ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಬಾ ಮಳೆಯೇ ಬಾ
ಕಂಗಾಲಾದ ರೈತರ
ಬದುಕಿಗೆ ಬೆಂಗಾವಲಾಗಿ ಬಾ

ಮಿಂಚುತ್ತಾ, ಗುಡುಗುತ್ತಾ
ಆಮಿಷ ತೋರದೇ ಬಾ,

ತೋರುತ್ತಾ, ಹಾರುತ್ತಾ
ಹಂಗಿಸಿ, ಅಣಕಿಸದೇ ಬಾ,

ನೊಂದು ಹೋದ  ರೈತರ
ಬೆಂದೆದೆಯ ಬೃಂದಾವನ ಮಾಡು ಬಾ

ನಿಕೃಷ್ಟವಾದ ಬಡವರ
ಬದುಕ ಉಥ್ಕೃ ಷ್ಟವಾಗಿಸಲು ಬಾ,

ಮೇರೆ ಮೀರಿ ಮೆರೆಯುತ್ತಿರುವ
ಸೂರ್ಯನ ತಾಪ ನೀಗಿಸಲು ಬಾ,

ಇಳೆಯರಸಿ ನಾ ಕಾಯುತಿರುವೆ
ಮಳೆಯರಸ ನೀ ಬಂದು ಸೇರೆನ್ನ


ಮಾಲಾ ಚೆಲುವನಹಳ್ಳಿ

About The Author

Leave a Reply

You cannot copy content of this page

Scroll to Top