ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮನೆಯೆಂದರೆ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಮನೆಯೆಂದರೆ” ಮನೆಯೆಂದರೆ ಕಲ್ಲು ಇಟ್ಟಿಗೆಯ ಗೂಡಲ್ಲಪ್ರೀತಿ ವಿಶ್ವಾಸ,ನಂಬಿಕೆಯ ನೆಮ್ಮದಿಯ ನೆಲೆ ಮನೆಯೆಂದರೆ ಬಣ್ಣ ಬಣ್ಣದ ಚಿತ್ತಾರದ ಗೋಡೆಗಳಲ್ಲಮನ ಮನ ಬೆಸೆಯುವ ಮಮತೆಯ ಮಹಾಲಯ ಮನೆಯೆಂದರೆ ಶ್ವಾನದ ಎಚ್ಚರಿಕೆ ಫಲಕ ಹಾಕುವುದಲ್ಲಭರವಸೆ ಮೂಡಿಸುವ ಮುಕ್ತ ದೇವಾಲಯ ಮನೆಯೆಂದರೆ ಭವ್ಯ ಬಂಗಲೆಯಲ್ಲನೊಂದವರಿಗೆ ಸಾಂತ್ವಾನವೀಯುವ ನ್ಯಾಯಾಲಯ ಮನೆಯೆಂದರೆ ಆಸ್ತಿ ಅಂತಸ್ತಿನ ಅರಮನೆಯಲ್ಲತತ್ವಾದರ್ಶ ಶರಣ ಸಂಸ್ಕೃತಿಯ ಸಂಗಮ ಮನೆಯೆಂದರೆ ಅಷ್ಟ ದಿಕ್ಪಾಲಕರು ಸುಳಿದಾಡುವುದಲ್ಲಸಹೃದಯತೆ ಶಾಂತಿ ಸಮಾಧಾನದ ಸಾಗರ ಮನೆಯೆಂದರೆ ವಾಸ್ತು ನೋಡಿ ವಾಸ್ತವ ಮರೆಯುವುದಲ್ಲದಯೆ ಕರುಣೆ ಮನುಜಮತದ ವಿಶ್ವವಿದ್ಯಾಲಯ ಡಾ. ಗೀತಾ ದಾನಶೆಟ್ಟಿ ಮನೆಯೆಂದರೆ ಕಲ್ಲು ಇಟ್ಟಿಗೆಯ ಗೂಡಲ್ಲಪ್ರೀತಿ ವಿಶ್ವಾಸ,ನಂಬಿಕೆಯ ನೆಮ್ಮದಿಯ ನೆಲೆ ಮನೆಯೆಂದರೆ ಬಣ್ಣ ಬಣ್ಣದ ಚಿತ್ತಾರದ ಗೋಡೆಗಳಲ್ಲಮನ ಮನ ಬೆಸೆಯುವ ಮಮತೆಯ ಮಹಾಲಯ ಮನೆಯೆಂದರೆ ಶ್ವಾನದ ಎಚ್ಚರಿಕೆ ಫಲಕ ಹಾಕುವುದಲ್ಲಭರವಸೆ ಮೂಡಿಸುವ ಮುಕ್ತ ದೇವಾಲಯ ಮನೆಯೆಂದರೆ ಭವ್ಯ ಬಂಗಲೆಯಲ್ಲನೊಂದವರಿಗೆ ಸಾಂತ್ವಾನವೀಯುವ ನ್ಯಾಯಾಲಯ ಮನೆಯೆಂದರೆ ಆಸ್ತಿ ಅಂತಸ್ತಿನ ಅರಮನೆಯಲ್ಲತತ್ವಾದರ್ಶ ಶರಣ ಸಂಸ್ಕೃತಿಯ ಸಂಗಮ ಮನೆಯೆಂದರೆ ಅಷ್ಟ ದಿಕ್ಪಾಲಕರು ಸುಳಿದಾಡುವುದಲ್ಲಸಹೃದಯತೆ ಶಾಂತಿ ಸಮಾಧಾನದ ಸಾಗರ ಮನೆಯೆಂದರೆ ವಾಸ್ತು ನೋಡಿ ವಾಸ್ತವ ಮರೆಯುವುದಲ್ಲದಯೆ ಕರುಣೆ ಮನುಜಮತದ ವಿಶ್ವವಿದ್ಯಾಲಯ ಡಾ. ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮನೆಯೆಂದರೆ” Read Post »

ಇತರೆ, ಲಹರಿ

“ಪ್ರೇಮ ವೈಫಲ್ಯ” ಕಾವ್ಯ ಸುಧೆ ಅವರ ಲಹರಿ

ಲಹರಿ ಸಂಗಾತಿ ಕಾವ್ಯ ಸುಧೆ “ಪ್ರೇಮ ವೈಫಲ್ಯ” ಹೀಗೆ ಒಮ್ಮೆ ಏನೋ ಕೆಲಸದ ನಿಮಿತ್ತ ಪರ ಊರಿಗೆ ಪ್ರಯಾಣ ಬೆಳೆಸಿದ್ದೆ. ಮನೆಯಿಂದ ರೈಲ್ವೆ ಸ್ಟೇಷನ್ ಗ್ ತಲುಪಿ ಟ್ರೈನ್ ಹಿಡಿದು ಒಂದು ಸೀಟ್ ಗಿಟ್ಟಿಸಿ ಕೊಳ್ಳುವುದೇ ಒಂದು ಸಾಧನೆ ಈಗಿನ ಕಾಲದಲ್ಲಿ ಎಲ್ಲಿಂದ ಎಲ್ಲಿಗೆ ಹೋಗಿ ಜನವೋ ಜನ, ನನಗೆ ಒಮ್ಮೊಮ್ಮೆ ಮನೆಯಲ್ಲಿ ಯಾರೂ ಇರುವುದಿಲ್ಲವೇ ಎಲ್ಲರೂ ಎಲ್ಲಿಗೆ ಹೀಗೆ ಹೋಗುತ್ತಾರೆ ಎಲ್ಲಿ ನೋಡಿದರು ಜನಗಳ ಜಾತ್ರೆ ಎಂದನಿಸುವುದುಂಟು.ಹಾಗೆಯೇ ಯೋಚಿಸುತ್ತ ಕುಳಿತಿರಲು ಯಾರದೋ ಮೊಬೈಲ್ ನಿಂದ ಹಾಡೊಂದು ಕೇಳಿಸಿತು ಅದು ನನ್ನ ಗಮನ ಸೆಳೆಯಿತು ಅದೊಂದು ಭಾವಗೀತೆ ಮೌನದಲ್ಲಿ ಅಳು ಮಾತಿನಲ್ಲಿ ನಗುಎಂಬ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಸಾಹಿತ್ಯದ ಅರ್ಥಗರ್ಭಿತ ಹಾಡು ನೀವೂ ಒಮ್ಮೆ ಕೇಳಬೇಕಸಾಹಿತ್ಯ :   ಮೌನದಲ್ಲಿ ಅಳು ಮಾತಿನಲ್ಲಿ ನಗುನಿನಗೆ ನಿನ್ನ ಹೆಗಲುಜಗದ ಎದುರಿಗೆ ಹರಡಿ ಕುಳಿತರೆನೋವಿಗಿಲ್ಲ ಮಡಿಲು ತಬ್ಬಿದ ನೆಲವೆ ಕುಸಿದು ಬಿದ್ದರೆದೂರುವೆ ಯಾರನು ಕರೆದು?ನಡೆಯಲೆ ಬೇಕು ಒಬ್ಬರೆ ಇಲ್ಲಿಬುತ್ತಿಯ ಹಂಗನು ತೊರೆದು ಕಣ್ಣಿಗೆ ಕಾಣದ ಮರೆಗಿನ ಅಲಗೆನಿನ್ನ ಗುರಿಯು ಯಾರಿಲ್ಲಿ?ಎಲ್ಲವ ಕಳಚಿ ಕುಳಿತಿಹ ಜೀವಕೆಹೆದರಿಕೆ ಏನಿಹುದಿಲ್ಲಿ? ಹೇಗೋ ಏನೋ ಮುಗಿವುದು ಸಮಯಯಾವುದು ಇಲ್ಲಿ ಅನಂತ?ವೇಷವ ಕಳಚಿ ನಡೆಯುವ ಬದುಕುಪಾತ್ರದೊಳಗೆ ಜೀವಂತ!! ಹೌದಲ್ಲವೇ ನಿಜ ಇದರೊಂದಿಗೆ ಯೋಚಿಸಿದಾಗ ಎಷ್ಟೋ ಜನ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಶರಣಾಗುವುದು, ಎಲ್ಲವನ್ನು ಕಳೆದುಕೊಂಡವರ ಹಾಗೆ ಜೀವನದಲ್ಲಿ ಇನ್ನೇನು ಇಲ್ಲ ಎಂದು ನೋವನನುಭವಿಸುವುದನ್ನು ಕಂಡಿದ್ದೇವೆ. ಅದರ ಬಗ್ಗೆ ಹೀಗೊಂದು ಚಿಂತನೆ.ಮಾನವ ಸಂಬಂಧಗಳು ತೀರಾ ಸಂಕೀರ್ಣ ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಪ್ರೇಮ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು.ರಾಧೆಕೃಷ್ಣ ರ ಪ್ರೇಮದ ಬಗ್ಗೆ ಎಲ್ಲರಿಗೂ ತಿಳಿದಿರುವುದೇ ಅವರು ಮೋಹದ ಪರಾಕಾಷ್ಠೆ, ಪ್ರೀತಿಯ ವೈಭೋಗದಲ್ಲಿ ಅನುಭಾವಿಕ ದೈವಿಕ ಪ್ರೇಮದ ಪ್ರತಿಮೆಗಳು. ಅವರು ವಿದ್ವಂಸಕ ಪ್ರೀತಿಗೆ ಉಪಕ್ರಮ ಪ್ರತ್ಯೌಷಧ. ಆಕಾಂಕ್ಷೆಗಳಿಲ್ಲದ ದೈಹಿಕ ಬಯಕೆಯ ವಾಂಛೆಯಿಂದ ಹೊರತಾದ ಸಮರ್ಪಣಾ ಪ್ರೇಮಭಾವ.ಆದರೆ ಇಂದು ಅದನ್ನು ಹುಡುಕುತ್ತ ಭ್ರಮ ನಿರಸನದ ದಾರಿ ಹಿಡಿದವರೇ ಬಹಳ. ಅಪರೂಪದಲ್ಲೊಂದು ಅಂತಹ ಶ್ರೀಮಂತ ಪ್ರೇಮ ದಕ್ಕಿಸಿಕೊಂಡವನ ಜೀವನ ಪಾವನ. ಸ್ವಚ್ಛ ಸರಳ ಶುಧ್ಧ ಮನಸ್ಸು ತನ್ನದೆನ್ನುವ ಅಪರಿಮಿತ ಆನಂದವೇ ಸಾಕ್ಷಾತ್ಕಾರದ ನೆಲೆ. ಗಂಡು ಹೆಣ್ಣುಗಳ ಬದುಕಿನ ಸವಾರಿಯಲ್ಲಿ ಕೈಗೆಟುಕಿದ್ದೆಲ್ಲ ಸಿಹಿಯಲ್ಲ. ನಮ್ಮ ಸುತ್ತಲಿನ ಪ್ರೀತಿ ಪಾತ್ರರೊಡನೆ ಅನುಭವಿಸಿದ ಕಳೆದ ಕ್ಷಣಗಳೆಲ್ಲ ಎಲ್ಲವೂ ಸಂತಸವನ್ನು ನೀಡುವುದಿಲ್ಲ. ಕೆಲವೇ ಕೆಲವು ಬದುಕಿನುದ್ದಕ್ಕೂ ಖುಷಿ ನೀಡುತ್ತ ಸಂಬಂಧಗಳ ಇನ್ನಷ್ಟು ಗಾಢವಾಗಿಸುತ್ತ ಹೋಗುತ್ತವೆ. ಪ್ರೇಮ ವೈಫಲ್ಯವು ತೀವ್ರವಾದ ನೋವನ್ನು ಉಂಟುಮಾಡುತ್ತದೆ, ಆದರೆ ಅದು ನಿಮ್ಮ ಜೀವನದ ಅಂತ್ಯವಲ್ಲ. ಇದನ್ನು ಐಸ್‌ಕ್ರೀಮ್ ಕೋನ್ ಕೈಯಿಂದ ಜಾರಿ ಬಿದ್ದಂತೆ ಎಂದು ಭಾವಿಸಿ; ಅದು ಬೇಸರದ ಸಂಗತಿಯಾದರೂ, ಜಾರಿ ಹೋದದ್ದು ನಮ್ಮದಲ್ಲ ಅಲ್ಲವೇ….. ಪ್ರೀತಿ ಎಂದರೆ ನಿಮ್ಮ ಪಾಲಿಗೆ ಏನು? ಯಾರ ಬಗ್ಗೆಯಾದರೂ ವಿಶೇಷ ಕಾಳಜಿ ವಹಿಸುವುದು, ವಿಶೇಷ ವ್ಯಕ್ತಿಯೊಬ್ಬರಿಗಾಗಿ ಸಾಮಾನ್ಯಕ್ಕಿಂತ ಹೆಚ್ಚಿನದನ್ನು ಮಾಡುವುದು ಅಥವಾ ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಯಾರ ಮೇಲಾದರೂ ಅಪಾರ ಪ್ರೀತಿಯನ್ನು ಹೊಂದುವ ಭಾವನೆಯನ್ನು ನೀವು ಖಂಡಿತವಾಗಿಯೂ ಅನುಭವಿಸಿರುತ್ತೀರಿ. ಪ್ರೀತಿಯ ಕುರಿತಾದ ನಿಮ್ಮ ವ್ಯಾಖ್ಯಾನ ಬೇರೆಯಾಗಿರಬಹುದು, ಆದರೆ ಪ್ರೀತಿ ಎಂಬುದು ಎಲ್ಲೆಡೆ ವ್ಯಾಪಿಸಿದೆ ಮತ್ತು ನೀವು ಅದರೊಂದಿಗೆ ಖಂಡಿತವಾಗಿಯೂ ಪರಿಚಯ ಮಾಡಿಕೊಂಡಿರುತ್ತೀರಿ. ಪ್ರೇಮದಲ್ಲಿರುವುದೇ ಜಗತ್ತಿನ ಅತ್ಯಂತ ಅದ್ಭುತವಾದ ಅನುಭವ; ಆದರೆ ಆ ಪ್ರೀತಿ ಪರಸ್ಪರ ವಿನಿಮಯವಾಗದಿದ್ದಾಗ, ಅದಕ್ಕೆ ತಕ್ಕುದಾದ ತೀವ್ರ ವೇದನೆ ಉಂಟಾಗುತ್ತದೆ ಮತ್ತು ನಿಮ್ಮ ಪ್ರಪಂಚವೇ ಕೊನೆಗೊಳ್ಳುತ್ತಿದೆ ಎಂಬ ಭಾವನೆ ಮೂಡಬಹುದು. ಆದಾಗ್ಯೂ, ಪ್ರೇಮ ಸಂಬಂಧವೊಂದು ವಿಫಲವಾದ ನಂತರವೂ ಜೀವನ ಮುಂದುವರಿಯುತ್ತದೆ. ಸಂಬಂಧವೊಂದು ಮುರಿದುಬಿದ್ದಾಗ ಉಂಟಾಗುವ ನೋವು ಅತ್ಯಂತ ಕಠಿಣವೆನಿಸಿದರೂ, ಪ್ರೀತಿಯೊಂದಿಗೆ ನೋವಿನ ಸಾಧ್ಯತೆಯೂ ಇದ್ದೇ ಇರುತ್ತದೆ. ನೋವನ್ನು ಅನುಭವಿಸಲು ಇಷ್ಟಪಡದಿದ್ದರೆ ಪ್ರೀತಿಸಲು ಸಾಧ್ಯವಿಲ್ಲ. ನಿಮ್ಮ ಸಂಗಾತಿಯು ನಿಮ್ಮ ಪ್ರೀತಿಗೆ ಪ್ರತಿಯಾಗಿ ಪ್ರೀತಿಯನ್ನು ನೀಡದಿದ್ದಾಗ ಅದನ್ನು ಒಪ್ಪಿಕೊಳ್ಳುವುದು ನಿಮಗೆ ಕಷ್ಟವಾಗಬಹುದು, ಆದರೆ ಜೀವನವನ್ನು ಮುಂದುವರಿಸಲು ನೀವು ಅದನ್ನು ಎದುರಿಸಿ ಮುಂದುವರೆಯಲೇ ಬೇಕು. ಪ್ರೇಮದಲ್ಲಿನ ವೈಫಲ್ಯವು ಜೀವನದ ಅಂತ್ಯವಲ್ಲ; ಬದಲಿಗೆ, ನಿಮ್ಮ ಜೀವನದ ಪಯಣದಲ್ಲಿ ನಿಮ್ಮ ಸಂಗಾತಿಯ ಸ್ಥಾನವನ್ನು ಮುಂದೆಂದಾದರೂ ಇನ್ನೊಬ್ಬರು ತುಂಬಲಿದ್ದಾರೆ ಎಂಬುದನ್ನು ಮಾತ್ರ ಅದು ಸೂಚಿಸುತ್ತದೆ. ಆದ್ದರಿಂದ, ಆ ವಿಫಲ ಸಂಬಂಧವನ್ನು ಹಿಂದಕ್ಕೆ ಹಾಕಿ ಮುಂದೆ ಸಾಗಿರಿ; ಆಗ ಮಾತ್ರ ಭವಿಷ್ಯವನ್ನೂ ಮತ್ತು ಅದು ನಿಮಗಾಗಿ ಕಾದಿರಿಸಿರುವ ವಿಷಯಗಳನ್ನೂ ನೀವು ಅಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಅತ್ಯಂತ ಸೂಕ್ತವಾದ ಸಂಬಂಧವು ಯಾವಾಗ ನಿಮ್ಮ ಜೀವನಕ್ಕೆ ಬಂದು ನಿಮ್ಮ ಗಮನ ಸೆಳೆಯುತ್ತದೆ ಎಂಬುದು ನಿಮಗೆ ತಿಳಿದಿರುವುದಿಲ್ಲ. ವಿಫಲವಾದ ಪ್ರೇಮ ಸಂಬಂಧವನ್ನು ತಕ್ಷಣವೇ ಮರೆಯಲು ಸಾಧ್ಯವಾಗದಿದ್ದರೂ, ನೀವು ತಾಳ್ಮೆಯಿಂದಿರಬೇಕು ಮತ್ತು ಚೇತರಿಸಿಕೊಳ್ಳಲು ನಿಮಗೆ ನೀವೇ ಸ್ವಲ್ಪ ಸಮಯವನ್ನು ನೀಡಬೇಕು. ನಮ್ಮ ತಪ್ಪುಗಳನ್ನು ಗುರುತಿಸುವುದರಲ್ಲಿ ಮತ್ತು ಅವು ಇನ್ನು ಮುಂದೆ ತಪ್ಪುಗಳಾಗದೇ ಇರುವವರೆಗೂ ಅವುಗಳೊಳಗೆ ಆಳವಾಗಿ ಮುಳುಗುವುದರಲ್ಲಿ ಅನುಗ್ರಹವಿದೆ. ವೈಫಲ್ಯದೊಳಗೆ ಜೀವನ ಪಾಠಗಳಿವೆ. ವೈಫಲ್ಯವು ಮನುಷ್ಯನಾಗಿ ನಮ್ಮ ಮೌಲ್ಯದ ಬಗ್ಗೆ ಅಲ್ಲ, ಆದರೆ ಸ್ವತಂತ್ರ ಮತ್ತು ಅವಲಂಬಿತ ಕ್ಷಣಗಳು ಮತ್ತು ಅವುಗಳಿಂದ ನಾವು ಕಲಿಯಬಹುದಾದ ಸಣ್ಣ ಅಥವಾ ದೊಡ್ಡ ಪಾಠಗಳ ಬಗ್ಗೆ. ವೈಫಲ್ಯದಲ್ಲಿರುವ ಸಾಧ್ಯತೆಗಳನ್ನು – ಅಂದರೆ ಅದರಲ್ಲಿರುವ ನಗು, ಸಂತೋಷ ಮತ್ತು ಹಾಸ್ಯವನ್ನು – ಕಾಣಲು ಕಲಿಯುವುದರಿಂದ ತಿರಸ್ಕಾರ, ಅವಮಾನ ಅಥವಾ ಸ್ವಯಂ-ಮೌಲ್ಯದ ಬಗೆಗಿನ ಸಂಶಯದಿಂದ ಉಂಟಾಗುವ ನೋವು ಮಾಯವಾಗುವುದಿಲ್ಲ. ವೈಫಲ್ಯವು ಈಗಲೂ ನೋವುಂಟುಮಾಡುತ್ತದೆ ಮತ್ತು ಅಹಿತಕರವಾಗಿಯೇ ಇರುತ್ತದೆ. ಆದರೆ, ವೈಫಲ್ಯದ ಕುರಿತಾದ ನಮ್ಮ ಹೊಸ ದೃಷ್ಟಿಕೋನವು, ಯಾವುದೇ ಅವಕಾಶವಿಲ್ಲ ಎಂದು ನಮಗೆ ಅನ್ನಿಸಿದಾಗಲೂ ಅದರಲ್ಲಿರುವ ಅವಕಾಶ ಮತ್ತು ಸಹಜತೆಯನ್ನು ಅಪ್ಪಿಕೊಳ್ಳಲು ನಮಗೆ ಕಲಿಸುತ್ತದೆ.ಆದ್ದರಿಂದ ಸಹಜವಾಗಿ ವಾಸ್ತವವನ್ನು ಒಪ್ಪಿಕೊಂಡು ಅಪ್ಪಿಕೊಂಡು ಜೀವನವನ್ನು ಸಂತೋಷದಿಂದ ಕಳೆಯಬೇಕು ಅಲ್ಲವೇ ನೀವೆಂನಂತೀರಿ…….. ಕಾವ್ಯ ಸುಧೆ.

“ಪ್ರೇಮ ವೈಫಲ್ಯ” ಕಾವ್ಯ ಸುಧೆ ಅವರ ಲಹರಿ Read Post »

ಇತರೆ

“ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಪೂರ್ಣಿಮಾ ಮಹೇಶ ಮುತ್ನಾಳ

ವಿಶೇಷ ಸಂಗಾತಿ ಪೂರ್ಣಿಮಾ ಮಹೇಶ ಮುತ್ನಾಳ “ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?-ಬಸವಣ್ಣನವರ ದೃಷ್ಟಿಯಲ್ಲಿ “”ನೈಜ ಶೃಂಗಾರ””“ನೀರಿಂಗೆ ನೈದಿಲೆಯೆ ಶೃಂಗಾರಸಮುದ್ರಕ್ಕೆ ತೆರೆಯೆ ಶೃಂಗಾರನಾರಿಗೆ ಗುಣವೆ ಶೃಂಗಾರಗಗನಕ್ಕೆ ಚಂದ್ರಮನೆ ಶೃಂಗಾರನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ” ಬಾಹ್ಯ ಸೌಂದರ್ಯಕ್ಕೆ ಮಾರುಹೋಗುವ ಇಂದಿನ ಜಗತ್ತಿನಲ್ಲಿ ‘ನೈಜ ಶೃಂಗಾರ’ ಅಥವಾ ನೈಜ ಸೌಂದರ್ಯ ಎಂದರೇನು ಎಂಬುದನ್ನು ವಿಶ್ವಗುರು ಬಸವಣ್ಣನವರು ಅತ್ಯಂತ ಸರಳ ಉದಾಹರಣೆಗಳ ಮೂಲಕ ಈ ವಚನದಲ್ಲಿ ಬಿಡಿಸಿಟ್ಟಿದ್ದಾರೆ. ಪ್ರಕೃತಿಯ ಸಹಜ ಗುಣಗಳನ್ನು ಲೌಕಿಕ ಬದುಕಿಗೆ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಸಮೀಕರಿಸುವ ಅವರ ದೃಷ್ಟಿಕೋನ ಸಾರ್ವಕಾಲಿಕವಾದುದು.ಲೌಕಿಕ ಜಗತ್ತಿಗೆ ಪೂರಕವಾದ ಅರ್ಥವನ್ನು ನೋಡುವುದಾದರೆ,ಲೌಕಿಕ ಅಥವಾ ಭೌತಿಕ ಜಗತ್ತಿನಲ್ಲಿ ನಾವು ದಿನನಿತ್ಯ ನೋಡುವುದೆಲ್ಲವೂ ಬಾಹ್ಯ ಆಕರ್ಷಣೆಗಳನ್ನೇ. ಆದರೆ ಅಪ್ಪ ಬಸವಣ್ಣನವರು ನೈಜ ಶೃಂಗಾರವು ಅದರ ಅಂತರ್ಗತ ಗುಣದಲ್ಲಿದೆ ಎನ್ನುತ್ತಾರೆ. ಕೇವಲ ನೀರಿದ್ದರೆ ಸಾಲದು, ಅದರಲ್ಲಿ ಅರಳುವ ನೈದಿಲೆ  ಆ ನೀರಿಗೆ ದೈವಿಕ ಸೌಂದರ್ಯವನ್ನು ನೀಡುತ್ತದೆ. ಅದೇ ರೀತಿಸಮುದ್ರಕ್ಕೆ ಅಲೆಯು ಸೌಂದರ್ಯವನ್ನು ನೀಡುತ್ತದೆ.ನಿಶ್ಚಲವಾಗಿ ನಿಂತ ನೀರು ಸಮುದ್ರವೆನಿಸದು. ನಿರಂತರವಾಗಿ ಏರಿಳಿಯುವ ಅಲೆಗಳೇ ಸಮುದ್ರದ ಜೀವಂತಿಕೆ ಮತ್ತು ಶೃಂಗಾರ. ನಮ್ಮ ಬದುಕಿನ ಏಳುಬೀಳುಗಳೂ ಸಹ ಬದುಕಿನ ಜೀವಂತಿಕೆಯನ್ನು ತೋರ್ಪಡಿಸುತ್ತವೆ.ಹಾಗೆಯೇ ..ನಾರಿಗೆ ಗುಣವೇ ಶೃಂಗಾರ: ಸಮಾಜದಲ್ಲಿ ಹೆಣ್ಣನ್ನು ಕೇವಲ ದೈಹಿಕ ಸೌಂದರ್ಯದ ತಕ್ಕಡಿಯಲ್ಲಿ ಅಳೆಯುವ ಕಾಲದಲ್ಲಿ, ಬಸವಣ್ಣನವರು ಹೆಣ್ಣಿಗೆ ಆಕೆಯ ‘ಸದ್ಗುಣ, ವಿವೇಕ ಮತ್ತು ನಡತೆಯೇ’ ನಿಜವಾದ ಶೃಂಗಾರ ಎಂದರು. ಬಾಹ್ಯ ಆಭರಣಗಳು ಕ್ಷಣಿಕ, ಆದರೆ ಆಕೆಯ ಉದಾತ್ತ ಗುಣಗಳು ಇಡೀ ಕುಟುಂಬ ಮತ್ತು ಸಮಾಜವನ್ನು ಬೆಳಗುತ್ತವೆ. ಇದು ಇಂದಿನ ಆಧುನಿಕ ಜಗತ್ತಿನ ಸ್ತ್ರೀ ಸಬಲೀಕರಣಕ್ಕೂ ಅತ್ಯಂತ ಪ್ರಸ್ತುತವಾದ ವಿಚಾರವಾಗಿದೆ.ಗಗನಕ್ಕೆ ಚಂದ್ರಮನೇ ಶೃಂಗಾರ ಅಂತ ನೋಡಿದಾಗ ..ವಿಶಾಲವಾದ ಕತ್ತಲ ಆಕಾಶಕ್ಕೆ ಕೇವಲ ನಕ್ಷತ್ರಗಳಿಗಿಂತ ಏಕಾಂಗಿಯಾಗಿ ನಿಂತು ತಂಪು ಬೆಳಕನ್ನು ನೀಡುವ ಚಂದ್ರನೇ ನಿಜವಾದ ಆಭರಣ.ಆಧ್ಯಾತ್ಮಿಕವಾದ  ಅರ್ಥಾನುಸಂಧಾನವನ್ನು  ನೋಡುವುದಾದರೆ,ವಚನದ ಕೊನೆಯ ಸಾಲಿನಲ್ಲಿ ಬಸವಣ್ಣನವರು ಲೌಕಿಕತೆಯಿಂದ ಆಧ್ಯಾತ್ಮದ ಅತ್ಯುನ್ನತ ಶಿಖರಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ. “ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ” ಎನ್ನುವ ಮೂಲಕ ಶರಣರ ನಿಜವಾದ ಸೌಂದರ್ಯವನ್ನು ವ್ಯಾಖ್ಯಾನಿಸುತ್ತಾರೆ.ನೊಸಲ ವಿಭೂತಿ ಎಂದು… ಆಧ್ಯಾತ್ಮಿಕವಾಗಿ ವಿಭೂತಿ ಎಂದರೆ ಕೇವಲ ಬೂದಿಯಲ್ಲ. ಅದು ‘ಅಹಂಕಾರದ ಭಸ್ಮ’. ದೇಹವು ಒಂದು ದಿನ ಬೂದಿಯಾಗಿಯೇ ತೀರುತ್ತದೆ ಎಂಬ ನಶ್ವರತೆಯ ಅರಿವು.ಶರಣನಾದವನಿಗೆ ಐಹಿಕ ಭೋಗಗಳು, ಅಧಿಕಾರ, ಸಂಪತ್ತು ಯಾವುದೂ ಆಭರಣಗಳಲ್ಲ. ತನುವನ್ನು ದಂಡಿಸಿ, ಮನದ ಕಲ್ಮಷವನ್ನು ಸುಟ್ಟು, ಅಹಂ ಭಾವವನ್ನು ಭಸ್ಮ ಮಾಡಿ ಹಣೆಯ ಮೇಲೆ ಧರಿಸುವ ವಿಭೂತಿಯೇ ಆತನ ಜ್ಞಾನದ ಸಂಕೇತ.ಅಹಂಕಾರ ಅಳಿದು, ದೈವತ್ವವನ್ನು ಮೈಗೂಡಿಸಿಕೊಂಡ ಶರಣನ ಮುಖದಲ್ಲಿ ಮೂಡುವ ಶಾಂತಿ ಮತ್ತು ಜ್ಞಾನದ ತೇಜಸ್ಸೇ ಆತನ ನಿಜವಾದ ಶೃಂಗಾರವೆಂದು ಅರುಹಿದ್ದಾರೆ.ಬಸವಣ್ಣನವರ ಈ ವಚನವು ನಮಗೆ ಬದುಕಿನ ದಾರಿದೀಪವಾಗಿದೆ. ಕೇವಲ ತೋರ್ಪಡಿಕೆಯ, ಕೃತಕವಾದ ಅಲಂಕಾರಗಳ ಬೆನ್ನತ್ತಿ ಹೋಗುತ್ತಿರುವ ಇಂದಿನ ಸಮಾಜಕ್ಕೆ, ತನು-ಮನಗಳ ಶುದ್ಧತೆ ಹಾಗೂ ಸದ್ಗುಣಗಳೇ ನಿಜವಾದ ಆಸ್ತಿ ಎಂಬುದನ್ನು ಇದು ನೆನಪಿಸುತ್ತದೆ. ಪ್ರಕೃತಿಯಲ್ಲಿ ಹೇಗೆ ಸಹಜತೆ ಸೌಂದರ್ಯವೋ, ಹಾಗೆಯೇ ಮನುಷ್ಯನ ಬದುಕಿನಲ್ಲಿ ಸದ್ಗುಣ ಮತ್ತು ದೈವಿಕ ಭಕ್ತಿಯೇ ನಿಜವಾದ ಶೃಂಗಾರ ಎಂಬುದನ್ನು ಅರಿತು ಬಾಳಬೇಕಿದೆ.ಅದೇ ರೀತಿ ಇಂದಿನ ‘ಇನ್‌ಸ್ಟಾಗ್ರಾಮ್’ ಮತ್ತು ‘ಫಿಲ್ಟರ್’ಗಳ ಜಗತ್ತಿನಲ್ಲಿ ಯುವ ಪೀಳಿಗೆಗೆ ಸೌಂದರ್ಯ ಎಂದರೆ ಕೇವಲ ಬಾಹ್ಯ ರೂಪ, ಬ್ರಾಂಡೆಡ್ ಬಟ್ಟೆಗಳು ಮತ್ತು ಫೋಟೋಗಳಿಗೆ ಸಿಗುವ ಲೈಕ್ಸ್‌ಗಳಷ್ಟೇ ಆಗಿಬಿಟ್ಟಿದೆ. ಕೃತಕ ಸೌಂದರ್ಯದ ಬೆನ್ನತ್ತಿ ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಉತ್ಸಾಹದಲ್ಲಿ, ನಾವು ನಮ್ಮ ಮನಸ್ಸನ್ನು ಸಜ್ಜುಗೊಳಿಸಲು ಮರೆಯುತ್ತಿದ್ದೇವೆ.ಈ ಹೊತ್ತಿನಲ್ಲಿ ಬಸವಣ್ಣನವರ ಈ ವಚನ ಯುವಜನತೆಗೆ ಒಂದು ದಿವ್ಯೌಷಧವೆಂದು ಹೇಳಬಹುದು.ಪ್ರೊಫೈಲ್ ಅಂದಕ್ಕಿಂತ ಕ್ಯಾರೆಕ್ಟರ್ ಮುಖ್ಯವಾದುದು… ಸಾಮಾಜಿಕ ಜಾಲತಾಣದ ಪ್ರೊಫೈಲ್ ಸುಂದರವಾಗಿ ಕಾಣಿಸುವುದಕ್ಕಿಂತ, ನಮ್ಮ ವ್ಯಕ್ತಿತ್ವ  ಸುಂದರವಾಗಿರಬೇಕು. ಹೆಣ್ಣಾಗಲಿ, ಗಂಡಾಗಲಿ ಅವರ ನಡತೆ ಮತ್ತು ಸದ್ಗುಣಗಳೇ ನಿಜವಾದ ಆಕರ್ಷಣೆಯಾಗಿರುತ್ತವೆ.ಸವಾಲುಗಳೇ ನಮ್ಮ ಶಕ್ತಿಯಾಗಬೇಕು. ಸಮುದ್ರದ ಅಲೆಗಳು ಅದಕ್ಕೆ ಸೌಂದರ್ಯ ತರುವಂತೆ,  ಬದುಕಿನಲ್ಲಿ ಎದುರಾಗುವ ಸೋಲು, ಗೆಲುವು ಹಾಗೂ ಸವಾಲುಗಳೇ ನಮ್ಮನ್ನು ಗಟ್ಟಿಗೊಳಿಸುತ್ತವೆ. ಸವಾಲುಗಳಿಗೆ ಹೆದರಿ ಓಡುವ ಬದಲು, ಅವುಗಳನ್ನು ಬದುಕಿನ ಸಹಜ ಏರಿಳಿತಗಳೆಂದು ಸ್ವೀಕರಿಸಬೇಕು.ಅಹಂಕಾರ ಬಿಟ್ಟು ವಿನಯಶೀಲರಾಗಿ ಬಾಳಬೇಕು. ಶರಣರಿಗೆ ಹಣೆಯ ಮೇಲಿನ ವಿಭೂತಿ ಹೇಗೆ ಅಹಂಕಾರದ ನಾಶವನ್ನು ನೆನಪಿಸುತ್ತದೆಯೋ, ಹಾಗೆಯೇ ಇಂದಿನ ಯುವಜನತೆ ತಮಗಿರುವ ಶಿಕ್ಷಣ, ಉದ್ಯೋಗ ಅಥವಾ ಜ್ಞಾನದ ಬಗ್ಗೆ ಅಹಂ ಪಡದೆ, ವಿನಯವಂತರಾಗಿ ಬಾಳುವುದನ್ನು ಕಲಿಯಬೇಕಿದೆ.ಬಾಹ್ಯ ಶೃಂಗಾರವು ವಯಸ್ಸಿನೊಂದಿಗೆ ಕರಗಿಹೋಗುತ್ತದೆ, ಆದರೆ ಅಂತರಂಗದ ಶೃಂಗಾರವಾದ ‘ಮಾನವೀಯತೆ’ ಮತ್ತು ‘ಸತ್ ಚಿಂತನೆ’ ನಮ್ಮನ್ನು ಸಾವಿನ ನಂತರವೂ ಜೀವಂತವಾಗಿರಿಸುತ್ತದೆ. ಬನ್ನಿ, ಕೃತಕ ಮುಖವಾಡಗಳನ್ನು ಕಳಚಿಟ್ಟು, ಬಸವಣ್ಣನವರು ತೋರಿದ ಸಹಜ ಮತ್ತು ಸಾತ್ವಿಕ ಸೌಂದರ್ಯದ ಹಾದಿಯಲ್ಲಿ ಸಾಗೋಣ.ಒಂದು ಶ್ಲೋಕದ ಪ್ರಕಾರ ನೋಡಿದಾಗ…ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ಜ್ವಲಾಃ |ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ ||ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ |ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ .ಮನುಷ್ಯನಿಗೆ ತೋಳುಬಂದಿ  ಆಭರಣವಲ್ಲ, ಚಂದ್ರನಂತೆ ಹೊಳೆಯುವ ಮುತ್ತಿನ ಹಾರಗಳಾಗಲಿ, ಸುಗಂಧ ದ್ರವ್ಯಗಳ ಲೇಪನವಾಗಲಿ, ಸ್ನಾನವಾಗಲಿ, ತಲೆಗೆ ಮುಡಿಯುವ ಹೂವುಗಳಾಗಲಿ ನಿಜವಾದ ಸೌಂದರ್ಯವನ್ನು ನೀಡುವುದಿಲ್ಲ. ಬದಲಿಗೆ ಸಂಸ್ಕಾರಯುತವಾದ ಮತ್ತು ವಿನಯದಿಂದ ಕೂಡಿ ಆಡುವ ‘ಒಳ್ಳೆಯ ಮಾತು’ ಒಂದೇ ಮನುಷ್ಯನಿಗೆ ಶಾಶ್ವತವಾದ ಆಭರಣ. ಲೋಕದ ಉಳಿದೆಲ್ಲಾ ಭೌತಿಕ ಆಭರಣಗಳು ಕಾಲಕ್ರಮೇಣ ಸವಿದು ಹೋಗುತ್ತವೆ, ಆದರೆ ಒಳ್ಳೆಯ ನಡತೆ ಹಾಗೂ ಮೃದುವಾದ ವಾಗ್ಭೂಷಣ ಮಾತ್ರ ಎಂದಿಗೂ  ಕ್ಷಯಿಸದ ನೈಜ ಶೃಂಗಾರವಾಗಿದೆಹೀಗೆ, ಅಂದಿನಿಂದ ಇಂದಿನವರೆಗೆ ಭಾರತೀಯ ತತ್ವಚಿಂತನೆಯು ಬಾಹ್ಯ ತೋರ್ಪಡಿಕೆಯ ಸೌಂದರ್ಯಕ್ಕಿಂತ ಅಂತರಂಗದ ಗುಣ ಸೌಂದರ್ಯಕ್ಕೇ ಅಗ್ರಸ್ಥಾನ ನೀಡುತ್ತಾ ಬಂದಿದೆ ಎಂಬುದಕ್ಕೆ ಬಸವಣ್ಣನವರ ಈ ವಚನ ಮತ್ತು ಈ ಶ್ಲೋಕವೇ ಅತ್ಯುತ್ತಮ ಸಾಕ್ಷಿ. ಪೂರ್ಣಿಮಾ ಮಹೇಶ ಮುತ್ನಾಳ.ಅಳ್ನಾವರ

“ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಪೂರ್ಣಿಮಾ ಮಹೇಶ ಮುತ್ನಾಳ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-126 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಯ ಡಯಾಲಿಸಿಸ್‌ ಗೆ ಬೆಂಗಳೂರಿಗೆ? ರಾತ್ರಿ ತಾಯಿಯ ಜೊತೆಗೆ ಆಸ್ಪತ್ರೆಯಲ್ಲಿ ಮಲಗಲು ಬಂದ ಮಗಳು ಮಾರನೇ ದಿನ ಕಾಲೇಜಿಗೆ ರಜೆ ಹಾಕಿ ಬೆಳಗಿನ ಬಸ್ಸಿನಲ್ಲಿ ತನ್ನ ಊರಿಗೆ ಹೊರಟಳು. ಅಲ್ಲಿ ಹೋಗಿ ತೋಟದ ಸಾಹುಕಾರರು ಹಾಗೂ ಅವರ ಪತ್ನಿ ‘ಅಮ್ಮ’ ಅವರನ್ನು ಭೇಟಿ ಮಾಡಿದಳು. ತನ್ನ ತಾಯಿಗೆ ಡಯಾಲಿಸಿಸ್ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯರು ಸೂಚಿಸಿರುವ ಬಗ್ಗೆ ಎಲ್ಲಾ ವಿವರಗಳನ್ನು ಅವರಿಗೆ ತಿಳಿಸಿದಳು….ನಿನ್ನ ಅಕ್ಕನಿಗೂ ತಿಳಿಸಿ ಕೊಡಿಸಬೇಕಾದ ಚಿಕಿತ್ಸೆಯನ್ನು ಕೊಡಿಸು….ಇಲ್ಲಿಂದ ಬೆಂಗಳೂರಿನ ಆಸ್ಪತ್ರೆಗೆ ನೀವು ಹೋಗಲು ಬೇಕಾದ ಎಲ್ಲ ವ್ಯವಸ್ಥೆಯನ್ನು ನಾವು ಮಾಡುತ್ತೇವೆ…. ಎಂದರು. ಸಾಹುಕಾರರು ಹಾಗೂ ಅವರ ಪತ್ನಿಯ ಮಾತನ್ನು ಕೇಳಿದ ಹುಡುಗಿಗೆ ಸಂಜೀವಿನಿ ಸಿಕ್ಕಷ್ಟು ಸಂತೋಷವಾಯಿತು. ತನ್ನ ತಾಯಿಯ ಪ್ರತಿಯೊಂದು ಪರಿಸ್ಥಿತಿಯಲ್ಲೂ ಸಹಾಯಕ್ಕೆ ನಿಲ್ಲುವ ಸಾಹುಕಾರರು ಅವರ ಪತ್ನಿಯ ಬಗ್ಗೆ ಗೌರವ ಹೆಚ್ಚಿತು.‌ ತನ್ನ ಕೃತಜ್ಞತೆಯನ್ನು ತಿಳಿಸಲು ಅವಳಿಗೆ ಪದವಿಲ್ಲದಾಯಿತು.  ಸಾಹುಕಾರರಿಗೆ ಹಾಗೂ ಅವರ ಪತ್ನಿಗೆ ವಂದಿಸಿ ತುಸು ನೆಮ್ಮದಿಯಿಂದ ತಂಗಿಯನ್ನು ಭೇಟಿ ಮಾಡಲು ಮನೆಗೆ ಹೋದಳು. ತಂಗಿ ಶಾಲೆಗೆ ಹೊರಡುವ ತರಾತುರಿಯಲ್ಲಿದ್ದಳು. ಅಕ್ಕ ಇದ್ದಕ್ಕಿದ್ದ ಹಾಗೆ ಮನೆಗೆ ಬಂದಿರುವುದನ್ನು ಕಂಡು, ತಂಗಿಗೆ ಆಶ್ಚರ್ಯವಾಯಿತು. ಆದರೆ ತಾಯಿಗೆ ಹೆಚ್ಚಿನ ಚಿಕಿತ್ಸೆ ದೊರಕುವ ವಿಷಯ ತಿಳಿದು ಅವಳು ಸಂತೋಷ ಕೊಟ್ಟಳು…. “ಹಾಗಾದರೆ ತಾಯಿಯನ್ನು ಹೇಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೀಯಾ?…. ತಾಯಿಗೆ ಹೆಚ್ಚು ನಡೆದಾಡಲು ಸಾಧ್ಯವಿಲ್ಲ ಅಲ್ಲವೇ?…. ನಿನಗೆ ಬೆಂಗಳೂರಿನಂತಹ ದೊಡ್ಡ ನಗರಕ್ಕೆ ಹೋಗಿ ಅಭ್ಯಾಸವಿಲ್ಲ… ಯಾರ ಜೊತೆಗೆ ಹೋಗುತ್ತೀಯಾ?…. ಒಬ್ಬಳೇ ಅಮ್ಮನನ್ನು ಕರೆದುಕೊಂಡು ಹೋಗಲು ಸಾಧ್ಯವೇ ನಿನಗೆ? …. ನಾನು ಈ ಕೆಲಸವನ್ನು ಬಿಟ್ಟು ನಿನ್ನ ಜೊತೆ ಬರುವುದು ಸಾಧ್ಯವಿಲ್ಲ…. ಅದೂ ಅಲ್ಲದೇ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಮತ್ತು ಚಿಕಿತ್ಸೆ ಕೊಡಿಸಲು ಹೆಚ್ಚು ಹಣ ಬೇಕಲ್ಲವೇ ನಮ್ಮಲ್ಲಿ ಅಷ್ಟು ಹಣ ಇಲ್ಲವಲ್ಲ”…. ಎಂದು ಚಿಂತಿತಳಾಗಿ ಅಕ್ಕನನ್ನು ಕೇಳಿದಳು.  ತಂಗಿಯು ಕೇಳಿದ ಪ್ರಶ್ನೆಗಳಿಗೆ….”ತೋಟದ ಸಾಹುಕಾರರು ನಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ…. ಅವರ ಕಾರಿನಲ್ಲಿಯೇ ನಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ ಎಂದು ಕೂಡಾ ತಿಳಿಸಿದ್ದಾರೆ…. ನೋಡೋಣ ….ಚಿಕಿತ್ಸೆಯ ಖರ್ಚಿಗೆ ಹಣವನ್ನು ಅವರು ಕೊಡಬಹುದು…. ಅಮ್ಮನನ್ನು ಕರೆದುಕೊಂಡು ಹೋಗಲು ಜೊತೆಗೆ ಬಾವನನ್ನು ಬರುವಂತೆ ಕೇಳಿಕೊಳ್ಳುತ್ತೇನೆ…. ನೀನು ಹೆಚ್ಚು ಯೋಚನೆ ಮಾಡಬೇಡ…. ನೀನೊಬ್ಬಳೇ ಇಲ್ಲಿರುವುದನ್ನು ಯೋಚಿಸಿ ನನ್ನ ಮನಸ್ಸು ಸದಾ ಚಿಂತೆಗೆ ಒಳಗಾಗುತ್ತಿದೆ…. ನಮ್ಮ ಅನಿವಾರ್ಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀನು ಒಬ್ಬಳೇ ಇಲ್ಲಿದ್ದು ಅಮ್ಮನ ಕೆಲಸವನ್ನು ಕೂಡ ಮಾಡುತ್ತಿದ್ದೀಯಾ….. ನನ್ನ ಜೊತೆಗೆ ಹೆಗಲುಕೊಟ್ಟು ನಿಂತಿರುವ ನೀನು ಇಷ್ಟು ಚಿಕ್ಕ ವಯಸ್ಸಿಗೆ ನನಗಿಂತ ದೊಡ್ಡವಳಾಗಿ ಬಿಟ್ಟೆ”….. ಎಂದು ಹೇಳುತ್ತಾ ತಂಗಿಯನ್ನು ಬಿಗಿಯಾಗಿ ಅಪ್ಪಿಕೊಂಡಳು…. ಅಕ್ಕ ಈಗ ನಮಗೆ ನಾವೇ ಇರುವುದು…. ಹಾಗಾಗಿ ನಾವಿಬ್ಬರೂ ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು…. ನೀನು ಧೈರ್ಯವಾಗಿ ನಮ್ಮ ತಾಯಿಯನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬಾ…. ನನಗೆ ಈಗ ಒಬ್ಬಳೇ ಇದ್ದು ಅಭ್ಯಾಸವಾಗಿ ಹೋಗಿದೆ”….ಎಂದಳು. ಇಬ್ಬರ ಕಣ್ಣುಗಳೂ ಹನಿ ಗೂಡಿದವು. ಕೆಲಸಕ್ಕೆ ಹೋಗುವ ಸಮಯವಾಗಿದ್ದರಿಂದ ತಂಗಿ ಮನೆಗೆ ಬೇಗ ಹಾಕಿ ಹೊರಟಳು. ಅಕ್ಕನೂ ಬಸ್ ನಿಲ್ದಾಣದ ಕಡೆಗೆ ಹೊರಟಳು.  ಹಿಂತಿರುಗಿ ಸಕಲೇಶಪುರಕ್ಕೆ ಹೋಗಲು ಮಧ್ಯಾಹ್ನದ ಬಸ್ ಬರುವುದಕ್ಕೆ ಇನ್ನೂ ಸ್ವಲ್ಪ ಸಮಯವಿತ್ತು. ಹಾಗಾಗಿ ಆ ಹುಡುಗಿ ಬಸ್ ನಿಲ್ದಾಣದ ಕಟ್ಟೆಯ ಮೇಲೆ ಕುಳಿತುಕೊಂಡು ತನ್ನ ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದಳು. ಆಗ ಅಲ್ಲಿ ಹಾದು ಹೋಗುತ್ತಿದ್ದ ಕೆಲಸಗಾರರು ಈ ಹುಡುಗಿಯನ್ನು ನೋಡಿ…. “ಸುಮತಿ ಟೀಚರ್ ಹೇಗಿದ್ದಾರೆ?”…. ಎಂದು ವಿಚಾರಿಸಿಕೊಳ್ಳುತ್ತಿದ್ದರು…. “ಪರವಾಗಿಲ್ಲ…. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…. ಸುಧಾರಿಸಿಕೊಳ್ಳುತ್ತಿದ್ದಾರೆ”…. ಎಂದು ಉತ್ತರ ಕೊಡುತ್ತಿದ್ದಳು. ಅದೇ ರೀತಿ ತಮ್ಮ ಕುಟುಂಬಕ್ಕೆ ಆಪ್ತರಾದ ಮಲಯಾಳಿ ಡ್ರೈವರ್ ಹಾಗೂ ಅವರ ಪತ್ನಿ ಆ ದಾರಿಯಲ್ಲಿ ಬಂದರು. ಸುಮತಿಯ ಎರಡನೇ ಮಗಳನ್ನು ಕಂಡು ಅವಳ ಬಳಿಗೆ ಬಂದು, ಸುಮತಿಯ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡರು. ಅವರು ತಮ್ಮ ಕುಟುಂಬಕ್ಕೆ ಆಪ್ತರಾಗಿದ್ದ ಕಾರಣ ಎಲ್ಲಾ ವಿಚಾರವನ್ನು ಆ ಹುಡುಗಿ ಅವರಿಗೆ ತಿಳಿಸಿದಳು. ಅವರಿಬ್ಬರೂ ಕೂಡ ಎಸ್ಟೇಟಿನ ಸಾಹುಕಾರರು ಹಾಗೂ ಅಮ್ಮನನ್ನು ಕೊಂಡಾಡಿದರು…. “ನೀನು ಯಾವುದಕ್ಕೂ ಹೆದರಬೇಡ…. ನಮ್ಮ ಸಾಹುಕಾರರು ಮತ್ತು ಅಮ್ಮ ಇದ್ದಾರೆ…. ಅವರಿಬ್ಬರೂ ಬಹಳ ಒಳ್ಳೆಯವರು…. ದಯಾಳುಗಳು…. ಎಲ್ಲರಿಗೂ ಸಹಾಯ ಮಾಡುವ ಗುಣ ಉಳ್ಳವರು…. ನೀನು ಧೈರ್ಯವಾಗಿ ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬಾ….. ಎಲ್ಲವೂ ಒಳ್ಳೆಯದಾಗಲಿ”…. ಎಂದು ಹೇಳಿ ಆ ಹುಡುಗಿಯ ತಲೆಯನ್ನು ನೇವರಿಸಿ ಅಲ್ಲಿಂದ ಹೊರಟುಹೋದರು.  ಮಧ್ಯಾಹ್ನದ ಹನ್ನೆರಡು ಗಂಟೆಯ ಬಸ್ಸು ಬಂದಿತು. ಬಸ್ಸಿನಲ್ಲಿ ಹುಡುಗಿಯು ಸಕಲೇಶಪುರದ ಕಡೆಗೆ ಹೊರಟಳು. ಅವಳು ಆಶ್ರಮಕ್ಕೆ ಬಂದಾಗ ಅವಳ ಗೆಳತಿ ಮಧ್ಯಾಹ್ನದ ಅಡುಗೆಯನ್ನು ಮಾಡಿ ಮುಗಿಸಿ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದಳು. ಸುಮತಿಯ ಮಗಳನ್ನು ಕಂಡೊಡನೆ, ಹೋದ ವಿಷಯ ಏನಾಯ್ತು ಎಂದು ಉತ್ಸುಕತೆಯಿಂದ ಕೇಳಿದಳು. ಸಾಹುಕಾರರು ಮತ್ತು ಅವರ ಪತ್ನಿ ಹೇಳಿದ ವಿಷಯವನ್ನು ತಿಳಿಸಿದಳು. ಅವಳಿಗೂ ಸಂತೋಷವಾಯಿತು…. “ಸರಿ ನಡಿ ಊಟ ಮಾಡು…. ಆಸ್ಪತ್ರೆಗೆ ಹೋಗಿ ನಿನ್ನ ತಾಯಿಗೆ ಈ ವಿಷಯವನ್ನ ತಿಳಿಸು…. ಅವರಿಗೂ ಬಹಳ ಸಂತೋಷವಾಗುತ್ತದೆ”…. ಎಂದಳು. ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡಿದರು. ನಂತರ ಸುಮತಿಯ ಮಗಳು ತಾಯಿಯನ್ನು ನೋಡಲು ಆಸ್ಪತ್ರೆಗೆ ಹೊರಟಳು. ತಾಯಿಯ ಬಳಿಗೆ ಹೋಗಿ ಈ ಸಂತಸದ ಸುದ್ದಿ ಯಾವಾಗ ತಿಳಿಸುತ್ತೇನೋ ಎನ್ನುವ ತವಕ ಅವಳಲ್ಲಿತ್ತು. ಹಾಗಾಗಿ ಬೇಗನೇ ಹೆಜ್ಜೆ ಹಾಕಿದಳು. ಲಘುಬಗೆಯಿಂದ ಆಸ್ಪತ್ರೆಯ ಮೆಟ್ಟಿಲು ಹತ್ತಿದಳು. ಓಡು ನಡಿಗೆಯಲ್ಲಿ ವಾರ್ಡ್ ತಲುಪಿದಳು. ಸುಮತಿ ಆಸ್ಪತ್ರೆಯಿಂದ ದೊರೆತ ಮಧ್ಯಾಹ್ನದ ಊಟವನ್ನು ಮಾಡಿ, ಸಣ್ಣಗೆ ನಿದ್ರೆ ಮಾಡುತ್ತಿದ್ದಳು. ಯಾರೋ ಬಂದು ನಿಂತದ್ದು ಅರಿವಾಗಿ ಕಣ್ಣುಬಿಟ್ಟಳು. ಮಗಳ ಮುಖವನ್ನು ನೋಡಿದಳು ಅವಳು ಇಂದು ಬಹಳ ಖುಷಿಯಲ್ಲಿ ಇರುವಂತೆ ಕಂಡಿತು. ನಿಧಾನವಾಗಿ ಎದ್ದು ಕುಳಿತು ….”ಮಗಳೇ ಊಟ ಮಾಡಿದೆಯಾ?”…. ಎಂದು ಕೇಳಿದಳು ಅದಕ್ಕುತ್ತರವಾಗಿ ‘ಹೂಂ’ ಎಂದು ಹೇಳಿ ತಾಯಿಯನ್ನು ಬಿಗಿಯಾಗಿ ಅಪ್ಪಿಕೊಂಡಳು. 

Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಅವರ ಗಜಲ್‌

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಗಜಲ್‌ ನೋಟವು ಒಲವಾಗಿ ಪ್ರೇಮದ ಮಳೆಯುಹರಿದು ಬರಲಿಮೀಟಲು ಹೃದಯದ ವೀಣೆಯ ತಂತಿಯುಹರುಷ ತರಲಿ ಕಂಗಳ ನಿವೇದನೆ ಮನವ ಕಾಡದೇಹೇಳು ಒಮ್ಮೆಸಂಗಾತಿ ಬಳಿಯಿರೆ ಹೊಸತು ಕಲ್ಪನೆತೇರನು ಏರಲಿ ತನುವ ಸೋಕಿದಾಗ ಅವ್ಯಕ್ತ ಕಂಪನಮಧುರ ಅನುಭೂತಿತನನ ಹಾಡುತಿರೆ ಎದೆಯ ಭಾವವುನಲ್ಲನ ಸೇರಲಿ ಅಡಗಿ ಕುಳಿತಿಹ ಸುಪ್ತ ಮನಸ್ಸುಸಾಗರದ ಅಲೆಯುಮೂಡಿದ ಅನುರಾಗ ಅರಳಿ ಹೂವಂಥನಗುವ ಬೀರಲಿ ಒಪ್ಪಿದ ಇನಿಯನ ಸೊಬಗಿನ     ನುಡಿಗೆರೆಪ್ಪೆಯು ಬಾಗಿದೆಅಪ್ಪಿದೆ ಕರಗಳು ಬಿಗಿದು ಓರಣದಿಮಧುವ ಹೀರಲಿ ಮರೆತು ಜಗವನು  ಕರಗಿ ಹೋಗುವಉತ್ಕಟ ಬಯಕೆಬೆರೆತ ಕನಸಿಗೆ ಮೊಳಕೆ ಚಿಗುರಿಮೇಲಕೆ ಹಾರಲಿ ನಿತ್ಯವೂ ಆರಾಧನೆ ಗುಡಿಯ ಒಳಗೆವಿರಾಜಿಪ ದೇವಗೆಸತ್ಯದ ನಿವೇದನೆ ರಾಧೆಯ ಬಾಳಲಿಶುಭವ ಕೋರಲಿ  ಅನುರಾಧಾ ರಾಜೀವ್

ಅನುರಾಧಾ ರಾಜೀವ್ ಅವರ ಗಜಲ್‌ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ” ಐದು ದಶಕದ ಹಿಂದೆ,ಕಾಲ ಸರಳವಾಗಿತ್ತು,ಬದುಕು ಹಸನಾಗಿತ್ತು;ಮಣ್ಣ ಗೋಡೆಯ ತೊಲೆಯ ಹಳೆ ಮನೆಯೊಳಗೆ,ಬೆಳಕಿಂಡಿಯ ಪ್ರೀತಿ ಬೆಳಕುಬಡ ರೈತರ ಬದುಕು ಮೊಬೈಲ್ ಇರದ ದಿನಗಳಲ್ಲಿ,ಮಾತುಗಳು ಮನಸ್ಸನ್ನು ಮುಟ್ಟುತ್ತಿದ್ದವು;ಪತ್ರದ ಬರುವಿಕೆಗಾಗಿ ಕಾಯುವ ಕಣ್ಣುಗಳು,ಬಾಂಧವ್ಯದ ಆಳ ಅಳೆಯುತ್ತಿದ್ದವು. ಜಾತ್ರೆ ಪಾರಿಜಾತದ ಸದ್ದುಓಣಿ ತುಂಬಾ ಆಟದ ಗದ್ದಲ,ಸಿಡಿಯಲು ಸಿದ್ಧ ಪಟಾಕಿ ಮದ್ದುಹಿರಿಯರ ಬಾಯಲ್ಲಿ ಕಥೆಗಳ ಹಬ್ಬ;ಅಕ್ಕಿ-ಬೇಳೆ ಹಂಚಿ ಉಣ್ಣುವ ಪ್ರೀತಿ,ಕೂಡು ಕುಟುಂಬವೇ ನಮಗೆಒಂದು ದೊಡ್ಡ ನೀತಿ. ಬೀದಿ ದೀಪದ ಕೆಳಗಿನ ಓದು,ಚಿಮಣಿ ಬಡ್ಡಿಯ ಸುತ್ತ ಮಸುಕಾದ ಬೆಳಕು;ಕಷ್ಟ ದುಃಖದ ಮಧ್ಯೆಮಂದಹಾಸದ  ನಗೆ ಇತ್ತು,ಬರಿಗಾಲಲಿ ಶಾಲೆ ಪಾಠನಿತ್ಯ ಕಸರತ್ತು ಇಂದು ಕಾಲ ಬದಲಾಗಿದೆ, ವೇಗ ಹೆಚ್ಚಾಗಿದೆ,ಕೈಯಲ್ಲಿ ಜಗತ್ತಿದೆ, ಆದರೆ ಮನುಜ ಒಂಟಿಯಾಗಿರುವಐದು ದಶಕದ  ಆ ದಿನಗಳು,ನೆನಪಿನ ಪುಟಗಳಲ್ಲಿಅಚ್ಚಳಿಯದೆ ಉಳಿದಿವೆ. ಎಷ್ಟೋ ವರುಷಗಳ ಮೇಲೆಅವಳ ಭೇಟಿಕಣ್ಣಿನಲ್ಲಿ ಮಾತು ಹರಿದವುಮೌನ ಮುರಿದು ಮಾತುಸಂಜೆ ಬಾನಿನ  ಚುಕ್ಕಿ ಮೂಡಿದವುಹುಣ್ಣಿಮೆಯ ಚಂದ್ರ ನಕ್ಕನುಮತ್ತೆ ಗೂಡು ಸೇರಿದೆವು ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ” Read Post »

ಇತರೆ, ಜೀವನ

“ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಡಾ.ಯಲ್ಲಮ್ಮ ಕೆ.

ವಿಶೇಷ ಸಂಗಾತಿ ಡಾ.ಯಲ್ಲಮ್ಮ ಕೆ. “ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಇನ್ನೂ ಗಟ್ಟಿ ಇದ್ಲು ಏನಿಲ್ಲಾಂದ್ರೂ ಎಂಟ್ಹತ್ತು ವರುಷ ಬಾಳು ಸವೆಸಬಹುದಿತ್ತು, ಮೊಮ್ಮಕ್ಕಳ ಮದುವೆ ಮಾಡಿ ಮರಿಮೊಮ್ಮಕ್ಕಳನ್ನು ಎತ್ತಿ ಆಡಿಸುವ ಕನಸು ಹೊತ್ತಿದ್ದ ಶಿವಮ್ಮ; ಎದ್ದು ಓಡಾಡುವ ತ್ರಾಣ ಇಲ್ಲದಿದ್ದರೂ ಹಣ್ಣ ಹಣ್ಣ ಮುದೇಕಿಯೇನೂ ಆಗಿರಲಿಲ್ಲ, ದೇವರು ತನ್ಮೇಲೆ ಯಾಕೆ ಹಾಕೋತ್ತಾನೆ? ಏನಾದರೂ ಒಂದು ಕುಂಟುನೆಪ ಹೇಳಿ ತನ್ನೆಡೆಗೆ ಕರಕೋತ್ತಾನೆ ಅಷ್ಟೇ ಎಂದು ಅಮ್ಮನ ವಾರಿಗೆಯವ್ರು ಕಣ್ಣೀರು ಹಾಕ್ತಾ ಪಾರ್ಥಿವ ಶರೀರದ ಮುಂದೆ ಕೂತು ಕಣ್ಣೀರ ಮಳೆಗಾರೆಯುತ್ತಿದ್ದರು! ಕಳೆದ ಐದಾರು ವರುಷಗಳ ಹಿಂದೆ ಕಣ್ ಆಪರೇಷನ್ ಮಾಡಿಸಬೇಕು ಅಂತ ಮನೆ ಮಂದಿಯೆಲ್ಲ ಯೋಚಿಸಿದಾಗ ಡಾಕ್ಟರ್ ಸಾರಾಸಗಟಾಗಿ ನಿರಾಕರಿಸಿದ್ದ ಆಪರೇಷನ್ ಮಾಡಿದರೂ ಕಣ್ ಬರೋ ಚಾನ್ಸಸ್ ಬಾಳ ಕಮ್ಮಿ ಅಂತ್ಹೇಳಿ,  ಆಗಲೇ ಆ ವಿಚಾರಕ್ಕೆ ಎಳ್ಳು-ನೀರು ಬಿಟ್ಟಾಗಿತ್ತು. ಕಣ್ಣು ಪುಟ್ಟ ಪೂರಾ ಕಾಣತ್ತಿದ್ದಿಲ್ಲ ಅಂತೇನಿಲ್ಲ ಮಸಗು ಮಸಗು ಆಗಿ ಕಾಣತ್ತಿದ್ದವು ಅಂತಿದ್ಲು. ಅದ್ಯಾವ ವಿಷಗಳಿಯೋ ನಾನರಿಯೆ? ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ ತಪಾಸಣಾ ಶಿಬಿರಕ್ಕೆ ಅದ್ಯಾರೋ ಮಾತು ಕೇಳಿ, ಮತ್ಯಾರನ್ನೋ ಕರಕೊಂಡು ಹೋಗಿ ಬಂದ್ಮೇಲಿಂದ ಒಂದೇ ಹಠ! ಕಣ್ ಬರುತ್ತೆ ಅಂತ ಡಾಕ್ಟರ್ ಹೇಳಿದ್ದಾರೆ, ನನಗೆ ಕಣ್ ಆಪರೇಷನ್ ಮಾಡಿಸಿ ಎಂದು; ಅದೂ ಇದೂ ಅಂತ್ಹೇಳಿ ಒಂದು ಮೂರೂ ತಿಂಗಳು ಮುಂದಕ್ಕೆ ತಳ್ಳಿಕೊಂಡು ಹೊಂಟಿದ್ವೀ.., ಅವರಿವರು ಏನಂತಾರೆ? *ಮನೆಯಲ್ಲಿ ದುಡಿದು ತಿನ್ನುವ ಮಕ್ಕಳ್ನಾ ಬಿಡು, ಮಗಳು ನೌಕರಿ ಮಾಡ್ತಾಳ, ಮೊಮ್ಮಗಳು ನೌಕರಿ ಮಾಡ್ತಾಳೆ ಅಷ್ಟೇ ಅಲ್ಲದೇ ಮೊಮ್ಮಗಳ ಗಂಡನೂ ನೌಕರಿ ಮಾಡ್ತಾನೆ ಕಣ್ ಆಪರೇಶನ್ ಮಾಡಿಸೋಕೆ ಏನು? ದುಡ್ಡಿನ ಮಕ ನೋಡ್ತಾರೆ* ಅನ್ನೋ ತಿರಸ್ಕಾರದ ಮಾತುಗಳನ್ನು ಕೇಳಿದ ಮೇಲೂ ಸುಮ್ನೆ ಇರೋದು ಹೇಗೆ ಹೇಳಿ? *ಜೀವ ಮತ್ತು ಜೀವನ ಕೊಟ್ಟ ಅಮ್ಮನಿಗೆ ಕಣ್ ಬಂದ್ರೆ ಎಲ್ಲರಿಗೂ ಖುಷಿ ತಾನೇ* , ಅಮ್ಮನ ಆಸೆ ಮತ್ತು ಹಠಕ್ಕೆ ಸೋತು ಆಪರೇಷನ್ ಸಜ್ಜಾಗೆ, ಪೇಟೆಯ ಮೈಲಾರ ಆಸ್ಪತ್ರೆಗೆ ಹೋಗಿ ಇಡೀ ದಿನ ಕಾದು ತಪಾಸಣೆ ಮುಗಿದಮೇಲೆ ಫಿಟ್ ಇದ್ದಾರೆ, ಬಿ.ಪಿ ನಾರ್ಮಲ್ ಇದೆ, ಆಪರೇಷನ್ ಮಾಡಿ ಲೆನ್ಸ್ ಹಾಕಿದ್ರಾಯ್ತು.., *ನಾಳೆ ಬನ್ನಿ ಎಂದು ಡಾಕ್ಟರ್ ಹೇಳಿ ಕಳಿಸಿದ್ಮೇಲೆ ಲವಲವಿಕೆಯಿಂದ ಇದ್ದ ಅಮ್ಮನ ಮುಖದಲ್ಲಿ ಹೊಸ ಕಳೆ ಬಂದಂತಿತ್ತು!* ಮಾರನೇ ದಿನ ದುಡ್ಡು ಹೊಂದಿಸಿ ಕೊಟ್ಟು ನಾನು ಕೆಲಸಕ್ಕೆ ಹೋದೆ, ಮಗನನ್ನು ಕರೆದುಕೊಂಡು ಹೋಗಿ ಅಡ್ಮಿಟ್ ಆದ್ರು, ಹನ್ನೆರೆಡುಗಂಟೆ ಹೊತ್ತಿಗಾಗಲೇ ಆಪರೇಷನ್ ಮುಗಿತು, ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ ಅಂತ ಅಣ್ಣ ಕಾಲ್ ಮಾಡಿ ಹೇಳಿದ್ದ, ಸಾಯಂಕಾಲ ಆರರೊಳಗೆ ಮೂರು- ನಾಲ್ಕು ಬಾರಿ ಕಾಲ್ ಮಾಡಿ ಅಮ್ಮನ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ, ಕೆಲಸ ಮುಗಿಸಿಕೊಂಡು ಬಂದು ಅಮ್ಮನನ್ನು ಕಂಡು ಮಾತನಾಡಿಸಿ ಇಡ್ಲಿ-ಸಾಂಬಾರ್ ತಿನಿಸಿ, ಚಹಾ ಕುಡಿಸಿದೆ, *ಮಸಗು ಕಣ್ಣಿಗ್ಹಾಕಿದ ಲೆನ್ಸ್ ನೊಂದಿಗೆ ಜಗತ್ತನ್ನು ಹೊಸ ದೃಷ್ಟಿಕೋನದಿಂದ ನೋಡುವ ಹೆಬ್ಬಯಕೆ ಅಮ್ಮನ ಮೊಗದಿ ಎದ್ದು ಕಾಣುತ್ತಿತ್ತು!* ಅದೇ ಭರವಸೆಯಲ್ಲಿ ಮನೆಗೆ ಬಂದೆ, ಅಮ್ಮನಿಗೆ ತಾನು ಕಣ್ಣಾದ ಬಗೆಗೆ ನೆನೆದು ನೆಮ್ಮದಿಯ ನಿದ್ದೆಗೈದೆ. ಮರುದಿನ ಪರೀಕ್ಷಾ ಕಾರ್ಯ ನಿಮಿತ್ತ ಅಮ್ಮನನ್ನು ಕಾಣದೇ ಕಾಲೇಜಿಗೆ ಹೋದೆ.., ಸಾಂಕಾಲದೊತ್ತಿಗೆ ರಾಘಣ್ಣ ಅಮ್ಮನ ಕಣ್ಪಟ್ಟಿ ತೆಗೆಸಿ, ಕರಿಕನ್ನಡಕ ಹಾಕಿಸಿ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿದ್ದ, ಮನೆ ತುಂಬೆಲ್ಲಾ ಹೂನಗೆ ಚೆಲ್ಲಿತ್ತು. *ಕಪ್ಪು ಕನ್ನಡಕ ಅಮ್ಮನಿಗೆ ಚಂದವಾಗಿ ಒಪ್ಪಿತ್ತು,* ರಾತ್ರಿ ಗಂಜಿ ಕುಡಿದು, ಗುಳುಗಿ ನುಂಗಿ ಅಮ್ಮ ಮಲಗಿದ್ದಳು. ನಿತ್ಯದ ದಿನಚರಿಯಂತೆ ನಾನೆದ್ದು ರೆಡಿಯಾಗಿ ಕಾಲೇಜಿಗೆ ಹೊರಟು ನಿಂತಿದ್ದೆ, ಇನ್ನೂ ಹಾಸಿಗೆಯಲ್ಲಿ ಮಗ್ಗಲು ಹೊರಳಿಸಿದ್ದ ಅಮ್ಮನನ್ನ ಕಂಡು ಯಾಕೆ ಅಮ್ಮ ಸಪ್ಗಿದ್ದೀಯಾ? ನಿದ್ದೆ ಆಗಿಲ್ವಾ? ಎಂದಿದ್ದಕ್ಕೆ; ಕಣ್ಣು ಸ್ವಲ್ಪ ನೋವಾಗಿದೆ, ಎರಡು ಮೂರು ಬಾರಿ ಭೇದಿ ಆಯ್ತು, ಎದ್ದು ಹೋಗಿ ಬಂದು, ಹೋಗಿ ಬಂದು ಕೈ-ಕಾಲು ಸೋತಂಗಾಗಿದೆ ಅಂದ್ಲು, ಮಗನಿಗೆ ಮೆಡಿಕಲ್ ಶಾಪ್ ನಿಂದ ಒಂದೆರಡು ಭೇದಿ ಗುಳಿಗೆ ತಂದು ಕೊಡು ಅಮ್ಮ ನುಂಗ್ತಾಳೆ, ಆರಾಮ್ ಅನಿಸಿಲ್ಲ ಅಂದ್ರೆ ಸಂಜೆ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಅಂತ ಹೇಳಿ ನಾನು ಕಾಲೇಜಿಗೆ ಹೊರಟೆ, ನಾನಿನ್ನೂ ಕಾಲೇಜ್ ಮುಟ್ಟಿದ್ದಿಲ್ಲ.., ನಂತರದ ಬೆಳವಣಿಗೆ ಆಘಾತವನ್ನುಂಟು ಮಾಡಿತ್ತು. ಅಮ್ಮನಿಗೆ ಮತ್ತೆರಡು ಬಾರಿ ಭೇದಿ ಆಯ್ತಂತೆ, ಸುಸ್ತು, ಡಾಕ್ಟರನ್ನು ಕರೆಸಿ ಸೂಜಿ ಹಾಕ್ಸರಿ ಅಂತ ಕೇಳಿದ್ದಾಳೆ, ಮನೆಯಲ್ಲಿ ಅತ್ತಿಗೆ, ರಶ್ಮಿ, ದೀಪಾ, ಶಶಿ, ಮೊಮ್ಮಕ್ಕಳು ಮರಿ ಮೊಮ್ಮಕ್ಕಳಿದ್ದರು, ಅಪ್ಪ, ಅಣ್ಣ ಎಲ್ಲರೂ ಗದ್ದೆ ಕೆಲಸಕ್ಕೆ ಹೋಗಿದ್ದರು. ದೈವಿಕ್ [ಮರಿ ಮೊಮ್ಮಗ] ಎದ್ದು ಕೂಡಲೇ ಮನೆಯ ಮುಂದಿನ ಮೆಟ್ಟಿಲ ಮೇಲೆ ಆತನನ್ನು ತೊಡೆಯಮೇಲೆ ಕೂಡಿಸಿಕೊಂಡು ಮುದ್ದು ಮಾಡುತ್ತಾ.., ದಾರಿಗುಂಟ ಹೋಗಿ ಬರೋರನ್ನು ಎದ್ರಾ, ಉಂಡ್ರಾ- ತಿಂದ್ರಾ ಎಂದು ಲೋಕಾಭಿರಾಮವಾಗಿ ಮಾತನಾಡಿಸುತ್ತಾ, ಆಗ್ತಾನೇ ಗೂಡಿನಿಂದ ಹೊರಬಿದ್ದ ಕೋಳಿ-ಮರಿಗಳಿಗೆ ಕಾಳು ಹಾಕುತ್ತಾ ಆಡಿಸುತ್ತಾ ಕೂಡುವುದು ಅಮ್ಮನದು  ನಿತ್ಯದ ದಿನಚರಿ. ಎಂದಿನಂತೆ ಇಂದು ಮೊಮ್ಮಗ ಬಂದು ಅವ್ವ ಅವ್ವ ಎಂದು ಕರೆದಾಗ ದೈವಿಕ್ ಇವತ್ತು ನನ್ನ ಕರಿಬೇಡಪ್ಪಾ..,   ನನ ಹತ್ತಿರ ಬರಬೇಡಪ್ಪಾ.., ಹೋಗು ಎಂದು ತನ್ನೊಳಗಿನ ಚಡಪಡಿಕೆ, ದುಃಖದಿಂದ ಗದರಿಸಿದಳೋ ಏನೋ? ಅವನು ಅಳುತ್ತಾ ಬಂದವನು ಮತ್ತೆ ಅವ್ವ ಎನ್ನಲಿಲ್ಲ. ಪಕ್ಕದ ಮನೆಯವರು ಎದುರಿನ ಮನೆಯ ಕುಮಾರಸ್ವಾಮಿ ಅಣ್ಣ, ಆತನ ಮಗ ಕಾರ್ತಿಕ್ ಓಡಿ ಬಂದಿದ್ದಾರೆ, ಲೋಕಲ್ [ಆರ್.ಎಮ್.ಪಿ] ಡಾಕ್ಟರ್ ನ ಕರೆಸಿ ಒಂದು ಇಂಜೆಕ್ಷನ್ ಮಾಡಿಸಿದ್ದಾರೆ, ಅಮ್ಮ ಸುಸ್ತಾಗಿ ಮಲಗ್ಬಿಟ್ಟಿದ್ದಾಳೆ, *ಮೈ-ಕೈ ಎಲ್ಲಾ ತಣ್ಣಗಾಗಿದ್ದನ್ನು ಕಂಡು ಅತ್ತಿಗೆ ಒಲಿಬೂದಿ ತಂದು ಕೈಕಾಲಿಗೆ ತಿಕ್ಕಿದ್ದಾಳೆ,*  ತಡಮಾಡದೆ.., ಕೂಡಲೇ ಆಟೋ ಬಾಡಿಗೆ ಮಾಡಿಕೊಂಡು ಆಸ್ಪತ್ರೆಗೆ ಹೋಗಿದ್ದಾರೆ, *ಆಸ್ಪತ್ರೆಯ ಆವರಣದಲ್ಲಿ ಡಾಕ್ಟರ್ ಓಡಿ ಬಂದು ಚೆಕ್ ಮಾಡಿ ಅಮ್ಮ ಇನ್ನಿಲ್ಲ* ಎಂದು ದೃಢೀಕರಿಸಿದ್ದಾರೆ. ಸುದ್ದಿ ತಿಳಿಯುತ್ತಲೇ ಕಾಲೇಜಿಂದ ಹೊರಬಿದ್ದೆ ಮನೆಗೆ ಬಂದು ಸೇರುವಷ್ಟರಲ್ಲಿ ಒಂದು ಗಂಟೆ ಆಗಿತ್ತು, ಮನೆಯ ಮುಂದೆ ಪೆಂಡಾಲ್ ಹಾಕಿ, ಚಪ್ಪರದಡಿಯಲ್ಲಿ ಮಂಚದ ಮೇಲೆ ಹೊಸ ಸೀರೆ ತೊಟ್ಟು ಮಂದಹಾಸದಿ ಮಲಗಿದ್ದ ಅಮ್ಮನ ಮುಖದಲ್ಲಿ ಚೆಲುವಿತ್ತು!  ಅಮ್ಮನ ಬಳಗ ಅಪ್ಪನ ಬಳಗ, ಬಂಧು-ಬಳಗ ಆಗಲೇ ನೆರದಿತ್ತು, ಅವರುಗಳು ತಂದ ಹೂಮಾಲೆಗಳು ರಾಶಿ ರಾಶಿ ಅಮ್ಮನ ಮೇಲೆ ಬಿದ್ದಿತ್ತು, ಅಮ್ಮನ ಜಾತ್ರೆಗೆ ತೇರು ಸಿದ್ದಗೊಂಡಿತ್ತು.., ಮಂತ್ರ ಘೋಷ, ಸನಾಯಿ ನಾಧಾ ಮೊಳಗುತ್ತಲೇ  ಅಮ್ಮನ ತೇರು ಮುಂದೆ ಮುಂದೆ ಸಾಗಿದರೆ ನಾವು ಅವರತ್ತ ಭಾರವಾದ ಹೆಜ್ಜೆಗಳನ್ನ ಹಾಕುತ್ತಾ ಹಿಂದೆ ಹಿಂದೆ ಸಾಗಿದೆವು ಮಸಣದ ಕಡೆಗೆ.., *ಅಮ್ಮನ ಸಿದಿಗೆ ಹೊತ್ತವರು ಹೆಗಲು ಬದಲಿಸುತ್ತಾ.., ಅಮ್ಮನಿಗೆ ನೋವಾಗದಿರಲೆಂದು ನಿಧಾನ ಹೆಜ್ಜೆ ಹಾಕುತ್ತಾ ಸಾಗಿ* ಕುಣಿಯ ತಲುಪಿ ಅಲ್ಲಿ ಅಮ್ಮನಿಗೆ ಕಡೆಯದಾಗಿ ಬಾಯಿಗೆ ನೀರು ಬಿಟ್ಟು, ಅಂತಿಮ ಪೂಜೆ-ಪುನಸ್ಕಾರ ಮಾಡಿ ಕೈ ಮುಗಿದು ನಿಂತೆವು..,  *”ಆಡಿ ಬಾ ನನ ಕಂದ ಅಂಗಾಲ ತೊಳದೇನ ತೆಂಗಿನ ಕಾಯಿ ತಿಳಿನೀರು, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಕಂದಮ್ನ ಪಾದದ ಧೂಳ ತೊಳದೇನ”* ಎಂಬ ಅಮ್ಮನ ಜೋಗುಳ ಕೇಳಿ ಮಲಗಿದ *ಮಕ್ಕಳೆಲ್ಲರೂ ಸೇರಿ ಅಮ್ಮನನ್ನು ಗುಂಡಿಯಲಿಟ್ಟು ಮಣ್ಣುಗೂಡಿಸಿ ಬರುವಾಗ ಕರುಳು ಕಿತ್ತು ಬಾಯ್ಗೆ ಬಂದಂತಾಯ್ತು,* ಅಮ್ಮ ಪಾಪ ಅದೆಷ್ಟು ನೊಂದುಕೊಂಡಳೋ..? ಒಬ್ಬಂಟಿಯಾಗಿ ಹೋದಳು, ಕುಣಿ ಮುಂದೆ ನಿಂತುಕೊಂಡು ಮಾದಿಗರ ಚಂದಪ್ಪ.., ಮಸಣದಿ ನೆರೆದ ಜನಸ್ತೋಮದೆದಿರು ಸಲಿಕೆಗೆ ಒಂದು ನಾಣ್ಯದಿಂದ ಗಂಟೆಯಂತೆ ಭಾರಿಸುತ್ತ – *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* ಎಂದು ಮೂರೂ ಬಾರಿ ಸಾರಿದ ಮೇಲೆ; ಅಮ್ಮನ ಅಗಲಿಕೆಯು ಕಣ್ಣು ಕಳೆದುಕೊಂಡ ಕುರುಡರಾದಂತಹ ಅನುಭವ, ಅಕ್ಷರಶಃ ನನ್ನನ್ನು ಅನಾಥಳನ್ನಾಗಿಸಿ ಹೊರಟೆ ಬಿಟ್ಟಳು ಬಾರದ ಲೋಕಕ್ಕೆ, *ಸಗ್ಗದ ಸಿರಿ-ಸೀಮೆಯ, ಸೊಬಗ ಸವಿಯಲು ತನ್ನೆರೆಡು ಕಣ್ಗಳು ಸಾಲದೆಂದು ಲೆನ್ಸ್ ಹಾಕಿಸಿಕೊಂಡು ಹೋದ ಅಮ್ಮ ಮತ್ತೆ ಎಂದಿಗೂ ಬಾರಳು, ಆದರೆ ಅಲ್ಲಿ ಕಂಡುಂಡ ಅನುಭವಗಳನ್ನು ಅಮ್ಮ ಚಿತ್ತದಿ ದಾಖಲಿಸಿಕೊಂಡು ಮರೆಯದೆ ನನಗೆ ಟಪಾಲು ಬರೆದು ಕಳುಹಿಸಬಹುದು* ಎಂದು ಆಸೆಗಣ್ಣಲಿ ಅಂಚೆಯಣ್ಣನ ದಾರಿ ಕಾಯುತ್ತಿರುವೆ. ನನ್ನ ತಂಗಿ, ಮಗ, ಮಗಳು ಆಡ್ಯಾಡಿಕೊಂಡು ಅತ್ತು ಹಗುರಾದರು, ನೆರೆದವರು ಏನೆಂದುಕೊಂಡರೋ ಏನೋ? ನನ್ನ ಬಗ್ಗೆ ನನಗೆ ಅಳಲು ಬಾರದು, ಕಣ್ಣೀರು ತನ್ತಾನೇ ಸುಮ್ಮನೆ ತಣ್ಣಗೆ ಸುರಿವ ಜಿಟಿ ಜಿಟಿ ಮಳೆಯಂತೆ ಜಿನುಗುಟ್ಟುತ್ತಿತ್ತಿ.., *ಅವ್ಯಕ್ತ ಭಾವನೆಗಳನ್ನು ಹತ್ತಿಕ್ಕಲಾಗದೆ.., ಬರೆದು ಹಗುರ ಆಗೋಣವೆಂದುಕೊಂಡು.., ಒಂದೇ ಉಸಿರಿನಲ್ಲಿ ಬರೆದೆ..,* ನನ್ನ ಬರಹವನ್ನು ಮತ್ತೆ ಮತ್ತೆ ನಾನೇ ಮನಸಿನಲ್ಲಿ ಓದಿಕೊಂಡಂತೆಲ್ಲ; ನನ್ನ ಮನ‌ಸಿನ ನೋವೇ ಅಕ್ಷರ ರೂಪು ಪಡೆದಿವೆಅನ್ನುವಷ್ಟರ ಮಟ್ಟಿಗೆ ಮೂಡಿಬಂದಿದೆ ಎನಿಸಿ *ಅಳು ಜುಳು-ಜುಳು ದಳಿ-ದಳಿ  ಹರಿಯುತ್ತಿತ್ತು.*  *ಅಮ್ಮ ಕನಸಿನಲ್ಲಿ ಬರಬಹುದೂ, ತನ್ನ ಸಾವಿಗೂ ಮುನ್ನ ಅನುಭವಿಸಿದ ಚಡಪಡಿಕೆಯನ್ನು ನನ್ನೊಂದಿಗೆ ಹಂಚಿಕೊಳ್ಳಬಹುದು  ಎನ್ನುವ ನಿರೀಕ್ಷೆಯಲ್ಲಿ ಮಲಗಿದ್ದೇ,* ಅಮ್ಮ ತನ್ನ ಏನೊಂದೂ ಕಷ್ಟ ಹೇಳಿಕೊಳ್ಳದೆ ಪಕ್ಕದಿ ಕೂತು ತಲೆ ನೇವರಿಸುತ್ತಾ ಜೋಗುಳ ಹಾಡುತ್ತಿದ್ದಳು ನಾನು ಹಸುಗಂದಮ್ಮನಂತೆ ನಿದ್ದೆಗೆ ಜಾರಿದೆ. ಡಾ. ಯಲ್ಲಮ್ಮ ಕೆ

“ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಡಾ.ಯಲ್ಲಮ್ಮ ಕೆ. Read Post »

ಕಾವ್ಯಯಾನ

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ನಿನ್ನ ಪ್ರೇಮದ ಸುತ್ತ ಅನುದಿನವೂ ಸುತ್ತುತಿದೆ ಮನಸುನಿನ್ನ ಅನುರಾಗಭರಿತ ಪುಟಗಳನು ಮುತ್ತುತಿದೆ ಮನಸು ನಿನ್ನ ಸಾಂಗತ್ಯವು ನನ್ನ ಕನಸುಗಳಿಗೆ ರೆಕ್ಕೆಯಾಗಿದೆ ಬೇಬಿನನ್ನ ಜೀವತಾಣದ ನೆಲದಲಿ ನಿನ್ನಾಸೆ ಬಿತ್ತುತಿದೆ ಮನಸು ನನ್ನ ಉಸಿರಿನ ಪ್ರತಿತಾಳವೂ ನಿನ್ನ ಹೆಸರು ಗುನುಗುತಿದೆಕಣ್ಣೊಳಗಿನ ಕನಸಲಿ ನಿನ್ನ ರೂಪವೇ ಕೆತ್ತುತಿದೆ ಮನಸು ನನ್ನ ಬದುಕಿಗೆ ವಸಂತ ಮೂಡಿದೆ ನಿನ್ನ ಆಗಮನದಿಂದನಿನ್ನ ನಗುವಿನ ಪ್ರಭೆಯಲಿ ಬಾಳನು ಎತ್ತುತಿದೆ ಮನಸು   ಪರಿಮಳವಾಗಿದೆ ನಿನ್ನ ಸನಿಹವೇ ನನ್ನ ಜೀವಕೆ ಅರಗಿಣಿಮಲ್ಲಿಗೆಯ ಸುಮವನು ಉಸಿರಾಗಿ ಹೊತ್ತುತಿದೆ ಮನಸು ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ಕಾವ್ಯಯಾನ

ವಿನೋದ ತಾವ್ಡೆಕರ್ “ಗುಡಿ ಯೊಳಗೆ ಇವ-ನಮ್ಮವ ಹೊರಬಂದರೆ ಯಾರಿವ !!”

ಕಾವ್ಯ ಸಂಗಾತಿ ವಿನೋದ ತಾವ್ಡೆಕರ್ “ಗುಡಿ ಯೊಳಗೆ ಇವ-ನಮ್ಮವ ಹೊರಬಂದರೆ ಯಾರಿವ !!” ತೋರಿಕೆಯ ಜೀವನ ನೀ ಬಿಟ್ಟುಬಿಡು ಮನುಜ,ಮೇಲೊಂದು ಒಳಗೊಂದ ಮಾಡುವುದ ಬಿಡು!! ಅರಿತುಕೊ ನಿನ್ನ., ಕಲಿತುಕೊ ಒಳಿತನ್ನ !! ಬಯಸ ಬೇಡ ನೀ ನನ್ನಿಂದ ಎಂದಿಗೂ,ದುರಾಸೆಯ ನೀ ಬಿಟ್ಟುಬಿಡು!!ಕೊಡುವೆ ನಾ ನಿನ್ನ ರ‍್ಮದ ಫಲ ವ ಕೇಳಿ ಪಡೆಯುವ ಆಸೆ ನೀ ಬಿಟ್ಟುಬಿಡು ಮನುಜ!!ನಿನ್ನಿಂದ ನನಗೆ ಯಾವುದೇ ಆಸೆಯೂ ಇಲ್ಲ,ಕೊಡುತ್ತಿರುವೆ ನಾ ನಿನಗೆ ಕುರಿಯ-ತಲಿ, ಪ್ರಾಣಿಯ-ಬಲಿ ಎಂಬ,ನಾಲಕ್-ಕಾಸಿನ ತೋರಿಕೆಯ ಜೀವನ ನೀ ಬಿಟ್ಟುಬಿಡು ಮನಜ!! ಹಿಂಸೆಯ ಬದಿಗಿಟ್ಟು ದ್ವೇಷವ ನೀ ತೋರದುಬಿಡು,ಪ್ರೇಮದ ದಾರಿಯ ನೀ ಸ್ವೀಕರಿಸು ಮನುಜ !!ಅಸಹಾಯನಿಗೆ ಸಹಾಯ, ಪೀಡಿತನಿಗೆ ಧಾನ,ಸಹಜ ಕರುಣೆಯಲಿ ನೀ ನನ್ನ ಕಾಣುವೆ ಮನುಜ !! ನೀ ಸಹಕರಿಸಿದ, ದೇಹವು ವೊಂದಿಸುತ್ತಿರುವ ಪ್ರತೀ ವೊಂದನೆಯೂ ನನಗೆ ಸ್ವೀಕಾರವಿದೆ. ನಿನ್ನ ನಮನ ಯಾಚಿಸುವ ಆಸೆ ನನಗಿಲ್ಲ,ನೀ ಧ್ಯಾನವೇ ಆಚರಿಸು. ನನಗೆ ನಿನ್ನ ವೊಂದನೆಯೂ ರ‍್ಮವೇ ಸೂಚಿಸಲು ಬಿಡು,ತೋರಿಕೆಯ ಜೀವನ ನೀ ಬಿಟ್ಟುಬಿಡು ಮನುಜ!! ಒಪ್ಪಿಕೋ ಪ್ರೇಮವ ದುಃಖದ ಜೀವನ ನೀಬಿಟ್ಟುಬಿಡು ಮನುಜ ನೀ ಬಿಟ್ಟುಬಿಡು ಮನುಜ!! -ವಿನೋದ ತಾವ್ಡೆಕರ್

ವಿನೋದ ತಾವ್ಡೆಕರ್ “ಗುಡಿ ಯೊಳಗೆ ಇವ-ನಮ್ಮವ ಹೊರಬಂದರೆ ಯಾರಿವ !!” Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಧಾರಾವಾಹಿ ಸಂಗಾತಿ ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ ನೋಟ -37 ಜನವರಿ ೨೦೦೫ ರಿಂದ ಏಪ್ರಿಲ್ ೨೦೨೬ ರಲ್ಲಿ ನಾನು ನಿವೃತ್ತಿ ಹೊಂದುವ ತನಕ ಕೆಲಸ ಮಾಡಿದ್ದು ಈ ಶಾಖೆ ಐದರಲ್ಲಿ ವೃತ್ತಿ ಜೀವನದ ಅರ್ಧಕ್ಕಿಂತ ಹೆಚ್ಚು ಭಾಗ ಕಳೆದದ್ದು ಇಲ್ಲೇ. ಯಾವುದನ್ನು ಬರೆಯುವುದು ಯಾವುದನ್ನು ಬಿಡುವುದು ಎಂದೆ ತೋಚದಷ್ಟು ಸುದೀರ್ಘ ನೆನಪಿನ ಯಾನ ಇದು. ಒಂದು ಬಾರಿ ಲೂನಾದಿಂದ ಬಿದ್ದು ಅಪಘಾತವಾಗಿ ಒಂದು ರೀತಿ ಬಿಸಿ ಹಾಲು ಕಂಡ ಬೆಕ್ಕಿನಂತೆ ಆಗಿಬಿಟ್ಟಿದ್ದೆ. ಆದರೆ ರವೀಶ್ ಅವರು ಸೇಲ್ಸ್ ಮೇಲೆ ಬೇರೆ ಊರುಗಳಿಗೆ ಹೋದಾಗ ಆಟೋದಲ್ಲಿ ಹೋಗಬೇಕಿತ್ತು. ಗೆಳತಿ ಶೈಲಾ ಒಮ್ಮೊಮ್ಮೆ ಅವಳ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದರೂ ಸದಾ  ತೊಂದರೆ ಕೊಡುವುದು ನನಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಮತ್ತೆ ಒಂದು ಸೆಕೆಂಡ್ ಹ್ಯಾಂಡ್ ವಾಹನ ಕೊಂಡು ಧೈರ್ಯವಾಗಿ ಆಫೀಸಿಗೆ ಹೋಗಲು ಆರಂಭಿಸಿದೆ. ನಾನು ಶಾಖೆ ಎರಡರಲ್ಲಿ ಇದ್ದಾಗಲೇ ನನ್ನ ತಂಗಿ ವೈಶಾಲಿ ಅವರು ರಾಮಕೃಷ್ಣನಗರದ ಮನೆ ಕೊಂಡುಕೊಂಡು ಅಲ್ಲಿಗೆ ಬಂದಿದ್ದರು. ಅವರ ಜೊತೆಯೇ ನನ್ನ ತಂದೆ ಇದ್ದದ್ದು .ಹಾಗಾಗಿ ಮಧ್ಯಾಹ್ನ ಊಟದ ವೇಳೆಯಲ್ಲಿ ಅಥವಾ ಸಂಜೆ ಮನೆಗೆ ಹೋಗುವಾಗ ಹೋಗಿ ಅವರನ್ನು ಭೇಟಿಯಾಗಲು ನನಗೆ ವಾಹನವಿದ್ದುದು ತುಂಬಾ ಅನುಕೂಲಕರವಾಗಿತ್ತು. ಹೊಸ ವ್ಯವಹಾರ ವಿಭಾಗದಲ್ಲಿ ಇದ್ದರಿಂದ ಆ ವರ್ಷ ಮಾರ್ಚ್ ಕೊನೆಯ ವರ್ಷಾಂತ್ಯದ ಕೆಲಸಗಳನ್ನು ಸಮರ್ಪಕವಾಗಿ ಮುಗಿಸಿ ವಿಭಾಗೀಯ ಕಚೇರಿಗೆ ಹೋಗಿ ಸಲ್ಲಿಸಿ ಬಂದಿದ್ದಾಯಿತು. ಈ ಶಾಖೆಯಲ್ಲಿ ಎಲ್ಲರೂ ಪಕ್ಕದಲ್ಲಿ ಇದ್ದ ಜಯಲಕ್ಷ್ಮಿ ಹೋಟೆಲಿಗೆ ಕಾಫಿಗೆ ಹೋಗುತ್ತಿದ್ದದ್ದು ನಾನು ಅವರೊಂದಿಗೆ ಹೋಗಿ ಬರುತ್ತಿದ್ದೆ. ಅಲ್ಲಿ ಎದುರುಗಡೆ ಮಲ್ಲಿಗೆ ಕೆಫೆ ಎಂಬ ಹೋಟೆಲ್ ಇತ್ತು .ಅಲ್ಲಿ ಬಿಸಿಬೇಳೆ ಬಾತ್ ತುಂಬಾ ಚೆನ್ನಾಗಿ ಮಾಡುತ್ತಿದ್ದರು. ಒಮ್ಮೊಮ್ಮೆ ಊಟಕ್ಕೆ ಮನೆಗೆ ಹೋಗದೆ ಅಲ್ಲಿ ನಾನು ಗೆಳತಿಯರು ಒಂದೊಂದು ಬಿಸಿಬೇಳೆ ಬಾತ್ ತೆಗೆದುಕೊಂಡು ಮೊಸರನ್ನು ಇಬ್ಬರು ಮೂವರು ಶೇರ್ ಮಾಡುತ್ತಿದ್ದೆವು. ಆ ಹೋಟೆಲ್ ನನ್ನ ಪಿಯುಸಿ ಸಹಪಾಠಿ ಶ್ರೀನಿವಾಸ್ ಅವರದಂತೆ. ಅದು ಆಗಲೇ ಕ್ಲೋಸ್ ಆಗಿತ್ತು .ಆನಂತರ ನಮ್ಮ ಪಿಯುಸಿ ಸಹಪಾಠಿಗಳು ವಾಟ್ಸಾಪ್ ಗುಂಪು ಮಾಡಿಕೊಂಡಾಗ ಆ ವಿಷಯ ತಿಳಿದು ಬಂತು. ನಾನು ರೇಗಿಸುತ್ತಿದ್ದೆ ನಿನ್ನದು ಎಂದು ತಿಳಿದಿದ್ದರೆ ದಿನ ಅಲ್ಲಿಗೆ  ಊಟಕ್ಕೆ ಬಂದುಬಿಡಬಹುದಿತ್ತು ಅಂತ.ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಅಲ್ಲೇ ಸರ್ಕಲ್ ಪಕ್ಕದಲ್ಲಿ ಇದ್ದ ಕನಕಗಿರಿ ಸೀರೆಯ ಅಂಗಡಿ. ಅಲ್ಲಿಗೆ ಹೊಸ ಸ್ಟಾಕ್ ಬಂದಾಗಲೆಲ್ಲ ಹೋಗಿ ನೋಡುತ್ತಿದ್ದವು ನೋಡಿದ ಮೇಲೆ ತೆಗೆದುಕೊಳ್ಳದಿದ್ದರೆ ಆಗುತ್ತದೆಯೇ… ಹಾಗಾಗಿ ಬಹಳಷ್ಟು ಸೀರೆಗಳನ್ನು ಆ ಅಂಗಡಿಯಲ್ಲಿ ಕೊಂಡಿದ್ದೆವು. ಈ ಮಧ್ಯೆ ಮುಂದಿನ ಜನವರಿಯಲ್ಲಿ ಶಾಖೆಯ ಕಟ್ಟಡವನ್ನು ಖಾಲಿ ಮಾಡಿ ಅದೇ ರಸ್ತೆಯ ಇನ್ನೊಂದು ತುದಿಯಲ್ಲಿ ಇದ್ದ ಎಸ್ ಬಿ ಎಂ ಬ್ಯಾಂಕಿನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಅಲ್ಲಿ ಎರಡನೆಯ ಮಹಡಿಯಲ್ಲಿ ನಮ್ಮ ಕಚೇರಿ ಲಿಫ್ಟ್ ಸೌಲಭ್ಯ ಏನೋ ಇತ್ತು .ಆದರೆ ಮೂರು ಮೂರು ದಿನಕ್ಕೂ ಲಿಫ್ಟ್ ಕೆಟ್ಟುಹೋಗುತ್ತಿತ್ತು . ನಾವು ಕೆಲವರಿಗೆನೋ ಸುಲಭವಾಗಿ ಹತ್ತಲು ಆಗುತ್ತಿತ್ತು ಆದರೆ ವಯಸ್ಸಾಗಿದ್ದ ಶಾಂತ ಅವರಿಗೆ ಹಾಗೂ ಆರೋಗ್ಯ ಸರಿ ಇಲ್ಲದಿದ್ದ ಲೀಲಾವತಿ ಅವರಿಗೆಲ್ಲ ತುಂಬಾ ಕಷ್ಟವಾಗುತ್ತಿತ್ತು. ಲೀಲಾವತಿ ಆ ವೇಳೆಗಾಗಲೇ ನಾಟಕ ಸಣ್ಣ ಕಥೆ ಸಂಕಲನಗಳನ್ನು ಪ್ರಕಟಿಸಿ ಹೆಸರಾಂತ ಲೇಖಕಿಯಾಗಿದ್ದರು ಎಷ್ಟು ನಿಯತಕಾಲಿಕೆಗಳಲ್ಲಿ ಅವರ ಕಥೆಗಳು ಬಂದಿದ್ದವು. ಆದರೆ ನಾನು ಆಗ ಬರೆಯಲು ಇನ್ನೂ ಆರಂಭಿಸಿರಲಿಲ್ಲ ಈಗ ಅವರ ಜೊತೆ ಇದ್ದಿದ್ದರೆ ಎಷ್ಟೋ ಮಾರ್ಗದರ್ಶನ ಸಿಗುತ್ತಿತ್ತು ಅನಿಸುತ್ತೆ ನಮ್ಮ ಶಾಖೆಯಿಂದ ವಿಭಾಗೀಯ ಕಚೇರಿಗೆ ವರ್ಗಾವಣೆ ತೆಗೆದುಕೊಂಡು ಹೋಗಿ ಒಂದೆರಡು ವರ್ಷಗಳಾದ ನಂತರ ಅವರ ದೇಹಾಂತವಾಯಿತು ಒಳ್ಳೆಯ ಗೆಳತಿ ಆಕೆ.ಇಲ್ಲಿ ಪಕ್ಕದಲ್ಲಿಯೇ ಮೋರ್ ಹಾಗೂ ರಸ್ತೆ ದಾಟಿದ ನಂತರ ಲಾಯಲ್ ವರ್ಲ್ಡ್ ಗಳು ಇದ್ದಿದ್ದು ಸಂಜೆ ಕಚೇರಿ ಮುಗಿದ ನಂತರ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ತುಂಬಾ ಅನುಕೂಲವಾಗುತಿತ್ತು. ಅದರಲ್ಲೂ ಮೋರ್ನಲ್ಲಿ ಬುಧವಾರದ ದಿನ ತರಕಾರಿ ಹಾಗೂ ಹಣ್ಣುಗಳು ಸ್ವಲ್ಪ ರಿಯಾಯಿತಿ ದರದಲ್ಲಿ ದೊರೆಯುತ್ತಿತ್ತು. ಇಲ್ಲಿ ಎದುರುಗಡೆ ಶಿವ ಸಾಗರ್ ಎಂಬ ಹೋಟೆಲ್ ಇದ್ದರೂ ಸಹ ಕಚೇರಿಗೆ ಒಬ್ಬ ಹುಡುಗ ಟೀ ತಂದು ಕೊಡುತ್ತಿದ್ದು ಎಲ್ಲರೂ ಅಲ್ಲೇ ತೆಗೆದುಕೊಳ್ಳುತ್ತಿದ್ದೆವು. ಇಲ್ಲಿ ಒಂದೇ ಮಹಡಿಯಲ್ಲಿ ಎರಡು ಭಾಗಗಳಿದ್ದವು ಒಂದು ಭಾಗದಲ್ಲಿ ಕ್ಯಾಶ್ ಕೌಂಟರ್ ಲೆಕ್ಕಪತ್ರ ವಿಭಾಗ ಪಾಲಿಸಿ ಸೇವಾ ವಿಭಾಗ ಎಸ್ಎಸ್ ವಿಭಾಗ ಮತ್ತು ದಾವಾಗಿ ಭಾಗಗಳಿದ್ದವು ಮತ್ತೊಂದು ಭಾಗದಲ್ಲಿ ಕಂಪ್ಯೂಟರ್ ಸೆಕ್ಷನ್ ಸಾಕಾಧಿಕಾರಿಗಳ ಕಚೇರಿ ವಿಕ್ರಯ ವಿಭಾಗ ಮತ್ತು ಹೊಸ ವ್ಯವಹಾರಗಳ ವಿಭಾಗ, ಕಛೇರಿ ಸೇವಾ ವಿಭಾಗಗಳೂ ಇದ್ದು ಡೆವಲಪ್ಮೆಂಟ್ ಆಫೀಸರ್ಸ್ ಹಾಗೂ ಏಜೆಂಟ್ ಗಳ ವಿಭಾಗವೂ ಇಲ್ಲಿಯೇ ಇತ್ತು.‌ ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಚೆನ್ನಾಗಿ ಇದ್ದದ್ದರಿಂದ ಬಹಳ ಬೇಗ ಅಡ್ಜಸ್ಟ್ ಆಗಿಬಿಟ್ಟಿತ್ತು.‌ ಈ ನಡುವೆ ಹಳೆಯ ಕಟ್ಟಡದಲ್ಲಿ ಇದ್ದಾಗಲೇ ನಮ್ಮ ತಂದೆ ಸ್ಕೂಟರ್ನಿಂದ ಬಿದ್ದು ತೊಡೆ ಮೂಳೆ ಆಪರೇಷನ್ ಆಗಿತ್ತು. ನಂತರದಲ್ಲಿ ಅವರ ಆರೋಗ್ಯ ಕೆಟ್ಟು ಕೆಮ್ಮು ಹೆಚ್ಚಾಗಿ ಉಸಿರಾಟ ಕಷ್ಟವಾಗಿ ಅಪೋಲೋ ಆಸ್ಪತ್ರೆಗೆ ಸೇರಿಸಿದೆವು. ಕಡೆಗೂ ಅವರನ್ನು ಉಳಿಸಿಕೊಳ್ಳಲು ನಮಗೆ ಆಗಲೇ ಇಲ್ಲ. ಯಾಕೋ ಅಪ್ಪ ನಾನು ಕಳೆದಿಕೊಂಡ ಮೇಲೆ ಎಲ್ಲದರಲ್ಲಿ ನಿರಾಸೆ. ಒಂದು ರೀತಿ ಖಿನ್ನತೆ ಕಾಡುತ್ತಿತ್ತು. ಆಗ ಪೂರ್ತಿ ಕಚೇರಿಯ ಕೆಲಸಗಳಲ್ಲಿ ತೊಡಗಿಸಿಕೊಂಡು ನನ್ನನ್ನು ಮರೆಯಲು ಪ್ರಯತ್ನಿಸುತ್ತಿದೆ . ಪಾಲಿಸಿದಾರರ ಹುಟ್ಟಿದ ದಿನಾಂಕ ಬದಲಾವಣೆ ಆ ರೀತಿ ಎಲ್ಲಾ ತಿದ್ದುವಿಕೆಯ ಕೆಲಸಗಳನ್ನು ಮಾಡತೊಡಗಿದ್ದು ಆಫೀಸ್ನ ಸಮಯದ ನಂತರ 5:30 ಇಂದ 6.30 ತನಕ ಈ ರೀತಿ ಕೆಲಸಗಳನ್ನು ಮಾಡುತ್ತಿದ್ದೆವು. ಆಗ ಶೈಲಾ ನನಗೆ ತುಂಬಾ ಸಹಕಾರ ನೀಡಿ ಜೊತೆಯಲ್ಲಿ ಇರುತ್ತಿದ್ದಳು. ಆಗ ಪಾಲಿಸಿ ಸೇವಾ ವಿಭಾಗದ ಆಡಳಿತ ಅಧಿಕಾರಿಗಳಾಗಿದ್ದವರು ಶ್ರೀ ಲಕ್ಷ್ಮೇಂದ್ರ  ಕುಮಾರ್.  ಅವರು ಈ ಹಿಂದೆ ಸಕಲೇಶಪುರದಲ್ಲಿ ಅವರು ನನ್ನೊಂದಿಗೆ ಕೆಲಸ ಮಾಡುತ್ತಿದ್ದರು.  ಬೇರೆಯ ಕೆಲಸಗಳನ್ನು ಮಾಡುತ್ತಿದ್ದು ಒಂದು ರೀತಿ ನನಗೆ ನನ್ನ ಸಂಸ್ಥೆಗೆ ಸೇವೆ ಸಲ್ಲಿಸುವುದರಲ್ಲಿ ಒಂದು ತೃಪ್ತಿ ತಂದು ಕೊಟ್ಟಿದ್ದು ಎಂದು ಮಾತ್ರ ಹೇಳಬಹುದು. ಮೊದಲಿನಿಂದಲೂ ನಾನು ನನ್ನ ವಿಭಾಗ ಮಾತ್ರ ಎಂಬ ಚೌಕಟ್ಟು ಹಾಕಿಕೊಂಡಿರಲಿಲ್ಲ . ಈವರೆಗೆ ಮಾಡಿ ನನಗೆ ಚೆನ್ನಾಗಿ ತಿಳಿದ ವಿಭಾಗಗಳ ಕೆಲಸ ಆಗಿದ್ದರೆ ಅಥವಾ ಅಲ್ಲಿ ಹೆಚ್ಚುವರಿ ಕೆಲಸ ಆಗಿ ನನ್ನ ಅವಶ್ಯಕತೆ ಇದ್ದಿದ್ದರೆ ಸದಾ ನನ್ನ ನೆರವಿನ ಹಸ್ತ ನೀಡುತ್ತಲೇ ಇರುತ್ತಿದ್ದೆ .ಈ ಮಾತನ್ನು ನನ್ನೊಂದಿಗೆ ಕೆಲಸ ಮಾಡಿದೆ ಎಲ್ಲಾ ಅಧಿಕಾರಿಗಳು ಮುಕ್ತ ಕಂಠದಿಂದ ಶ್ಲಾಘನೆ ಮಾಡುತ್ತಾರೆ. ಹೊಸ ವ್ಯವಹಾರ ವಿಭಾಗದಲ್ಲಿ ಬಹಳಷ್ಟು ದಿನ ಕೆಲಸ ಮಾಡಿದ್ದರಿಂದ ಒಂದು ರೀತಿಯ “ಪಂಟರ್” ಆಗಿಬಿಟ್ಟಿದ್ದೆ. ಬೇರೆ ಶಾಖೆಯವರು ವಿಭಾಗಿಯ ಕಛೇರಿಯವರೂ ಸಹ ಕೆಲವೊಮ್ಮೆ ನನ್ನ ಬಳಿ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತಿದ್ದರು. ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ಸಿ ಕೆ ರವಿ ಶಾಖಾಧಿಕಾರಿಗಳು ವರ್ಗವಾಗಿ ಹೋಗಿ ಮಂಜುನಾಥ್ ಎನ್ನುವವರು ಬಂದರು. ಅವರು ಮೊದಲು ಪತ್ರಕರ್ತರಾಗಿದ್ದರಂತೆ. ಹಾಗಾಗಿ ಸಾಹಿತ್ಯಾಸಕ್ತರು.ಎಷ್ಟೋ ಸಾಹಿತ್ಯದ ವಿಷಯಗಳನ್ನು ಮಾತನಾಡುತ್ತಿದ್ದೆವು.  ಅವರು ಸಹ ನನಗೆ ಹೊಸ ವ್ಯವಹಾರ ವಿಭಾಗದಿಂದ ಬದಲಾವಣೆ ತೆಗೆದುಕೊಳ್ಳಲು ಬಿಡಲೇ ಇಲ್ಲ. ಅವರು ವರ್ಗವಾಗಿ ಹೋಗುವ ಮುಂಚೆ ಎಲ್ಲರಿಗೂ ವಿಭಾಗ ಬದಲಾವಣೆಗಳನ್ನು ಮಾಡಿದರು ಆಗ ನಾನು ತುಂಬಾ ದಿನಗಳಿಂದ ಬಯಸುತ್ತಿದ್ದ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ಸಿಕ್ಕಿತು. ಅಲ್ಲಿ ಪಾಲಿಸಿ ಸಾಲ ಕೊಡುವ ವಿಭಾಗ ಮತ್ತು ಇತರೆ ಕೆಲಸಗಳ ವಿಭಾಗ ನನ್ನ ಪಾಲಿಗೆ ಬಂತು. ನನ್ನದೇ ಹೆಸರಿನ ಕೆ ಸುಜಾತ ಎನ್ನುವವರು ಮತ್ತು ಶಿವಶಂಕರ್ ಎನ್ನುವವರು ನನಗೆ ಸಹಾಯಕರು ಮೂರು ಜನವು ಸೇರಿ ಹಳೆಯ ಬಾಕಿ ಇದ್ದದ್ದನ್ನು ಮುಗಿಸಿದಲ್ಲದೆ ಅಂದು ಅರ್ಜಿ ಕೊಟ್ಟ ಸಾಲಗಳನ್ನು ಅಂದೆ ವಿಲೇವಾರಿ ಮಾಡುವಷ್ಟು ಮಟ್ಟಕ್ಕೆ ಒಂದು ತಿಂಗಳಲ್ಲಿ ತೆಗೆದುಕೊಂಡು ಬಂದೆವು. ಅಂದಿನಿಂದ ಇಂದಿನವರೆಗೂ ನಮ್ಮ ಶಾಖೆ ಐದರಲ್ಲಿ ಅಂದು ಕೊಟ್ಟ ಅರ್ಜಿಗಳು ಅಂದೇ ವಿಲೇವಾರಿ ಆಗುವಂತೆ ಕ್ರಮ ಇಂದಿಗೂ ನಡೆದುಕೊಂಡು ಬಂದಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ನಮ್ಮ ಕಾಲದಲ್ಲಿ ಎಂದು ಹೇಳಲು ತುಂಬಾ ಸಂತೋಷವಿದೆ.ಆಗ FEAP Front End Application  Programme ಹೊಸದಾಗಿ ಚಾಲ್ತಿಯಲ್ಲಿತ್ತು. 1990 ರ ದಶಕದ ಕೊನೆಯಲ್ಲಿ ಮತ್ತು 2000 ರ ಆರಂಭದಲ್ಲಿ LIC ಪರಿಚಯಿಸಿದ ಒಂದು ಮೂಲಭೂತ ಸಾಫ್ಟ್‌ವೇರ್ ಇದು.. ಇದಕ್ಕೂ ಮುನ್ನ ಬಹುತೇಕ ಕೆಲಸಗಳು ಹಸ್ತಪ್ರತಿ (Manual ledgers) ಅಥವಾ ಹಳೆಯ ಕಂಪ್ಯೂಟರ್ ಪ್ರೋಗ್ರಾಂಗಳ ಮೂಲಕ ನಡೆಯುತ್ತಿದ್ದವು. ಅದನ್ನು ಡಿಜಿಟಲೀಕರಣಗೊಳಿಸಲು FEAP ತರಲಾಯಿತು.​ಉದ್ದೇಶ: ಎಲ್.ಐ.ಸಿ ಶಾಖೆಗಳ (Branch Offices) ಕೌಂಟರ್‌ಗಳಲ್ಲಿ ಗ್ರಾಹಕರ ಸೇವೆಗಳನ್ನು ವೇಗಗೊಳಿಸುವುದು.​ಮುಖ್ಯ ಕಾರ್ಯಗಳು: ಪಾಲಿಸಿಯ ಸದ್ಯದ ಸ್ಥಿತಿ (Policy Status), ಸಾಲ ಮತ್ತು ಪುನಶ್ಚೇತನದ ಉಲ್ಲೇಖಗಳು (Loan & Revival quotations), ಕಂತು ಪಾವತಿ (Premium payments) ಮತ್ತು ವಿಳಾಸ ಬದಲಾವಣೆಯಂತಹ ಮೂಲಭೂತ ಕೆಲಸಗಳನ್ನು ಮಾಡಲು ಇದು ಸಹಕಾರಿಯಾಗಿತ್ತು.​ಕಾರ್ಯವೈಖರಿ: ಇದು ಆಯಾ ಶಾಖೆಯ ಸ್ಥಳೀಯ ಸರ್ವರ್‌ಗಳ (Local Servers) ಆಧಾರದ ಮೇಲೆ ಕೆಲಸ ಮಾಡುತ್ತಿತ್ತು. ನಂತರದ ದಿನಗಳಲ್ಲಿ ಇವುಗಳನ್ನು ವ್ಯಾನ್ (WAN – Wide Area Network) ಮೂಲಕ ಜೋಡಿಸಲಾಯಿತು. ಕಂಪ್ಯೂಟರಿಕರಣ ಎಂದರೆ garbage in garbage out. ಹಾಗಾಗಿ ಅದಕ್ಕೆ ಕೊಡುವ ಎಲ್ಲಾ ಡಾಟಾಗಳು ಸರಿಯಾಗಿರಬೇಕು. ಹಾಗಾಗಿ ರೆಕಾರ್ಡ್ಸ್ ಗಳ ಶುದ್ಧೀಕರಣ ಅಂದರೆ purification of records ಆಗಲೇ ಬೇಕಿತ್ತು ಆ ನಿಟ್ಟಿನಲ್ಲಿ ಪಾಲಿಸಿ ಸೇವಾ ವಿಭಾಗದಲ್ಲಿ ಬಹಳಷ್ಟು ಕೆಲಸಗಳು ಬಾಕಿ ಇದ್ದವು ಆಗ ನಮಗೆ ಆಡಳಿತ ಅಧಿಕಾರಿಗಳಾಗಿ ಇದ್ದವರು ವಿಷಕಂಠನಾಯಕ್ ಅನ್ನುವವರು. ಅವರ ಸಹಕಾರದಿಂದ ನಾನು ಮತ್ತೊಬ್ಬರು ಕೆ. ಸುಜಾತ ಮತ್ತು ಶಿವಶಂಕರ್ ಅವರುಗಳು ಸೇರಿ ಕಂಪ್ಯೂಟರ್ ಸಹಾಯದಿಂದ ಕೊಡುತ್ತಿದ್ದ ಎರರ್ ಲಿಸ್ಟ್ ಗಳನ್ನು ಸರಿ ಮಾಡುತ್ತಾ ಹೋಗುತ್ತಿದ್ದೆವು. ಮೂಲಭೂತವಾಗಿ ನಮ್ಮದು ಜಿಎಸ್‌ಡಿ‌ ಅಂದರೆ ರಾಜ್ಯ ಸರ್ಕಾರಿ ನೌಕರರ ಸಂಬಳ ಕಡಿತ ಯೋಜನೆ ಅಡಿ ಬರುವ ಪಾಲಿಸಿಗಳು ಹೆಚ್ಚು ಇದ್ದದ್ದು ಬೇರೆ ಕಡೆಯಿಂದ ಬಂದ ಪಾಲಿಸಿಗಳಲ್ಲಿ ಡಾಟಾ ಎಷ್ಟೋ ಬೇರೆ ವೇಳೆ ತಪ್ಪಾಗಿ ಇರುತ್ತಿತ್ತು ಕೆಲವೊಮ್ಮೆ ಪಾಲಿಸಿಗಳು ವರ್ಗವಾಗಿ ಬಂದಿರುತ್ತಲೇ ಇರುತ್ತಿರಲಿಲ್ಲ ಈ ಎಲ್ಲಾ ಸಮಸ್ಯೆಗಳಿಂದಾಗಿ ಎರರ್ ಗಳು ಹೆಚ್ಚುತ್ತಾ ಹೋಗುತ್ತಿದ್ದವು ಅದು ಒಂದು ರೀತಿ ಮಧ್ಯಂತರ ಸ್ಥಿತಿ ಆದುದರಿಂದ ಪೂರ್ತಿ ಮಾನ್ಯುಯಲ್ ಆಗಿ ಮಾಡಲು ಆಗದೆ ಕಂಪ್ಯೂಟರ್ ಮೂಲಕ ಮಾಡಲು ಮಾಹಿತಿ ಸರಿ ಇರದೆ ತುಂಬಾ ಕಷ್ಟ ಆಗುತ್ತಿತ್ತು ಹಾಗಾಗಿ ಎಲ್ಲಾ ಎರರ್ ಗಳನ್ನು ಸರಿಪಡಿಸಬೇಕಾಗಿದ್ದು ಆಗ ಮೂಲಭೂತವಾಗಿ ಆಗಬೇಕಿದ್ದ ಕಾರ್ಯ. ಇದಕ್ಕಾಗಿ ಮೊದಲು ವಿವಿಧ ರೀತಿಯ ಲಿಸ್ಟ್ಗಳನ್ನು ಡಿಪಿ ವಿಭಾಗದ ಪ್ರೋಗ್ರಾಮರ್ ರಾಮಚಂದ್ರ ಅವರು ತೆಗೆದುಕೊಡುತ್ತಿದ್ದರು ನಂತರ ನಾವು ನಮ್ಮ ವಿಭಾಗದಲ್ಲಿ ಫೈಲ್ಗಳನ್ನು ತೆಗೆದು ಸರಿಯಾದ ಮಾಹಿತಿಗಳನ್ನು ಕಂಪ್ಯೂಟರ್ಗೆ ಹಾಕಿ ಅದನ್ನು ಸರಿ ಮಾಡುತ್ತಿದ್ದೆವು. ತುಂಬಾ ಖುಷಿ ಪಟ್ಟ ಕೆಲಸ ಅದು ಅದಕ್ಕೆ ಸಹಕಾರ ನೀಡಿದ ವಿಶ್ವಕಂಠನಾಯಕ್ ಸರ್ ಸುಜಾತ ಮತ್ತು ಶಿವಶಂಕರ್ ಹಾಗೂ ರಾಮಚಂದ್ರ ಹಾಗೂ ಕೇಳಿದ ಸಮಯಕ್ಕೆ ಸರಿಯಾಗಿ ಫೈಲ್ಗಳನ್ನು ರೆಕಾರ್ಡ್ಸ್ ನಿಂದ ತೆಗೆದುಕೊಡುತ್ತಿದ್ದ ಪ್ರತಾಪ್ ಎಲ್ಲರಿಗೂ ಈ ಮೂಲಕ ಮತ್ತೊಮ್ಮೆ ಧನ್ಯವಾದಗಳು ಈ ರೀತಿ

Read Post »

You cannot copy content of this page

Scroll to Top