ಧಾರಾವಾಹಿ ಸಂಗಾತಿ -18 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಪತಿ ಚೆನ್ನಮಲ್ಲಪ್ಪನವರ ವಿಯೋಗ ೧೯೪೮೯ ಸಮಯ ….ಆಗಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿತ್ತು….. ಸಂಸ್ಥಾನಗಳ ವಿಲೀನಿಕರಣವಾಗಿ, ನಿರಾಶ್ರಿತರು ತಮ್ಮ ತಮ್ಮ ತಾಣಕ್ಕೆ ಹೋಗಿ ಸೇರಿದ್ದರು.ಜಯದೇವಿ ತಾಯಿಯವರು ಅನೇಕ ಕುಟುಂಬಗಳ ಬದುಕಿಗೆ ಬೆಳಕಾಗಿದ್ದರು .. ಅವರಲ್ಲಿ ಆಶ್ರಯ ಪಡೆದ ಅನಾಥರಿಗೆ ಸಂಸಾರ ದೊರಕಿಸಿಕೊಟ್ಟರು…ತಾಯಿಯ ಮಮತೆಯಿಲ್ಲದೆ ಅಳುತ್ತಿದ್ದ ಮಕ್ಕಳಿಗೆ ತಾಯಿಯ ಅಕ್ಕರೆ ಸಿಕ್ಕಿತು…ಬಾಣಂತಿ ನೋವಿನಲ್ಲಿ ನರಳುತ್ತಿದ್ದ ಮಹಿಳೆಯರಿಗೆ ಅವರು ತಾಯಿ ಆಗಿ ಸೇವೆ ಸಲ್ಲಿಸಿದರು…ಅಜ್ಞಾನದಲ್ಲಿ ಕಳೆದು ಹೋಗುತ್ತಿದ್ದ ಮಕ್ಕಳಿಗೆ ಶಿಕ್ಷಣದ ದಾರಿ ತೋರಿಸಿದರು…ಬಡತನದ ಸಂಕೋಲೆಗಳನ್ನು ಕತ್ತರಿಸಿ ಅವರ ಬದುಕಿಗೆ ನಂಬಿಕೆ ತುಂಬಿದರು…!!!ಆದರೆಜಯದೇವಿ ತಾಯಿಯವರ ಮನಸ್ಸಿನಲ್ಲಿ ದುಃಖದ ಸಾಗರ ಉಕ್ಕುತ್ತಿತು……!!!ಎಲ್ಲರಿಗೂ ಬದುಕು ಕೊಟ್ಟ ಆ ಮಹಾತಾಯಿ,ಸ್ವಂತ ಮನಸ್ಸಿನಲಿ ನೋವನ್ನು ಹೋತ್ತು ಕೊಂಡಿದ್ದರು…..ತಮ್ಮಕಷ್ಟವನ್ನು ಮಾತ್ರ ಯಾರಿಗೂ ತೋರಿಸಲಿಲ್ಲ…ಬಾಹ್ಯವಾಗಿ ಅವರು ಸದಾ ನಗುತ್ತಿದ್ದರು…ಆದರೆ ಆ ನಗುವಿನ ಹಿಂದೆ ಅನೇಕ ಕಹಿ ಅನುಭವಗಳು, ತ್ಯಾಗಗಳ ಗಾಯಗಳು ಮರೆಮಾಚಿಕೊಂಡಿದ್ದವು…ಇತರರ ಕಣ್ಣೀರನ್ನು ಒರೆಸಿದ ಕೈಗಳು,ತಮ್ಮ ಕಣ್ಣೀರನ್ನು ತಾವೇ ಒರೆಸಿಕೊಳ್ಳುತ್ತಿದ್ದರು… ಎಲ್ಲರ ಸಂತೋಷವೇ ತನ್ನ ಸಂತೋಷ ಎಂದು ಕೊಂಡವರ ಬದುಕು ಒಂದು ತ್ಯಾಗದ ಗಾಥೆ,ತನ್ನ ನೋವನ್ನು ಮನದಲ್ಲಿ ಮಡಚಿಟ್ಟಕೊಂಡ ಮಹಾನ್ ಆತ್ಮವದು.ತಾಯಿಯವರ ಗಂಡ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು .ಮಲಗಿದ ಅವರ ನಿಶಕ್ತ ದೇಹದ… ಪ್ರತಿ ಉಸಿರು ಅವರ ಆಯುಷ್ಯದ ರೇಖೆಯನ್ನು ಕಡಿಮೆಗೊಳ್ಳಿಸುತ್ತಿರುವದ ತೋರುತ್ತಿತ್ತು. ಗಂಡನ ಕಣ್ಣಿನಲ್ಲಿ ಕಾಣುತ್ತಿದ್ದ ವೇದನೆ ಸಹಿಸದಾಗಿತ್ತು… ತಿಳಿಯದ ಅಜ್ಞಾತ ಭಯ ಕಾಡುತ್ತಿತ್ತು…..!!!! ಆದರೂ ಮುಖದಲ್ಲಿ ನೋವಿನ ಛಾಯೆ ತೋರಿಸಲಿಲ್ಲ. ಧೈರ್ಯವಾಗಿ ನಿಂತವರು. ಸಭೇ- ಸಮಾರಂಭ-ಜನರ ಮಧ್ಯೆ ಹಾಜರಾಗುತ್ತಿದ್ದರು. ಅವರಿಗೆ ಯಾವ ಸಮಾರಂಭಕ್ಕೆ ಹೋಗುವದು ಬೇಡವಾದರೂ ಗಂಡ ಮಾತ್ರ ಹರ್ಷದಿಂದಲೇ ಅವರಿಗೆ ಹೋಗಿ ಬರಲು ಹೇಳುತ್ತಿದ್ದರು. “ನನ್ನನ್ನು ನೋಡಿಕೊಳ್ಳಲು ಆಳುಗಳು ಇದ್ದಾರಲ್ಲ ಎರಡು ದಿನದಲ್ಲಿ ನನಗೇನಾಗತದ??!! ಹೋಗಿ ಬಾ” ಅಂತ ಉತ್ಸಾಹ ತುಂಬಿಸುತ್ತಿದ್ದರು. ಒಂದು ಕಡೆ ದೇಶದ ಸ್ವಾತಂತ್ರ್ಯದ ಸಂಭ್ರಮದ ಆಚರಣೆ ಮತ್ತೊಂದು ಕಡೆ ಅತ್ಯಂತ ಪ್ರೀತಿಯ ವ್ಯಕ್ತಿಯನ್ನು ಕಳೆದುಕೊಳ್ಳುವ ಭೀತಿ…ಈ ಎರಡರ ನಡುವೆ ತಾಯಿಯ ಮನಸ್ಸು ಹೋರಾಡುತ್ತಿತ್ತು.ತಮ್ಮ ವೈಯಕ್ತಿಕ ದುಃಖವನ್ನು ಮರೆತು, ಸಮಾಜದ ಹಿತಕ್ಕಾಗಿ ಸದಾ ಮುಂದೆ ಸಾಗಿದ ಅಜರಾಮರ ವ್ಯಕ್ತಿತ್ವ. *ಸಂಸಾರ ಸಾಗರವು|ಈಸಲು ಹೊರಟಾಗಏಸೊಂದು ಕಷ್ಟಗಳ ಮೊಸಳೆ -ಬಂದು ನುಸುಳೂತ ಹಾದಿ ಕಟ್ಟುವವು!! *.ಆ ಕ್ಷಣಗಳು ಅವರ ಜೀವನದ ಅತ್ಯಂತ ಕಠಿಣ ಅಧ್ಯಾಯವಾಗಿದ್ದರೂ, ತಾಯಿಯವರ ಅಂತರಂಗದ ಶಕ್ತಿಯನ್ನು ಮತ್ತಷ್ಟು ಗಾಢಗೊಳಿಸಿತು… ತಮ್ಮ ಆರೋಗ್ಯದ ಸ್ಥಿತಿ ಗೊತ್ತಿದ್ದ ಚನ್ನಲ್ಲಪ್ಪನವರು ತನ್ನ ಹಿರಿಯ ಮಗಳ ಮದುವೆಯನ್ನಾದರೂ ಮಾಡಬೇಕೆಂದು ಹಂಬಲ ಪಟ್ಟರು ಹಾಗೆ ತನ್ನ ಮಾವನಾದ ಚನ್ನಬಸಪ್ಪ ಮಡಿಕಿ ಅವರೊಂದಿಗೆ ಸಮಾಲೋಚನೆ ಮಾಡಿ ಇತ್ಯರ್ಥಕ್ಕೆ ಬಂದರು. ಅವರ ಮಗ ರಾಜಶೇಖರ ಮಡಿಕೇರಿ (ಜಯದೇವಿ ತಾಯಿಯವರ ತಮ್ಮ)ಅತ್ಯಂತ ಸುಶೀಲರು ಸುದ್ರೂಪಿಯು ಆಗಿದ್ದ ರಾಜಶೇಖರನಿಗೆ ಕೊಟ್ಟು ಮದುವೆ ಮಾಡಬೇಕು ಅನ್ನುವ ಹಂಬಲ ವ್ಯಕ್ತಪಡಿಸಿದರು……ಅದರಂತೆ ತಾಯಿಯವರು ಮನಸ್ಸಿನಿಂದ ಒಪ್ಪಿ ಮದುವೆ ಮಾಡಿ ಮುಗಿಸಿದರು. ಅತ್ಯಂತ ವಿಜೃಂಭಣೆಯಿಂದ ಮದುವೆಯನ್ನು ಮಾಡಿದರು. ಅಳಿಯನಿಗೆ ಕಾಲೇಜ್ ಹೋಗಿ ಬರಲು ಕುದುರೆಯನ್ನು ಕಾಣಿಕೆಯಾಗಿ ಕೊಟ್ಟರು. ಜಯದೇವಿ ತಾಯಿಯವರು ತಮ್ಮಗಂಡನ ಆರೋಗ್ಯದ ಸ್ಥಿತಿ ಸುಧಾರಿಸಲು ಅದೆಷ್ಟೊಂದು ವ್ರತಗಳನ್ನು ಉಪವಾಸ ತಪವಾಸಗಳನ್ನು ಮಾಡಲು ಪ್ರಾರಂಭಿಸಿದರು. ಹಾಗೆ ಸಿದ್ದರಾಮನ ದೇವಸ್ಥಾನಕ್ಕೆ ಬರಿಗಾಲಿನಿಂದ ನಡೆದುಕೊಂಡುಹೋಗುವರು… ,ಮನೆಯ ಹೂದೂಟದಲ್ಲಿ ಬೆಳೆದ ಹೂಗಳನ್ನು ತೆಗೆದುಕೊಂಡು ಸುಂದರವಾದ ಹಾರನ್ನು ಹೆಣೆದು ಸಿದ್ದರಾಮನಿಗೆ ಅರ್ಪಿಸಿ ನಂತರ ಮನೆಗೆ ಬಂದು ಪ್ರಸಾದ ತೆಗೆದುಕೊಳ್ಳುವರು .ಅಷ್ಟರೊಳಗಾಗಿ ಮೂರು ನಾಲ್ಕು ಗಂಟೆ ಆಗಿರುತ್ತಿತ್ತು ಅಲ್ಲಿಯವರೆಗೂ ಉಪವಾಸವಿರುತ್ತಿದ್ದರು. ಹೀಗಾಗಿ ಅವರ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮಗಳು ಬೀಳಲು ಆರಂಭಿಸಿದವು ಅಂತ ತಾಯಿಯವರೇ ನಮಗೆ ಬಹಳಷ್ಟು ಸಲ ಹೇಳುತ್ತಿದ್ದ ನೆನಪು ……!!!ಹಾಗೆ ಮುಂಜಾನೆಯ ಫಲಹಾರ ಆರೋಗ್ಯದ ಗುಟ್ಟು ಅಂತನು ಹೇಳ್ತಾ ಇದ್ದರು . ಒಂದು ದಿನ ಸಿದ್ದರಾಮನ ಹಣೆಯ ಅಂಗಾರವ ತಂದು ಗಂಡನ ಮಸ್ತಕಕ್ಕೆ ಹಚ್ಚಲು ಲಗುಬಗೆಯಿಂದ ಮೆಟ್ಟಲು ಏರಲು ಹೋಗಿ ಕಾಲು ಜಾರಿ ಬಿದ್ದು ಸೊಂಟ ನೋವನ್ನು ಅನುಭವಿಸಿದ್ದರು. ಆದರೆ ಈ ಸಮಾಚಾರವನ್ನು ಗಂಡನಿಗೆ ಯಾರು ಹೇಳು ತಕ್ಕದ್ದಲ್ಲ ಅಂತ ಹೇಳಿದ್ದರು ಆ ನೋವಿನಲ್ಲಿ ಅವರು ಎದ್ದು ಮತ್ತೆ ಗಂಡನ ಸೂಶ್ರುಷಯದಲಿ ತೊಡಗಿದ್ದರು.ಪತಿ ಇಹಲೋಕವನ್ನು ಬಿಟ್ಟು ಹೋಗುವ ಸಮಯ ಸಮಿಪಿಸಿದಂತೆ…. ಗಂಡ ತಾಯಿಯವರಿಗೆ ಮಗುವಾದರು… ಮೇಲಿಂದ ಮೇಲೆ ತಾಯಿಯವರಿಗೆ ಕರೆದು ಹತ್ತಿರ ಕುಳಿತುಕೊಳ್ಳಲು ಕೇಳುತ್ತಿದ್ದರು. ಆತುರದಿಂದ |ಓತು ನೋಡುವ ಕಣ್ಣು,ಆತುಮಕ್ಕೆ ಶಾಂತಿ ನೀಡೂವ- ಪರಿಶುದ್ಧ ಮಾತುಗಳನ್ನು ಕೇಳಿಸುವ ತವಕ || ಸತತವಾಗಿ ಬಸವಣ್ಣನ ವಚನಗಳನ್ನು ಪಠಣ ಮಾಡಲು ಕೇಳಿಕೊಳ್ಳುತ್ತಿದ್ದರು .ಹಾಗೆ ಮಂತ್ರಗಳ ಉಚ್ಚರಣೆ ಮಾಡಲು ಹೇಳುತ್ತಿದ್ದರು .ಅವರ ಜೊತೆಗೆ ತಾನು ಕೂಡ ಆ ಮಂತ್ರ ಪಠಣವನ್ನು ಮಾಡುತ್ತಿದ್ದರು. “ನಿಮಗೆ ಆಯಾಸವಾಗಿತ್ತು ಜೋರಾಗಿ ಹೇಳಬೇಡಿ ನಾನು ಹೇಳ್ತೀನಿ ಕೇಳ್ರಿ “ಅಂತ ತಾಯಿಯವರು ಬಹಳಷ್ಟು ಸಲ ಹೇಳಿದರೂ ಅದಕ್ಕೆ ಅವರು ನಕ್ಕು “ದೇವರ ಹೆಸರು ಹೇಳಿದರೆ ಆಯಾಸ ಯಾತರದು” ಅಂದು ತಾವು ಕೂಡ ಜೋರ ಜೋರಾಗಿ ಮಂತ್ರಗಳನ್ನು ಹೇಳುತ್ತಿದ್ದರು. ಆ ದಿನ ಅದೇಕೋ ಪತಿಯ ಆರೋಗ್ಯ ಕ್ಷೀಣವಾಗ್ತಾ ಇದೆ ಅಂತ ಅನಿಸಿದಾಗ ತಾಯಿಯವರು ಒಂದು ನಿಮಿಷವೂ ಗಂಡನಿಂದ ದೂರ ಸರಿಯಲಿಲ್ಲ .ಕೊನೆಗೆ ಸಂಜೆ ಹೊತ್ತಿಗೆ ಸ್ವಲ್ಪ ಪ್ರಸಾದ ತೆಗೆದುಕೊಂಡು ಬರಲು ಒತ್ತಾಯಿಸಿದರೂ ಅವರು ಅಲ್ಲಿಂದ ಕದಲಲಿಲ್ಲ ….ತಾಯಿಯವರ ತಂದೆ ಬಂದಾಗ “ಈಗ ನಿಮ್ಮ ತಂದೆ ಬಂದಿದ್ದಾರೆ ಸ್ವಲ್ಪ ಹೋಗು ಹೊಟ್ಟೆ ಏನಾರು ತೆಗೆದುಕೊಂಡು ಬಾ”ಅಂತ ಒತ್ತಾಯಿಸಿದರು..ಆಗ ತಾಯಿಯವರು ಅಲ್ಲಿಂದ ಹೋಗಿ ಸ್ನಾನ ಪೂಜೆಯನ್ನು ಮುಗಿಸಿದರು . ಅವರಿಗೆ ಪ್ರಸಾದ ಸೇರಲೇ ಇಲ್ಲ ಅಂದೆಕೋ ಏನೋ ಕಳೆದು ಹೋಗುವ ತಳಮಳ ಅವರಲ್ಲಿ ಇತ್ತು . “ಗಂಡನನ್ನು ನೀನು ನೋಡಿಕೊಳ್ಳುವುದು ಹೇಗೆ ಸಾಧ್ಯ ಹೀಗೆ ಉಪವಾಸ ಇದ್ದರೆ “ಅಂತ ಅತ್ತಿಯಂದಿರ ಆಗ್ರಹಿಸಿದ್ದಕ್ಕೆ ಒಲ್ಲದ ಮನಸ್ಸಿನಿಂದ ಒಂದು ಬಟ್ಟಲು ಹಾಲನ್ನು ಕುಡಿದು…. ಸಿದ್ದರಾಮನ ಹಣೆಯ ಅಂಗಾರ ತೆಗೆದುಕೊಂಡು ಪತಿಯ ಹತ್ತಿರ ಬಂದರು. ಅವರ ಹತ್ತಿರವಿದ ಆಳ ಶಂಕರವನ್ನು ” ಇನ್ನು ನೀನು ಹೋಗಿ ಪ್ರಸಾದ ತೆಗೆದುಕೊಂಡು ಬಾ, ನಾನು ಇರುತ್ತೇನೆ ಅಂದರು ಎಂಥ ಪರಿಸ್ಥಿತಿಯಲಿಯೂ ಎಲ್ಲರ ಕಾಳಜಿಯನ್ನು ಮಾಡುವುದನ್ನು ಮಾತ್ರ ಜಯದೇವಿ ತಾಯಿಯವರು ಮರೆಯುತ್ತಿರಲಿಲ್ಲ .ಗಂಡ ಚನ್ಮಲ್ಲಪ್ಪನವರು ದೀರ್ಘವಾಗಿ ತಾಯಿಯವರನ್ನು ಒಮ್ಮೆ ನೋಡಿ ಮಂತ್ರ ಪಠಣ ಮಾಡಲು ಮತ್ತೇ ಹೇಳಿದರು *ಸಾವಿಗೆ ಅಂಜದಿರು |ನೋವಿಗೆ ಕುಗ್ಗದಿರುಭವ ಮಾಲೆಯಲ್ಲಿ ಸಿಗದಿರು- ಸುದೈವದೇವನ ಸ್ಮರಣೆಯ ಮರೆಯದಿರು !!* ಎನ್ನುವಂತೆ ಅಂತಿಮ ಕ್ಷಣಗಳು ಹತ್ತಿರವಾಗುತ್ತಿವೆ ಎಂಬುದನ್ನು ತಿಳಿಯಲು ತಡವಾಗಲಿಲ್ಲಮನೆಯಲ್ಲಿ ಒಂದು ವಿಚಿತ್ರ ವಾತಾವರಣ. ವಿದಾಯದ ಮುನ್ನದ ಭಾರವಾದ ನಿಶ್ಶಬ್ದ.ಮಂತ್ರ ಹೇಳುತ್ತಾ ಹೇಳುತ್ತಲೇ ತಾಯಿಯವರ ಸ್ವಲ್ಪ ಕಣ್ಣು ಕುಳಿತಲ್ಲಿಯೇ ಕಣ್ಣು ರೆಪ್ಪೆಗಳು ಮುಚ್ಚಿದ್ದವು…..ಪತಿ ತಾಯಿಯವರ ಹೆಸರನ್ನು ಜೋರಾಗಿ ಕೂಗಿ ಕರೆದರು ಗಡಿಬಿಡಿಸಿಕೊಂಡು ….. ಜಯದೇವಿ ತಾಯಿಯವರು” ಏನಾಯಿತು…. !!??ಅಂತ ಕೇಳಿದರು.ಪತಿ ನಿಧಾನವಾಗಿ ತಾಯಿಯವರ ಕೈ ಹಿಡಿದರು…, ಕಣ್ಣಲ್ಲಿ ಅನೇಕ ಕೇಳಬೇಕಾದ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಸುಮ್ಮನೆ ನೋಡಿದರು.“ಮಂತ್ರ ಪಠಿಸು…”ಅಂದರುಆ ಮಾತು ಕೇಳುತ್ತಿದ್ದಂತೆ ತಾಯಿಯವರ ಹೃದಯ ನಡುಗಿತು…!!!ಆದರೂ ಅವರು ಕುಗ್ಗಲಿಲ್ಲ.ಕಣ್ಣೀರನ್ನು ಒಳಗೇ ನುಂಗಿ, ದೈರ್ಯವನ್ನು ಧರಿಸಿ ಮಂತ್ರಗಳನ್ನು ಜಪಿಸಲು ಆರಂಭಿಸಿದರು.“ಓಂ… ”ಅವರ ಧ್ವನಿ ಮೊದಲು ಸ್ವಲ್ಪ ನಡುಗಿತು…ಆದರೆ ನಂತರ ನಿಧಾನವಾಗಿ ಗಟ್ಟಿಯಾಗತೊಡಗಿತು.ವಚನಗಳನ್ನು ಹೇಳಲಾರಂಭಿಸಿದರು. ಒಂದು ಕಡೆ ದೇವರ ಸ್ಮರಣೆ, ಮತ್ತೊಂದು ಕಡೆ ಜೀವದ ಕೊನೆಯ ಹಂತ…ಆದರೆ ಅಚ್ಚರಿಯ ಸಂಗತಿಗಂಡನ ಧ್ವನಿಯೇ ಹೆಚ್ಚು ಜೋರಾಗಿ ಕೇಳಿಸತೊಡಗಿತಹಾಸಿಗೆಯ ಮೇಲೆ ನಿಶಕ್ತನಾಗಿ ಮಲಗಿದವರು, ತನ್ನ ಉಳಿದ ಶಕ್ತಿಯನ್ನೆಲ್ಲಾ ಸೇರಿಸಿಕೊಂಡು ತಾಯಿಯವರಿಗಿಂತಲೂ ಜೋರಾಗಿ ಮಂತ್ರಗಳನ್ನು ಉಚ್ಚರಿಸಲಾರಂಭಿಸಿದರು…… ಮಂತ್ರಪಠನವು..ಜೀವನದ ಅಂತಿಮ ಘೋಷಣೆಯಾಗಿತ್ತು….!!!!! ಒಂದು ಆತ್ಮ ತನ್ನ ಪಯಣವನ್ನು ಮುಗಿಸುವ ಮುನ್ನದ ಶುದ್ಧ ಸಂಕಲ್ಪ…ತಾಯಿಯವರ ಕಣ್ಣೀರು ತಡೆಯಲಾಗದೆ ಹರಿಯಲಾರಂಭೀಸಿದ್ದವು…ಆದರೂ ಜಪ ನಿಲ್ಲಿಸಲಿಲ್ಲ. *ಅತ್ತತ್ತು ಕಣ್ಣಿರು |ಬತ್ತಿ ಹೋಗಿವು ಇಂದುಹೊತ್ತಿಸಿದ ಒಲಿ ಆರುವದು-ನಿನಗಾಗಿಹೋತ್ತಿದ ಎದೆಯು ಆರದು||* ಪ್ರತಿ ಪದವೂ ಹೃದಯವನ್ನು ಕೀಳುತ್ತಿದ್ದರೂ, ಪಠಣ ನಿಲ್ಲಿಸಲಿಲ್ಲ ಅಂತಿಮ ಕ್ಷಣಗಳು ಸಮಿಪಿಸುತಿದ್ದಂತೆಗಂಡನ ಧ್ವನಿ ನಿಧಾನವಾಗಿ ಕುಂದುತ್ತಾ ಹೋಯಿತು…ಆದರೆ ಕೊನೆಯ ಉಸಿರಿನವರೆಗೂ ಮಂತ್ರವನ್ನು ಬಿಟ್ಟಿರಲಿಲ್ಲ…ಒಂದು ದೀರ್ಘ ಶ್ವಾಸ… ಶಾಂತ ಮುಖ…ಮತ್ತೊಂದು ಕ್ಷಣ…..ಎಲ್ಲವೂ ನಿಶ್ಶಬ್ದ… ಧ್ವನಿ ನಿಂತಿತು…ಆತ್ಮ ಶಾಂತವಾಗಿತ್ತು …!!!!! *ಕಣ್ಣೊಳಗಿನ ತೇಜ| ಬಣ್ಣಿಸಲಾಗುವುದುಹುಣ್ಣಿಮೆಯ ಚಂದ್ರನ ತಂಡವ -ಬೀರುತ್ತಾಕಣ್ಣು ಚಲಿಸದೆ ನಿಶ್ಚಲ||* ತಾಯಿಯವರ ಕೈಯಲ್ಲೇ ಅವರ ಜೀವ ಕೊನೆಯ ಬಾರಿ ನಡುಗಿ, ಶಾಂತವಾಗಿ ನಿಂತುಹೋಯಿತು… ಜೀವನದ ಅಂತ್ಯ… ಆತ್ಮದ ಪವಿತ್ರ ಮುಕ್ತಿಯ ಕ್ಷಣ…ತಾಯಿಯವರು ಕಣ್ಣೀರಿನಲ್ಲಿ ಮುಳುಗಿದರು . *ಸಮಾಧಾನವ ಹೇಳಿ| ರವಿಸುವ ಮಾತಿಲ್ಲ ಮಮತೆಯ ಬೀರುವ ನೋಟಿಲ್ಲ- ಓ ತಂದೆಆತುಮಕೆ ಶಾಂತಿ ಹೇಳವರ ಇನ್ನು ಇಲ್ಲ|| ಎಂದು ಅನ್ನಿಸಿದರೂ *ಆಯಾಸವಿಲ್ಲದೆ |ಕಾಯ ಬಯಲಾಯಿತು ಹಾಯಗೊಂಡಿತ್ತು ಎನಮನ- ಸಿದ್ದನ ಕರುಣೆಯಛಾಯೆ ಇದಂತೆ ತೋರಿತ್ತು||* ತಮ್ಮ ಜೀವನ ಸಂಗಾತಿ ದೇವರ ನಾಮಸ್ಮರಣೆಯಲ್ಲೇ ಕೊನೆಯ ಉಸಿರೆಳೆದಿದ್ದರು.ಅದು ದೇವರಲ್ಲಿ ಒಂದಾದ ಕ್ಷಣ ಶಾಂತಿಯಲಿ ಶಾಶ್ವತ ವಿದಾಯದ ಕ್ಷಣ…!!! ಮನಸ್ಸಿಗೆ ತುಸು ನೆಮ್ಮದಿ ತಂದಿತ್ತು. *ನೆನೆಯಲಿನ್ಯಾರಿಗೆ |ಮನ ಮಂದಿರದೊಳುಮನವೇ ಸಜ್ಜೆಯಾಗಿ ಪರಿಣಮಿಸಿ- ಎನ್ನಯ್ಯಮನವಿ ಲಿಂಗವಾಗಿ ಬೆಳಗಿತ್ತು||* ಪತಿಯ ವಿಯೋಗದಿಂದ ಪೂರ್ತಿಯಾಗಿ ಅವರು ಸಿದ್ದರಾಮನ ಭಕ್ತಿಯಲಿ ಲೀನವಾದರು. ಲಿಂಗಪತಿ ಶರಣಸತಿಯನ್ನಾಗಿಸಿ ಬಾಳಲಾರಂಭಿಸಿದರು . *ಹುಟ್ಟಿದ ಗುಣ ಕಳೆದು| ಕೊಟ್ಟರು ಲಿಂಗವನಟ್ಟಿತು ಎನ ಮನ ಪ್ರಾಣ -ಭಾವವಮುಟ್ಟಿ ಲಿಂಗ ಧ್ಯಾನ ಮಾಡುವದಕ||* ಸಂಸಾರದ ವ್ಯಾಮೋಹವನ್ನೆಲ್ಲ ಕಳಚಿ… ಶರಣರ ಆಣತಿಯಂತೆ ಇಂದು ಸಂಸಾರವನ್ನು ಮಾಡಿ ಜಗವ ಗೆದ್ದು ಲಿಂಗಯ್ಯನ ಪತಿಯಾಗಿ ಸ್ವೀಕರಿಸಿ ಬಾಳಹತ್ತಿದ್ದರು… ಈಗ ಪೂರ್ತಿಯಾಗಿ ಗುರು ಸಿದ್ದರಾಮನ ಕೂಸಾಗಿ ಬಾಳಲು ಪ್ರಾರಂಭಿಸಿದರು. *ಕರುಣೆಯ ಕಂಗಳ |ಅರುಣೋದಯವಾಯಿತು ಗುರುವಿನ ಗುರು ಸಿದ್ದರಾಮನ-ದಯೆಯಿಂದದುರಿತ ಕರ್ಮವು ಹರಿಯಿತು||*ಎನ್ನುವಂತೆಸೊನ್ನಲಿಗೆಯಗುರು ಸಿದ್ದರಾಮನಲಿ ಒಂದಾಗಿ ನಿಂದರು.ಚೆನ್ನ ಮಲ್ಲಪ್ಪನವರು ಹೀಗೆ ಐದು ಮಕ್ಕಳು ಐದು ಅತ್ತಿಯಂದಿರು ತಮ್ಮ- ತಮ್ಮನ ಹೆಂಡತಿ ಮಕ್ಕಳು ಹಾಗೂ ಅಪಾರವಾದ ಆಸ್ತಿಯ ಜವಾಬ್ದಾರಿ ಬಿಟ್ಟು ಭೂಲೋಕ ತೇಜಿಸಿದ್ದರು. ಚೆನ್ನ ಮಲ್ಲಪ್ಪನವರಿಗೆ ತಾಯಿಯವರ ಮೇಲೆ ಅಪಾರವಾದ ವಿಶ್ವಾಸವಿತ್ತು ,ಅಭಿಮಾನವಿತ್ತು “ಎಂತಹ ಕಷ್ಟಗಳು ಬಂದರೂ ನಿಭಾಯಿಸಿಕೊಂಡು ಹೋಗುವ,ಎಲ್ಲರ ಉದ್ಧಾರ ಮಾಡುವ ಕೈಗಳು ನಿನ್ನವು ನಾನು ನಿಶ್ಚಿತವಾಗಿ ಎಲ್ಲವನ್ನು ಬಿಟ್ಟು ಹೋಗುತ್ತಿದ್ದೇನೆ” ಅಂತ ಹೇಳಿದ್ದರು .ಹಾಗೆ ಮುಂದೆ ತಾಯಿಯವರು ಇಡೀ ಆಸ್ತಿಯ ಜವಾಬ್ದಾರಿಯನ್ನು ಹೊತ್ತು ಅದನ್ನು ಒಂದು ಇಂಚನ್ನು ಕೂಡ ಮಾರದೇ ಎಲ್ಲವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದರು.(ಮುಂದುವರೆಯುವುದು) ಸವಿತಾ ದೇಶಮುಖ