Day: May 5, 2021

ಗಜಲ್

ಗಜಲ್ ರತ್ನರಾಯಮಲ್ಲ ಕಾಳಸಂತೆಯಲಿ ಹಾಸಿಗೆಗಳು ಕೊಳೆಯುತ್ತಿವೆಜೀವದ ಬಡತಿಗಾಗಿ ಆಸ್ಪತ್ರೆಗಳು ಹವಣಿಸುತ್ತಿವೆ ಜನನದಲ್ಲಿ ಮರಣವೂ ಇದೆ ಅಂಜುವವರಾರುಸಾವಿನಲ್ಲೂ ರಾಜಕೀಯ ಪಕ್ಷಗಳು ಚಿಗುರುತ್ತಿವೆ ಪಾಪ-ಪುಣ್ಯ ಬಾಲ್ಯದಿಂದಲೂ ಅನುರಣಿಸುತಿದೆಮಸಣಗಳೂ ಇಂದು ಧನವನ್ನು ಬೆಳೆಯುತ್ತಿವೆ ಆತ್ಮವಿಶ್ವಾಸದ ಫಸಲಿಗೆ ಪರಂಪರೆಯೇ ಇದೆ ಇಲ್ಲಿಮಾಧ್ಯಮಗಳೇ ಭಯ ಬಿತ್ತಿ ದುಡ್ಡು ದೋಚುತ್ತಿವೆ ಮರಣಕ್ಕೆ ಚುಂಬಿಸಲು ಭಯ ಪಡದಿರು ‘ಮಲ್ಲಿ’ಹಣದ ಹಾದರವು ಹೆಣಗಳನ್ನು ಉರುಳಿಸುತ್ತಿವೆ ****************

ಗಜಲ್.

ಗಜಲ್. ವಿಜಯಲಕ್ಷ್ಮಿ ಕೊಟಗಿ ನನ್ನ ದೇಹದ ಬಣ್ಣ ಬಿಸಿಲನ್ನೇ ಉಂಡು ಕಪ್ಪಾಗಿದೆ ಕಾಮ್ರೇಡ್ನನ್ನ ಗಜಲ್ ದುಡಿದು ಹಕ್ಕಳೆದ್ದು ಕೆಂಪಾಗಿದೆ ಕಾಮ್ರೇಡ್ ನಾನು ಹಸಿವನ್ನು ತಣಿಸಲು ಕೆಸರಿಗಿಳಿಯಲು ಹೇಸದಿರಬಹುದುನನ್ನ ಗಜಲಿನಲ್ಲಿ ಸ್ವಾಭಿಮಾನದ ನಿರ್ಮಲ ಕನಸಿದೆ ಕಾಮ್ರೇಡ್ ನಾನು ಆಸ್ತಿ ಅಧಿಕಾರವಿಲ್ಲದ ಬಡವನೇ ಇರಬಹುದುನನ್ನ ಗಜಲಿಗೆ ಸಂವಿಧಾನದ ಒಡನಾಟವಿದೆ ಕಾಮ್ರೇಡ್ ನಾನು ನರಪೇತಲ ನಾರಾಯಣನಂತೆ ಇದ್ದಿರಬಹುದುನನ್ನ ಗಜಲಿಗೆ ಬಲಭೀಮನ ತಾಕತ್ತಿದೆ ಕಾಮ್ರೇಡ್ ನಾನು ದಲಿತ ಶೂದ್ರ ಕೂಲಿಕಾರ್ಮಿಕನೇ ಇರಬಹುದುನನ್ನ ಗಜಲ್ ಶ್ರಮಿಕರ ಬೆವರಿಗೆ ಅರ್ಪಿತವಾಗಿದೆ ಕಾಮ್ರೇಡ್ ನಾನು ಮನುಷ್ಯನೆಂದೇ ಭಾವಿಸದ […]

ಗಜಲ್

ಮುಚ್ಚಿದ ಕಿಟಕಿಗೆ ಬಡಿದು ಸಾಯುವ ಹಕ್ಕಿಗೆ ಯಾವ ಭ್ರಮೆ
ಚಾಚಿದ ಕೈಗಳೆಲ್ಲ ಹಿಂದೆ ಸರಿಯುತ್ತಿವೆ ಸಹಿಸಲಾಗುತ್ತಿಲ್ಲ.

ಬದರ್ ಪುಸ್ತಕದ ವಿಶ್ಲೇಷಣೆ

ಈ ಲೋಕದ ನಿಸ್ವಾರ್ಥತೆಗೆ ಪಠ್ಯವಾಗಿರುವವಳೇ ಹೆಣ್ಣು. ಭೂಮಿಗೆ ಬಿದ್ದ ಫಲ ಕೊಡಲೇಬೇಕು. ಅಂತೆಯೇ ಈ ಲೋಕದ ಉತ್ಪಾದಕತೆಯ ಶಕ್ತಿ ಇರುವುದು ಹೆಣ್ಣಿನಲ್ಲಿ ಮಾತ್ರ. ಆದ್ದರಿಂದ ಮಡದಿಯನ್ನು, ತಾಯಿಯನ್ನು, ಹೆಣ್ಣನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಾಗಿದೆ.

ಛೇ! ಏನಾಗುತ್ತಿದೆ…

ಅಗಲಿದ ಹಿರಿಯ ಗೆಳೆಯ ಜರಗನಹಳ್ಳಿ ಶಿವಶಂಕರ್ ಅವರಿಗೆ ಭಾವಪೂರ್ಣ ನಮನ.
ಆರ್ ಜಿ ಹಳ್ಳಿ ನಾಗರಾಜ

ತೊರೆಯ ಹರಿವು
ವಸುಂಧರಾ ಕದಲೂರು
ಮುಷ್ಠಿಯೊಳಗೆ ಹಾವು ಹಿಡಿದ ಮಗು, ಬೆಂಕಿಯಿಂದ ಆಕರ್ಷಿತವಾಗುವ ಮಗು ಎಂಬೆಲ್ಲಾ ವಿಚಾರ ಕೇಳಿದರೆ ಈ ಬಾಲ್ಯವು ಅಪಾಯವನ್ನು ಪರಿಗಣನೆಗೆ ಇಟ್ಟುಕೊಂಡೇ ಇಲ್ಲವಲ್ಲ!? ಎಂದು ಆಶ್ಚರ್ಯವಾಗುತ್ತದೆ. ಬದುಕಿನ ಬಗ್ಗೆ ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೆ ಇದ್ದಾಗ ಇಂತಹ ನಿರಾಳ ಭಾವ ಸಾಧ್ಯವೇನೋ…

Back To Top