ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೈತ ಗಜಲ್

ನಾವು ಬದುಕಿದ್ದೇವೆ ಕೇವಲ ಮೂಳೆ ಚಕ್ಕಳಗಳನು ಹೊತ್ತು
ಎಂದೂ ಮುಗಿಯದ ಹಸಿವಿಗೆ ಜೀವದ ಆಯುಷ್ಯವನು ತೆತ್ತು

ಬೇಸಾಯವೆಂದರೆ ಸುಮ್ಮನೆಯಲ್ಲ ನೆತ್ತರ ಬೆವರಾಗಿಸಬೇಕು
ಸಂಯಮದಿ ಕಾಯಬೇಕು ಕಾಲದೆದುರು ನೆಲದಿ ಬೀಜ ಬಿತ್ತು

ಬರದ ಛಾಯೆಗೆ ಬುವಿ ಮೇಲೆ ಬಿರುಕಿನ ಚಿತ್ರ ಜೀವತಳೆದಿದೆ
ವರುಣ ದೇವನ ಕೃಪೆಯಿಂದ ಅವತರಿಸಬೇಕಿದೆ ಹನಿ ಮುತ್ತು

ಬಿಸಿಲು ಮಳೆ ಗಾಳಿ ಚಳಿ ಎನ್ನದೆ ಕಲ್ಲಾಗಿ ದುಡಿಯಬೇಕು
ಕಾಯಬೇಕು ಹಗಲಿರುಳೆನ್ನದೆ ಬೇಲಿ ಹಾಕಿ ಹೊಲಕೆ ಸುತ್ತು

ಎಷ್ಟು ಸಂಪತ್ತಿದ್ದರೇನಂತೆ ಅನ್ನದ ಮುಂದೆ ಎಲಾ ನಿರ್ಜಿವವೆ
ಜಗದಿ ಸಾಯುತ್ತಿಹರು ಇಂದಿಗೂ ಮಂದಿ ಸಿಗದೆ ಒಂದು ತುತ್ತು

ಪಟ್ಟ ಶ್ರಮಕೆ ಪ್ರತಿಫಲವಿಲ್ಲದೆ ವಿಫಲವಾಗಿದೆ ಕೃಷಿಯ ಬದುಕು
ಭರವಸೆಲಿ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಬಂದಿದೆ ಜೀವಕ್ಕೆ ಕುತ್ತು

ಎಲ್ಲಿಂದ ಹೊರಟಿದ್ದೆವೋ ಇನ್ನೂ ಅಲ್ಲೇ ನಿಂತಿದ್ದೇವೆ ಅಸದ್
ನೇಗಿಲಯೋಗಿ ಇರುವುದೆ ಹಾಗೆ ಲೋಕದಿ ಬದುಕಿಯೂ ಸತ್ತು

***************************

ಜಬೀವುಲ್ಲಾ ಎಮ್. ಅಸದ್

About The Author

1 thought on “”

  1. SHIVASHANKAR SEEGEHATTI

    ಅನ್ನವೇ ಧೈವ ಅನ್ನವೇ ಮಾನ್ಯ
    ಜಗದೊಳಗೆ ರೈತನೇ ಪೂಜ್ಯ..

Leave a Reply

You cannot copy content of this page

Scroll to Top