Month: June 2021

ಬಯಲಾಗುವುದೇ ಜೀವನ?

ಉಡಲು ಬಟ್ಟೆ ಇಲ್ಲದ ಸ್ಥಿತಿಯಿಂದ
ಯಾವ ಬಟ್ಟೆ ಹಾಕಬೇಕೆಂಬ ಗೊಂದಲಕ್ಕೆ ಬಂದು ನಿಲ್ಲುತಾ

ಊಟ ಮುಗಿಸಿದ ನಮ್ಮಿಬ್ಬರ ಕೈಯಲ್ಲಿಯೂ ಮನೆಗೆ ಮುಟ್ಟಿಸುವಂತೆ ನೀಡಿದ ಕೋಳಿ ಮಸಾಲೆ ಡಬ್ಬಗಳ ಚೀಲ ಹಿಡಿದು ಮತ್ತೆ ಮಂಜಗುಣಿ ತಾರಿಯತ್ತ ಸಂತೃಪ್ತಿಯ ಹೆಜ್ಜೆ ಹಾಕಿದೆವು. ದಾರಿಯುದ್ಧದ ನಮ್ಮ ಚರ್ಚೆಯಲ್ಲಿ ಬಿ.ಎ. ಓದು ಮುಗಿಸಿದ ಬಳಿಕ ನಾವು ನೌಕರಿ ಸೇರುವುದಿದ್ದರೆ ಅದು ಸಾಲೆಯ ತಪಾಸಣಾಧಿಕಾರಿಯಾಗಿಯೇ ತೀರಬೇಕು ಎಂದು ಮನದಲ್ಲಿಯೇ ಸಂಕಲ್ಪ ಮಾಡಿಕೊಂಡಿದ್ದೆವು!

ತನ್ನ ಕೋಳಿಗಳು ಸುಮಿತ್ರಮ್ಮನ ಅಂಗಳದಲ್ಲಿ ಹರಡಿದ ಕೊಳಕನ್ನು ತೊಳೆದುಕೊಟ್ಟ ರಾಧಾ ಅವುಗಳ ಮೇಲೆ ಬೇಸರಗೊಂಡು ಮನೆಗೆ ಹೊರಟಳು. ಅವಳ ಸ್ವಚ್ಛತಾ ಅಭಿಯಾನ ಮುಗಿಯುವವರೆಗೆ ತಮ್ಮ ಆವರಣದ ಹೊರಗೆಯೇ ನಿಂತುಕೊಂಡು ಗಮನಿಸುತ್ತಿದ್ದ ಸುಮಿತ್ರಮ್ಮನಿಗೆ ಅವಳು ಹೊರಟು ಹೋಗುತ್ತಲೇ ರಪ್ಪನೆ ಒಂದು ವಿಷಯವು ನೆನಪಾಯಿತು.

ಗಜಲ್

ತಪ್ಪುಗಳು ನಿನ್ನವಾದರೂ ನಿತ್ಯ ದೂಷಿಸಿ ನರಳಿಸಿದೆ
ದೃಢ ಸಂಕಲ್ಪದಿ ಗಟ್ಟಿಯಾಗಬಲ್ಲ ಧೈರ್ಯವಿದೆ ನನ್ನಲ್ಲಿ

ಪೂರ್ವಿಯ ವಿಮಾನಯಾನ

ಮಕ್ಕಳ ಕಲ್ಪನೆಯ ವಿಸ್ತಾರಕ್ಕೆ ಇಂತಹ ಸಾಲುಗಳನ್ನು ನೀಡುತ್ತ…. ಮಕ್ಕಳು ಖುಷಿಯ ಹಾಡು ಹಾಡುತ್ತ ಮೋಡದ ರೆಕ್ಕೆಯ ಮೇಲೇರುವ ಸೋಜಿಗದ ವಿಸ್ತಾರಕ್ಕೆ ತೆರೆದುಕೊಳ್ಳುವಂತೆ ಮಾಡುತ್ತಿರುವ ನಾಗರಾಜ ಶೆಟ್ಟರಿಗೆ ವಂದಿಸುತ್ತ ಪೂರ್ವಿಯೊಂದಿಗಿನ ವಿಮಾನಯಾನದ ಅನುಭವ ಹಾಗೂ ಸಂತಸ ಕನ್ನಡದ ಎಲ್ಲ ಮಕ್ಕಳಿಗೂ ಸಿಗಲಿ ಎಂದು ಆಶಿಸುತ್ತೇನೆ.

ಎಲ್ಲವೂಬರೀನೆನಪು

ಆ ವರ್ಷದ ಮಳೆಗಾಲದಾರಂಭ. ”ಇನ್ನೊಂದೇ ವಾರದ ಗಡುವು” ಇಲಾಖೆಯವರ ಘೋಷಣೆ. ಆಯಿತಲ್ಲ!! ಈ ನೆಲದ ಋಣ ತೀರಿತು. ಆಗಲೇ ಕೆಲವರು ಹೊಸ ಊರು ಸೇರಿದ್ದರು. ಸಂಭ್ರಮವಿಲ್ಲ. ಅಲ್ಲೊಂದು ಇಲ್ಲೊಂದು ಮನೆ, ತೆರಳುಳಿದ ಜನ. ಹಳ್ಳಿಯೆಲ್ಲ ಖಾಲಿ ಖಾಲಿ, ತಿಮ್ಮಕ್ಕನ ಮನಸ್ಸಿನಂತೆ.

ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ

ಪಡಸಾಲೆ

ಕವಿತೆ ಪಡಸಾಲೆ ಮಂಜೇಶ್ ದೇವಗಳ್ಳಿ ಹಟ್ಟಿ ಮುಂದೆ ಹಜ್ಜಾರದಗಲ ಸೂರಡಿ ನೆಲೆಕಂದಯ್ಯನ ಬಳಗ ಬೆರೆತು ಬೆಳೆದ ಜಗ್ಗುಲಿಮನೆಯೊಡೆಯಗೆ ನೆರಳಾಗಿ ತುಸು ನೆಮ್ಮದಿನೆರೆಹೊರೆ ಜನರ ಜೊತೆಗೂಡಿ ಕಳೆದ ಇರುಳುನೆತ್ತಿ ಬಿಸಿಲಿಗೆ ಜಡಿ ಮಳೆಗೆ ಆಸರೆಯ ಗೂಡುಕಣ್ಣಾಮುಚ್ಚಾಲೆ ಚೌಕಬಾರ ಆಣೆಕಲ್ಲ ಆಟವುಕಡ್ಡಿ ಬಳಪದಲಿ ಗೀಜಿ ಸುಣ್ಣದ ಕಲ್ಲ ಅಕ್ಷರವುಬೀಸೊಕಲ್ಲ ಬೀಸಿ ಸೇರ ತುಂಬಿ ಅಳೆದ ಜೋಳಪಡಸಾಲೆಯೊಂದು ಬದುಕ ಕಟ್ಟಿದ ಶಾಲೆಯು ! ************************************

Back To Top