Day: April 28, 2021

ಬರದ ಛಾಯೆಗೆ ಬುವಿ ಮೇಲೆ ಬಿರುಕಿನ ಚಿತ್ರ ಜೀವತಳೆದಿದೆ
ವರುಣ ದೇವನ ಕೃಪೆಯಿಂದ ಅವತರಿಸಬೇಕಿದೆ ಹನಿ ಮುತ್ತು

ಅಂಬಲಿಗೂ ಗತಿಯಿಲ್ಲದೆ ಅನ್ನದಾತನ ಮನೆಯಲ್ಲಿ ಹಸಿವು ಧಡಭಡಿಸಿದೆ
ಸ್ವಾಭಿಮಾನದ ಪಟಗೆಗಳು ಉಳ್ಳವರಲ್ಲಿ ಜೀತದಾಳಾಗಿ ದುಡಿಯುತಿವೆ

ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ

ವಿಶೇಷ ಲೇಖನ ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ ಆಶಾ ಸಿದ್ದಲಿಂಗಯ್ಯ ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು.  ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ […]

ಇಲ್ಲದವರಿಗೆ ಕೊಟ್ಟ ನೂರು ಭರವಸೆಗಳು ಹುಸಿಯಾಗಿ ಹೋದವು ಸುಳಿವಿಲ್ಲದೆ
ಅನ್ನದಾತನ ಮನೆಯಲ್ಲಿ ಅಗುಳನ್ನವೂ ಸಹ ಕೊಪ್ಪರಿಗೆ ಹೊನ್ನಾಗಿ ಕಾಣಿಸುತ್ತವೆ

ಎಂತಹ ಸಮಯವಿದು!!

ಕವಿತೆ ಎಂತಹ ಸಮಯವಿದು!! ಸಂಮ್ಮೋದ ವಾಡಪ್ಪಿ ಪ್ರೀತಿ ವಿಶ್ವಾಸ ಕೂಡಿಟ್ಟವರುಯಾವುದೋ ವಾರ್ಡಿನಲ್ಲಿ ಏಕಾಂಗಿಶ್ವಾಸಕ್ಕಾಗಿ ಎಲ್ಲ ಕಳೆದುಕೊಂಡರುಉಸಿರಿಗಾಗಿ ಕಳೆದು ಹೋದರು ಚೈತ್ರದ ಚಿಲುಮೆಯ ಕಾಲಎಲ್ಲವೂ ಚಿಗುರತಿರಲಿಂದುಬಾಡುತಿವೆ ಸಾವಿರ ಲಕ್ಷಮನೆಗಳಲಿ ರೋದನಗಳಿಂದು ಅವ ಹೋದ ಇವ ಬಂದಏನಾಯಿತು ಕೋವಿಡ್ಡಾ?ಅದೇ ಪ್ರಶ್ನೆ..‌ ಭಯಂಕರ ಉತ್ತರಸಮರವಿದು ಜಗವೆಲ್ಲ ತತ್ತರ ಹಣ ತೆತ್ತರು ಸಿಗದಲ್ಲಅಂದು ಗಿಡ ನೆಡದವಆಮ್ಲಜನಕ ಬೇಡುತಿಹಧಗಧಗಿಸುವ ಸೂರ್ಯ ನಗುತಿಹ ಸಮಯವಿದು ಕಳೆದು ಹೋಗಲಿಕಳೆದು ಹೋದ ನಗು ಮರಳಲಿಮರಳಿನಲಿ‌ ಓಯಾಸಿಸ್ ಸಿಗಲಿವೈರಾಣುವಿನ ಸಂಹಾರವಾಗಲಿ *************************************************

ಆಕಾಶದಾವರೆ

ಕವಿತೆ ಆಕಾಶದಾವರೆ ಲಕ್ಷ್ಮೀದೇವಿ ಪತ್ತಾರ ಆಕಾಶಗಂಗೆಯಲ್ಲಿಪ್ರತಿದಿನ ಬೆಳಗಿನ ಜಾವದಲ್ಲಿಅರಳುವದೊಂದು ಅಸದಳದ ತಾವರೆ ಹೂವು ಮುಂಜಾವಿನಲ್ಲಿ ಕೆಂದಾವರೆಮಧ್ಯಾಹ್ನ ನೀಲ್ದಾವರೆಮತ್ತೆ ಸಂಜೆ ಹೊನ್ನದಾವರೆಅಪರಿಮಿತ ಚೆಲುವಿನಅಪರೂಪದ ಹೂವು ಬಗೆ ಬಗೆ ಬಣ್ಣ ಧರಿಸುತಾಮುದಗೊಳಿಸುವ ತಾವರೆಹೊಂಗಿರಣದ ಸುಗಂಧವಎಲ್ಲೆಡೆ ಚೆಲ್ಲಿ ಚೈತನ್ಯ ಉಕ್ಕಿಸುವ ತಾವರೆ ಹೂವು ಯಾರು ಮುಟ್ಟದ ತಾವರೆಯಾರು ಮುಡಿಯದ ತಾವರೆಅರಳಿದರೆ ಭೂರಮೆಗೆ ಬೆಳಗು ಸೊಬಗು ಗೆಲುವು ತರುವ ತಾವರೆ ಹೂ ಜೀವಿಗಳ ಜೀವ ಜೀವನಬಾನಿಗೆ ಶೋಭೆ ಈ ಭಾನುನಮಗಾಗಿ ಹೂವಾಗಿ ಅರಳಿದ ದೇವರುಆದಿತ್ಯನೆಂಬೊ ಅವಿನಾಶಿ ತಾವರೆ ಹೂವು

ಮಕ್ಕಳ ಹಕ್ಕು,ಮೊದಲ ಹುಡುಗ

ಲೇಖನ ಮಕ್ಕಳ ಹಕ್ಕು,ಮೊದಲ ಹುಡುಗ ಅಂಜಲಿ ರಾಮಣ್ಣ ಈ ಸಂಪರ್ಕ ಸಂಖ್ಯೆಯೊಡನೆ ಮಾತು ನಿಂತು ಮೂರು ತಿಂಗಳಾಗಿತ್ತೇ?! ಗಮನಕ್ಕೇ ಬರಲಿಲ್ಲವಲ್ಲ. ಎಂದುಕೊಳ್ಳುತ್ತಲೇ ಬಂದಿದ್ದ ಆಡಿಯೋ ಸಂದೇಶವನ್ನು ತೆರೆದೆ “ ಲೇ ಲೇ ರಾಮಣ್ಣನ ಮಗಳೇ. . .” ಎಂದು ರಾಗವಾಗಿ ಹಾಡಿದ್ದ ಅವನು. ಆ ರಾಗಕ್ಕೆ ತಾಳವಾಗುವ ಮನಸ್ಸು ಇರಲಿಲ್ಲ. ಆದರೆ ಉತ್ತರಿಸುವುದು ಬೇಕಾಗಿತ್ತು. ಪ್ರಾಮಾಣಿಕವಾಗಿ ಹೇಳಿದೆ “ ಪಾಪ ಆ ಹುಡುಗಿ ಹತ್ತಿರ ಸೆಕ್ಶನ್ 94ರಲ್ಲಿ ಹೇಳಿರುವ ಯಾವ ದಾಖಲೆಯೂ ಇಲ್ಲ. ಏನು ಮಾಡೋದು ಅಂತ […]

ಸಮಾಜ ಚಿಕಿತ್ಸಕ ಡಾ. ಜಗದೀಶ್

ನೆನಪು  ಸಮಾಜ ಚಿಕಿತ್ಸಕ ಡಾ. ಜಗದೀಶ್ ಬಿ.ಡಿ.ಎಸ್. ಎಂಡಿಎಸ್   ಈಗ ನಿಮ್ಮ ಬಳಗಕ್ಕೆ ನಿಮ್ಮ ಸೇವೆಯೊಂದೆ ನೆನಪು…. ಅರಸೀಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಂತವೈದ್ಯರಾಗಿದ್ದ ಡಾ. ಜಗದೀಶ್, ಇಲ್ಲಿನ ಆಸ್ಪತ್ರೆಯಲ್ಲಿ ‘ಹಲ್ಲು ಡಾಕ್ಟರ್’ ಎಂದೇ ಪ್ರಸಿದ್ಧ. ಇವರು ವೈದ್ಯರಷ್ಟೇ ಅಲ್ಲದೆ, ಸಾಮಾಜಿಕ ಚಿಕಿತ್ಸಕರೂ, ಸ್ನೇಹಜೀವಿಯೂ ಆಗಿದ್ದರು. ಬಹಳಷ್ಟು ವರ್ಷಗಳ ಕಾಲ ಅರಸೀಕೆರೆಯಲ್ಲಿಯೇ ವೈವಿಧ್ಯ ಚಟುವಟಿಕೆಗಳಲ್ಲಿ ತೊಡಗಿ ನಿವೃತ್ತಿ ನಂತರ ಮೈಸೂರು ಸೇರಿದರು. ನಾನು ಬೆಂಗಳೂರು ವಾಸಿಯಾದೆ. ಅರಸೀಕೆರೆಯಲ್ಲಿದ್ದಷ್ಟು ಕಾಲ ನನ್ನ ಜೊತೆಯಲ್ಲಿ ಸಮಾಜಮುಖಿ ವಿಜ್ಞಾನ ಚಳುವಳಿಗೆ ಜೊತೆಯಾದ ಡಾ. […]

ಯಾತನೆ

ಕವಿತೆ ಯಾತನೆ ಲಕ್ಷ್ಮೀ ಮಾನಸ ಚಿತಾಗಾರದ  ಚಿತ್ರಣ,ಮನದಲ್ಲಿ ಮರುಕಳಿಸಲು,ಎದೆಯಲ್ಲಿ ಬಿರುಗಾಳಿಬೀಸಿ,ತಾರೆಗಳ ಕಾಣುತಲಿವೆ ,ಬಣ್ಣ ಮಾಸಿದ ಪಕ್ಷಿಗಳು,ಕಿಟಕಿಗಳ ಚಿಕ್ಕ  ಸಂದಿನಲ್ಲಿ.., ಲೋಕದ  ತುಂಬೆಲ್ಲಾಪರದೆಗಳು,ಮಾಸಿದ  ಚಿತ್ತಾರಗಳು,ಮುಗಿಲು ಮುಟ್ಟುತ್ತಲಿವೆ ,ಚೀತ್ಕಾರಗಳು,ಮಂಜಿನ  ಮಹಲುಗಳಲ್ಲಿ,ಕಾಂಚಾಣದ ಮಡಿಲಲ್ಲಿನ,ನಂಜಿಲ್ಲದ ವಾಯುವಿಗಾಗಿ.., ಸುಟ್ಟ ವಾಸನೆಬೀರುತಲಿವೆ,ಚಿತೆಯೇರಿದ ಮನಗಳು,ಬೂದಿಯ ಸ್ಪರ್ಶಿಸಲುಚಡಪಡಿಸುತಿವೆ,ಕಾಲವಾದ ನೆನಪುಗಳಲ್ಲಿ,ಮುಳುಗಿ ಮೇಲೇಳುವುದಕ್ಕೋ …?ಮೇಲೇಳದೆ  ಮುಳುಗುವುದಕ್ಕೋ….?   ಚಿ0ತೆಯಲ್ಲಿ ದಹಿಸುತಿವೆ,ಬಾಳಿನ ನಾಳೆಗಳು ,ಬಿರುಗಾಳಿಯಲ್ಲಿಹಾರಬಯಸುತಿರೆ..,ಬೆಚ್ಚನೆಯ ಮನೆಯಲ್ಲೂ,ಮುಳ್ಳಾಗಿ ಚುಚ್ಚುತ್ತಿವೆ,ಮೆತ್ತನೆಯ ಗಾದಿಗಳು ,ಅರುಣೋದಯದ ಹಂಬಲದಲ್ಲಿ…….. ******************************************************* ,    ….. *******************

ಮಹಾದೇವಿ ಅಕ್ಕ

ಕವಿತೆ ಮಹಾದೇವಿ ಅಕ್ಕ ಡಾ.ಕೆ.ಶಶಿಕಾಂತ ಬರೀ ಹಗಲಭ್ರಮೆಯೊಳಗಿನಈ ಜಗಕೆ,ನಿನ್ನಬೆತ್ತಲೆತನದ್ದೇ ಚಿಂತೆ….ತನ್ನ ಬೆತ್ತಲ ಬದುಕಿನಅರಿವು ಇದ್ದರಲ್ಲವೇ…ಬಟ್ಟೆ ಹೊದ್ದಿಸಲಾಗದನಿನ್ನ ದಿಗಂಬರತನವತಿಳಿಯಲು… ಬೋಳು ಗುಡ್ಡದಂತೆಬರೀ ಮಂಡೆ ಬೋಳಾದಈ ಹಿರಿಯರ ಲೋಕದಲ್ಲಿಹುಡುಕುತ್ತಲೇ ಇದೆ ಈ ಜಗಮೋಟು ಮರಗಳ ಗುಂಪಿನಲ್ಲಿಚಿಗುರೊಡೆದ ಗಿಡವನರಸುವಂತೆಬರಡಾಗಿರುವ ಭಾವದಲಿಬಯಲ ಚೆಲುವ ಚೆನ್ನನ…. ಮರವೇ ಮರುಗುವಂತೆಗರಗರ ಸುತ್ತಿದ್ದಾಯ್ತು ,ನೀರೇ ಕಲಕುವಂತೆಮುಳುಮುಳುಗಿಮಿಂದದ್ದಾಯ್ತು ,ಅರ್ಥವನರಿಯದಗಿಳಿಯಂತೆ ನುಡಿದುತನ್ನ ಹಿರಿಮೆಯ ಸೊಲ್ಲುದನಿಯಿಲ್ಲದಾಯ್ತು,ತಲೆಮಾರುಗಳ ಕಾಲಚೆನ್ನನನು ಕಾಣದಾಯ್ತು… ದೃಢವಲ್ಲದ ಹೊಟ್ಟೆಗಾಗಿಮೃಡನನು ಗುರಿಮಾಡಿಹೇಮಕಾಮದ ಇಚ್ಛೆಗೆಚೆನ್ನನರಿವ ಮನಕೆ ಕಿಚ್ಚಿಟ್ಟುಕದಳಿಯ ದಾರಿಯರಿಯದೇದಿಕ್ಕೆಟ್ಟ ಬದುಕಿಗೆಸಾವ ವಿದ್ಯೆಯನರುಹಿದಮಹದ ಗುರು ಮಹಾದೇವಿ…. ಹರಕೆ ಕಾಣಿಕೆಗಳಿಡದಜೀವಕೋಟಿಯನಿರಿಯುವನೂರುದೇವತೆಗಳಈ ಲೋಕದಲ್ಲಿ,,ಬಿಲ್ವಬೆಳವಲಗಳಸಂದೇಹವ ಬಿಡಿಸಿಟ್ಟುಬಾಳೆಮಾವುಗಳಿಗೆನೀರೆರೆದು ಸಲಹಿದವನಕುರುಹನು […]

Back To Top