಡಿದ್ದ ತುಂಡುಗಳು ಬಣ್ಣವನ್ನು ಬೆರೆಸಿಕೊಂಡು ಮತ್ತೊಮ್ಮೆ ಜನ್ಮ ತಾಳುತ್ತಿದ್ದವು. ಒಂದೇ ಅಚ್ಚಿನಲ್ಲಿ ಎರಡು ಮೂರು ಬಣ್ಣದ ಪಾಕವನ್ನು ಸುರಿದು ಬಣ್ಣ ಬಣ್ಣವಾದ ಸಕ್ಕರೆಗೊಂಬೆಗಳನ್ನು ಮಾಡುವ ಪ್ರವೀಣರೂ ಇದ್ದರು! ಇದೇ ಸಕ್ಕರೆ ಪಾಕವನ್ನು ಉಪಯೋಗಿಸಿಕೊಂಡು ಬಾಣಲೆಗೆ ಎಳ್ಳನ್ನೋ, ಸೀಮೇ ಅಕ್ಕಿಯನ್ನೋ ಸ್ವಲ್ಪ ಹಾಕಿಕೊಂಡು, ಸ್ವಲ್ಪ ಸ್ವಲ್ಪವಾಗಿ ಅದಕ್ಕೆ ಸಕ್ಕರೆ ಪಾಕವನ್ನು ಹಾಕಿಕೊಳ್ಳುತ್ತಾ ಎಳ್ಳನ್ನು ಹುರಿಯುವ ಹಾಗೆ ನಿಧಾನವಾಗಿ ಹುರಿಯುತ್ತಾ ಕುಸುರೆಳ್ಳನ್ನೂ ಕೆಲವರು ಮಾಡುತ್ತಿದ್ದರು. ಹಾಗೆಯೇ ಇದೇ ಪಾಕವನ್ನು ಚೆನ್ನಾಗಿ ಉಜ್ಜಿ ಬೆಣ್ಣೆಯ ಉಂಡೆಯಂತೆ ಮಾಡಿಕೊಂಡು ಅದರಲ್ಲಿ ಮಣಿಗಳನ್ನು ಮಾಡಿ, ಅದನ್ನು ರಸ್ತು ಗುಂಡಿನೊಡನೆ ಪೋಣಿಸಿ, ಸರವನ್ನು ಮಾಡುತ್ತಿದ್ದರು. ಸಂಜೆ ಅದನ್ನು ಎಳೆಯ ಮಕ್ಕಳ ಕೊರಳಿಗೆ ಹಾಕಿ, ಕಬ್ಬಿನ ತುಂಡು, ಬೋರೆ ಹಣ್ಣು (ಎಲಚಿ ಹಣ್ಣು) ಮತ್ತು ಕಾಸನ್ನು ಸೇರಿನ ತುಂಬಾ ತುಂಬಿಸಿ ಅದನ್ನು ಮಕ್ಕಳ ತಲೆಯ ಮೇಲೆ ಎರೆದು ಆರತಿ ಮಾಡುವ ಪದ್ಧತಿಯೂ ಕೆಲವರಲ್ಲಿ ಇತ್ತು. ಇಡೀ ಸೇರಿಗೆಲ್ಲಾ ಒಂದೆರಡು ರೂಪಾಯಿನಷ್ಟು ಚಿಲ್ಲರೆ ಕಾಸುಗಳಿದ್ದರೂ ಅದು ಬೀಳುವುದೇ ತಡ ಎಲ್ಲರೂ ಅದನ್ನು ಬಾಚಿಕೊಂಡು ಸಂಭ್ರಮಿಸುತ್ತಿದ್ದುದೇ ಒಂದು ಚಂದ! ಈಗ ಮತ್ತೆ ನಮ್ಮ ಸಲಾಮನ ವಿಚಾರಕ್ಕೆ ಬರೋಣ. ಎಳ್ಳು, ಸಕ್ಕರೆ ಅಚ್ಚು ಮಾಡಿದರಷ್ಟೇ ಆಗಲಿಲ್ಲ; ಅದನ್ನು ಮಾಡುವುದೇ ಬಾಳೆಹಣ್ಣು ಮತ್ತು ಕಬ್ಬಿನೊಂದಿಗೆ ಬಂಧು, ಬಳಗ, ನೆಂಟರಿಷ್ಟರು, ಸ್ನೇಹಿತರ ಮನೆಗೆ ಹೋಗಿ ಬೀರುವುದಕ್ಕೆ. ಅಕ್ಕಪಕ್ಕದ ಮನೆಗಳಿಗೇನೋ ಹೋಗಿ ಬೀರಿ ಬರಬಹುದು. ದೂರದೂರದ ಮನೆಗಳಿಗೆ ನಡೆದುಕೊಂಡು ಹೋಗುವುದಾದರೆ ಅದೇ ಸಂಜೆಯಲ್ಲಿ ಎಲ್ಲರ ಮನೆಗೂ ಹೋಗಿ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಆದಿನ ನಮಗೆ ಸಲಾಮನ ಗಾಡಿಯ ರಥಯಾತ್ರೆ! ನಮ್ಮಮ್ಮ ಎಲ್ಲಿಗೆ ಹೋಗಬೇಕಾದರೂ ಹೆಚ್ಚಾಗಿ ಅವನ ಗಾಡಿಯಲ್ಲೇ ಹೋಗುತ್ತಿದ್ದುದರಿಂದ, ಅವನಿಗೆ ನಮ್ಮ ಬಂಧು, ಬಳಗ, ಗುರುತು ಪರಿಚಯದವರೆಲ್ಲರ ಮನೆಯೂ ಗೊತ್ತಿತ್ತು. ಆದಿನ ಮದ್ಯಾನ್ಹ ನಾಲ್ಕು ಗಂಟೆಯ ಒಳಗಾಗಿ ಬರುವಂತೆ ಅಮ್ಮ ಅವನಿಗೆ ಮೊದಲೇ ಹೇಳಿಟ್ಟಿರುತ್ತಿದ್ದರು. ಅಂತೆಯೇ ಅವನು ಬಂದಾಗ ನಮ್ಮನ್ನು ಕರೆದುಕೊಂಡು ಹೋಗಬೇಕಾದ ಒಂದು ಇಪ್ಪತ್ತೈದು, ಮೂವತ್ತು ಮನೆಗಳನ್ನು ಹೇಳುತ್ತಿದ್ದರು. ಆರು ವರ್ಷದ ನಾನು, ನಾಲ್ಕು ವರ್ಷದ ನನ್ನ ತಂಗಿ ಇಬ್ಬರನ್ನೇ

ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣಬರಹ ಗೊಂಬೆಗೆ ತೊಡಿಸಿದ ಬಣ್ಣದ ಅಂಗಿ ಅಳು ತಡೆಯದಾದಾಗ ಆಸರೆಯಾಗುತ್ತಿದ್ದದ್ದು ಒಂದೋ ಅಜ್ಜಿಯ ಮಡಿಲು, ಇಲ್ಲವಾದರೆ ಆ ತಾಯಿಯಂತಹ ಮರದ ತಣಿಲು. ದಪ್ಪದಪ್ಪದ ಎರಡು ಕಾಂಡಗಳು ಬುಡವೊಂದೇ,ಹೆಗಲೆರಡು ಎಂಬ ಹಾಗೆ ನಿಂತಿದ್ದ ಆಲದ ಮರ. ಅದನ್ನು ಅಪ್ಪಿ ಹಿಡಿದು ನಿಂತರೆ ಎಂತಹಾ ದುಗುಡ,ಭಯ,ದುಃಖವನ್ನೂ ಅದು ಹೀರಿ ನಾನು ಹಗುರವಾಗುತ್ತಿದ್ದೆ. ಯಾವುದೋ ಜನ್ಮಾಂತರದ ಬಂಧದ ಸಾಕ್ಷಿಯೇನೋ ಎಂಬಂತೆ ಮುಖ್ಯ ರಸ್ತೆಯ ಒಂದು ಬದಿಗೆ ಉದ್ದದ ನೆರಳು ಹಾಸಿ ನಿಂತ ಆಲದ ಮರವದು. ಅದರ ಪಕ್ಕದಲ್ಲೇ ತುಸು ಅಂತರ ಕಾಪಾಡಿಕೊಂಡು ಬಂದಂತೆ ಇರುವ ನೇರಳೆಮರ ‌ಎರಡು ಮರಗಳ ನಡುವೆ ಹಿಂಬದಿಯಲ್ಲಿ ಪುಟ್ಟ ದೇಹದ ನೆಕ್ಕರೆ ಮಾವಿನ ಮರ, ಬಾಲ್ಯದ ನಮ್ಮ ಒಡನಾಡಿಗಳು. ಆ ಆಲದ ಮರದ ಬಿಳಲುಗಳನ್ನು ಹಿಡಿದು ನೇತಾಡುತ್ತಿದ್ದದ್ದು ,ಉಯ್ಯಾಲೆ ಆಡಿದ್ದೂ, ಅಂಗೈ ಗುಲಾಬಿಯಾಗಿ ಫೂ.ಫೂ ಎಂದು ಊದಿ ಉರಿ ಕಡಿಮೆಯಾಗಿಸಿಕೊಂಡದ್ದು..ನೇರಳೆ ಮರದ ಅಡಿಯಲ್ಲಿ ಕಾದು ಕಾದು ನೇರಳೆ ಹಣ್ಣ ಹೆಕ್ಕಿ ತಿಂದು ಬಾಯಿ ಮಾತ್ರವಲ್ಲ ಅಂಗಿ ಕೂಡ ಬಣ್ಣ ಮಾಡಿಕೊಳ್ಳುತ್ತಿದ್ದೆವು. ಮಳೆಗಾಲದಲ್ಲಿ ಜೋರಾಗಿ ಗಾಳಿ ಬೀಸಿ ಮಳೆ ಹನಿಯುವ ಮೊದಲೇ ಡುಮ್ ಡುಮ್ ಎಂದು ಈ ಕುಳ್ಳ ಮಾವಿನ ಮರ ಹಣ್ಣು ಬಿಸಾಕುತ್ತಿತ್ತು. ನಾವು ಒದ್ದೆಯಾಗುವ ಭಯವಿಲ್ಲದೆ ಓಡಿ ಹೋಗಿ ಹೆಕ್ಕುತ್ತಿದ್ದೆವು. ಆಲದ ಮರದ ಬುಡದಲ್ಲಿ ಕುಳಿತು ಮಾವಿನ ಹಣ್ಣು ಚೀಪುತ್ತಿದ್ದೆವು. ಈ  ಮರಗಳ ನೆರಳನ್ನು ದಾಟಿ ಮುಂದೆ ಹೋಗುವಾಗ ಲೆಕ್ಕಮಾಡಿ ಮೂರೇ ಮನೆ.  ಒಂದು ನನ್ನ ಗೆಳತಿಯ ಮನೆಯಾದರೆ, ಮತ್ತೆ ಪುಟ್ಟದಾದ ಮನೆ ಬೇಬಿಯವರದ್ದು. ಅಲ್ಲಿ ಕಡ್ಡಿ ದೇಹದ,ಎಲುಬಿನ ಹಂದರ ಕಾಣುವಂತೆ ಇರುವ ಅವರ ಐದಾರು ಗಂಡು ಮಕ್ಕಳು.ನಂತರದಲ್ಲಿ ಸಿಗುವುದು  ಬೆಂಕಿಯ ಎದುರು ಊದುಗೊಳವೆ ಹಿಡಿದು ಕಬ್ಬಿಣದ ಉದ್ದದ  ಕಡ್ಡಿ ಹಿಡಿದು ಕೆಲಸ ಮಾಡುವ ಮಾಧವ ಆಚಾರಿಯವರ ಅಂಗಡಿ. ಅಂಗಡಿ ಅಗಲಕ್ಕೆ ಬಾಯಿ ತೆರೆದು ಕೂತಿದ್ದರೆ ಅದರದ್ದೇ ಹಲ್ಲಿನಂತೆ ಎದುರು ಮೆಟ್ಟಲಿನಲ್ಲೇ ಕೂತುಕೊಳ್ಳುವ ಅವರ ಹೆಂಡತಿ,ಮಗಳು ಕಲಾವತಿ. ಅವರು ನಮಗೆ ಕಲಾವತಿಯಕ್ಕ. ರಜೆ ಬಂದಾಗ ಅಥವಾ ಇಳಿಸಂಜೆಗೆ ಎರಡು ಮನೆಯ ನಡುವಿನ ಓಣಿಯಲ್ಲಿ ನಡೆದು ಅವರ ಮನೆಯ ಕಿಟಕಿ ಬಳಿ ನಿಂತು ಕರೆಯಬೇಕು. ಕಲಾವತಿಯಕ್ಕ ಬಣ್ಣಬಣ್ಣದ ಪುಟ್ಟಪುಟ್ಟ ಬಣ್ಣದ ಬಾಟಲು ಹಿಡಿದು ಬರುತ್ತಾರೆ. ನಾವು ಕಿಟಕಿಯಿಂದ ನಮ್ಮ ಕೈ ಒಳಗೆ ತೂರಿಸಿದರೆ ಚುಮ್ ಅಂತ ತಂಪು ಉಗುರಿಗೆ ಇಳಿದು ಬಣ್ಣ ಕೈ ಬೆರಳಿನ ಉಗುರನ್ನು ತುಂಬಿಕೊಳ್ಳುತ್ತದೆ. ಎಷ್ಟು ಬಗೆಯ ಬಣ್ಣಗಳು. ಹಚ್ಚಿದ ನಂತರ ಅವರ ಎಚ್ಚರಿಕೆ.  ” ಅಂಗಿಗೆ ತಾಗಿಸಬಾರದು. ಹಾಳಾದರೆ ಮತ್ತೆ ಹಚ್ಚುವುದಿಲ್ಲ”  ಕೆಲವೊಮ್ಮೆ ಅವರ ಅಮ್ಮ ಕಿಟಕಿಯಲ್ಲಿ ಹಣಕಿ ಗದರಿಸುವುದೂ ಇದೆ.  ” ಹೋಗಿ, ಹೋಗಿಯಾ..ಅವಳಿಗೆ ಮನೆಯಲ್ಲಿ ಕೆಲಸ ಇಲ್ಲವಾ” ರಂಗದ ಬಣ್ಣಗಳು ನಮ್ಮನ್ನು ನಮ್ಮಿಂದ ಪಲ್ಲಟಗೊಳಿಸುತ್ತ ಬೇರೇನೇನನ್ನೋ ಸೇರಿಸುತ್ತ ಹೋಗುವಾಗ ಕಲಾವತಿಯಕ್ಕನ ಚಿಕ್ಕಚಿಕ್ಕ ಬಣ್ಣದ ಬಾಟಲುಗಳ ದ್ರವ ನಮ್ಮನ್ನು ಸ್ಪರ್ಶಿಸಿ ಘನವಾಗುತ್ತಿದ್ದ ನೆನಪುಗಳು ಆಪ್ತವೆನಿಸಿಕೊಳ್ಳುತ್ತದೆ. ಕಲಾವತಿಯಕ್ಕನವರ ಅಂಗಡಿ( ಅವರನ್ನೂ) ಸವರಿದಂತೆ ದಾಟಿ ಹೋದರೆ  ನಾರಾಯಣಮಾಮನ ಅಂಗಡಿ. ಊರವರಿಗೆ ಅದು ಕಾಮತ್ರ ಅಂಗಡಿಯಾದರೆ ನಮಗೆ ಮಕ್ಕಳಿಗೆ ಮಾತ್ರ  ನಾರಾಯಣ ಮಾಮನ ಅಂಗಡಿ. ಅವರು ಆ ಅಂಗಡಿಯಲ್ಲಿ ಕೆಲಸಕ್ಕೆ ಇರುವುದು. ಜಿನಸು ಅಂಗಡಿಯಲ್ಲಿ ತೊಗರಿ,ಉದ್ದು,ಮೆಣಸು ಸಾಸಿವೆ ಕಾಗದದ ಪೊಟ್ಟಣದಲ್ಲಿ ಕೊಡುವುದು ಅಂದಿನ ಕ್ರಮ. ಆಗ ಪ್ಲಾಸ್ಟಿಕ್ ಉಪಯೋಗ ಬಹಳ ಇದ್ದ ನೆನಪಿಲ್ಲ. ಆ ಅಂಗಡಿಗೆ ರಾಶಿ ಪೇಪರ್, ಪುಸ್ತಕಗಳು ಬಂದು ಬೀಳುತ್ತಿತ್ತು. ಬಿಡುವಿನ ವೇಳೆಯಲ್ಲಿ ಇವರಿಗೆ ಅದನ್ನು ಪರಪರಪರ ಹರಿದು ತನಗೆ ಬೇಕಾಗುವ ಅಳತೆಗೆ ತುಂಡು ಮಾಡುವ ಕೆಲಸ. ಪುಸ್ತಕಗಳೂ ಬರುತ್ತಿದ್ದವು.  ನಾವು ಅಂಗಡಿಗೆ ಸಾಮಾನು ತರಲು ಹೋಗಿ ಪಟ್ಟಿಯಲ್ಲಿರುವ ಪೊಟ್ಟಣಗಳು ನಮ್ಮ ಚೀಲ ಸೇರಿದರೂ ಚಾಕಲೇಟಿಗೆ ಕಾಯುವ ಹಾಗೆ ಸುಮ್ಮನೆ ಅವರ‌ ಮುಖ ನೋಡುತ್ತಾ‌ ನಿಲ್ಲುವುದು. ಅವರು ಸನ್ನೆಯಲ್ಲೇ ಮೂರು, ಎರಡು, ಆಮೇಲೆ, ಇಲ್ಲ ಹೀಗೆ ಸಂದೇಶ ರವಾನಿಸುವುದು.  ನಮ್ಮನ್ನು ಅವರ ರೂಮಿನ ಬಳಿ ಆದಿತ್ಯವಾರ ಬರ ಹೇಳುವುದೂ ಇತ್ತು.  ಆದಿತ್ಯವಾರ ಅವರಿಗೆ ರಜೆ. ಅಲ್ಲಿ ಈ ಮಾಮನ ಕೋಣೆಯಲ್ಲಿ ರಾಶಿ ಚಂದಮಾಮ ಮಾತ್ರವಲ್ಲ ಬಗೆಬಗೆಯ ಕಥೆ, ಚಿತ್ರದ ಪುಸ್ತಕಗಳು.  ಚಂದಮಾಮ ಪುಸ್ತಕದ ಕಥೆಗಳು, ಜತೆಗೆ ಅದರೊಳಗಿನ ಅನೇಕ ಚಿತ್ರಗಳು ನನಗೆ ಅಚ್ಚುಮೆಚ್ಚು. ಪುಟಪುಟಗಳಲ್ಲೂ ಕಥೆಯ ಮೇಲ್ಗಡೆ, ಎಡಬದಿ ಅಚ್ಚಾದ ಹಲವು ಭಾವಾಭಿನಯದ,ಕತೆಗೆ ಹೊಂದುವ ಚಿತ್ರಗಳು  ನೇರ ಇಳಿದುಬಂದು ಮನಸ್ಸಿನೊಳಗೆ ಜಾಗ ಹಿಡಿದು ಕೂರುತ್ತಿದ್ದವು. ಆ ಚಿತ್ರಗಳ ಹಾಗೆಯೇ ಮುಖಾಭಿನಯ ಮಾಡುವ ಹುಚ್ಚು ನನಗೆ.  ಹೊಸಹೊಸ, ನವನವೀನ ಪಾತ್ರಗಳು ಭಿತ್ತಿಯಲ್ಲಿ ಆಟವಾಡುತ್ತಿದ್ದವು. ಕಲ್ಪನೆಯ ಲೋಕದ ಅನಿಯಂತ್ರಿತ ದಂಡಯಾತ್ರೆಗೆ ಇವುಗಳು ಸುರಿದು ಕೊಟ್ಟ ಕಪ್ಪ ಕಾಣಿಕೆ ಅಷ್ಟಿಷ್ಟಲ್ಲ. ಈಗಲೂ ವರ್ತಕ, ಬೇತಾಳ, ರಾಜ, ರಾಜಕುಮಾರಿ, ರೈತ ಎಂಬ ಪದದ ಒಳಗಿನ ಆತ್ಮದಂತೆ ಈ ಚಿತ್ರಗಳು ತೆರೆದುಕೊಳ್ಳುವ ಪರಿ, ಆ ವಿಸ್ಮಯ ಅನುಭವಿಸಿದವರಿಗಷ್ಟೇ ವೇದ್ಯ. ರಂಗದಲ್ಲೂ ಹೀಗೇ ತಾನೇ!. ಪುಟಪುಟಗಳನ್ನು ತಿರುಗಿಸಿದಂತೆ ಪಾತ್ರಗಳು ಬದಲಾಗುತ್ತಾ ನಾವು ನಾವಲ್ಲದ ನಾವೇ ಆಗಿ ತೆರೆದುಕೊಳ್ಳುವ ಸೋಜಿಗ. ನನ್ನ ಬಣ್ಣದ ಲೋಕದ ಬಾಗಿಲೇ ಚಂದಮಾಮ. ಅಂತಹ ಚಂದಮಾಮದ ರಾಶಿ ಹಾಕಿ ಕಬ್ಬಿಣದ ತುಂಡನ್ನು ಸೆಳೆಯುವ ಆಯಸ್ಕಾಂತದಂತೆ ನಮ್ಮನ್ನು ಈ ನಾರಾಯಣ ಮಾಮ ಆಟವಾಡಿಸುತ್ತಿದ್ದ. ಕೆಲವೊಮ್ಮೆ ಮಾತ್ರ ವಿಪರೀತ ಸಿಡುಕಿ ಕೋಲು ತೋರಿಸಿ ಹೆದರಿಸುತ್ತಿದ್ದುದೂ ಉಂಟು.    ಆದಿತ್ಯವಾರ ನಮಗೆ ಭಾರೀ ಕೆಲಸಗಳು. ಈ ನಾರಾಯಣ ಮಾಮನ ರೂಮಿನ ತಲಾಶ್ ಮುಗಿಸಿ ಒಂದಷ್ಟು ಪುಸ್ತಕ ಕೈ,ಕಂಕುಳಲ್ಲಿಟ್ಟು ಹೊರ ಬಂದರೆ ಮುಖ್ಯರಸ್ತೆ. ರಸ್ತೆಯ ಇನ್ನೊಂದು ಬದಿಯಲ್ಲಿ ಬಾಬಣ್ಣನ ಅಂಗಡಿ. ಉದ್ದದ ಹಾಲ್ ನಂತಹ ಅಂಗಡಿಯ ನಡುವಿನಲ್ಲಿ ಬಾಗಿಲು. ಬಾಬಣ್ಣ ಒಂದು ಮೂಲೆಯಲ್ಲಿ ತನ್ನ ಟೈಲರಿಂಗ್ ಮೆಶಿನ್ ಹಿಂದೆ ಕೂತು ಟಕಟಕ ಶಬ್ದ ಹೊರಡಿಸುತ್ತಾ ಬಟ್ಟೆ ಹೊಲಿಯುತ್ತಿರುತ್ತಾರೆ. ಪಕ್ಕದಲ್ಲಿ  ತುಂಡು ಬಟ್ಟೆಗಳ ಸಣ್ಣ ರಾಶಿ. ಇನ್ನೊಂದು ಬದಿಯಲ್ಲಿ ಉದ್ದದ ಒಂದು ಕೋಲು. ಮೂಗಿನ ತುದಿಗೆ ಅಂಟಿಕೊಂಡ ಕಪ್ಪು ಚೌಕಟ್ಟಿನ ದಪ್ಪ ಕನ್ನಡಕ, ಕಪ್ಪು ಬಿಳಿ ಸಂಧಾನ ಮಾಡಿಕೊಂಡಂತೆ ಬೆರೆತಿರುವ ತಲೆಗೂದಲು, ಬಾಯಿಯಲ್ಲಿ ತುಂಬಿಕೊಂಡ ಬೀಡ. ನಮ್ಮ ಧಾಳಿ ಅವರ ಅಂಗಡಿಗೆ ಆಗುವುದನ್ನು ಕನ್ನಡಕದ ಮೇಲಿನಿಂದ ನೋಡಿ ” ಹುಶ್ ಹುಶ್” ಎಂದು ಕಾಗೆ ಓಡಿಸುವಂತೆ ತಾಂಬೂಲ ತುಂಬಿಕೊಂಡ ಬಾಯಿಯಿಂದಲೇ ಗದರಿಸುವಿಕೆ. ನಮಗೆ ಅದೆಲ್ಲ ಒಂದು ಚೂರೂ ಲೆಕ್ಕಕ್ಕಿಲ್ಲ. ನಾವು ಇನ್ನೊಂದು ಮೂಲೆಯಲ್ಲಿ  ಬಿದ್ದಿರುವ ಸಣ್ಣ ಸಣ್ಣ ತುಂಡು ಬಟ್ಟೆಗಳ ದೊಡ್ಡ ರಾಶಿಯತ್ತ ಓಡುವುದು. ಪುಸ್ತಕ ಅಲ್ಲೇ ಮೂಲೆಯಲ್ಲಿ ಪೇರಿಸಿಟ್ಟು ಬಟ್ಟೆಗಳ ರಾಶಿಯಲ್ಲಿ ನಮ್ಮದು ಹುಡುಕಾಟ. ಗೋಪುರದಂತಿರುವ ರಾಶಿ ನಮ್ಮ ಹಾರಾಟಕ್ಕೆ ಕುಸಿದು ಆಕಾರ ಬದಲಾದಂತಾಗುವುದೂ, ಕೆಲವೊಮ್ಮೆ ನಾವೇ ಮೇಲೆ ಏರಿ ಕೆಳಗೆ ಹಾರಿ ಬಿದ್ದು ಕೂಗುವುದು ಸಾಮಾನ್ಯ ಸಂಗತಿ. ಆಗ ಬಾಬಣ್ಣ ತನ್ನ ಸ್ವಸ್ಥಾನದಿಂದ ಪಕ್ಕದಲ್ಲಿದ್ದ ಕೋಲು ತಗೊಂಡು ಓಡಿ ಬರುತ್ತಾರೆ. ನಮಗೆ ಅದು ಆಟದ ಎರಡನೇ ಭಾಗ. ನಾವು ಬಟ್ಟೆಯ ರಾಶಿಗೆ ಸುತ್ತು ಬರುವುದು,ಹಾರುವುದು ಮೇಲೇರುವುದು. ಹಿಂಭಾಲಿಸುವ ಬಾಬಣ್ಣ “ಹ್ಹೇ ಹ್ಹೇ” ಬಟ್ಟೆಯ ರಾಶಿಗೆ ತನ್ನ ಕೋಲಿನಿಂದ ಹೊಡೆಯುವುದು. ನಾವು ಬಾಬಣ್ಣನಿಂದ ತಪ್ಪಿಸಿಕೊಂಡು ಓಡುವುದು. ಬಾಯಲ್ಲಿದ್ದ ಕವಳದಿಂದ ಸಲೀಸಾಗಿ ಬಯ್ಯುವುದೂ ಸಾಧ್ಯವಾಗದೆ ಬಾಗಿಲ ಬಳಿ ಓಡಿ ಬೆರಳೆರಡು ತುಟಿಗಳ ಮೇಲಿಟ್ಟು ಬಾಯಿಯಲ್ಲಿದ್ದ ಕೆಂಪು ರಸವನ್ನು  ಪುರ್ರೆಂದು ಪಿಚಕಾರಿಯಂತೆ ಉಗುಳಿ ಬರುವಾಗ ನಾವು ಒಳಗೆ ಅಡಗಿಯಾಗುತ್ತಿತ್ತು. ” ಹೊರಗೆಬನ್ನಿ, ಬನ್ನಿಯಾ..” ಅಂತ ಕೂಗಿ ಕೂಗಿ ಮತ್ತೆ ಹೋಗಿ ತನ್ನ ಕುರ್ಚಿಗೆ ಅಂಟುತ್ತಿದ್ದರು. “ಲಗಾಡಿ ಹೋಯ್ತು ಇಡೀ ಅಂಗಡಿ. ಈ ಬಟ್ಟೆಗಳನ‌್ನು ಸರಿ ಮಾಡುವುದು ಯಾರು? ಇನ್ನೊಮ್ಮೆ ಯಾರಾದರೂ ಬಟ್ಟೆ ರಾಶಿ ಹತ್ತಬೇಕು. ಹೊರಗೆ ಹೋಗಲು ಬಿಡುವುದಿಲ್ಲ. ಇಲ್ಲೇ ಕಟ್ಟಿ ಹಾಕ್ತೇನೆ” ಎನ್ನುತ್ತಿದ್ದರು. ಅಪರೂಪಕ್ಕೊಮ್ಮೆ ಅವರ ಕೈಗೆ ಸಿಕ್ಕಿಬಿದ್ದರೂ ಅವರು ಹೊಡೆದದ್ದಿಲ್ಲ. ನಾವು ಕಿರುಚಿದ್ದಷ್ಟೆ. ಅವರ ಊರು ಯಾವುದು, ಎಲ್ಲಿಂದ ಬರುತ್ತಿದ್ದರು ಗೊತ್ತಿಲ್ಲ. ಅವರೆಂದರೆ ನಮಗೆ ಬಹಳ ಪ್ರೀತಿ. ನಾನೂ ಯಾರೂ ಇಲ್ಲದ ಸಮಯ ಹೋಗಿ ಬಣ್ಣದ ಬಟ್ಟೆ ತುಂಡು ಆರಿಸಿ ಅವರ ಬಳಿ ಹೋಗಿ  ” ನನ್ನ ಗೊಂಬೆಗೆ ಅಂಗಿ ಹೊಲಿದು ಕೊಡ್ತೀರಾ” ಎಂದರೆ ಪ್ರೀತಿಯಿಂದ ದಿಟ್ಟಿಸಿ  “ಇದು ಚಿಕ್ಕದಾಯಿತು. ತಡಿ, ಬಂದೆ”  ಎನ್ನುತ್ತಾ  ಆ ಬಟ್ಟೆ ರಾಶಿಯಿಂದ ಬೇರೆ ಬಟ್ಟೆ ಆರಿಸುತ್ತಿದ್ದರು.  ಇದು ಬೇಡ ಅಂದರೆ ಇದು, ಇದು ಎಂದು ಕೆಲವು ತುಂಡು ಬಟ್ಟೆ ತೋರಿಸಿ ಒಂದನ್ನು ಆರಿಸಿ ನಾಳೆ ಅಂಗಿ ಮಾಡಿ ಕೊಡ್ತೇನೆ., ಎಂದು ಹೊಲಿದು ಕೊಡುವ ಮಮತಾಮಯಿ. ನಾನು ನನ್ನ ಉಳಿದ ಇಬ್ಬರು ಗೆಳತಿಯರಿಗೆ ತೋರಿಸಿ ಅವರೂ ಬಂದು ಹಠಕ್ಕೆ ಬೀಳುತ್ತಿದ್ದರು. ಆಗ ಕೋಪ ಮಾಡಿ ” ನನ್ನ ಅಂಗಡಿಯೊಳಗೆ ಬಂದರೆ ಜಾಗ್ರತೆ. ಹೋಗಿ ಹೊರಗೆ” ಎಂದು ಗದರಿಸಿದರೂ ಮೂರು ಅಂಗಿಗಳು ನಮ್ಮಲ್ಲಿರುವ ಒಂದು ಗೊಂಬೆಗೆ ತಯಾರಾಗುತ್ತಿದ್ದವು. ಕಿಟಕಿಯ ಬಳಿ ಕುಳಿತುಕೊಳ್ಳುವ ಬಾಬಣ್ಣ ಕಿಟಕಿಯ ದಂಡೆಯಲ್ಲಿ ಒಂದು ರೆಡಿಯೋ ಇಟ್ಟಿದ್ದರು. ಅದರಲ್ಲಿ ಬರುವ ಕಾರ್ಯಕ್ರಮಗಳನ್ನು ಕೇಳುತ್ತ ಕೆಲಸ ಮಾಡುತ್ತಿದ್ದರು. ಶಾಲಾ ಮಕ್ಕಳ ಅಂಗಿ, ಚಡ್ಡಿ. ಪ್ಯಾಂಟ್. ಹುಡುಗಿಯರ ಫ್ರಾಕ್, ಉದ್ದಲಂಗ, ರವಕೆ, ಸ್ಕರ್ಟ್, ಸೀರೆಯ ಬ್ಲೌಸ್. ಬಾಬಣ್ಣನ ಅಂಗಡಿಯಲ್ಲಿ ರೂಪುಗೊಳ್ಳುತ್ತಿದ್ದವು. ಅವರಿಗೆ ಯಾರೂ ಸಹಾಯಕರು ಇಲ್ಲ. ಅವರೇ ಎಲ್ಲವನ್ನೂ ಮಾಡುತ್ತಿದ್ದರು. ತಮ್ಮ ಬಳಿಯ ಟೇಪ್ ಹಿಡಿದು ಅಳತೆ ಮಾಡು, ಬಟ್ಟೆ ಕತ್ತರಿಸು, ಹೊಲಿದು ಕೊಡು. ಹೊಸ ಪಾತ್ರ ಕಟ್ಟಿಕೊಡುವ ನಿರ್ದೇಶಕನಂತೆ ಅವರ ಅಂಗಡಿಯಲ್ಲಿ ಬಗೆಬಗೆಯ ದಿರಿಸುಗಳು ಹುಟ್ಟಿ ಅಲ್ಲಲ್ಲಿ ರಾಶಿ ಬೀಳುತ್ತಿದ್ದವು. ಅವರು ಮಾಡಿಕೊಡುವ ಚೆಂದದ ವಸ್ತೃಗಳನ್ನು ಕಂಡು ಏಕಲವ್ಯನಂತೆ ನಾವೂ ನಮ್ಮ ಗೊಂಬೆಗೆ ದಿರಿಸು ತಯಾರಿಸುತ್ತಿದ್ದೆವು. ನಮ್ಮ ಗೊಂಬೆಗೆ ಪ್ರೀತಿಯಿಂದ ನೇವರಿಸಿ ಮಗ್ಗದ ಸೀರೆಯ ತುಂಡಿನಿಂದ ಸೀರೆ ಮಾಡಿ ಸುತ್ತಿ ಸೆರಗು ತಲೆಯ ಮೇಲಿನಿಂದ ಬರುವಂತೆ ಹಾಕಿದರೆ ಪುಟ್ಟ ಪುಟಾಣಿ ಗೊಂಬೆ ಅಜ್ಜಿಯಾಗಿ ಬಿಡುತ್ತಿದ್ದಳು. ಅವಳನ್ನು ದಪ್ಪ ಮಾಡಲು ಮೊದಲು ಒಂದೆರಡು ಬಟ್ಟೆ ಸುತ್ತಿ ಕೊನೆಗೆ ಮಗ್ಗದ ತುಂಡು ಉಡಿಸುತ್ತಿದ್ದೆವು. ಸಿಲ್ಕ್ ಸೀರೆಯಂತಹ ಹೊಳಪು ಬಟ್ಟೆ ಸಿಕ್ಕಿದರೆ ನಮ್ಮ ಗೊಂಬೆ ರಾಜಕುಮಾರಿ. ತಲೆಯ ಮೇಲಿನಿಂ ದ ಆ ಬಟ್ಟೆ ಎರಡೂ ಬದಿ ಇಳಿಸಿ ಬಿಡುವುದು. .ಮತ್ತೊಂದು ಬಣ್ಣದ ಬಟ್ಟೆ ಅದಕ್ಕೆ ಸುತ್ತಿ ನವೀನ ಮಾದರಿಯ ಬೊಂಬಾಯಿ ವಸ್ತೃ ಶೃಂಗಾರ. ಈಗ ಬೊಂಬೆ, ಮುಂಬಯಿಯ ಷಹರಸುಂದರಿ. ಬೊಂಬೆ ಅಮ್ಮನಾದರೆ ಸಾಧಾರಣ ಸೀರೆ ಚೆಂದ ಮಾಡಿ ಸೆರಗು ಹಾಕಿ ತಯಾರು ಮಾಡುತ್ತಿದ್ದೆವು. ಫ್ರಾಕ್ ಹಾಕಿಸಿದರೆ ಬೊಂಬೆ ಚಂದದ ಶಾಲಾ ಹುಡುಗಿ. ಹೀಗೆ ನಮ್ಮಲ್ಲಿದ್ದ ಒಂದೇ ಒಂದು ಬೊಂಬೆ, ನಮ್ಮ ಬಣ್ಣದ ಚೌಕಿಯೊಳಗಿಂದ ಮೇಕಪ್ ಮಾಡಿಸಿಕೊಂಡು ಹಲವು ಪಾತ್ರಗಳಾಗಿ ಹೊಳೆಯುತ್ತಿತ್ತು.  ಬಟ್ಟೆಗಳ ಉದ್ದ ವ್ಯತ್ಯಾಸವಾದರೆ ಪುಟ್ಟ ಹೊಲಿಗೆ ಬೇಕಾದರೆ ಮತ್ತೆ ಗೊಂಬೆಯ ಜೊತೆಗೇ ಹೋಗಿ ಬಾಬಣ್ಣನಿಗೆ ದುಂಬಾಲು ಬೀಳುತ್ತಿದ್ದೆವು. ನಮ್ಮ ಬಳಿ ಪುಟ್ಟದಾದ ಒಂದು ಡಬ್ಬಿ. ಅದರೊಳಗೆ ವೇಷದ ಬಟ್ಟೆಗಳು.   ಅದೆಷ್ಟು ಬಗೆಬಗೆ. ಕೆಲವೊಮ್ಮೆ ಪುರುಸೊತ್ತಿದ್ದರೆ ಬಾಬಣ್ಣ ಹೊಸ ರೀತಿಯ ಅಂಗಿ ಹೊಲಿದು ಅವರೇ ಅದಕ್ಕೊಂದು ಹೆಸರಿಟ್ಟು ಕನ್ನಡಕದ ಮೇಲಿನಿಂದ ನಮ್ಮ ಮೇಲೆ ಕಣ್ಣು ಹರಿಸಿ, ಸ್ಥಿರಗೊಳಿಸಿ ನಗುತ್ತಿದ್ದರು. ಚೌಕಿಯಲ್ಲಿ ಬಗೆಬಗೆಯ ಪಾತ್ರಗಳು ಜನ್ಮ ತಾಳುವುದೂ ಹೀಗೇ ತಾನೇ..ಒಬ್ಬ ನಿರ್ದೇಶಕ. ಒಂದು

Read Post »

You cannot copy content of this page

Scroll to Top