Day: June 22, 2021

ನೀನಿತ್ತ ಹುಟ್ಟು

ಪ್ರೇಮ ತುಂಬಿದ ಮನದಲಿ ಜಗವ ತಬ್ಬಿದ
ಹೊಂಬಣ್ಣದ ಗುಂಡು ಮೊಗದಲಿ
ಹೊಳೆದಿತ್ತು ಕಂಗಳು
ಮನದಲ್ಲಿ ಹರಿದಿತ್ತು ತಿಂಗಳೂರಿನ ತೇರು

ಅಪ್ಪನೆಂಬೋ ಆಗಸ

ಕವಿತೆ ಅಪ್ಪನೆಂಬೋ ಆಗಸ ಯಾಕೊಳ್ಳಿ.ಯ.ಮಾ ಊರ ದೇವಿಯ ಆವಾಹಣೆಮೈಮೇಲೆ ಬಂದ ದಿನ ಊರಗೌಡರಿಗೆ,.ಯಜಮಾನರಿಗೆ,ಅಪ್ಪ‘ಏನರಲೆ ಮಕ್ಕಳ್ರಾ’ ಅಂತಿದ್ದದಿನವೆಲ್ಲಾ ಅವರ ಮುಂದೆಕೈಕಟ್ಟಿ ನಿಲ್ಲುತ್ತಿದ್ದ ಅಪ್ಪನ ,ದೇಹದೊಳಗೆಖಾಯಮ್ಮಾಗಿ ದೇವಿ ಬರಬಾರದೇಅಂದುಕೊಳ್ಳುತ್ತಿದ್ದೆ. ವಾದ್ಯಗ಼ಳ ಸಾಥು‌ ನಡುವೆರಾಗ ತಗೆದು‌ಹಾಡುತ್ತಿದ್ದಅಪ್ಪ, ಥೇಟ್ದೇವಲೋಕದ ಗಂಧರರ್ವನಂತೆಕಾಣಿಸುತ್ತಿದ್ದ ವರುಷವೆಲ್ಲಾ ಜೀತದಾಳಾಗಿದುಡಿವ ಅಪ್ಪ ಮನೆಗೆ ಬಂದೊಡನೆಮೈಮೇಲಿನ ಅರಿವೆಹೊರಗೆ ಕಳೆದು ನೀರಲ್ಲಿತೊಯ್ಯಿಸಿ ಒಳಗೆ ಬರುತ್ತಿದ್ದಆವರೆಗೆ ನಮ್ಮನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲಅರಿವೆ ಕಳೆದ ನಂತರ ನಮ್ಮಅಪ್ಪ ಅನಿಸುತ್ತಿತ್ತು ಕಾಣದೂರಿಗೆ ಅಕ್ಷರದ ಬಿಕ್ಷೆಎತ್ತಲು ನನ್ನ ಕಳಿಸಿ ಮಗಸಾಹೆಬನಾಗಿ ಬರುವಕನಸು ಕಾಣುತ್ತಿದ್ದ ಅಪ್ಪ ನನ್ನ ವಿದ್ಯೆಯ ಚಂದಾ ಕಟ್ಟಲು‌ಕಂಡವರನ್ನೆಲ್ಲ ಹಣಕೇಳುತ್ತಿದ್ದುದನೆನಪಾಗಿ […]

“ಬರಿಯ ಬಯಲು” ……ನೆನೆದು…..!!

ಮಣ್ಣಿನ ಮನೆ ಅಜ್ಜನದ್ದಾಗಿದ್ದರೂ
ಅದರ ‘ರೂಪ ಲಾವಣ್ಯ’ ನೀನೇ
ಹೊಲ ಯಾರದ್ದೋ ಖರೀದಿ ಮಾಡಿದ್ದರೂ
ಅದರ ಮಣ್ಣಿನ ‘ನಿಲುವು ‘ ನೀನೇ

ನನ್ನ ಅಪ್ಪನ ಬಗ್ಗೆ

ಕವಿತೆ ನನ್ನ ಅಪ್ಪನ ಬಗ್ಗೆ ಮಂಜೇಶ್ ದೇವಗಳ್ಳಿ ಆತ ಎಂದೂ ಅಳೆತ ಮಾಡಿ ಏನೂ ನೀಡಿಲ್ಲಆತ ಬೊಗಸೆ ಮೊಗಸೆ ತುಂಬಿ ನೀಡಿದಆತನ ಮನದ ಬಲ ಛಲದಕಳೆ ಮೊಗದಿಆತ ನುಡಿ ನಡೆ ನಾಜುಕಿಗೆ ನೆಲದ ಬಲಆತನ ಬವಣೆ ಬದುಕೆ ನಮ್ಮ ಆಧಾರಆತನ ಹಸಿಗೂಸಿನ ನಗುವಲಿ ನಾವಿನ್ನೂ ಮಗು. ಮತ್ತೆಷ್ಟು ಮೃಷ್ಟಾನ್ನ ಮೊಗದಿ ಮುಂಗುರುಳ ನಗುಏರಿ ಮೇಲ ಕಳೆಯನು ಪಸಲನು ಹದನಾಗಿಸಿರುವೆ,ಇನ್ನೆಷ್ಟು ಇರುಳ ಕದ್ದ ಕನಸಿನ ಬಲವು ನಮ್ಮೊಲವಿಗೆಇಂತಿಷ್ಟು ಸಾಲಾದೆ ತೀರದ ಹಿಂಗಿತಗಳಿಗೆ ಇಂಧನವು,ಮನ್ನಣೆಯ ಹೊಣೆ ನಿನ್ನೆಗಲಿಗೇಕೆ ತುಸು ವಿರಮಿಸುನೀ […]

ಅಪ್ಪ ಮೌನವಾಗಿದ್ದಾನೆ !!!

ಕವಿತೆ ಅಪ್ಪ ಮೌನವಾಗಿದ್ದಾನೆ !!! ಕಾಡಜ್ಜಿ ಮಂಜುನಾಥ ಅಪ್ಪ ಮೌನವಾಗಿದ್ದಾನೆಈಗೀಗ ಮಾತು ಕಮ್ಮೀಮುಂಚೆಯಾದರೂ ಬೈಯುತ್ತಿದ್ದಕೆಲಸ ಮಾಡು ಎನ್ನುತ್ತಿದ್ದದಾರಿ ತಪ್ಪಿದರೆಬೆದರಿಸುತ್ತಿದ್ದಕನಸಿನ ಗೋಪುರ ಮಗನಲಿಕಟ್ಟಿ ನೀರೆಯುತ್ತಿದ್ದಅನಾರೋಗ್ಯಕ್ಕೆ ತಪ್ಪದೆಬೆಟ್ಟದಂತೆ ಜೊತೆ ನಿಲ್ಲುತ್ತಿದ್ದಬೆನ್ನು ತಟ್ಟಿ ಧೈರ್ಯ ತುಂಬುತ್ತಿದ್ಧಎಂದು ಓದಲೇಬೇಕು ಎಂದುಗದರಲಿಲ್ಲಚಾಡಿಕೋರರರಿಗೆ ಕಿವಿಯಾಗಲಿಲ್ಲನಂಬಿಕೆಯ ಗೋಡೆ ಮಗನಲ್ಲಿನಿರ್ಮಿಸಿದಅರಮನೆಯಂತಹ ಸೌಧವಾಗಿಸಿದಬದುಕು ಕಲಿಸಿಬೆವರಲಿ ರಕ್ತ ಹರಿಸಿಸಾಧನೆಗೆ ಬೆನ್ನೆಲುಬಾಗಿ ನಿಂತಕನಸು ನನಸಾಗಿದ್ದಕ್ಕೆಅಪ್ಪ ಮೌನಿಯಾಗಿಖುಷಿ ಪಟ್ಟಿದ್ದಾನೆಭಾರತರತ್ನ ಪಡೆದಂತೆಕಂಬನಿ ಮಿಡಿದಿದ್ದಾನೆಆದರೆಅವನು ಆಡಿದ ಪ್ರತಿ ಮಾತುಕಿವಿಯ ತಮಟೆಯಲ್ಲಿಬಿಜಾಪುರದ ಗೋಲ ಗುಮ್ಮಟದಂತೆಪಿಸುಗುಡುತ್ತಸದಾ ಎಚ್ಚರಿಸುತ್ತಿದೆ…………..

ಅಪ್ಪನ ಸೊಗಸು

ಕವಿತೆ ಅಪ್ಪನ ಸೊಗಸು ರತ್ನಾ ನಾಗರಾಜ್ ಅಪ್ಪನ ಸೊಗಸೆ ಅಮ್ಮ ಅಪ್ಪನ ಮನದಾಸೆ ಅಮ್ಮ ಅಪ್ಪನಿರದೆ ಅಮ್ಮನಿರಲಾರಳು ಅಪ್ಪನ ಅಪ್ಪ ಅಮ್ಮಂದಿರಿÀಗೆ ಅಪ್ಪನೇ ಪ್ರೀತಿಯ ಆಧಾರ ಅಮ್ಮನ ಅಪ್ಪ ಅಮ್ಮಂದಿರಿಗೆ ಆಧರಣೀಯ ಅಳಿಮಯ ಅಪ್ಪನ ಸಹೋದರರಿಗೆ ಅಪ್ಪನೆ ಎಡ ಬಲ, ಬಲ ಭುಜ ಇಂತಿಪ್ಪ ಅಪ್ಪನಿಗೆ ನಾನು ಮುದ್ದಿನ ಕುವರಿ. ನನ್ನ ಅಣ್ಣ ವಂಶದ ಕುಡಿ. ಅಪ್ಪನೆಂದರೆ ಬರಿ ತಂದು ಕೊಡುವ ಅಕ್ಷಯ ಪಾತ್ರೆಯಲ್ಲ, ಅಕ್ಕರೆಯ ತುಂಬು ಪ್ರೀತಿ ಅಂವ ಅಪ್ಪ ಎನ್ನಯ ಪ್ರೀತಿಯ ಅಪ್ಪ ಅವನ […]

ಸಾವು ಸಂಭ್ರಮಿಸುವ ಮೊದಲು…!

ಬವಣೆಯ ಬಾಳಿನಿಂದ ಮುಕ್ತವಾಗಬೇಕಾದರೆ
ಅಲಯದ ಸುಖ ತೊರೆದು
ಬದುಕಿರುವಾಗಲೇ ಬಯಲಾಗಬೇಕು

ಯಾರು ನೀನು !

ಹಾಗಿದ್ದರೆ ಮರೆಯಲಿ ನಿಂತು ಮಾರ್ದನಿಸುವ ನೀನಾರು ?
ಮುಂಜಾನೆ ! ಉರಿಹಗಲು! ಓಕುಳಿಯ ಇಳಿಸಂಜೆ!
ಅಥವಾ ಬಣ್ಣದಂಗಡಿಯಲಿ ಮಿಂದೇಳುವ ಅಂತರಾತ್ಮ

Back To Top