Category: ಕಾವ್ಯಯಾನ

ಕಾವ್ಯಯಾನ

ಹೂ ಬೆಳಗು

ಕವಿತೆ ಹೂ ಬೆಳಗು ಫಾಲ್ಗುಣ ಗೌಡ ಅಚವೆ ಸರಿಯುವ ಕತ್ತಲನ್ನು ಮರದಎಲೆಗಳ ನಡುವೆ ಕುಳಿತ ಹಕ್ಕಿಗಳುತದೇಕ ಚಿತ್ತದಿಂದ ನೋಡುತ್ತಿವೆ ಆಗಷ್ಟೇ ಕಣ್ಣು ಬಿಟ್ಟ ನಸುಕುದೊಸೆ ಹೊಯ್ಯಲುಬೆಂಕಿ ಒಟ್ಟುತ್ತಿದೆ ಹೊಂಗನಸ ನೆನೆದುಒಂದೇ ಸವನೆ ಮುಸುಕುವ ಮಂಜುಮರದ ಎಲೆಗಳ ತೋಯಿಸಿಕಚಗುಳಿಯಿಡುತ್ತಿದೆ ಆಗತಾನೇ ಹೊಳೆ ಸಾಲಿನಲ್ಲಿಮುಖ ತೊಳೆದುಕೊಂಡ ಮೋಡಗಳ ಕೆನ್ನೆಅರಳುವ ಎಳೆಬಿಸಿಲಿಗೆಕೆಂಪಾಗುಗುತ್ತಿದೆ ದಾಸಾಳದ ಹೂಗಳುಹೂ ಕೊಯ್ಯುವ ಪುಟ್ಟಿಯಪುಟಾಣಿ ಕೈಯ ಮುದ್ದು ಮಾಡುತ್ತಿವೆ ತಡವಾಗಿ ಎದ್ದ ಮುತ್ತುಮಲ್ಲಿಗೆಹೂಗಳು ಮುಖಕ್ಕೆ ಇಬ್ಬನಿಯೆರಚಿನಿದ್ದೆಗಣ್ಣುಗಳನ್ನು ತೊಳೆಯುತ್ತಿವೆ ಕಣ್ಣು ತೆರೆದೇ ಸಣ್ಣ ನಿದ್ದೆಗೆ ಜಾರಿದಅಬ್ಬಲಿ ಹೂಗಳನ್ನುಬೀಸಿ ಬಂದ ತಂಗಾಳಿ […]

ಗಝಲ್

ಗಝಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿಯ ಆಳ ಹರವು ತಿಳಿದಿಲ್ಲ ಸಾವೇ ದೂರವಿರುಕಡಲು ಈಜಿ ದೇಹವು ದಣಿದಿಲ್ಲ ಸಾವೇ ದೂರವಿರು ಮಧುಶಾಲೆಯಲಿ ನೆಮ್ಮದಿ ಹುಡುಕುತಿರುವೆ ತಡೆಯ ಬೇಡಸುಖ ಪಡೆಯುವ ಸರದಿಯು ಬಂದಿಲ್ಲ ಸಾವೇ  ದೂರವಿರು ಕೊರೆವ ಚಳಿ ನಡುಗುತಿದೆ ತನು ನೆನಪ ಬಾಹು ಬಂಧನದಲಿಹೊದ್ದ ಒಲವ ಕಂಬಳಿ ಹರಿದಿಲ್ಲ ಸಾವೇ ದೂರವಿರು ಮೋಹನ ಮುರಳಿ ಗಾನಕೆ ಮನ ಸೋತು ಬಂದೆ ನದಿ ತಟಕೆಹೃದಯ ತಣಿಸುವ ಮಾತು ಮುಗಿದಿಲ್ಲ ಸಾವೇ ದೂರವಿರು ತಾಮಸದ ಕರಿ ನೆರಳು ಕರಗಿ ಅರಿವಿನ”ಪ್ರಭೆ” […]

ಅನ್ನದಗಳುಗಳ ಲೆಕ್ಕ..

ಕವಿತೆ ಅನ್ನದಗಳುಗಳ ಲೆಕ್ಕ.. ವಸುಂದರಾ ಕದಲೂರು ಕೈ ಚಾಚಿತು ಒಡಲ ಹಸಿವು, ಅನ್ನದತಟ್ಟೆ ಹಿಡಿದು ಮುಷ್ಠಿ ತುತ್ತಿಗೆ…ಕೈ ಬಿಚ್ಚಿ ಹಾಕಿದರು ಅದರೊಳಗೆ ‘ಕ್ರಾಂತಿ’ ಬೇಕೆಂದು ಸಿಡಿದು ಬೀಳುವ ಹೊಳಪುಅಚ್ಚಿನ ನಾಣ್ಯಗಳನು. ಹಸಿದ ಉದರಕೆ ಓದಲು ಬಾರದು.ತಟ್ಟೆಗೆ ಬಿದ್ದ ಕಹಳೆ ಮೊರೆತದನಾಣ್ಯಗಳು ಕ್ರಾಂತಿಯ ಶ್ವೇತಪತ್ರಓದಿಸಲು ಪೈಪೋಟಿಗೆ ಬಿದ್ದವು.. ಅನ್ನ ಸಿಗುವ ಭರವಸೆಯಿದ್ದ, ತಟ್ಟೆಗೆಬೀಳುವ ಅಗುಳಿನ ಸದ್ದಿಗೆ ಕಾದವರು;ಕೆಂಪು ಉರಿ ಬೆಳಗಿನಲಿ ಉರಿದು, ಸಂಜೆ ಕಪ್ಪಿನಲಿ ನಿಧಾನ ಕರಗಿ, ನಾಳೆಯಾದರೂಹೊಟ್ಟೆ ತುಂಬುವ ಅನ್ನದಗುಳುಗಳ ಕನಸುಕಾಣುತ್ತಾ… ಎವೆಗಳನು ಮುಚ್ಚುತ್ತಿದ್ದರು. ಕಿವುಡು ಕಿವಿಗಳಿಗೆ […]

ಹನಿಗಳು

ಕವಿತೆ ಹನಿಗಳು ನಾಗರಾಜ. ಹರಪನಹಳ್ಳಿ -1-ಮೌನವಾಗಿ ಬಿದ್ದ ದಂಡೆಯಲ್ಲಿಒಂಟಿಯಾಗಿಧ್ಯಾನಿಸುತ್ತಿದೆ ದೋಣಿಬದುಕಿನ ಯಾತ್ರೆ ಮುಗಿಸಿ -2-ಕಡಲ ಅಲೆಗಳ ಸದ್ದುಕೇಳಿಯೂ ಕೇಳದಂತೆಬಿದ್ದಿರುವ ದಂಡೆಯ ಕಂಡುಆಗಸದಲ್ಲಿ ಚಂದ್ರನಗುತ್ತಿದ್ದ -3-ಸಂಜೆ ಗತ್ತಲುದಂಡೆಯಲ್ಲಿ ನಡೆದಾಡುತ್ತಿರುವಜೋಡಿ ನೆರಳುಗಳುನಕ್ಷತ್ರಗಳು ಹಾಡುತ್ತಿರೆಮಗುಮರಳಲ್ಲಿ ಗುಬ್ಬಚ್ಚಿಗಾಗಿಮನೆ ಮಾಡುತ್ತಿತ್ತು -4-ಗಾಳಿ ಸಿಳ್ಳೆಹಾಕುತ್ತಿತ್ತುಕಡಲಲ್ಲಿ ಯಾರೋದೀಪಸಾಲು ಹಚ್ಚಿಟ್ಟಂತೆದೋಣಿಗಳುಬದುಕಿಗಾಗಿಹುಡುಕಾಡುತ್ತಿದ್ದವು ********************************

ನೆನಪು

ಕವಿತೆ ನೆನಪು ಡಾ. ರೇಣುಕಾ ಅರುಣ ಕಠಾರಿ ಮಾಸಿ ಹೋದ ಕಾಗದಅದರ ಮೇಲೆ ಅಪ್ಪ ಬರೆದಿದ್ದ ಅಕ್ಷರಮಡಿಕೆಗಳ ತವರೂರೆ ಆಗಿ ನಿಂತಿತ್ತು.ಏಷ್ಟೋ ಅಕ್ಷರಗಳು ಆ ಮಡಿಚಿಟ್ಟ ರೇಖೆಯೊಳಗೆಸೇರಿಕೊಂಡು ಕಾಣಲು ಕಾಡಿಸುತ್ತಿದ್ದವು.ಎನು ಬರೆದಿರಬಹುದು! ಇದರಲ್ಲಿ ಎಂಬಕುತೂಹಲ ಮತ್ತು ತವಕ ಹೆಚ್ಚಾದವು. ಉಬ್ಬಿದ ಕಾಗದ ಅಲ್ಲಿ ಅಲ್ಲಿ ಚಲ್ಲಿದ ಶಾಹಿಅದರ ಬಣ್ಣೋ ವಿಕಾರಕ್ಕೆ ತಿರುಗಿತ್ತುಅಕ್ಷರಗಳಿಗೆ ಸ್ವಲ್ಪವೂ ನಗು ಇರಲಿಲ್ಲಕೆಳಗಿಂದ ಮೇಲೆಕ್ಕೆಮತ್ತು ಮೇಲ್ಲಿಂದ ಕೆಳಕ್ಕೆಏನೋ ಸಣ್ಣ ಸಣ್ಣ ಸಂಕೇತಗಳುಅಯೋ! ಒಂದು ತಿಳಿತಿಲ್ವಾಲ್ಲ ?ಅಂತಹಿಂದೆ ಮುಂದೆ ಕಾಗದದ ಅಕ್ಕ ಪಕ್ಕನೋಡುತ್ತಿದ್ದಾಗ,.. ಜೋಪಾನವೇ ತುಂಡಾಗಿತುಎಂದು […]

ಎರಡು ಮೊಲೆ ಕರುಳ ಸೆಲೆ

ಕವಿತೆ ಎರಡು ಮೊಲೆ ಕರುಳ ಸೆಲೆ ವಿಶಾಲಾ ಆರಾಧ್ಯ ಮನುಜ ಕುಲವ ಕತ್ತಲಿಂದ ಬೆಳಕಿಗಿತ್ತತೊಡೆಯ ಸೆಲೆಯ ಮಾಯೀ ಕಣಾನವಮಾಸ ಏನೆಂದು ಬಲ್ಲೆಯಾ?ಒಂದೊಂದು ಮಾಸದಲ್ಲೂಒಂದೊಂದು ವೇದನೆಯಗ್ರಹಚಾರವ ಮೀರಿಕೆಸರ ಮುದ್ದೆಗೆ ರೂಹಿತ್ತುಗುಟುಕಿತ್ತ ಕರುಳ ಹೊಕ್ಕುಳು !ಮಾ-ನವರಂಧ್ರದ ನಿನ್ನಧರೆಗಿಳಿಸಿ ಬಸವಳಿದರೂದಣಿವರಿಯದ ಧರಣಿ ಕಣಾ ಹೆಣ್ಣು!!ಪುಣ್ಯ ಕೋಟಿ ಕಾಮಧೇನುಬೀದಿಗಿಳಿದ ಹೋರಿಬಸವನಿಗೆ ಸಮವೇನು?ಹೋಲಿಕೆಯೇ ಗೇಲಿ ಮಾತುಒಂದೇ ಕ್ಷಣ ಬಿತ್ತುವನಿನ್ನ ಗತ್ತಿಗೆಷ್ಟು ಸೊಕ್ಕು?ಒಂದು ಬಸಿರಲುಸಿರುತುಂಬಿ ಕೊಡುವಳೆಲ್ಲರಿಗೂ ಮಿಕ್ಕು!ಒಂದೇ ಕ್ಷಣ ಉರಿದಾರುವಗಂಡೇ ಕೇಳು ದಂಡಧರಣಿಯೋ ಬೂದಿಯೊಳಡಗಿದಮೌನ ಕೆಂಡ ಹಸಿ ಮಾಂಸಮುಕ್ಕುವುದುಸುಲಭ ನಿನ್ನ ದಂಡಕೆ !ಹಲವು ಕೂಸಿಗೊಬ್ಬಳೇಹಾಲನ್ನೀವ ಹೆಣ್ಣಂತೆಎರಡು […]

ಮನ -ಮಸಣದಲ್ಲಿ ಶಾಲೆ

ಕವಿತೆ ಮನ -ಮಸಣದಲ್ಲಿ ಶಾಲೆ ಕಾವ್ಯ ಎಸ್. ಮನ- ಮಸಣ ಅಕ್ಷರಗಳ ವ್ಯತ್ಯಾಸದಲ್ಲಿ ಹುಟ್ಟುವ ಹಳೆಯದಾದರೂ ಹೊಸ ನಂಟು ಮಕ್ಕಳಿಲ್ಲದ ಶಾಲೆ ಮಸಣದ ಭಾಸ ಮಸಣ ಕಾಯುವವನು ಆಲಸಿ ಆಚಾರ್ಯ ಮೌನಕ್ಕೂ ಮೌನ ಕಲಿಸುವ ನಿಶ್ಯಬ್ದತೆ ನಿಗೂಢ ಶಬ್ದದೊಂದಿಗೆ ಆಗಾಗ್ಗೆ ಬಂದು ಏನಾದರೂ ಅರ್ಥ ಕೊಟ್ಟು ಹೋಗ್ವ ತಂಗಾಳಿ ಮನಕ್ಕೆ ಬಡಿದಿದ್ದ ಪೈಶಾಚಿಕತೆ ಶಾಲೆಯ ತುಂಬೆಲ್ಲಾ ನಲಿದಾಡುತ್ತಿದೆ ಮಕ್ಕಳ ಆರ್ಭಟಕ್ಕೆ ಗುಡುಗಿದರು ಅಲುಗದ ಶಾಲೆ ಗುಂಡುಸೂಜಿ ನೆಲಅಪ್ಪಿದರು ಕರಾಳ ಅಳುವು ನೀರಿದ್ದರು ಜೀವ ಕಳೆದುಕೊಂಡು ತೊಟ್ಟಿಕ್ಕುತ್ತಿರುವ ನೀರಕೊಳವೆಗಳು […]

ಅವ್ವ

ಕವಿತೆ ಅವ್ವ ಡಾ. ಅರಕಲಗೂಡು ನೀಲಕಂಠ ಮೂರ್ತಿ ಅವ್ವಮೂವತ್ತು ಮಳೆಗಾಲಮತ್ತಷ್ಟೇ ಬೇಸಿಗೆ ಬಿಸಿಲುಕೆಲವೊಮ್ಮೆ ಬೆಂಕಿಯುಗುಳುಎಲ್ಲ ಸವೆಸಿದ್ದಾಯ್ತು ನೀ ಇಲ್ಲದೆ! ಅಂದು –ನಿನ್ನ ಹೂತು ಬಂದಆ ಮಣ್ಣ ಅಗುಳ ಕಣ ಕಣಜೊತೆಗೆ ಒಡೆದ ಮಡಕೆಯ ಚೂರು ಪಾರುಇನ್ನೂ ಬಿಟ್ಟಿಲ್ಲ ನನ್ನಮೆದುಳಲ್ಲವಿತು ಕಸಿಯಾಗಿಸೂಸುವುದುಅರಳಿ ದಿನಕ್ಕೊಂದು ಹೊಸ ಹೂವಾಗಿ…ಹೂಸ ಹೊಸ ಕಂಪು!ಮತ್ತು ಕತ್ತು ಹಿಸುಕುವ ನೆನಪು… ಒಂದು ದಿಕ್ಕಿಗೆ ಕಾಚು ಕಡ್ಡಿಪುಡಿಇನ್ನೊಂದೆಡೆ ಮರೆಮಾಚಿದ ರೋಗರುಜಿನಮತ್ತು ನಿತ್ಯ ನಂಜಾದದಾಯಾದಿ ಅವಿಭಕ್ತಕುಟುಂಬ!ಕೊನೆಗೆ ಹೆಣಗೆಲಸದ ಹೆಣಗು –ಈ ನಾಲ್ಕು ಶೂಲಗಳು ನಾಲ್ಕು ದಿಕ್ಕಿನಹೆಗಲಾಗಿ ಹೊತ್ತು ಹೋದದ್ದುಇಂದಿಗೂ […]

ಗಝಲ್

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಅದ್ಯಾವ ಗಳಿಗೆಯಲಿ ನನ್ನಿಂದ ದೂರವಾದೆ ಗೆಳತಿಮನದೊಳು ಭಾವನೆಗಳ ಬಿತ್ತಿ ಮರೆಯಾದೆ ಗೆಳತಿ ಹೃದಯದಿ ಪ್ರೀತಿ ಬಸಿದು ಮೌನ ನೀಡಿದೆಯಲ್ಲಸಾವಿನ ಮನೆ ಅಂಗಳದಿ ಹೆಜ್ಜೆ ಮೂಡಿದೆ ಗೆಳತಿ ಮೊಳ ಹೂವು ತಂದವರು ಶವಕೆ ಅರ್ಪಿಸಿದ್ದಾರೆನನ್ನ ಹೆಣದ ಮೆರವಣಿಗೆಯುದ್ದಕೂ ಧ್ಯಾನಿಸಿದೆ ಗೆಳತಿ ಹಾದಿ ಬೀದಿಯಲಿ ನಮ್ಮಿಬ್ಬರದೆ ಮಾತು ಜನರ ಬಾಯಲ್ಲಿಧರೆಯ ನಾಚಿಸುವ ಜೋಡಿ ಎಂದು ಹೊಗಳಿದೆ ಗೆಳತಿ ಲೋಕ ನಿಂದೆ ಹೊಗಳಿಕೆಯ ಕೇಳದೆ ಸುಮ್ಮನಿದ್ದೆವುಒಳಗಾದ ಗಾಯ ನೋವು ಯಾರಿಗೂ ತಿಳಿಯದೆ ಗೆಳತಿ ಮರುಳ ಸಾಕಿನ್ನೂ ಲೋಕದ […]

ಗಜಲ್

ಗಝಲ್ ರಜಿಯಾ ಬಳಬಟ್ಟಿ ಬಂದ ದಾರಿಗೆ ಸುಂಕವಿಲ್ಲದಂತೆ ಹೋಗಲೇಬೇಕೀಗ.ಬಂದ ಹಿಸಾಬು ಮುಗಿಯದಿದ್ದರೂ ಮರಳಲೇಬೇಕೀಗ. ಅರಿತವರಾರೋ ತಿರುಗಿಬಿದ್ದವರಾರೋ ಬಂಧ ದೂರಾದಾಗ,ಎಲ್ಲ ಕೊಂಡಿಗಳ ಕಳಚಿ ಹೊರಳಲೇ ಬೇಕೀಗ. ನನ್ನ ನಿನ್ನ ಮಾತು ಅದೆಷ್ಟು ಬಾಕಿ ಉಳಿದರೇನೀಗ,ಗಾಡಿಯ ಪೆಟ್ರೋಲು ತೀರಿದಾಗ ನಡೆದು ಹೋಗಲೇಬೇಕೀಗ. ಅದೆಷ್ಟು ಕಸ ಮುಸುರೆಯ ತಾಣವಾದರೇನೀಗ,ಮೂಗು ಮುಚ್ಚಿ ಕೈ ಬಿಡಿಸಿ ಹೆಜ್ಜೆ ಹಾಕಲೇಬೇಕೀಗ. ನಿನ್ನ ಪ್ರೀತಿಯ ಹಂಬಲಿಸಿ ಅದೆಷ್ಟು ಮಿಡಿದರೇನೀಗ,ಅಗಲಿಕೆಯನು ಬೆನ್ನಿಗಂಟಿಸಿ ರಾಜಿ ಚಡಪಡಿಸುವ ದಿನಗಳೇ ಎಲ್ಲ ಈಗ ******************************************

Back To Top