ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಸವಿತಾ ದೇಶಮುಖ ಅವರ ಕವಿತೆ “ಕಾಡಿನ ಕಣ್ಣೀರು”

ಕಾವ್ಯ ಸಂಗಾತಿ ಸವಿತಾ ದೇಶಮುಖ “ಕಾಡಿನ ಕಣ್ಣೀರು” ಕಾನನಳ ಕಂಗಾಲ ಕಂಗಳ ಕಣ್ಣೀರುಕಾಣದಾದರೆ ಇಹದ ಮನುಜ ಕುಲದವರುಆಧುನಿಕ ಭರ ಭರಾಟೆಯಲಿ ನಿಂದವರು!!೧!! ಕಾಡಮ್ಮಳ ಒಡಲು ಪಶು ಪಕ್ಷಿ ಪ್ರಾಣಿವನ್ಯಜೀವಿ ಮರ ಗಿಡ ಗುಡ್ಡ-ಹಳ್ಳ ಕೊಳ್ಳಅವಳ ಬೆಚ್ಚನೆಯ ಗರ್ಭವೇ ಅವರ ತಾಣ!!೨!! ಸಕಲ ಜೀವ ರಾಶಿಗಳಿಗೆ ಉಸಿರಾಗಿಅಮೃತ ನಿಯುತ ನಿಂದಿಹಳು ಹಸಿರಾಗಿಸಕಲ ಪ್ರಾಣಿ ಪ್ರಾಣ ಸಂಜೀವಿನಿಯಾಗಿ !!೩!! ಹಚ್ಚ ಹಸಿರು ಬೆಚ್ಚನೆ ಸೌಖ್ಯದ ಹೊದಿಕೆಹೊಚ್ಚಿ ,ಕೊಡುತಿಹಳು ಪೋಷಣೆ ಪುಷ್ಟಿಕೆಸರ್ವರನು ಬೆಳೆಸಿ ತನ್ನೊಳಗೆ ಹುದುಗಿಸಿ !!೪!! ಸಾವಿರಾರು ಗಿರಿ-ಪರ್ವತಗಳ ತೊಟ್ಟಜಲ-ಹಣ್ಣು ಹಂಪಲ ಆಸರೆ ಕೊಟ್ಟುತಾಯಿಯಾಗಿ ನಿಂದವಳ ಕಟ್ಟಿಹರು ಚಟ್ಟ!!೫!! ಇಂದು ಬಾಡಿ ಒಣಗಿ ನಸಿಸುತಿಹಳುಲೆಕ್ಕವಿರದ ಪಶುಗಳ ಮರಗಿಡಗಳುಉರುಳಿತಿವೆ ನಿರ್ದಾಕ್ಷಣೆ ಮತಿಗೇಡಿತನದಿ!!೬!! ಎನಿತು ಪೇಳುಲಿ..ವೇದನೆಲಿ ಮರಗುತಿವೆಕರುಣೆ ತೋರಿ ನಿಲ್ಲಿಸಿ ನಾಶ ಕನವರಿಸುತ್ತಿವೆನದಿ ಹಳ್ಳ ಕೊಳ್ಳ ಬತ್ತುತಿವೆ ಬರಡಾಗುತಿವೆ!!೭!! ಕಾಡಿನ ಕಂಗಳಂಚಿನಲ್ಲಿ ಕಣ್ಣಿರ ಹನಿಹನಿಸುರಿಯುತ್ತಿವೆ ಬರಗಾಲದ ನೊರೆಯಾಗಿಮನುಕುಲದ ವಿನಾಶದ ಕರೆ ಓಲೆಯಾಗಿ ‌‌!!೮!! ಇನ್ನಾದರೂ ಎಚ್ಚೆತ್ತಲೇಬೇಕು- ಸಂರಕ್ಷಿಸು,ಮನವಿಟ್ಟು ಒನವ ಸೀರಿಯ ಉಳಿಸಿಬೆಳಿಸುಸ್ವಾರ್ಥ ಬಿಟ್ಟು- ಮುಂದಿನ ಪೀಳಿಗೆ ನೆನಸು!!೯!! ತಾಂತ್ರಿಕತೆ ಮುಂದುವರೆವ ವ್ಯವಹಾರದಿಅನಿವಾರ್ಯತೆ ಒಡ್ಡಿದರೂ,ಮರ ಕೆಡವಿದರೆವಿನಾಶ ನಿಶ್ಚಿತತೆ ಪರಿಜ್ಞಾನದ ಅರಿವು..!!೧೦!! ಇಲ್ಲವೇ ನಮ್ಮಲಿ..!! ಬನ್ನಿ ಕೈಗೂಡಿಸೋಣಒಂದು ಮರ ಕೆಡವಿದರೆ ಎರಡು ಮರವ ನೆಟ್ಟಿ…, ನಮ್ಮ ಕೃತಜ್ಞತೆ ಸಲ್ಲಿಸೋಣ!!೧೧!! ಅವಳ ಉಸಿರಿಗೆ ನಾವು ಉಸಿರಾಗದ ಹೊರತು ನಮ್ಮ ಉಸಿರು ಉಳಿಯದು !!೧೨!! ತಿಳಿದು ಎಚ್ಚರದಿ ಮುನ್ನಡೆದರೆ ಮಾತ್ರ ಉಳಿವು ನಿಮ್ಮದು..ನಮ್ಮ ಪ್ರತಿಯೊಬ್ಬರದು ಸವಿತಾ ದೇಶಮುಖ

ಸವಿತಾ ದೇಶಮುಖ ಅವರ ಕವಿತೆ “ಕಾಡಿನ ಕಣ್ಣೀರು” Read Post »

ಕಾವ್ಯಯಾನ

ಎನ್.ಜಯಚಂದ್ರನ್ ಅವರ ಕವಿತೆ “ಅಂತರ”

ಕಾವ್ಯ ಸಂಗಾತಿ -ಎನ್.ಜಯಚಂದ್ರನ್ “ಅಂತರ” ಒಂದೇ ಊರು, ಒಂದೇ ಗಾಳಿ,ಆದರೂ ಮನಸುಗಳು ದೂರದ ದ್ವೀಪಗಳು. ಮುಖದಲ್ಲಿ ನಗುಗಳ ಹೂವಿದ್ದರೂ,ಒಳಗೆ ನೋವಿನ ಮಳೆ ಸುರಿಯುತ್ತದೆ. ಕೈಗಳು ಕೈ ಹಿಡಿಯುವ ಕಾಲದಲ್ಲಿ,ಹೃದಯಗಳು ಏಕೆ ದೂರವಾಗಿವೆ? ಮಾತುಗಳು ಸಾವಿರ ಹರಿದರೂ,ಅರ್ಥಗಳು ಮಧ್ಯೆ ಕಣ್ಮರೆಯಾಗಿವೆ. ಗೋಡೆಗಳು ಮನೆಗಳಲ್ಲಿ ಮಾತ್ರವಲ್ಲ,ಮನಸ್ಸಿನೊಳಗೂ ಎತ್ತರವಾಗಿವೆ. ಸ್ವಾರ್ಥದ ನೆರಳು ಬೆಳೆದಂತೆ,ಸಂಬಂಧಗಳ ಬೆಳಕು ಮಂಕಾಗಿದೆ. ಒಬ್ಬರ ನೋವು ಮತ್ತೊಬ್ಬರಿಗೆ,ಕೇವಲ ಸುದ್ದಿಯ ಸಾಲಾಗುತ್ತಿದೆ. ಪ್ರೀತಿಯ ನದಿ ಒಣಗಿದ ಜಾಗದಲ್ಲಿ,ಅಹಂಕಾರದ ಮರಳು ಬೀಸುತ್ತಿದೆ. ಆದರೂ ಎಲ್ಲೋ ಒಂದು ಮೂಲೆದಲ್ಲಿ,ಮಾನವೀಯತೆ ಇನ್ನೂ ಉಸಿರಾಡುತ್ತಿದೆ. ಮನಸು ಮನಸಿಗೆ ಸೇರುವ ದಿನದಲ್ಲಿ,ಈ ಭೀಕರ ಅಂತರ ಕರಗಿಹೋಗುತ್ತದೆ.  ಎನ್.ಜಯಚಂದ್ರನ್ 

ಎನ್.ಜಯಚಂದ್ರನ್ ಅವರ ಕವಿತೆ “ಅಂತರ” Read Post »

You cannot copy content of this page

Scroll to Top