ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ

ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ ಅವರ ಕವಿತೆ ಕಾಗದದ ಮೇಲೆಬರೆಯಬೇಕೆಂದ ಸಾಲುಗಳುಇದ್ದಲ್ಲೇ ಕರಗಿಹೋದವು ಸುಮ್ಮನೇಗೆರೆಗಳ ಹಾಕಿಚಿತ್ರವಾಗಬೇಕಾದ ಚಿತ್ರಗಳೂರಸ್ತೆಗಳಾದವುಮರದ ನೆರಳಾಗಿಉಳಿಯಬೇಕಾದ ಹೂವುಗಳುಹಣ್ಣಿಗಾಗಿ ಇಳೆ ಸೇರಿತುಕಾಲದ ಸಹಜಓಟದ ಹರಿವಿಗೆಬಯಲು ನದಿಯಾಯಿತುಕಡಲು ಬದುಕಾಗಿಜೀವದ ಓಟ ಸಾಗಿತು ಮರದ ಮೇಲೊಂದು ಹಕ್ಕಿಕುಳಿತು ಗೂಡು ಕಟ್ಟುವುದುಹೇಗೆ ಎಂದು ನೋಡುತ್ತಿತ್ತುಹಾರಿ ಸಾಗಿ ಬದುಕಿನಉಸಿರಿಗೆ ಉಸಿರಾಗಿಕಣ್ಣೊಳಗೆ ಜಗವತುಂಬುತ್ತಿತ್ತು ಸುಮ್ಮನೇಗದ್ದೆಯ ಹಸಿರಿಗೆಚಿಗುರು ಮೂಡಿತ್ತುಮತ್ತೆ ಮೋಡದಿಮಳೆ ಹನಿಯ ಚಿತ್ರತಾನಾಗಿ ಮೂಡಿಜಗದಗಲದ ನೆಲಕೆತಂಪು ಹರಡಿತ್ತುಕಾಗದದ ಮೇಲೆಮೂಡಿದ ಬಣ್ಣಗಳೆಲ್ಲಾಗಾಳಿಯಲ್ಲಿ ತೇಲಿನೆಲಕೆ ಇಳಿದಿತ್ತುಮತ್ತೆ ಚಿತ್ರವಾಗುತ್ತನೆಲದೊಳಗೆ ಸೇರಿತ್ತು……. ನಾಗರಾಜ ಬಿ.ನಾಯ್ಕ

ನಾಗರಾಜ ಬಿ.ನಾಯ್ಕ ಅವರ ಕವಿತೆ Read Post »

ಅಂಕಣ ಸಂಗಾತಿ, ವೀಣಾ-ವಾಣಿ

ಅಂಕಣ ಸಂಗಾತಿ ವೀಣಾ ವಾಣಿ ವೀಣಾ ಹೇಮಂತ್‌ ಗೌಡ ಪಾಟೀಲ್ ಪರಿಸರ ದಿನಾಚರಣೆ..ಒಂದು ದಿನಕ್ಕೆ ಮಾತ್ರ ಸೀಮಿತವಾಗದಿರಲಿ  ಒಂದೆರಡು ದಿನಗಳ ಹಿಂದೆ ಪರಿಸರ ದಿನಾಚರಣೆಯಿದ್ದು ಇದನ್ನು ಕಡ್ಡಾಯವಾಗಿ ಆಚರಿಸಲೇಬೇಕು ಎಂಬ ಕಾರಣಕ್ಕಾಗಿ ಬಹುತೇಕ ಎಲ್ಲಾ ಸರಕಾರಿ, ಅರೆ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಸಸಿಯನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.ಪತ್ರಿಕೆಯವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹಸಿರು ಬಣ್ಣದ ಅಕ್ಷರಗಳಲ್ಲಿ ಪತ್ರಿಕೆಯನ್ನು ಪ್ರಿಂಟ್ ಮಾಡುವ ಮೂಲಕ ತಮ್ಮ ಪರಿಸರ ಪ್ರೇಮವನ್ನು ಮೆರೆದರು.  ಇನ್ನು ಮಹಿಳಾಮಣಿಯರು ಹಸಿರು ರಂಗಿನ ದಿರಿಸುಗಳನ್ನು ಧರಿಸಿ ಪರಿಸರ ದಿನಾಚರಣೆಯನ್ನು ಆಚರಿಸಿ ಅದರ ಫೋಟೋ ತೆಗೆದು ತಮ್ಮ ವಾಟ್ಸಪ್ ಸ್ಟೇಟಸ್ ಗಳಲ್ಲಿ ಹಾಕಿಕೊಂಡು ಸಂಭ್ರಮಿಸಿದರು.  ಎಲ್ಲವೂ ಚಂದ! ನಿಜ ಪರಿಸರ ದಿನಾಚರಣೆಯನ್ನು ಕಡ್ಡಾಯವಾಗಿ ಮಾಡಲೇಬೇಕು ಎಂಬ ಅನಿವಾರ್ಯತೆ ಇಲ್ಲದೆ ಹೋದರೆ ನಾವು ಪರಿಸರಕ್ಕೆ ಏನು ಕೊಟ್ಟಿದ್ದೇವೆ ಎಂಬುದರ ಕುರಿತು ಒಂದೈದು ನಿಮಿಷ ಮನದಲ್ಲೇ ಯೋಚಿಸಿದರೆ ಶೂನ್ಯ ಫಲಿತಾಂಶ ನಮ್ಮ ಮುಂದೆ ಕಾಣಬಹುದು.ಯಾರನ್ನೂ ಹೀಯಾಳಿಸುವ, ತಮಾಷೆ ಮಾಡುವ ಅವರ ಕುರಿತು ನಿರ್ಣಾಯಾತ್ಮಕವಾಗಿ ಹೇಳಿಕೆ ಕೊಡುವ ಇಲ್ಲವೇ ಅವರ ಕ್ರಿಯೆಯನ್ನು ಹಂಗಿಸುವ ಉದ್ದೇಶ ನನಗಿಲ್ಲ…. ಆದರೂ ಕೆಲ ಸಂಗತಿಗಳನ್ನು ನಮ್ಮದೇ ನಿಲುಕಿನಲ್ಲಿ  ನಾವು ವೈಯಕ್ತಿಕವಾಗಿ ಕೈಗೊಳ್ಳುವ ನೂರೆಂಟು ಸಾಧ್ಯತೆಗಳು ಇರುವಾಗ ಆ ನಿಟ್ಟಿನಲ್ಲಿ ನಾವು ಮುಂದುವರೆದರೆ ಪರಿಸರವನ್ನು ಇನ್ನಷ್ಟು ಸಮರ್ಪಕವಾಗಿ ಉಳಿಸಿಕೊಳ್ಳಬಹುದು ಎಂಬ ಆಶಯ ನನ್ನದು. ಈಗಾಗಲೇ ಪರಿಸರ ವಿನಾಶದ ದುಷ್ಪರಿಣಾಮಗಳನ್ನು ನಾವು ನೋಡುತ್ತಿದ್ದೇವೆ . ಹಿತಕರವಾದ ಬೇಸಿಗೆ ನಮ್ಮ ಪಾಲಿಗೆ ದೂರ…. ಕುರಿಯುತ್ತಿರುವ ಝಳ, ನಮ್ಮನ್ನು ಆಹುತಿ ತೆಗೆದುಕೊಳ್ಳದಿದ್ದರೆ ಸಾಕು ಎಂಬಂತಹ ಬಿಸಿಲು ಒಂದೆಡೆ ಕಾಡುತ್ತಿದ್ದರೆ,, ಬೇಕಿರಲಿ ಬೇಡದೆ ಇರಲಿ ಧೋ ಎಂದು ಸುರಿಯುತ್ತಿರುವ ಅಕಾಲ ಮಳೆ ಅಲ್ಲಲ್ಲಿ ನೆರೆ ಹಾವಳಿಯಿಂದ ಬೆಳೆ ಮನೆಗಳನ್ನು ತನ್ನ ರುದ್ರ ನರ್ತನಕ್ಕೆ ಈಡು ಮಾಡಿ ಹಾಳುಗೆಡವುತ್ತಿದೆ…. ಬದುಕಲು ಸಾಧ್ಯವೇ ಇಲ್ಲ ಎಂಬಂತಹ ಮಾರಣಾಂತಿಕ ತೊಂದರೆಗಳಾದ ಹೃದಯ ತೊಂದರೆ, ಅಕಾಲ ಮರಣಗಳು ಚಳಿಯ ಕಾರಣದಿಂದ ಉಂಟಾಗುತ್ತಿದ್ದು, ಸಹಿಸಲಸಾಧ್ಯವಾದ ಚಳಿಯಿಂದ ಜನರು ಸಾಯುತ್ತಿರುವ ಘಟನೆಗಳನ್ನು ಕೂಡ ನಾವು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಈಗಾಗಲೇ ಪರಿಸ್ಥಿತಿ ಸಾಕಷ್ಟು ವಿಷಮಿಸಿದ್ದು ಇನ್ನೂ ಹೆಚ್ಚಿನ ಅನಾಹುತಗಳು ಉಂಟಾಗುವ ಮುನ್ನವೇ ಜಾಗೃತರಾಗಬೇಕಾದ ಪರಿಸ್ಥಿತಿ ನಮ್ಮದು ಆ ನಿಟ್ಟಿನಲ್ಲಿ ಕೆಲ ಪರಿಹಾರ ಕ್ರಮಗಳನ್ನು ನಾವು ಕೈಗೊಳ್ಳಲೇಬೇಕಾಗಿದೆ. ಅಯ್ಯೋ ! ಅದನ್ನೆಲ್ಲ ಎಲ್ಲಿ ಮಾಡೋಕಾಗುತ್ತೆ ಉಳಿದವರೆಲ್ಲ ಮಾಡ್ಲಿ ನಮ್ಮ ಕೈಲಿ ಆಗೋದಿಲ್ಲ ಎಂಬ ನಿಟ್ಟಿನಲ್ಲಿ ಜನರು ವಿಸ್ಮೃತಿಯಲ್ಲಿ ಸಿಲುಕಿದ್ದಾರೆ ಅಂತಹವರಿಗೆ ಮಾಡುವ ಮನಸ್ಸಿದ್ದರೂ ಅವಕಾಶಗಳ ಅರಿವು ಹಾಗೂ ಅನಿವಾರ್ಯತೆಯನ್ನು ಮೂಡಿಸುವುದು ಮಾತ್ರ ನನ್ನ ಉದ್ದೇಶ.ಪರಿಸರ ದಿನಾಚರಣೆ ಇರುವುದು ಕೇವಲ ಗಿಡ ಮರಗಳನ್ನು ನೀಡಲು ಮಾತ್ರವಲ್ಲ. ಪರಿಸರ ದಿನಾಚರಣೆಯ ಮುಖ್ಯ ಉದ್ದೇಶ ನಾವು ಇರುವ ಈ ಬೃಹತ್ ಬ್ರಹ್ಮಾಂಡದ ಎಲ್ಲಾ ಜೀವರಾಶಿಗಳಿಗೂ ನಮ್ಮಷ್ಟೇ ಇಲ್ಲಿ ಬದುಕುವ ಹಕ್ಕು ಇದೆ ಎಂಬುದನ್ನು ಅರಿತುಕೊಳ್ಳಲು. ಉಳಿದೆಲ್ಲ ಜೀವಿಗಳಿಗೆ ಮನುಷ್ಯನಷ್ಟು ಬುದ್ಧಿಶಕ್ತಿ ಇಲ್ಲ ನಿಜ…ಆದರೆ ಜಗತ್ತಿನ ಜೀವಸಂಕುಲಗಳಲ್ಲಿಯೇ ಅತ್ಯಂತ ಬುದ್ಧಿಶಾಲಿ ಎಂದು ಬೀಗುವ ಮನುಷ್ಯ ತಾನೇ ತೋಡಿದ ಕಂದಕಕ್ಕೆ ತಾನು ಮಾತ್ರವಲ್ಲದೆ ಇಡೀ ಜೀವ ಸಂಕುಲವನ್ನು ಹಂತ ಹಂತವಾಗಿ ತಳ್ಳಿ ಮಾರಣಾಂತಿಕ ತೊಂದರೆಯಲ್ಲಿ ಸಿಲುಕಿಸುವ ಪ್ರಕ್ರಿಯೆಗೆ ಈಗಾಗಲೇ ತೊಡಗಿದ್ದಾನೆ.ಆರಂಭದಲ್ಲಿ ಆಧುನಿಕತೆಯ ಮೆರುಗಿನಲ್ಲಿ ಬಳಸಿ ಬಿಸುಡುವ ವಸ್ತುಗಳ ಶೋಕಿಯಲ್ಲಿ,, ಬಿಗಿಯಾದ ನೀತಿ ನಿಯಮಗಳ ಅನುಷ್ಠಾನ ಇಲ್ಲದ ಕಾರಣಕ್ಕಾಗಿ ಈ ಪ್ರವಾಹ ಚಿಕ್ಕದಾಗಿದ್ದರೂ ಇದೀಗ ಬೃಹದಾಕಾರದ ಸಮಸ್ಯೆಯಾಗಿ ಉಲ್ಬಣಗೊಂಡಿದೆ.ಪ್ರತಿಯೊಂದು ಹಳ್ಳಿಯ ಗ್ರಾಮ ಪಂಚಾಯಿತಿಯಿಂದ ಹಿಡಿದು ದಿಲ್ಲಿಯವರೆಗಿನ ಮಹಾನಗರ ಪಾಲಿಕೆಗಳವರೆಗೆ ಸಮಸ್ಯೆ ಇರುವುದು ಕಸ ವಿಲೇವಾರಿ. ನೀವು ಯಾವುದೇ ಊರಿನ ಹೊರ ಭಾಗದಲ್ಲಿ ಹೋಗಿ ನೋಡಿದರೆ ರಸ್ತೆಯ ಬದಿಯಲ್ಲಿ ನೂರಾರು ಟ್ರ್ಯಾಕ್ಟರ್ ಗಳಷ್ಟು ಕಸ ಬಿದ್ದಿರುತ್ತದೆ. ಮರುಬರಕ್ಕೆ ಮಾಡಲು ಸಾಧ್ಯವಾಗದ ಪ್ಲಾಸ್ಟಿಕ್ ವಸ್ತುಗಳ ರಾಶಿ ಅಲ್ಲಿರುತ್ತದೆ. ಹರಿದು ಹೋದ ರಬ್ಬರ್ ಟಾಯರ್, ಟ್ಯೂಬ್, ಬ್ಯಾಗ್ ಗಳು, ನೀರಿನ ಬಾಟಲಿಗಳು ಪೇಸ್ಟಿನಿಂದ ಹಿಡಿದು ಬೃಹದಾಕಾರದ ತ್ಯಾಜ್ಯಗಳು ಊರ ಹೊರಗಿನಿಂದಲೇ ನಮ್ಮನ್ನು ಸ್ವಾಗತಿಸುತ್ತವೆ.ಸರ್ಕಾರ ಅದೆಷ್ಟೇ ಪ್ರಯತ್ನ ಪಟ್ಟರೂ ಸ್ವಚ್ಛ ಭಾರತ ಯೋಜನೆಯನ್ನು ಕೈಗೊಂಡು ಮನೆಗೊಂದು ಶೌಚಾಲಯವನ್ನು ನಿರ್ಮಿಸಿ ಕೊಟ್ಟರೂ ಕೂಡ 21ನೇ ಶತಮಾನದಲ್ಲಿಯು ಜನರು ಬಯಲು ಬಹಿರ್ದೆಸೆಗೆ ಹೋಗುವ ಮೂಲಕ ಪರಿಸರವನ್ನು ಹಾಳುಗೆಡವುತ್ತಿದ್ದಾರೆ.ಇನ್ನು ಚಿಕ್ಕ ಪಾನ್ ಶಾಪು ಗಳಿಂದ ಹಿಡಿದು ದೊಡ್ಡ ಮಾಲ್ಗಳವರೆಗೆ ಎಲ್ಲ ಕಡೆ ಪ್ಲಾಸ್ಟಿಕ್ನದ್ದೇ ಕಾರುಬಾರು.ಬಣ್ಣ ಬಣ್ಣದ ಒಡೆಯದ ಚಿತ್ತಾಕರ್ಷಕ ಪ್ಲಾಸ್ಟಿಕ್ ಲೋಟ, ಬಟ್ಟಲು, ಬಳಸಿ ಬಿಸುಟಬಹುದಾದ ವಸ್ತುಗಳು ಒಂದೆರಡಲ್ಲ. ಪ್ಲಾಸ್ಟಿಕ್ ವಸ್ತುಗಳನ್ನು ಮಾರುವ ಅಂಗಡಿಕಾರರು ಅಂತಿಮವಾಗಿ ಪ್ಯಾಕ್ ಮಾಡಿ ಕೊಡುವಾಗ ಮಾತ್ರ ಸರ್/ಮೇಡಂ ನಾವು ಪ್ಲಾಸ್ಟಿಕ್ ಕವರ್ ಬಳಸುವುದಿಲ್ಲ ಪೇಪರ್ ಬ್ಯಾಗ್ ನಲ್ಲಿ ಹಾಕಿ ಕೊಡೋಣವೇ ಎಂದು ಕೇಳುವುದು ವಿಪರ್ಯಾಸವಲ್ಲವೇ ? ಪರಿಸರವನ್ನು ಉಳಿಸಿ ಎಂದು ಒಕ್ಕೊರಳಿನಿಂದ ಹೋಗುವ ಎಲ್ಲಾ ಕಡೆಗಳಲ್ಲಿ ಕಣ್ಣು ಕುಕ್ಕುವ ಬಲ್ಬ್ ಗಳನ್ನು, ಟ್ಯೂಬ್ ಗಳನ್ನು ಹಾಕಿ ಸೂರ್ಯನ ಬೆಳಕಿಗೆ ಸವಾಲೊಡ್ಡುವಂತೆ ಪ್ರಕಾಶಮಾನವಾಗಿಸುವರು. ರಸ್ತೆಯ ಅಗಲೀಕರಣ ಊರನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಬೃಹದಾಕಾರದ ಕಟ್ಟಡಗಳನ್ನು ಕರುಣಿಸಿ ನಿರ್ಮಿಸುವ ಸಲುವಾಗಿ ನೂರಾರು ವರ್ಷಗಳಿಂದ ನಮಗೆ ಗಾಳಿ ನೆರಳನ್ನು ನೀಡುವುದರ ಜೊತೆಗೆ ನೂರಾರು ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿರುವ ಮರಗಳನ್ನು ಕಡಿದು ಉರುಳಿಸುವುದು ಪರಿಸರ ನಾಶವಲ್ಲದೆ ಮತ್ತಿನ್ನೇನು ? ಯಾವುದೇ ಒಂದು ಆಧುನಿಕತೆಯ ಭರಾಟೆ ತನ್ನ ಅಂತಿಮ ಹಂತದಲ್ಲಿ ತೀವ್ರ ಪರಿಣಾಮವನ್ನು ಬೀರಿದಾಗ ಉಂಟಾಗುವ ಅಲ್ಲೋಲಕಲ್ಲೋಲದಲ್ಲಿ ನಾವು ಮನುಷ್ಯ ಮಾತ್ರಠು ಯೋಚಿಸಲು ಆರಂಭಿಸುತ್ತೇವೆ.ಇವೆಲ್ಲವೂ ದೊಡ್ಡ ಮಟ್ಟದಲ್ಲಾಯಿತು… ನಮ್ಮ ಹಿರಿಯರು ನಮಗೆ ಕೊಟ್ಟ ಒಳ್ಳೆಯ ವಾತಾವರಣದ ಕೊಡುಗೆಯನ್ನು ನಾವು ಮಕ್ಕಳಿಗೆ ಉಳಿಸಿ ಕೊಡಬೇಕಾಗಿರುವುದು ನಮ್ಮದೇ ಜವಾಬ್ದಾರಿ ಆ ಜವಾಬ್ದಾರಿಯ ನಿರ್ವಹಣೆಯಲ್ಲಿ ನಾವು ಬಹುತೇಕ ಎಡವಿದ್ದೇವೆ ನಿಜ, ಆದರೆ ಮತ್ತೆ ಸಂಭಾಳಿಸಿಕೊಂಡು ನಿಲ್ಲಲೇಬೇಕಾದ ತುರ್ತು ಪರಿಸ್ಥಿತಿ ಒದಗಿದೆ. ಈ ನಿಟ್ಟಿನಲ್ಲಿ ಕನಿಷ್ಠ ಪಕ್ಷ ಸುಶಿಕ್ಷಿತರು, ನಾಗರಿಕರು ಎಂದೆನಿಸಿಕೊಂಡಿರುವ ನಾವುಗಳು ನಮ್ಮ ಮನೆಯ ಮಟ್ಟಿಗೆ ಪರಿಸರವನ್ನು ಹೇಗೆ ಕಾಯ್ದುಕೊಳ್ಳಬಹುದು ಎಂದು ನೋಡೋಣ.* ಮನೆಯಿಂದ ಹೊರಗೆ ಅಂಗಡಿಗೆಂದೇ ಹೋಗುವಾಗ ಬಟ್ಟೆಯ ಕೈ ಚೀಲಗಳನ್ನು ಒಯ್ಯುವುದು ವಿಹಿತ. ಯಾವುದೇ ಸಮಯದಲ್ಲಿಯೂ ನೀವು ಏನನ್ನಾದರೂ ಖರೀದಿಸಬಹುದು ಎಂಬ ಮನಸ್ಥಿತಿ ನಿಮ್ಮದಾಗಿದ್ದರೆ ಬಟ್ಟೆಯ ಬ್ಯಾಗ್ ನ ಜೊತೆ ಒಂದೆರಡು ಡಬ್ಬಗಳನ್ನು ಒಯ್ಯುವುದು ಒಳ್ಳೆಯದು, ಅದು ಸಾಧ್ಯವಾಗದಿದ್ದರೆ ಅಂಗಡಿಗಳಲ್ಲಿ ಕಾಗದ ಪೊಟ್ಟಣದಲ್ಲಿ ಕಟ್ಟಿಕೊಡಲು ಕೇಳಿಕೊಳ್ಳಬೇಕು. ಮೊದಮೊದಲು ಅಂಗಡಿಕಾರರು ನಿಮ್ಮನ್ನು ತಮಾಷೆ ಮಾಡಬಹುದು ಅಯ್ಯೋ! ಅದನ್ನೆಲ್ಲ ಯಾರು ಮಾಡ್ತಾರೆ ಸರ್, ಇದನ್ನೇ ತಗೊಂಡು ಹೋಗಿ ಎಂದು ನಿಮಗೆ ಅಸಡ್ಡೆಯಿಂದ ಉತ್ತರಿಸಬಹುದು… ಇದನ್ನು ಅವಮಾನ ಎಂದು ಭಾವಿಸಬೇಡಿ. ನೀವು ನಿಮ್ಮ ನಿಲುವಿಗೆ ಬದ್ಧರಾದರೆ ಮುಂದಿನ ದಿನಮಾನಗಳಲ್ಲಿ ನಿಮ್ಮನ್ನು ಮತ್ತಷ್ಟು ಜನರು ಅನುಸರಿಸಬಹುದು. ವೈಯುಕ್ತಿಕ ನೆಲೆಯಲ್ಲಿ ನಾವು ಇದನ್ನು ಖಂಡಿತವಾಗಿಯೂ ಮಾಡಲು ಸಾಧ್ಯವಿದೆ.* ಹಗಲಿನ ಹೊತ್ತಿನಲ್ಲಿ ಮನೆಯ ಕಿಟಕಿ ಬಾಗಿಲುಗಳನ್ನು ತೆರೆದು ಹೊರಗಿನಿಂದ ಬರುವ ಸೂರ್ಯನ ಬೆಳಕು ಹಾಗೂ ತಾಜಾ ಹವೆಯನ್ನು ಉಸಿರಾಡಲು ರೂಢಿಸಿಕೊಳ್ಳಬೇಕು. ಅನವಶ್ಯಕವಾಗಿ ಲೈಟ್ಗಳನ್ನು ಉರಿಸುವುದು ಬೇಕಾಗಿಲ್ಲ. ತೀರ ಅನಿವಾರ್ಯವಾದಲ್ಲಿ ಮಂದ ಬೆಳಕನ್ನು ಸೂಸುವ ಅತ್ಯಂತ ಕಡಿಮೆ ಯೂನಿಟ್ ಬಳಕೆಯಾಗುವ ನವೀಕೃತ ಮಾದರಿಯ ಬಲ್ಬ್ ಗಳನ್ನು ಬಳಸಬೇಕು.‘ಒಂದು ಯೂನಿಟ್ ಉಳಿತಾಯ ಒಂದು ಯೂನಿಟ್ ಉತ್ಪಾದನೆಗೆ ಸಮ ‘ ಎಂಬ ಮಾತು ಇಂದಿಗೂ ಚಾಲ್ತಿಯಲ್ಲಿ ಇಟ್ಟುಕೊಳ್ಳಲೇಬೇಕು. ನಮಗೆ ಉತ್ಪಾದನೆ ಮಾಡುವ ಸಾಮರ್ಥ್ಯವಿಲ್ಲ ಎಂದಾದಲ್ಲಿ ಬಳಸುವಾಗ ತುಸು ಎಚ್ಚರ ವಹಿಸುವುದು ಒಳಿತು.*ಆಹಾರವನ್ನು ಸಾಧ್ಯವಾದಷ್ಟು ತಾಜಾ ಆಗಿ ತಯಾರಿಸಿ ಸೇವಿಸಬೇಕು ಪದೇ ಪದೇ ಬಿಸಿ ಮಾಡುವುದರಿಂದ ಆಹಾರದಲ್ಲಿರುವ ಜೀವಸತ್ವಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ಆಹಾರವು ಸತ್ವರಹಿತವಾಗುತ್ತದೆ.. ಅತಿಯಾಗಿ ಅಡುಗೆ ತಯಾರಿಸಿ ಅದನ್ನು ಚೆಲ್ಲುವುದರಲ್ಲಿ ಅರ್ಥವಿಲ್ಲ. ಪ್ರತಿದಿನವೂ ಹಳ್ಳಿಯಿಂದ ದಿಲ್ಲಿಯವರೆಗೆ ಉಣ್ಣಲು ಸಾಧ್ಯವಾಗದ ರೀತಿಯಲ್ಲಿ ಟನ್ನುಗಟ್ಟಲೆ  ಆಹಾರ ಪದಾರ್ಥಗಳು ಕಸದ ತೊಟ್ಟಿಗೆ ಸೇರುವುದರಲ್ಲಿ ನಮ್ಮ ಅಳಿಲು ಪಾಲು ಸಲ್ಲುವುದನ್ನು ತಪ್ಪಿಸಬೇಕು. ಈ ಹಿಂದೆ ಉಳಿಕೆ ಆಹಾರವು ಮನೆಯ ಕೆಲಸದವರಿಗೆ ಮರುದಿನಕ್ಕೆ, ದನ ಕರುಗಳಿಗೆ ಮುಸುರೆಯಾಗಿ ಸಾರ್ಥಕತೆಯನ್ನು ಪಡೆಯುತ್ತಿತ್ತು ಆದರೆ ಆಧುನಿಕ ಭರಾಟೆಯಲ್ಲಿ ಪಶು ಸಂಗೋಪನೆಯನ್ನು ಕೈ ಬಿಟ್ಟಿರುವ ನಾವುಗಳು ಆಹಾರವನ್ನು ನೇರವಾಗಿ ಕಸದ ತೊಟ್ಟಿಗೆ ಚೆಲ್ಲುತ್ತಿದ್ದೇವೆ. ಇಡೀ ದೇಶದಲ್ಲಿ ಒಂದು ದಿನ ಕಸದ ತೊಟ್ಟಿಗೆ ಬಿಸಾಡುವ ಆಹಾರ ಅದೆಷ್ಟೋ ಕುಟುಂಬಗಳನ್ನು ಪಾಲಿಸಬಲ್ಲದು ಎಂಬ ಸತ್ಯದ ಅರಿವು ನಮಗಿರಬೇಕು… ಉತ್ಪಾದನಾ ಸಾಮರ್ಥ್ಯವಿಲ್ಲದವರಿಗೆ ಹಾಳು ಮಾಡುವ ಹಕ್ಕಿಲ್ಲ… ಅದು ನಮ್ಮ ವೈಯಕ್ತಿಕ ದುಡ್ಡಿನಿಂದ ಖರೀದಿಸಿದ್ದಾದರೂ ಸರಿಯೇ ? ಎಂಬ ಪ್ರಜ್ಞೆಯನ್ನು ಹೊಂದಿ ಅಂತೆಯೇ ನಡೆದುಕೊಳ್ಳಬೇಕು. ಇದರಿಂದ ಮನೆಯ ಖರ್ಚಿನಲ್ಲಿ ಮಿತವ್ಯಯ ಸಾಧಿಸಬಹುದು. ಇಂಧನವನ್ನು ಉಳಿಸಬಹುದು…. ತನ್ಮೂಲಕ ಪರಿಸರದ ಸಂರಕ್ಷಣೆಗೆ ನಮ್ಮ ಪಾಲನ್ನು ಸಲ್ಲಿಸಬಹುದು.* ಈ ಹಿಂದೆ ಅಮ್ಮಂದಿರು ಕಡ್ಡಾಯವಾಗಿ ತಮ್ಮ ಬಳಿ ಕರ ವಸ್ತ್ರವನ್ನು ನ್ಯಾಪ್ಕಿನ್ ಗಳನ್ನು ಇಟ್ಟುಕೊಳ್ಳುತ್ತಿದ್ದರು. ಆದರೆ ಇದೀಗ ಬಳಸಿ ಬಿಸಾಡಬಹುದಾದ ನ್ಯಾಪ್ಕಿನ್ಗಳನ್ನು ಎಗ್ಗಿಲ್ಲದೆ ಬಳಸಿ ಎಸೆಯುತ್ತಾರೆ. ಒಂದು ದಿನಕ್ಕೆ ಸರಿ ಸುಮಾರು 37 ಸಾವಿರ ಮರಗಳನ್ನು ಕೇವಲ ಟಿಶ್ಯೂ ಪೇಪರ್ ತಯಾರಿಕೆಗೆ ಕಡಿದು ಬಳಸುತ್ತಾರೆ ಎಂದರೆ ನೀವೇ ಊಹಿಸಿಕೊಳ್ಳಿ…. ಒಂದು ವರ್ಷಕ್ಕೆ ಎಷ್ಟು ಮರಗಳ ಮಾರಣಹೋಮವಾಗುತ್ತದೆ ಎಂದು. ಪ್ರಶ್ನೆ ಇರುವುದು ಅದೇ ಪ್ರಮಾಣದಲ್ಲಿ, ಅದೇ ತುರ್ತಿನಲ್ಲಿ, ಅಷ್ಟೇ ಪ್ರಮಾಣದ ಗಿಡಗಳನ್ನು ನಾವು ಬೆಳೆಸಲು ಸಾಧ್ಯವೇ ? ಎಂಬುದು.*ನಮ್ಮ ಹೊಲಗಳಲ್ಲಿ ಹೆಚ್ಚಿನ ಬೆಳೆಯನ್ನು ಪಡೆಯಲೆಂದು ನಾವು ಬಳಸುವ ಕೀಟನಾಶಕಗಳು ನಮ್ಮ ಭೂಮಿಯ ಸತ್ವವನ್ನು ಹೀರಿಕೊಳ್ಳುತ್ತಿವೆ. ನೆಲವನ್ನು ಬಂಜರಾಗಿಸುತ್ತವೆ. ಇದರ ಪರಿಣಾಮವಾಗಿ ನಿಸ್ಸತ್ವ ಆಹಾರವನ್ನು ಸೇವಿಸುತ್ತಿರುವ ನಮ್ಮ ಯುವ ಜನಾಂಗವು ಹತ್ತು ಹಲವಾರು ಆರೋಗ್ಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿವೆ. ಸಂತಾನಹೀನತೆಯ ತೊಂದರೆ ಪ್ರಮುಖವಾಗಿ ತಲೆದೋರುತ್ತಿದೆ. ಸಾಧ್ಯವಾದಷ್ಟು ಸಾವಯವ ಗೊಬ್ಬರವನ್ನು ಬಳಕೆ ಮಾಡಿ ಸತ್ವಯುತ ಆಹಾರ ಬೆಳೆಗಳನ್ನು ಬೆಳೆದು ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಯೋಚಿಸಲೇಬೇಕು. ಈ ಹಿಂದಿನವರು ಮಾಡುವಂತೆ ಉತ್ತಮ ತಳಿಯ ಬೀಜಗಳನ್ನು ಕಾಪಿಟ್ಟುಕೊಳ್ಳುವ, ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ನಮ್ಮದಾಗಿಸಿಕೊಳ್ಳುವ ವಾರ್ಷಿಕ ಬೆಳೆಗಳ ಜೊತೆಗೆ ತರಕಾರಿ ಬೆಳೆಗಳನ್ನು ಹಣ್ಣು ಹಂಪಲುಗಳನ್ನು ಬೆಳೆಯುವ ಮೂಲಕ ಆದಾಯವನ್ನು ಸರಿ ತೂಗಿಸಬಹುದು…. ಈ ಕೆಲಸದಲ್ಲಿ ತುಸು ಶ್ರಮ ಹೆಚ್ಚಾಗಬಹುದು ಆದರೆ ನಾವು ಸಾಕುವ ಪಶುಗಳೊಂದಿಗಿನ ಒಡನಾಟ ನಮ್ಮ ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ ಪ್ರಕೃತಿಯೊಂದಿಗಿನ ಸಾಂಗತ್ಯ ಮನಸ್ಸಿಗೆ ಹಿತವಾಗಿರುತ್ತದೆ.* ಈ ಹಿಂದಿನಂತೆ ಪ್ರತಿ ಮನೆಯು ಒಂದು ಪುಟ್ಟ ಹಿತ್ತಲನ್ನು ಹೊಂದಿದ್ದು ಅಲ್ಲಿ ದಿನಬಳಕೆಯ ಹಣ್ಣು ತರಕಾರಿ ಹೂವುಗಳ ಗಿಡಗಳನ್ನು ಬೆಳೆಸಬೇಕು. ಅವಸರಕ್ಕೂ ಒದಗುವ ನೆರಳನ್ನು ಕೊಡುವ ಹಸಿರಿನಿಂದ ಕಣ್ಣು ತಂಪಾಗಿಸುವ ತಣ್ಣನೆಯ ಗಾಳಿಯನ್ನು ನೀಡುವ ಗಿಡಗಳು ಮನೆಯ ಹಿಂದೆ ಹಾಗೂ ಮುಂದೆ ಇರಲೇಬೇಕು  ನಿಸರ್ಗಕ್ಕೆ ಹತ್ತಿರವಾದ ರೀತಿಯಲ್ಲಿ ಮನೆ ಹಾಗೂ ಮನೆಗೆ ಹತ್ತಿದಂತೆ ನಿಸರ್ಗಕ್ಕೆ ಹತ್ತಿರವಾಗುವ ಕೈತೋಟ ಇದ್ದರೆ ಅದು ನಂದನವನವೇ ಸರಿ. ಮನೆಯಲ್ಲಿ ಕೂಡ ಸಾಧ್ಯವಾದಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ಕೈ ಬಿಡಬೇಕು ಸ್ವಯಂ ಪ್ರೇರಿತರಾಗಿ ಅವುಗಳನ್ನು ದೂರವಿರಿಸುವುದು ಒಳ್ಳೆಯದು. ಇನ್ನು ರಸ್ತೆಗೆ ಇಳಿದರೆ ವಿಪರೀತ ವಾಹನಗಳ ಸಂದಣಿ. ಮನೆಗೆ ನೂರು ಮೀಟರ್ ಹತ್ತಿರವಿರುವ ಅಂಗಡಿ ಮುಂಗಟ್ಟುಗಳಿಗೆ ಹೋಗಲು ಕೂಡ ಟೂ ವೀಲರ್ ಗಳನ್ನು ಬಳಸುವುದನ್ನು ನಿಲ್ಲಿಸಬೇಕು. ನಡೆಯುತ್ತಾ ಹೋಗಿ ದಿನಬಳಕೆಯ ವಸ್ತುಗಳನ್ನು ಖರೀದಿಸುವ ಮೂಲಕ ದೈಹಿಕ ಆರೋಗ್ಯದ ಜೊತೆ ಜೊತೆಗೆ ಗಾಡಿಗೆ ಬಳಸುವ ಇಂಧನದ ಖರ್ಚನ್ನು ಕೂಡ ಉಳಿಸಬಹುದು. ಮನೆಯಲ್ಲಿ

Read Post »

ಇತರೆ

ಹೋಗುವುದಾದರೂ ಎಲ್ಲಿಗೆ ….??ವಿಶೇಷಲೇಖನ ಜಯಲಕ್ಷ್ಮಿ ಕೆ ಮಡಿಕೇರಿ

ವಿಶೇಷ ಸಂಗಾತಿ ಜಯಲಕ್ಷ್ಮಿ ಕೆ ಮಡಿಕೇರಿ ಹೋಗುವುದಾದರೂ ಎಲ್ಲಿಗೆ ….?? ಪಿ ಯು ಸಿ ಮೌಲ್ಯ ಮಾಪನ ನಡೆಯುತ್ತಿದ್ದ ದಿನಗಳವು. ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಉಪನ್ಯಾಸಕರೊಬ್ಬರು ಅವರ ವತಿಯಿಂದ ಆ ಒಂದು ದಿನ ಮೌಲ್ಯ ಮಾಪನ ಕೇಂದ್ರದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು. ಊಟ ಬರುವುದು ತಡವಾಯಿತು. ಎರಡು ಗಂಟೆಯವರೆಗೂ ಊಟಕ್ಕೆ ಕಾದು ದಣಿದಿದ್ದ ಉಪನ್ಯಾಸಕ ವೃಂದ ಆಹಾರ ಬಂದ ತಕ್ಷಣ ಊಟಕ್ಕೆ ಮುಗಿಬಿದ್ದಿತು.  ಸಾಲೂ ಇಲ್ಲ,ಸಂಯಮವೂ ಇಲ್ಲ, ಒಂದು ವ್ಯವಸ್ಥೆ ಯಂತೂ ಮೊದಲೇ ಇಲ್ಲ. ಶಕ್ತಿವಂತರು ಆಹಾರ ಗಿಟ್ಟಿಸಿಕೊಳ್ಳುವಲ್ಲಿ ಗೆದ್ದರು, ಕೆಲವರು ಸೋತು ಗೆದ್ದರು. ಒಂದಿಬ್ಬರು ಪಡೆಯುಕೊಂಡ ತಟ್ಟೆಯ ಅನ್ನ ಸಾಂಬಾರ್ ಗುಂಪು ತಿಕ್ಕಾಟದಲ್ಲಿ ಮತ್ತೊಬ್ಬರ ಮೇಲೆ ಚೆಲ್ಲಿ..ಅದೇ ಒಂದು ಜಗಳದ ವಿಷಯವಾಗಿ , ಕಿರುಚಾಡಿ.. ಉಫ್..  ಸಾಕಪ್ಪ ಸಾಕು ಎನಿಸುವ ಒಂದು ಅನುಭವ ಎಲ್ಲರಿಗೂ. ಕೊನೆಗೆ ನಿಂತವರಿಗೆ ಊಟವೇ ಸಿಗದೆ, ಆ ದಿನ ಊಟದ ವ್ಯವಸ್ಥೆ ಇದೆ ಎಂದುದರಿಂದ ಕ್ಯಾಂಟೀನ್ ನವರೂ ಊಟ  ಪೂರೈಕೆ ಮಾಡದೇ ಹೋದ್ದರಿಂದ ಕೆಲವರು ಆ ದಿನ ಉಪವಾಸ ಇದ್ದುಕೊಂಡೇ ಪೇಪರ್ ತಿದ್ದುವಂತಾಯಿತು. ಆ  ಚಿತ್ರಣ ನನ್ನ ಮನದಲ್ಲಿ ಅಚ್ಚೊತ್ತಿ  ನಿಂತಿದೆ. ವ್ಯಾಲ್ಯೂಯೇಷನ್ ಸೆಂಟರ್ ನಲ್ಲೇ ಊಟ ಸಿಗುತ್ತೆ ಅಂತ ಜೆ ಎಸ್ ಎಸ್  ಮಹಿಳಾ ಹಾಸ್ಟೆಲ್ ನಲ್ಲಿ ರುಚಿಕರವಾಗಿ ತಯಾರಿಸಿ ಕೊಡುತ್ತಿದ್ದ ಊಟವನ್ನು ಬಿಟ್ಟು ಬಂದು  ಕೊನೆಗೆ ಊಟ ಸಿಗದೆ ಇದ್ದವರಲ್ಲಿ  ನಾನೂ ಒಬ್ಬಳು.   ಅಲ್ಲಿ ಇದ್ದವರೆಲ್ಲ  ಸುಶಿಕ್ಷಿತರೇ..ಸಾಲು..ಶಿಸ್ತು ಸಂಯಮದ ಬಗ್ಗೆ ಬೋಧನೆ ಮಾಡುವವರೇ….ಆದರೇನು? ವಚನಕಾರರು ಹೇಳುವಂತೆ ” ಹಸಿವೆಂಬ ಹೆಬ್ಬಾವು ಬಂದು ಬಸಿರ ಹಿಡಿಯಲು ವಿಷವೇರಿತ್ತಯ್ಯಾ ಅಪಾದ ಮಸ್ತಕಕ್ಕೆ “. ಅಷ್ಟೇ. ‘ಹಸಿವು’ ಎನ್ನುವ ರಾಕ್ಷಸನ ಅಸುರ ಗುಣಗಳ ಮುಂದೆ ಸಭ್ಯತೆ ಸಂಸ್ಕಾರಗಳು ಮೌಲ್ಯ ಕಳೆದುಕೊಂಡುಬಿಡುತ್ತವೆ. ಮಾತು ಬರುವ ನಮ್ಮ ಪರಿಸ್ಥಿತಿಯೇ ಹೀಗಿರಬೇಕಾದರೆ ಇನ್ನು ಮಾತು ಬಾರದ ಮೂಕ ಪ್ರಾಣಿಗಳು ಹಸಿವು ನಿವಾರಣೆಗೆ ಕಾಡು ಬಿಟ್ಟು ನಾಡಿಗೆ ಬರುವುದರಲ್ಲಿ ತಪ್ಪೇನಿದೆ?  ಹಸಿವು ಬಾಯಾರಿಕೆಗಳ ಈಡೇರಿಕೆ ಈ ಭೂಮಿಯಲ್ಲಿ ಜನಿಸಿದ   ಪ್ರತಿಯೊಂದು ಜೀವಿಯ ಮೂಲಭೂತ ಅವಶ್ಯಕತೆ. ಹಸಿದ ಜೀವಕಷ್ಟೇ ಗೊತ್ತು  ಹಸಿವಿನ ಕಾವು. ಮಾತು ಬಲ್ಲ, ಚಿಂತನಾಶಕ್ತಿಯುಳ್ಳ ಮನುಷ್ಯರಾದ ನಾವೇ ಹಸಿವಾದಾಗ ಅನ್ಯರ ಬಗ್ಗೆ ಯೋಚಿಸದ ರೀತಿಯಲ್ಲಿ ವರ್ತಿಸುವಾಗ ವನ್ಯ ಮೃಗಗಳಾದ ಆನೆ, ಹುಲಿ, ಚಿರತೆ, ಕಾಡು ಹಂದಿ ಇತ್ಯಾದಿ  ಹಸಿವು ನೀಗಿಸಿಕೊಳ್ಳಲು ನಾಡಿನ ಹಾದಿ ಹಿಡಿಯುವ  ಮತ್ತು ಹಿಂಸಾತ್ಮಕ ವರ್ತನೆ ತೋರುವ ಬಗ್ಗೆ  ಏನು ಹೇಳುವುದು? ಹೊಟ್ಟೆ ತುಂಬಿಸಿಕೊಳ್ಳುವ  ಏಕೈಕ ಉದ್ದೇಶದಿಂದ ಅವು ಹಸಿರು ಕಂಡಲ್ಲಿಗೆ ಧಾವಿಸುತ್ತವೆ. ಅವುಗಳ ಅಸಹಾಯಕತೆ ನಡೆ ಅದು.ಆ ಪ್ರಾಣಿಗಳು ನಮಗೆ ಉಂಟುಮಾಡುವ ಕಷ್ಟ ನಷ್ಟಗಳನ್ನು  ನಾವು ನುಂಗಿಕೊಳ್ಳಲೇ ಬೇಕು.   ಇಲ್ಲ, ಪರಿಹಾರವನ್ನು ಕಂಡುಕೊಳ್ಳಬೇಕು. ಈ ಪ್ರಕೃತಿಯಲ್ಲಿ ಜೀವಿಸಲು ಎಲ್ಲ ಜೀವರಾಶಿಗಳಿಗೆ ಸಮಾನ ಹಕ್ಕಿದೆ. ಆದರೆ ಬದುಕುವ ಸಂದರ್ಭ ಪ್ರಕೃತಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಮೂಕ ಪ್ರಾಣಿಗಳು ಮೌನವಾಗಿಯೇ ಪ್ರಕೃತಿಯ ಮಾತನ್ನು ಆಲಿಸುತ್ತವೆ. ನಿಸರ್ಗ ನಿಯಮವನ್ನು ಪಾಲಿಸುತ್ತವೆ. ಮಾತು ಬಲ್ಲ ಮನುಷ್ಯ ಮಾತ್ರ ಮಾತನಾಡುತ್ತಾ ಆಡುತ್ತಾ ಉಳಿದ ಜೀವರಾಶಿಗಳು ತನ್ನ ಅಧೀನದಲ್ಲಿಯೇ ಇರಬೇಕು ಎಂದು ತನಗೆ ತಾನೇ ಒಂದು ನಿಯಮ ಮಾಡಿಕೊಂಡಿದ್ದಾನೆ. ಕಾಡಿನಲ್ಲೂ ಅಧಿಪತ್ಯ ಸ್ಥಾಪಿಸುವಲ್ಲಿ ಕೆಲವೆಡೆ ಜಯವನ್ನೂ ಸಾಧಿಸಿದ್ದಾನೆ.  ವನ್ಯಜೀವಿಗಳಿಗೆ ಮೀಸಲಾದ ಅರಣ್ಯ ಪ್ರದೇಶದ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚಿದಂತೆ ಅರಣ್ಯ ಪ್ರದೇಶ ಕಿರಿದಾಗುತ್ತಾ ಸಾಗುತ್ತಿದೆ. ವಸತಿ, ವ್ಯವಸಾಯ, ಸಾರಿಗೆ ವ್ಯವಸ್ಥೆ.. ಹೀಗೆ ನಾನಾ ಅಭಿವೃದ್ಧಿ ಕಾರ್ಯಗಳಿಂದಾಗಿ ವನ್ಯ ಮೃಗಗಳ ನೆಲೆ ನಶಿಸುತ್ತಿದೆ.  ಒಂದು ಕಾಲದಲ್ಲಿ ಆನೆ ನಾಡಿನತ್ತ ಬಂದಿದೆ ಎಂದರೆ ಅದು ಪರಮಾಶ್ಚರ್ಯ ದ ವಿಚಾರವಾಗಿತ್ತು. ಏಕೆಂದರೆ ಅರಣ್ಯ ಹೇರಳವಾಗಿದ್ದಾಗ ಎಲ್ಲೋ  ದಾರಿತಪ್ಪಿ  ಅಪರೂಪಕ್ಕಷ್ಟೇ ಆನೆಗಳು ಕಾಡಿನಿಂದ ನಾಡಿನತ್ತ ಬರುತ್ತಿದ್ದವು. ಈಗ ಹಾಗಲ್ಲ. ಇದು ಪ್ರತಿದಿನದ ಸುದ್ದಿಯೇ ಆಗಿದೆ.  ಮನುಷ್ಯ ಬೆಳೆದ ಕಬ್ಬು,ಬಾಳೆ,  ಬತ್ತ ಇತ್ಯಾದಿ ಬೆಳೆಗಳನ್ನು   ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ  ವನ್ಯಮೃಗಗಳು ನಾಡಿಗೆ ಬರುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ.ಇಲ್ಲಿ ಒಂದು ಅಂಶ ಗಮನಾರ್ಹ,  ವನ್ಯ ಮೃಗಗಳು ಆಸೆ ಪಡುವುದು ಆಹಾರಕ್ಕಾಗಿ. ಮನುಷ್ಯರಾದ ನಾವು ಆಸೆ ಪಟ್ಟಿರುವುದು ಅವುಗಳ ಆವಾಸಸ್ಥಾನಕ್ಕಾಗಿ!! ಇತ್ತೀಚೆಗೆ ಆನೆ ಮಾನವ ಸಂಘರ್ಷವಂತೂ ಮಿತಿ ಮೀರಿದೆ. ಆನೆ ದಾಳಿಗೆ ಅದೆಷ್ಟೋ ಜೀವಗಳು ಬಲಿಯಾಗಿವೆ.  ಪ್ರತಿ ಬಾರಿಯೂ ನಾಡಿಗೆ ದಾಳಿಯಿಟ್ಟ ಆನೆಗಳನ್ನು ಮರಳಿ ಕಾಡಿಗೆ ಸೇರಿಸಲು ಅರಣ್ಯ ಇಲಾಖೆಯವರು ಹರ ಸಾಹಸ ಪಡುತ್ತಾರೆ. ಕಾಡಿಗೆ ಅಟ್ಟಿದ ಆನೆಗಳು ತಮ್ಮ ದಂಡಿನೊಂದಿಗೆ ಮತ್ತೆ  ನಾಡಿನಲ್ಲಿ ಪ್ರತ್ಯಕ್ಷವಾಗಿವೆ ಎನ್ನುವ ಸುದ್ದಿ ಅರಿಯುವುದೇ ಯಾವುದೋ ಅಮಾಯಕ ಜೀವ ಬಲಿಯಾದಾಗ. ನೀರು,ಆಹಾರ ಅರಸಿ  ತನ್ನ ಪುಟ್ಟ ಕಂದಮ್ಮಗಳನ್ನೂ ಕರೆದುಕೊಂಡು 10-15  ಕಿಲೋಮೀಟರ್ ನಡೆದಾಡುವ ಆನೆಗಳು ಜನ ವಸತಿ ಪ್ರದೇಶಗಳನ್ನು ಲೆಕ್ಕಿಸದೆ ಹೊಟ್ಟೆ ಹೊರೆಯಲು ಹೆಣಗಾಡುತ್ತವೆ.ಅಂಥ ಸಂದರ್ಭದಲ್ಲಿ  ತನಗೆದುರಾದ ಮನುಷ್ಯರನ್ನು  ಸೊಂಡಿಲಿನಿಂದ ಎತ್ತಿ ಎಸೆಯುವ,ಮೆಟ್ಟಿ ಸಾಯಿಸುವ ಕ್ರೂರ ಕೃತ್ಯವನ್ನು ಎಸಗುತ್ತದೆ.  ಆನೆಗಳಿಗೆ ಮಾನವನ ಮೇಲೆ ಇನ್ನಿಲ್ಲದ ದ್ವೇಷ! ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಆನೆಗಳ ಸಂತತಿ ಕೂಡಾ ಹೆಚ್ಚುತ್ತಲೇ ಇದೆ.  ಹೀಗಿರುವಾಗ ತಮ್ಮ ಸಹಜ ನೆಲೆಗಳನ್ನು ಕಳೆದುಕೊಂಡ  ಆನೆಗಳು ಹೋಗುವುದಾದರೂ  ಎಲ್ಲಿಗೆ? ಕುಳಿತು ಉಣ್ಣುವ ಅಭ್ಯಾಸವಾದ ಮನುಷ್ಯ ದುಡಿದು ಉಣ್ಣಲಾರನಂತೆ! ಹಾಗೆ ಒಮ್ಮೆ ನಾಡಿನಲ್ಲಿ ಜನರು ಬೆಳೆದ ಕಬ್ಬು ಬಾಳೆ ಇತ್ಯಾದಿಗಳನ್ನು ತಿಂದು ರೂಢಿಯಾದ ಆನೆಗಳು ಕಾಡಿನಲ್ಲಿ ಆಹಾರ ಅರಸುವ ಅಭ್ಯಾಸವನ್ನೇ ಬಿಟ್ಟು ಬಿಟ್ಟಿವೆಯೋ ಏನೋ!!   ಎಷ್ಟು ಬಾರಿ ಕಾಡಿಗೆ ಅಟ್ಟಿದರೂ ಮತ್ತೆ ಮತ್ತೆ ಜನವಸತಿ ಪ್ರದೇಶಕ್ಕೇ ಬರುತ್ತವೆ,  ಉಪಟಳ ಕೊಡುತ್ತಲೇ ಇರುತ್ತವೆ. ಸಾಗರದಿಂದ ನಭಕ್ಕೇರಿದ ನೀರ ಹನಿಗಳು ಮತ್ತೆ ಸಾಗರವನ್ನೇ ಸೇರಬೇಕು. ಈ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಎಷ್ಟೇ ಸಂಪಾದನೆ ಮಾಡಿದರೂ ಮತ್ತೆ ಭೂಮಿಯ ಒಡಲಿಗೇ ಸೇರಬೇಕು.ಇದು ಪ್ರಕೃತಿ ನಿಯಮ.  ಈ ಸೂಕ್ಷ್ಮ ಅರಿತಾಗ ಅರಣ್ಯ ಒತ್ತುವರಿಯನ್ನೂ ಒಳಗೊಂಡಂತೆ ಮನುಜನ ಅತಿ ಆಸೆಗಳಿಗೆ ಕಡಿವಾಣ ಬೀಳಬಹುದು. ವನ್ಯ ಜೀವಿ – ಮಾನವ ಸಂಘರ್ಷ ಕೊನೆಯಾಗಬಹುದು. ಪ್ರಕೃತಿಯ ಜೊತೆಗೆ ಅನುಸಂಧಾನ ಮಾಡಿಕೊಂಡು ಬದುಕುವ ಕಲೆಗಾರಿಕೆ ಮೃಗ ಪಕ್ಷಿಗಳಿಗಿವೆ. ಮನುಷ್ಯರಾದ ನಾವು ಈಗ ಕಲಿಯುತ್ತಿದ್ದೇವೆ. ಪ್ರಕೃತಿ ನಿಯಮದ ವಿರುದ್ಧ ನಾವು ಎಸಗಿದ ದ್ರೋಹದ ಪರಿಣಾಮವಾಗಿ ಹುಟ್ಟಿಕೊಂಡಿರುವ ಸಮಸ್ಯೆಗಳ ಪರಿಹಾರಕ್ಕೆ ದೂರಗಾಮಿ ಯೋಜನೆಗಳಿಂದ  ಪರಿಹಾರವನ್ನು ಕಂಡುಕೊಳ್ಳುವತ್ತ ಚಿಂತನೆ ನಡೆಸದೆ      ನಾವು ಮಾಡುವ ಪ್ರತಿಭಟನೆ, ಹೋರಾಟ, ಅಧಿಕಾರಿ ವರ್ಗದವರು ಮಾಡಿಕೊಳ್ಳುವ ಪರಸ್ಪರ ನಿಂದನೆ ಯಾವುವೂ ನಿರೀಕ್ಷಿತ  ಫಲ ನೀಡಲಾರವು. ಅಡವಿಯಲ್ಲಿ ಮೂಲಭೂತ ಅವಶ್ಯಕತೆ ಪೂರೈಸಿಕೊಳ್ಳಲಾಗದ ವನ್ಯ ಮೃಗಗಳು ಮತ್ತೆ ಹೋಗುವುದಾದರೂ ಎಲ್ಲಿಗೆ??? ಜಯಲಕ್ಷ್ಮಿ ಕೆ ಮಡಿಕೇರಿ.

ಹೋಗುವುದಾದರೂ ಎಲ್ಲಿಗೆ ….??ವಿಶೇಷಲೇಖನ ಜಯಲಕ್ಷ್ಮಿ ಕೆ ಮಡಿಕೇರಿ Read Post »

You cannot copy content of this page

Scroll to Top