ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಅವರ ಗಜಲ್ ಇಲ್ಲಿ ಮನುಷ್ಯತ್ವವನ್ನೂ ಮಣ್ಣು ಮಾಡಲಾಗಿದೆ ಮರುಳೇಕರುಣೆ ಕನಿಕರಾದಿಗಳನು ದೂರ ದೂಡಲಾಗಿದೆ ಮರುಳೇ ರಾತ್ರಿಗೆ ಸಿಮೀತವಾದ ಹೇಯಕೃತ್ಯಗಳೀಗ ಹಗಲಿಗಿಳಿದಿವೆಬದುಕಿದ್ದಾಗಲೇ ಚರಮಗೀತೆಯ ಹಾಡಲಾಗಿದೆ ಮರುಳೇ ಬಹುತೇಕರು ಹಡೆದವರ ಕಡೆಗಣಿಸಿ ಬದುಕುವವರೇ ಇಲ್ಲಿಸಂಬಂಧಗಳಿಗೆ ತಣ್ಣಗಿದ್ದೇ ತರ್ಪಣ ಬಿಡಲಾಗಿದೆ ಮರುಳೇ ಒಳಿತಿಗಿಂತ ಕೆಡುಕೇ ಕಿವಿಗೆ ಬೀಳುತಿಹ ಜಾಯಮಾನವಿದುಶಕುನಿಯನ್ನೇ ಮೀರಿಸುವ ದಾಳವ ಹೂಡಲಾಗಿದೆ ಮರುಳೇ ಮಾನವ ಧರ್ಮ ಊನಗೊಂಡ ಶ್ವಾನದಂತೆ ಬೊಗಳುತಿದೆಕಾಲನ ಬೇತಾಳ ಕುಂಬಾರನ ಹೆಗಲ ಏರಲಾಗಿದೆ ಮರುಳೇ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಅನುವಾದ

“ಮೇಣದ ಬತ್ತಿಯಂತೆ ಕರಗಬಲ್ಲೆ, ಬೆಳಗಬಲ್ಲೆ!” ತೆಲುಗು ಮೂಲ: ಆಶಾರಾಜು,ಕನ್ನಡ ಅನುವಾದ: ಕೋಡೀಹಳ್ಳಿ  ಮುರಳೀ ಮೋಹನ್

ಅನುವಾದ ಸಂಗಾತಿ “ಮೇಣದ ಬತ್ತಿಯಂತೆ ಕರಗಬಲ್ಲೆ, ಬೆಳಗಬಲ್ಲೆ!” ತೆಲುಗು ಮೂಲ: ಆಶಾರಾಜು, ಕನ್ನಡಕ್ಕೆ: ಕೋಡೀಹಳ್ಳಿ  ಮುರಳೀ ಮೋಹನ್ ಇಲ್ಲಿ ನಗುವುದೇ ನಿಷಿದ್ಧ,ನನಗೆ ನಗುವುದು ಗೊತ್ತು.ಇಲ್ಲಿ ಶಬ್ದವೇ ನಿಷಿದ್ಧ,ನನಗೆ ಮಾತಾಡುವುದು ಗೊತ್ತು.ಇಲ್ಲಿ ಪ್ರಶ್ನೆಗಳೇ ನಿಷಿದ್ಧ,ನನಗೆ ಕಾರಣಗಳನ್ನು ಹುಡುಕುವುದು ಗೊತ್ತು.ನಾನು ಮೇಣದ ದೀಪ.ಸುಡುತ್ತಾ ಕರಗಿಹೋಗುವುದು ಗೊತ್ತು;ಬೆಳಗಾಗುವವರೆಗೂ ಹೊಳೆಯುವುದೂ ಗೊತ್ತು.ಕಣ್ಣೀರು ವಿಚಿತ್ರವಾದ ಇತಿಹಾಸ ಹೊಂದಿವೆ.ಕೋಪದಂತೆ ಉರಿಯಾಗಿ ಬರುತ್ತವೆ,ಶಾಂತಿಯಂತೆ ತಂಪಾಗಿ ಇಳಿಯುತ್ತವೆ.ಸೋತಾಗ ಉಕ್ಕಿ ಹರಿಯುತ್ತವೆ,ಗೆದ್ದಾಗಲೂ ಮಿನುಗುತ್ತವೆ.ವೀರರು ಇದನ್ನೇ ಧೈರ್ಯ ಎನ್ನುತ್ತಾರೆ,ಕವಿಗಳು ಇದನ್ನೇ ಅಲುಗದ, ಬೆದರದ ಬದುಕು ಎನ್ನುತ್ತಾರೆ! ತೆಲುಗು ಮೂಲ: ಆಶಾರಾಜುಕನ್ನಡ ಅನುವಾದ: ಕೋಡೀಹಳ್ಳಿ  ಮುರಳೀ ಮೋಹನ್

“ಮೇಣದ ಬತ್ತಿಯಂತೆ ಕರಗಬಲ್ಲೆ, ಬೆಳಗಬಲ್ಲೆ!” ತೆಲುಗು ಮೂಲ: ಆಶಾರಾಜು,ಕನ್ನಡ ಅನುವಾದ: ಕೋಡೀಹಳ್ಳಿ  ಮುರಳೀ ಮೋಹನ್ Read Post »

You cannot copy content of this page

Scroll to Top