ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಮರಳಿನ ದೇಶ ರಾಜಸ್ಥಾನದಲ್ಲಿ
ಒಂದು ಚಿಕ್ಕ ಚಿಲುಮೆ ಹೂವು ಅರಳಿತ್ತು
ಹೆಸರು ಹೇಳುವ ಮೊದಲೇ
ಅಮಾನುಷತೆಯ ಕತ್ತಿ ಅದನ್ನು ಕತ್ತರಿಸಿತು

ಅವಳ ಕೈಯಲ್ಲಿ ಬಳೆ ಇರಬೇಕಿತ್ತು
ಕಾಲಲ್ಲಿ ಗೆಜ್ಜೆ ಸದ್ದು ಇರಬೇಕಿತ್ತು
ಬದಲಾಗಿ ಮೌನ ಮತ್ತು ಕಣ್ಣೀರು ಮಾತ್ರ ಉಳಿದವು

ಯಾರ ಮಗಳೋ, ಯಾರ ಅಕ್ಕನೋ
ಯಾರ ತಂಗಿಯೋ ಅವಳು
ಕನಸು ಕಾಣುವ ವಯಸ್ಸಲ್ಲಿ  
ಕತ್ತಲೆಗೆ ತಳ್ಳಲಾಯಿತು

ಆಕಾಶವೂ ಇಂದು ಅಳುತ್ತಿದೆ
ಗಾಳಿಯೂ ನಾಚುತ್ತಿದೆ
ಏಕೆಂದರೆ ನಾವಿನ್ನೂ ಮನುಷ್ಯರಾಗಿಲ್ಲ

ಆ ಹೂವು ಉದುರಿದ್ದು ವ್ಯರ್ಥವಾಗಬಾರದು
ಪ್ರತಿಯೊಂದು ಮನೆಯಲ್ಲಿ ಹೆಣ್ಣು ಸುರಕ್ಷಿತವಾಗುವವರೆಗೆ
ನಮ್ಮ ಹೋರಾಟ ನಿಲ್ಲಬಾರದು

ನ್ಯಾಯ ಬೇಕು..
ಇನ್ನೊಂದು ಉದುರಿದ ಹೂವಿನ ಕಥೆ ಬೇಡ..


About The Author

Leave a Reply

You cannot copy content of this page

Scroll to Top