ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ “ಮನಸ್ಸೆಂಬ ಬೆಳಕೆಂಡಿ “

ಕಾವ್ಯ ಸಂಗಾತಿ ಸವಿತಾ ದೇಶಮುಖ “ಮನಸ್ಸೆಂಬ ಬೆಳಕೆಂಡಿ “ ಮನಸ್ಸೆಂಬ ಬೆಳಕಿಂಡಿಯ ಮುಚ್ಚಳವತೆರೆದು ನೋಡು ಇಡೀ ಬ್ರಹ್ಮಾಂಡವಪರಮ ಗೂಡು ನಿನ್ನೊಳಗೆ…. !!೧!! ಇಡಿ ಭೂಲೋಕ ಹುದುಗಿ ಇರುತಿರೆ ನಿನ್ನೊಳುನೀನೇ ದಾರಿ ದೀಪ ಕತ್ತಲೆಯ ಅಲೆಯೊಳುಹತ್ತಿದ ಉರಿಗೆ ತಣ್ಣೇ ಎಳಲು ನೀನು !!೨!! ಒಂದೆಡೆ ನಗಿಸುವ ಮತ್ತೆ ಅಳಿಸುವಕುಣಿಸುವ ಮೆರೆಸುವ ಮರಗಿಸುವಸೂತ್ರಧಾರಿ ತುಂಟ ನಡೆಯುವ ನಿನ್ನದು!!೩!! ಮನಸೆಂಬ ದೀಪದೊಲವಿನಲ್ಲಿಹೊಸ ಹೊಸ ಕನಸಿನಾಗರದಲ್ಲಿನೂರೊಂದು ಕಥೆಗಳ ಸರಣಿ ಕಂತು.. !!೪!! ಅರಿಯದ ಕಾರ್ಪಣ್ಯ ಸಂಕಟಗಳ ದಾಳಿಬೀಸಲಿ ,ಆರದು ನಿನ್ನೊಳಗಿನ -ಗಾಳಿನಂದಿಸದು ಸ್ತ್ರೈರ್ಯವನು …!!೫!! ನಿಟ್ಟುಸಿರಿನ ಕ್ಷಣದಲೂ ಧೈರ್ಯದಬೆಳಕಿನ ಹಂದರದ ಹಚ್ಚಡ ಹಾಸಿದನೀನೇ ಸಮಾಧಾನದ ಅದಿರು ….!!೬!! ದಣಿದ ನನ್ನ ಉಸಿರಿಗೆ- ನಿನ್ನ ಮೃದುತಡಕಾಟ ಶಾಂತವಾಗಿಸುವದುನನ್ನ ಮುಂದಲ ಹೃದಯ ತಂತಿ ಮಿಟಿ!!೭!!  ನನಗರಿವಿಲ್ಲದೆ ತಿಳಿದು ತಿಳಿಯದೇಸರಿ ಹೊಂದಿಸಿ ಹೃದಯ ರಾಗ ತಾಳಮೇಳಯಿಸುವೆ ನಿನ್ನ ಬೆಳಕಿನೊಳು!!೮!! ಮನದಾಳದಲ್ಲಿ ಉಕ್ಕುತ್ತಿರುವ ಭಾವಗಳಉದ್ವೇಗಕ್ಕೆ ನೀನಾಗುವೆ ಬೆಳಕಿಂಡಿಅಳಿವು  ಅಳಿಸಿ ಶಾಂತಿ ಅಜರಾಮರ.,!!೯!!  ಅಮರ ಜ್ಯೋತಿ ಮನಸ್ಸೇ ಪರಮ ಜ್ಯೋತಿ ಬೆಳಗುವ ಬೆಳಕಂಡಿ…. ನೀನೇ..!!!! ಸವಿತಾ ದೇಶಮುಖ

ಸವಿತಾ ದೇಶಮುಖ ಅವರ ಕವಿತೆ “ಮನಸ್ಸೆಂಬ ಬೆಳಕೆಂಡಿ “ Read Post »

ಇತರೆ

ಕವಿತಾ ಶ್ರೀನಿವಾಸ್ ನಾಯಕ್ ಅವರ “ನಿರ್ಗಮಿಸುವ ಮುನ್ನ….”

ಲಹರಿ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್ “ನಿರ್ಗಮಿಸುವ ಮುನ್ನ….” ​ನಾನು ಮಲಗುವ ಕೋಣೆಯಲ್ಲಿ ವಿಶಾಲವಾದ ಗಾಜಿನ ಬಾಲ್ಕನಿ ಇದೆ. ಬಾಲ್ಕನಿಯಿಂದ ಪ್ರತಿದಿನ ಉದಯಿಸುವ ಸೂರ್ಯನನ್ನು ನೋಡಲು ಸಾಧ್ಯವಾಗದಿದ್ದರೂ, ದಿನದ ಕೊನೆಯಲ್ಲಿ ಮೌನವಾಗಿ ನಿರ್ಗಮಿಸುವ ಸೂರ್ಯ ಮಾತ್ರ ಅದ್ಭುತವಾಗಿ ಕಾಣುತ್ತಾನೆ.​ಆದರೆ, ಆ ಸುಂದರ ಸಂಜೆಯ ಕೆಂದಾವರೆ ಬಣ್ಣವನ್ನು ಕಣ್ತುಂಬಿಕೊಳ್ಳುವ ಮೊದಲು, ಸೂರ್ಯನ ತೀಕ್ಷ್ಣವಾದ ಕಿರಣಗಳ ಶಾಖವನ್ನು ಸಹಿಸಿಕೊಳ್ಳಲೇಬೇಕು. ಆ ತಾಪ ಮೈಗೆ ತಾಗಿದಾಗ ದೇಹಕ್ಕೆ ಕೊಂಚ ಘಾಸಿಯಾದ್ದದಂತು ನಿಜ. ಆದರೆ ಆ ಸುಡುವ ಹೊತ್ತನ್ನು ತಾಳ್ಮೆಯಿಂದ ಕಳೆದರೆ ಮಾತ್ರ, ಆನಂತರ ಬರುವ ತಂಪಾದ, ಪ್ರಶಾಂತವಾದ ಸೂರ್ಯಾಸ್ತದ ಕ್ಷಣಗಳನ್ನು ಅನುಭವಿಸಲು ಸಾಧ್ಯ.​ನಮ್ಮ ಬದುಕು ಕೂಡ ಹೀಗೆಯೇ ಅಲ್ಲವೇ? ನೆಮ್ಮದಿಯ ನಾಳೆಗಳಿಗಾಗಿ ಇಂದಿನ ಸುಡುವ ಕಷ್ಟಗಳನ್ನು ನಾವು ಸಹಿಸಲೇಬೇಕು. ಆ ತೀಕ್ಷ್ಣವಾದ ಹೋರಾಟದ ನಂತರ ಸಿಗುವ ಸುಖವೇ ಅತಿ ಹೆಚ್ಚಿನ ಮೌಲ್ಯವನ್ನು ಹೊಂದಿರುತ್ತದೆ. ಸುಂದರವಾದದ್ದನ್ನು ಪಡೆಯಲು ಸ್ವಲ್ಪ ನೋವನ್ನು ಅನುಭವಿಸುವುದು ಪ್ರಕೃತಿಯ ಅಲಿಖಿತ ನಿಯಮ.​​”ವಾಸ್ತವವಾಗಿ, ಆ ಸೂರ್ಯನ ತೀಕ್ಷ್ಣತೆ ನಮ್ಮನ್ನು ದಣಿಸುವುದಕ್ಕಲ್ಲ, ಬದಲಾಗಿ ನಮ್ಮ ತಾಳ್ಮೆಯನ್ನು ಪರೀಕ್ಷಿಸುವುದಕ್ಕೆ. ಕಿಟಕಿಯ ಗಾಜಿನಿಂದ ನುಗ್ಗಿ ಬರುವ ಆ ಉರಿ ಬೆಳಕು, ಕತ್ತಲಾಗುವ ಮೊದಲು ನಾವೆಷ್ಟು ಗಟ್ಟಿಯಾಗಿ ನಿಲ್ಲಬಲ್ಲೆವು ಎಂದು ಕೇಳುವಂತಿದೆ.​ಆ ನೋವನ್ನು ದಾಟಿ ನಿಂತಾಗಲೇ, ಆಕಾಶವು ಬಣ್ಣಗಳ ಹಬ್ಬವನ್ನು ಆಚರಿಸುವುದು. ನಮಗೂ ಅಷ್ಟೇ, ಕಷ್ಟದ ಬಿಸಿ ತಾಕಿದಾಗ ಕುಗ್ಗದೆ ಕುಳಿತರೆ, ದಿನದ ಕೊನೆಯಲ್ಲಿ ನೆಮ್ಮದಿಯ ತಂಗಾಳಿ ಮೈದಡವುವುದು ಖಚಿತ. ಒಮ್ಮೊಮ್ಮೆ ಸುಂದರವಾದದ್ದನ್ನು ಅನುಭವಿಸಲು, ನಮಗೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾದ ನೋವನ್ನು ಪ್ರೀತಿಯಿಂದಲೇ ಸ್ವೀಕರಿಸಬೇಕಾಗುತ್ತದೆ.” ಕವಿತಾ ಶ್ರೀನಿವಾಸ್ ನಾಯಕ್

ಕವಿತಾ ಶ್ರೀನಿವಾಸ್ ನಾಯಕ್ ಅವರ “ನಿರ್ಗಮಿಸುವ ಮುನ್ನ….” Read Post »

You cannot copy content of this page

Scroll to Top