ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.”

ಕಾವ್ಯ ಸಂಗಾತಿ ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.” ಭೂಪಟದ ಗೆರೆಗಳಲಿರಕ್ತದ ಕಲೆಗಳ ಹಸಿವು,ಅಧಿಕಾರದ ಅಮಲಿಗೆಅನಾಥ ಮಗುವಿನ ಅಳುವೇ ನೈವೇದ್ಯ, ಉಕ್ಕಿನ ಹಕ್ಕಿಗಳ ಅಬ್ಬರಕೆಮಣ್ಣಾದವು ಬದುಕು,ಗೆಲುವಿನ ಪಟಾಕಿ ಅಡಿಯಲ್ಲಿಹೂತುಹೋದವು ಸಾವಿರ ಉಸಿರು, ತುತ್ತು ಅನ್ನದ ಪಾತ್ರೆಯಲಿಬೆಂದು ಹೋದವು ಮದ್ದು-ಗುಂಡು,ಮನೆಮಠದ ನೆನಪುಗಳಿಗೆಈಗ ಸ್ಮಶಾನವೇ ಕಡೆಯ ಉಡುಗೊರೆ, ದೇಶಪ್ರೇಮದ ಘೋಷಣೆಯಲಿಕಾಣದಾದವು ಒಲವಿನ ಕಣ್ಣು,ಯುದ್ಧದ ಬೂದಿಯಲಿ ಉಳಿದದ್ದುಬರಿಯ ಬೂದುಬಣ್ಣದ ಮಣ್ಣು, ಗಡಿ ದಾಟದ ಕನಸುಗಳಿಗೆಬಾಂಬುಗಳೇ ಅಂತಿಮ ವಿರಾಮ,ಗೆದ್ದವನ ಅಟ್ಟಹಾಸದಲಿಸತ್ತವನ ಹೆಸರಿಗಿಲ್ಲ ಆರಾಮ, ಬಂಕರಿನ ಕತ್ತಲಲಿ ಬಿಕ್ಕಳಿಸುತಿದೆ ಬಾಲ್ಯ,ಸಮಾಧಿಯ ಮೇಲೆ ನಿಂತು ನಗುತ್ತಿದೆ ಸಾಮ್ರಾಜ್ಯ;ಗೆದ್ದವನ ಇತಿಹಾಸದಲಿ ರಕ್ತದ ವಾಸನೆ,ಸತ್ತವನ ಮನೆಯಲಿ ಬರಿ ಗೋಡೆಯ ಮೌನ ರೋಧನೆ…. ನಾಮದೇವ ಕಾಗದಗಾರ

ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.” Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್ ಮುಂಗಾರಿನ ಕರಿ ಮುಗಿಲು ಜಲಧಾರೆಯ ಸುರಿಸುತಿದೆ ನೋಡಾಇಳೆಯ ಮೊಗದಿ ನಗೆ ಮೊಗ್ಗು ಬಿರಿದು ಕಂಪು ಹರಡುತಿದೆ ನೋಡಾ ನೀಲಿ ಆಕಾಶದಿ ನೇಸರ ಮೂಡಿಸಿದ ಹೊಂಬಣ್ಣದ ಹೊನಲುಪ್ರಕೃತಿ ಮಡಿಲಲಿ ಮುಂಜಾವು ಪಕ್ಷಿಗಳ ಗಾನ ಕೇಳುತಿದೆ ನೋಡಾ ಒಲವಿನ ಚೈತ್ರ ಬರುವಿಗೆ ಬನವು ಹಸಿರುಟ್ಟು ಹೂ ಅರಳಿಸಿದೆನಿಸರ್ಗದ ಸೊಬಗು ಪ್ರೇಮಿಯ ಎದೆಯವೀಣೆ  ಮಿಡಿಯುತಿದೆ ನೋಡಾ ಧಾರಿಣಿಯ ಹೃದಯ ಸೂರ್ಯ ಕೋಪಕೆ ನಲುಗಿ ನರಳುತಿದೆ  ಮೌನದಿಬಿದ್ದ ಮಳೆಯ ರಭಸಕೆ ನದಿಯು ಕಡಲಾಗಿ ಮೊರೆಯುತಿದೆ ನೋಡಾ ಬೀಸುವ ಸುಳಿಗಾಳಿ ಪಾರಿಜಾತದ  ಪರಿಮಳ ತರುತಿದೆ ಸಂಜೆಇರುಳು ತಿರುಗುವ ತಿರೆಯಲಿ ಚಂದ್ರ ಪ್ರಭೆಯು ಕಾಣುತಿದೆ‌ ನೋಡಾ ( ಸಂಜು ಕೋಳೂರ ಹಳಿಯಾಳ ರಾಗಸಂಯೋಜನೆ ಮಾಡಿದ್ದಾರೆ ) ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ “ಹಸಿರು ತೇರು”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ “ಹಸಿರು ತೇರು” ಹಸಿರು ತೇರು ಹೊರಟಿದೆ,ಭುವಿಯೆಲ್ಲ ಹಬ್ಬವಾಗಿದೆ;ಮರದ ನೆರಳು ಹರಡಿದೆ,ಮನದೊಳಗೆ ಮುದತಂದಿದೆ. ಗಿಡವ ನೆಟ್ಟು ಬೆಳಸೋಣ,ಗಿರಿಯ ಸೊಬಗು ಉಳಿಸೋಣ;ನದಿಯ ನಗುವು ಕೇಳೋಣ,ನಾಳೆಯ ಬದುಕು ಕಾಪಾಡೋಣ. ಎಲೆಯ ನಾದವು ವೀಣೆಯದು,ಹೂವಿನ ಪರಿಮಳ ಗೀತೆಯದು;ಹಕ್ಕಿಯ ಕಲರವ ವೇದವದು,ಪ್ರಕೃತಿಯ ಮಡಿಲೇ ಸ್ವರ್ಗವದು. ಮಳೆ ಸುರಿಯಲು ಕಾಡಿರಬೇಕು,ಕಾಡು ಬೆಳೆಯಲು ನಾವಿರಬೇಕು;ಉಸಿರು ಉಳಿಯಲು ಮರವಿರಬೇಕು,ಜಗವು ಉಳಿಯಲು ಹಸಿರಿರಬೇಕು. ಬನ್ನಿ ಎಲ್ಲರು ಕೈಜೋಡಿಸಿ,ಭೂಮಿತಾಯಿಯ ಪ್ರೀತಿಗೋಸ್ಕರ;ಹಸಿರು ತೇರನು ಎಳೆಯೋಣ,ಭವ್ಯ ಭವಿಷ್ಯವ ಕಟ್ಟೋಣ. ಹಸಿರು ನಮ್ಮ ಉಸಿರಾಗಲಿ,ಹಸಿರು ನಮ್ಮ ಹೆಸರಾಗಲಿ;ಹಸಿರು ತೇರು ಸಾಗುತಿರಲಿ,ಭುವಿಯೆಲ್ಲ ನಗುತಿರಲಿ. ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ “ಹಸಿರು ತೇರು” Read Post »

ಕಾವ್ಯಯಾನ

ಆದಪ್ಪ ಹೆಂಬಾ ಅವರ ಕವಿತೆ “ಜಗದೊಡೆಯಮುನಿದರೇ….”

ಕಾವ್ಯ ಸಂಗಾತಿ ಆದಪ್ಪ ಹೆಂಬಾ “ಜಗದೊಡೆಯಮುನಿದರೇ….” ಇನಿತು ಮುನಿಯದೆಎನಿತು ದಣಿಯದೆನಗುತಲಿಹನು ನೇಸರಹೊನ್ನ ಬೆಳಕುಅರುಣ ಕಿರಣಚೆಲ್ಲುತಿಹನು ದಿನಕರ|| ಮತಿಹೀನ ಮನುಜಭೂಮಾತೆಯ ತನುಜಅಮ್ಮನೆಂಬುದ ನೋಡದೇಹೊನ್ನ ಮಣ್ಣನು ಅಗೆಯುತಲಿರುವೆಹಸಿರು ವನಸಿರಿಯ ಬಗೆಯುತಲಿರುವೆಬೆತ್ತಲಾಗುತಿಹಳು ಅಮ್ಮ ನಿನಗಿನ್ನು ಕಾಣದೆ|| ಜಗವ ಬೆಳಗುವಅವನ ಕಣ್ಣಿಗೇ ಮಣ್ಣಂತೆಕಾಣಲೊಲ್ಲದು ತಿಳಿಯಲೊಲ್ಲದುನಿಮ್ಮಗಳ ಕಪ್ಪು ರಂಗಿನಾಟಕೊಂಚ ತಾಳಿಪಾಪದ ಫಲ ಉಣ್ಣುವಿರಂತೆ|| ನೇಸರನೊಬ್ಬಮಹಾ ಮರೆಗುಳಿನಿತ್ಯ ಬರುವನುಎಲ್ಲವ ಮರೆತುಮತ್ತೆ ಮುಳುಗುವನುಬೇಸರದಿ ಮುನಿದು|| ಜಗದೊಡೆಯ ಮುನಿದರೆಉಳಿಗಾಲ ನಮಗಿಲ್ಲಯೋಚಿಸಿ ಮುಂದಡಿ ಇಡಿಮಿಂಚಿ ಹೋದರೆ ಕಾಲಚಿಂತಿಸಿಯೂ ಫಲವಿಲ್ಲ|| ಇಂದಿದೆಯೋಮುಂದಿದೆಯೋಎಂದಿದೆಯೋಮನುಕುಲದ ಮಾರಿಹೋಮತಿಳಿದೇಳು ಸಿಡಿದೇಳು ಕೂಗೇಳುತಡೆಯೋಣ ಭೂರಮೆಯ ನಾಶವನ್ನ|| ಆದಪ್ಪ ಹೆಂಬಾ

ಆದಪ್ಪ ಹೆಂಬಾ ಅವರ ಕವಿತೆ “ಜಗದೊಡೆಯಮುನಿದರೇ….” Read Post »

You cannot copy content of this page

Scroll to Top