ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್, ನಿಮ್ಮೊಂದಿಗೆ

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಅವರ ಗಜಲ್ ಮಾತಿನ ಪದಗಳು ತೊದಲುತಿವೆ ಇಂದುಕತ್ತಲೆಗೆ ಕನಸುಗಳು ನಡುಗುತಿವೆ ಇಂದು ಎಷ್ಟು ಹುಡುಕಿದರು ಸಿಗದು ಸಮಾಧಾನಪಡೆದ ಬಯಕೆಗಳು ಬಳಲುತಿವೆ ಇಂದು ನಿಸ್ತೇಜ ಚಲನೆಗೆ ಕಣ್ಣುಗಳೇ ಸಾಕ್ಷಿ ಅಲ್ಲವೆಮುಡಿದ ಮಲ್ಲಿಗೆಗಳು ಬಾಡುತಿವೆ ಇಂದು ಗಲ್ಲೆನ್ನುವ ಬಳೆಗಳು ಸರಿದು ಸ್ತಬ್ಧವಾಗಿವೆಹೊಳೆಯುವ ಕಿರಣಗಳು ಕರಗುತಿವೆ ಇಂದು ಮನ್ಮಥನ ಜಾಲಕ್ಕೆ ಅಂದು ಸಿಲುಕಿದ ಮಾಜಾಮಾಯೆ ಮೋಹಗಳು ತೊರೆಯುತಿವೆ ಇಂದು ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಅವರ ಗಜಲ್ Read Post »

ನಿಮ್ಮೊಂದಿಗೆ

ಮಾಜಾನ್ ಮಸ್ಕಿ ಗಜಲ್

ಕಾವ್ಯ ಸಂಗಾತಿ ನಿನ್ನೊಲವಿನಲಿ ನಾನು ಗೆಲುವಾಗಿರುವೆ ಈಗದೃಢ ಧೈರ್ಯದಚಲ ಶಿಖರವಾಗಿರುವೆ ಈಗ ಜಗದ ಜಂಜಾಟಗಳನೆಲ್ಲ ಮರೆಸಿರುವೆ ನೀನುಬದುಕ ಗುರಿಗೆ ನಾನು ನಿಖರವಾಗಿರುವೆ ಈಗ ನೋಡು ನೋಡುತ್ತಲೆ ಕಾಲಚಕ್ರ ಉರುಳಿದೆಸಮಯದ ನಡಿಗೆಯಲಿ ದಿಟವಾಗಿರುವೆ ಈಗ ಊಸರವಳ್ಳಿಯಂತೆ ಬಣ್ಣ ಬದಲಿಸುವ ಜನನೀಲಿಯಾಗಸದ ನಗುವಿನಂತಾಗಿರುವೆ ಈಗ ಎದೆಯೊಳಗಿನ ಕಿಚ್ಚು ಜ್ವಾಲೆಯಾಗಿದೆ ಮಾಜಾಬೂದಿಯಲೆದ್ದ ಫಿನಿಕ್ಸ ಹಕ್ಕಿಯಾಗಿರುವೆ ಈಗ ———————- ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಗಜಲ್ Read Post »

ನಿಮ್ಮೊಂದಿಗೆ

ಡಾ.ಲೀಲಾ ಗುರುರಾಜ್ ಅವರ “ಬಳೆ”

ಕಾವ್ಯ ಸಂಗಾತಿ ಡಾ.ಲೀಲಾ ಗುರುರಾಜ್ “ಬಳೆ” ಹೆಣ್ಣು ಬಳೆ ಧರಿಸಲು ಅಂದವುಗಾಜಿನ ಬಳೆಗಳು ಇನ್ನೂ ಚಂದವುಇದು ಮುತ್ತೈದೆಯ ಸಂಖೇತವುಘಲ್ ನಾದ ಮನಕಾನಂದವು ಜನಪದ ಗೀತೆಯಲ್ಲಿ ಉಲ್ಲೇಖವಿದೆಕೆಂಪು ಗೀರಿನ ಬಳೆಯುಚಂದವೆಂದಿದೆಸ್ತ್ರೀ ಕುಲದ ಶುಭ ಸ್ವರಗಳು ಎಂದಿದೆತೊಟ್ಟಿಲಿನ ಕೂಸಿನ ದೃಷ್ಟಿಪರಿಹರಿಸಿದೆ ಋಷಿಗಳು ಈ ಶಬ್ದಕ್ಕೆ ಮಾರು ಹೋಗಿರುವರುತಪೋಭಂಗವಾಗಿ ಮತ್ತೆ ತಪಸ್ಸಿಗೆ ಕೂತಿರುವರುಹೆಣ್ಣಿನ ಕೈಗಳ ಶೃಂಗಾರದ ಸಾಧನ ಎನುವರುಅಮ್ಮನಿರುವಳು ಎಂಬ ಖಾತ್ರಿ ಕೂಸಿಗೆ ಅರಿವರು ಗೌರಿ ಹಬ್ಬದಲ್ಲಿ ತೌರಿನವರು ಅದ ತೋಡಿಸುವರುಅದಕ್ಕೆoದೆ ಹೆಣ್ಣು ಮಕ್ಕಳು ಕಾಯುತ್ತಲಿರುವರುಅರಿಶಿಣ ಕುಂಕುಮ ನೀಡಿ  ಬಳೆಗಳನ್ನು ಇಡುವರು ಡಾ.ಲೀಲಾ ಗುರುರಾಜ್ 

ಡಾ.ಲೀಲಾ ಗುರುರಾಜ್ ಅವರ “ಬಳೆ” Read Post »

ಕಾವ್ಯಯಾನ, ನಿಮ್ಮೊಂದಿಗೆ

ಡಾ ಡೋ ನಾ ವೆಂಕಟೇಶ‌ ಅವರ ಕವಿತೆ, “ಹಲ್ಲಿಗಳು”

ಕಾವ್ಯ ಸಂಗಾತಿ

ಡಾ ಡೋ ನಾ ವೆಂಕಟೇಶ‌

“ಹಲ್ಲಿಗಳು”
ಹಲ್ಲಿಗಳೇ ಇವರು,
ನಾವೋ ಹಲ್ಲಿಗೆ ಹೆದರುವವರು
ಹಲ್ಲಿಗಳ ಶಾಪಕ್ಕೆ ಬೆದರುವವರು

ಡಾ ಡೋ ನಾ ವೆಂಕಟೇಶ‌ ಅವರ ಕವಿತೆ, “ಹಲ್ಲಿಗಳು” Read Post »

ಇತರೆ, ನಿಮ್ಮೊಂದಿಗೆ

“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್‌ ಅವರ ಲೇಖನಿಯಿಂದ

“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್‌ ಅವರ ಲೇಖನಿಯಿಂದ.
ಇದು ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು ಮತ್ತು ಯಾರಿಗೂ ತಮ್ಮ ಕೃತ್ಯದ ಫಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನ್ಯಾಯದ ಸ್ಥಿರತೆಯನ್ನು ಖಾತರಿಪಡಿಸುತ್ತದೆ.

“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್‌ ಅವರ ಲೇಖನಿಯಿಂದ Read Post »

ನಿಮ್ಮೊಂದಿಗೆ

“ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ” ವಿಶೇಷ ಲೇಖನ ಹನಿ ಬಿಂದು

ಆರೋಗ್ಯ ಸಂಗಾತಿ “ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ” ವಿಶೇಷ ಲೇಖನ ಹನಿ ಬಿಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ       ಪ್ರತಿ ವರ್ಷ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು ಜನಸಾಮಾನ್ಯರಲ್ಲಿ ಕ್ಯಾನ್ಸರ್ ಎಂಬ ರೋಗದ ಬಗ್ಗೆ ಅರಿವು ಮೂಡಿಸುವುದು, ಅದರ ತಡೆಗಟ್ಟುವ ಕ್ರಮಗಳು, ಶೀಘ್ರ ಪತ್ತೆಯ ಮಹತ್ವ ಹಾಗೂ ಚಿಕಿತ್ಸೆಯ ಆಯ್ಕೆಗಳ ಬಗ್ಗೆ ತಿಳುವಳಿಕೆ ನೀಡುವುದು. ಭಾರತದಲ್ಲಿ ಕ್ಯಾನ್ಸರ್ ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿರುವುದರಿಂದ, ಇದರ ಬಗ್ಗೆ ಸಮಾಜದ ಪ್ರತಿಯೊಬ್ಬ ಸದಸ್ಯರೂ ಜಾಗೃತರಾಗಿರಬೇಕಾಗಿದೆ. “ಕ್ಯಾನ್ಸರ್” ಎಂಬುದು ದೇಹದ ಯಾವುದೇ ಭಾಗದ ಕೋಶಗಳು ನಿಯಂತ್ರಣವಿಲ್ಲದೆ ಬೆಳೆಯಲು ಪ್ರಾರಂಭಿಸುವ ರೋಗವಾಗಿದೆ. ಸಾಮಾನ್ಯವಾಗಿ ದೇಹದ ಕೋಶಗಳು ನಿರ್ದಿಷ್ಟ ಸಮಯದ ನಂತರ ಸಾಯುತ್ತವೆ ಮತ್ತು ಹೊಸ ಕೋಶಗಳು ಅವುಗಳ ಸ್ಥಾನವನ್ನು ತುಂಬುತ್ತವೆ. ಆದರೆ, ಕ್ಯಾನ್ಸರ್‌ನ ಸಂದರ್ಭಗಳಲ್ಲಿ ಕೋಶಗಳು ಸಾಯದೆ, ನಿರಂತರವಾಗಿ ವಿಭಜನೆಗೊಂಡು “ಟ್ಯೂಮರ್”  ಎನ್ನುವ ಗುಚ್ಛವನ್ನು ರಚಿಸುತ್ತವೆ. ಈ ಕೋಶಗಳು ದೇಹದ ಇತರ ಭಾಗಗಳಿಗೆ ಹರಡಿದರೆ ಅದನ್ನು ಮೆಟಾಸ್ಟಾಸಿಸ್ ಎಂದು ಕರೆಯಲಾಗುತ್ತದೆ.ಕ್ಯಾನ್ಸರ್‌ಗಳು ಅನೇಕ ವಿಧಗಳಿವೆ — ಉದಾಹರಣೆಗೆ ಶ್ವಾಸಕೋಶ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಚರ್ಮ ಕ್ಯಾನ್ಸರ್, ರಕ್ತ ಕ್ಯಾನ್ಸರ್ ಮುಂತಾದವು. ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಭಾರತದಲ್ಲಿ 2014ರಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಆಚರಿಸಲಾಯಿತು. ಈ ದಿನವನ್ನು ಆಯ್ಕೆ ಮಾಡಿದ್ದು ಪ್ರಸಿದ್ಧ ಭಾರತೀಯ ವಿಜ್ಞಾನಿ ಮ್ಯಾಡಮ್ ಮೇರಿ ಕ್ಯೂರಿ  ಅವರ ಜನ್ಮದಿನದ ಹಿನ್ನೆಲೆಯಲ್ಲಿ. ಮ್ಯಾಡಮ್ ಕ್ಯೂರಿ ಅವರು ರೇಡಿಯಮ್ ಹಾಗೂ ಪೊಲೋನಿಯಮ್ ಎಂಬ ಕಿರಣೋತ್ಪಾದಕ ಅಂಶಗಳನ್ನು ಕಂಡುಹಿಡಿದವರು. ಅವರ ಸಂಶೋಧನೆಗಳು ಕ್ಯಾನ್ಸರ್ ಚಿಕಿತ್ಸೆಯಾದ ರೇಡಿಯೇಶನ್ ಥೆರಪಿಗೆ  ಪಥಕಾರಣವಾದವು. ಈ ದಿನದ ಆಚರಣೆ ಮೂಲಕ ಸರ್ಕಾರ, ವೈದ್ಯಕೀಯ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು ಹಾಗೂ ಶಾಲಾ-ಕಾಲೇಜುಗಳು ಜನರಿಗೆ ಕ್ಯಾನ್ಸರ್ ಕುರಿತು ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ನಡೆಸುತ್ತವೆ. ಕ್ಯಾನ್ಸರ್ ಉಂಟಾಗಲು ಅನೇಕ ಕಾರಣಗಳು ಕಾರಣವಾಗುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳು:ತಂಬಾಕು ಮತ್ತು ಧೂಮಪಾನ: ಭಾರತದಲ್ಲಿ ಬಾಯಿ, ಗಂಟಲು ಮತ್ತು ಶ್ವಾಸಕೋಶ ಕ್ಯಾನ್ಸರ್‌ಗಳಿಗೆ ಮುಖ್ಯ ಕಾರಣ ಧೂಮಪಾನ ಹಾಗೂ ತಂಬಾಕು ಉಪಯೋಗ.ಮದ್ಯಪಾನ: ಮದ್ಯಪಾನದಿಂದ ಯಕೃತ್ ಹಾಗೂ ಹೊಟ್ಟೆಯ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.ಅಹಿತಕರ ಆಹಾರ ಪದ್ಧತಿ: ಅತಿ ಕೊಬ್ಬು, ಉಪ್ಪು, ಶುದ್ಧೀಕರಿಸಿದ ಆಹಾರಗಳು ಹಾಗೂ ಹಣ್ಣು-ತರಕಾರಿ ಕೊರತೆಯ ಆಹಾರ ಪದ್ಧತಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹಾನಿಕರ ಕಿರಣಗಳು ಮತ್ತು ರಾಸಾಯನಿಕಗಳು: ಅಲ್ಟ್ರಾವಯೊಲೆಟ್ ಕಿರಣಗಳು ಅಥವಾ ಕೈಗಾರಿಕಾ ರಾಸಾಯನಿಕಗಳು ಚರ್ಮ ಹಾಗೂ ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣವಾಗಬಹುದು. ಆನುವಂಶಿಕ ಕಾರಣಗಳು: ಕೆಲವೊಂದು ಕ್ಯಾನ್ಸರ್‌ಗಳು ಕುಟುಂಬದಲ್ಲಿ ಆನುವಂಶಿಕವಾಗಿ ಹರಡುವುದೂ ಇದೆ.ಜೀವನಶೈಲಿ: ಶಾರೀರಿಕ ಚಟುವಟಿಕೆ ಕೊರತೆ, ಒತ್ತಡ ಮತ್ತು ಅಸ್ವಸ್ಥ ಜೀವನಶೈಲಿ ಕೂಡಾ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಕ್ಯಾನ್ಸರ್‌ನ ಪ್ರಾರಂಭಿಕ ಹಂತಗಳಲ್ಲಿ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಕೆಲವೊಂದು ಸಾಮಾನ್ಯ ಲಕ್ಷಣಗಳು ಈ ಕೆಳಗಿನಂತಿವೆ:ಅನಿಯಂತ್ರಿತ ರಕ್ತಸ್ರಾವ ಅಥವಾ ಗಾಯದ ಗುಣಮುಖವಾಗದಿರುವುದು.ದೀರ್ಘಕಾಲದ ಕೆಮ್ಮು ಅಥವಾ ಶ್ವಾಸಕೋಶ ಸಮಸ್ಯೆಅತಿಯಾದ ತೂಕ ಇಳಿಕೆ ಅಥವಾ ಆಹಾರದಲ್ಲಿ ಆಸಕ್ತಿ ಕಳೆದುಕೊಳ್ಳುವುದು.ಚರ್ಮದ ಬಣ್ಣ ಬದಲಾವಣೆ ಅಥವಾ ಗಡ್ಡೆ-ಗುಂಡಿಗಳು ಕಾಣಿಸಿಕೊಳ್ಳುವುದು.ದೀರ್ಘಕಾಲದ ನೋವು ಅಥವಾ ದುರ್ಬಲತೆಈ ರೀತಿಯ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಅಗತ್ಯ. ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲದಿದ್ದರೂ, ಕೆಲವೊಂದು ಕ್ರಮಗಳಿಂದ ಅಪಾಯವನ್ನು ಕಡಿಮೆ ಮಾಡಬಹುದು: ಧೂಮಪಾನ ಹಾಗೂ ತಂಬಾಕು ತ್ಯಜಿಸಿಆರೋಗ್ಯಕರ ಆಹಾರ ಸೇವನೆ: ಹಣ್ಣು, ತರಕಾರಿ, ಧಾನ್ಯ, ಪ್ರೋಟೀನ್‌ಯುಕ್ತ ಆಹಾರ ಸೇವಿಸಬೇಕು.ನಿಯಮಿತ ವ್ಯಾಯಾಮ: ದಿನವೂ ಕನಿಷ್ಠ 30 ನಿಮಿಷ ಶಾರೀರಿಕ ಚಟುವಟಿಕೆ ಮಾಡಬೇಕು. ವೈದ್ಯಕೀಯ ತಪಾಸಣೆ: ವರ್ಷಕ್ಕೆ ಕನಿಷ್ಠ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗ ನಿರೋಧಕ ಲಸಿಕೆಗಳು: ಉದಾಹರಣೆಗೆ, HPV ಲಸಿಕೆ ಗರ್ಭಾಶಯ ಕ್ಯಾನ್ಸರ್ ತಡೆಗಟ್ಟಲು ಸಹಾಯಕವಾಗಿವೆ.ಮದ್ಯಪಾನ ನಿಯಂತ್ರಣಸೂರ್ಯನ ಕಿರಣಗಳಿಂದ ರಕ್ಷಣೆ: ಚರ್ಮ ಕ್ಯಾನ್ಸರ್ ತಡೆಗೆ ಸೂಕ್ತವಾದ ವಸ್ತ್ರಧಾರಣೆ ಹಾಗೂ ಸನ್‌ಸ್ಕ್ರೀನ್ ಬಳಕೆ ಮಾಡಬೇಕು. ಕ್ಯಾನ್ಸರ್‌ನ ಚಿಕಿತ್ಸೆ ಅದರ ಹಂತ, ಸ್ಥಳ ಹಾಗೂ ರೋಗಿಯ ಶಾರೀರಿಕ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಮುಖ್ಯವಾಗಿ ಮೂರು ರೀತಿಯ ಚಿಕಿತ್ಸೆಗಳು ವ್ಯಾಪಕವಾಗಿ ಬಳಕೆಯಲ್ಲಿವೆ: ಶಸ್ತ್ರಚಿಕಿತ್ಸೆ : ಕ್ಯಾನ್ಸರ್ ಕೋಶಗಳನ್ನು ದೇಹದಿಂದ ತೆಗೆದುಹಾಕುವುದು.ರೇಡಿಯೇಶನ್ ಥೆರಪಿ :  ಕಿರಣಗಳ ಮೂಲಕ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡುವುದು.ಕೀಮೋಥೆರಪಿ (Chemotherapy): ಔಷಧಿಗಳ ಮೂಲಕ ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆಗಟ್ಟುವುದು.ಇತ್ತೀಚಿನ ದಿನಗಳಲ್ಲಿ ಇಮ್ಯುನೋಥೆರಪಿ, ಟಾರ್ಗೆಟೆಡ್ ಥೆರಪಿ, ಹಾಗೂ ಹಾರ್ಮೋನ್ ಥೆರಪಿಗಳು ಕೂಡಾ ಪರಿಣಾಮಕಾರಿಯಾಗಿ ಬಳಕೆಯಲ್ಲಿವೆ. ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಜನರಿಗೆ ಕ್ಯಾನ್ಸರ್ ಪತ್ತೆಯಾಗುತ್ತದೆ. ಆದರೆ ಅನೇಕರಿಗೆ ಶೀಘ್ರ ಪತ್ತೆಯಾಗದ ಕಾರಣದಿಂದ ಚಿಕಿತ್ಸೆ ವಿಳಂಬವಾಗುತ್ತದೆ ಮತ್ತು ಪ್ರಾಣಹಾನಿ ಸಂಭವಿಸುತ್ತದೆ. ಜನರು ಕ್ಯಾನ್ಸರ್ ಬಗ್ಗೆ ಭಯಭೀತರಾಗದೇ, ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿದರೆ ಗುಣಮುಖರಾಗುವ ಸಾಧ್ಯತೆ ಹೆಚ್ಚಿರುತ್ತದೆ.ಜಾಗೃತಿ ದಿನದ ಪ್ರಯುಕ್ತ ಶಾಲೆ, ಕಾಲೇಜು, ಆಸ್ಪತ್ರೆ ಹಾಗೂ ಸಾಮಾಜಿಕ ಸಂಸ್ಥೆಗಳು ರಕ್ತದಾನ ಶಿಬಿರಗಳು, ಉಪನ್ಯಾಸಗಳು, ಪೋಸ್ಟರ್ ಪ್ರದರ್ಶನಗಳು ಹಾಗೂ ಆರೋಗ್ಯ ಶಿಬಿರಗಳು ಆಯೋಜಿಸುತ್ತವೆ. ಈ ಮೂಲಕ ಜನರಲ್ಲಿ ಅರಿವು ಮತ್ತು ತಡೆಗಟ್ಟುವ ನಡವಳಿಕೆ ಬೆಳೆಸುವುದು ಮುಖ್ಯ ಉದ್ದೇಶವಾಗಿದೆ.       ಭಾರತ ಸರ್ಕಾರವು ಕ್ಯಾನ್ಸರ್ ವಿರುದ್ಧ ಹೋರಾಡಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ, ಉದಾಹರಣೆಗೆ: NPCDCS (National Programme for Prevention and Control of Cancer, Diabetes, Cardiovascular Diseases and Stroke)ರಾಷ್ಟ್ರೀಯ ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆ ಕೇಂದ್ರಗಳುಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಉಚಿತ ಅಥವಾ ಕಡಿಮೆ ದರದ ಚಿಕಿತ್ಸೆ. ಕ್ಯಾನ್ಸರ್ ಸ್ಕ್ರೀನಿಂಗ್ ಅಭಿಯಾನಗಳು – ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗಾಗಿಈ ಕ್ರಮಗಳಿಂದ ಜನರಿಗೆ ಸಮಾನ ವೈದ್ಯಕೀಯ ಸೇವೆ ದೊರಕುವಂತಾಗಿದೆ.             ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವು ಕೇವಲ ಒಂದು ಆಚರಣೆಯ ದಿನವಲ್ಲ, ಅದು ಆರೋಗ್ಯದ ಹೊಣೆಗಾರಿಕೆಯನ್ನು ನೆನಪಿಸುವ ದಿನ. ಕ್ಯಾನ್ಸರ್ ಒಂದು ಅಂತ್ಯವಲ್ಲ – ಸಮಯಕ್ಕೆ ಪತ್ತೆಹಚ್ಚಿ, ಸರಿಯಾದ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗಲು ಸಾಧ್ಯ. ಪ್ರತಿಯೊಬ್ಬರೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು, ಜಾಗೃತಿಯಿಂದ ನಡೆದುಕೊಂಡರೆ ಕ್ಯಾನ್ಸರ್‌ನಂತಹ ಭಯಾನಕ ರೋಗವನ್ನೂ ತಡೆಗಟ್ಟಬಹುದು.ಕ್ಯಾನ್ಸರ್ ವಿರುದ್ಧ ಹೋರಾಟವು ಕೇವಲ ವೈದ್ಯರ ಕೆಲಸವಲ್ಲ – ಅದು ಸಮಾಜದ ಪ್ರತಿಯೊಬ್ಬ ಸದಸ್ಯನ ಸಹಕಾರದಿಂದ ಮಾತ್ರ ಸಾಧ್ಯ. ಆದ್ದರಿಂದ ನಾವು ಎಲ್ಲರೂ ಸೇರಿ ಈ ದಿನದ ಮಹತ್ವವನ್ನು ಅರಿತು, ಆರೋಗ್ಯಕರ ಹಾಗೂ ಉತ್ತಮ ಮಾನವೀಯ ನೆಲೆಯುಳ್ಳ  ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸೋಣ ಅಲ್ಲವೇ? ನೀವೇನ ಹನಿಬಿಂದು

“ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ” ವಿಶೇಷ ಲೇಖನ ಹನಿ ಬಿಂದು Read Post »

ನಿಮ್ಮೊಂದಿಗೆ

ಎ.ಹೇಮಗಂಗಾ ಅವರ ಹೊಸ ಸಂಕಲನ “ತನಗ ಯಾನ” ದ ಒಂದು ಅವಲೋಕನ ಸಿದ್ದಲಿಂಗಪ್ಪ ಬೀಳಗಿ ಅವರಿಂದ

ಎ.ಹೇಮಗಂಗಾ ಅವರ ಹೊಸ ಸಂಕಲನ “ತನಗ ಯಾನ” ದ ಒಂದು ಅವಲೋಕನ ಸಿದ್ದಲಿಂಗಪ್ಪ ಬೀಳಗಿ ಅವರಿಂದ

ಹೆಚ್ಚಿಸುತ್ತಲೇ ಇದೆ
ಸರ್ಕಾರ ತುಟ್ಟಿ ಭತ್ಯೆ
ನಲ್ಲ ನೀನೂ ಹೆಚ್ಚಿಸು
ನಿನ್ನಯ ತುಟಿ ಭತ್ಯೆ

ಎ.ಹೇಮಗಂಗಾ ಅವರ ಹೊಸ ಸಂಕಲನ “ತನಗ ಯಾನ” ದ ಒಂದು ಅವಲೋಕನ ಸಿದ್ದಲಿಂಗಪ್ಪ ಬೀಳಗಿ ಅವರಿಂದ Read Post »

You cannot copy content of this page

Scroll to Top