ಸಂಕ್ರಾಂತಿ ಕಾವ್ಯ ಸುಗ್ಗಿ ಕನ್ನಡಿ ಟಿ ಎಸ್ ಶ್ರವಣ ಕುಮಾರಿ ಅಜ್ಜನ ಮನೆಯಲ್ಲಿದ್ದ ಕನ್ನಡಿ ಅವರಜ್ಜ ತಂದದ್ದಂತೆ;ಅಜ್ಜನಜ್ಜ ಆ ಮನೆಕಟ್ಟಿದಾಗ ಗೋಡೆಗೆ ಹಾಕಿದ್ದಂತೆ. ಎರಡಡಿ ಎತ್ತರ, ಒಂದೂವರೆಯಡಿಯಗಲದ ಕನ್ನಡಿಗೆ –ಕರಿಮರದ ಕೆತ್ತನೆಯ ಚೌಕಟ್ಟು, ಹಿಂಬದಿಗೆ ಗಟ್ಟಿ ಹಲಗೆ.ಮಿರಮಿರ ಮಿಂಚುವ ಬೆಲ್ಜಿಯಂ ಗ್ಲಾಸಿನ ಕನ್ನಡಿಯಡಿಗೆ –ಮರದ ಗೂಡು, ಅದರಲ್ಲಿ ಸಾದು, ಕುಂಕುಮ, ಹಣಿಗೆ… ಬಚ್ಚಲ ಮನೆಯಿಂದ ಬಂದರೆ ಎದುರಿಗೇ ಕಾಣುವಂತೆ,ಮುಚ್ಚಟೆಯಿಂದ ಬಾಚಿ, ಹಣೆಗಿಡಲು ಅನುವಾಗುವಂತೆ,ಮಚ್ಚಿನಿಂದ ಬೀಳುತಿದ್ದ ಬೆಳಕು ಮುಖ ತೋರುವಂತೆ,ಅಚ್ಚೆಯಿಂದಿತ್ತು ಗೋಡೆಯಲಿ ಮೌನವೇ ಮಾತಾದಂತೆ! ಅಜ್ಜನಜ್ಜನ ಕಾಲದಿಂದದೆಷ್ಟು ಮುಖಗಳ ಕಂಡಿರಬಹುದು?ಲಜ್ಜೆಯ ಕಿರುನಗೆ, ಒಜ್ಜೆಯ ಭಾವಗಳ ಬಿಂಬಿಸಿರಬಹುದು!ಅಜ್ಜನಪ್ಪ ಹೊರಹೋಗುವಾಗ ಠೀವಿಯಿಂದ ನೋಡಿರಬಹುದು;ಅಜ್ಜನಮ್ಮ ಸಂಜೆಯಲಿ ಬಾಚಿ ಕುಂಕುಮ ತೀಡಿ ತಿದ್ದಿರಬಹುದು. ಅಜ್ಜನ ಕಾಲಕ್ಕೊಂದು ಕಪಾಟು, ಕನ್ನಡಿ ಪಕ್ಕಕ್ಕೆ ಬಂದಿದ್ದಂತೆ –ಅಜ್ಜಿಗೊಂದು ಗೂಡು – ಕಾಡಿಗೆ, ಚೌರಿ, ಗಂಟುಪಿನ್ನುಗಳಿಗಂತೆ.ಅಜ್ಜನಿಗೆ ದಿನವೂ ನೈಸು ದಾಡಿ ಮಾಡುವ ಅಭ್ಯಾಸವಿತ್ತಂತೆ;ಅಜ್ಜಿ ಸಂಜೆ ಮುಂದೆ ಹೆರಳುಸುತ್ತಿ ಹೂ ಮುಡಿಯುತ್ತಿದ್ದಳಂತೆ. ನಡುಮನೆಗೆ ನಡೆಯುತ್ತ ಬಂದಿತ್ತು ಕನ್ನಡಿ ಅಪ್ಪನ ಕಾಲದಲ್ಲಿ…ಅಡಿಗೊಂದು ಕಪಾಟು, ಮೂರ್ನಾಲ್ಕು ಬಿಡಿ ಖಾನೆ ಅದರಲ್ಲಿ.ಇಡಲು ಅಪ್ಪನ, ಅಮ್ಮನ, ಮಕ್ಕಳ ವಸ್ತುಗಳ ಬೇರೆಯಾಗಲ್ಲಿ.ಓಡಾಡುವಾಗೆಲ್ಲಾ ಒಮ್ಮೆ ಹಣುಕುತಿರಬಹುದಿತ್ತು ಕನ್ನಡಿಯಲ್ಲಿ. ನನ್ನ ಕಾಲಕ್ಕನ್ನಿಸಿತು ಕನ್ನಡಿ ನಡುಮನೆಯಲಿದ್ದರೇನು ಚಂದ?ನಂನಮ್ಮ ರೂಮಿನಲ್ಲಿಡಬೇಕು ನಿಲುಗನ್ನಡಿಯನೊಂದೊಂದ.ನಂನಮ್ಮ ಮುಖಭಾವ ನಮಗಷ್ಟೆ, ಬೇರೆಯವರಿಗೇನದರಿಂದ?ಇನ್ನೊಬ್ಬರೇಕೆ ತಿಳಿಯಬೇಕು ನಮ್ಮೊಳಗು, ಲಾಭವೇನದರಿಂದ! ಈಗ ಅಂತರ ಬೇಕಂತೆ, ಹಾಗೆ ಮಗ ಸೊಸೆಗೆ ಪ್ರತ್ಯೇಕ ಕೋಣೆ!ಈಗವರಿಗೆ ಅವರವರದೇ ಬೀರು, ಕನ್ನಡಿ, ಸ್ನಾನಶೌಚದ ಕೋಣೆ.ಆಗ ಅಜ್ಜನ ಮನೆಯಲ್ಲಿದ್ದ ಕನ್ನಡಿ ಅಲ್ಲೇ ಇರಬಹುದೇನೋ ಕಾಣೆ?ಬೇಗ ತಂದಿರಿಸಿ ಮುಖವ ನೋಡಿಕೊಳ್ಳಬೇಕೆನಿಸಿದೆ ದೇವರಾಣೆ!! ———————————————————————-
ಅಂಕಣ ಬರಹ ಸಂಕ್ರಾಂತಿ ಬಂತೋ ರತ್ತೋ ರತ್ತೋ ಸಂಕ್ರಾಂತಿ ಎಂದ ಕೂಡಲೇ ನೆನಪಾಗುವುದೇ ಚಂದದ ರೇಷಿಮೆ ಲಂಗ ತೊಟ್ಟು ಉದ್ದ ಜಡೆ ಹೆಣೆದುಕೊಂಡು, ಘಮ ಘಮ ಮಲ್ಲಿಗೆ ಹೂ ಮುಡಿದು, ಏನೆಲ್ಲ ಸಾಧ್ಯವಿರುತ್ತದೋ ಅಷ್ಟೆಲ್ಲಾ ಅಲಂಕಾರ ಮಾಡಿಕೊಂಡು ನೆರೆಹೊರೆಯವರಿಗೆ ಎಳ್ಳು ಬೆಲ್ಲ ಹಂಚಲು ಹೊರಡುತ್ತಿದ್ದದ್ದು… ಸಂಕ್ರಾಂತಿ ಹಬ್ಬದ ಪ್ರಮುಖ ಆಕರ್ಷಣೆಯೇ ಇದಾಗಿರುತ್ತಿತ್ತಾದರೂ ಸಂಕ್ರಾಂತಿಗಿರುವ ಆಕರ್ಷಣೆಗಳ ದೊಡ್ಡಪಟ್ಟಿಯೂ ಇರುತ್ತಿತ್ತು. ಸಂಕ್ರಾಂತಿ ಹೆಣ್ಣುಮಕ್ಕಳ ಹಬ್ಬ ಎನಿಸಿಬಿಡುತ್ತಿತ್ತು. ಅದೆಷ್ಟೋ ದಿನಗಳ ತಯಾರಿ ಈ ಹಬ್ಬಕ್ಕೆ. ಹದಿನೈದು ದಿನಗಳಿಗೆ ಮುಂಚೆಯೇ ಎಳ್ಳು-ಬೆಲ್ಲ ತಯಾರಿಸಲು ಬೇಕಿರುವ ವಸ್ತುಗಳ ಖರೀದಿಸಿ ತರುತ್ತಿದ್ದೆವು. ಮನೆಯಲ್ಲಿ ಇರುತ್ತಿದ್ದ ಅಚ್ಚುಗಳಿಗೆ ಜೀವ ಬರುತ್ತಿತ್ತು. ನಾನಾ ನಮೂನಿಯ ಸಕ್ಕರೆ ಅಚ್ಚುಗಳು ಕುತೂಹಲ ಮತ್ತು ಬಾಯಲ್ಲಿ ನೀರೂರಿಸುವ ಸಕ್ಕರೆ ಗೊಂಬೆಗಳನ್ನು ನಮ್ಮದುರು ತಂದು ನಿಲ್ಲಿಸುತ್ತಿದ್ದವು. ಅದೆಷ್ಟು ಚಂದದ ಬಣ್ಣಗಳು ಇವುಗಳದ್ದು! ಈ ಗೊಂಬೆಗಳನ್ನು ನೋಡುತ್ತಾ ನೋಡುತ್ತಾ ಚಪ್ಪರಿಸಿ ತಿನ್ನಬಹುದಿತ್ತು ಎನ್ನುವುದೇ ನಮ್ಮ ದೊಡ್ಡ ಅಚ್ಚರಿಯಾಗಿರುತ್ತಿತ್ತು… ಸಕ್ಕರೆ ಗೊಂಬೆಗಳಾದ ಮೇಲೆ ಇನ್ನು ಎಳ್ಳು-ಬೆಲ್ಲದ ತಯಾರಿಕೆ. ಊರೆಲ್ಲ ಎಳ್ಳು ಬೀರಿಯಾದ ಮೇಲೂ ತಿಂಗಳೊಪ್ಪತ್ತಿಗಾಗುವಷ್ಟು ಎಳ್ಳು ಬೆಲ್ಲ ಉಳಿಯಲೇ ಬೇಕಿತ್ತು… ನಾವೆಲ್ಲ ಮಕ್ಕಳಂತೂ ಸಂಕ್ರಾಂತಿ ಮುಗಿದು ಎಷ್ಟೋ ದಿನಗಳಾದರೂ ಸಂಕ್ರಾಂತಿ ಕಾಳು ಕೇಳುವುದನ್ನು ಬಿಡುತ್ತಿರಲಿಲ್ಲ. ಅದೆಷ್ಟು ಸವಿ… ಅದೆಂತಹಾ ಸವಿ…ಎಳ್ಳು ಸಂಬಂಧವನ್ನು ವೃದ್ಧಿಸುತ್ತದೆ ಮತ್ತು ಬೆಲ್ಲ ಆ ಸಂಬಂಧವನ್ನು ಮಧುರವಾಗಿಸುತ್ತದೆ ಎನ್ನುವ ನಂಬಿಕೆ ಇದೆ ಈ ಎಳ್ಳು-ಬೆಲ್ಲದ ಹಿಂದೆ. ಅದಕ್ಕೆ ಬಣ್ಣ ಬಣ್ಣದ ಜೀರಿಗೆ ಪೆಪ್ಪರಮೆಂಟು, ಬಣ್ಣ ಬಣ್ಣದ ಸಕ್ಕರೆಯ ಸಂಕ್ರಾಂತಿ ಕಾಳು, ಹುರಿದ ಶೇಂಗಾ, ಪುಟಾಣಿ, ಒಣ ಕೊಬ್ಬರಿ, ಸಣ್ಣಗೆ ತುಂಡು ಮಾಡಿದ ಬೆಲ್ಲ ಎಲ್ಲವನ್ನೂ ಬೆರೆಸಿಯಾದ ಮೇಲೆಯೇ ಎಳ್ಳು-ಬೆಲ್ಲ ತಯಾರಾಗುತ್ತಿದ್ದದ್ದು. ಚಳಿಗಾಲದ ಈ ಹಬ್ಬ ವಾತಾವರಣಕ್ಕೆ ಅನುಗುಣವಾಗಿ ಆಚರಿಸಲ್ಪಡುತ್ತಿದ್ದ ರೀತಿಯಿಂದಲೂ ಖುಷಿಯ ಹಬ್ಬ. ಚಳಿಯ ದಿನಗಳಲ್ಲಿ ಮನುಷ್ಯನ ದೈಹಿಕ ಚಟುವಟಿಕೆಗಳು ನಿಧಾನಗತಿಯಲ್ಲಿರುತ್ತವೆ. ಅಂತಹ ಸಮಯದಲ್ಲಿ ಹಬ್ಬದ ನೆವದಲ್ಲಿ ದೇಹವನ್ನು ತಣಿಸುವ ಒಂದಷ್ಟು ಆಚರಣೆಗಳು ಮೈ ಮನಸಿಗೆ ಮುದನೀಡುತ್ತದೆ. ಎಳ್ಳು, ಕೊಬ್ಬರಿಗಳಲ್ಲಿ ಎಣ್ಣೆಯ ಅಂಶವಿರುತ್ತದೆ. ಇವು ಶೀತ, ವಾತವನ್ನು ದೂರ ಮಾಡುತ್ತವೆ. ಕಬ್ಬು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಎಳ್ಳು, ಕಡಲೆ ಬೀಜಗಳಿಂದ ಕ್ಯಾಲ್ಶಿಯಂ ದೊರೆತರೆ ಬೆಲ್ಲದಿಂದ ಕಬ್ಬಿಣಾಂಶ ದೊರೆಯುತ್ತದೆ. ಮತ್ತೆ ಪೊಂಗಲ್ ತಯಾರಿಸಲು ಬಳಸುವ ಹೆಸರು ಬೇಳೆಯಲ್ಲಿ ವಿಟಮಿನ್ ಸಿ ಇರುತ್ತದೆ ಮತ್ತು ಮಣಸು-ಜೀರಿಗೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಇವೆಲ್ಲವನ್ನೂ ಗಮನಿಸಿದಾಗ ನಮ್ಮ ಪೂರ್ವಿಕರು ಧಾರ್ಮಿಕವಾಗಿ ರೂಪಿಸಿದ ಆಚರಣೆಗಳ ಹಿಂದೆ ಒಂದಲ್ಲ ಒಂದು ವೈಜ್ಞಾನಿಕ ತಳಹದಿ ಅಡಗಿರುವುದು ಕಂಡುಬರುತ್ತದೆ. ಎಲ್ಲವನ್ನೂ ಮೂಢನಂಬಿಕೆ ಎಂದು ತಳ್ಳಿಹಾಕುವ ಮೊದಲು ಯಾವುದನ್ನು ಅನುಸರಿಸಬೇಕು, ಯಾವುದನ್ನು ಬಿಡಬೇಕು ಎನ್ನುವುದನ್ನು ಅರಿಯಬೇಕಿದೆ. ಮತ್ತು ನಮ್ಮ ಸಂಸ್ಕೃತಿಯ ಉಳಿವೂ ಇಂತಹ ಆಚರಣೆಗಳಲ್ಲಿಯೇ ಇರುತ್ತದೆ ಎನ್ನುವುದನ್ಬು ನಾವು ಮರೆಯಬಾರದು. ಪಥವ ಬದಲಿಸಿದ ಸೂರ್ಯ ಮೊಳಗಿ ಸಂಕ್ರಾಂತಿ ತೂರ್ಯ ಸವೆದಿದೆ ದಾರಿ ಕವಿದಿದೆ ಮಂಜು ಬದಲಾವಣೆ ಅನಿವಾರ್ಯ -ಬಿ.ಆರ್.ಲಕ್ಷ್ಮಣ ರಾವ್ ಸೂರ್ಯ ತನ್ನ ಇಷ್ಟು ದಿನದ ಪಥವನ್ನು ಬದಲಿಸಿ ಮತ್ತೊಂದು ಪಥದಲ್ಲಿ ತಿರುಗಲು ಶುರು ಮಾಡುತ್ತಾನೆ. ಹಿಂದೂ ಪಂಚಾಂಗದ ಪ್ರಕಾರ ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಎಂದು ಮೇಷ ರಾಶಿ ಪ್ರವೇಶಿಸಿದಾಗ ಸೌರಮಾನ ಯುಗಾದಿ ಎಂದು ತುಲಾ ರಾಶಿ ಪ್ರವೇಶಿಸಿದ ದಿನವನ್ನು ಕಾವೇರಿ ತೀರ್ಥೋದ್ಭವ ತುಲಾ ಸಂಕ್ರಮಣ ಎಂದು ಆಯಾನಾಧಾರದ ಮೇಲೆ ಆಚರಿಸಲಾಗುತ್ತದೆ ಮತ್ತು ಈ ದಿನ ಪೌರಾಣಿಕ ಹಿನ್ನೆಲೆಯಲ್ಲಿ ಊರ್ಧ್ವ ಲೋಕಗಳಾದ ಬುವರ್ಲೋಕ(ತಪಸ್ಸಿನಲ್ಲಿ ಮಗ್ನರಾದ ಮುನಿಗಳು ವಾಸ ಮಾಡುವ ಲೋಕ) ಸ್ವರ್ಗಲೋಕದಲ್ಲಿ(ಇಂದ್ರಾದಿ ಅಷ್ಟದಿಕ್ಪಾಲಕರು, ನವಗ್ರಹಗಳು,ಅನೇಕ ಪ್ರತ್ಯಧಿದೇವತೆಗಳು ವಾಸಮಾಡುವ ಲೋಕ) ಸೂರ್ಯೋದಯ ವಾಗುವ ಕಾಲವನ್ನು ನಾವು ಉತ್ತರಾಯಣದ ಸಂಕ್ರಾಂತಿ ಹಬ್ಬ ಎಂದು ಆಚರಿಸುವ ವಾಡಿಕೆ. ಈ ದಿನವನ್ನು ಒಂದು ಪವಿತ್ರ ದಿನ ಎಂದು ಭಾವಿಸಲಾಗಿದೆ ಕಾರಣ ಲೋಕಕಲ್ಯಾಣ ಕರ್ತರಾದ ದೇವತೆಗಳು ಎಚ್ಚರಗೂಳ್ಳುವ ದಿನ ಇದು ಎನ್ನುವ ಧಾರ್ಮಿಕ ನಂಬಿಕೆ. ಆದರೆ ಅವರು ಸ್ನಾನ ಸಂಧ್ಯಾವಂದನೆ ಮುಗಿಸಿ ಕಾರ್ಯಮಗ್ನರಾಗುವುದು ಮುಂದಿನ ರಥಸಪ್ತಮಿಯ ದಿನ ಎಂಬ ಪ್ರತೀತಿಯೂ ಇದೆ. ಮಹಾಭಾರತದ ಭೀಷ್ಮಾಚಾರ್ಯರು ಯುದ್ದಮುಗಿದು ಶರಶಯ್ಯೆಯಲ್ಲಿ ಪವಡಿಸಿದ್ದರೂ, ದೇಹ ಬಾಣಗಳ ಇರಿಯುವಿಕೆಯಿಂದ ನೋಯುತ್ತಿದ್ದರೂ ಪ್ರಾಣಬಿಡಲು ಉತ್ತರಾಯಣದ ಪುಣ್ಯಕಾಲಕ್ಕಾಗಿ ಕಾದರಂತೆ ಎಂದು ಮಹಾಭಾರತ ನಮಗೆ ತಿಳಿಸಿಕೊಡುತ್ತದೆ. ಉತ್ತರಾಯಣ ಪುಣ್ಯಕಾಲದ ಈ ಹಬ್ಬ ಸುಗ್ಗಿಯನ್ನು ಸಾರುವ ಹಬ್ಬವಾಗಿದೆ. ಈ ದಿನ ಹೊಸ ಅಕ್ಕಿಯಲ್ಲಿ ಪೊಂಗಲ್ ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾರೆ. ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂದೇ ಕರೆಯಲಾಗುತ್ತದೆ. ರೈತರು ಹೊಲದಲ್ಲಿ ಬೆಳೆದ ಧಾನ್ಯಗಳನ್ನು ಕಟಾವು ಮಾಡುವ ಸಮಯವಿದು. ದನಕರುಗಳನ್ನು ತೊಳೆದು, ಅಲಂಕರಿಸಿ, ಮೇವನ್ನು ಉಣಿಸಿ ಮೆರವಣಿಗೆ ಮಾಡುತ್ತಾರೆ. ಹೊಸ ಧಾನ್ಯಗಳಿಂದ ಹುಗ್ಗಿ ಮಾಡಿ ನೈವೇದ್ಯವಾಗಿ ಅರ್ಪಿಸಿ, ಎಳ್ಳನ್ನು ದಾನ ಮಾಡುವ ಪದ್ಧತಿ ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಈ ದಿನ ಸಣ್ಣ ಮಕ್ಕಳನ್ನು ಮಣೆಯ ಮೇಲೆ ಕೂರಿಸಿ, ಎಳ್ಳು, ಎಲಚಿಹಣ್ಣು(ಬಾರೀ ಹಣ್ಣು), ಕಾಸು, ಬಾಳೆಹಣ್ಣಿನ ತುಂಡುಗಳು, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಕಬ್ಬುಗಳನ್ನು ಬೆರೆಸಿ ತಲೆಯ ಮೇಲಿಂದ ಎರೆದು ಆರತಿ ಮಾಡುತ್ತಾರೆ. ಇದಕ್ಕೆ ಕರಿ ಎರೆಯುವುದು ಎನ್ನುತ್ತಾರೆ. ಹಬ್ಬದ ಸಂತಸದೊಂದಿಗೆ ಮಕ್ಕಳ ಹಟಮಾರಿತನ, ತುಂಟತನ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ ಇದೆ ಇದರ ಹಿಂದೆ. ಸೃಜನಾತ್ಮಕವಾಗಿರುವವರು ಸಕ್ಕರೆಯಿಂದ ತಯಾರಿಸಿದ ಕುಸುರು ಕುಸುರಾಗಿರುವ ಎಳ್ಳನ್ನು (ಕುಸುರೆಳ್ಳು) ರಟ್ಟಿನ ಮೇಲೆ ಅಂಟಿಸಿ, ಬಳೆ, ಕಿರೀಟ, ಸೊಂಟದಪಟ್ಟಿ, ಕಾಲಿಗೆ ಗೆಜ್ಜೆ, ಕೊಳಲು, ಸರ ಹೀಗೆ ಎಲ್ಲವನ್ನೂ ತಯಾರಿಸಿ ಮಕ್ಕಳಿಗೆ ತೊಡಿಸಿ ರಧಾಕೃಷ್ಣರನ್ನಾಗಿ ತಯಾರು ಮಾಡಿ ಹಬ್ಬದ ಮೆರುಗನ್ನು ಹೆಚ್ಚಿಸುತ್ತಾರೆ. ಅಂದು ಬೆಳಗ್ಗೆ ತಲೆಸ್ನಾನ ಮಾಡಿ, ದೇವರ ಪೂಜೆ ನೆರವೇರಿಸಿ ಪಿತೃಗಳಿಗೆ ತರ್ಪಣ ಕೊಡುತ್ತಾರೆ. ಅನುಕೂಲವಿದ್ದರೆ ನದಿ ಸ್ನಾನ ಮಾಡುತ್ತಾರೆ. ಮಕರ ಸಂಕ್ರಂತಿಯಂದು ತೀರ್ಥಸ್ನಾನ ಮಾಡಿದರೆ ಪುಣ್ಯ ಫಲವಿದೆಯೆಂಬ ನಂಬಿಕೆ ಇದೆ. ಸಂಜೆ ಹೆಂಗಳೆಯರು ತಟ್ಟೆಯಲ್ಲಿ ಎಳ್ಳು, ಕಬ್ಬಿನ ತುಂಡು, ಬಾಳೆಹಣ್ಣು, ಸಕ್ಕರೆ ಅಚ್ಚು, ತಾಂಬೂಲ ಸಹಿತ ಮನೆ ಮನೆಗೂ ಹಂಚಿ ಬರುತ್ತಾರೆ. ಭಾಗವತದಲ್ಲಿ ಕೃಷ್ಣ ಬಲರಾಮರು ಈ ದಿನ ಮಥುರಾಕ್ಕೆ ಬಂದು ಕಂಸನನ್ನು ಕೊಂದರು ಎಂಬುದಾಗಿ ಬರುತ್ತದೆ. ನಿರಂತರ ಸೃಷ್ಟಿಯ ತಿಗುರಿ ಸೂರ್ಯ ಆಡಿಸುವ ಬುಗುರಿ ಭ್ರಮಣಲೋಲೆ ಸಂಕ್ರಮಣಶೀಲೆ ನಿತ್ಯನೂತನೆ ಧರಿತ್ರಿ -ಬಿ.ಆರ್.ಲಕ್ಷ್ಮಣ ರಾವ್ ವೈಜ್ಞಾನಿಕವಾಗಿ ನೋಡುವುದಾದರೆ ಇಂದಿನ ಈ ದಿನ ಕ್ರಾಂತಿವೃತ್ತದಲ್ಲಿ ಸೂರ್ಯನು ತನ್ನ ಪಥವನ್ನು ಬದಲಿಸುವ ದಿನ. ಆಧುನಿಕ ವಿಜ್ಞಾನಿಗಳ ಪ್ರಕಾರ ಸೂರ್ಯ ಒಂದು ನಕ್ಷತ್ರ. ಅವನಿಗೆ ಪರಿಭ್ರಮಣ ಇಲ್ಲ. ಆದರೆ ಅಕ್ಷ ಪರಿಭ್ರಮಣ ಇದೆ. ಈಗ ನಮ್ಮ ವಿಜ್ಞಾನ ಇಡೀ ಸೌರಮಂಡಲವೇ ನಿಧಾನವಾಗಿ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸರಿಯುತ್ತಿದೆ ಎಂದು ಸಾಧಿಸಿ ತೋರಿಸಿಕೊಟ್ಟಿದೆ. ಒಟ್ಟಿನಲ್ಲಿ ವಿಶ್ವದ ಪ್ರತಿಯೊಂದು ಕಾಯಕ್ಕೂ ಚಲನೆ ಇದೆ. ಬದಲಾವಣೆ ಜಗದ ನಿಯಮ, ನಿರಂತರ ಚಲನೆ ವಿಶ್ವದ ನಿಯಮ… ಜಡತೆ ನಿರಾಸೆಯ ತೊಡೆದು ಭರವಸೆಯಲಿ ಮುನ್ನಡೆದು ಹೊಸ ವಿಕ್ರಮಗಳ ಮೆರೆಯಲೀ ನಾಡು ನಗೆ ನೆಮ್ಮದಿಯನ್ನು ಹರಿಸಿ -ಬಿ.ಆರ್.ಲಕ್ಷ್ಮಣ ರಾವ್ ಎನ್ನುವ ಬಿ.ಆರ್.ಲಕ್ಷ್ಮಣರ ಮಾತಿನಂತೆ ನಮ್ಮ ಬದುಕು ಹೊಸ ಭರವಸೆಯ ದಿಕ್ಕಿನೆಡೆಗೆ ತಿರುಗಲಿ… ಪ್ರಪಂಚವನ್ನೇ ತಲ್ಲಣಗೊಳ್ಳುವಂತೆ ಮಾಡಿರುವ ಕೊರೋನಾವನ್ನು ಸೂರ್ಯನ ಹೊಸ ಪ್ರಭೆ ಸಂಹರಿಸಲಿ. ಬದುಕು ಮತ್ತೊಮ್ಮೆ ಹಳಿಗೆ ಬಂದು ಪ್ರಯಾಣ ಸಸೂತ್ರವಾಗಲಿ ಎನ್ನುವ ಆಸೆ ಮತ್ತು ಹಾರೈಕೆಯೊಂದಿಗೆ ನಾವೆಲ್ಲ “ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೋಣ” ಅಲ್ಲವಾ… ಈ ಭುವಿಯಾಗಲಿ ಸ್ಪೂರ್ತಿ ನಮ್ಮ ನಾಡಿಗೆ ಮರಳಲಿ ಗತ ಕೀರ್ತಿ ನಮ್ಮ ನಾಡಿಗೆ ಹೊಸ ನಡೆನುಡಿ ಬರಲಿ ನಮ್ಮ ಹಾಡಿಗೆ ಹೊಸಹುರುಪನು ತರಲಿ ನಮ್ಮ ನಾಡಿಗೆ -ಬಿ.ಆರ್.ಲಕ್ಷ್ಮಣರಾವ್ ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಶಪಥ
ಸಂಕ್ರಾಂತಿಗೆ ಸುಧಾರಾಣಿಯವರ ವಿಶೇಷ ಕವಿತೆ ಶಪಥ ಹೊಸ ವರುಷಕೆ ಒಂದುಶಪಥವಿದೆ ಸಾಕಿಮತ್ತೆಂದೂ ಎದಿರುಗೊಳ್ಳುವುದಿಲ್ಲಹನಿ ಪ್ರೀತಿಗಾಗಿಅಂಗಲಾಚುವುದೂ ಇಲ್ಲನೀ ಸಾಗಿದ ದಾರಿಯಲ್ಲಿಸಾವಿರ ಬಾರಿ ತಿರುಗಿ ತಿರಿಗಿನೋಡುವುದೂ ಇಲ್ಲ ನಿನ್ನ ನೆನಪಲಿ ಕಣ್ಣಾಲಿಗಳುಒಡ್ಡು ಕಟ್ಟಿ ನಿಂತರೂ,ಥುಳುಕಿದರೂತುಟಿ ಕಂಪಿಸಿದರೂನಿನ್ನ ಸಂತೈಸುವಿಕೆಗೆಹಾತೊರೆಯುವುದೂ ಇಲ್ಲಒರಗಿದ್ದ ನಿನ್ನೆದೆಯ ನೆನೆದುಸಂತೈಸಿಕೊಳ್ಳುವುದು ಇಲ್ಲಬಿಡು, ನಿರಾಳವಾಗಲಿ ಮನಸ್ಸು, ಅದೆಷ್ಟೂ ಖಾಲಿತನಉಸಿರು ನಿಂತ ಮೇಲೆಯಾರಿಗ್ಯಾವ ಹೆಸರು?ಹೆಣವೆಂದಷ್ಟೇ ಅಲ್ಲವೇ ಸಾಕಿಈ ವರ್ಷಕೂ ಅದೇ ಶಪಥನನ್ನಲ್ಲಿ ನೀನಿರುವವರೆಗೂಬದುಕಬೇಕುಅದಮ್ಯವಾಗಿ ಪ್ರೀತಿಸಬೇಕು
ಸಂಕ್ರಾಂತಿಕಾವ್ಯ ಸುಗ್ಗಿ ಉರಿಯುವ ಬದಲು ಬೆಳಗಬೇಕು ಸಂಗೀತ ರವಿರಾಜ್ ಸಮಾಜ ಅಭಯದ ಮುಖವಾಡ ಹಾಕಿನಲುಗಿಸುತ್ತಿದೆ ಗಳಿಸಿದ ಸ್ವಾತಂತ್ರ್ಯ ವನ್ನೇ….ಜಾತಿ ವರ್ಗಗಳಿಗೆ ಕೀಳರಿಮೆ ತೊಲಗಿಂದ ಮೇಲೆಭಯ ಮುಕ್ತ ಭಾವನೆಗೆಲ್ಲಿ ಎಲ್ಲೆ ? ಮಲ ತೆಗೆಯಲು ಒಂದುಮನುಷ್ಯ ವರ್ಗವ ಸೃಷ್ಠಿಸಿಅದಕ್ಕೊಂದು ಜಾತಿಯ ಹೆಸರು ಕೊಟ್ಟಇನ್ನೊಂದು ಮನುಷ್ಯ ಜಾತಿಗೆ ನಮ್ಮ ವಿರೋಧವಿರಲಿದೇವ ಸ್ವರೂಪ ತೋಟಿಗಳಒಳತೋಟಿಯ ಅರಿವಾಗಿಒಂದು ತೊಟ್ಟು ಕಣ್ಣೀರು ಹಾಕಿದರೆಈ ಜನ್ಮ ಸಾರ್ಥಕ. ಜಗದಲ್ಲಿ ಜಲಗಾರ ಜಾಡಮಾಲಿಯಒಡಲ ಬೇಗುದಿಯ ಉರಿಗೆತ್ಯಾಜ್ಯವೆಲ್ಲ ಉರಿದು ಬೂದಿಯಾಗುತ್ತಿದೆ!ಗುಡಿಸೆತ್ತಿ ಸ್ವಚ್ಛಗೊಳಿಸುವ ಒಂದ್ವರ್ಗವಿಲ್ಲದಿದ್ದರೆಶೋಚನೀಯ ಸ್ಥಿತಿಯ ಗತಿಗಳುಶುಭ್ರತೆ ಇರಬೇಕಾದ್ದು ಮನಸ್ಸಿನಲ್ಲಿ , ವಾಸಿಸುವಲ್ಲಿಜಲಗಾರನೆ ಜ್ವಲಂತ ಉದಾಹರಣೆಯಿಲ್ಲಿ ಸೂಟುಗಳ ಜೇಬಿನಲ್ಲಿ ಇವರ ಕನಸುಗಳೆಲ್ಲ ಬಿಕರಿಗಿವೆ!ಕೊಳ್ಳುವರಿಲ್ಲ ಕೇಳುವರಿಲ್ಲಅಲ್ಲಿಗೆ ಕನಸುಗಳು ಕಮರಿವೆಈ ಕುಲದ ದೀಪಗಳ ಬೆಳಕು ಪಸರಿಸಲುನಾವೆಲ್ಲ ದೀಪದಂತೆ ಉರಿಯುವುದಲ್ಲ ಬೆಳಗಬೇಕು !ಕನಿಷ್ಠ ಸಂಪಾದನೆಯ ಕೆಲಸಗಳಿಗೆಜಾತಿ ವರ್ಗಗಳ ನಿರ್ಮಿಸಿಟ್ಟಮಗದೊಂದು ಮನುಷ್ಯ ವರ್ಗಕ್ಕೆ ಸಹಮತವಿಲ್ಲ.
ಸಂಕ್ರಾಂತಿ ಕಾವ್ಯ ಸುಗ್ಗಿ ಸಂ-ಕ್ರಾಂತಿ! ಚೈತ್ರ ಶಿವಯೋಗಿಮಠ ಆಂತರ್ಯದಲ್ಲಿ ಭುಗಿಲೆದ್ದಿದ್ದರೂಅಸಮಾಧಾನ, ಅಶಾಂತಿಶಮನ ಮಾಡಲಿ ಅದೆಲ್ಲವಎಳ್ಳು-ಬೆಲ್ಲ ತಿನ್ನಿಸುವ ಸಂಕ್ರಾಂತಿ! ಮನದೊಳಗೆ ನಡೆದಿದ್ದರೂಭಾವನೆಗಳ ಸಂಘರ್ಷ-ಕ್ರಾಂತಿರಮಿಸಿ ತುಂಬಲಿ ಸಿಹಿ ಹರುಷವಕಬ್ಬಿನ ಜಲ್ಲೆಯ ಸಂಕ್ರಾಂತಿ! ಒಲವು ಮರೆತು, ಒಳಗೆತುಂಬಿದ್ದರೂ ಸಿರಿತನದ ಭ್ರಾಂತಿ..ಮರೆಸಿ ಭ್ರಮೆಯ, ತೆರೆಸಲಿ ಒಳಗಣ್ಣಅವರೆ, ನೆಲಗಡಲೆ ಬಿಡಿಸುವ ಸಂಕ್ರಾಂತಿ! ಮನವು ಮುದುಡಿ, ಭಾವ ಕದಡಿಹಾರಿ ಹೋಗಿದ್ದರೂ ಮನದ ಜಂತಿಅರಳಿಸಿ ಮನವ, ತುಂಬಲಿ ಸ್ಥೈರ್ಯವಬಣ್ಣದ ರಂಗವಲ್ಲಿ ಬಿಡಿಸುವ ಸಂಕ್ರಾಂತಿ!! ವರುಷವಿಡಿ ಸುಖ-ದುಃಖಗಳ ಸ್ವೀಕರಿಸಿಕೆಲವೊಮ್ಮೆ ಸಂಭ್ರಮಿಸಿ, ಮತ್ತೊಮ್ಮೆ ಕನವರಿಸಿದಣಿದು ನಲುಗಿರುವ, ಮನವೆಂಬರಾಸನ್ನ ಸಿಂಗರಿಸಿ ಬೆಂಕಿಹಾಯಿಸುವ ಸಂಕ್ರಾಂತಿ! ತಿದ್ದಿ ತೀಡಿದರೂ ಕಲಿಯದ ಮನಸಿಗೆ,ಅದೆಷ್ಟು ಬಿಗಿದರೂ ಹಿಡಿತವ ಒಲ್ಲೆಯೆನ್ನುವ ಖೋಡಿ.ಸರಿ ದಾರಿಗೆ ತರಲಿ ಮನವೆಂಬ ಮರ್ಕಟನಸೂರ್ಯ ಪಥವ ಬದಲಿಸುವ ಸಂಕ್ರಾಂತಿ ಎಳ್ಳು ಬೆಲ್ಲ ತಿಂದು, ಕಬ್ಬಿನ ಜಲ್ಲೆಯ ಜಗಿದುಬೇಯಿಸಿದ ಅವರೆ-ನೆಲಗಡಲೆ ಅಗಿದುಪಾಯಸ ಹೋಳಿಗೆಗಳ ಉಂಡುಬೇಡುವ, ಪ್ರಶಾಂತತೆಯು ಮನವ ತುಂಬಲೆಂದು!
ಸಂಕ್ರಾಂತಿ ಕಾವ್ಯ ಸುಗ್ಗಿ ಸರಳ ಸೂತ್ರ ಎಸ್ ನಾಗಶ್ರೀ ಆರುತಿಂಗಳಾದರೂ ಬಳಸದ್ದನ್ನುಬಿಸಾಡುವುದು ಕ್ಷೇಮವೆಂದರುಒಪ್ಪಿದೆಬಟ್ಟೆಬರೆಯೆಲ್ಲಾ ಹರಡಿಹತ್ತಾರು ಚೂಡಿ, ಸೀರೆ, ರವಿಕೆಫಳಗುಟ್ಟುವ ಕಿವಿಯೋಲೆಜಾಮೂನ್ ಬಟ್ಟಲುಲೆಕ್ಕವಿರದಷ್ಟು ಲೋಟ, ತಟ್ಟೆಓದಲಾಗದ ಪುಸ್ತಕರೀಫಿಲ್ಲು ತೀರಿದ, ತಿರುಪು ಗಟ್ಟಿಯಿದ್ದಪೆನ್ನುಖಾಲಿ ಹಾಳೆಯ ಪುಸ್ತಕಡೈರಿಗಳನುತಿರುಗಾಮುರುಗಾ ನೋಡಿಪೇರಿಸಿಟ್ಟೆ ಗುಜರಿಗೆ ಹಾಕಿನೂರಿನ್ನೂರು ಎಣಿಸುವುದೆಷ್ಟರ ಮಾತು?ಬಡವರಿಗೆ ಕೊಡಬೇಕುಹಬ್ಬದ ಸಂಜೆ ಅವರುಟ್ಟು ತೊಟ್ಟುಸಂಭ್ರಮಿಸಬೇಕುಕನಸುಗಳ ಮುಗುಚಿ ಹಾಕಿಮಲಗಿದ್ದು ಗೊತ್ತುಈ ನೆನಪುಗಳು ಜೀವ ತಿನ್ನುತ್ತವೆಹೊತ್ತೊಯ್ಯುತ್ತವೆ ಕಪ್ಪಿರುವೆಯಂತೆತಲೆ ಮೇಲೆ ಭಾರ ಗಂಟೊಂದನುನಜ್ಜುಗುಜ್ಜಾದ ತಟ್ಟೆಯಲ್ಲೇಅನ್ನವುಣ್ಣುವ ಅಪ್ಪಹರಿದ ಸೀರೆಯುಡುವ ಅಜ್ಜಿಬೇಯಿಸುವ ಪಾತ್ರೆಯೂ ಇಲ್ಲದೆಬೀದಿಗೆ ಬಿದ್ದಗೃಹಭಂಗದ ನಂಜಮ್ಮಹೀಗೆ ಯಾವುದೋ ನೆನಪುಗಳುಗೀಟುಗಳೆಳೆದುಕಾಟಕೊಡುತ್ತವೆತಂತಿಯ ಮೇಲಿನ ಬಟ್ಟೆಗಳಂತೆಫಟಫಟಿಸುತ್ತದೆ ಮನಸು ವರಾಂಡದ ಮೂಲೆಯಲ್ಲಿಗಂಟಾಗಿ ಕೂತ ಸಾಮಾನುಗಳನ್ನುಮತ್ತೆ ಬಿಚ್ಚಿ ಜೋಡಿಸುತ್ತೇನೆಎರಡು ಸೀರೆನಾಲ್ಕಾರು ಡಬ್ಬಆಚೆ ಹಾಕುವುದಕ್ಕೆಇಡೀ ದಿನ ಬೇಕೆಎಂದವರನ್ನುಕಣ್ಣಲ್ಲೇ ಸುಟ್ಟುಅಡುಗೆಗಿಡುತ್ತೇನೆ ಹುರಿಯುವಾಗ, ಹೆಚ್ಚುವಾಗತೊಳೆದು ಹರಡುವಾಗಸರಳ ಬದುಕಿನ ಸೂತ್ರಕಡಿಮೆ ವಸ್ತುಗಳಲ್ಲಿದೆಎಂದವರ ಮಾತು ಮಥಿಸುತ್ತಾಗಹನ ಚಿಂತನೆಗಿಳಿಯುತ್ತೇನೆಮತ್ತೆ ಮರೆಯುತ್ತೇನೆಮರೆವೊಂದೇ ಸರಳವೆನಿಸಿನಕ್ಕುಬಿಡುತ್ತೇನೆ
ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ ಕೆ.ಟಿ.ಜಯಶ್ರೀ ಮುಂಬಾಗಿಲ ತಳಿರ ಸ್ವಾಗತಪಂಚಭೂತ ತತ್ವದರಿವನುಹರವುವ ಹೊಸ ಮಡಕೆಯಲಿಘಮಘಮಿಸುತಿದೆ ಪೊಂಗಲ್ಎಳ್ಳು ಬೆಲ್ಲ ಮೆಲುನುಡಿದಿವೆ ಜರತಾರಿ ತೊಟ್ಟ ಕುವರಿಯರಮೆರವಣಿಗೆ ಸಾಗಿದೆ ಸಂಜೆಯಲಿ ಪಥ ಬದಲಿಸಿ ಸಾಗುವಾಗಸೂರ್ಯ ಸಂಭ್ರಮದಿನಗೆ ಚೆಲ್ಲಿತಾ ರಂಗಿನ ರಂಗವಲ್ಲಿಉಷೆ ಸ್ಪರ್ಶಕೆಪುಳಕಮೈಮನದಲಿ ಎಳ್ಳು ಬೆಲ್ಲ ಹಂಚುವ ಸಡಗರಕೆಲಲನೆಯರ ಲಾಲಿತ್ಯದ ಮೆರಗು ರಾಸುಗಳ ಕಿಚ್ಚಿನ ಓಟಎಳೆಯರ ಗಾಳಿಪಟದಾಟಮುಗುದೆಯರ ಕೋಲ್ಮಿಂಚಿನೋಟಹರುಷ ಉಕ್ಕಿದೆ ಸುಗ್ಗಿಕಣಿತದಿ ಸಂಕುಚಿತ ಮನದ ತಮ ಕರಗಿಸಾಗಲಿ ಸೂರ್ಯ ಅಶಾಂತಿಯ ಪಥದಿಂದ ಶಾಂತಿ ಸಾಮರಸ್ಯದ ಸಂಕ್ರಮಣ ಕಾಲದತ್ತ
ವೀಣಾ ನಿರಂಜನ ಬರೆಯುತ್ತಾರೆ
ಎದೆಯ ಕದ ಇಷ್ಟಿಷ್ಟೇ ತೆಗೆದು
ಮೌನವನ್ನು ಒಳಗೆ
ಬಿಟ್ಟುಕೊಳ್ಳುವ ಸುಖ
ದಕ್ಕಿದವರಿಗಷ್ಟೇ ಗೊತ್ತು







