ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
“ಬೆನ್ನಿಗೆ ಬಿದ್ದ ಹಸಿವು”


ಬೆಂದ ಜೀವದ ಬೇಗೆ
ನಂದಿಸುವವರು ಯಾರು
ಹಸಿವಿನ ನರಳಾಟದಲ್ಲಿ
ಸಾಯುತ್ತಿರುವವರು ನಾವು
ಸಂಕಟದಲ್ಲಿ ಕೂಗಾಡಿದರೆ
ಮೂರಡಿಯಲ್ಲಿ ಹೂಳುವರು
ತೋಪು ಬಂದೂಕುಗಳಿಲ್ಲದೆ
ಹತವಾಗುತ್ತಿರುವ ಜೀವಗಳು
ಹಸಿವಿನ ಚೀಲ ಬೆನ್ನು ಏರಿದೆ
ಶಾಂತಿ ನೆಮ್ಮದಿಯ ವೇದಾಂತ
ಗುನುಗುಟ್ಟುತ್ತಾ ಕಿವಿ ತಟ್ಟಿದೆ
ಮೋಸ ವಂಚನೆ ಕೊರಳ ಉರುಳಾಗಿ ಬಿದ್ದಿವೆ
ಬಾಳೊಂದು ಮಾಯೆ ಎಂದರು ಅನುಭಾವಿಗಳು
ಆಸೆಯೇ ದುಃಖಕ್ಕೆ ಮೂಲವೆಂದ ಬುದ್ಧ
ಈ ಎಲ್ಲಕೂ ಕಡಿವಾಣ ಇಲ್ಲದ ಹಸಿವೆಂಬ ಮಾಯೆ
ಮೆರೆಯುತ್ತಿದೆ ಏಕೆ?
ಎಲುಬಿಲ್ಲದ ನಾಲಿಗೆ
ಬಯಸುತ್ತಿದೆ ರುಚಿ
ಹಸಿವು ತಣಿಸುವ ಮಂತ್ರ
ವೇದಾಂತ ಯಾವುದಾದರೂ ಇದೆಯೇ ತಿಳಿಸು ಮನವೇ…
ಒಮ್ಮೆ ತಿಳಿಸು ಮನವವೇ…
ಮಾಜಾನ್ ಮಸ್ಕಿ





Nine