Day: November 17, 2020

ಜಾನ್ ಮಿಲ್ಟನ್ ಕವಿತೆಯ ಅನುವಾದ

ಅಂಧಕಾರದೊಳಗಿಂದ ಇಂಗ್ಲೀಷ್ ಮೂಲ: ಜಾನ್ ಮಿಲ್ಟನ್ ಕನ್ನಡಕ್ಕೆ ವಿ.ಗಣೇಶ್ ನನ್ನ ಬದುಕಿನ ಬೆಳಕ ಹೇಗೆ ಸವಿದಿಹೆನೆಂದುಬಾಳ ಪುಟಗಳ ತಿರುವಿದರೆ ಬರಿ ಕತ್ತಲುಬೆಳಕು ಕತ್ತಲೆ ಮಧ್ಯೆ ಕಳೆದ ಬಾಳನು ಈಗಬೆಳಗಿಸಲು ಛಲ ಹೊತ್ತು ನಿಂತೆ ನಾನು ನನ್ನ ಭಕ್ತಿಗೆ ಮೆಚ್ಚಿ ನೀನಿತ್ತ ವರವೆನಗೆಕಾಣಿಕೆಯ ರೂಪದಲಿ ನಾನು ಪಡೆದಿರುವೆಅದನು ಬಳಸುವ ರೀತಿ ನನಗೆ ತಿಳಿದಿದೆ ಗುರುವೆಬೇರೆ ರೂಪದಿ ಕೊಡಲು ಮುಡುಪನಿಡುವೆ. `ಕಷ್ಟವೇನೇ ಇರಲಿ ಕಾಯಕವ ನೀ ಮಾಡುಅದಕೆ ಫಲ ನೀಡುವುದು ನನ್ನ ಇಚ್ಛೆ’ ಎಂದರಿತೂಅದನು ಮರೆತಿಹ ನಾನು ಬರಿದೆ ಕಾಲವ […]

ಗಜಲ್

ಗಜಲ್ ವಿ.ಹುಸೇನಿ ವಲ್ಲೂರು ಜಿಂದಗಿ ತುಂಬಾ ಬರಿ ಇರುಳ ತುಂಬಿದೆ ನಿನ್ನ ಬಿಟ್ಟು ಹೇಗೆ ಇರಲಿ ಸಖಿ!ಮೊಹಬತ್ತಿನ ತುಂಬಾ ಅರಳಿದ ಇರಳು ಓಡಿಸಬೇಕು ಇಲಾಲು ಹಿಡಿದು ಬಾ ಸಖಿ!! ಹಗಲು ನಾಚಿತು ಮೈ ಬಾಚಿತು ಸೆರಗ ತುಂಬ ಗಂಟು ಕಟ್ಟಿಕೊಂಡು!ಜೀವದೊಳಗ ಜೀವ ನೀನು ಹುಡುಕುತ್ತಿದೆ ಮನಸು ಸನಿಹಕ್ಕೆ ಬಾ ಸಖಿ!! ತುಟಿ ಕಚ್ಚಿ ಹೇಳಬೇಕೆಂದ ಒಂದು ಮಾತು ನನ್ನ ಮನಸಲ್ಲೇ ಉಳಿಯಿತು!ನಾ ಹೋದರು ಮಸಣದ ಗೋರಿ ಮೇಲಿನ ಮರಕ್ಕೊಂದು ಹಾಡು ಕಲಿಸು ಬಾ ಸಖಿ!! ಎಷ್ಟೊಂದು ಆಶೆಗಳು […]

ಬಿಕ್ಕಳಿಸಿದ ಅವ್ವ

ಕವಿತೆ ಬಿಕ್ಕಳಿಸಿದ ಅವ್ವ ಡಾ.ಸುಜಾತಾ.ಸಿ ನವ ಮಾಸ ಹೊತ್ತುರಕ್ತ ಮಾಂಸ ತುಂಬಿಆಕಾರ ಕೊಟ್ಟಗರ್ಭಕ್ಕೆ ಕಪ್ಪನೆಕಾರ್ಮೊಡ ಕವಿದುಬದುಕಿನ ಕ್ಷಣ ಕ್ಷಣವುದುರ್ರಗಮನವಾಗಿಸಂಚಾರಿಸುತ್ತಿರಲುಬೇಡಾ ತಾಯಿಸಾಕು ಮಾಡುಗರ್ಭಧರಿಸಿಧರೆಯನ್ನು ಕಾಣಿಸುವುದು ಹಾಲುಣಿಸುವಾಗಕಚ್ಚಿ ಕಚ್ಚಿ ಹೀರಿದ ಮೊಲೆ ತೊಟ್ಟುಆಕಾಶಕ್ಕೆ ಬಾಯ್‌ತೆರೆದುನಿಂತರು ಹಸಿದ ಹೊಟ್ಟೆಗೆಮಾಂಸದ ಹಾಲುಣಿಸಿನಗುವ ಹಾಗೆ ಮಾಡಿದನಿನಗೆ ಇವತ್ತು ಬೀದಿಗೆತಂದಿಕ್ಕಿದ್ದಾರೆ ಮರುಳರು ನೆತ್ತಿಯ ಬಡಿತ ಹೆಚ್ಚಸಬಾರದೆಂದುಗAಧ ಮಿಶ್ರಿತ ದ್ರವ್ಯವನ್ನುಸವರಿ ಮುದ್ದಗಿ ತಿಡಿದನಿನ್ನ ಕೊಮಲ ಬೆರಳಿಗೆಹಾದಿ ಬೀದಿ ಕಸಗುಡಿಸಲುಹಚ್ಚಿ ಮೆರೆಯುತ್ತಿದ್ದಾರೆಸಾಕು ತಾಯಿ ಧರೆಗೆಎಂದು ಕರೆಯಬೇಡ ಮೆತ್ತನೆಯ ಹಾಸಿಗೆ ಹೊದಿಕೆ ಮಾಡಿಮಲಗಲೆಂದು ಕೈಯನ್ನೆ ದಿಂಬವಾಗಿಸಿಪಕ್ಕಕ್ಕೆ ಜಾರಿ ನಿದ್ರೆ ಮಾಡಿದ […]

ಯೋಗ್ಯತೆಯಲ್ಲ ಯೋಗ ಬೇಕು

ಲೇಖನ ಯೋಗ್ಯತೆಯಲ್ಲ ಯೋಗ ಬೇಕು ಜ್ಯೋತಿ ಬಾಳಿಗಾ “ಯಾಕೆ ಒಳ್ಳೆ ಇಡ್ಲಿ ಹಿಟ್ಟು ಊದಿಕೊಂಡಹಾಗೆ ಮುಖ ಮಾಡಿ ಕೂತಿದ್ದೀಯಾ… ಏನಾಯಿತು ?” ಎಂದು ನನ್ನವರು ಕೇಳಿದಾಗ “ಯಾಕೋ ಮನಸ್ಸು ಸರಿಯಿಲ್ಲ ಕಣ್ರಿ.. ಅಳು ಬರುವ ಹಾಗಿದೆ…” ಎಂದು ನನ್ನ ಮನದ ಬೇಗುದಿಯನ್ನು ತಿಳಿಸದೇ ಮಾತನ್ನು ತಳ್ಳಿ ಹಾಕಿದೆ. “ವಿಷಯ ಏನೂಂತ ಹೇಳಿದ್ರೆ ನನಗೂ ಗೊತ್ತಾಗುತ್ತದೆ, ಅದು ಬಿಟ್ಟು ಮನಸ್ಸು ಸರಿಯಿಲ್ಲಾಂತ ಹೇಳಿದ್ರೆ ಹೇಗೆ …? ಇಡೀ ದಿನ ಓದುವುದು, ಬರೆಯೋದೆ ಆಯಿತು. ಯೋಚನೆ ಮಾಡಿ ಮಾಡಿ ತಲೆ ಹಾಳು ಮಾಡಿಕೊಳ್ಳೋದು […]

ನೀನೊಂದು ಕಾವ್ಯ

ಕವಿತೆ ನೀನೊಂದು ಕಾವ್ಯ ಆನಂದ ಆರ್.ಗೌಡ ತಾಳೇಬೈಲ್ ನೀನೊಂದು ಕಾವ್ಯಭಾವ ಮನದ ಧರೆಯಲಿನಿನ್ನ ನಡಿಗೆಯೊಳಗಿನ ಮಿಲನತೆನಿಗೂಢ ಬೆಳಕು ಬೀರಿದೆ ನಗುವಿನ ಕೆನ್ನೆ ಗುಳಿ ನಕ್ಷತ್ರ ಕಡ್ಡಿಯಹೊಳಪಿನ ವದನ ಆಗಾಗ ಸಹನೆಯಿಂದಜಾರುವ ಕಣ್ಣಹನಿ ಆರಾಧನೆಯ ಹೃನ್ಮನತಬ್ಬಿಕೊಂಡಾಗಿನ ಧನ್ಯತೆನನ್ನ ತೆಕ್ಕೆಯಲ್ಲಿ ಹಾಗೇಹುದುಗುವ ಪರಿ ಎಲ್ಲವೂ ಮೊದಲಿನಂತೆ ಮಧ್ಯಾಹ್ನದ ನೆರಳಿನಂತೆನನ್ನೊಳಗೆ ನೀನಿದ್ದೆಬೆವೆತ ಎದೆ ಮೇಲಿನ ನಿನ್ನ ಮೊಗನನ್ನ ನಿದಿರೆ ಕದ್ದು ಮೆರೆಯುತ್ತಿದ್ದುಮೊದಲ ಸಲುಗೆ ಅಪ್ಪುಗೆಯ ದಾಹಎಲ್ಲವನ್ನೂ ತಣಿಸಿದ ಪರಿಒಲುಮೆಯ ಕಾವ್ಯದಂತೆ ನಿನ್ನ ಮುನಿಸಿನ ಸನಿಹದಸ್ಪರ್ಶದಲಿ ಯಾವುದೇ ಗಾಯವಿಲ್ಲಮಡಿಕೆಯಲಿ ತುಂಬಾನೇಬೇಸಿ ಉಂಡ ನೆನಪು […]

ಅಂಕಣ ಬರಹ ಸೋತು ಗೆದ್ದ ಮನುಷ್ಯ ಸೋತು ಗೆದ್ದ ಮನುಷ್ಯತೆಲುಗು ಮೂಲ : ಮಲ್ಲಾರೆಡ್ಡಿಅನುವಾದ : ಕಸ್ತೂರಿಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೧೦೪ ¥ಪುಟಗಳು :೧೫೨ ಇದು ತೆಲುಗು ಮೂಲದ ಮಲ್ಲಾರೆಡ್ಡಿಯವರ ಆತ್ಮಕಥೆ. ವಿಷಮ ಪರಿಸ್ಥಿತಿಗಳು ತಂದ ನೋವು-ಸಂಕಷ್ಟಗಳಿಂದಾಗಿ ಮಾನಸಿಕವಾಗಿ ನೊಂದು ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡು ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯೊಬ್ಬ ತನ್ನ ಎಲ್ಲಾ ಅನುಭವಗಳನ್ನು ಇಲ್ಲಿ ವಿವರವಾಗಿ ಮನಮುಟ್ಟುವಂತೆ ಹೇಳುತ್ತಾನೆ. ತೀರಾ ಎಳೆಯ ಹುಡುಗನಾಗಿದ್ದಾಗಲೇ ಸೂಕ್ಷ್ಮ ಸಂವೇದನೆಯುಳ್ಳವನಾಗಿದ್ದರಿಂದ ತನ್ನ ಸುತ್ತ ಮುತ್ತ […]

Back To Top