Day: January 17, 2021

ಪತ್ರ

ಕವಿತೆ ಪತ್ರ ಅಕ್ಷತಾ‌ ಜಗದೀಶ. ನೋಡ ನೋಡುತ್ತಲೇ ಮರೆಯಾಯಿತುತಿಂಗಳಿಗೊಮ್ಮೆ ಬರುತ್ತಿದ್ದ ಪತ್ರಲೇಖನಿ ಹಿಡಿದುಮಧುರ ಬಾಂಧವ್ಯ ನೆನೆದುಅಕ್ಷರ ಮಾಲೆಯೊಳುಸಂಬಂಧ ಪೋಣಿಸಿ ಬರೆದುಹತ್ತಿರ ಬೆಸೆಯುತ್ತಿದ್ದ ಪತ್ರಈಗ ಕೇವಲ ನೆನಪು ಮಾತ್ರ! ನೋವು ನಲಿವಿನಲ್ಲಿ ಜೋತೆಯಾಗಿದ್ದಪತ್ರ…ಬಂಧುಗಳೊಡನೆ ಬಾಂಧವ್ಯ ಬೆಸೆಯಲುಸೇತುವೆಯಾಗಿದ್ದ ಪತ್ರ..ಅಗಾಧವಾದ ಮಾತುಗಳನುಮಿತಗೊಳಿಸಿ ವ್ಯಕ್ತಪಡಿಸುತ್ತಿದ್ದಪತ್ರ..ಈಗ ಕೇವಲ ನೆನಪು ಮಾತ್ರ! ಎಷ್ಟೇ ಆಧುನಿಕತೆಯ ಉಪಕರಣಬಂದರುಪತ್ರಕ್ಕೆ ಸರಿಸಮನಾಗಿ‌ ನಿಲ್ಲಲಾರರುನೆನಪುಗಳಲಿ ನೆನೆಪಾಗಿನೆನಪನ್ನೇ‌ ನೆನಪಿಸುವ ಪತ್ರಈಗ‌ ಕೇವಲ‌‌ ನೆನಪು ಮಾತ್ರ… ************************

ಸಂಕ್ರಾಂತಿ ಬೆೇಕಿದೆ

ಕವಿತೆ ಸಂಕ್ರಾಂತಿ ಬೆೇಕಿದೆ ಹಸಿದು ಉಸಿರು ಹಿಡಿದುಬದುಕುತ ಅಳುವಮಗುವಿಗೆ ಹಾಲುಣಿಸಲುಮಮತೆಯಸಂಕ್ರಾಂತಿ ಬೇಕಿದೆ ಧಾನ್ಯ ಭೊಗಸೆಯಲಿಟ್ಟುಬತ್ತಿದ ಹೊಟ್ಟೆಬಡಬಾಗ್ನಿಯಲಿಬೇಯುವ ಮನುಜಗೆಮಾನವೀಯತೆಯಸಂಕ್ರಾಂತಿ ಬೇಕಿದೆ ಅಕಾಲ ವೃಷ್ಟಿಗೆಎದೆಒಡ್ಡಿ ಕಾಳುಹೆಕ್ಕಲು ಕಣ್ಣೀರಿಕ್ಕುವನೇತ್ರ ಇಂಗಿದಮನುಕುಲಕೆಬೇಕಿದೆ ಸಂಕ್ರಾಂತಿಸಂಕ್ರಾಂತಿ ಬೇಕಿದೆ ನೆಲಕಚ್ಚಿದ ನೆಗಿಲಉಸಿರು ಹಸಿರಾಗಿಸಿಗುಡಿಸಲುಗಳುಗುಡಿಯನುವಹೃದಯತೆಯ ಸಂಕ್ರಾಂತಿಸಂಕ್ರಾಂತಿ ಬೇಕಿದೆ ಖಾದಿ ಖಾಕಿ ಕಾವಿಯತೊಟ್ಟುಕಪಟತೆಯ ಕೈಯಲ್ಲಿಚೀಲ ತುಂಬುವಭಕ್ಷಕರ ಆತ್ಮಸಾಕ್ಷಿಗೆಸಂಕ್ರಾಂತಿ ಬೇಕಿದೆ ಬಾಳುನೀಡುವಭಾಗ್ಯದಾತೆಯಬರಿಮೈಯಾಗಿಸಿರಕ್ತ ಹೀರುವರಾಕ್ಷಸರ ಸಂಹಾರಕ್ಕೆಸಂಕ್ರಾಂತಿ ಬೇಕಿದೆ ಅಪರಿಮಿತ ಬುದ್ಧಿ ಶಕ್ತಿಯಅಡವಿಟ್ಟು ಆಮಿಷಕೆಅಣು ರೇಣು ತೃಣ ಕಾಷ್ಟಗಳುಕ್ಷಣ ಮಾತ್ರದಲಿಭಸ್ಮವೀಯುವಕ್ರೊರತೆಗೆಸಂಕ್ರಾಂತಿ ಬೇಕಿದೆ ಮನದ ವ್ಯಾಪಾರಕೆಮನುಜ ಕುಲವಿಕ್ರಯಿಸುವಅಮಾನುಶತೆಗೆಬೇಕಿದೆ ಸಂಕ್ರಾಂತಿಸಂಕ್ರಾಂತಿ ಬೇಕಿದೆ ಬದುಕ ಬೇರೆನಿಪನೆಲ ಜಲಮರ ಗಿಡ […]

Back To Top