Day: July 3, 2021

ಗಜಲ್

ಉಸುಕಿಗೂ ಹೊನ್ನಿಗೂ ಮಣ್ಣೇ ಮಡಿಲಾದರೂ ಧಾರಣೆ ಭಿನ್ನವಲ್ಲವೆ !
ಸತ್ಯ ಶೋಧನೆಯ ಸಂಗಾತಕೆ ಅಪಥ್ಯ ನಂಜುಣಿಸಿ ಕೊರಗಬೇಕಿಲ್ಲ ಇಲ್ಲಿ

ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ನಾಗಶ್ರೀ ಕಾವ್ಯಪ್ರಶಸ್ತಿ

ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ನಾಗಶ್ರೀ ಕಾವ್ಯಪ್ರಶಸ್ತಿ

ವಾರದ ಕವಿತೆ ಮಿಣುಕುಹುಳ ವಿಜಯಶ್ರೀ ಹಾಲಾಡಿ ನಡುರಾತ್ರಿಒಗೆದ ಬಟ್ಟೆಗಳ ಹರಡಿಅಡುಗೆಮನೆ ಶುಚಿಗೊಳಿಸಿಹೊದಿಕೆ ಜೋಡಿಸಿಕೊಂಡುಮಲಗುವ ಮುನ್ನಸಣ್ಣದೊಂದು ಬ್ಯಾಟರಿ ಬೆಳಕುಹಾಕಿಕೊಂಡು ಮನೆಯೆಲ್ಲತಿರುಗಿ ಬರಬೇಕೆನಿಸಿತು ಮಗುವಿನಂತೆ ನಿದ್ರಿಸಿದ ಮನೆಮನೆಮಂದಿ, ಕಗ್ಗತ್ತಲ ಜಗ….!ಕಪ್ಪೆ ಜೀರುಂಡೆ ಕೀಟಾದಿಗಳುಮೌನದೊಂದಿಗೆ ಸಂವಾದದಲ್ಲಿದ್ದವುಸುರಿದು ಸಾಕಾಗಿ ಬಿಟ್ಟ ಮಳೆಗೆನೆಲವೆಲ್ಲ ಥಂಡಿ ಶೀತಕಿಟಕಿಯಾಚೆಯ ಮಿಣುಕುಹುಳಗಳಜೊತೆ – ನಾನೇ ಒಂದುಮಿಂಚುಹುಳವೆಂದು ಭ್ರಮಿಸುತ್ತಕೋಣೆ ಕೋಣೆಗಳ ಸುತ್ತಾಡಿದೆಪಾದದುಸುರಿಗೆ ಬೆಚ್ಚಿದ ಹಲ್ಲಿಜಿರಳೆಗಳು ಮರೆಗೆ ಸರಿದವುದೂರದಲ್ಲೆಲ್ಲೋ ನಾಯಿಯೊಂದುಗೊಣಗುತ್ತ ಮಲಗುವ ಸೂಚನೆ ರವಾನಿಸುತ್ತಿರುವಾಗಲೇ…..ಮಿಣುಕುಹುಳವೊಂದು ಮಿಣಿಮಿಣಿಯೆಂದು ತೇಲಿಬಂದಿತು….ಮನೆಯೊಳಗೇ!!ಅಜ್ಜಿ ನೆನಪಿಸುತ್ತಿದ್ದ ‘ಜಕ್ಣಿ’ಯ ಕತೆ-ಗಳು ನುಗ್ಗಿಬಂದು ಕೈದೀಪವಾರಿಸಿದೆ!…….ವಟಗುಟ್ಟುವ ಕಪ್ಪೆಗಳುಕಣ್ಣ ಹಿತ ನೇವರಿಸುವ ಮಸಿಕತ್ತಲು!** ಟಿಪ್ಪಣಿ- […]

ಗಿಳಿಯು ಪಂಜರದೊಳಿಲ್ಲ

ಸೀನಂಗೆ ಇಪ್ಪತ್ತೈದು ವರ್ಷವಾದಾಗ್ಲಿಂದ ಅವನಿಗೊಂದು ಹುಡುಗಿ ಹುಡುಕಕ್ಕೆ ಶುರುಮಾಡಿದ್ದು. ಆಗ್ಲೇ ಅವ್ನಿಗೆ ನಲವತ್ತರ ಹತ್ತಿರತ್ತಿರ ವಯಸ್ಸೇನೋ ಅನ್ನೋ ಹಾಗೆ ಕಾಣ್ತಿದ್ದ. ಅರ್ಧ ತಲೆಕೂದ್ಲು ನೆರೆತುಹೋಗಿತ್ತು. ಎಷ್ಟು ರೀತೀಲಿ ಹೆಣ್ಣು ಹುಡುಕಿದ್ದು. ಹೊಸ ಸಂಬಂಧಗಳೂ ಕೂಡಿ ಬರ‍್ಲಿಲ್ಲ;

ಗಜಲ್

ಕಂಬಗಳೇ ಉರುಳಿಹೋಗಿ ಸಂತಸದ ಮನೆಯು ನೆಲಸಮ ವಾಗಿದೆ
ಕರುಳ ಬಳ್ಳಿ ಅನಾಥವಾದಾಗ ಆಧಾರವೆಲ್ಲಿಂದ ತರಲಿ

ಕಾವಲಿಲ್ಲದ ಹುಡುಗಿ

ಮತ್ತಿವರು ಕೊಂಕು ನುಡಿದವರಿಗೆ,
ಕುಡುಕ ಅಪ್ಪ,ತಲೆಹಿಡುಕ ಗಂಡ
ಎಡಬಿಡಂಗಿ ಅಣ್ಣ ತಮ್ಮಂದಿರು
ವೃದ್ದಾಶ್ರಮಕ್ಕೆ ಒಯ್ಯುವ ಮಗ
ಪಾಪ! ಕಾವಲಿದ್ದಾರೆ!

ತೀವ್ರ ಭಯ, ಗೊಂದಲದಿಂದಲೇ ಗಮನಿಸುತ್ತಿದ್ದ ಶೀತರಕ್ತ ದೇಹಿಯಾದ ನಾಗರಹಾವಿನ ರಕ್ತದೊತ್ತಡವೂ ತುಸುಹೊತ್ತು ನೆತ್ತಿಗೇರಿಬಿಟ್ಟಿತು. ಆದ್ದರಿಂದ ಆ ಹಾವು, ಇನ್ನೂ ತಾನಿಲ್ಲಿ ನಿಂತೆನೆಂದರೆ ಈ ಮನುಷ್ಯರು ನನ್ನ ತಿಥಿ ಮಾಡಿ, ಭೂರೀ ಭೋಜನ ಸವಿಯುವುದು ಖಂಡಿತಾ! ಎಂದು ಯೋಚಿಸಿದ್ದು ಮಿಂಚಿನವೇಗದಲ್ಲಿ ಹೊರಗೆ ಹರಿದು ಕಣ್ಮರೆಯಾಗಿಯಿತು.

ಇದೀಗ ನಾನು ಓದುವುದಕ್ಕಾಗಿ ದೂರದ ಧಾರವಾಡಕ್ಕೆ ಹೊರಟಿದ್ದೇನೆ ಎನ್ನುವಾಗ ಅವನಿಗೆ ಅದು ಅಮೇರಿಕೆಗೋ ಇಂಗ್ಲೆಂಡಿಗೋ ಹೊರಟಂತೆ ದೂರ ಪ್ರಯಾಣವಾಗಿ ಕಂಡಿದೆ. ಆತ ನಾನು ಧಾರವಾಡಕ್ಕೆ ಹೋಗಲೇ ಬಾರದೆಂದು ಹಠ ಹಿಡಿದ. ಎರಡು ಮೂರು ದಿನ ಮನೆಯಲ್ಲಿ ಈ ವಿಷಯದ ಕುರಿತಾಗಿಯೇ ವಾದ-ವಿವಾದಗಳು ನಡೆದವು. ಇದು ಎಂತಹ ವಿಕೋಪಕ್ಕೆ ಹೋಯಿತೆಂದರೆ ಅಂತಿಮವಾಗಿ ಗ್ರಾಮದೇವರಲ್ಲಿ ಪ್ರಸಾದ ಕೇಳುವುದೆಂದೇ ತೀರ್ಮಾನವಾಯಿತು

Back To Top