ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಗದದ ಮೇಲೆ
ಬರೆಯಬೇಕೆಂದ ಸಾಲುಗಳು
ಇದ್ದಲ್ಲೇ ಕರಗಿ
ಹೋದವು ಸುಮ್ಮನೇ
ಗೆರೆಗಳ ಹಾಕಿ
ಚಿತ್ರವಾಗಬೇಕಾದ ಚಿತ್ರಗಳೂ
ರಸ್ತೆಗಳಾದವು
ಮರದ ನೆರಳಾಗಿ
ಉಳಿಯಬೇಕಾದ ಹೂವುಗಳು
ಹಣ್ಣಿಗಾಗಿ ಇಳೆ ಸೇರಿತು
ಕಾಲದ ಸಹಜ
ಓಟದ ಹರಿವಿಗೆ
ಬಯಲು ನದಿಯಾಯಿತು
ಕಡಲು ಬದುಕಾಗಿ
ಜೀವದ ಓಟ ಸಾಗಿತು
 ಮರದ ಮೇಲೊಂದು ಹಕ್ಕಿ
ಕುಳಿತು ಗೂಡು ಕಟ್ಟುವುದು
ಹೇಗೆ ಎಂದು ನೋಡುತ್ತಿತ್ತು
ಹಾರಿ ಸಾಗಿ ಬದುಕಿನ
ಉಸಿರಿಗೆ ಉಸಿರಾಗಿ
ಕಣ್ಣೊಳಗೆ ಜಗವ
ತುಂಬುತ್ತಿತ್ತು ಸುಮ್ಮನೇ
ಗದ್ದೆಯ ಹಸಿರಿಗೆ
ಚಿಗುರು ಮೂಡಿತ್ತು
ಮತ್ತೆ ಮೋಡದಿ
ಮಳೆ ಹನಿಯ ಚಿತ್ರ
ತಾನಾಗಿ ಮೂಡಿ
ಜಗದಗಲದ ನೆಲಕೆ
ತಂಪು ಹರಡಿತ್ತು
ಕಾಗದದ ಮೇಲೆ
ಮೂಡಿದ ಬಣ್ಣಗಳೆಲ್ಲಾ
ಗಾಳಿಯಲ್ಲಿ ತೇಲಿ
ನೆಲಕೆ ಇಳಿದಿತ್ತು
ಮತ್ತೆ ಚಿತ್ರವಾಗುತ್ತ
ನೆಲದೊಳಗೆ ಸೇರಿತ್ತು…….

About The Author

1 thought on “ನಾಗರಾಜ ಬಿ.ನಾಯ್ಕ ಅವರ ಕವಿತೆ”

  1. ಬದುಕು ಪ್ರಕೃತಿ ಒಂದಕ್ಕೊಂದು ಬೆಸೆದು ಕವನ ಸೌಂದರ್ಯ ಹೆಚ್ಚಿಸಿಕೊಂಡಿದೆ.

Leave a Reply

You cannot copy content of this page

Scroll to Top