ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಅಮೂರ್ತ ಕಲೆಯ ಕಲಾವಿದ ಬಿ.ಎಸ್.ದೇಸಾಯಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ”ಗೊರೂರು ಅನಂತರಾಜು

ಕಲಾ ಸಂಗಾತಿ ಗೊರೂರು ಅನಂತರಾಜು “ಅಮೂರ್ತ ಕಲೆಯ ಕಲಾವಿದ ಬಿ.ಎಸ್.ದೇಸಾಯಿ ಅವರಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ” ಹಾಸನದ ನಿವೃತ್ತ ಚಿತ್ರಕಲಾ ಶಿಕ್ಷಕರು ಕಲಾವಿದರು  ಬಿ.ಎಸ್.ದೇಸಾಯಿ ಅವರ ಕಲಾಸಾಧನೆಗೆ ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿಯ ೨೦೨೫-೨೬ನೇ ಸಾಲಿನ ಗೌರವ ಪ್ರಶಸ್ತಿ ಒಲಿದು ಬಂದಿದೆ. ಬಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ದಿನಾಂಕ ೨-೧೦-೧೯೬೫ ರಂದು ಜನಿಸಿದ ಇವರು ಹಾಸನದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ಇಲ್ಲಿಯೇ ನೆಲೆಸಿದ್ದಾರೆ. ನಾನು ಹಾಸನಕ್ಕೆ ಬಂದು ೩೬ ವರ್ಷಗಳಾದವು ಗುರುವೇ (ಗೊರೂರು ಅನಂತರಾಜು) ಈ ಪರಿಸರವು ನನಗೆ ಪ್ರಿಯವಾಗಿ ಒಗ್ಗಿಹೋಯಿತು. ಬಂದ ಹೊಸದರಲ್ಲಿ ಊರ ಕಡೆಗೆ ವರ್ಗ ಮಾಡಿಸಿಕೊಳ್ಳುವ ಆಲೋಚನೆ ಇತ್ತಾದರೂ ಕಾಲಕ್ರಮೇಣ ಇಲ್ಲಿಯ ಕಲಾವಿದರು, ಸಾಹಿತಿಗಳ ಒಡನಾಟದಲ್ಲಿ ಇಲ್ಲಿಯೇ ಮನೆ ಮಾಡಿಕೊಂಡೆ ಎಂದು ಮನದುಂಬಿ ಹೇಳಿದರು. ಇವರು ಚಿತ್ರಕಲಾ ವ್ಯಾಸಂಗವು   ಪ್ರಿ-ಯೂನಿವರ್ಸಿಟಿ ಕೋರ್ಸ್ (ವಾಣಿಜ್ಯ ಕಲೆ), ಡ್ರಾಯಿಂಗ್ ಮತ್ತು ಪೇಂಟಿAಗ್‌ನಲ್ಲಿ ಡಿಪ್ಲೊಮಾ, ಡಿಪ್ಲೊಮಾ ಇನ್ ಆರ್ಟ್ ಮಾಸ್ಟರ್, ಮಾಸ್ಟರ್ ಆಫ್ ವಿಷುಯಲ್ ಆರ್ಟ್  ಆದರ್ಶ ಫೈನ್ ಆರ್ಟ್ ಕಾಲೇಜ್ ಇಂಡಿ ಬಿಜಾಪುರ ಜಿಲ್ಲೆ, ಅಮೂರ್ತ ಕಲೆಯ ಕಲಾವಿದರು:ಅಮೂರ್ತತೆಯ ಬೆಳವಣಿಗೆಯ ಹಿಂದಿನ ಪ್ರೇರಣೆಗಳಲ್ಲಿ ಒಂದು ವಿಷಯಗಳ ಪ್ರಪಂಚದಿAದ ದೂರವಿರಲು ಅನೇಕ ಕಲಾವಿದರ ಬಲವಾದ ಬಯಕೆಯಾಗಿದೆ. ಲೌಕಿಕ ಭೌತವಾದದ ಉಲ್ಲೇಖವನ್ನು ಬಹಿಷ್ಕರಿಸುವುದು ಅಮೂರ್ತ ಕಲಾವಿದರ ಕೇಂದ್ರ ಗುರಿಯಾಗಿದೆ. ಇದು ಔಪಚಾರಿಕ ಪರಿಶುದ್ಧತೆಯ ಹುಡುಕಾಟಕ್ಕೆ ಮತ್ತು ಅತಿಕ್ರಮಣಕ್ಕಾಗಿ ನಿರಂತರವಾದ ಮಾನವ ಅನ್ವೇಷಣೆಯನ್ನು ವ್ಯಕ್ತಪಡಿಸುವ ಮಾರ್ಗಗಳ ಪರಿಗಣನೆಗೆ ಎರಡಕ್ಕೂ ಕಾರಣವಾಯಿತು. ದೇಸಾಯಿಯವರ ಕಲೆಯ ಪಯಣವೂ ಅದೇ ಹಾದಿಯಲ್ಲಿದೆ. ಯೋಗ ಮತ್ತು ಧ್ಯಾನದ ಸ್ವಾಭಾವಿಕತೆಯ ವರ್ಷಾಚರಣೆಯು ಅವರ ಹೊಸ ಅನ್ವೇಷಣೆಗೆ ಸರಿಹೊಂದುವAತೆ ಆಧ್ಯಾತ್ಮಿಕ ಭಾಷೆಯನ್ನು ಹುಡುಕುವಂತೆ ಮಾಡುತ್ತದೆ. ಸುತ್ತಮುತ್ತಲಿನ ಜೀವನದಲ್ಲಿ ಪರಮಾರ್ಥದ ಅನ್ವೇಷಣೆಯಲ್ಲಿ ಅವರು ತನ್ನದೇ ಆದ ರೀತಿಯಲ್ಲಿ ಅದರ ಸಾರವನ್ನು ಅಮೂರ್ತಗೊಳಿಸುತ್ತಾರೆ. ಆಕಸ್ಮಿಕ ಟೆಕಶ್ಚರ್‌ಗಳಿಂದ ಸ್ಫೂರ್ತಿ ಪಡೆದ ಅವರು ಹೊಸ ದೃಶ್ಯ ಪ್ರಪಂಚವನ್ನು ರಚಿಸಲು ಕ್ಯಾನ್ವಾಸ್‌ನಲ್ಲಿ ತೇವವಾದ ಎಣ್ಣೆ ಬಣ್ಣಗಳ ಕೆಲವು ಭಾಗವನ್ನು ತೆಗೆದುಹಾಕುವ ಕೆರೆದು ಅಳಿಸುವ ವಿಧಾನವನ್ನು ರೂಪಿಸಿದರು. ಅಂತಿಮ ಫಲಿತಾಂಶವೆAದರೆ ಐಷಾರಾಮಿ ಬಣ್ಣದ ಆರ್ಕೆಸ್ಟೆçÃಶನ್ ಮತ್ತು ಅದ್ದೂರಿ ಸಂಯೋಜನೆಗಳು. ಕೆಲವೊಮ್ಮೆ ಅಧೀನಗೊಂಡ ತೇಲುವ ರೂಪಗಳು ಕೆಲವು ಗುರುತಿಸಬಹುದಾದ ರೂಪಗಳ ಉಪಸ್ಥಿತಿಯನ್ನು ಸೂಚಿಸುತ್ತವೆಯಾದರೂ ಕಲಾವಿದನ ಉದ್ದೇಶವು ಎದ್ದುಕಾಣುವ ಮಾನಸಿಕ ಭಾವನೆಗಳನ್ನು ಹೆಚ್ಚಿಸುವುದು. ಅವರ ವರ್ಣಚಿತ್ರಗಳು ಈ ಬಣ್ಣ ಮತ್ತು ವಿನ್ಯಾಸದ ಕಾರಣದಿಂದಾಗಿ ಮತ್ತು ಸರಳವಾದ ಸುಂಟರಗಾಳಿ ರೂಪಗಳ ಮೇಲೆ ಕೇಂದ್ರೀಕರಿಸುವ ಮೂಲಕ ಪ್ರೇಕ್ಷಕರನ್ನು ಹೀರಿಕೊಳ್ಳುತ್ತವೆ. ಅವರ ಪ್ರತಿಯೊಂದು ಕೃತಿಯು ಭವ್ಯವಾದ ದೃಶ್ಯ ಕಾವ್ಯದ ಭಾವನೆಗಳನ್ನು ಉಂಟುಮಾಡುತ್ತದೆ.  ಸಿ.ಎಸ್.ಕೃಷ್ಣಶೆಟ್ಟಿ ವಿಮರ್ಶಕರು  ಅಭಿಪ್ರಾಯದಂತೆ   ದೇಸಾಯಿಯವರ ಕೆಲಸವನ್ನು ಅವರ ಆತ್ಮದ ಭೂದೃಶ್ಯ ಎಂದು ಕರೆಯಬಹುದು. ಆದರೆ ಇದು ಕಲಾವಿದ ಭಾವುಕ ಎಂದು ಸೂಚಿಸುವುದಿಲ್ಲ. ಅವರ ವರ್ಣಚಿತ್ರಗಳು ಭಾರತದ ಆಳವಾದ ವ್ಯಕ್ತಿತ್ವದ ಖಚಿತವಾದ ಪ್ರಭಾವವನ್ನು ಹೊಂದಿವೆ. ಅವರ ಬಣ್ಣಗಳ ವ್ಯಾಪ್ತಿಯು ಎದ್ದುಕಾಣುವ ಆದರೆ ಸಮಚಿತ್ತದಿಂದ ಅವರು ಸಾಧಿಸಿದ ಒಂದು ನಿರ್ದಿಷ್ಟ ಪರಿಶುದ್ಧತೆಯನ್ನು ವ್ಯಕ್ತಪಡಿಸುತ್ತಾರೆ. ಅವರ ಕುಂಚದ ಹೊಡೆತಗಳು ಅತೀಂದ್ರಿಯ ತೀವ್ರತೆಯನ್ನು ಎತ್ತಿ ತೋರಿಸುತ್ತವೆ. ಅವರ ಆಕೃತಿಗಳು ಅಮೂರ್ತವಲ್ಲ ಆದರೆ ಸಾಮರಸ್ಯ. ಇದು ಸಂಯೋಜನೆಗಳು  ನಿಗರ್ವಿಯಾಗಿ ಅಸ್ತಿತ್ವದಲ್ಲಿರಲು ಶಕ್ತಗೊಳಿಸುತ್ತದೆ. ಸಂಯೋಜನೆಗಳ ಮನೋಧರ್ಮವು ಒಟ್ಟಾರೆ ಮನಸ್ಥಿತಿಗೆ ಪೂರಕವಾಗಿದೆ, ಮಾನಸಿಕ ಅಥವಾ ಆಧ್ಯಾತ್ಮಿಕ ಅಂಶಗಳಿAದ ಗುಣಗಳನ್ನು ಪುಷ್ಟೀಕರಿಸಲಾಗುತ್ತದೆ. ಅವರ ಕಲೆಯು ಮೂಲಭೂತವಾಗಿ ಸಂತಾನ ಮೌಲ್ಯಗಳೊಂದಿಗೆ ಬಲವಾದ ನಂಬಿಕೆಯ ಅಭಿವ್ಯಕ್ತಿಯಾಗಿದೆ. ಪೂಜ್ಯತೆ ಮತ್ತು ನಮ್ರತೆ ಸ್ಪಷ್ಟವಾಗಿದೆ, ಜೊತೆಗೆ ಉತ್ತಮ ಸಂತಾನೋತ್ಪತ್ತಿ ಮತ್ತು ಆಂತರಿಕ ಸಂಸ್ಕೃತಿಯನ್ನು ಸೂಚಿಸುವ ಹಿಂಜರಿಕೆ. ಕಲಾವಿದನು ತಾನು ನಿಜವಾಗಿಯೂ ಚಿತ್ರಿಸಲು ಇಷ್ಟಪಡುವುದನ್ನು ಚಿತ್ರಿಸುವ ಕೌಶಲ್ಯವನ್ನು ಹೊಂದಿದ್ದಾನೆ, ಗಟ್ಟಿಯಾದ ಬಣ್ಣದಲ್ಲಿ ಜೋರಾಗಿ ಕೂಗದಿರುವ ಚಾತುರ್ಯವನ್ನು ಅವನು ಹೊಂದಿದ್ದಾನೆ. ಅವರ ಕುಂಚದ ಕೆಲಸವು ಬ್ರಷ್ ಅಲ್ಲ. ದೇಸಾಯಿ ಅವರು ಆಧುನಿಕ ವರ್ಣಚಿತ್ರಕಾರರಾಗಿದ್ದು ಅವರು ಆಳವಾದ ಭಾವನೆಗಳು ಮತ್ತು ಜೀವನದಲ್ಲಿ ತಮ್ಮದೇ ಆದ ಸತ್ಯವನ್ನು ಚಿತ್ರಿಸುತ್ತಾರೆ ಎಂಬುದು  ಕೇಶವ್ ಮಲಿಕ್, ನವದೆಹಲಿ ಅವರ ಅಭಿಪ್ರಾಯವಾಗಿದೆ.ಇನ್ನು ದೇಸಾಯಿ ಸಾಧನೆಯ ಹಾದಿಯ ಹಿಂದೆ ಹುಡುಕಿ ಹೋದರೆ ಅವರ ಏಕವ್ಯಕ್ತಿ ಪ್ರದರ್ಶನಗಳಲ್ಲಿ ಸಬ್ಲೈಮ್ ಆರ್ಟ್ ಗ್ಯಾಲರಿ, ಬೆಂಗಳೂರು (೨೦೧೮,೨೦೧೯) ಯುಬಿ ನಗರ,ಬೆಂಗಳೂರು-೨೦೧೧, ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು-೨೦೧೦, ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು-೨೦೦೫, ಸಂಸ್ಕೃತಭವನ ಹಾಸನ-೨೦೦೫, ಕಲಾಕೃತಿ ಪ್ರದರ್ಶನ, ಬೆಂಗಳೂರು-೧೯೮೯ ಮುಖ್ಯವಾಗಿವೆ.ಇವರು ಭಾಗವಹಿಸಿದ ಶಿಬಿರ ಕಾರ್ಯಾಗಾರಗಳಲ್ಲಿ  ಪ್ರಮುಖವಾಗಿ ಬಿಜಾಪುರ ಕಲಾ ಶಿಬಿರ- ೨೦೨೪, ಅಂತರಾಷ್ಟಿçÃಯ ಕಲಾ ಶಿಬಿರ-ಮೂಡುಬಿದರೆ-೨೦೨೩, ಕಾರ್ಕಳ ಕಲಾ ಶಿಬಿರ-೨೦೨೨, ರಾಷ್ಟಿçÃಯ ಕಲಾವಿದರ ಶಿಬಿರ, ವಾರಣಾಸಿ-೨೦೧೬, ಪಿ.ಆರ್.ತಿಪ್ಪೇಸ್ವಾಮಿ ಟ್ರಸ್ಟ್–೨೦೧೪, ಕಾಗಿನೆಲೆ ಟ್ರಸ್ಟ್, ಕಾಗಿನೆಲೆ ಕಲಾಶಿಬಿರ, ಹಾವೇರಿ–೨೦೧೩,  ಕನ್ನಡ ಸಾಹಿತ್ಯ ಸಮ್ಮೇಳನ ಬಿಜಾಪುರ–೨೦೧೩, ವಿಶ್ವ ಕನ್ನಡ ಸಮ್ಮೇಳನ ಕಲಾ ಶಿಬಿರ ಬೆಳಗಾವಿ-೨೦೧೧, ಕರ್ನಾಟಕ ಲಲಿತ ಕಲಾ ಅಕಾಡೆಮಿ ಕಲಾ ಶಿಕ್ಷಕರ ಶಿಬಿರ ಹಾಸನ-೨೦೧೦, ಕರ್ನಾಟಕ ಲಲಿತ ಕಲಾ ಅಕಾಡೆಮಿ ಕಲಾಶಿಬಿರ, ಕೆಮ್ಮಣ್ಣು ಗುಂಡಿ-೨೦೦೯, ವೆಂಕಟಪ್ಪ ಗ್ಯಾಲರಿ, ಬೆಂಗಳೂರು-೨೦೦೭, ಮಹಾಮಸ್ತಕಾಭಿಷೇಕ ಕಲಾವಿದರ ಶಿಬಿರ-೨೦೦೬, ಉಪಾಸನಾ ಕಲಾವಿದರ ಶಿಬಿರ ಸಮಸೆ ಚಿಕ್ಕಮಗಳೂರು-೨೦೦೬, ರಾಷ್ಟಿçÃಯ ಕಲಾ ಪ್ರದರ್ಶನ, ಮೌಂಟ್ ಅಬು-೨೦೦೪, ಅಕಾಡೆಮಿ ಸದಸ್ಯರಿಗೆ ಕಲಾ ಶಿಬಿರ, ಹೊನ್ನಾವರ-೨೦೦೩ ರಾಷ್ಟಿçÃಯ ಸಂಶೋಧನಾ ಕಾರ್ಯಾಗಾರ, ದೆಹಲಿ-೨೦೦೦, ಹೊಯ್ಸಳ ಉತ್ಸವ ಕಲಾ ಶಿಬಿರ, ಹಳೇಬೀಡು- ೧೯೯೯, ಕಲಾ ಬರಹಗಾರರ ಶಿಬಿರ, ಕರ್ನಾಟಕ ಲಲಿತಕಲಾ ಅಕಾಡೆಮಿ, ಇಳಕಲ್-೧೯೯೯, ಕಲಾ ಉಪನ್ಯಾಸಕರ ಚಿತ್ರಕಲಾ ಪ್ರದರ್ಶನ ಬಿಜಾಪುರ-೧೯೯೯, ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಕಲಾವಿದರ ಶಿಬಿರ ಅಲ್ಲದೇ ದೇಸಾಯಿಯವರು ೬೦  ಮೇಲ್ಪಟ್ಟ ಗುಂಪು ಪ್ರದರ್ಶನದಲ್ಲಿ ಈವರೆಗೆ ಭಾಗಿಯಾಗಿದ್ದಾರೆ.  ಇವರ ಪೈಂಟಿAಗ್ಸ್ಗಳ ಖಾಸಗಿ ಸಂಗ್ರಹಣೆಗಳು ಸಾಗರೋತ್ತರವಾಗಿ  ಲಂಡನ್, ಬೆಲ್ಜಿಯಂ, ಫ್ರಾನ್ಸ್, ಸ್ವಿಜರ್ಲ್ಯಾಂಡ್, ಜರ್ಮನಿ, ಆಸ್ಟ್ರಿಯಾ, ಯುಎಇ, ಮಸ್ಕತ್, ಕೆನಡಾಗಳಲ್ಲಿ ಅಲ್ಲದೇ ಭಾರತದಲ್ಲಿ ಮೌಂಟ್ ಅಬು, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಗುಲ್ಬರ್ಗಾ, ಕೊಪ್ಪಳ, ಮೈಸೂರು, ಹಾಸನ, ಹೊನ್ನಾವರ, ಮಂಗಳೂರು, ಉಡುಪಿ, ಕುಂದಾಪುರ, ಮುಂಬೈ, ಚೆನ್ನೈ, ಪಾಂಡಿಚೇರಿ, ಕೊಚ್ಚಿಯಲ್ಲಿ ಇವೆ.  ದೇಸಾಯಿಯವರು ಮಾಜಿ ಸದಸ್ಯರು ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಮಾಜಿ ಸದಸ್ಯರು  ಧಾರವಾಡ,  ಸಂಚಾಲಕರು ಮಹಾಮಸ್ತಕಾಭಿಷೇಕ ಕಲಾವಿದರ ಶಿಬಿರ–೨೦೦೬, ಸುವರ್ಣ ಕರ್ನಾಟಕ ಕಲಾವಿದರ ಶಿಬಿರ, ಹಾಸನ ೨೦೦೬, ಸಂಚಾಲಕರು ಚಿತ್ಕಲಾ ಉದಯೋನ್ಮುಖ ಕಲಾವಿದರ ಪ್ರದರ್ಶನ, ಕಾರ್ಯದರ್ಶಿ ರಾಜ್ಯ ಕಲಾಶಿಕ್ಷಕರ ಸಮ್ಮೇಳನ ಹಾಸನ-೨೦೦೧,ಕಲಾವಿದರನ್ನು ಕಲೆ ಹಾಕಿ ಯಶಸ್ವಿ ಕಲಾಶಿಬಿರ ಕಲಾ ಪ್ರದರ್ಶನಗಳನ್ನು ಏರ್ಪಡಿಸಿ ಕಲಾಸಕ್ತರ ಗಮನ ಸೆಳೆದಿರುವ ದೇಸಾಯಿಯವರು ಉತ್ತಮ ಛಾಯಾಗ್ರಾಹಕರೂ ಹೌದು. ಅವರು ತಮ್ಮ ಛಾಯಗ್ರಾಹಣದಿಂದ ಹಾಸನದ ಹುಣಸಿನಕೆರೆ ಪೋಟೋ ತೆಗೆದು ಸಾರ್ವಜನಿಕರ, ಪರಿಸರ ಪ್ರೇಮಿಗಳ ಮನಸೆಳೆದು ಕೆರೆ ಉಳಿವಿಗೆ ತಮ್ಮದೇ ಕಲ್ಪನೆಯಲ್ಲಿ ಕೆಲಸ ಮಾಡಿದ್ದಾರೆ. ಮನಕ್ಕೆ ಮುದ ನೀಡುವ ಚಿಂತನೆಗೀಡು ಮಾಡುವ ಹಲವಾರು ಚಿತ್ರಗಳಿಗೆ ಕುಂಚದಿAದ ಜನ್ಮ ನೀಡಿದ್ದಾರೆ. ನಿಸರ್ಗದ ಅನೇಕ ಚಿತ್ರಗಳನ್ನು ರಚಿಸಿರುವುದಲ್ಲದೇ  ತಮ್ಮ ಕ್ಯಾಮರದಿಂದಲೂ ಪ್ರಕೃತಿಯ ರಮ್ಯ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. ಪ್ರಕೃತಿಯ ವಿಶಿಷ್ಟ ಸೌಂದರ್ಯ ಕಲಾವಿದನನ್ನು ಪ್ರಭಾವಿಸುವಂತೆಯೆ ಅವನ ಭಾವನಾತ್ಮಕ ಪ್ರತಿಕ್ರಿಯೆಯು ಅವನ ಅಂತರAಗ ಸಾಮರ್ಥ್ಯವನ್ನು ಮತ್ತು ವೈಯಕ್ತಿಕ ಅಭಿರುಚಿಯನ್ನು ಒಳಗೊಂಡಿರುತ್ತದೆ. ಈ ದಿಸೆಯಲ್ಲಿ ದೇಸಾಯಿರವರ ಪ್ರಕೃತಿ ಮತ್ತು ವಿಕೃತಿ ಎಂಬ ಕಲಾಕೃತಿ ಅಮೂರ್ತ ಶೈಲಿಯ ಕಲಾರಚನೆಯಾಗಿದ್ದು ಚಿಂತನೆಗೆ ಹಚ್ಚುವ ಮೂಲದ್ರವ್ಯವನ್ನು ಒದಗಿಸುತ್ತದೆ. ಮನುಷ್ಯ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬAಧವನ್ನು ವಿಕೃತಗೊಳಿಸುತ್ತಿರುವ ಮನುಷ್ಯರ ಮನೋಭಾವನೆಯನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸಿದೆ. ಪ್ರಕೃತಿಯನ್ನೇ ಅವಲಂಬಿಸಿ ಬದುಕುವ ಮನುಷ್ಯ ಭವಿಷ್ಯವನ್ನು ಯೋಚಿಸದೆ ನಿಸರ್ಗ ನಾಶ ಮಾಡುತ್ತಿರುವ ವಿಕೃತ ಮನೋಭಾವನೆಯನ್ನು ಅರ್ಥಗರ್ಭಿತವಾಗಿ ಮತ್ತು ಸಾಂಕೇತಿಕವಾಗಿ ಚಿತ್ರಿಸಲ್ಪಟ್ಟ ಕಲಾಕೃತಿಯಲ್ಲಿ ಪ್ರಸ್ತುತ ಜನ ನೈಸರ್ಗಿಕ ಸಂಪತ್ತನ್ನು ಹಾಳುಗೆಡುವುತ್ತಿರುವ ಬಗ್ಗೆ ಕಲಾವಿದರಲ್ಲಿ ಆಕ್ರೋಶ ಮತ್ತು ಸಮಾಜಿಕ ಕಳಕಳಿಯಿದೆ. ಚಿತ್ರಕಲೆಯ ವಿವಿಧ ಆಯಾಮಗಳಲ್ಲಿ ಕೃಷಿ ಮಾಡಿ ಜಲವರ್ಣ, ತೈಲವರ್ಣ, ಪೋಸ್ಟರ್ ಕಲರ್, ಟ್ರಾನ್ಸ್ಪರೆಂಟ್ ಬಣ್ಣ ಬಳಸಿ ಮನೋಹರವಾದ ಕಲಾಕೃತಿಗಳನ್ನು  ರಚಿಸಿದ್ದಾರೆ. ಜಲವರ್ಣದ ಪಾರದರ್ಶಕ ಬಣ್ಣಗಳನ್ನು ಬಳಸಿ ಸೃಷ್ಠಿಸಿರುವ ಚಿತ್ರಗಳು ಹಾಗೂ ತೈಲವರ್ಣದ ಇವರ ಕಲಾಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಉತ್ತಮ ಛಾಯಾಗ್ರಾಹಕರಾಗಿರುವ ದೇಸಾಯಿಯವರು ತಾವು ಭೇಟಿನೀಡಿದ್ದ ಜರ್ಮನಿ, ಹಾಲೆಂಡ್, ಬೆಲ್ಲಿಯಂ, ಪ್ಯಾರಿಸ್, ಸ್ವಿಜ್ಜರ್ ಲ್ಯಾಂಡ್, ನ್ಯೂಜಿಲ್ಯಾಂಡ್ ಆಸ್ಟೆçÃಲಿಯ  ದೇಶಗಳ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿದ್ದಾರೆ. ತಮ್ಮ ಮನೆಯನ್ನೇ ಕಲಾಗ್ಯಾಲರಿ ಮಾಡಿ ಬೇರೆ ಹೊರಗಿನ ಕಲಾವಿದರ  ಕಲಾಪ್ರದರ್ಶನಗಳನ್ನು ಮಾಡಿದ್ದಾರೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯,ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧, 

“ಅಮೂರ್ತ ಕಲೆಯ ಕಲಾವಿದ ಬಿ.ಎಸ್.ದೇಸಾಯಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ”ಗೊರೂರು ಅನಂತರಾಜು Read Post »

ಅಂಕಣ ಸಂಗಾತಿ

ಅಂಕಣ ಸಂಗಾತಿ ವೀಣಾ ವಾಣಿ ವೀಣಾ ಹೇಮಂತ್‌ ಗೌಡಪಾಟೀಲ್ ಸುಡುವ ಸೂರ್ಯನಿಗೊಂದು ಪತ್ರ ಅಪ್ಪ ಜಗತ್ಪಾಲಕ ಸೂರ್ಯದೇವನೇ,ನಿನಗೆ ಹೀಗೊಂದು ಪತ್ರ ಬರೆಯುವ ಪ್ರಮೇಯ ಬದುಕಿನಲ್ಲಿ ಬರುತ್ತದೆ ಎಂದು ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ ಆದರೇನು ಮಾಡುವುದು ?ಇದೀಗ ನಿನಗೆ ಪತ್ರ ಬರೆಯಲೇಬೇಕಾದ, ಬರೆದು ಕ್ಷಮೆ ಕೇಳಿಕೊಳ್ಳಲೇಬೇಕಾದ ಕಾಲ ಕೂಡಿ ಬಂದಿದೆ.ನೀನು ನಮ್ಮನ್ನು ಕ್ಷಮಿಸುವೆ ಎಂಬ ಭರವಸೆ ನನಗಿಲ್ಲ. ಆದರೆ ನಮ್ಮ ಸ್ವಯಂಕೃತ ಅಪರಾಧದ ತಪ್ಪೊಪ್ಪಿಗೆಯನ್ನು ನಿನ್ನ ಮುಂದೆ ಹೇಳಿಕೊಂಡು ನನ್ನ ಮನದ ಭಾರವನ್ನು ಹಗುರವಾಗಿಸಿಕೊಳ್ಳುವ ಆಶಯ ನನ್ನದು.ನಮ್ಮ ಬದುಕನ್ನು ಬೆಳಗುವ ನಮ್ಮೆಲ್ಲ ದೈನಂದಿನ ಕೃತ್ಯಗಳಿಗೆ ಸಾಕ್ಷಿಯಾಗುವ ನಮಗೆ ಆಹಾರ ತಯಾರಿಸಿಕೊಳ್ಳಲು ಬೇಕಾಗುವ ಸಸ್ಯಗಳಿಗೆ ಸಂಜೀವಿನಿಯಾಗಿರುವ, ನಿನ್ನ ಅಸ್ತಿತ್ವವಿಲ್ಲದೆ ನಾವ್ಯಾರು ಇಲ್ಲ ಎಂಬ ಅರಿವನ್ನು ಹೊಂದಿದ್ದರೂ ಕೂಡ, ತಿಳಿದು ಕೂಡ ಅಜ್ಞರಂತೆ ವರ್ತಿಸುತ್ತಿರುವ ನಿನ್ನ ಮಕ್ಕಳ ತಪ್ಪು ಕ್ಷಮಿಸಲಾರದ ಮಹಾಪರಾಧ… ನಿಜ.ಕೇವಲ ನಾಲ್ಕೈದು ದಶಕಗಳ ಹಿಂದೆ ಉದ್ಯಮಗಳು ತೆವಳುತ್ತಿರುವ ಕಾಲದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅವಶ್ಯಕತೆ ಇತ್ತು…. ಇದೀಗ ಸರ್ಕಾರದ ಕಟ್ಟುನಿಟ್ಟಿನ ನಿಯಮಾವಳಿಗಳ ಚಾಪೆಯ ಕೆಳಗೆ ನುಸುಳುವ ಕಲೆ ಜನರಿಗೆ ಗೊತ್ತಾಗಿದೆ. ಮತ್ತೆ ಕೆಲವರು ರಂಗೋಲಿಯ ಕೆಳಗೆ ನುಸುಳುವ ಚಾಣಾಕ್ಷತೆಯನ್ನು ಕೂಡ ಹೊಂದಿದ್ದಾರೆ….. ಎಲ್ಲೋ ಒಬ್ಬಿಬ್ಬರು ಹೀಗೆ ಮಾಡಿದ್ದರೆ ನೀನು ಕೂಡ ಹೋಗಲಿ ಬಿಡು ಎಂದು ಕ್ಷಮಿಸಿ ಬಿಡುತ್ತಿದ್ದೆ ಅಲ್ವೇ?ಆದರೆ ಉದ್ಯಮಗಳು ಉಗುಳುವ ಹೊಗೆಯನ್ನು ನಿನ್ನ ಅತಿ ನೇರಳೆ ಕಿರಣಗಳ ತಾಪವನ್ನು ತಡೆಯಲೆಂದು ಇರುವ ರಕ್ಷಾ ಕವಚ ಓಜೋನನ್ನು ಒಂದು ಇಡೀ ಆಸ್ಟ್ರೇಲಿಯಾ ಖಂಡದಷ್ಟು ಛಿದ್ರಗೊಳಿಸಿದ ಮೇಲೆ ನಿನಗೆ ಕೋಪ ಬರದಿದ್ದರೆ ಹೇಗೆ ?ಉಣ್ಣುವ ತಟ್ಟೆಯನ್ನು ಛೇದ ಮಾಡುವಂತಹ ವಿಸ್ಮೃತಿ ನಮಗೇಕೆ ಬಂತು ಎಂದು ನಿನಗೆ ಕೋಪ ಬಂದಿದ್ದರೆ ಖಂಡಿತವಾಗಿಯೂ ಅದು ನಿನ್ನ ತಪ್ಪಲ್ಲ.ಹಾಗೆಂದು ಎಲ್ಲ ತಪ್ಪನ್ನು ಉದ್ಯಮಗಳ ಮೇಲೆ, ಅವುಗಳು ಕಾರುವ ಕರಿ ಹೊಗೆಗಳ ಮೇಲೆ ಹಾಕಿ ನಾವು ಸಾಚಾ ಸಿದ್ದಪ್ಪಗಳು ಎಂದುಕೊಂಡರೆ ಅದು ನಮ್ಮ ಮೂರ್ಖತನವಾದೀತು. ನಿನ್ನ ಈ ಪ್ರಕೋಪಕ್ಕೆ ನಾವು ಮನುಷ್ಯರು ಕೂಡ ನಮ್ಮ ತಪ್ಪಿನ ಸಿಂಹಪಾಲನ್ನು ಸಲ್ಲಿಸಿದ್ದೇವೆ.ನಮ್ಮದೇ ಸಂತಾನವನ್ನು ಹೆಚ್ಚಿಸಿಕೊಳ್ಳುವ ನಮ್ಮದೇ ಬದುಕನ್ನು ಮತ್ತಷ್ಟು ಮಗದಷ್ಟು ಚೆನ್ನಾಗಿ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕಾಡನ್ನು ಕಡಿದು ನಾಡಾಗಿಸಿದ್ದೇವೆ…. ಕಾಡಿನ ಪ್ರಾಣಿಗಳು ಅವು ಕೂಡ ನಿನ್ನ ಮಕ್ಕಳಲ್ಲವೇ ? ಅವುಗಳ ಮನೆಗೆ ಬೆಂಕಿ ಇಟ್ಟು ಅವರನ್ನು ನೆಲೆಗೇಡಿಯನ್ನಾಗಿಸಿ ನಾವು ಬೆಚ್ಚಗಿನ ಗೂಡಿನಲ್ಲಿ ಇರಲು ಸಾಧ್ಯವೇ ? ಧಗೆಯ ಒಡಲೇ ನಮ್ಮ ಬದುಕುಆಗುತ್ತದೆ ಎಂಬ ಅರಿವಿಲ್ಲದೆ ಅಭಿವೃದ್ಧಿಯ ಹೆಸರಿನಲ್ಲಿ, ಮೂಲ ಸೌಕರ್ಯಗಳನ್ನು ಹೆಚ್ಚಿಸುವ ನೆವದಲ್ಲಿ ಕಾಡನ್ನು ನಾಶ ಮಾಡಿರುವುದು, ಗಿಡ ಮರಗಳಿಗೆ ಕೊಡಲಿಯ ಪ್ರಹಾರ ಮಾಡಿ ಅವುಗಳನ್ನು ಧರಾಶಾಹಿಯಾಗಿಸಿರುವುದು ನಮ್ಮದೇ ಸ್ವಯಂಕೃತ ಅಪರಾಧವಲ್ಲವೇ ?ಒಳ್ಳೆಯ ಬೆಳೆ ಬೇಕು ಎಂಬ ಆಶಯ ತಪ್ಪಲ್ಲ ಆದರೆ ಕಿಸೀ ಬಿ ಕೀಮತ್ ಪರ್ ಎಂಬ ಹಿಂದಿಯ ಹೇಳಿಕೆಯಂತೆ ಖಂಡಿತವಾಗಿಯೂ ಅಲ್ಲ. ನಮ್ಮ ಹೆಚ್ಚಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅದೆಷ್ಟೇ ಕೆಳಮಟ್ಟಕ್ಕೆ ಇಳಿಯಲು ಮನುಷ್ಯ ಸಿದ್ದನಾಗಿದ್ದಾನೆ. ಉಳಿವಿಗಾಗಿನ ಈ ಹೋರಾಟದಲ್ಲಿ ಕೇವಲ ತನ್ನ ಉಳಿವಿನ ಕುರಿತು ಮಾತ್ರ ಯೋಚಿಸುತ್ತಿರುವ ಆತ ಅತಿಯಾದ ದುರಾಸೆಯಿಂದ ಭೂಮಿ ತಾಯಿಯ ಒಡಲಿಗೆ ವಿಷ ಹಾಕುತ್ತಿದ್ದಾನೆ. ಏನನ್ನಾದರೂ ತೆರುವ, ಎಷ್ಟನ್ನಾದರೂ ತೆರುವ ಮೂಲಕ ನಾವು ಫಲವತ್ತಾದ ಭೂಮಿ ತಾಯಿಯ ಮಡಿಲಿಗೆ ಹಾಲಾಹಲದಂತಹ ರಾಸಾಯನಿಕಗಳನ್ನು ಬೆರೆಸಿದರೆ ಆಕೆಯಾದರೂ ಹೇಗೆ ಸುಮ್ಮನಿದ್ದಾಳು ? ಅಮೃತದಂತಹ ಬದುಕನ್ನು ನಮಗೆ ಕೊಡಮಾಡಿರುವ ಭೂಮಿತಾಯಿಯ ಮಡಿಲಿನಲ್ಲಿ ಗರಿಕೆ ಹುಲ್ಲು ಕೂಡ ಬೆಳೆಯದಂತೆ ಬಂಜರು ಮಾಡಿ ಇದೀಗ ಗೋಳಿಟ್ಟರೆ ಏನು ಪ್ರಯೋಜನ ?ಸಹಿಸಿ ಸಾಕಾದ ಆಕೆ ಕೂಡ ಧಗೆಯ ಒಡಲಾಗಿ ನಮಗೆ ಶಿಕ್ಷೆ ನೀಡುತ್ತಿದ್ದಾಳೆ…. ಇನ್ನು ಆಪೋಷನ ತೆಗೆದುಕೊಳ್ಳುವುದಷ್ಟೇ ಬಾಕಿ.ಇನ್ನು ಭೂಮಿ ತಾಯಿಯ ಒಡಲಿಗೆ ನಾವು ಹಾಕಿದ ವಿಷ, ಕಾರ್ಖಾನೆಗಳ ರಾಸಾಯನಿಕಗಳು ನಾವು ಕುಡಿಯುವ ಗಂಗೆಯನ್ನು ಕಲುಷಿತಗೊಳಿಸಿದೆ. ತನ್ನ ಒಡಲಲ್ಲಿರುವ ಆಮ್ಲಜನಕವನ್ನು, ಲವಣ ಮತ್ತು ಖನಿಜಗಳನ್ನು ಪೋಷಕಾಂಶಗಳ ರೂಪದಲ್ಲಿ ನಮಗೆ ನೀರಿನ ಮೂಲಕ ನೀಡುವ, ನಾವೆಲ್ಲರೂ ಗಂಗಾಮಾತೆ ಎಂದು ಪೂಜಿಸುವ ಜಲವನ್ನು ಕಲುಷಿತಗೊಳಿಸಿದ ಮಹಾಪರಾಧ ಕೂಡ ನಮ್ಮದೇ. ನಾವು ಹುಲು ಮಾನವರಂತೆಯೇ ಜಲಚರಗಳು ಕೂಡ ನಿನ್ನ ಮಕ್ಕಳು.ನಿನ್ನ ಒಡಲಿಗೆ ನಮ್ಮೆಲ್ಲ ಕಲ್ಮಶಗಳನ್ನು ಎಸೆಯುವ, ರಾಸಾಯನಿಕಗಳನ್ನು ಬೆರೆಸುವ, ನಿನ್ನೊಡಲನ್ನು ಮಲಿನಗೊಳಿಸುವ ನಿನ್ನಲ್ಲಿಯೇ ತಮ್ಮ ಬದುಕನ್ನು ಕಂಡುಕೊಂಡಿರುವ ನಿನ್ನ ಮಕ್ಕಳಾದ ಜಲಚರ ವಾಸಿಗಳಿಗೆ ಕೇಡು ಬಗೆಯುವ ನಮ್ಮ ಕುರಿತು ನಿನಗೆ ಪ್ರೀತಿಯಾದರೂ ಹೇಗೆ ಹುಟ್ಟೀತು ? ನಿನ್ನ ದ್ವೇಷಕ್ಕೂ ನಾವು ಅನರ್ಹರು ಎಂದು ಮಾತ್ರ ಹೇಳಬಲ್ಲೆ. ತಿಳಿಯದೆ ಮಾಡುವುದು ಮೂಢತನ ಎಂದಾದರೆ ತಿಳಿದು ಕೂಡ ಮಾಡುವ ನಮ್ಮ ಅಜ್ಞಾನಕ್ಕೆ ಬೆಲೆ ತೆರಬೇಕಾದವರು ನಾವೇ ಅಲ್ಲವೇ !ಈ ಹಿಂದೆ ಪ್ರತಿಯೊಬ್ಬರ ಮನೆಗಳಲ್ಲಿ ಹಿತ್ತಲಿರುತ್ತಿತ್ತು ಅಲ್ಲಿ ದಿನಬಳಕೆಯ ತರಕಾರಿಗಳ ಜೊತೆಗೆ ಹೂವು ಹಣ್ಣು ಗಳ ಗಿಡಮರಗಳ ಜೊತೆಗೆ ದೊಡ್ಡದಾದ ಹುಣಸೆ ಮರಗಳು ಕೂಡ ಇರುತ್ತಿದ್ದವು . ನಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿ ಇತರರಿಗೆ ಕೊಡುವಷ್ಟು ಕೂಡ ವಿಶಾಲತೆ ನಮ್ಮದಾಗಿತ್ತು. ಆದರೆ ಆಧುನಿಕತೆಯ ಹೆಸರಿನಲ್ಲಿ ಅಲಂಕಾರಿಕ ಗಿಡಗಳನ್ನು ಮಾತ್ರ ನೆಟ್ಟು ನೀರು ದೊರೆಯುವುದಿಲ್ಲ ಎಂಬ ನೆಪ ವಡ್ಡಿ ಗಿಡ ಮರಗಳಿಗೆ ಕೊಡಲಿ ಹಾಕಿರುವ ನಮ್ಮ ಬುದ್ಧಿಗೇಡಿತನಕ್ಕೆ ನೀನಾದರೂ ಏನು ಮಾಡುತ್ತಿ ?ಆಗಲೂ ಕೂಡ ಬೇಸಿಗೆ ಇತ್ತು ಆದರೆ ದಿನದ ಕೆಲಸಗಳನ್ನು ಮಾಡಿ ಪೂರೈಸಿ ದಣಿದ ದೇಹ ಮನೆಯ ಹಿತ್ತಲಿನಲ್ಲಿ ಕಟ್ಟೆಯ ಮೇಲೆ ಮರದ ಕೆಳಗೆ ಬರಿ ನೆಲದ ಮೇಲೆ ಮಲಗಿದರು ಕೂಡ ಬೀಸುವ ಮರಗಳ ತಂಗಾಳಿ ನಮಗೆ ವಿಶ್ರಾಂತಿಯ ಜೊತೆಗೆ ನೆಮ್ಮದಿಯನ್ನು ಕೂಡ ನೀಡುತ್ತಿದ್ದವು.ಈಗ ಮನೆ ಮನೆಗಳಲ್ಲಿ ಫ್ಯಾನ್‌ಗಳು, ಏರ್ ಕೂಲರ್ ಗಳು ಎಸಿಗಳ ಭರಾಟೆ ಇದೆ, ನಿಜ! ಆದರೆ ಭೂಮಿ ತಾಯಿಯ ಮಡಿಲಲ್ಲಿ ಬೆಳೆದ ಮರಗಳು ಕೊಡುವ ನೆರಳು ಮತ್ತು ಗಾಳಿಯನ್ನು ನೀಡಲು ಯಾರಿಂದಲೂ ಸಾಧ್ಯವಿಲ್ಲ. ನಮಗೆ ಶುದ್ಧ ಆಮ್ಲಜನಕವನ್ನು, ನೆರಳನ್ನು ಫಲ ಪುಷ್ಪಗಳನ್ನು ನೀಡುವ ಅಂತಹ ಮರಗಳನ್ನು ಬೇರು ಬಿಟ್ಟು ಕಾಂಪೌಂಡ್ ನಾಶ ಮಾಡುತ್ತವೆ ಎಂಬ ಕಾರಣಕ್ಕಾಗಿ ಕಡಿದೊಗೆದಿರುವ ನಾವು ಮನೆಯ ಯಾವ ಮೂಲೆಯಲ್ಲಿ ಹೋದರೂ ನೆಮ್ಮದಿಯ ನೆಳಲು ಕಾಣದೆ ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ನಮ್ಮದಾಗಿದೆ.ಇನ್ನು ನಾವು ಬಳಸುವ ಎ.ಸಿ ಗಳು ವಾತಾವರಣದಲ್ಲಿ ಮೀಥೇನ್ ಅನಿಲವನ್ನು ಬಿಡುಗಡೆ ಮಾಡಿ ವಾಯು ಮಾಲಿನ್ಯವನ್ನು ಉಂಟು ಮಾಡುತ್ತವೆ. ಇದರ ಪ್ರಮಾಣ ಹೆಚ್ಚಿದಷ್ಟು ನಾವು ಮನುಷ್ಯರಿಗೆ ಅಪಾಯ ತಪ್ಪಿದ್ದಲ್ಲ.ಭೂಮಿಯನ್ನು ಮಾತ್ರವಲ್ಲ ಆಕಾಶವನ್ನು ಕೂಡ ನಮ್ಮ ಅತಿಯಾದ ದಾಹಕ್ಕೆ ಆಪೋಷಣೆ ತೆಗೆದುಕೊಂಡು ಅಲ್ಲೂ ಕೂಡ ವಾಯು ಮಾಲಿನ್ಯದ ಮೂಲಕ ಹಾಳು ಮಾಡಿರುವ ನಮ್ಮ ಮೌಡ್ಯತೆಯನ್ನು ಸಹಿಸುವುದು ನಿನಗೆ ಕೂಡ ಅಸಾಧ್ಯ ಅಲ್ಲವೇ ?ಹೀಗೆ ನೆಲ,ಜಲ, ವಾಯುವನ್ನು ಹಾಳು ಮಾಡಿರುವ ನಾವು ಗಿಡ ಮರಗಳನ್ನು ಕಡಿದೊಗೆದು ಪರಿಸರವನ್ನು ನಾಶ ಮಾಡಿದ್ದೇವೆ. ಪರಿಣಾಮವಾಗಿ ವಾತಾವರಣದ ತಾಪಮಾನ ಹೆಚ್ಚಾಗಿದೆ. ಸಹಸ್ರಾರು ವರ್ಷಗಳಿಂದ ಒಂದು ಸೆಂಟಿಮೀಟರ್ ಇನ್ನಷ್ಟು ಕರಗದ ಬೃಹದಾಕಾರದ ಹಿಮದ ನೀರ್ಗಲ್ಲುಗಳು ಇನ್ನಿಲ್ಲದಂತೆ ಕರಗಿ ಹರಿಯುತ್ತಿವೆ ಪರಿಣಾಮವಾಗಿ ವಿಪರೀತ ಬಿಸಿಲು ಚಳಿ ಮಳೆಗಳ ತೊಂದರೆಗಳಿಂದ ನಾವು ನಲುಗುತ್ತಿದ್ದೇವೆ.ನಮ್ಮ ಪೂರ್ವಜರು ನಮಗೆ ಸ್ವಚ್ಚ,ಶುದ್ಧವಾದ ಹಾಗೂ ಬದುಕಲು ಯೋಗ್ಯವಾದ ಪರಿಸರವನ್ನು ನೀಡಿದ್ದರು ಅದು ಅವರ ಕರ್ತವ್ಯವಾಗಿತ್ತು. ಈ ಭೂಮಿಯ ಪ್ರಜೆಗಳಾದ ನಾವುಗಳು ನಮ್ಮ ಮುಂದಿನ ಪೀಳಿಗೆಗೆ ಅಷ್ಟೇ ಬದುಕಲು ಯೋಗ್ಯವಾದ ವಾತಾವರಣವನ್ನು ಹೊಂದಿರುವ ಪರಿಸರವನ್ನು ಬಿಟ್ಟು ಕೊಡಬೇಕಾದ ಜವಾಬ್ದಾರಿ ಹೊತ್ತಿದ್ದು ಆ ನಿಟ್ಟಿನಲ್ಲಿ ಇನ್ನು ಮುಂದೆ ಯಾದರೂ ಕಾರ್ಯನಿರ್ವಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈಗಾಗಲೇ ಆಗಿ ಹೋಗಿರುವ ಪ್ರಮಾದವನ್ನು ಸರಿಪಡಿಸಲು ಇಂದಿನಿಂದಲೇ ಕಾರ್ಯ ನಿರ್ವಹಿಸುತ್ತೇವೆ ಎಂಬ ಭರವಸೆಯನ್ನು ಭೂಮಿಯ ವಾಸಿಗಳಾದ ನಾವು ನಿನಗೆ ನೀಡುತ್ತೇವೆ. ಇನ್ನಾದರೂ ನಿನ್ನ ಕೋಪ ತಾಪವನ್ನು ಬದಿಗಿಟ್ಟು ಎಳೆಯ ಹದವಾದ ಬಿಸಿಲನ್ನು ಮಾತ್ರ ನಮಗೆ ನೀಡು. ನಿನ್ನ ಮಕ್ಕಳನ್ನು ಕಾಪಾಡು ಎಂದು ಕೇಳಿಕೊಳ್ಳುವನಿನ್ನ ಮಕ್ಕಳು ವೀಣಾ ಹೇಮಂತ್ ಗೌಡ ಪಾಟೀಲ್

Read Post »

ಅನುವಾದ

“ಅಫ್ಟ್ರಾಲ್ ವಾಚ್ಮನ್” ತೆಲುಗು ಮೂಲ ಉಪ್ಪುಲ ಲಿಂಗಯ್ಯ ಕನ್ನಡಕ್ಕೆ ಧನಪಾಲ ನಾಗರಾಜಪ್ಪ

ಅನುವಾದ ಸಂಗಾತಿ ಅಫ್ಟ್ರಾಲ್ ವಾಚ್ಮನ್ ತೆಲುಗು : ಉಪ್ಪುಲ ಲಿಂಗಯ್ಯಕನ್ನಡಕ್ಕೆ : ಧನಪಾಲ ನಾಗರಾಜಪ್ಪಅ vಕೊರಿಯರ್ ಪಾರ್ಸಲ್ಮೇಲಕ್ಕೆ ತಂದುಕೊಡುಟಿಫನ್ ತಂದುಕೊಡುದಿನಸಿ ಸರಕುಗಳನ್ನು ತಂದುಕೊಡುಕನ್ನಡಕ ಮೇಲಿಟ್ಟು ಮರೆತಿರುವೆತೆಗೆದುಕೊಂಡು ಬಾಬಸ್ ನಿಲ್ದಾಣದ ಬಳಿ ಬಿಟ್ಟಿರುವಗಾಡಿಯನ್ನು ಹಾಕಿಕೊಂಡು ಬಾಇದನ್ನು ಒರೆಸು, ಅಲ್ಲಿಗೆ ಹೋಗು…ಒಮ್ಮೊಮ್ಮೆ ಒಂದೊಂದು ಕೆಲಸಒಮ್ಮೊಮ್ಮೆ ಒಂದೊಂದು ಗದರಿಕೆಪ್ರೀತಿಯಿಂದ ಹೇಳುವವರು ಕೆಲವರುಒದರುವಂತೆ ಹೇಳುವವರು ಕೆಲವರು ಡ್ಯೂಟಿ ಅಂತಾರೆಆದರೆ…ಇವೆಲ್ಲಾ ಡ್ಯೂಟಿಯನ್ನು ಮೀರಿದ ಕೆಲಸಗಳುಮಾಡಬೇಕನಿಸುತ್ತದೆಆಗಾಗ ಮಾಡಬಾರದನಿಸುತ್ತದೆಮೈಕೈ ನುಜ್ಜುಗುಜ್ಜಾಗುತ್ತದೆಜೀವ ದಣಿದು ಹೋಗುತ್ತದೆಹೇಳಿದ ರೀತಿಗೆ ಚುರುಕ್ ಅನ್ನುತ್ತದೆ“ಈಗ ಆಗುವುದಿಲ್ಲ ಸರ್ಗೇಟಿನ ಬಳಿ ಯಾರೂ ಇಲ್ಲ ಸರ್”ತಡಬಡಿಸುತ್ತ ನಾನು ಹೇಳಿದೊಡನೆಅವರು ಹೇಳುವರು…“ಅಫ್ಟ್ರಾಲ್ ವಾಚ್ಮನ್ನಮ್ಮ ಮಾತಿಗೇ ಎದುರು ಮಾತಾಡುವೆಯಾನಿನ್ನ ಕೆಲಸ ಕಿತ್ತುಹಾಕುವೆ” ಎಷ್ಟು ಸಲ ಎಷ್ಟೆಲ್ಲಾ ಮಾಡಿದೆನಲ್ಲಎಷ್ಟೋ ಸಲ ನಿದ್ದೆಯನ್ನೇ ತೊರೆದನಲ್ಲಇದೇನಿದು…ಒಂದು ಸಲ ಆಗುವುದಿಲ್ಲ ಎಂದರೆಅಫ್ಟ್ರಾಲ್ ವಾಚ್ಮನ್ ಆಗಿಬಿಡುವೆಎಲ್ಲರನ್ನೂ ಕಾಯುವ ನಾನು ಅಫ್ಟ್ರಾಲ್ ವಾಚ್ಮನ್ ಹೇಗಾಗುವೆ! ತೆಲುಗು : ಉಪ್ಪುಲ ಲಿಂಗಯ್ಯಕನ್ನಡಕ್ಕೆ : ಧನಪಾಲ ನಾಗರಾಜಪ್ಪ

“ಅಫ್ಟ್ರಾಲ್ ವಾಚ್ಮನ್” ತೆಲುಗು ಮೂಲ ಉಪ್ಪುಲ ಲಿಂಗಯ್ಯ ಕನ್ನಡಕ್ಕೆ ಧನಪಾಲ ನಾಗರಾಜಪ್ಪ Read Post »

ನಿಮ್ಮೊಂದಿಗೆ

ಗಂಗಾ ಚಕ್ರಸಾಲಿ ಅವರ ಕವಿತೆ “ಒಲವ ಗೀತೆ”

ಕಾವ್ಯ ಸಂಗಾತಿ ಗಂಗಾ ಚಕ್ರಸಾಲಿ “ಒಲವ ಗೀತೆ”. ಅವರ ನೆನಪ ಜೋಕಾಲಿಯಲ್ಲಿಒಲವ ಗೀತೆ ಆಗಾಗ ಸರ್ರನೇ ಜೀಕುತ್ತದೆ| ಒಮ್ಮೆಲೇ….ಹೂ ತೋಟವ ಸುತ್ತಿ ಬಂದಗಾಳಿಯ ಘಮದಿ ಮಿಂದಪಲ್ಲವಿಯ ಸಾಲುಗಳುಮನವನು ಚಿಟ್ಟೆಯಾಗಿಸಿಬಿಡುತ್ತವೆ| ಆದರೆ….ಚರಣಗಳು ನೀರವ ಧ್ಯಾನದಿ ಬಂಧಿಏಕೆ? ಹೇಗೆ? ಪ್ರಶ್ನೆಗಳುಉತ್ತರಕ್ಕಾಗಿ ಕಾಯ್ದರೂಇಬ್ಬರ ಅಹಮ್ಮಿನ ಕೋಟೆಯನ್ನುಬೇಧಿಸಲಾರವು| ಬದುಕಿನ ಎಲ್ಲ ಹಾಡುಗಳಲ್ಲಿಚರಣಗಳಿರಬೇಕೆ?ಆದಿ, ಅಂತ್ಯಾಕ್ಷರ, ಮುಕ್ತಾಯದ ಸಾಲೊಂದಿರಬೇಕೆ?ಹೂಂ..ಗುಡುತ್ತದೆ ಕವಿಹೃದಯ| ವಿಚಿತ್ರವೆಂದರೆ…ಬಹುತೇಕ ಒಲವಿನ ಹಾಡುಪಲ್ಲವಿಗಷ್ಟೇ ಸೀಮಿತವಾದಾಗಲೂಜೀವನದುದ್ದಕ್ಕೂ ಮನದಿಜೀಕುತ್ತಲೇ ಇರುತ್ತದೆಬೇಸರಿಕೆಯ ಪೋಷಾಕು ತೊಡದೇ… ಗಂಗಾ ಚಕ್ರಸಾಲಿ

ಗಂಗಾ ಚಕ್ರಸಾಲಿ ಅವರ ಕವಿತೆ “ಒಲವ ಗೀತೆ” Read Post »

ಕಾವ್ಯಯಾನ

ನಿರಂಜನ ಕೇಶವ ನಾಯಕ ಅವರ ಕವಿತೆ “ಇಂಗದ ಬಾಯಾರಿಕೆ”

ಕಾವ್ಯ ಸಂಗಾತಿ ನಿರಂಜನ ಕೇಶವ ನಾಯಕ “ಇಂಗದ ಬಾಯಾರಿಕೆ” ​ಬಿಸಿಲ ಶಲಾಕೆಇಳಿದು ಚುಚ್ಚಿದೆಹೃದಯದಟ್ಟದ ಆಳಕೆ;ಬತ್ತಿಸಿ ಪ್ರಾಣದ ಒರತೆಯಉಳಿದಿದೆ— ಇಂಗದ ಬಾಯಾರಿಕೆ. ​ಅರಿಯದ ನೋವುಅಸ್ಥಿ-ಮಾಂಸವ ಕೊರೆಯಲು;ಬೆವರಿನ ನದಿಯಲಿಹುಡುಕುವ ಹಾದಿಯೇಬಸವಳಿದ ಮನಕೆ ಕಿರು ಆಸರೆ. ​ಹೆಜ್ಜೆಗಳು ಭಾರವಾಗಿ,ಬೆಳಕೇ ಬೆಂಕಿಯ ಮಳೆಯಾಗಿ;ದಿಗಂತದಲಿ ನಿಂತುಜೀವ ಹಿಂಡುವಾಗ—ಸೋಲೊಪ್ಪದೆ ವಿಧಿಯಿಲ್ಲವೇ? ನಿರಂಜನ ಕೇಶವ ನಾಯಕ

ನಿರಂಜನ ಕೇಶವ ನಾಯಕ ಅವರ ಕವಿತೆ “ಇಂಗದ ಬಾಯಾರಿಕೆ” Read Post »

You cannot copy content of this page

Scroll to Top