ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಶಿಶು ಕಾವ್ಯ ಕವಿ ರಾಜೇಂದ್ರ ಪಾಟೀಲ್” ಗೊರೂರು ಅನಂತರಾಜು

ವ್ಯಕ್ತಿ ಸಂಗಾತಿ ಗೊರೂರು ಅನಂತರಾಜು “ಶಿಶು ಕಾವ್ಯ ಕವಿ ರಾಜೇಂದ್ರ ಪಾಟೀಲ್”   ಕವಿ ರಾಜೇಂದ್ರ ಪಾಟೀಲ್ ಅವರು ಉಮಾತನಯ ಕಾವ್ಯನಾಮದಲ್ಲಿ ಕವಿತೆ ರಚಿಸಿಕೊಂಡು ಬಂದವರು.ಇವರು 10.07.1965ರಂದು ಮಹಾರಾಷ್ಟ್ರ ರಾಜ್ಯದ ಸೋಲಾಪುರದಲ್ಲಿ ಜನಿಸಿದರು.ಮೂಲಸ್ಥಳ ಮಿರಗಿ, ಇಂಡಿ ತಾಲೂಕು, ವಿಜಯಪುರ ಜಿಲ್ಲೆ.ಇವರ ತಾಯಿ ಶ್ರೀಮತಿ ಉಮಾದೇವಿ,ತಂದೆ  ಶ್ರೀ ಶಂಕರರಾವ್. ಇವರಪ್ರಾಥಮಿಕ ಶಿಕ್ಷಣ ನಡೆದಿದ್ದು ಮಾಶಾಳ, ಕಮಲಾಪುರ, ರೇವೂರದಲ್ಲಿ.  ಪ್ರೌಢಶಿಕ್ಷಣ   ಅಫಜಲ್ ಪುರ‌‌ದಲ್ಲಿ.ಕಾಲೇಜು ಮತ್ತು ಪದವಿ( ಬಿಎ) ಶಿಕ್ಷಣ ಕಲಬುರಗಿಯಲ್ಲಿ.ತಾಂತ್ರಿಕ ಶಿಕ್ಷಣ ವರ್ಕ್ ಶಾಪ್ ಟೆಕ್ನಾಲಜಿ ಬಿಇಎಂಎಲ್, ಕೆಜಿಎಫ್‌ ನಲ್ಲಿ. ಪತ್ರಕರ್ತರಾಗಿ  ಗ್ರೀನೋಬಲ್ಸ್, ಚಿಂತಕ ( ಕಲಬುರಗಿ).1987 ರಿಂದ 1990ವರೆಗೆ,ಕನ್ನಡಮ್ಮ, ನಾಡೋಜ, ಹಸಿರುಕ್ರಾಂತಿ ( ಬೆಳಗಾವಿ)1990 ರಿಂದ 1998 ರವರೆಗೆ.ಸಂಯುಕ್ತ ಕರ್ನಾಟಕ  1998 ರಿಂದ 2022 ರವರೆಗೆ ಸೇರಿದಂತೆ ಪತ್ರಕರ್ತರಾಗಿ ಇವರ ಸೇವಾವಧಿ 33 ವರ್ಷ‌.ಸುಧಾ, ತರಂಗ, ವಾರಪತ್ರಿಕೆ, ರಾಗಸಂಗಮ, ಮಂಗಳ, ಮಯೂರ, ಮಲ್ಲಿಗೆ, ಪ್ರಜಾವಾಣಿ, ಪ್ರಜಾಮತ, ಉತ್ಥಾನ, ಗ್ರಿನೋಬಲ್ಸ್, ಚಿಂತಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ, ಬುಕ್ ಬ್ರಹ್ಮಾ ಹೀಗೆ ನಾಡಿನ ನೂರಾರು ಪತ್ರಿಕೆಗಳಲ್ಲಿ ಇವರ ಕವನ ಕತೆ, ಲೇಖನ, ವಿಮರ್ಶೆ,  ಅಂಕಣಗಳು ಪ್ರಕಟವಾಗಿವೆ.  ಹಲವಾರು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಮಕ್ಕಳ ಸಾಹಿತ್ಯ  ಕವನ ಸಂಕಲನಗಳಲ್ಲಿ ಇವರ ಕವಿತೆಗಳು ಪ್ರಕಟಗೊಂಡಿವೆ. ಕಲಬುರಗಿಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ, ಡಾ. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದಾರೆ. ಧಾರವಾಡದಲ್ಲಿ ಬಾಲವಿಕಾಸ ಅಕಾಡೆಮಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಶಿಬಿರದಲ್ಲಿ, ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ದಾವಣಗೆರೆ, ಕುಷ್ಟಗಿ, ಕಲಬುರಗಿ, ವಿಜಯಪುರ, ಬೆಳಗಾವಿ, ಬೆಂಗಳೂರು, ಕೊಪ್ಪಳ, ಬದಾಮಿ ಭಾಗವಹಿಸಿದ್ದಾರೆ.  50 ಕ್ಕೂ ಹೆಚ್ಚಿನ  ಕವನ ಸಂಕಲನಗಳಿಗೆ ಮುನ್ನುಡಿ,ಳ ಬರೆದಿರುವರು. ಇವರ ಜೇನ್ಗೊಡ, ನೆನಪ ರಂಗೋಲಿ ಕವನ ಸಂಕಲನ, ಕಥಾಗುಚ್ಛ ಕಥಾ ಸಂಕಲನ ಪ್ರಕಟಗೊಂಡಿವೆ. ಕರ್ನಾಟಕ ಸರಕಾರದ ಪಠ್ಯಪುಸ್ತಕ ನಿರ್ದೇಶನಾಲಯವು 1 ನೇ ತರಗತಿಗೆ ಅಮ್ಮ ಕವನವನ್ನು, 2ನೇ  ಮತ್ತು 5 ನೇ ತರಗತಿಗೆ ತಂಗಿಯ ಪತ್ರ ಕವನವನ್ನು ಪಠ್ಯದಲ್ಲಿ ಅಳವಡಿಸಿದೆ. 1989ರ ನವೆಂಬರ್ ನಲ್ಲಿ ನೆಹರು ಜನ್ಮ ಶತಮಾನೋತ್ಸವ ಪ್ರಯುಕ್ತ ಇವರ ಕವಿತೆ ಶಾಂತಿದೂತ  ಆಕಾಶವಾಣಿ ಕಲಬುರಗಿ, ಧಾರವಾಡ, ಬೆಂಗಳೂರು, ಮೈಸೂರು, ಮಂಗಳೂರು  ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಿದೆ. ಕರ್ನಾಟಕ ಸಾಹಿತ್ಯ ಕಲಾ ವೇದಿಕೆ ರಾಜ್ಯ ಸಂಚಾಲಕರಾಗಿ ಮೂರು ವರ್ಷ ಸಾಂಸ್ಕೃತಿಕ ಸೇವೆ. ಭಾವ ಸಂಗಮ ಸಾಂಸ್ಕೃತಿಕ ವೇದಿಕೆಯ ರಾಜ್ಯ ಸಂಚಾಲಕರಾಗಿ 2015 ರಿಂದ ಇಲ್ಲಿಯವರೆಗೆ 11 ಸಮ್ಮೇಳನಗಳನ್ನು ಆಯೋಜಿಸಿದ್ದಾರೆ. ಪ್ರಸ್ತುತ ಉಮಾಶಂಕರ ಪ್ರತಿಷ್ಠಾನ ಕಾರ್ಯಾಧ್ಯಕ್ಷರಾಗಿದ್ದಾರೆ. ಇವರಿಗೆರಾಷ್ಟ್ರೀಯ ಬಸವ ವಿಭೂಷಣ, ಬಸವನಬಾಗೇವಾಡಿ, ಅಸ್ಮಿತಾ ಫೌಂಡೇಶನ್ ಹಿರಿಯ ನಾಗರಿಕರ ಪ್ರಶಸ್ತಿ, ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ 29ನೇ ವಾರ್ಡ್, ಮೂರನೇ ಕ್ರಾಸ್ಹಾಸನ – 574201

“ಶಿಶು ಕಾವ್ಯ ಕವಿ ರಾಜೇಂದ್ರ ಪಾಟೀಲ್” ಗೊರೂರು ಅನಂತರಾಜು Read Post »

ಕಾವ್ಯಯಾನ

ಟಿ.ಪಿ. ಉಮೇಶ್‌ ಚಿತ್ರದುರ್ಗ “ಒಮ್ಮೆ ದೀಪ ಹಚ್ಚಿದ ಕೈಗಳು”

ಕಾವ್ಯ ಸಂಗಾತಿ ಟಿ.ಪಿ. ಉಮೇಶ್‌ ಚಿತ್ರದುರ್ಗ “ಒಮ್ಮೆ ದೀಪ ಹಚ್ಚಿದ ಕೈಗಳು” ಅಗೋ ಆ ಆಕಾಶದಲ್ಲಿಮೋಡಗಳು ಚಲಿಸುವುದು ನಿಲ್ಲುವುದಿಲ್ಲ!ಯಾರ ಕಣ್ಣೀರಿದ್ದರು ಇಲ್ಲದಿದ್ದರುಮಳೆಯು ಬರುವುದು ನಿಲ್ಲುವುದಿಲ್ಲ! ಸ್ಮೃತಿಯ ಬಾಗಿಲ ಮೇಲೆಒಂದಾದ ಮೇಲೊಂದು ಋತುಗಳ ಬೆರಳುಗಳುಮುಚ್ಚಿದ ಗುರುತು ಬಿಡುವುದುನಿಲ್ಲುವುದಿಲ್ಲ! ನನಗೆ ಗೊತ್ತು ಈ ಕಾಲದ ಜಾತ್ರೆಯೊಳಗೆಹೃದಯ ತಪ್ಪಿಹೋಗುವುದು ನಿಲ್ಲುವುದಿಲ್ಲ!ಕೈಚೆಲ್ಲಿದ ಕ್ಷಣಗಳಿಗೆ ಇಲ್ಲಿಮತ್ತೆ ಹೆಸರು ಕೊಡಲಾಗುವುದಿಲ್ಲ! ಇಷ್ಟಾದರೂ ಹಾರಿ ಹೋದ ಹಕ್ಕಿಗಳರೆಕ್ಕೆಗಳ ಸದ್ದುನನ್ನ ಅಂತರಂಗದೊಳಗೆ ಉಳಿಯುವುದಿಲ್ಲ!ಅವು ಗೂಡಿನಲ್ಲಿ ಬಿಟ್ಟುಹೋದಬೆಚ್ಚಗಿನ ನಿಶ್ಶಬ್ದ ನನ್ನದಾಗುವುದಿಲ್ಲ!ಒಮ್ಮೆ ದೀಪ ಹಚ್ಚಿದ ಕೈಗಳುಮತ್ತೆ ಈ ಕತ್ತಲಿನಲ್ಲಿನನಗಾಗಿ ಬೆಳಕು ಹಂಚುವುದಿಲ್ಲ! ಈಗ ನೋಡಿ ಈ ಒಣಗಿದ ನದಿಯ ತಳದಲ್ಲಿಚಿಕ್ಕ ಜಲಧಾರೆಮೌನವಾಗಿ ಹುಟ್ಟಿ ಜಿನುಗುವುದುನಿಲ್ಲುವುದಿಲ್ಲ!ನಾ ಕಂಡರೂ ಕಾಣದಿದ್ದರೂನದಿ ಸಮುದ್ರದ ದಾರಿ ಬಿಟ್ಟು ಬರುವುದಿಲ್ಲ! ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ. ಉಮೇಶ್‌ ಚಿತ್ರದುರ್ಗ “ಒಮ್ಮೆ ದೀಪ ಹಚ್ಚಿದ ಕೈಗಳು” Read Post »

You cannot copy content of this page

Scroll to Top