Day: July 1, 2021

ಹೊಂಗನಸು

ಕವಿತೆ ಹೊಂಗನಸು ಶಂಕರಾನಂದ ಹೆಬ್ಬಾಳ ರಾತ್ರಿ ಹೊತ್ತು ದೀಪಹಚ್ಚದೆ ಕುಳಿತಿದ್ದೇನೆನಿನ್ನ ಕಣ್ಣ ಬೆಳಕಿನಲ್ಲಿಜಗ ನೋಡಬೇಕೆಂದು ಹಪಹಪಿಸುವ ಮನದಲ್ಲಿಮೂಲೆಗೊರಗಿದ್ದೇನೆನೀ ಸಾಂತ್ವನ ಹೇಳಲುಬಂದೆ ಬರುವೆಯೆಂದು ಕಣ್ಣು ಕಾಣಿಸದಿದ್ದರೂನಡೆಯುತ್ತಿದ್ದೇನೆನೀನು ಈ ಕುರುಡನಕೈಹಿಡಿಯುವೆಯೆಂದು ಸ್ತಬ್ಧ ಹೃದಯದ ಬಡಿತದಲಿನಿನ್ನ ಅರಸಿ ನಿಂತಿದ್ದೇನೆಒಳಗೆ ನೀ ರಾಣಿಯಾಗಿಜೊತೆಯಿರುವೆಯೆಂದು ಕನಸುಗಳನು ಕಾಣುವದನ್ನೆಬಿಟ್ಟಿದ್ದೇನೆನೀನೆ ಬಾಳಿನ ಹೊಂಗನಸಾಗಿಬಂದಿರುವೆಯೆಂದು… ಜೀವವನ್ನು ಅಂಗೈಯಲ್ಲಿಹಿಡಿದಿದ್ದೇನೆನೀನೆ ನನ್ನ ಜೀವವಾಗಿಇರುವೆಯೆಂದು |*************

ಹರಿಯುವ ನೀರು

ಆದರೆ ಕೆಲವು ಸಲ ಸಾಮಾಜಿಕ ಬದಲಾವಣೆಗಳು ಭಾವನಾತ್ಮಕ ಬದಲಾವಣೆಗೆ, ಮೌಲ್ಯಗಳ ಬದಲಾವಣೆಗೆ ಎಡೆಮಾಡಿ ಕೊಡುತ್ತವೆ. ಪ್ರಾಚೀನ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಕುಟುಂಬದ ವ್ಯವಸ್ಥಗೆ ವಿಶೇಷ ಸ್ಥಾನವಿದ್ದಿತು. ಸಂಬಂಧಗಳು ನಿಕಟವಾಗಿದ್ದವು. ಉದ್ಯೋಗಗಳು ಕುಟುಂಬಕ್ಕೆ ಸೀಮಿತವಾಗಿದ್ದವು, ಸ್ಥಳೀಯವಾಗಿದ್ದವು. ಮಕ್ಕಳು ತಾಯಿಯಿಂದ ದೂರವಾಗುವ ಕಾರಣಗಳಿರಲಿಲ್ಲ. ಹೆಣ್ಣು ಮಗುವನ್ನು ಕುಲಕ್ಕೆ ಹೊರಗೆ ಎನ್ನುತ್ತ ಚಿಕ್ಕಂದಿನಿಂದಲೇ ಮಾನಸಿಕವಾಗಿ ದೂರವಿಡಲಾಗುತ್ತಿತ್ತು.

ಭಾವಗೀತೆ

ಮೇಘಗಳ ಅಂಚಲಿ ತುಂತುರು ಹನಿಯು
ಮಣ್ಣಿನ ಘಮ್ಮನೆ ವಾಸನೆಯು ತರುತಿದೆ
ನಿನ್ನದೇ ನೆನಪಿನ ದೋಣಿಯೊಂದು
ಆಡುತ ಬಿಟ್ಟಿದ್ದು ಅಂಗಳದಿ ನೆನಪಿದೆಯೇ

ಗಜಲ್

ಮಡಿಲ ಕಂದನ ಲೀಲೆಗಳಲ್ಲಿ ತನ್ಮಯಳಾಗಿ ಮರೆತಿಹಳು ತಾಯಿ ಜಗವೆಲ್ಲ.
ಎದೆಗವುಚಿಕೊಂಡು ಹಾಲೂಡಿಸುವ ತಾಯಿಯ ತದೇಕ ನೋಟದಿ ಅದೇನ ಚಂದವೇ ನೀ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

Back To Top