Month: November 2021

ವಿನುತ ಹಂಚಿನಮನಿ ಕವಿತೆ ಖಜಾನೆ

ನಾರಿ ನಿನಗ್ಯಾಕೇ ಆಭರಣ! ವಸ್ತ ವಡವಿ ನಿನಗೆ ಬೇಕೇ ನಲ್ಲೆಮಸ್ತ ಕಾಡಿಗೆ ಕುಂಕುಮ ಸಾಕಲ್ಲೆ ಕುತ್ತಿಗೆ ಸುತ್ತಿರುವ ಟೀಕಿ ಕಂಠೀಸರಕೆನಿನ್ನ ಶಂಖದ ಕೊರಳೇ ಶೋಭೆಯದಕೆ ವಜ್ರದೋಲೆಯ ಮಿಂಚು ಮಂಕಾಗಿದೆನಿನ್ನ ಕಣ್ಣಂಚಿನ ಸಂಚದಕೆ ಸವಾಲಾಗಿದೆ ನತ್ತು ಮಾತ್ರ ಒತ್ತಿ ಒತ್ತಿ ಹೇಳುತಿದೆನಿನ್ನ ಗತ್ತೇ ಅದನು ಸೋಲಿಸುತಿದೆ ಕೈಗಳಲಿರುವ ಜೋಡಿ ಕಡಗ ಕಂಕಣನಿನ್ನ ಬಾಳೆದಿಂಡಿನಂತಿರುವ ಕೈಗೆ ಗ್ರಹಣ ಹೆಜ್ಜೆಯ ಗೆಜ್ಜೆ ಸೋತಿವೆ ದಣಿದುನಿನ್ನ ನಡಿಗೆಯ ಲಾಸ್ಯಕೆ ಕುಣಿದು ತುಟಿಯ ರಂಗು ಮನದ ಭಾವಕೆಹಿತದಿ ನಾಚುತ ಪ್ರತಿಸ್ಪರ್ಧಿಯಾಗಿದೆ ನಡುವ ಸುತ್ತಿರುವ ಒಡ್ಯಾಣ […]

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—50 ಯಕ್ಷರಂಗದ ಮಾನಾಪಮಾನಗಳು ೧೯೭೦-೮೦ ದಶಕವೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನದ ಸುಗ್ಗಿಕಾಲ. ಅಪರೂಪಕ್ಕೆ ಕಾಣಲು ಸಿಗುವ ಸಿನೇಮಾ ಹೊರತು ಪಡಿಸಿದರೆ ಹಳ್ಳಿ-ಹಳ್ಳಿಗಳಲ್ಲಿ ನಡೆಯುವ ಯಕ್ಷಗಾನ ಬಯಲಾಟ, ನಾಟಕ ಪ್ರದರ್ಶನಗಳೇ ಜನಸಾಮಾನ್ಯರಿಗೆ ಮನರಂಜನೆಯ ಪ್ರಮುಖ ಮಾದ್ಯಮಗಳಾಗಿದ್ದವು. ಎಲ್ಲ ಆಟ-ನಾಟಕಗಳಿಗೂ ಸಮೃದ್ಧವಾದ ಪ್ರೇಕ್ಷಕ ಸಮುದಾಯದ ಹಾಜರಿ ಇರುತ್ತಿತ್ತು. ಜಿಲ್ಲೆಯ ಕೆರೆಮನೆ, ಕರ್ಕಿ, ಬಚ್ಚಗಾರು ಇತ್ಯಾದಿ ವೃತ್ತಿಮೇಳಗಳ ತಿರುಗಾಟವಲ್ಲದೆ ದಕ್ಷಿಣದ ಕಡೆಯಿಂದಲೂ ಸೂರತ್ಕಲ್, ಧರ್ಮಸ್ಥಳ, ಮೂಲ್ಕಿ, ಮಂಗಳೂರು, ಕೋಟ ಮುಂತಾದ ಮೇಳಗಳು ಕನಿಷ್ಟ […]

ಕೆಂಪು ಸೂರ್ಯ

ಕೆಂಪು ಸೂರ್ಯ ಮೀನು ಹಿಡಿದು ಹೊರಡಲುವಿದೇಶಿ ಕೆಂಪು ಕೋತಿಗಳುಎಸೆಯುತ್ತಿದ್ದ ಬಣ್ಣ ಬಣ್ಣದಚಾಕ್ಲೇಟ್ , ಬಿಸ್ಕತ್ಗಳನ್ನುಕ್ಯಾಚ್ ಹಿಡಿಯುತ್ತಿದ್ದುದನಮ್ಮ ಹುಡುಗರಅಸಹಾಯಕತೆಯನ್ನುಮತ್ತೊಬ್ಬ ಪರಂಗಿವೀಡಿಯೊ ಮಾಡುತ್ತಿದ್ದ ಕಂಡೆನ್ನರಕ್ತ ಕುದಿದು ಕಣ್ಣು ಕೆಂಪಾಗಿಕ್ಯಾಮರಾ ಕಿತ್ತು ನೆಲಕ್ಕೆಸೆದುಪುಡಿಗೈದು ನಡೆದೆಕುಯ್ಯುಗುಟ್ಟಿದ ಕೆಂಪು ಮೂತಿಯವಹೇಳುವಷ್ಟರಲ್ಲಿಪಶ್ಚಿಮದ ಸೂರ್ಯ ಕೆಂಪಾಗಿಚಂದ್ರ ಬರಲು ಆಣಿಯಾಗಿದ್ದ.. ಡಾ.ಎಂ.ಈ.ಶಿವಕುಮಾರ ಹೊನ್ನಾಳಿ

Back To Top