ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗೊರೂರು ಅನಂತ ರಾಜು ಅವರ ಹನಿಗವನಗಳು

ಕಾವ್ಯ ಸಂಗಾತಿ ಗೊರೂರು ಅನಂತ ರಾಜು ಹನಿಗವನಗಳು ಗೊತ್ತೇ..? ಮಡದಿಯ ಹೆಸರಿನ ಮುಂದೆಗಂಡನ ಹೆಸರು ಏಕಿರುತ್ತದೆಯೋಚಿಸಿ ತುಸು ಹೊತ್ತುಮುಂದೆ ಮುಂದೆ ನಡೆಯುತ್ತಾನಲ್ಲಲಗೇಜ್ ಹೊತ್ತು ಗೊತ್ತಿಲ್ಲ.. ವರಾನ್ವೇಷಣೆಯಲ್ಲಿ ಜೋಡಿ ಚಪ್ಪಲಿ ಸವೆಸಿದ ಅಪ್ಪನಿಗೆತನ್ನ ಮಗಳ ಹಿಂದೆ ಹುಡುಗರುಹನ್ನೆರೆಡು ಚಪ್ಪಲಿ ಸವೆಸಿದ್ದುಗೊತ್ತಿಲ್ಲ.. ಗೊತ್ತೇ..? ದುರಂತ ಕಥೆ ಕಾದಂಬರಿಬರೆದು ಪ್ರಸಿದ್ಧನಾದಕತೆಗಾರನಿಗೆ ಸ್ಫೂರ್ತಿಅವನ ಹೆಂಡತಿ ಎಂಬುದುಗೊತ್ತೇ..? ಗೊತ್ತಿಲ್ಲ.. ಹುಡುಗರು ಚುಡಾಯಿಸ್ತಾರೆ ಅಂತಬಿಡ್ತಾರಾ ಹುಡುಗಿಯರುಧರಿಸೋದು ಮಿಡಿಹುಡುಗಿಯರಿಗಾಗಿಯೇ ತಲೆ ಕೆಡಿಸಿಕೊಳ್ಳುವ ಹುಡುಗರು ಬಿಡ್ತಾರ ಸೇದೋದು ಸಿಗರೇಟು ಬೀಡಿ ಗೊತ್ತಿಲ್ಲ..! ಗೊರೂರು ಅನಂತರಾಜು 

ಗೊರೂರು ಅನಂತ ರಾಜು ಅವರ ಹನಿಗವನಗಳು Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಅಳುವವರನು ನೋಡಿಯೂ ನಗುವವರಿದ್ದಾರಿಲ್ಲಿ ಅದ್ಯಾಕೆ ಹೀಗೆನೋಯುವರೆಂದು ತಿಳಿದೂ ಸತಾಯಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ತಮ್ಮ ಕಷ್ಟವನ್ನಷ್ಟೇ ಪುಂಖಾನುಪುಂಖವಾಗಿ ಊದುವರುಅನ್ಯರ ಅಳಲು ಕೇಳಲು ಒಲ್ಲೆನ್ನುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ನೀ ಬಯಸುವ ಪ್ರೀತಿ, ಗೌರವ ಬೇರೆಯವರಿಗೂ ನೀಡಬೇಕಲ್ಲವೇಕೊಡದದ್ದನ್ನು ಪಡೆಯುವ ಮನಸು ಹೊಂದಿರುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ಎಲ್ಲರಿಗೂ ಅವರವರ ಅಭಿಮಾನ ಎಲ್ಲದಕ್ಕಿಂತಲೂ ಮಿಗಿಲು ನಿಜನಾ ಸ್ವಾಭಿಮಾನದ ಮಾತಾಡಿದರೇ ಮುನಿಯುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ಜಗದ ರೀತಿ, ರಿವಾಜುಗಳು ಅದೇಕೋ ವಾಣಿಗೆ ತಿಳಿಯಲಾಗಲೇ ಇಲ್ಲನನ್ನೀ ಮನಸ್ಥಿತಿ ನೋಡಿ ನಿಂದಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ… ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಪುಸ್ತಕ ಸಂಗಾತಿ

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ

ಪುರಸ್ಕಾರ ಸಂಗಾತಿ “ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ” ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ . ಗದಗ- 13 ಅಕ್ಷರ ಸಂಸ್ಕೃತಿ ಉಳಿಸಿ ಪುಸ್ತಕ ಸಂಸ್ಕೃತಿ ಬೆಳೆಸುತ್ತಿರವ ಸ್ಥಳೀಯ ನಿರಂತರ ಪ್ರಕಾಶನ ಸಂಸ್ಥೆ ಯುವ ಮತ್ತು ಅವಕಾಶ ವಂಚಿತ ಬರಹಗಾರರ ಕೃತಿಗಳನ್ನು  ಕಳೆದ 22ವರ್ಷ ಗಳಿಂದ ಪ್ರಕಟಿಸುತ್ತ ಬರುತ್ತಿದ್ದು, ಎಲೆ ಮರೆಯ ಕಾಯಿಯಂತಿರುವ ಸಾಹಿತಿಗಳ ಚೊಚ್ಚ ಲ ಕೃತಿಗಳನ್ನು ಪ್ರಕಟಿಸಿದ ಹಿರಿಮೆ ನಿರಂತರ ಪ್ರಕಾಶನಕ್ಕೆ ಸಲ್ಲುತ್ತದೆ. 2025 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಕಿ, ಅನುವಾದಕಿ, ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ಪ್ಪುತ್ತೂರ್ ಅವರ *”ಸಖಿ ಸೂಸಿದ ಸೌಗಂಧ”* ಕವನ ಸಂಕಲನಕ್ಕೆ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಪುರಸ್ಕಾರ ಲಭಿಸಿದೆ.25 ಸಾವಿರ ರೂಪಾಯಿ ನಗದು, ಸ್ಮರಣಿಕೆಒಳಗೊಂಡ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ಮಾಹೇಯಾನದ ಎರಡನೇ ವಾರದಲ್ಲಿ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಜಂಟಿ ಆಶ್ರಯದಲ್ಲಿ  ಕರ್ನಾಟಕ ರಾಜ್ಯ ಮಟ್ಟದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ವಿತರಿಸಲಾಗುವದೆಂದು ಕಾರ್ಯಕ್ರಮದ ಸಂಚಾಲಕ ಅಲೋನ್ಸ ಡಿ ಕೋಸ್ಟ್  ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪುರಸ್ಕಾರಕ್ಕೆ ಭಾಜನರಾದ ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ರಿಗೆ  ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಮತ್ತು ನಿರಂತರ ಪ್ರಕಾಶನದವತಿಯಿಂದ ನಿರಂತರ ಪುರಸ್ಕಾರ ಕೂಡ ಲಭಿಸಿದ್ದು ಮಾತ್ರವಲ್ಲ ನಿರಂತರ ಪ್ರಕಾಶನದಿಂದ ಪ್ರಕಟಣೆಯಾದ ನಾಡಿನ ವಿವಿಧ ಲೇಖಕರ ಕೃತಿಗಳಿಗೆ ಪ್ರತಿಷ್ಠಿತ ಪುರಸ್ಕಾರ ಲಭಿಸಿದ್ದು, ಪ್ರಕಾಶನ ಸಂಸ್ಥೆ ಗೆ ಬೀದರ್ ಜಿಲ್ಲೆಯ ಬೇಲೂರ ಗ್ರಾಮದ ಉರಿಲಿಂಗ ಪೆದ್ದಿ ಸಾಹಿತ್ಯ ಸಂಸ್ಕೃತಿ ಕ ವೇದಿಕೆಯ ಉರಿಲಿಂಗ ಪೆದ್ದಿ ಮತ್ತು ಕಾಳವ್ವೆ ಉತ್ಸವ ದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಉತ್ತಮ ಪ್ರಕಾಶನ ಪ್ರಶಸ್ತಿ ಲಭಿಸಿದ್ದನ್ನಿಲ್ಲಿ ಸ್ಮರಿಸಬಹುದು. ಹಿರಿಯ ಸಾಹಿತಿ ಎ. ಎಸ್. ಮಕಾನದಾರ. ವೇದಾಂತ ಕ್ರಿಯೆಷನ್, ಭವಾನಿ ಪ್ರಿಂಟರ್ಸ ನ ಮಾಲೀಕ ಮುದ್ರಕ, ಗಣೇಶ್ ಪವಾರ, ಸಾಹಿತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮೀರ್ ನಾಯಕ, ಸಮಾಜ ಸೇವಾ ಕಾರ್ಯಕರ್ತ ಕೆ. ಆರ್.ಸುಣಗಾರ ಮುಂತಾದವರು ಕವಯತ್ರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಎ.ಎಸ್.ಮಕಾನದಾರ್

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ Read Post »

ಇತರೆ

“ಹಿಂದೂ ಮುಸ್ಲಿಂ ಸೌಹಾರ್ದತೆಯ ತಾಣ ಶಿಶುವಿನಹಾಳ”ವಿಶೇಷ ಲೇಖನ, ಜಯಲಕ್ಷ್ಮಿ ಕೆ

ಸೌಹಾರ್ದ ಸಂಗಾತಿ ಜಯಲಕ್ಷ್ಮಿ ಕೆ “ಹಿಂದೂ ಮುಸ್ಲಿಂ ಸೌಹಾರ್ದತೆಯ ತಾಣ ಶಿಶುವಿನಹಾಳ”   “ಲೋಕದ ಕಾಳಜಿ ಮಾಡುತ್ತೀನಂತಿ.. ನಿಂಗ್ಯಾರು ಬ್ಯಾಡಂದೋರು ಮಾಡಪ್ಪ ಚಿಂತಿ .. ಆನೆ ಅಂಬಾರಿ ಏರಬೇಕಂತಿ.. ಮಣ್ಣಲ್ಲಿ ಇಳಿಯುದ ತಣ್ಣಗ ಮರತಿ…”   ಖ್ಯಾತ ಗಾಯಕ  ಲುಂಗಿ ರಾಕ್ ಸ್ಟಾರ್ ರಘು ದೀಕ್ಷಿತ್ ರವರ ಕಂಠಸಿರಿಯಿಂದ ಮೂಡಿಬಂದು ಜನಮನ ಗೆದ್ದ ಈ ತತ್ವ ಪದದ ರಚನೆಕಾರರ ಊರೇ ಶಿಶುವಿನಹಾಳ. “ಕನ್ನಡದ ಕಬೀರ” ಎಂದೇ ಖ್ಯಾತರಾದ ಸಂತ ಶಿಶುನಾಳ ಶರೀಫರ ಸನ್ನಿಧಿ ಇರುವುದು  ಹಾವೇರಿ ಜಿಲ್ಲೆಯ ಶಿಗ್ಗಾಂವಾ ತಾಲೂಕಿನ ಶಿಶುವಿನಹಾಳದಲ್ಲಿ. ಹಿಂದೂ ಮುಸ್ಲಿಂ ಭಾವೈಕ್ಯದ ಹರಿಕಾರರಾದ ಶರೀಫರ ನಾಡಿನಲ್ಲಿ ಒಂದೇ ಮಂದಿರದಲ್ಲಿ ಎರಡು ಧರ್ಮಿಯರು   ನಡೆಸುವ ಪೂಜಾ ಕೈಂಕರ್ಯ  ನೋಡುವುದೇ ಚೆನ್ನ! ಗುರು ಗೋವಿಂದ ಭಟ್ಟರ ಮೂರ್ತಿ ಒಂದೆಡೆ.. ಶಿಶುನಾಳ ಶರೀಫರ ಮೂರ್ತಿ ಇನ್ನೊಂದೆಡೆ.  ಈ ಎರಡು ಮೂರ್ತಿಗಳ ನಡುವೆ ಶ್ವೇತ ಶಿಲೆಯಲ್ಲಿ ಕೆತ್ತಿದ    ಆಶೀರ್ವಾದ ನೀಡುವ ಭಂಗಿಯಲ್ಲಿ  ನಿಂತ ನಂದಿ, ಶಿವಲಿಂಗ. ಒಂದೆಡೆ ಹಣ್ಣು ಕಾಯಿ ಸೇವೆ, ಇನ್ನೊಂದೆಡೆ ಸಕ್ಕರೆ ಪ್ರಸಾದ ವಿತರಣೆ! ಹಿಂದೂ ಮುಸ್ಲಿಂ ಭಾವೈಕ್ಯತೆಯ ಜೊತೆ ಜೊತೆಗೆ ಗುರು ಶಿಷ್ಯ ಸಂಬಂಧದ ಪಾವಿತ್ರ್ಯತೆಯನ್ನು ಸಾರುವ  ಅಪೂರ್ವ ಚಿತ್ರಣ ! ಎಂಥವರೂ ಭಾವಪರವಶರಾಗಬೇಕು  ಹುಲಗೂರ  ಶರೀಫರ ಈ ಸನ್ನಿಧಿಯಲ್ಲಿ. ವಿಜ್ಞಾನ ತಂತ್ರಜ್ಞಾನದಲ್ಲಿ ಪಳಗಿ  ಆಧುನಿಕತೆಯ ತುತ್ತ ತುದಿಯನ್ನು ತಲುಪಿದ್ದೇವೆ ಎನ್ನುವ ಭ್ರಮೆಯಲ್ಲಿರುವ, ಜಾತಿ ಮತ ಪಂಥಗಳು ಎಂಬ ತ್ರಿಶಂಕುವಿನಿಂದ ಹೊರಬರಲಾಗದ ಸಂಕುಚಿತ ಮನೋಭಾವದವರು ಈ ದಿವ್ಯ ಕ್ಷೇತ್ರಕ್ಕೆ ಹೋಗಲೇಬೇಕು. ಅಲ್ಲಿನ ಪೂಜಾ ವಿಧಿ ವಿಧಾನಗಳನ್ನು, ಅಲ್ಲಿನ ಜನರು  ಹೊಂದಿಕೊಂಡು ಬಾಳುವ  ಪರಿಯನ್ನು ಕಣ್ತುಂಬಿಕೊಳ್ಳಲೇಬೇಕು.  ಐದರಿಂದ ಆರು ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿರುವ ಪುಟ್ಟ ಊರದು.  “ದೇಹವೇ ಮಸೀದಿ,ದೇಹವೇ ದೇಗುಲ ” ಎಂದು ಸಾರಿದ, ಸಾರಿದಂತೆಯೇ ಬದುಕಿ ಬಾಳಿದ  ಸಂತ ಶರೀಫರ ನೆಲದಲ್ಲಿ ನಿಂತರೆ ಸಾಕು, ಕೋಮು ಸೌಹಾರ್ದತೆ ಸಾರುವ ಅವರ ತತ್ವಪದಗಳು, ಮಾನವ ಧರ್ಮ ಸಾರುವ  ಅವರ ಪದಗಳ  ಸಾರಗಳು, ಸ್ಮೃತಿ  ಪಟಲದಲ್ಲಿ ಹಾಗೇ ತೇಲಿ ಬರುತ್ತವೆ. ಲೌಕಿಕ ದೃಶ್ಯಗಳ ಮೂಲಕ  ಪಾರಮಾರ್ಥಿಕ ಸತ್ಯಗಳನ್ನು ಸರಳ ಸುಂದರ ಆಡು ಭಾಷೆಯಲ್ಲಿ  ನಿರೂಪಿಸಿರುವ  ಶರೀಫರು  ಮೊದಲ ಸೂಫಿ ಕವಿ. ಆಕರ್ಷಕ ತತ್ವಪದಗಳ ಮೂಲಕ ಜನಮಾನಸದಲ್ಲಿ ಉಳಿದ ಸಿದ್ಧಪುರುಷ ಶರೀಫ  ಇಸ್ಲಾಂ ಧರ್ಮದಲ್ಲಿ ಹುಟ್ಟಿ, ಹಿಂದೂ ಗುರುವನ್ನು ಪಡೆದು ಜಾತಿ ಮತಗಳ ಎಲ್ಲೆ ಮೀರಿ ಬೆಳೆದು ನಿಂತವರು. ” ಕೆಲಸವಿಲ್ಲದೆ ಅಲೆಯುವ ತಿರುಕ ” ಎಂದ ಹಿಂದೂ ಧರ್ಮೀಯರ ಮಾತಿಗಾಗಲಿ, ” ಕಾಫಿರ್ ” ಎಂದ ಮುಸಲ್ಮಾನರ ತೆಗಳಿಕೆಗಾಗಲಿ ಸಂತ ಶರೀಫರ ಮನ ವಿಚಲಿತಗೊಳ್ಳಲಿಲ್ಲ. ಏಕ ತಂತಿಯ ತಂಬೂರಿ ಹಿಡಿದು ತನ್ನ ತತ್ವಗಳನ್ನು ಪದಗಳ ಮೂಲಕ ಬೀದಿಬೀದಿಯಲ್ಲಿ ಸಾರಿದರು. ಯಾವ ಖಲೀಫನಿಂದಲೂ ನಿರ್ಮಿಸಲು ಸಾಧ್ಯವಾಗದ ಮತೀಯ ಸಾಮರಸ್ಯದ ದೇಗುಲದ ನಿರ್ಮಾಣಕ್ಕೆ ಕಾರಣಕರ್ತರಾದರು. ಗೂಢಾರ್ಥದಲ್ಲಿ, ರೂಪಕಗಳನ್ನು ಬಳಸಿ ಇವರು ರಚಿಸಿರುವಂತಹ  ಕೋಡಗನ ಕೋಳಿ ನುಂಗಿತ್ತಾ, ಸೋರುತಿಹುದು ಮನೆಯ ಮಾಳಿಗಿ, ಬಿದ್ದಿಯಬ್ಬೇ ಮುದುಕಿ , ಹಾವು ತುಳಿದೇನೇ ಮಾನಿನಿ, ಇತ್ಯಾದಿ ತತ್ವಪದಗಳು ಕನ್ನಡಿಗರ ನಾಲಿಗೆಯಲ್ಲಿ ಸದಾ ಹರಿದಾಡುವ ನೀತಿ ಸಂಹಿತೆಗಳೇ ಸರಿ.      ಸಮಯ ಸಂದರ್ಭಗಳಿಗೆ ಅನುಗುಣವಾಗಿ ಉಪಮೆಗಳನ್ನು ಬಳಸುತ್ತಾ ಪದ ರಚಿಸಿ ಹಾಡುತ್ತಿದ್ದ ಈ ಸಂತ  ಮತೀಯ ಸಾಮರಸ್ಯದ ಹರಿಕಾರನಾಗಿ ನಮ್ಮೆಲ್ಲರ ಮನದಲ್ಲಿ ನೆಲೆ ನಿಂತ ಧೀಮಂತ. ಶಿಶುನಾಳ ಶರೀಫರು ಮತ್ತು ಅವರ ಗುರು ಗೋವಿಂದ ಭಟ್ಟರ ಸಮಾಧಿಗೆ ಜಾತಿ ಮತಗಳ ಹಂಗಿಲ್ಲದೆ ಪ್ರತಿದಿನ ಪೂಜೆ ನಡೆಯುತ್ತಿದ್ದು ಅದೊಂದು ಪವಿತ್ರ ಯಾತ್ರಾ ಸ್ಥಳವಾಗಿದೆ.  ಶಿಶುನಾಳ ಶರೀಫರ ದೇಗುಲಕ್ಕೆ ಹೋಗುವವರು  ಅಲ್ಲಿಂದ ಸುಮಾರು 20 -30 ಕಿಲೋ ಮೀಟರ್ ಅಂತರದಲ್ಲಿರುವ 11 ನೇ ಶತಮಾನದ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಸಿದ್ಧೇಶ್ವರ ದೇವಾಲಯ, ಮುಕ್ತೇಶ್ವರ ದೇವಾಲಯಗಳನ್ನು ನೋಡಬಹುದು. ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಈ ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ತಾರಕೇಶ್ವರ ದೇಗುಲ,  ಹುಕ್ಕೇರಿ ಮಠ,  ಬಂಕಾಪುರದ ನಗರೇಶ್ವರ   ದೇಗುಲ ಬಂಕಾಪುರದ ಕೋಟೆ ಇತ್ಯಾದಿ ಪ್ರೇಕ್ಷಣೀಯ  ಸ್ಥಳಗಳಿವೆ. ಸಂತ ಕನಕದಾಸರ ಹುಟ್ಟೂರಾದ ಕಾಗಿನೆಲೆ ಇರುವುದೂ ಇಲ್ಲಿಯೇ.   ‘ ಏಲಕ್ಕಿ ಕಂಪಿನ ನಾಡು ‘ ಎಂದೇ ಹೆಸರಾದ ಈ ನಾಡಿನಲ್ಲಿ ಎತ್ತ ಸಂಚರಿಸಿದರೂ ರಸ್ತೆಯ ಇಕ್ಕೆಲಗಳಲ್ಲಿರುವ ಹೊಲಗಳಲ್ಲಿನ ಬ್ಯಾಡಗಿ ಕೆಂಪು ಮೆಣಸಿನಕಾಯಿ  ಮತ್ತು ಕುಸಬಿ  ಎಣ್ಣೆ ಬೀಜದ ಹೊಲಗಳು ಕಣ್ಮನ ಸೆಳೆಯುವ ಆಕರ್ಷಣೆಗಳೇ ಸರಿ . ಆಧ್ಯಾತ್ಮಿಕ ಐತಿಹಾಸಿಕ ಮಹತ್ವದಿಂದ ಕೂಡಿರುವ  ಕರ್ನಾಟಕದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಿದು. ಜಯಲಕ್ಷ್ಮಿ ಕೆ

“ಹಿಂದೂ ಮುಸ್ಲಿಂ ಸೌಹಾರ್ದತೆಯ ತಾಣ ಶಿಶುವಿನಹಾಳ”ವಿಶೇಷ ಲೇಖನ, ಜಯಲಕ್ಷ್ಮಿ ಕೆ Read Post »

You cannot copy content of this page

Scroll to Top