Day: July 31, 2021

ಮಹಿಳೆ- ಸಂಸ್ಕೃತಿ- ಸಂಸ್ಕಾರ- ವಿರೋಧದ ಪರಿಣಾಮಗಳು

ಆದರೆ ಕೆಲವೊಮ್ಮೆ ಮಹಿಳೆಯೆ ಅಸಂಗತ ವ್ಯವಸ್ಥೆಯಲ್ಲಿ ಭಾಗಿಯಾಗಿ ತಾನೂ ಪರೋಕ್ಷವಾಗಿ ತನಗರಿವಿಲ್ಲದೆ ಅನಾರೋಗ್ಯಕರ ಕಟ್ಟಳೆಗಳನ್ನು ಸ್ಪರ್ಧಿಸಲು ಹೊರಡುತ್ತಾಳೆ ಎನ್ನುವ ಆರೋಪವೊ, ತಕರಾರೊ ಇದೆ. ಈ ವಿಷಯವನ್ನಿಡಿದು ಇಣುಕಿ ನೋಡಲು ಹೊರಟರೆ ಅಲ್ಲಿ ಕಾಣಬರುವ ವಿವಿಧಾಂಶಗಳೇ ಬೇರೆ

“ಮಾತು ಮತ್ತು ನಾವು”

ಮಾತುಗಳು ಮನಸ್ಸಿನ ಮಿಲನಕ್ಕೆ ನಾಂದಿ ಆಗಬೇಕು, ನಮ್ಮ ಮಾತು ಅನ್ಯರ ಅಭಿವೃದ್ಧಿಗೆ ಸಹಾಯಕವಾಗಿ ರಬೇಕು ಹಾಗೇನೆ ಸಂದರ್ಭಗಳನ್ನುಸರಿಸಿ ಮಾತನ್ನು ಇತಿಮಿತಿಯಾಗಿ ಬಳಸಿದರೆ ನಮಗೆ ಮಾತ್ರವಲ್ಲ ನಮ್ಮ ಸುತ್ತಮುತ್ತಲಿನ ವರೆಗೂ ಸಹಾಯವಾದೀತು ಅಲ್ಲವೇ?!

ಈ ಅಸಹಾಯಕ ಸಂದರ್ಭದಲ್ಲಿ ನನ್ನ ಜೈಹಿಂದ್ ಹೈಸ್ಕೂಲು ಸಹಪಾಠಿ ಪ್ರಭು ಎಂಬಾತ ಸಹಾಯಕ್ಕೆ ನಿಂತ. (ಕ್ಷಮೆ ಇರಲಿ ಅವನ ಹೆಸರು ಮರೆತಿದ್ದೇನೆ). ಅಂಕೋಲೆಯ ಮಠಾಕೇರಿಯ ಜಿ.ಎಸ್.ಬಿ ಸಮುದಾಯದ ಪ್ರಭು ನನಗೆ ಹೈಸ್ಕೂಲು ದಿನಗಳಲ್ಲಿ ತುಂಬಾ ಆತ್ಮೀಯನಾಗಿದ್ದವನು. ಆತ ನನಗೆ ವಾಸ್ತವ್ಯದ ವ್ಯವಸ್ಥೆಯಾಗುವವರೆಗೆ ನಿಜಲಿಂಗಪ್ಪ ಹಾಸ್ಟೆಲ್ಲಿನ ತಮ್ಮ ಕೊಠಡಿಯಲ್ಲಿಯೇ ಉಳಿಯಲು ಅವಕಾಶ ನೀಡಿದ. ಇದಕ್ಕೆ ಅವನ ರೂಮ್‌ಮೇಟ್ ಕೂಡ ಆಕ್ಷೇಪವೆತ್ತದೆ ಸಹಕರಿಸಿದ. ಇಬ್ಬರ ಉಪಕಾರ ಬಹು ದೊಡ್ಡದು

ದಾರಾವಾಹಿ ಆವರ್ತನ ಅದ್ಯಾಯ-27 ಗುರೂಜಿಯ ಮನೆಯಿಂದ ಹಿಂದಿರುಗಿದ ಸುಮಿತ್ರಮ್ಮ ಆತುರಾತುರವಾಗಿ ಮನೆಗೆ ಬಂದವರು ಕೈಕಾಲು ಮುಖ ತೊಳೆಯಲು ಬಚ್ಚಲಿಗೆ ಹೋದರು. ಆಹೊತ್ತು ಲಕ್ಷ್ಮಣಯ್ಯ ವರಾಂಡದಲ್ಲಿ ಕುಳಿತುಕೊಂಡು ಜೈಮಿನಿ ಭಾರತದ ಚಂದ್ರಹಾಸನ ಪ್ರಸಂಗವನ್ನು ಓದುತ್ತಿದ್ದರು. ಅದರಲ್ಲಿ, “ಮಂತ್ರಿ ದುಷ್ಟಬುದ್ಧಿಯು ಕುಳಿಂದನನ್ನು ಸೆರೆಯಲ್ಲಿಟ್ಟು ಕುಂತಳಪುರಕ್ಕೆ ಬರುವಾಗ ಹಾವೊಂದು ಅವನೆದುರು ಬಂದು, ನಿನ್ನ ಮನೆಯಲ್ಲಿದ್ದ ನಿಧಿಯನ್ನು ಕಾಯುತ್ತಿದ್ದೆ. ಆದರೆ ನಿನ್ನ ಮಗ ಅದೆಲ್ಲವನ್ನೂ ವೆಚ್ಚ ಮಾಡಿದ! ಎಂದು ಹೇಳಿ ಹೊರಟು ಹೋಯಿತು” ಎಂಬ ಕಥೆಯ ಕೊನೆಯಲ್ಲಿದ್ದರು. ಅಷ್ಟೊತ್ತಿಗೆ ಸುಮಿತ್ರಮ್ಮ ನಗುತ್ತ ಬಂದು […]

Back To Top