ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

“ಅಫ್ಟ್ರಾಲ್ ವಾಚ್ಮನ್” ತೆಲುಗು ಮೂಲ ಉಪ್ಪುಲ ಲಿಂಗಯ್ಯ ಕನ್ನಡಕ್ಕೆ ಧನಪಾಲ ನಾಗರಾಜಪ್ಪ

ಅನುವಾದ ಸಂಗಾತಿ ಅಫ್ಟ್ರಾಲ್ ವಾಚ್ಮನ್ ತೆಲುಗು : ಉಪ್ಪುಲ ಲಿಂಗಯ್ಯಕನ್ನಡಕ್ಕೆ : ಧನಪಾಲ ನಾಗರಾಜಪ್ಪಅ vಕೊರಿಯರ್ ಪಾರ್ಸಲ್ಮೇಲಕ್ಕೆ ತಂದುಕೊಡುಟಿಫನ್ ತಂದುಕೊಡುದಿನಸಿ ಸರಕುಗಳನ್ನು ತಂದುಕೊಡುಕನ್ನಡಕ ಮೇಲಿಟ್ಟು ಮರೆತಿರುವೆತೆಗೆದುಕೊಂಡು ಬಾಬಸ್ ನಿಲ್ದಾಣದ ಬಳಿ ಬಿಟ್ಟಿರುವಗಾಡಿಯನ್ನು ಹಾಕಿಕೊಂಡು ಬಾಇದನ್ನು ಒರೆಸು, ಅಲ್ಲಿಗೆ ಹೋಗು…ಒಮ್ಮೊಮ್ಮೆ ಒಂದೊಂದು ಕೆಲಸಒಮ್ಮೊಮ್ಮೆ ಒಂದೊಂದು ಗದರಿಕೆಪ್ರೀತಿಯಿಂದ ಹೇಳುವವರು ಕೆಲವರುಒದರುವಂತೆ ಹೇಳುವವರು ಕೆಲವರು ಡ್ಯೂಟಿ ಅಂತಾರೆಆದರೆ…ಇವೆಲ್ಲಾ ಡ್ಯೂಟಿಯನ್ನು ಮೀರಿದ ಕೆಲಸಗಳುಮಾಡಬೇಕನಿಸುತ್ತದೆಆಗಾಗ ಮಾಡಬಾರದನಿಸುತ್ತದೆಮೈಕೈ ನುಜ್ಜುಗುಜ್ಜಾಗುತ್ತದೆಜೀವ ದಣಿದು ಹೋಗುತ್ತದೆಹೇಳಿದ ರೀತಿಗೆ ಚುರುಕ್ ಅನ್ನುತ್ತದೆ“ಈಗ ಆಗುವುದಿಲ್ಲ ಸರ್ಗೇಟಿನ ಬಳಿ ಯಾರೂ ಇಲ್ಲ ಸರ್”ತಡಬಡಿಸುತ್ತ ನಾನು ಹೇಳಿದೊಡನೆಅವರು ಹೇಳುವರು…“ಅಫ್ಟ್ರಾಲ್ ವಾಚ್ಮನ್ನಮ್ಮ ಮಾತಿಗೇ ಎದುರು ಮಾತಾಡುವೆಯಾನಿನ್ನ ಕೆಲಸ ಕಿತ್ತುಹಾಕುವೆ” ಎಷ್ಟು ಸಲ ಎಷ್ಟೆಲ್ಲಾ ಮಾಡಿದೆನಲ್ಲಎಷ್ಟೋ ಸಲ ನಿದ್ದೆಯನ್ನೇ ತೊರೆದನಲ್ಲಇದೇನಿದು…ಒಂದು ಸಲ ಆಗುವುದಿಲ್ಲ ಎಂದರೆಅಫ್ಟ್ರಾಲ್ ವಾಚ್ಮನ್ ಆಗಿಬಿಡುವೆಎಲ್ಲರನ್ನೂ ಕಾಯುವ ನಾನು ಅಫ್ಟ್ರಾಲ್ ವಾಚ್ಮನ್ ಹೇಗಾಗುವೆ! ತೆಲುಗು : ಉಪ್ಪುಲ ಲಿಂಗಯ್ಯಕನ್ನಡಕ್ಕೆ : ಧನಪಾಲ ನಾಗರಾಜಪ್ಪ

“ಅಫ್ಟ್ರಾಲ್ ವಾಚ್ಮನ್” ತೆಲುಗು ಮೂಲ ಉಪ್ಪುಲ ಲಿಂಗಯ್ಯ ಕನ್ನಡಕ್ಕೆ ಧನಪಾಲ ನಾಗರಾಜಪ್ಪ Read Post »

ನಿಮ್ಮೊಂದಿಗೆ

ಗಂಗಾ ಚಕ್ರಸಾಲಿ ಅವರ ಕವಿತೆ “ಒಲವ ಗೀತೆ”

ಕಾವ್ಯ ಸಂಗಾತಿ ಗಂಗಾ ಚಕ್ರಸಾಲಿ “ಒಲವ ಗೀತೆ”. ಅವರ ನೆನಪ ಜೋಕಾಲಿಯಲ್ಲಿಒಲವ ಗೀತೆ ಆಗಾಗ ಸರ್ರನೇ ಜೀಕುತ್ತದೆ| ಒಮ್ಮೆಲೇ….ಹೂ ತೋಟವ ಸುತ್ತಿ ಬಂದಗಾಳಿಯ ಘಮದಿ ಮಿಂದಪಲ್ಲವಿಯ ಸಾಲುಗಳುಮನವನು ಚಿಟ್ಟೆಯಾಗಿಸಿಬಿಡುತ್ತವೆ| ಆದರೆ….ಚರಣಗಳು ನೀರವ ಧ್ಯಾನದಿ ಬಂಧಿಏಕೆ? ಹೇಗೆ? ಪ್ರಶ್ನೆಗಳುಉತ್ತರಕ್ಕಾಗಿ ಕಾಯ್ದರೂಇಬ್ಬರ ಅಹಮ್ಮಿನ ಕೋಟೆಯನ್ನುಬೇಧಿಸಲಾರವು| ಬದುಕಿನ ಎಲ್ಲ ಹಾಡುಗಳಲ್ಲಿಚರಣಗಳಿರಬೇಕೆ?ಆದಿ, ಅಂತ್ಯಾಕ್ಷರ, ಮುಕ್ತಾಯದ ಸಾಲೊಂದಿರಬೇಕೆ?ಹೂಂ..ಗುಡುತ್ತದೆ ಕವಿಹೃದಯ| ವಿಚಿತ್ರವೆಂದರೆ…ಬಹುತೇಕ ಒಲವಿನ ಹಾಡುಪಲ್ಲವಿಗಷ್ಟೇ ಸೀಮಿತವಾದಾಗಲೂಜೀವನದುದ್ದಕ್ಕೂ ಮನದಿಜೀಕುತ್ತಲೇ ಇರುತ್ತದೆಬೇಸರಿಕೆಯ ಪೋಷಾಕು ತೊಡದೇ… ಗಂಗಾ ಚಕ್ರಸಾಲಿ

ಗಂಗಾ ಚಕ್ರಸಾಲಿ ಅವರ ಕವಿತೆ “ಒಲವ ಗೀತೆ” Read Post »

ಕಾವ್ಯಯಾನ

ನಿರಂಜನ ಕೇಶವ ನಾಯಕ ಅವರ ಕವಿತೆ “ಇಂಗದ ಬಾಯಾರಿಕೆ”

ಕಾವ್ಯ ಸಂಗಾತಿ ನಿರಂಜನ ಕೇಶವ ನಾಯಕ “ಇಂಗದ ಬಾಯಾರಿಕೆ” ​ಬಿಸಿಲ ಶಲಾಕೆಇಳಿದು ಚುಚ್ಚಿದೆಹೃದಯದಟ್ಟದ ಆಳಕೆ;ಬತ್ತಿಸಿ ಪ್ರಾಣದ ಒರತೆಯಉಳಿದಿದೆ— ಇಂಗದ ಬಾಯಾರಿಕೆ. ​ಅರಿಯದ ನೋವುಅಸ್ಥಿ-ಮಾಂಸವ ಕೊರೆಯಲು;ಬೆವರಿನ ನದಿಯಲಿಹುಡುಕುವ ಹಾದಿಯೇಬಸವಳಿದ ಮನಕೆ ಕಿರು ಆಸರೆ. ​ಹೆಜ್ಜೆಗಳು ಭಾರವಾಗಿ,ಬೆಳಕೇ ಬೆಂಕಿಯ ಮಳೆಯಾಗಿ;ದಿಗಂತದಲಿ ನಿಂತುಜೀವ ಹಿಂಡುವಾಗ—ಸೋಲೊಪ್ಪದೆ ವಿಧಿಯಿಲ್ಲವೇ? ನಿರಂಜನ ಕೇಶವ ನಾಯಕ

ನಿರಂಜನ ಕೇಶವ ನಾಯಕ ಅವರ ಕವಿತೆ “ಇಂಗದ ಬಾಯಾರಿಕೆ” Read Post »

You cannot copy content of this page

Scroll to Top