ಕಬ್ಬಿಗರ ಅಬ್ಬಿ – ಸಂಚಿಕೆ – ೨

ಕಬ್ಬಿಗರ ಅಬ್ಬಿ – ಸಂಚಿಕೆ – ೨

ಚೊಕ್ಕಾಡಿಯ ಹಾಡುಹಕ್ಕಿ ಮಹಾದೇವ ಕಾನತ್ತಿಲ ಎರಡು ದಶಕಗಳ ಹಿಂದೆ, ಹಿಮಾಲಯದ ತಪ್ಪಲಿನ, ರಾಣೀಖೇತ್ ಎಂಬ ಜಾಗದಲ್ಲಿ, ಚಾರಣ ಮಾಡುತ್ತಿದ್ದೆ.  ಬೆಟ್ಟ ಹತ್ತುತ್ತಾ, ಓರ್ವ ಬೆಟ್ಟದ ಜೀವಿ ಜತೆಯಾದ. ಆತನ ಮನೆ ಬೆಟ್ಟದ ತುದಿಯ ಹತ್ತಿರ. ಬರೇ ಕಾಲುದಾರಿ,ಸುತ್ತೀ ಬಳಸೀ, ಮರ ಹತ್ತುವ ಲತೆಯಂತೆ ಗುಡ್ಡ ಹತ್ತುತ್ತೆ. ಆಸ್ಪತ್ರೆಗೆ ಬೇಕಾದಲ್ಲಿ ಹತ್ತಾರು ಕಿಲೋಮೀಟರ್ ದೂರ. ಆತನ ಹತ್ತಿರ, ನಾನು ಕೇಳಿದೆ, ಅನಾರೋಗ್ಯವಾದಾಗ ಏನು ಮಾಡುತ್ತೀರಿ ಅಂತ. ಆತ ಅಂದ, “ಇಧರ್ ವನಸ್ಪತಿಯೋಂ ಕೀ ಹವಾ ಹೈ, ಹಮ್ ಹಮೇಷಾ […]

ಅಬ್ಬರವಿಳಿದಾಗ

ಶೈಲಜಾ ಹಾಸನ್        ತಣ್ಣಗೆ ಗಾಳಿ ಬೀಸಿದಂತಾಗಿ ಮಾಧವಿ ನಡುಗಿದಳು. ಕೆರೆ ಏರಿ ಮೇಲೆ ಕುಳಿತಿದ್ದರಿಂದ ಕೆರೆಯ ಮೇಲಿಂದ ಹಾದು ಬರುತ್ತಿದ್ದ ಗಾಳಿ ಎದೆ ನಡುಗಿಸುವಂತಿತ್ತು. ಚಳಿ ಆಗುತ್ತಿದ್ದರೂ ಮಾಧವಿಗೆ ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಏರಿ ಮೇಲೆ ಕುಳಿತು ಸಾಕಾದ ಮಾಧವಿ ನಿಧಾನವಾಗಿ ಕೆಳಗಿಳಿದು ನೀರಿಗೆ ಕಾಲು ಇಳಿಬಿಟ್ಟು ಚಪ್ಪಡಿ ಮೇಲೆ ಕುಳಿತಳು. ಕಾಲುಗಳೆರಡನ್ನು ನೀರಿನಲ್ಲಿ ಆಡಿಸುತ್ತಾ ಕಾಲಬೆರಳನ್ನು ಕಚ್ಚಲು ಬರುತ್ತಿದ್ದ ಮೀನುಗಳೊಡನೆ ಆಟವಾಡತೊಡಗಿದಳು. ಕೆಲವು ನಿಮಿಷಗಳಷ್ಟೆ ಆ ಆಟವೂ ಮುದ ನೀಡದೆ […]

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು.

ಡಿಎಸ್.ರಾಮಸ್ವಾಮಿ ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು. ಈ ಕರೋನಾದ ಭಯ ನಮ್ಮೆಲ್ಲರನ್ನೂ ಎಷ್ಟು ಜರ್ಝರಿತಗೊಳಿಸಿದೆ ಎಂದರೆ ನಮ್ಮ ನಿತ್ಯದ ಜೀವನದ ಕನಿಷ್ಠ ಕೆಲಸ ಕಾರ್ಯಗಳಲ್ಲೂ ವಿಪರೀತ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ. ಒಂದೇ ಸೂರಿನೊಳಗಿದ್ದೂ ಅಪರಿಚಿತರಂತೆ ಬಾಳುವುದು ಅಭ್ಯಾಸವೇ ಆಗಿಬಿಟ್ಟಿದೆ. ನಿತ್ಯವೂ ಬೇಕಾಗುವ ತರಕಾರಿ, ಹಣ್ಣು, ಹೂವು, ದಿನಸಿ ತರುವುದಕ್ಕೂ ಸಮಯ ಹೊಂದಿಸಿಕೊಂಡು ಅವು ಯಾವ ಜಾಗದಲ್ಲಿ ಸಿಗುತ್ತವೆಯೋ ಅಲ್ಲಿಗೆ ದೌಡಾಯಿಸುವ ಪರಿಸ್ಥಿತಿ ಎಲ್ಲ ಊರಲ್ಲೂ ಸಾಮಾನ್ಯ ಸಂಗತಿಯಾಗಿದೆ. ಸರ್ಕಾರದ ಕಛೇರಿಗಳು ಅತಿ ಜರೂರು ಎಂದು […]

ಲಾಕ್ಡೌನ್ ಬೇಡಿಕೆ

ಗಣೇಶ್ ಭಟ್ ಸಮೂಹ ಸನ್ನಿಯಾಗುತ್ತಿರುವ ಲಾಕ್ಡೌನ್ ಬೇಡಿಕೆ ಕೊರೊನಾ ವೈರಸ್ ಹಾವಳಿಯ ಕುರಿತಾದ ಭಯದಿಂದಾಗಿ ಲಾಕ್ಡೌನ್ಗಾಗಿ ಒತ್ತಾಯ ಪ್ರಾರಂಭವಾಗಿದೆ.ಲಾಕ್ಡೌನ್ನಿಂದಾಗಿ ಕೊರೊನಾ ಪಿಡುಗನ್ನು ಹೋಗಲಾಡಿಸಬಹುದೆಂಬುದಕ್ಕೆ ಯಾವುದೇ ಆಧಾರವಿಲ್ಲ. 10, 20 ಅಥವಾ ಇನ್ನೂ ಎಷ್ಟೇ ವಾರಗಳ ಸಂಪೂರ್ಣ ಲಾಕ್ಡೌನ್ನಂತರವೂ ಜನರ ಓಡಾಟ ಪ್ರಾರಂಭವಾದಾಗ ವೈರಸ್ನ ಹಬ್ಬುವಿಕೆ ಒಮ್ಮೆಲೇ ಹೆಚ್ಚುವುದು ಸಹಜವೆಂದು ಸೋಂಕು ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ.ಕೇಂದ್ರ ಸರ್ಕಾರ ರಚಿಸಿದ ತಜ್ಞರ ತಂಡ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಭಾರತದಲ್ಲಿ ಲಾಕ್ಡೌನ್ ವಿಧಿಸದಂತೆ ಕಳೆದ ಫೆಬ್ರುವರಿಯಲ್ಲಿ ಸಲಹೆ ನೀಡಿತ್ತು. […]

ಗಝಲ್

ರತ್ನರಾಯ ಮಲ್ಲ ಕೋಟೆಯಲ್ಲಿ ಕುಂತಿರುವೆ ಬರುವವರೆಲ್ಲ ಬಂದುಬಿಡಿಹಸಿವಿನಿಂದ ಬಳಲುತಿರುವೆ ತಿನ್ನುವವರೆಲ್ಲ ತಿಂದುಬಿಡಿ ಬುದ್ಧಿಮಾತುಗಳು ಬುದ್ಧಿಭ್ರಮಣೆಯಲಿ ಕೊಳೆಯುತಿವೆಜೋಳಿಗೆಯು ಹರಿದಿದೆ ನೋಟುಗಳಿಂದ ತುಂಬಿಸಿಬಿಡಿ ಭೂಷಣವಾಗಿದ್ಧ ನಾಚಿಕೆಯ ಪರದೆಯನ್ನು ಎಸೆದಿರುವೆನೀವು ಬಂದ ಕೆಲಸವನ್ನು ಮುಗಿಸಿಕೊಂಡು ಹೋಗಿಬಿಡಿ ಪೂಜೆ-ಪುನಸ್ಕಾರದ ಜೊಳ್ಳು ಮೌಲ್ಯಗಳು ಬೇಡವಾಗಿವೆನಮ್ಮ ಪಾಡಿಗೆ ನಮಗೆ ಸುಖವಾಗಿ ಇರಲು ಬಿಟ್ಟುಬಿಡಿ ಹಸಿಮಾಂಸ ತಿನ್ನುವ ರಣಹದ್ದುಗಳ ಪರಪಂಚವಿದುಅನ್ನ ತಿನ್ನುವುದನ್ನು ಕಲಿತು ನೆಮ್ಮದಿಯಾಗಿ ಇದ್ದುಬಿಡಿ **************

ಶೂನ್ಯದುಂಗುರ….

ಶಿವಲೀಲಾ ಹುಣಸಗಿ ಅರಿವಿಗೆ ಬಾರದ ಕ್ಷಣ ನೆನೆದುಭಯದ ನಡುವೆ ನಲುಗುತಿವೆಹಿಂಡಿ ಹಿಪ್ಪೆಯಾದ ಮನಗಳುಆದ್ರತೆಗೊಂದು ಭದ್ರತೆಯಿಲ್ಲದೆಅಂಜಿಕೆಯ ಹಿನ್ನೋಟ ತಲೆ ಕೆಳಗೆಬಿಂಬಗಳ ಮೆಲುಕಿನ ಶರಣಾಗತಿಗೊತ್ತು ಗುರಿಯಿಲ್ಲದ ಮೌನಕೆಕೊರಳೊಡ್ಡಿ ನೇಣಿಗೇರಿದವರೆಲ್ಲಥಟ್ಟನೆ ಪ್ರತ್ಯಕ್ಷವಾದ..ಪ್ರೇತಾತ್ಮದಂತೆನರಕಗಳು ಅಂತಸ್ತಿನ ಅರಮನೆಯಉತ್ಸವ ಮೂರ್ತಿಗಳಾಗುವಾಗೆಲ್ಲಬಿಕ್ಕಳಿಕೆಗಳು,ನೀರಿಳಿಯದಾ ಗಂಟಲಲ್ಲಿಉಸಿರ ಬಿಗಿದಾಟಕೆ ಹರಕೆಯ ಜಪತಪನೆತ್ತಿಗಾದ ಗಾಯಕೆ ಸುಣ್ಣದಾ ಶೂಚಿತ್ತದಲ್ಲಿ ಮೂಡಿದ ನಕ್ಷತ್ರಗಳೆಲ್ಲವೂಬಾನ ಹುಡುಕಿ ಹೊರಟಂತೆಮಾನಗಳೆಲ್ಲ ಬಿಕರಿಯಾಗಿಹವುಮಾರುಕಟ್ಟೆಗೂ ಲಗ್ಗೆಯಿಡದೆಸಂದಿಗೊಂದಿಗಳಲ್ಲಿ ಅಡಗಿರುವಗಿರಾಕಿಗಳಿಗೇನು ಕೊರತೆಯಿಲ್ಲಮಾಂಸದ ಮುದ್ದೆ ಯಾವುದಾರೇನುಹರೆಯದಲಿ ಮಾಗಿರಬೇಕು ಅಷ್ಟೇತುಟಿಕಚ್ಚಿ ನರಳುವಾಗೆಲ್ಲ ಟೊಂಕದಾಡಾಬು ಸಡಿಲವಾಗಿ ಕಳಚಿದಂತೆಮನಸಿಗೆ ರುಚಿಸದಿದ್ದರು ಲೋಭವಿಲ್ಲದೇಹದಂಗಗಳಿಗೆ ಮೋಹದ‌ ಉಡುಗೊರೆಇಳೆಯ ಸೇರುವ ಕಾಯ ನಿರ್ಮೊಹಿಮಣ್ಣಾದವರ ಚರಿತ್ರೆ ಅರಹುವವರಿಲ್ಲಸಾವು…ಎಂದೆಂದಿಗೂ […]

ನಾನೋರ್ವ ಕವಿ

ಪ್ರಕಾಶ್ ಕೋನಾಪುರ ನಾನೇನು ಮಾಡಲಿ ನಾನೋರ್ವ ಕವಿಕವಿತೆ ಬರೆಯುವುದೇ ನನ್ನ ಕಾಯಕಅಕ್ಷರಗಳ ಅಭ್ಯಾಸದಲಿ ರೂಪಕಗಳಮೋಹಪಾಶದಲಿ ಪ್ರತಿಮೆಗಳ ಪೇರಿಸಿಭಾವಸನ್ನೀಯಲ್ಲೀ ತೇಲಾಡುವ ಕವಿ ಮೊಗ್ಗು ಹೂ ಹಣ್ಣು ದುಂಬಿ ತರುಲತೆಕಾಗೆ ಗುಬ್ಬಿ ಗಿಳಿವಿಂಡು ಪಾರಿವಾಳಮೊಲ ಹಸು ಕರು ನಾಯಿ ನರಿ ಕುರಿ ತೋಳನದಿ ಬೆಟ್ಟ ಕಾನನ ಸೂರ್ಯ ಚಂದ್ರ ಆಕಾಶಬೈಗು ಬೆಳಗು ಸೃಷ್ಟಿಯ ಸೊಬಗು ವರ್ಣಿಸಿ ವರ್ಣಿಸಿಕವಿತೆಗಳ ಮಹಾಪೂರವೇ ಹರಿಸಿಯಾಯ್ತು ಹೆಣ್ಣಿನ ಮೂಗು ತುಟಿ ಕಟಿ ಕದಪು ಮುಂಗುರುಳುಎದೆಕಳಸ ನಾಭಿ ನಡ ನೀತಂಬ ಕೋಮಲ ಪಾದಪಡುವ ಪಾಡು ತ್ಯಾಗ ಸಹನೆ […]

ಮಳೆಹಾಡು-4

ಆಶಾ ಜಗದೀಶ್ ಒಂದು ತಣ್ಣನೆಯ ರಾತ್ರಿಮಳೆಗೆಅದೆಷ್ಟೋ ವರ್ಷಗಳ ತಪಸ್ಸಿನಂತೆಕಾದು ಕುಳಿತಿದ್ದೆರಾತ್ರಿಗಳಾಗಲೀ ಮಳೆಯಾಗಲೀಒಟ್ಟಾಗಿ ಬಂದೇ ಇಲ್ಲ ಅಂತಲ್ಲಅವು ಒಟ್ಟಾಗಿ ಬಂದ ಒಂದು ದಿನವೂನಾನು ಪ್ರಜ್ಞೆಯಿಂದಿರಲಿಲ್ಲ ಸರಿ ರಾತ್ರಿ ಹೀಗೆ ಜಗತ್ತೇ ನಿದ್ರೆಯ ತೆಕ್ಕೆಯಲ್ಲಿರತಿ ಶಿಖರ ಮುಟ್ಟುತ್ತಿರುವಾಗನಾನು ಮಾತ್ರ ಅದನ್ನು ಧಿಕ್ಕರಿಸಿಮುಂಬಾಗಿಲ ತೆರೆದು ಮಂಜಿನಷ್ಟು ತಣ್ಣಗಿದ್ದಕಲ್ಲ ಮೆಟ್ಟಿಲ ಮೇಲೆ ಕೂರುವಾಗಪರಮ ಚರಮ ಸುಖವನ್ನೂಮೀರಿದೊಂದು ಅನುಭೂತಿಮತ್ತು ಈ ಮಳೆಯ ಮೇಲೆಸಣ್ಣದೊಂದು ಹುಸಿ ಮುನಿಸು ತನ್ನ ರಾತ್ರಿ ಸಖನನ್ನು ಕೂಡುವಅಮೃತಘಳಿಗೆಯ ಬಗ್ಗೆಚಕಾರೆತ್ತದೆ ಸೂಚನೆ ಕೊಡದೆಸುರಿದು ಸೇರಿ ಸರಿದು ಹೋಗಿಯಾಗಿಮರು ಮುಂಜಾನೆ ಮನೆ ಮುಂದೆನೆನ್ನೆಯ […]

ಭಿನ್ನ ಬದುಕು

ಸರಿತಾ ಮಧು ನೀರಿನೊಂದಿಗೆ ನಂಬಿಕೆ ಇಟ್ಟುಮೀನು ಮರಿಗಳ ಅದರೊಳು ಬಿಟ್ಟುಅದಮ್ಯ ಆಸೆಯಿಂದ ದಿನಗಳೆದದ್ದುಅಪರಿಮಿತ ಮಳೆಗೆ ಕನಸೆಲ್ಲವೂಕೊಚ್ಚಿ ಹೋದದ್ದು ಅನೂಹ್ಯ! ಜಲ ಸೌಂದರ್ಯ ನೋಡಲುಮುಗಿಬಿದ್ದ ಜನಸಮೂಹ ಒಂದೆಡೆಅಳಿದುಳಿದ ಕನಸ ಶೋಧಿಸಲುತೆಪ್ಪ ಹತ್ತಿ ಹೊರಟ ಬೆಸ್ತರ ಹುಡುಗಿ ಇನ್ನೊಂದೆಡೆ ಹೂಗಳಂತೆ ಬದುಕು ಸುಂದರವಾದೀತೆಂದುತೆಪ್ಪವನೇರಿ ಹೊರಟಿದೆ ಬಾಲೆಯ ಕನಸುಅವಳ ಮುಗ್ಧ ನಗೆ ಹೂವ ಸೌಂದರ್ಯದಂತೆಬಣ್ಣ ಬಣ್ಣದ ಆಸೆಗಳು ಗರಿಗೆದರಿ ನಿಂತಂತೆ ಹೂವ ಹಿಡಿದು ಅದೇನು ಉಸುರಿದಳೋಅದೂ ತಲೆ ತೂಗಿ ಅವಳೆಡೆಗೆ ನಗುವ ಚೆಲ್ಲಿದೆಆನಂದಮಯ ಸಮಯ ಈರ್ವರ ನಡುವೆಬಾಲೆ ಮತ್ತು ಹೂವು ಜಗದ […]

ವಲಸೆಯ ಹಾದಿಯಲ್ಲಿ ಪುಸ್ತಕ- ಮಲಾಣ್ಲೇಖಕರು- ಶಾಂತಾ ನಾಯ್ಕ ಶಿರಗಾನಹಳ್ಳಿಬೆಲೆ-೩೧೦/-ಪ್ರಕಾಶಕರು- ದೇಸಿ ಪುಸ್ತಕ        ಸೃಷ್ಟಿ ನಾಗೇಶ್ ಒಂದಿಷ್ಟು ಪುಸ್ತಕಗಳನ್ನು ಕಳಿಸಿದ್ದರು. ಅದರಲ್ಲಿ ಮಲಾಣ್ ಕೂಡ ಒಂದು. ನೋಡಿದ ಕೂಡಲೇ ಬೇರೆಲ್ಲ ಕೆಲಸ ಬಿಟ್ಟು ಅದನ್ನೇ ಓದಲಾರಂಭಿಸಿದೆ. ಯಾಕೆಂದರೆ ಅದು ನಾನು ತುಂಬಾ ಗೌರವಿಸುವ ಶಾಂತಾ ನಾಯ್ಕ ಶಿರಗಾನಹಳ್ಳಿಯವರ ಪುಸ್ತಕ. ಹಿಂದೊಮ್ಮೆ ಸುಮಾರು ನಾನು ಹೈಸ್ಕೂಲಿನಲ್ಲಿದ್ದಾಗ ಅವರು ಕಾರವಾರದ ಆಕಾಶವಾಣಿಯಲ್ಲಿದ್ದವರು. ಆಗಲೇ ಇವಳು ಬರೆಯುತ್ತಾಳೆ ನೋಡಿ ಎಂದು ಬೆನ್ನು ತಟ್ಟಿದವರು. ಹೀಗಾಗಿ ಅವರ ಹೆಸರು ನೋಡಿದಾಕ್ಷಣ […]

Back To Top