ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ”

ಕಾವ್ಯ ಸಂಗಾತಿ ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ” ನಿತ್ಯ ನಿರಂತರ ಕಾಯಕಯೋಗಿ ಅಂಬರದ ನೇಸರ ಪೂರ್ವದ ದಾರಿಯಲಿ ಬೆಳ್ಳಿಯ ಬೆಳಕಚಲ್ಲುತಾ ಮೆಲ್ಲನೆ ಮೆಘಗಳಮಧ್ಯ ನುಸುಳುತಾ ಬರುತಿಹಏಳಿರಯ್ಯ ಎನ್ನ ಬಾಂಧವರೆ ಬರಿಬೆಳಕಲ್ಲವಿದು ಸತ್ಯದರ್ಶನಲೋಕಬೆಳಗುವ ನಿತ್ಯನಿಯಾಮಕಜಗದಕರೆಗೆ ಸದ್ದಿಲ್ಲದ ಬರುವವನಿತ್ಯನಿರಂತರ ಕಾಯಕಯೋಗಿಸಮಯದ ಪರಿಪಾಲಕ ಪರಂಜ್ಯೊತಿ… ಬೆಳಕಬೆಳಗಿಗೆ ಜಗವೇತೂಗುವದುಏರುಪೇರಿಲ್ಲದ ರಾಯಭಾರಿ ತೇಜಸೃಷ್ಟಿಗೆ ಜೀವದಾತ ಮನುಕುಲದ ಮನ್ವಂತರನೀತ ಮೈಮರೆಯದವಕ್ಷಣ ಕ್ಷಣ ಅನುಕ್ಷಣ ಆದರನೀಯ ಚರಾಚರ ಜೀವರಾಶೀಗಳ ಜೀವದಣಿವರಿಯದ ಭೂಮ್ಯಾಕಾಶ ಬೆಳಗುವ ಭಾಸ್ಕರ ಬಾನಲೀಲೆತರುಲತೆಗಳ ಹಸಿರ ಸಿಂಚನಭೂಮಾತೆಯ ಮಡಿಲತುಂಬುವ ಚೇತನ… ನಿಸ್ವಾರ್ಥ ಸೇವೆಯ ನಿತ್ಯನೂತನೀತಸ್ವಾರ್ಥಿ ಮನುಜ ಕಲಿಯಬೇಕಿದೆತಮಸೋಮಾ ಜ್ಯೊತಿರ್ಮಯ…ಸತ್ ಚಿಂತನ ಸತ್ ದರ್ಶನ ಅಡಗಿಹುದು ಬೆಳಕೆಂಬ ದೇವಲೀಲೆಯಲಿ….ಸತ್ಯವೇ ದೇವರು ಸತ್ಯವೇ ಬೆಳಕುಹೇ! ಮನುಜಾ ಬೆಳಕ ದಾರಿಯಲಿನಡೆ,ಬೆಳಕಿನಲಿ ಬೆರೆತು ಬೆಳಕಾಗು…. ಜಯಶ್ರೀ ಭ. ಭಂಡಾರಿ.

ಜಯಶ್ರೀ ಭ. ಭಂಡಾರಿ “ನಿತ್ಯ ನಿಯಾಮಕ” Read Post »

ಕಾವ್ಯಯಾನ

ನಾಮದೇವ ಕಾಗದಗಾರ ಹನಿಗವಿತೆಗಳು “ನಂಜಿನ ಉಸಿರು”

ಕಾವ್ಯ ಸಂಗಾತಿ ನಾಮದೇವ ಕಾಗದಗಾರ “ನಂಜಿನ ಉಸಿರು” ಕಣ್ಣು ಬಿಟ್ಟ ಕ್ಷಣಗಳೆಲ್ಲಾಮಂಜಿನ ಹನಿಗಳೆಂದುಕೊಂಡಿದ್ದೆ;ನಂಜಿನ ನೂಲುಗಳಾಗಿ ಗೋಚರಿಸುತ್ತಿವೆ.. *** ಅಸಮಾನೆತೆಯ ನೆತ್ತರುಕುಡಿದ ನೆಲ ಕುದಿಯುತ್ತಿದೆ;ತೂಗುವ ತೊಟ್ಟಿಲು ಮಸಣವಾಗುತ್ತಿದೆ. *** ವೈಷಮ್ಯ ಚಿಗುರೊಡೆದುನೆಲ ಕೆಂಪಾಗಿದೆಈಗ ನಂಜೇರಿ ಕಪ್ಪಾಯಿತು *** ನಮ್ಮೊಳಗೆ ಧರ್ಮದ ಅಮಲು ಏರಿದೆಅಸಮಾನತೆಯ ಕಸದಿಂದಒಡಲು ತುಕ್ಕು ಹಿಡಿದಿದೆ *** ನಯವಂಚಕರ ದುನಿಯಾಬದುಕ ಪಾತ್ರೆಯಲ್ಲಿಜಗದ ಐಕ್ಯತೆ ತಳ ಹತ್ತಿದೆ. *** ಎದೆಗೆ ಎದೆ ನೇಯ್ದ ಮಗ್ಗ ನಂಜಾಗಿದೆ;ಇನ್ನೂ, ಜಾತಿ ಜಾತಿಯದೋಂಬಿ ನಡೆಯದೇ ಇರುತ್ತದೆಯೇ *** ಬಿದ್ದ ಬೀಜವೂಮೊಳಕೆಯೊಡೆಯಲುನೆಲ ಉರಿವ ಕೆಂಡವಾಗಿದೆ *** ಕಿಚ್ಚು ಹಚ್ಚಿಕೊಂಡ ಎದೆಗಣ್ಣಿಗೆಬೆಂಕಿ ಮತ್ತು ದೀಪದ ವ್ಯತ್ಯಾಸ ಗೊತ್ತಾಗುವುದೇ ನಾಮದೇವ ಕಾಗದಗಾರ Recipients

ನಾಮದೇವ ಕಾಗದಗಾರ ಹನಿಗವಿತೆಗಳು “ನಂಜಿನ ಉಸಿರು” Read Post »

ಕಾವ್ಯಯಾನ

ಕವಿತಾ ಶ್ರೀನಿವಾಸ್‌ ನಾಯಕ್‌ ಕವಿತೆ “ಬರಹದ ಗುಂಗಿನಲ್ಲಿ”

ಕಾವ್ಯ ಸಂಗಾತಿ ಕವಿತಾ ಶ್ರೀನಿವಾಸ್‌ ನಾಯಕ್‌ “ಬರಹದ ಗುಂಗಿನಲ್ಲಿ” ​ಬರಹದ ಗುಂಗಿನಲ್ಲಿ…​ದಾರಿ ದೀರ್ಘವಾಗಿತ್ತು, ಮೌನ ಜೊತೆಯಾಗಿತ್ತುಮನದ ಅಂಗಳದಲ್ಲಿ ಕವಿತೆಯೊಂದು ಮೊಳೆಯುತ್ತಿತ್ತು;ಅಂದು ಕೈಲಿ ಲೇಖನಿಯಿತ್ತು, ಕಾಗದದ ಒಡನಾಟವಿತ್ತುಇಂದು ಅಕ್ಷರಗಳ ಗೀಚಲು ಚರವಾಣಿಯ ತಲಾಶೆ ಶುರುವಾಗಿದೆ!​ಲೇಖನಿ ಹೋದ ಜಾಗಕ್ಕೆ ಬೆರಳಚ್ಚು ಬಂದು ಕುಳಿತಿದೆಹಳೆಯ ಕಾಲದ ಆ ಸೊಗಡು ಇಂದು ಡಿಜಿಟಲ್ ಆಗಿದೆ;ಕವನದ ಗುಂಗಿನಲ್ಲಿ ನಾನು ಎಲ್ಲಿದ್ದೆ ಎಂಬ ಅರಿವೇ ಇಲ್ಲಅಂಗಡಿಯವನು ಮಾತಾಡಿಸಿದಾಗಲೇ ವಾಸ್ತವದ ಅರಿವಾಗಿದ್ದು!​ಕವಿತೆ ಇನ್ನು ಮನದ ತುಂಬೆಲ್ಲಾ ಹರಿಯುತ್ತಲೇ ಇತ್ತುದೇಹ ಮಾತ್ರ ನಿಧಾನವಾಗಿ ಮನೆಯ ದಾರಿ ಹಿಡಿದಿತ್ತು;ಶಬ್ದಗಳ ಲೋಕದಲಿ ನಾನು, ಮೌನದಲಿ ನನ್ನ ಬರಹ..ದಾರಿ ಮುಗಿದಿತ್ತು, ಮನೆಯು ಬಂದಿತ್ತು.. ಮನಸು ಮಾತ್ರ ಕವನ ಬರೆಯುತ್ತಿತ್ತು. ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

ಕವಿತಾ ಶ್ರೀನಿವಾಸ್‌ ನಾಯಕ್‌ ಕವಿತೆ “ಬರಹದ ಗುಂಗಿನಲ್ಲಿ” Read Post »

ಕಾವ್ಯಯಾನ

ದಾನಮ್ಮ ಝಳಕಿ ಅವರ ಕವಿತೆ “ಕನಸಿನ ಅರಮನೆ”

ಕಾವ್ಯ ಸಂಗಾತಿ ದಾನಮ್ಮ ಝಳಕಿ “ಕನಸಿನ ಅರಮನೆ” ರಾತ್ರಿಯ ಮೌನದ ಮಡಿಲಿನಲ್ಲಿಒಂದು ಕನಸು ಕಣ್ಣು ತೆರೆದಿತು,ಬಡ ಹೃದಯದ ಚಿಕ್ಕ ಗುಡಿಸಲಲ್ಲಿಅರಮನೆಯೊಂದು ಅರಳಿತು. ಕಲ್ಪನೆಯ ಕಲ್ಲು ಕಲ್ಲಿನಿಂದಕಟ್ಟಿದ ಮನದ ಮಂದಿರವು,ಆಶೆಗಳ ಹೊನ್ನಿನ ಕಿಟಕಿಯಿಂದಬೆಳಗಿತು ಬದುಕಿನ ಅಂತರವು. ಕಣ್ಣೀರ ಹನಿಯ ನೀರಿನಿಂದಲೇಬೇರು ಬಿಟ್ಟಿತು ಬಯಕೆಯ ಗಿಡ,ನೋವಿನ ಬೆಂಕಿ ದಾಟಿಬಂದಾಗಹೂವಾಯಿತು ಬದುಕಿನ ಹಾದಿ ಬಿಡ. ಬೆವರ ಹನಿಗಳ ಮುತ್ತುಗಳಿಂದಗೋಡೆಯ ಮೇಲೆ ಚಿತ್ರ ಬರೆದೆ,ಸಹನೆಯ ದೀಪ ಹಚ್ಚಿಕೊಂಡುಸಾವಿರ ಕತ್ತಲ ದಾರಿ ನಡೆದೆ. ಬಿರುಗಾಳಿಗಳು ಬಂದಾಗಲೂಮನದ ಬಾಗಿಲು ಮುಚ್ಚಲಿಲ್ಲ,ಸೋಲಿನ ನೆರಳು ಸುತ್ತಿದಾಗನಂಬಿಕೆಯ ಸೂರ್ಯ ಅಸ್ತವಾಗಲಿಲ್ಲ. ಅರಮನೆ ಎಂದರೆ ಚಿನ್ನವಲ್ಲ,ಅದು ಮನದ ಮಹತ್ವದ ಗೃಹ,ಪ್ರೀತಿಯೇ ಅದರ ಸಿಂಹಾಸನ,ಮನುಜತ್ವವೇ ಅದರ ಸುಗಂಧ ಸುಭ್ರ. ಕನಸು ಎಂದರೆ ಕೇವಲ ನಿದ್ರೆ ಅಲ್ಲ,ಕನಸು ಎಂದರೆ ಜೀವದ ಜ್ಯೋತಿ,ಬಿದ್ದರೂ ಮತ್ತೆ ಎದ್ದು ನಿಲ್ಲುವಧೈರ್ಯದ ಅಮರ ಪ್ರೀತಿ. ಇಂದು ನಿಂತಿದೆ ಆ ಅರಮನೆಕಾಲದ ಮುಂದೆ ಗರ್ವವಾಗಿ,ನಿನ್ನೆ ಕಣ್ಣೀರಲಿ ತೇಲಿದ ಮನಸುಇಂದು ನಗುತ್ತಿದೆ ಹೂವಾಗಿ. ಜೀವನವೆಂಬ ವಿಶಾಲ ಭುವಿಯಲ್ಲಿಕನಸೇ ಮಾನವನ ರೆಕ್ಕೆ,ಕನಸಿನ ಅರಮನೆ ಕಟ್ಟಿದವನಿಗೆಆಕಾಶವೂ ಚಿಕ್ಕದಾದ ತೆಕ್ಕೆ. ಡಾ ದಾನಮ್ಮ ಝಳಕಿ

ದಾನಮ್ಮ ಝಳಕಿ ಅವರ ಕವಿತೆ “ಕನಸಿನ ಅರಮನೆ” Read Post »

You cannot copy content of this page

Scroll to Top