ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಎದೆಯೊಳಗೆ ನೂರು ಮುಳ್ಳುಗಳಿದ್ದರು ಮೊಗದಲ್ಲಿ ನಗೆಹೂ ಸುರಿದವಳು ನೀನಲ್ಲವೆ ಮನದೊಳಗೆ ನೂರು ಕಂಬನಿಗಳಿದ್ದರೂ ಕಣ್ಣಲ್ಲಿ ಬೆಳದಿಂಗಳ ಚೆಲ್ಲಿದವಳು ನೀನಲ್ಲವೆ ಏನೊಂದನೂ ಬಯಸದೆ ಬಂಡೆಗಲ್ಲಿನಲೂ ಬದುಕುವ ಛಲ ಹೊತ್ತು ಹಬ್ಬುತ್ತ ನಡೆದೆ ನಿಂತ ನೆಲದೊಳಗೆ ಬೇರಿಳಿಸುತ್ತಲೇ ಬೆಳಕಿನ ಪಥದಲ್ಲಿ ಹೆಜ್ಜೆ ಊರಿದವಳು ನೀನಲ್ಲವೆ ಸಾಗರದಷ್ಟು ಪ್ರೀತಿಯಿದ್ದರೂ ಭೋರ್ಗರೆಯುವುದನೇ ಮರೆತು ಹೊಯ್ದಾಡುತಲಿದ್ದೆ ಮುತ್ತು ರತ್ನ ಹವಳಗಳ ಒಡಲಲಿ ಹೊತ್ತು ಜಲಧಿಯ ಮುಸುಕ ಹೊದ್ದವಳು ನೀನಲ್ಲವೆ ಸುಂದರತೆ ಎಂಬುದೂ ಸೋತು ನಿನ್ನೆದುರು ಮಂಡಿಯೂರಿ ತನ್ನಸ್ತಿತ್ವಕೇ ನರಳಾಡಿತು ಆಗಸದಷ್ಟು ಚೆಲುವಿನ ಅರಿತಷ್ಟೂ ಆಳದ ವಿಸ್ಮಯ ಭಾವಗಳ ಪಡೆದವಳು ನೀನಲ್ಲವೆ ಸಿದ್ಧನಿಗೆ ಪ್ರೇಮದ ಹೃದಯವಾದರೂ ಎಲ್ಲಿತ್ತು ಅದು ಖಾಲಿ ಮಧುಬಟ್ಟಲಾಗಿತ್ತು ಒಲವೆಂಬ ಮತ್ತನೇರಿಸಿ ಪ್ರತಿ ಕನಸಿನಲೂ ನೂರು ನವಿಲುಗಳ ಕುಣಿಸಿದವಳು ನೀನಲ್ಲವೆ ***********************************************

ಗಜಲ್ Read Post »

ಕಾವ್ಯಯಾನ

ಯಾವುದೀ ನಕ್ಷತ್ರ?

ಕವಿತೆ ಯಾವುದೀ ನಕ್ಷತ್ರ? ಮಾಲತಿ ಶಶಿಧರ್ ಕವಿಗೆ ಏಕಾಂತ ಸಿಕ್ಕರೆ ಸಾಕುಚಂದ್ರ ನೇರವಾಗಿ ಎದೆಗೆನೆಗೆದುಬಿಡುವನುನನ್ನ ಏಕಾಂತದ ಅಂಗಳಕೆನಕ್ಷತ್ರವೊಂದು ಜಾರಿಬಿದ್ದಿದೆಇಂದ್ರಲೋಕದ ಸ್ವತ್ತೋಇಲ್ಲ ಚಂದ್ರನ ಅಣುಕಿಸಲು ಬಂತೋ?? ದಾಹದಾಳವ ಅರಿತುಎದೆಯ ಬಗೆದು ನೀರು ತೆಗೆದುತಣಿಸುತ್ತದೆಮುತ್ತು ರತ್ನಗಳ ಕಣ್ಣಂಚಲ್ಲೆಸುರಿಸುತ್ತದೆಈ ನಕ್ಷತ್ರದ್ದು ಇಲ್ಲೇ ಬಿಡಾರಬಿಡುವ ಹುನ್ನಾರೋ ಇಲ್ಲನನ್ನೇ ಎಳೆದೊಯ್ಯುವತಕರಾರೋ ಕಾಣೆ ಈ ನಕ್ಷತ್ರ ಅವರಿಬ್ಬರಂತಲ್ಲಒಬ್ಬ ತಿಂಗಳಿಗೊಮ್ಮೆ ಬಂದರೆಇನ್ನೊಬ್ಬ ತಾಸುಗಟ್ಟಲೆ ಹರಟಿಅಲ್ಲೆಲ್ಲೋ ಪಶ್ಚಿಮ ದಿಕ್ಕಿನಗುಡ್ಡದಡಿ ತಲೆ ಮರೆಸಿಕೊಳ್ಳುವ ನೆಟ್ಟಗೆ ಎದೆಗೆಹೂಡಿದ ಬಾಣಈ ನಕ್ಷತ್ರಜಲದವಶೇಷಗಳಚಿಲುಮೆ ಜಿನುಗುತ್ತದೆ ಜನ್ಮಾಂತರದ ವಿರಹ, ಕಾತರಕಾದ ವೇದನೆ ಯಾತನೆಕತ್ತಲರೆಕ್ಷಣದಲ್ಲಿ ಓಡಿಸಲುಬಂತೇನೋ ಈ ಗಂಡು ನಕ್ಷತ್ರ.. ***************************

ಯಾವುದೀ ನಕ್ಷತ್ರ? Read Post »

ಕಾವ್ಯಯಾನ

ಆತ್ಮಸಾಕ್ಷಿ

ಕವಿತೆ ಆತ್ಮಸಾಕ್ಷಿ ಪಂ. ರವಿಕಿರಣ ಮಣಿಪಾಲ. ಆತ್ಮಸಾಕ್ಷಿಯಲೇಖನಿಯನ್ನುಭೋಗದ ಮಸಿಯಲ್ಲದ್ದಿಇತಿಹಾಸ ಪುಸ್ತಕಬರೆಯುವುದುದುಸ್ತರ ಹಾಗಾಗಿಯೆಇತಿಹಾಸ ಪುಸ್ತಕತುಂಬಕಣ್ಣೀರ ನದಿಗಳುರಕ್ತದ ಕಾಲುವೆಗಳುನಿಟ್ಟುಸಿರ ಚಂಡಮಾರುತಗಳುಬೆಂದೊಡಲ ಹಸಿವಿನ ಜ್ವಾಲಾಮುಖಿಗಳುಉರುಳುರುಳಿ ಹೊರಳಿದಕೆಂಪುಸಿಂಹಾಸನಗಳುಭೂಕಂಪಗಳು ***

ಆತ್ಮಸಾಕ್ಷಿ Read Post »

ಕಥಾಗುಚ್ಛ

ಬಂದು ಹೋಗುವ ಮಳೆಯಲ್ಲಿ

ಕಥೆ ಬಂದು ಹೋಗುವ ಮಳೆಯಲ್ಲಿ ತೆಲುಗಿನಲ್ಲಿ: ಅಫ್ಸರ್ ಕನ್ನಡಕ್ಕೆ : ಚಂದಕಚರ್ಲ ರಮೇಶ ಬಾಬು “ಈ ಶಿಥಿಲಗಳ ಬಣ್ಣಗಳು ನಿನ್ನ ಹಿಡಿತಕ್ಕೆ ತುಂಬಾ ಚೆನ್ನಾಗಿ ಬಂದಿವೆ. ಈ ಬಣ್ಣಾನ್ನ ಅಷ್ಟು ಖಚಿತವಾಗಿ ನಿನ್ನ ಕಾನ್ವಾಸ್ ಮೇಲೆ ಅದ್ಹೇಗೆ ತರ್ತೀಯೋ ಮಾರಾಯಾ ! ಏನ್ ಮಿಕ್ಸ್ ಮಾಡ್ತಿಯೋ ಗೊತ್ತಿಲ್ಲಾಗ್ಲೀ ! ಪ್ರತಿ ಚಿತ್ರದಲ್ಲೂ ಅವಕ್ಕೆ ಭಿನ್ನವಾದ ಮೈ ಬಣ್ಣ ಹೊಂದಿರುವ ಹೆಣ್ಣುಗಳು…. ಒಂದು ಮೋಡ…. ನನಗೆ ಗೊತ್ತಿದ್ದ ಹಾಗೆ ಹತ್ತು ವರ್ಷದಿಂದ ಇದೇ ಅಲ್ವಾ ನಿನ್ನ ಕಾನ್ವಾಸ್…..!” ಕಾನ್ವಾಸಿನ ಕಡೆಗೆ ಮತ್ತೊಂದು ಸಲ ತೀಕ್ಷ್ಣವಾಗಿ ನೋಡ್ತಾ ಅಂದಳು ಆವಳು. ಆ ಹತ್ತು ವರ್ಷದ ಟೈಮ್ ಲೈನ್ ನನಗಿಂತ ಅವಳಿಗೇ ಚೆನ್ನಾಗಿ ಗೊತ್ತು. ಹತ್ತು ವರ್ಷದ ಹಿಂದೇ ಅಲ್ವಾ, ಅಪ್ಪ ತೀರಿಹೋದ ಮೇಲೆ ಆ ಊರಿನಲ್ಲಿ ಇನ್ನು ತಮಗೆ ಏನೂ ಇಲ್ಲ ಅಂತ ಅನಿಸಿದ್ದು. ನಿರ್ವಾಹ ವಿಲ್ಲದೆ ಕೆಲಸದ ನೆವ ಮಾಡಿಕೊಂಡು ಹೈದರಾಬಾದಿಗೆ ತನ್ನನ್ನು ಅಮ್ಮನ ಜೊತೆಗೆ ಕರೆಸಿದ್ದಳು ಅವಳು. ಈ ನಗರವನ್ನು ಪ್ರೀತಿಸಬೇಕೆಂದು ತುಂಬಾ ಸಲ ಅಂದುಕೊಂಡಿದ್ದ. ಹಾಗೆ ಅಂದುಕೊಂಡಿದ್ದ ಪ್ರತಿ ಸರ್ತಿಯೂ ಖಂಡಿತವಾಗಿ ದ್ವೇಷಿಸಲು ಯಾವುದೋ ಒಂದು ಕಾರಣವನ್ನು ನಾಟಕೀಯವಾಗಿ ಸೃಷ್ಟಿಸುತ್ತಿತ್ತು ಈ ನಗರ. ಇನ್ನೇನು ಸ್ವಲ್ಪ ಸೆಟ್ಲ್ ಆಗುತ್ತಿದ್ದಾನೆ ಎನ್ನುವ ಹೊತ್ತಿಗೆ ಅಮ್ಮನನ್ನು ನುಂಗಿಬಿಟ್ಟಿತ್ತು ಈ ನಗರ. ತನ್ನ ಅಶಕ್ತತೆಯನ್ನು ಈ ನಗರಕ್ಕೆ ಆಪಾದಿಸುತ್ತಿದ್ದೇನಾ ? ಏನೋ ! ಕಾರಣಗಳನ್ನು ಬಗೆದು ತೆಗೆಯಲಿಲ್ಲ ಎಂದೂ. ಹಿಂದೆಗಿಂತಲೂ ಬದುಕಿನ ಬಗ್ಗೆಯ ಹೆದರಿಕೆ ಜಾಸ್ತಿಯಾದದ್ದಂತೂ ನಿಜ. ತನ್ನ ಅಶಕ್ತತೆ ಸಹ ಸತ್ಯವೇ. ತನಗೆ ಗೊತ್ತಿರುವ ನಿಜ ಅದು. ಮುಂದಕ್ಕೆ ಒಂದು ಹೆಜ್ಜೆ ಹಾಕಬೇನಿಸಿದರೂ ಇಲ್ಲಿಯವರೆಗೂ ಸಲೀಸಾಗಿ ನಡೆದಿದ್ದ ಜೀವನ ಚೆಲ್ಲಾಪಿಲ್ಲಿಯಾಗುತ್ತದೇನೋ ಎನ್ನುವ ದಿಗಿಲು. ಅವಳ ಜೊತೆಗಿನ ಪ್ರೀತಿ, ಮದುವೆ ಸಹ ಅಷ್ಟೇ ! ಕೆಲವು ಸೋತ ಹೆಜ್ಜೆಗಳು. ಕೆಲಸದ ಮೇಲೂ ಜಾಸ್ತಿ ನಂಬಿಕೆ ಇಲ್ಲ. ಮುಂಬರುವ ಘಳಿಗೆಗಳ ಬಗ್ಗೆ ಅನಿಶ್ಚತತೆ. ಈ ಕ್ಷಣದಲ್ಲಿ ಬದುಕಲಾರದ ಅಸ್ಥಿರತೆ. “ ಯಾಕಿಷ್ಟು ಹೆದರಿಕೆ ನಿನಗೆ ಪ್ರತಿಯೊಂದಕ್ಕೂ ? ಊರಲ್ಲಿರುವಾಗ ಇಷ್ಟು ಹೆದರಿಕೆ ಇರಲಿಲ್ಲ ಅಲ್ಲ ನಿನಗೆ ?” ಅಂತ ಕೊರಗುವ ಅಮ್ಮನಿಗೆ ನನ್ನಿಂದ ಉತ್ತರ ಸಿಗುತ್ತಿರಲಿಲ್ಲ. ಆದರೆ ಅಮ್ಮನಿಗೆ ಗೊತ್ತಂತ ಕಾಣತ್ತೆ, ನನ್ನೊಳಗಿನ ನಾನು ಏನು ಅಂತ. “ಈ ಶಿಥಿಲಗಳಡಿ ನೀನೇನೋ ಅಡಗಿಸ್ತಾ ಇದೀಯಾ” ಅಲ್ಲಿಗೆ ಬಹುಶಃ ನಾಲನೇ ಸಲ ನನ್ನ ಆ ಕಾನ್ವಾಸ್ ನಲ್ಲಿ ಇಣುಕಿದ್ದಳು ಅವಳು. ಕಾನ್ವಾಸಿಗೆ ಎಷ್ಟು ದೂರ ತಾನು ನಿಂತರೆ ಅದರಲ್ಲಿಯ ಚಿತ್ರ ಎಷ್ಟು ತನಗೆ ಹತ್ತಿರವಾಗಿ ಕಾಣುತ್ತದೋ ಅವಳಿಗೆ ಗೊತ್ತು. ಹಾಗೆ ನಿಂತಾಗ ಅವಳು ಚಿತ್ರದ ಒಂದು ಭಾಗವಾಗಿ ಹೋಗಿದ್ದಾಳೆ ಅನಿಸುತ್ತೆ. ಅದರಲ್ಲಿ ತಾನು ಬರೆಯಲು ಬಿಟ್ಟುಹೋದ ನೇರಳೆ ಬಣ್ಣದ ಯಾವುದೋ ಹೂವು ಆಗಿಂದಾಗಲೇ ಕಾನ್ವಾಸ್ ಮೇಲೆ ಅರಳಿದ ಅನುಭವವಾಗುತ್ತೆ. “ ಉತ್ತರ ಏನು ಅಂತಾ ಯೋಚನೇನಾ ? ಅಥವಾ ಇನ್ನೊಂದು ಪೆಯಿಂಟಿಂಗ್ ಬಗ್ಗೆ ಆಗಲೇ ಕಲ್ಪನೆ ಶುರೂನಾ?” ಹಾಗೇ ಒಂದು ನಗೆ ನಕ್ಕು ಸುಮ್ಮನಾಗಲು ಎಣಸಿದ ಅವನು. ಅವಳು ಒಪ್ಪುವುದಿಲ್ಲ. “ ಹೌದು. ನಿನ್ನಷ್ಟು ಪರೀಕ್ಷಿಸಿ ಯಾರೂ ನೋಡುವುದಿಲ್ಲ. ಅದಕ್ಕೆ ನಿನಗೇ ಚೆನ್ನಾಗಿ ಗೊತ್ತು. “ “ ನಿಜ ಹೇಳ್ಬೇಕಾದ್ರೆ ನನಗೂ ಏನೂ ಗೊತ್ತಿಲ್ಲ. ನೋಡಿದ್ದು ಹೇಳ್ತಾ ಇದೀನಿ ಅಷ್ಟೇ. ಆದರೆ ನಿನ್ನ ಪ್ರತಿ ಪೆಯಿಂಟಿಂಗ್ ನ ಹಿಂದೆ ನನಗೆ ಕಾಣದೇ ಉಳಿದದ್ದು ತುಂಬಾ ಇದೆ ಅನಿಸತ್ತೆ. ಖಂಡಿತ ಇರಲಿಕ್ಕೂ ಸಾಕು “ “ ಇರುತ್ತದೇನೋ ಗೊತ್ತಿಲ್ಲ ! ನಂಗಾದರೂ ಏನು ಗೊತ್ತು . ಚಿತ್ರ ಬರದಾದಮೇಲೆ ನನ್ನ ಕೆಲಸ ಮುಗೀತು “ “ ನೀನು ಮತ್ತೊಂದು ಭಾಷೆಯಲ್ಲಿ ಅರ್ಥೈಸುವವರೆಗೂ ನನಗೆ ನಿನ್ನ ಬಣ್ಣ, ರೇಖೆಗಳು ಅರ್ಥವಾಗುವುದಿಲ್ಲ. ಈ ಚಿತ್ರನೋಡು ! ಇಲ್ಲಿಗೆ ಹತ್ತು ಸಲ ಹತ್ತು ಕಡೆಯಿಂದ ನೋಡಿದೀನಿ. ಆದರೆ ಅದರಲ್ಲಿ ನೀನೇನು ಅಂತ ತಿಳಿತಾನೇ ಇಲ್ಲ. “ “ ಬಣ್ನ, ರೇಖೆಗಳೇ ಅದರ ಭಾಷೆ. ಅದರ ಭಾಷೆಯಲ್ಲಿರುವ ಆ ಚಿತ್ರ ನಿನಗೆ ಅರ್ಥವಾಗಲಿಲ್ಲ ಅಂದರೆ ಅದು ಸೋತಹಾಗೆ . ಆದರೂ ಒಂದು ಮಾತು ಹೇಳು. ನಿನಗೆ ನಾನು ಯಾಕೆ ಸಿಗಬೇಕು ?” “ ಏನೋ ಗೊತ್ತಿಲ್ಲ. ಸಿಕ್ಕಿದಷ್ಟು ಸಿಕ್ಕಲಿ ಅಂತ ಕಳೆದ ಹತ್ತು ವರ್ಷದಿಂದ ಅಂದುಕೊಳ್ತಾ ಇದೀನಿ. ಮೊದಲನೆ ಸಲ ನಿನ್ನ ಪೆಯಿಂಟಿಂಗ್ ಯಾವಾಗ ನೋಡಿದೆ ? ಆಗ ನಾನು ಹೇಗಿದ್ದೆ ? ಈಗ ಹೇಗಾಗಿದೀನಿ ? ಅಂತ ಆಲೋಚಿಸಿದರೆ ನಾನು ಅಂದು ನಾವು ಮೊದಲನೆ ಸಲ ಸಿಕ್ಕಾಗ ಹೇಗಿದ್ದೆನೋ ಈಗ್ಲೂ ಹಾಗೇ ಇದೀನಿ. ನಿನ್ನ ವಿಷಯ ಹಾಗಲ್ಲ. ನೀನು ಗೊತ್ತಾಗದೇ, ಗೊತ್ತಾದರೂ ಗೊತ್ತಾಗಿದೀಯ ಎನ್ನುವ ನಂಬಿಕೆ ಸಿಗದೇ….. “ ಹೀಗೆ ಸಮಯದ ಮೈಲುಗಲ್ಲುಗಳನ್ನು ನೆನಪಿಡಲಿಕ್ಕೆ ಹೇಗೆ ಸಾಧ್ಯ ಇವಳಿಗೆ ! ತನಗದು ಇಷ್ಟವೇ ಇಲ್ಲ. ನೆನಪುಗಳೆಂದರೆ ತುಂಬಾ ಭಯ. “ ಹೇಳಕ್ಕೆ ಆಗಲ್ಲ. “ ಒಮ್ಮೊಮ್ಮೆ ಅವಳು ಅಂತಾಳೆ. “ ನೀನು ಫುಲ್ ಟೈಮ್ ಆರ್ಟಿಸ್ಟ್ ಆಗಬೇಕು. ಈ ಪತ್ರಿಕೆಯ ಕೆಲಸ, ಮಧ್ಯಾಹ್ನದ ನಿದ್ದೆಯಿಂದ ಎದ್ದು ತಯಾರಾಗಿ ಹೋಗೋದು, ಅಲ್ಲೇನೋ ಗೀಚೋದು, ಅದು ನಿನ್ನ ಜೀವನ ಅಲ್ಲ ಅಂತ ಅನಿಸುತ್ತೆ. ಅದರ ಜೊತೆಗೆ ದಿನಾ ಇರೋ ಕೆಲಸದ ಅಭದ್ರತೆ, ಅವರಿಗೆ ನಿನ್ನ ಕೆಲಸ ಹಿಡಿಸೋದು, ಇಲ್ಲದ್ದು…” “ ಅದು ಮಾತ್ರ ಹೇಳ್ಬೇಡ. ಯಾರೂ ಇದನ್ನ ಫುಲ್ ಟೈಂ ಮಾಡೋಷ್ಟು ಭದ್ರತೆ ಇಲ್ಲ ಇಲ್ಲಿ. ಉಳಿದ ಕೊಸರೇ ಸಾಕು. “ ಕೆಲಸ ಅವಳಿಗಿಂತ ಹೆಚ್ಚೇನಲ್ಲ. ಆದರೆ, ಎಷ್ಟೋ ಇಷ್ಟವಾದ ತನ್ನನ್ನು ಬಿಟ್ಟುಕೊಂಡ ಹಾಗೆ, ಎಳ್ಳಷ್ಟೂ ಇಷ್ಟವಾಗದ ಕೆಲಸವನ್ನು ಆಕೆ ಬಿಡುವುದಿಲ್ಲ. ಅವಳು ಬಂದಹಾಗೆ ಬಂದು ಹೋಗಿಬಿಟ್ಟಳು. ಐದಾರು ವರ್ಷಗಳ ಪ್ರೀತಿ…. ಎರಡು ವರ್ಷಗಳ ಮದುವೆ, ನಂತರದ ಅಗಲಿಕೆ… ಈ ಎರಡು ವರ್ಷಗಳಲ್ಲಿ  ಅದೆಷ್ಟು ಬೆಳವಣಿಗೆಗಳು….. ಯಾವ ಆತ್ರದಲ್ಲೋ ಅವಳು ಗರ್ಭಿಣಿ ಆಗಬಹುದೇನೋ ಎನ್ನುವ ಮತ್ತೊಂದು ಸಂದಿಗ್ಧ… ಅಗಲಿಕೆಗೆ ಅದೊಂದೇ ಕಾರಣವಲ್ಲ ಅಂತ ಇಬ್ಬರಿಗೂ ಗೊತ್ತಿತ್ತು. ಮುಂಚಿತವಾಗಿ ನಿರ್ಧರಿಸಿದ ಹಾಗೆ ಇಬ್ಬರೂ ಮತ್ತೆ ಸಿಕ್ಕಾಗ ಮದುವೆ, ಮಕ್ಕಳ ಬಗ್ಗೆ ಮಾತನಾಡಿಕೊಳ್ಳಬಾರದು. ತಮ್ಮಿಬ್ಬರ ಜೀವನಗಳು ಕಳಚಿದ ಗಾಳಿಪಟಗಳ ತರ ಇರಬೇಕೆಂದೇನೂ ಇಲ್ಲ ಅಂತ ಮನದಟ್ಟಾದಾಗ, ಆ ವಿಷಯಗಳು ಹತ್ತಿರಬರಬೇಕಾಗಿಲ್ಲ. ಸ್ವಲ್ಪ ಹೊತ್ತು ಹಾಯಾಗಿ ಕಳೆಯಬೇಕು. ಮತ್ತೆ ಆ ಹಾಯಾದ ಸಮಯಕ್ಕಾಗಿ ಕಾಯಬೇಕು. ಅಷ್ಟೇ ! ಈಗಿನವರೆಗೆ ಹಾಗೇ ನಡೆದು ಬಂದಿದೆ. ಅವಳಿರುವ ಆ ಸ್ವಲ್ಪ ಹೊತ್ತು ಹಾಯಾಗಿರುತ್ತದೆ. ಅವಳು ಹೋದ ಮೇಲೆ ಸಹ ಅವಳ ನಗೆ ಆ ರೂಮಿನಲ್ಲಿ ಹರಡಿರುವ ಹಾಗೆ ಅನಿಸುತ್ತೆ. ಅದು ಬೇಕು ತನಗೆ ! ಬಹುಶಃ ಅವಳಿಗೂ ಬೇಕೆನೋ ! ಅದಕ್ಕೆ, ತಾನು ಇಷ್ಟಪಟ್ಟು ಮಾಡಿಕೊಂಡ ಎರಡನೆಯ ಮದುವೆಯ ನಂತರವೂ ತನ್ನ ಸ್ನೇಹವನ್ನು ಬಿಟ್ಟುಕೊಂಡಿಲ್ಲ. ಅವಳು ತನ್ನ ಸ್ನೇಹವನ್ನು ಬಿಟ್ಟಿಕೊಂಡಿದ್ದರೆ….. ಕೆಲ ಆಲೋಚನೆಗಳನ್ನು ತಡಗಟ್ಟುವುದು ಅಸಾಧ್ಯ. “ ಹೋಗ್ಬೇಡ “ ಅಂತ ಹೇಳಬೇಕು ಅನಿಸಿದರೂ ಇಲ್ಲಿಯವರೆಗೆ ತಾನು ಯಾರನ್ನೂ ಹಾಗೆ ನಿಲ್ಲಿಸಿರಲಿಲ್ಲ, ಬರುವವರನ್ನಾಗಲಿ, ಹೋಗುವವರನ್ನಾಗಲಿ. ಅವಳದೆಷ್ಟು ಸಲ ಬಂದಿದ್ದಾಳೋ, ಹೋಗಿದ್ದಾಳೋ ! ಸತ್ಯ ಹೇಳಬೇಕಾದರೆ, ಖಚಿತವಾದ ತನ್ನ ಮೌನವೇ ಅವಳು ಬಂದಾಗಲೆಲ್ಲಾ ಹೋಗಲಿಕ್ಕೆ ಕಾರಣವೇನೋ ! ೨ ತಾನು ಯಾಕೆ ಹೀಗೆ ? ಇಷ್ಟು ನೀರವತೆ ತನಗೇ ಕೆಲಸಲ ಹೆದರಿಕೆಯಾಗುತ್ತೆ.  ಅವಳನ್ನು ಪ್ರಥಮ ಬಾರಿಗೆ ಭೇಟಿಯಾದಾಗ ಅವಳಿಂದ ತಾನು ಏನು ಬಯಸಿದ್ದನೋ ನೆನಪಿಲ್ಲ. ಅವಳು ಹೇಳಿದ ಹಾಗೆ “ ನಿತ್ಯ ಹೆದರಿಕೆಗಳು”. ನಿಜ. ಆದರೆ ಈ ನಗರಕ್ಕೆ ಬರುವ ಮುನ್ನವೇ, ಈ ಕೆಲಸಕ್ಕೆ ಸೇರುವ ಮುನ್ನವೇ ಈ ಹೆದರಿಕೆಗಳು ತನ್ನಲ್ಲಿದ್ದವೇನೋ ! ಅವು ಹೈದರಾಬಾದಿಗೆ ಬಂದಮೇಲೆ ಮತ್ತಷ್ಟು ಜಾಸ್ತಿಯಾಗಿವೆ. ಮುಖ್ಯವಾಗಿ ಮನುಷ್ಯರು, ಗೆಳೆತನ, ಪರಿಚಯಗಳ ಅಪನಂಬಿಕೆಗಳಲ್ಲಿ ಬೆಳೆದ ಹೆದರಿಕೆ. ಇವೆಲ್ಲವನ್ನೂ ಮೀರಿ ತನಗೆ ತಾನೇ ಸೃಷ್ಟಿಸಿಕೊಂಡ ಭಯವಲಯ. ಒಮ್ಮೆ ದಿನಚರಿಯಲ್ಲಿ ತನ ಭಯಗಳ ಪಟ್ಟಿ ಮಾಡಿದ್ದ. ಮೊದಲನೆಯದು, ಈ ಜೀವನ ತನಗೆ ಏನೂ ಕೊಡುವುದಿಲ್ಲವೆಂದು. ಕೊಟ್ಟಹಾಗೆ ಮಾಡಿ ತಂದೆಯನ್ನು ಕಸಿದಿತ್ತು. ಇನ್ನೇನು ವಾಸಿಯಾಗಿದೆ, ಹೆದರಿಕೆ ಇಲ್ಲ ಎನ್ನುವ ಭರವಸೆಯಲ್ಲಿ ಮನೆಗೆ ತಂದ ಮೂರನೆಯ ದಿನವೇ ಅಪ್ಪ ನಿದ್ರೆಯಲ್ಲೇ ಸಾವನ್ನಪ್ಪಿದ್ದರು. ಹಾಗೇನೇ, ಪ್ರಾಣಕ್ಕಿಂತ ಹೆಚ್ಚಾದ ಅಮ್ಮ ಸಹ…. ಕಡೇ ಕ್ಷಣದವರೆಗೂ ಅಮ್ಮ ಇಲ್ಲದ ಜೀವನದ ಕಲ್ಪನೆಯೇ ಇದ್ದಿಲ್ಲ ತನಗೆ. ಎರಡನೆಯದು. ಈ ಸ್ನೇಹ, ಬಂಧಗಳು ಇವೆಲ್ಲ ಹತ್ತಿರವಾದಷ್ಟೂ ದೂರವಾಗಿ ನೋವು ಕೊಡುತ್ತವೆ ಅಂತ. ತಾನು ಚಿಕ್ಕವನಾದಂದಿನಿಂದ ನೋಡಿದರೆ ತನ್ನ ಜೊತೆ ಎಷ್ಟು ಜನ ಉಳಿದಿದ್ದಾರೆ ? ಇನ್ನೇನು ತುಂಬಾ ಹತ್ತಿರವಾದರು ಎನ್ನುವವರೆಲ್ಲ ನಿರ್ದಯವಾಗಿ ದೂರವಾಗಿದಾರೆ. ಅನೇಕ ಕಾರಣಗಳು. ಕೆಲವರ ಸಾವುಗಳು, ಕೆಲವರು ವಿದೇಶಗಳಿಗೆ ಹೋಗಿದ್ದು ಮತ್ತೆ ಕೆಲವರಲ್ಲಿ ಅಕಾರಣ ವೈರತ್ವಗಳು. ಇನ್ನು ಮೂರನೆಯದು. ಅದು ಅತಿ ದೊಡ್ಡ ಭಯ. ಅವಳು ಅದೆಷ್ಟು ಹತ್ತಿರ ಬರುತ್ತಾಳೋ, ಅಷ್ಟು ದೂರವಾಗುತ್ತಾಳೆ ಅಂತ. ಆ ಅಗಲಿಕೆಗೆ ತಾನು ಎಂದೂ ಸಿದ್ದನಿರುವುದಿಲ್ಲ ಎಂದು. ಒಂದು ಮಾತಲ್ಲಿ ಹೇಳಬೇಕಾದರೆ ತನ್ನಲ್ಲಿಯ ಇದ್ದೂ ಇಲ್ಲದ ಭಯಗಳಿಗೆಲ್ಲ ಮಕುಟಾಯಮಾನ ಅವಳು. ಅವಳು ಪ್ರಥಮಬಾರಿಗೆ ತನ್ನ ಜೀವನದಲ್ಲಿ ಬಂದಾಗ …. ತನಗೆ ಆಗಷ್ಟೇ ಬಣ್ಣಗಳ ಗುಟ್ಟು ತಿಳಿಯುತ್ತಿತ್ತು. ಕವನ ಬರೆಯುವುದು ಬಿಟ್ಟು ಬಣ್ಣಗಳಲ್ಲಿ ಅಡಗುವುದು ಶುರುವಾಗಿತ್ತು. ಅದು ಯಾವಾಗ….. ಡಿಗ್ರೀ ಮಾಡುವಾಗ… ಅಲ್ವಾ … ಹೌದು. ನಿಜವಾಗ್ಲೂ ಅಡಗುವುದೇ. ಆಗಿಂದಲೂ ಅವಳು ಹಾಗೇ ಇದಾಳೆ. ತಾನೇ ಹಾಗೇ ಇಲ್ಲ ಅಂತ ತನಗೆ ಗೊತ್ತು. ಅವಳಿಗೆ ಮುಚ್ಚು ಮರೆ ಇಲ್ಲ. ತಾನು ಹೇಳಬೇಕೆನ್ನುವುದನ್ನು ಮುಖದಮೇಲೆನೇ ಹೇಳಿಬಿಡುತ್ತಾಳೆ. ಅವಳ ಎದುರಲ್ಲಿ ತಾನು ಎರಡು ಭಿನ್ನ ಲೋಕಗಳಲ್ಲಿ ಓಡಾಡಿದ ಹಾಗೆ ಇರುತ್ತದೆ. ಅವಳಿಗೆ ಎಲ್ಲವನ್ನೂ ಹೇಳಿಬಿಡಬೇಕೆನಿಸುತ್ತದೆ. ಏನೂ ಹೇಳಲು ಇಲ್ಲದ ಜೀವನ ಅಂತಲೂ ಅನಿಸುತ್ತದೆ. ಕವನ ಬಿಟ್ಟದ್ದೇ ಮಾತಿನ ಮೇಲೆ ನಂಬಿಕೆಯೋ ಮತ್ತೊಂದೋ ಕಳೆದುಕೊಂಡಾಗ! ಇನ್ನೂ ಆ ಮಾತುಗಳಲ್ಲಿ ತಾನೇನೂ ಹೇಳಲಿಕ್ಕೆ ಇಲ್ಲ ಎಂದು ಖಾತ್ರಿ ಮಾಡಿಕೊಂಡ ಹಾಗೆ ಇರುತ್ತಾನೆ ತಾನು. ಮತ್ತೆ ಇವತ್ತು ಬರುತ್ತಾಳೆ ಅವಳು. ಈ ಒಬ್ಬಂಟಿ ಕೋಣೆಯನ್ನು ಅವಳಿಗೋಸ್ಕರ ಸ್ವಲ್ಪ ಸ್ವಚ್ಛ ಮಾಡಬೇಕೆಂದು ಅನಿಸುತ್ತೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ  ಪುಸ್ತಕಗಳು, ಹಾಸಿಗೆ ಮೇಲೆ ಹರಡಿಕೊಂಡಿದ್ದ ಹೊದಿಕೆ, ದಿಂಬುಗಳು, ಕಿಚೆನ್ ನಲ್ಲಿಯ ನಾತ. ಯಾಕೆ ತೂಗೊಂಡಿದಾನೋ ಗೊತ್ತಿಲ್ಲದ ಡ್ರೆಸಿಂಗ್ ಟೇಬಲ್ ಮೇಲಿನ ಧೂಳು ಎಲ್ಲಾ ಸ್ವಚ್ಛ ಮಾಡಿ, ತಾನೂ ಸ್ನಾನ ಮಾಡಿ ಕೂರಬೇಕೆಂದು ಅಂದುಕೊಳ್ಳೋದು… ಇನ್ನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾಳೆ ಅವಳು. ಅವಳು ಹೊತ್ತು ತರುವ ಪರಿಮಳ, ಮಿಂಚಿನಂತಿರುವ ನಗೆ, ಕೆಲ ಮಾತುಗಳು…. ತನಗೆ ಸದಾ ಬೇಕು. ಮತ್ತೆ ಕೆಲ ಸಮಯದಲ್ಲಿ ಬರುತ್ತಾಳೆ. ಅವೆಲ್ಲ ಅವಳ ಜೊತೆಯಾಗಿ ಬರುತ್ತವೆ. ಹೊರಟುಹೋಗುತ್ತವೆ. ನಂತರ ಬರೀ ತಾನೂ, ತನ್ನ ಬಣ್ಣಗಳ ಶಿಥಿಲಗಳು. ೩ ಬೇಸಿಗೆಯ ರಜೆಯಲ್ಲಿ ಮೊದಲನೆಯ ಸಲ ಹಾಗೆ ಬಂದಿದ್ದಳು ಅವಳು ! ಆ ರಜೆಗಳಲ್ಲಿ ವಾನ್ ಗೋಗ್ ನ ಜೀವನ ಚರಿತ್ರೆ “ ಲಸ್ಟ್ ಫರ್ ಲೈಫ್ “ ಅವಳು ತಂದು ಕೊಟ್ಟದ್ದೇ ! ನಂತರ ಸಹ ಅವಳು ಯಾವುದೋ ಒಂದು ತಂದುಕೊಡುತ್ತಲೇ

ಬಂದು ಹೋಗುವ ಮಳೆಯಲ್ಲಿ Read Post »

ಕಾವ್ಯಯಾನ

ಶಾವಾತ್ಮ ಪದಗಳು

ಕವಿತೆ ಮಡಿಕೆಯಡಿಯ ಬೆಳಕು ಶಾಂತಿವಾಸು ಮಡಚಿಡು ಮಡಿಕೆಯಾಗಿ…ಅಣುವು ಕೂಡಾ ಅನುವಾಗೆರಗಿದ ಅನುಭವವ ನಾಳೆಗಾಗಿ…. ಮಡಚಿಡು ಸಂತಸದಿಂದ…ಕದಡಿದ ನಿನ್ನ ಮನದ ಕತ್ತಲೆಯೊಳು, ರವಿ ಸಂಚಯಿಸಿದ್ದನ್ನು ಜತನದಿಂದ…. ಮಡಚಿಡು ಇಂದಿನ ನಿರಾಶೆಯ…ಇರಲದರಲಿ, ದುಃಖ ಅಲ್ಪಾಯುವೆಂದು ಸಾರುವ ಸಂದೇಶದ ಸದಾಶಯ… ಮಡಚಿಡು ಸೋಲುಗಳ ಸರಮಾಲೆ…ತೆರೆದು ನೋಡಲದುವೇ ಏಣಿ ಗೆಲುವಿಗೆ, ಗಟ್ಟಿಹೆಜ್ಜೆ ಇಟ್ಟು ಏರಲು ಮೇಲೆ ಮೇಲೆ… ಮಡಚಿಡು ಈಜಿ ಗೆದ್ದ ಜಯವನ್ನು …ವಿಧಿಯಾಟದ ದಾಳವಾಗುರುಳುವಾಗ ನೀನೇ ಅರಿಯಲು ನಿನ್ನಿರಿಮೆಯನ್ನು.. ಮಡಚಿಡು ಅಡಿಯಲ್ಲಿ ಸೋಲುಗಳ, ಸದಾ ಸುಳಿದಾಡಿ ಸೊಲ್ಲೆತ್ತದಂತೆ…ಎಲ್ಲಕ್ಕಿಂತ ಮೇಲೆ ಮಡಚಿಡು, ಸೋಲನ್ನು ಗೆದ್ದ ಖುಷಿಯ ಒಂದೊಮ್ಮೆ ಕಾಣಲು, ನಿನ್ನದೇ ಮನದ ಕತ್ತಲೊಳಿಣುಕುವ ಬೆಳಕು ಆರದಂತೆ… ********

ಶಾವಾತ್ಮ ಪದಗಳು Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ಮರಿಕಪ್ಪೆ ಹಾರಿತು ಬಾವಿಯ ಹೊರಗೆ ಚಾವಣಿಯ ಹೊರೆ ಕಳೆದು ಶಿಥಿಲವಾದರೂ ನಿಂತೇ ಇದ್ದ ಗೋಡೆಯದು.  ಆ ಮೋಟುಗೋಡೆಯ ಮಗ್ಗುಲಲ್ಲಿ  ಕಪ್ಪೆಯಂತೆ ಹಾರಿ ಆ ಬದಿಯ ಕಿಟಕಿಯ ಚೌಕಟ್ಟಿಗೆ ಒಂದು ಕಾಲುಕೊಟ್ಟು  ಬಲಗೈಯಿಂದ ಕಿಟಕಿಯ ಸರಳು ಹಿಡಿದು ಮೇಲೇರಿ ಎಡಗಾಲು ಎತ್ತಿ ಆ ಅರ್ಧಗೋಡೆಯ ಮೇಲೆ ಇಟ್ಟು ದೇಹವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತ ಕೈಗಳನ್ನೂ ಗೋಡೆಯ ಬೋಳುತಲೆ ಮೇಲೆ ಊರಿ ಪುಟ್ಟ ಲಗಾಟೆ ಹೊಡೆದು ಗೋಡೆ ಏರಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ  ಸಿಂಹಾಸನವದು. ಏರಿ ಕೂತವಳು ಮಹಾರಾಣಿ. ಉಳಿದವರು ನೆಲದಲ್ಲಿ ಕೂತು ಮಹಾರಾಣಿಯ ಆಜ್ಞೆಗೆ ಕಾಯಬೇಕು. ಭಾರತಿ ನಾಟಕದ ಮುಂದಿನ ಅಂಕದ  ನೆನಪಿನಲ್ಲಿ ಗೊಣಗುತ್ತಿದ್ದಳು.” ಹೇ, ನಾಳೆ ನಾನು ಮಹಾರಾಣಿ. ನೆಲದಲ್ಲಿ  ಎಷ್ಟು ಮಣ್ಣು ನೋಡು.”  ರಸ್ತೆಯ ಮೇಲಿನ ಧೂಳು ಮಣ್ಣು ಹಾರಿ ಬಂದು ದಪ್ಪಗೆ ನೆಲದಲ್ಲಿ ಕೂತಿರುತ್ತಿತ್ತು. ನಾವು ಅದರಲ್ಲಿ ತೋರು ಬೆರಳಿನಿಂದ ಹೆಸರು ಬರೆಯುವುದೂ ಇತ್ತು. ಅಲ್ಲಿ ಆಟ ಆಡಿ ಹೋದ ಸಂಜೆ ಮನೆಯಲ್ಲಿ ಬಯ್ಗಳಿಗೆ ಏನೂ ಬರವಿಲ್ಲ. ಅಂಗಿಯೆಲ್ಲ‌ ಕೆಂಪು. “ನಿಮಗೆ ಆಡಲು ಬೇರೆ ಜಾಗ ಇಲ್ವಾ”. ಅವಳ ಅಮ್ಮ ಒಂದೇ ಸಮನೆ ಗೊಣಗುತ್ತಿದ್ದರು. ಪಾಪ,ಹಗಲಿಡೀ ಹೋಟೇಲಿನ ಕೆಲಸ. ಈಗಿನಂತೆ ಗ್ರೈಂಡರ್ , ಮಿಕ್ಸಿಗಳಿಲ್ಲ.  ಚಚ್ಚೌಕ  ತೆರೆದ ಚಾವಡಿಯ ಮನೆ. ಮನೆಗೆ ಹಿಂದಿನಿಂದ ಬಾಗಿಲು. ಎದುರು ಹೋಟೇಲ್. ಒಳಗಡೆ ಕಾಲಿಟ್ಟರೆ ಮೊದಲು ಕಾಣಿಸುವುದೇ ದೊಡ್ಡದಾದ ಅರೆಯುವ ಕಲ್ಲು. ಸಂಜೆ ಐದು ಗಂಟೆಯಿಂದ ರಾತ್ರಿ 8.30 ರತನಕವೂ ಆಕೆಯ ಕೈಗಳು ಅದರ ಮೇಲೆ ವೃತ್ತಾಕಾರದಲ್ಲಿ ತಿರುಗುತ್ತಲೇ ಇರುತ್ತದೆ. ಅರೆಯುತ್ತಲೇ ಬದುಕು ಆಕೆಯನ್ನೇ ಅರೆದಂತೆ.   ಅದನ್ನು ದಾಟಿದರೆ ಒಂದು ಕಬ್ಬಿಣದ ಒಲೆ. ಅದರ ಮೇಲೆ ಪಾತ್ರೆ.  ಮುಂದುವರೆದರೆ ಉದ್ದದ ಎರಡು ಮೆಟ್ಟಲು, ನಂತರ ಅಡುಗೆ ಮನೆ.  ಹಗಲಿನ ವೇಳೆ ಆಕೆ ದೊಡ್ಡ ಉರಿಯ ಮೂರು ಒಲೆಗಳ ಎದುರು ನಿಂತು ದೋಸೆ, ಬನ್ಸ್, ಪೋಡಿ,ಚಹಾ..ಎಂದು ಉರಿಯುತ್ತಾ ಇರುತ್ತಾಳೆ. ಅದರ ಪಕ್ಕ ಒಂದು ಬಾಗಿಲು. ಒಳಗಡೆ ಎರಡು ಕೊಠಡಿ. ಸಂಜೆ ಬೆಂಕಿಯೊಂದಿಗಿನ ಅನುಸಂಧಾನ ಮುಗಿಸಿ ಕೊಳ್ಳಿಯನ್ನು ಗಂಡನ ಸುಪರ್ದಿಗೆ ಕೊಟ್ಟು ಒಳಗೋಡಿ ಬರುತ್ತಾಳೆ. ಆಗ ಹೆಚ್ಚಾಗಿ ನಮ್ಮ ಪ್ರವೇಶ. ಕೆಂಪು ಬಣ್ಣದ ಅಂಗಿಯೊಂದಿಗೆ. ಅದು ಯಾವ ಬಣ್ಣವಿದ್ರೂ ಆ ಸಮಯ ಕೆಂಪಾಗಿರುತ್ತದೆ. ಸೂರ್ಯಾಸ್ತದ ರವಿಯಂತೆ. ಕಳ್ಳರಂತೆ ಒಳಹೊಕ್ಕು ಅಲ್ಲಿ ನಮ್ಮ ಅಟ,ಚರ್ಚೆ ಮುಂದುವರಿಯುತ್ತಿತ್ತು.  ” ಕೈ ಇಡು..ಅಟ್ಟಮುಟ್ಟ ತನ್ನ ದೇವಿ ನಿನ್ನ ಗಂಡ ಎಲ್ಲಿ ಹೋದ..” ಅಂಗೈ ಅಂಗಾತವಾಗಿರಿಸಿ ಮುಚ್ಚಿ ತೆಗೆದು ಆಟ, ಕೆಲವೊಮ್ಮೆ ಕಣ್ಣಮುಚ್ಚಾಲೆ.  ನಮ್ಮ ಅಂದಿನ ಖಳನಾಯಕನಾದ ಅವಳ ಅಣ್ಣನ ಪ್ರವೇಶದವರೆಗೂ ಮುಂದುವರಿಯುತ್ತಿರುತ್ತದೆ. ಅವನು ಬಂದು ಬಾಗಿಲ ಬಳಿ ನಿಂತು ಕಣ್ಣ ದೊಡ್ಡದು ಮಾಡುತ್ತಿದ್ದ. ” ಒಳಗೆ ಬರಲು ಯಾರು ಹೇಳಿದ್ದು? ನನ್ನ ಬೆದರಿಸುತ್ತಿದ್ದ. ನಾಯಿ ಉಂಟು. ಈಗ ನಾಯಿ ಬಿಡ್ತೇನೆ”. ನಾನು ಹೆದರಿ ಕಳ್ಳಬೆಕ್ಕಿನಂತೆ ಅಲ್ಲಿಂದ‌ ಪಲಾಯನ ಮಾಡುತ್ತಿದ್ದೆ. ಅವಳ ಅಮ್ಮನ ಸ್ವರ ನನ್ನ ಹಿಂಬಾಲಿಸುತ್ತಿತ್ತು. ” ನೋಡು ಅವರ ಅಂಗಿ ನೋಡು, ಅದರ ಬಣ್ಣ ನೋಡು..ಹೇಗಾಗಿದೆ. ಯಾರು ಒಗೆಯೋದು.”‘ ಶ್ರೀಮತಿಯ ಕಣ್ಣಿನಲ್ಲಿ ಕಾಣುವ ಮುಂದಿನ ದೃಶ್ಯಗಳು ನನ್ನ‌ ಮನಸ್ಸಿನ ಮಂಟಪದಲ್ಲೂ ಕುಣಿದು ನಾನು ಮುರಿದ ಗೋಡೆಯ ಸಿಂಹಾಸನದಲ್ಲಿ ಕೂತು  ಅಜ್ಞಾಪಿಸುತ್ತಿದ್ದೆ ‘ ಕೂತು ಆಟ ಬೇಡ. ನಿಂತೇ ಮಾತನಾಡಬೇಕು.’ ಆಟದ ನಾಟಕ ಮುಂದುವರಿಯುತ್ತಿತ್ತು. ಇಲ್ಲಿ ರಾಣಿ,ಸಖಿಯರು,ಅಂತಃಪುರ ಇರುತ್ತಿತ್ತು. ನಾವು ನಾಲ್ಕು ಜನ ಸಖಿಯರು. ಆದರೆ ಮೂವರೇ ಇದ್ದಾಗ ಆಟಕ್ಕೆ ಚ್ಯುತಿಬಾರದಂತೆ ಆ ಪಾತ್ರವನ್ನು ಕಲ್ಪಿಸಿಕೊಂಡು ಮಾತನಾಡುತ್ತಿದ್ದೆವು.  ಒಮ್ಮೆ ರಾಜಕುಮಾರಿಯರ ವಸ್ತ್ರ ಸಂಹಿತೆ ಬಗ್ಗೆ ಮಾತಾಗಿ ನಾವು ಒಂದೇ ರೀತಿಯ ವಸ್ತ್ರ ತಲೆಯ ಮೇಲಿನಿಂದ ಇಳಿಬಿಡಬೇಕು ಎಂಬ ನಿರ್ಣಯಕ್ಕೆ ಬಂದೆವು. ನನ್ನ ಒಬ್ಬ ಗೆಳತಿಯ ಬಳಿ ಅವಳಮ್ಮನ ಹಳದಿಬಣ್ಣದ ನೈಲಾನ್ ಸೀರೆಯ ಉದ್ದದ ತುಂಡಿತ್ತು. ಅದು ಬಹಳ ಚೆಂದವೂ ಇತ್ತು. ಅದರ ಮೇಲೆ ವಿವಿಧ ಹೂವುಗಳ ಚಿತ್ತಾರ. ನನ್ನ ಬಳಿಯೂ ಅದೇ ಬಣ್ಣದ ಅಮ್ಮನ ಸೀರೆ ಇದೆಯೆಂದೆ. ಶ್ರೀಮತಿ ನನ್ನಲ್ಲೂ ಇದೆ ಎಂದಳು. ಮರುದಿನ ನಾಟಕಕ್ಕೆ ವೇಷ ಭೂಷಣ ತಯಾರು. ಮರುದಿನ. ನಾವು ಮೂವರು ಗೆಳತಿಯರು ಸುಂದರವಾದ ಹಳದಿ ಬಣ್ಣದ ಪರದೆ ತಲೆಯ ಮೇಲಿನಿಂದ ಇಳಿಬಿಟ್ಟು ರಾಜಕುಮಾರಿಯರಾದೆವು.  ಆದರೆ ಆಟದ ಅರ್ಧದಲ್ಲೇ ಗೆಳತಿಗೆ‌ ಮನೆಯಿಂದ ಬುಲಾವ್. ಆಕೆ ಓಡಿದಳು.ಅವಳು ಹಿಂದಿನ ದಿನ ಹಳದಿ ಬಣ್ಣದ ತನ್ನ ಅಮ್ಮನ  ಸೀರೆಯ ಸೆರಗು ಕತ್ತರಿಸಿ ತಂದಿದ್ದಳು!!. ಇದರ ಪರಿಣಾಮ, ಮುಂದಿನ ಕೆಲವು ದಿನಗಳ ಕಾಲ ಒಬ್ಬ ರಾಜಕುಮಾರಿಯ ಅನುಪಸ್ಥಿತಿಯಿಂದ ನಮ್ಮ ಗೋಡೆರಂಗದ ನಾಟಕ ರದ್ದಾಗಿತ್ತು. ಮಾತ್ರವಲ್ಲ ಅವರ ಮನೆಯ ಸುತ್ತ ಬಾರದಂತೆ ನಮಗೆ ನಿರ್ಬಂಧ ಹೇರಲಾಗಿತ್ತು. ರಂಗದ ಹಕ್ಕಿಗಳ ರೆಕ್ಕೆ ಪುಕ್ಕ ಈ ಆಟಗಳು. ನಮ್ಮ ಶಾಲೆಯ ಹಿಂದುಗಡೆ ಅಶ್ವಥ್ಥಮರದ ಕಟ್ಟೆಯಿತ್ತು. ಅಲ್ಲಿ‌ ನಮ್ಮ ಮನೆಯಾಟ. ನಮ್ಮ ತರಗತಿಯ ಗೆಳತಿಯರು ಸೇರಿ ಆಟವಾಡುತ್ತಿದ್ದೆವು. ಸುಂದರ ಪಾತ್ರಗಳು, ಆ ಪಾತ್ರಗಳ ನಡುವಿನ ಸಂಭಾಷಣೆ, ಮಾತು, ನಗು, ಅಳು, ಸಂಬಂಧ ಆ ಕಟ್ಟೆಯ ಮೇಲೆ ಒಳಗೊಳಗಿಂದಲೇ ಅರಳುತ್ತಿತ್ತು. ಅಲ್ಲಿ ಅದೆಷ್ಟು ವೇಗದಲ್ಲಿ ಪಾತ್ರಗಳೂ ಬದಲಾಗುತ್ತಿದ್ದವು. ಅಪ್ಪ ಅಮ್ಮ ಮಗ, ಮಗಳು. ಅಜ್ಜ ಅಜ್ಜಿ, ಡಾಕ್ಟರ್,ಕಂಪೌಂಡರ್,ಮನೆ ಕೆಲಸದಾಳು,ಟೀಚರ್,ಅಂಗಡಿ ಆಸ್ಪತ್ರೆ,ಹೋಟೆಲ್, ಎಲ್ಲವೂ ನಮ್ಮ ಮನೆಯಾಟದ ಪಾತ್ರಗಳು. ಅಪ್ಪನ ಬಳಿ ಅಮ್ಮನ ದೂರುಗಳು. ಅಪ್ಪ ಮಕ್ಕಳನ್ನು ಕರೆದು ವಿಚಾರಣೆ, ಪುಟ್ಟಪುಟ್ಟ ಬಾಟಲುಗಳಲ್ಲಿ ಔಷಧಿ, ಇಂಜೆಕ್ಷನ್ ಚುಚ್ಚುವ ದಾದಿ, ಅಳುವ ಮಗು,ಹೀಗೇ ಕಂಡದ್ದೆಲ್ಲಾ ಪಾತ್ರಗಳೇ.  ನಮ್ಮ ಶಾಲೆಯ ಹಿಂದುಗಡೆ ಖಾಲಿ ಜಾಗ. ಪುಟ್ಟ ಮೈದಾನ. ಅದರಾಚೆ ದೇವಾಲಯದ ಗದ್ದೆಗಳು. ಅಲ್ಲೇ ಜಾತ್ರೆಯ ಸಮಯದಲ್ಲಿ ಸರ್ಕಸ್, ಉಯ್ಯಾಲೆ,ಕುದುರೆ, ನಾಟಕ ಮೊದಲಾದವು ನಡೆಯುವುದು. ಜಾತ್ರೆಯ ನಂತರವೂ ಕೆಲದಿನ ಸರ್ಕಸ್ ನ ಮಂದಿ ಇರುತ್ತಿದ್ದರು. ನಾವು ನಮ್ಮ ಶಾಲೆಯ ಹಿಂಬದಿಗೆ ಹೋಗಿ ಅವರ ವೇಷ, ಪ್ರಾಣಿ, ಪಂಜರ ಮೊದಲಾದುವುಗಳನ್ನು ಅತ್ಯಂತ ಕುತೂಹಲದಲ್ಲಿ ನೋಡುವುದು.  ಈ ಸರ್ಕಸ್ ನವರ ಬಳಿ ಸ್ಪಂಜಿನಿಂದ ತಯಾರಿಸಿದ  ಬಣ್ಣದ ಗುಲಾಬಿ ಹೂಗಳು ಮಾರಾಟಕ್ಕಿದ್ದವು. ದೊಡ್ಡದು ಹಾಗೂ ಸಣ್ಣದು. ಒಂದು ಹೂವಿಗೆ ಒಂದು ರೂಪಾಯಿ. ನಮಗೆ ಅದರ ಬಹಳ ಆಸೆಯಾಗಿ ವ್ಯಾಮೋಹಕ್ಕೆ ತಿರುಗಿತ್ತು. ಆದರೆ ಹಣವೆಲ್ಲಿಂದ ಬರಬೇಕು? ಸಂಜೆ ನಮ್ಮ ಶಾಲೆಯ ಮೈದಾನದ ತುದಿಯಲ್ಲಿ ನಿಂತು ವಿಚಾರಿಸುತ್ತಿದ್ದೆವು. ನೀವು ಎಷ್ಟು ದಿನ ಇರುತ್ತೀರಿ?  ಕೊನೆಗೂ ನಾವು 5-6 ಜನ ಸೇರಿ  ಒಂದು ಗುಲಾಬಿ ಕೊಳ್ಳಲು ಹಣ ಸೇರಿಸಿದೆವು.ಅದನ್ನು ದಿನಕ್ಕೊಬ್ಬರು ಮನೆಗೆ ಕೊಂಡೊಯ್ಯುವುದು. ಬೆಳಗ್ಗೆ ಚೀಲದಲ್ಲಿ ಹಾಕಿ  ಮತ್ತೆ ತರಬೇಕು.ನಾವು ಬಹಳ ಖುಷಿಯಲ್ಲಿ ನಮ್ಮ ಮೈದಾನದ ತುದಿಯಲ್ಲಿ ನಿಂತು ವ್ಯಾಪಾರ ಕುದುರಿದೆವು. ಗುಲಾಬಿ ಹೂ ನಮ್ಮೊಳಗೆ ಹೊಸ ಪಾತ್ರವಾಯಿತು. ಎಲ್ಲದರ ನಡುವೆ ಪುಟ್ಟ ದೀಪವೊಂದು ಅಂತರಂಗದಲ್ಲಿ  ಬೆಳಗುತ್ತ ಯಾವುದೋ ಸಂದೇಶ ರವಾನಿಸುತ್ತಲೇ ಇತ್ತು. ಹೌದು, ಬಣ್ಣ ಹಾಕಿ ಹೊಸ ವೇಷದಲ್ಲಿ ವೇದಿಕೆ ಏರಬೇಕು. ಅಲ್ಲಿ ಎದುರುಗಡೆ ಅದೆಷ್ಟು ಜನ ತುಂಬಿಕೊಂಡಿರಬೇಕು. ಅವರೆದುರು ನಾನು ವಸಂತಸೇನೆ, ಶಕಾರ, ಶಬರಿ, ದ್ರೌಪದಿ, ಅಜ್ಜಿ ಓದಿಸಿದ ಕಥೆಗಳ ನಾಯಕಿ. ಎಲ್ಲರೂ ನನ್ನೊಳಗೆ ಬರಬೇಕು. ಅವರನ್ನು ಜನರೆದುರು ಕರೆತಂದು ತೋರಿಸಬೇಕು. ಅಭಿನಯಿಸಬೇಕು. ಆದರೆ ನನ್ನ ಒಳಗಿನ ಪಾತ್ರಗಳು, ಯಾರಾದರೂ ಕಣ್ಣರಳಿಸಿದರೂ ಅಜ್ಜಿಯ ಸೆರಗಿನ ಹಿಂದೆ ಮರೆಯಾಗುತ್ತಿದ್ದವು. ನಾಲ್ಕು ಜನ ನಿಂತರೆ ಎದುರು ಹೋಗಲಾಗದೆ ಕಾಲು ನಡುಗುತ್ತಿತ್ತು. ವೇದಿಕೆಯ ಮೆಟ್ಟಲಾದರೂ ಹತ್ತುವುದು ಆದೀತೇ? ನಾಲ್ಕನೆಯ ತರಗತಿಯಲ್ಲಿ ವಾರ್ಷಿಕೋತ್ಸವ ಸಮಯದ ಸೋಲು ಇದ್ದ ಸ್ವಲ್ಪ ಧೈರ್ಯವನ್ನೂ ಎತ್ತಿಕೊಂಡು ಓಡಿತ್ತು. ಅಂದು ಅಜ್ಜಿಯ ಎದುರು ಒದ್ದೆ ಬೆಕ್ಕಿನಮರಿಯಂತೆ ಕೂತಿದ್ದೆ. ಸೂತ್ರಧಾರಿಣಿ ಎತ್ತಿ ಮಡಿಲಿಗೆ ಎಳೆದು ಕೊಂಡಿದ್ದಳು” ಸೋಲಿಗೆ ಹೆದರಬಾರದು ನನ್ನ ಮಗೂ”ಬಿಕ್ಕುವ ಬಿಕ್ಕಿಗೆ ತಲೆ ನೇವರಿಸುತ್ತಾ ಮುಲಾಮು ಆದಳು. ” ನೀನು ಯುದ್ದ ಭೂಮಿಗೆ ಹೋಗಲು  ನಿನ್ನನ್ನು ನೀನೇ ತಯಾರು ಮಾಡಬೇಕು. ಸೋಲು ಗೆಲುವಿನ ಬಗ್ಗೆ ಚಿಂತಿಸಬಾರದು. ರಣಭೂಮಿಯನ್ನೇ ನೋಡಲಿಲ್ಲ ನೀನು. ದಂಡನಾಯಕಿ ಆಗುವುದು ಹೇಗೆ? ‘ಬರೀ ದಂಡ’ ಆಗಬಾರದು. ಸೋಲಿನ ರುಚಿ ಸವಿದ ಬಳಿಕದ ಗೆಲುವಿಗೆ ಸಂತಸ ಹೆಚ್ಚು”  ಆಗ ಏಳನೇ ತರಗತಿ. ಶಾಲೆಯಲ್ಲಿ ಹಲವಾರು ಪಠ್ಯೇತರ ಚಟುವಟಿಕೆಗಳು. ಡಿಬೇಟ್, ಭಾಷಣ, ಪದ್ಯ,ವಿದ್ಯಾರ್ಥಿ ನಾಯಕ ಚುನಾವಣೆಗಳು,ಮಂತ್ರಿಮಂಡಲ ಹೀಗೆ ಗರಿಗೆದರಿ ಕುಣಿಯುವ ಚಟುಚಟಿಕೆಗಳು.  ಅಚ್ಚರಿಯ ತಿರುವಿಗೆ  ಮುಖ ತಿರುಗಿಸಿತ್ತು ಬದುಕು. ಆಗೆಲ್ಲ ಪ್ರತೀ ತಿಂಗಳ ಎರಡನೆಯ ಶನಿವಾರ ಪಠ್ಯೇತರ ಚಟುವಟಿಕೆಗಳಿಗೆ ವೇದಿಕೆ.  ” ನೋಡು ಬರುವ ಕಾರ್ಯಕ್ರಮ ನಮ್ಮ ಕ್ಲಾಸಿನದ್ದು ಆಗಬೇಕು. ಅದು ಬಹಳ ಚೆಂದ ಇರಬೇಕು.  ಡ್ಯಾನ್ಸ್ ಬೇರೆ ಕ್ಲಾಸಿನವರು ಮಾಡ್ತಾರೆ. ನಾವು ನಾಟಕ ಮಾಡಬೇಕು. 30 ನಿಮಿಷ. ನೀನೇ ಅದರ ಎಲ್ಲ ಜವಾಬ್ದಾರಿ ವಹಿಸಬೇಕು. ಗೊತ್ತಾಯ್ತಾ” ನಮ್ಮ ಕ್ಲಾಸ್ ಟೀಚರ್ ಅವರು ನನ್ನತ್ತ ನೋಡಿ ಹೇಳುತ್ತಲೇ ಇದ್ದರು. . ನನಗೆ ಸಂತಸ,ಭಯ ಮಿಶ್ರಿತವಾದ ಭಾವ. ಪುಕುಪುಕು ಅನಿಸಿದರೂ ಮಾಡಲೇಬೇಕು ಎಂಬ ಹಠ. ಈ ಸಲ ಹೆದರಬಾರದು. ಅಜ್ಜಿಯನ್ನು ಗೋಗೆರೆದೆ. ಇದ್ದ ಕಥೆ ಪುಸ್ತಕ ರಾಶಿ ಹಾಕಿದೆ. ಹೊಸದರ ಸಂಭ್ರಮ. ಊಟ,ತಿಂಡಿಯೂ ರುಚಿಸದಂತೆ ನಾಟಕದ ನಶೆ ಆಟವಾಡುತ್ತಿತ್ತು.  ಯಾವ ನಾಟಕ ಮಾಡಬಹುದು, ಹೇಗೆ, ಎಷ್ಟು ಪಾತ್ರಗಳು ಯಕ್ಷಗಾನದ ವೇಷಗಳು, ಚಂದಮಾಮದ ಚಿತ್ರಗಳು,ಅಜ್ಜಿ ಕಟ್ಟಿಕೊಟ್ಟ ಪಾತ್ರಗಳು ಎಲ್ಲವೂ ಎದುರಾದಂತೆ. ನಾರಾಯಣ ಮಾಮ ಕೊಟ್ಟ ಹಳೆಯ ಪುಸ್ತಕದಲ್ಲಿ ಮೂರು ಕಥೆಗಳಿದ್ದವು. ಅಜ್ಜಿಯ ಬಳಿ ಓಡಿದೆ. “ಸರಿ. ಅದನ್ನು ಚೆಂದ ಮಾಡಿ ಪುಸ್ತಕದಲ್ಲಿ ಮಾತುಗಳಾಗಿ ಬರಿ” ಎಂದಳು. ಅದು ದೊಡ್ಡ ಸಂಗತಿಯಲ್ಲ. ಅಶ್ವಥ್ಥ ಕಟ್ಟೆಯ ಮೇಲೆ, ಮೋಟು ಗೋಡೆಯ ಮೇಲೆ ಚಾಲ್ತಿಗೆ ತಂದ ಕೆಲಸ ಈಗ ಅಕ್ಷರಕ್ಕೆ ತರಬೇಕು. ವಾಲಿವಧೆ ಕಥೆ ನಾಟಕವಾಯಿತು. ಪ್ರತಿ ಪಾತ್ರಗಳೂ ನನ್ನೊಳಗೆ ಕುಣಿಯುತ್ತಿದ್ದವು.  ನಾಟಕ ಮೂಡಿದ ನನ್ನ ಅರ್ಧ ಹರಿದ ಪುಸ್ತಕವನ್ನು,  ಮಗುವನ್ನು ಅಪ್ಪಿಕೊಂಡು ನಡೆದಂತೆ ಶಾಲೆಗೆ ಕೊಂಡೊಯ್ದೆ. ಟೀಚರ್ ಸಲಹೆಯಂತೆ ಪಾತ್ರಗಳಿಗೆ ಗೆಳತಿಯರನ್ನು ಆರಿಸಿದೆ. ನನ್ನ ಚೆಂದದ ಗೆಳತಿ ತಾರೆಯಾದಳು,ಮತ್ತೊಬ್ಬಳು ಸುಗ್ರೀವ, ಇನ್ನೊಬ್ಬಳು ರಾಮ,ಲಕ್ಷ್ಮಣ..  ನಾಟಕದ ಪ್ರೀತಿಯಿಂದ ಬಂದ ಉಳಿದ ಸಂಗಾತಿಗಳನ್ನೆಲ್ಲ ತ್ರೇತಾಯುಗಕ್ಕೆ ಕಳುಹಿಸಲಾಯಿತು. ನಾನು ನಿರ್ದೇಶಕಿ. ಎಲ್ಲರಿಗೂ ಹೇಳಿಕೊಡುವ ಟೀಚರ್!..ಎಂತಹ ಸಂಭ್ರಮ, ಪುಳಕ. ಮನೆಗೆ ಬಂದು ನಾನು ಕಂಡ ಯಕ್ಷಗಾನ ನೆನಪಿಸಿ ಆ ಅಭಿನಯ ಮನಸ್ಸಿನ ರಂಗಕ್ಕೆ ಕರೆತರುತ್ತಿದ್ದೆ. ಅವರ ನಡಿಗೆ, ವೇಷ, ಮುಖದ ಭಾವ, ಚಲನೆ, ಸ್ವರ. ನಾನು ಬೇರಾವುದೋ ಲೋಕಕ್ಕೆ ಸೇರ್ಪಡೆಗೊಂಡ ಅಮಲು. ನನ್ನ ಗೆಳತಿಯರೂ ಸಂಭ್ರಮಿಸುತ್ತಿದ್ದರು. ಆ ತಿಂಗಳು ನೃತ್ಯದಲ್ಲಿ ಭಾಗವಹಿಸುವ  ಸಹಪಾಠಿಗಳೆದರು ಜಂಭ.” ನಾವು ನಾಟಕ ಮಾಡಲಿಕ್ಕುಂಟು. ನೀವು ಎಂತ ಡ್ಯಾನ್ಸ್. “ ಇನ್ನೇನು ಬಂದೇಬಿಟ್ಟಿತು. ಕೇವಲ ಮೂರು ದಿನವಿದೆ ಅನ್ನುವಾಗ ನಮ್ಮ ಟೀಚರ್ ಟ್ರಾಯಲ್ ನೋಡಿ ನನ್ನ ಕರೆದವರು,” ಚೆಂದ ಆಗ್ತಾ ಉಂಟು . ನಮ್ಮ ರಂಜೂಗೆ ಒಂದು ಪಾತ್ರ ಕೊಡು”  ರಂಜನ್ ನಮ್ಮ ಟೀಚರ್ ಮಗ. ಮೂರು ವರ್ಷದವನು. ಟೀಚರ್ ನನ್ನಲ್ಲಿ ಕೇಳುವುದು. ಹಾಗಿದ್ದರೆ ಇದನ್ನೂ ನಾನು ಮಾಡಲೇಬೇಕು. ಮನೆಗೆ ಬಂದೆ. ನಾಟಕವನ್ನು ಮತ್ತೆ ತಿರುವಿ ” ಅಂಗದ” ಮರಿಮಂಗ ಪುಟಕ್ಕನೆ ಜಿಗಿದ. ತಮ್ಮ ಸುಗ್ರೀವನ ಬಳಿ ಯುದ್ದಕ್ಕೆ ತೆರಳುವ ವಾಲಿಯನ್ನು ತಡೆದು ಪ್ರಶ್ನಿಸುವ ಕಂದ‌. ಟೀಚರ್ ಅಚ್ಚರಿಯಿಂದ ” ಹೇ ನಿಜವಾಗ್ಲೂ

Read Post »

You cannot copy content of this page

Scroll to Top