Day: April 7, 2021

ನಾವು ಮತ್ತು ಅವರು

ಕವಿತೆ ನಾವು ಮತ್ತು ಅವರು ರೇಶ್ಮಾ ಗುಳೇದಗುಡ್ಡಾಕರ್ ಇಳೆಯಿದು ಬುದ್ದನುಬದುಕಿ ಬಾಳಿದ ಬೆಳಕಿರುವದು ಭುವಿಯಿದು ಅಲ್ಲಮನಬಯಲಿಗೆ ಬೆರಗಾದ ತಾಣವಿದು ಧರಣಿಯಿದು ಅಣ್ಣ ಬಸವಣ್ಣನಕ್ರಾಂತಿಗೆ ಸಾಕ್ಷಿಯಾದ ನೆಲವಿದು ಭಾರತವಿದು ಗಾಂಧಿಯಅಹಿಂಸೆಯ ಒಲುಮೆಯಲಿಮಿಂದೆದ್ದ ಸತ್ಯವಿದು ಕತ್ತಿಯ ಅಂಚಿಗೆ ಬಲಿಯಾಗುವವೆಇವರೆಲ್ಲ ಮಾರ್ಗಗಳು ?ಉಳಿದಿಲ್ಲವೆ ಅಥವಾ ಉಳಿಸುವದುಬೇಡವೇ ನೆಮ್ಮದಿಯ ನಾಳೆಗಳನು‌? ಹಸಿದ ಒಡಲಿಗೆ ದ್ವೇಷಅನ್ನ ನೀಡುವದೇ?ಸ್ನೇಹ ಬೆಸೆಯುವದೇ?ಬಾಳಿಗೆ ಹೆಗಲಾಗುವದೇ? ಸಾಮರಸ್ಯ ಅಲೆ ಇಲ್ಲದಸೌಹಾರ್ದದತೆಯ ಕಡಲು ಇರುವುದೇ?ಸಂಕೋಲೆಗಳ ಕಿತ್ತೊಸೆದುಸಂಬಂಧಗಳ ಹೊಸೆದುನಡೆಯುವ ಬನ್ನಿರಿನಮ್ಮ ಗಳ ದಾರಿಗೆ ನಾವೇಮುಳ್ಳಾಗಿ ಭಾವನೆಗಳುಕೃಷವಾಗಿ ಜೀವಿಸುವದು ಬೇಕೆ? *******************************************

ಮಾಯಾಕನ್ನಡಿ

‘ಮಾಯಾಕನ್ನಡಿ’ ಕೇರಳ ಕಾಂತಾ ಸಮ್ಮಿತದ ಮುಂದುವರಿದ ಭಾಗವೆನ್ನೆಡ್ಡಿಯಿಲ್ಲ. ಸ್ವಾತಂತ್ರೋತ್ತರ ಭಾರತ, ಸುಶಿಕ್ಷಿತ ಸ್ತ್ರೀಯರ ಬವಣೆಗಳು, ಸಮಾಜದ ದ್ವಂದ್ವ ನೀತಿಗಳನ್ನು ಪ್ರಶ್ನಿಸುವ ಗುಣ‌ ಇವೆಲ್ಲವನ್ನೂ ಇಲ್ಲಿಯ ೧೬ ಕಥೆಗಳಲ್ಲಿ ಕಾಣಬಹುದು. ೧೯ ನೆಯ ಶತಮಾನದಲ್ಲೇ ಭ್ರಮನಿರಸನ(ಗಾಂದೀಜಿಯೋತ್ತರ ದಿನಗಳು)ವಾದ ಚಿತ್ರ ಇಲ್ಲಿ ನೋಡಲು ಸಿಗುವುದು

ಅಷ್ಟೇ ಸಾಕು.

ಕವಿತೆ ಅಷ್ಟೇ ಸಾಕು. ಅಬ್ಳಿ,ಹೆಗಡೆ ಈ…ನೀರವದೊಳಗೂಸಂತೆಯ ಗಿಜಿ,ಗಿಜಿ.ಈ ರೌರವದೊಳಗೂಏನಾದರೊಂದು ಖುಷಿ,ಸಂಭ್ರಮ ನನ್ನೊಟ್ಟಿಗೆ.ಒಂಟಿತನದ ನಂಟುಬಾದಿಸುವದಿಲ್ಲ ನನ್ನ ನನ್ನೊಟ್ಟಿಗಿನ ಸಂಜೆಬಂಜೆಯಾದರೂ..ಹಗಲ ನಗು ಮಾಸಿದರೂ,ಹಿಂಬಾಲಿಸಲೊಂದುನೆರಳು,ನೋಡಿಕೊಳ್ಳಲೊಂದುಕನ್ನಡಿ,ಇಷ್ಟಿದ್ದರೂ ಸಾಕು,ನನಗೆನಾ ಒಂಟಿಯೆನಿಸುವದಿಲ್ಲ ಸಾಲದ್ದಕ್ಕೆ……ಸಾವಿನಮನೆಯ ನಿಶ್ಶಬ್ಧಕತ್ತಲಲ್ಲಿ ಹಚ್ಚಿಟ್ಟ-ಮಿಣುಕು ದೀಪವೊಂದಿದೆಯಲ್ಲ ಮಸ್ತಕದಲ್ಲಿನೆನಪಿನ ಪುಸ್ತಕತೆರೆದೋದಲು.ಅಷ್ಟೇ ಸಾಕು,ನಾಒಂಟಿಯೆನಿಸುವದಿಲ್ಲ. ಹೊತ್ತಿನ ಹೊತ್ತಿಗೆಯಲ್ಲಿರಾಶಿ,ರಾಶಿ,ಸಂಭ್ರಮಗಳನೆನಪಿನ ಚಿತ್ತಾರಗಳಿವೆ,ಚಿತ್ತವನು ಸಂತೈಲು.ಬಾಲ್ಯದಲ್ಲಿ…..ಮರಿ-ಹಾಕಲಿಟ್ಟ ನವಿಲುಗರಿ,ಮರದ ಟೊಂಗೆಯಲ್ಲಿಸಿಕ್ಕಿಬಿದ್ದ ದಾರ ಹರಿದಬಣ್ಣದ ಗಾಳಿಪಟ,ಬದುಕಿನೆಲ್ಲ ಮೊದಲುಗಳಸವಿ,ಸವಿ ನೆನಪು,ಇದ್ದೇ ಇವೆಯಲ್ಲ..ನನ್ನೊಟ್ಟಿಗೆ..!ಅಸಹ್ಯದ ಕ಼ಣಗಳನ್ನೂಸಹ್ಯವಾಗಿಸಲು.ಒಂಟಿತನ ನೀಗಿಸಲು. ಯಾವುದಿಲ್ಲವಾದರೂಕೊನೇಪಕ಼ ನನ್ನೊಳಗಿನ‘ನಾನಂತೂ’….ಇದ್ದೇ ಇದೆಯಲ್ಲ,ನನ್ನೊಟ್ಟಿಗೆ.ಅಷ್ಟೇ ಸಾಕು ಬದುಕಿಗೆ. **********

ಇನ್ನು ‘ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು ಜೀವದಾತೆಯನಿಂದು ಕೂಗಬೇಕು’. ಹಾಗೇ ಅಕ್ಷರಗಳಿಂದಲೇ ಕೂಗಿ ಕರೆಯಬೇಕು ಎಲ್ಲಾ ಎಚ್ಚರಗಳಿಗೆ. ಅಪಾಯಗಳ ಬಾಯಿಗೆ ಆಹಾರವಾಗುವ ಮುನ್ನ .

Back To Top