ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಅಕ್ಷರ ಕೃಷಿಕ ಡಾ. ಬಿ.ಡಿ.ಕುಮಾರ್ ಅವರ ಕೃಷಿ ಬದುಕಿನ ಪಾಠ” ಗೊರೂರು ಅನಂತರಾಜು

ಕೃಷಿ ಸಂಗಾತಿ ಗೊರೂರು ಅನಂತರಾಜು “ಅಕ್ಷರ ಕೃಷಿಕ ಡಾ. ಬಿ.ಡಿ.ಕುಮಾರ್ ಅವರ ಕೃಷಿ ಬದುಕಿನ ಪಾಠ” ಪಠ್ಯ ಬೋಧನೆ, ಜನಪದ ಸಂಶೋಧನೆ, ಕೃಷಿಕಾಯಕ  ಈ ಮೂರೂ ಕ್ಷೇತ್ರಗಳ ಪ್ರಗತಿಪರ ಕೃಷಿಕ ಡಾ. ಬಿ.ಡಿ.ಕುಮಾರ್  ಅರಸೀಕೆರೆಯ ಜಗದ್ಗುರು ಶ್ರೀ ಕೋಡಿಮಠ ಪದವಿಪೂರ್ವ ಕಾಲೇಜಿನಲ್ಲಿ ೧೯೯೧ರಿಂದ ಕನ್ನಡ ಉಪನ್ಯಾಸಕರು. ಇವರ ಅಭಿನಂದನಾ ಗ್ರಂಥ ಅಕ್ಷರ ಕೃಷಿಕ ಇತ್ತೀಚಿಗೆ ಬಿಡುಗಡೆಯಾಗಿದೆ. ಲೇಖನ ಕೊಟ್ಟಿದ್ದ ನಾನು  ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಮೊನ್ನೆ ಕುಮಾರ್ ಹಾಸನಕ್ಕೆ ಬಂದು ಪೋನ್ ಮಾಡಿದರು. ಗೌರವ ಪ್ರತಿ ನೀಡಿದರು. ಬರೆಯಿರಿ ಎಂದು ಪ್ರೀತಿಯಿಂದ ಹೇಳಿದರು.  ಓದುತ್ತಾ ಹೋದ ನನಗೆ ಇಷ್ಟವಾಗಿದ್ದು ಇವರ ಬಾಲ್ಯದ ದಿನಗಳು.  ‘ಬಣ್ಣದ ಗುಬ್ಯಾರು ಮಳೆರಾಜ-ಅವರು ಮಣ್ಣಾಗಿ ಹೋದಾರು ಮಳೆರಾಜ.. ಮನದ ನೆನಪಿನ್ನು ಮಾಸಿಲ್ಲ. ನನ್ನ ಭೋಧನಾ ವೃತ್ತಿ ಬದುಕಿನ ಮೊದಲ ಭೋದನೆ ಈ ಜನಪದ ಗೀತೆಯಾಗಿತ್ತು. ಮಳೆಯ ಬೆಳೆಯ ಇಳೆಯ ಪೂರಕ ಸಂಬAಧ,ಉಳಿವಿದ್ದರೆ ಹೋರಾಟ ಕೂಳಿದ್ದರೆ ಕಾಳಗ ಮೇವಿದ್ದರೆ ಮೇಳ ಅನ್ನವಿದ್ದರೆ ಪ್ರಾಣ, ಪ್ರಾಣವಿದ್ದರೆ ಪರಾಕ್ರಮ ಈ ವೈವಿಧ್ಯ ವಿಷಯ ಲೇಪನದೊಂದಿಗೆ ಅತೀವೃಷ್ಟಿ  ಅನಾವೃಷ್ಟಿಯ ರಣಭೀಕರ ಕಠೋರತೆ ಹೇಳುತ್ತಾ ಒಕ್ಕಲ ಬಿಕ್ಕಲು ಆರಂಭವಾಗಿ ಬದುಕು ಮೂರಾಬಟ್ಟೆಯಾಗುತ್ತದೆ. ನಿಸರ್ಗದೆದುರು ಮಾನವನÀ ಆಟ  ನಡೆಯುವುದಿಲ್ಲ ಎಂಬ ಕರಾಳ ಸತ್ಯ ಈ ಗೀತೆಯಲ್ಲಿದೆ..ಲೇಖಕರು ಕನ್ನಡ ಉಪನ್ಯಾಸಕರಾಗಿ ಪ್ರಥಮ ಪಿಯುಸಿಗೆ ಈ ಪಾಠ ಮಾಡುವಾಗ  ಅವರಿಗೆ ಅರಿವಿಲ್ಲ. ತನ್ನ ಬದುಕು  ಇದೇ ಜನಪದ ಹಾಡಿನಂತೆ ಆಗುತ್ತದೆ ಎಂದು.  ನಿಜ, ಯಾರು ತಾನೇ ನಮ್ಮ ಭವಿಷ್ಯದ ಬದುಕು ಹೀಗೆ ಇರುವುದೆಂದು ಊಹಿಸಲು ಸಾಧ್ಯ. ಆದರೆ ನಾವು  ಸನ್ಮಾರ್ಗದಲ್ಲಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಕನಸು ಕಾಣುತ್ತೇವೆಯೋ ಅದು ಕೆಲವರಿಗೆ ಸಿಗುತ್ತದೆ. ಇದಕ್ಕೆ  ಕುಮಾರ್ ಉದಾಹರಣೆ ಅಷ್ಟೇ. ಪಠ್ಯ ಬೋಧನೆಯೊಂದಿಗೆ ತಮ್ಮ ಜೀವನದ ಅನುಭವ ಪಾಠವನ್ನು ಅರಗಿಸಿಕೊಂಡು ಒರ್ವ ಪ್ರಗತಿಪರ ರೈತನಾಗಿ ಹೊರಹೊಮ್ಮಿರುವುದು ಮಾದರಿ ಎನಿಸುತ್ತದೆ.  ಜೀವಿತದ ಹೋರಾಟ ಬದುಕಿನಲ್ಲಿ   ಹಲವು ಕಷ್ಟನಷ್ಟ ಎದುರಿಸಿ ಗೆದ್ದವರು ಈ ಬಿ.ಡಿ.ಕುಮಾರ್. ಕೃತಿಯ ಸಂಪಾದಕರು ಡಾ. ಹರೀಶ್ ಕುಮಾರ್ ಬರೆದಂತೆ ಇವರು  ವಿದ್ಯಾರ್ಥಿಗಳಿಗೆ ಕೇವಲ ಪಾಠ ಹೇಳಿಕೊಟ್ಟ ಮೇಷ್ಟುç ಮಾತ್ರವಲ್ಲ ಬದುಕಿನ ದಾರಿ ಕಂಡುಕೊAಡ  ಮಾರ್ಗದರ್ಶಿ. ಇವರ ವ್ಯಕ್ತಿತ್ವ ಬಹುಮುಖಿ ಕ್ಯಾನ್ವಾಸ್. ಜಮೀನಲ್ಲಿ ನಿಂತರೆ ಮಣ್ಣಿನ ವಾಸನೆಯ ಅಪ್ಪಟ ಕೃಷಿಕ. ತಮಟೆ ತಂಬೂರಿ ಹಿಡಿದರೆ ಜನಪದ ಕಲಾವಿದ. ಪುಸ್ತಕ ಹಿಡಿದರೆ ಓದಿನ ಸಂತ.  ಸಾವಿರ ಪುಟಗಳ ಕೃತಿಯಲ್ಲಿ ನನಗೆ ಇಷ್ಟವಾಗಿದ್ದು ಇವರ ನೇರ ನುಡಿಯ ಬಾಲ್ಯದ ಘಟನೆಗಳು.ದಿನಾಂಕ ೨೧-೬-೧೯೬೬ರ ಮಧ್ಯಾಹ್ನ ೪ ಗಂಟೆಯಲ್ಲಿ ದ್ಯಾವೇಗೌಡ ದೇವಮ್ಮ ಇವರ ದ್ವಿತೀಯ ಪುತ್ರನಾಗಿ ಈ ಭೂಮಿಗೆ ಬಂದನAತೆ. ನನ್ನ ಅಜ್ಜಿ ತಾಯಮ್ಮನ ತಮ್ಮ ಕೃಷ್ಣಪ್ಪ ಕಲ್ಯಾಡಿಕೊಪ್ಪಲಿನ ಬ್ರಾಹ್ಮಣ ಗೆಳೆಯ ಶಿವಪ್ರಕಾಶ್ ಇದೇ ದಿನ ಬೆಳಿಗ್ಗೆ ಹುಟ್ಟಿದರಂತೆ. ಇವನನ್ನು ನೋಡಿಕೊಂಡ ಕೃಷ್ಣಪ್ಪ ಬಸವಾಘಟ್ಟಕ್ಕೆ ಬಂದು ನನ್ನನ್ನು ನೋಡಿದರÀಂತೆ. ಈ ವಿಷಯದಿಂದ ನಾನು ಜನಿಸಿದ ನಿಜ ದಿನಾಂಕ ಗೊತ್ತಾಯಿತು..ಕುಮಾರ್ ಒಬ್ಬರೇ ಅಲ್ಲಾ ಎಲ್ಲಾ ಅನಕ್ಷರಸ್ಥ ನಮ್ಮ ತಂದೆತಾಯಿಗಳದು ಇದೇ ಸ್ಥಿತಿ.   ಐದು ವರ್ಷಗಳ ನಂತರ ಶಾಲೆಗೆ ಸೇರಿಸುವಾಗ ಹುಟ್ಟಿದ ದಿನಾಂಕ ಸರಿಯಾಗಿ ನೆನಪಿಲ್ಲದೇ ಒಂದು ಅಂದಾಜಿನ ಮೇಲೆ ಶಾಲೆಗೆ ಸೇರಿಸುತ್ತಿದ್ದ ಆ ದಿನಗಳು.   ಶಾಲೆಗೆ ಬೇಗನೇ ಸೇರಿಸಲು ಕೆಲವು ಪೋಷಕರು ಒಂದು ವರ್ಷ ಫ್ಲಸ್ ಮಾಡಿ ಬರೆಸಿ ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಹೊಂದುವಾಗ ಅದು ಮೈನಸ್ ಆಗಿದ್ದನ್ನು ನೊಂದುಕೊAಡು  ಹೇಳಿದ್ದನ್ನು ಕೇಳಿದ್ದೇನೆ. ಹಳ್ಳಿಯ ಹಂಚಿನ ಮನೆ ತೊಲೆಗಳಲ್ಲಿ ಮಕ್ಕಳು ಹುಟ್ಟಿದ ದಿನಾಂಕ ಬರೆದಿದ್ದನ್ನು  ನೋಡಿದ್ದೆನೆ.ಈ ಸಂದರ್ಭದಲ್ಲಿ ಒಂದು ನೆನಪು ನನ್ನನ್ನು ಮತ್ತೆ ಮತ್ತೆ ಕಾಡಿದೆ. ಅದೇನೆಂದರೆ ಅಷ್ಟೊತ್ತಿಗಾಗಲೇ ಹೊಲದಲ್ಲಿ ಹೊಸಮನೆ ಕಟ್ಟುತ್ತಿದ್ದೆವು. ಹಳೆ ಮನೆಗೂ ಹೊಸ ಮನೆಗೂ ತಿರುಗಾಟ ಸಾಗುತ್ತಿತ್ತು. ಆಗ ತಾನೇ ನೀರುಗುಂದ ಹೊಲಕ್ಕೆ ಅಲೆಮನೆ ಕಟ್ಟಿದ್ದರಂತೆ. ಅಲ್ಲಿ ಗಡಿಗೆಗಳಿಗೆ ಗುಳ ತುಂಬಿಸಿ ಮನೆಯಲ್ಲಿ ತಂದಿಟ್ಟಿದ್ದರು. ನಾನು ಅಂಕೆಯಿಲ್ಲದೆ ಅದನ್ನು ಕುಡಿದು ಹೊಟ್ಟೆಯಲ್ಲಿ ಲಾಡಿ ಉಳವಾಗಿತ್ತು. ಅದೊಂದು ಸುಂದರವಾದ ದಿನ ಆ ಹುಳ ಈಚೆಗೆ ಬರಲು ಆಗದೇ ಒಳಗೆ ಹೋಗಲು ಆಗದ ಅದನ್ನು ನೇತಾಡಿಸಿಕೊಂಡು ಊರಲೆಲ್ಲಾ ತಿರುಗಾಡಿದ್ದೆ. ನನ್ನ ಪಾಲಿಗೆ ಅದನ್ನು ಕಾಳಿಂಗ ಸರ್ಪವೆಂದೇ ಬಾವಿಸಿ ಭಯಭೀತರಾಗಿ ಊರ ತುಂಬಾ ಓಡಾಡಿದ್ದೆ… ಕುಮಾರರ ಈ ನೆನಪು ನಗು ತರಿಸಿದರೂ ಇಂತಹ ದೃಶ್ಯಗಳನ್ನು ಕಂಡಿರುವೆ.      ಕೃತಿಯ ಕವಲು-೧À ಅಂತರAಗ ವಿಭಾಗದಲ್ಲಿ ೩೭ ಲೇಖಕರು ಇವರ ವ್ಯಕ್ತಿ ಚಿತ್ರಣವನ್ನು ತಮ್ಮ ಸ್ನೇಹನೆಲೆಯಲ್ಲಿ ಬರೆದಿದ್ದಾರೆ. ಕುಮಾರ್ ಪದವಿಪೂರ್ವ ಐಚ್ಛಿಕ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರು. ಕೆ.ಪಿ.ಎಸ್.ಸಿ ಸ್ಫರ್ಧಾತ್ಮಕ ಪರೀಕ್ಷೆ ಪ್ರಶ್ನೆಪತ್ರಿಕೆ ತಯಾಸಿದ್ದಾರೆ. ರಾಜ್ಯ ಸಬ್ ಇನ್ಸ್ಸ್ಪೆಕ್ಟರ್ ಪರೀಕ್ಷೆÀ ಮೌಲ್ಯಮಾಪಕರು. ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷರು. ದೆಹಲಿಯಲ್ಲಿ ೧೯೯೬ರಲ್ಲಿ ರಾಷ್ಟಿçÃಯ ಜಾನಪದ ಹಬ್ಬದಲ್ಲಿ  ತಮಟೆ ಕಲಾವಿದರಾಗಿ ಭಾಗವಹಿಸಿದ್ದಾರೆ.   ಇವರ ತೋಟದ ಮನೆಯಲ್ಲಿ ಹತ್ತು ಸಾವಿರ ಪುಸ್ತಕಗಳ ಸಂಗ್ರಹ ಇದೆ. ಅಮೇರಿಕದ ತತ್ವಜ್ಞಾನಿ ಹೆನ್ರಿ ಡೇವಿಡ್ ಥೋರೋ ತರಹ ಇವರದು ನಿಸರ್ಗಪ್ರೇಮ ಜೀವನ.  ಬಾಗೇಶಪುರದ ಬಳಿ  ೧೨ ಎಕರೆ ಭೂಮಿ ಖರೀದಿಸಿ ಗುಡ್ಡದಲ್ಲೊಂದು ಮನೆಯ ಮಾಡಿ ಪಂಚೆ ಕಟ್ಟಿ ಕೃಷಿ ಕಾಯಕ ಮಾಡಿದವರು. ಅದೀಗ ಜಮೀನಾಗಿ ಉಳಿಯದೇ ಅಲ್ಲಿ ನೂರಾರು ಜಾತಿಯ ಹಣ್ಣಿನ ಮರಗಳು ಬೆಳೆದು, ಪ್ರಾಣಿ ಪಕ್ಷಿಗಳ ನೆಲೆವೀಡಾಗಿ ಕಾಡುಕೃಷಿಗೆ ಮಾದರಿಯಾಗಿದೆ. ಹಸು ಕುರಿ ಕೋಳಿ ಸಾಕಣಿಕೆಯಿಂದ  ಕೃಷಿ ಬದುಕಿಗೆ ಮತ್ತೊಂದು ದಾರಿ ತೋರಿಸಿದ್ದಾರೆ. ಅಕ್ಷರ ಸಂಸ್ಕೃತಿ ಮಣ್ಣಿನ ಸಂಸ್ಕೃತಿ ನಡುವೆ ಸಂತನಾಗಿದ್ದಾರೆ. ಇದೊಂದು ಅಭಿನಂದನಾ ಗ್ರಂಥ ಮತ್ತು  ನಾಡಿನ ಅನೇಕ ಜನಪದ ವಿದ್ವಾಂಸರು ಲೇಖಕರ ವಿಶಿಷ್ಟ ಬರಹಗಳ ಸಂಗ್ರಹ.  ಕವಲು-೨ ಜನಪದ ಪಲುಕು ಜನಪದ ಸಾಹಿತ್ಯ ವಿಶೇಷವಾಗಿದೆ.  ಡಾ.ಕಾಳೇಗೌಡ ನಾಗವಾರರ  ಲೇಖನವು ಗಮನಾರ್ಹ. ಕರ್ನಾಟಕವು ವಿಸ್ತಾರ ಭೂಪ್ರದೇಶವಾಗಿ ನಾನಾ ಬಗೆಯ ವೈವಿಧ್ಯಗಳಿಂದ ಕೂಡಿದೆ. ಒಂದು ಕಡೆ ಅರಬ್ಬಿಸಮುದ್ರ, ಉತ್ತರ ಕನ್ನಡ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶ, ಶಿವಮೊಗ್ಗ  ಆವರಿಸಿದ ಮಲೆನಾಡು, ಪೂರ್ವ ಪಶ್ಚಿಮ ಘಟ್ಟಗಳ ನಡುವಣ ಉತ್ತರ ದಕ್ಷಿಣ ಕರ್ನಾಟಕಗಳ ಬಗೆಬಗೆಯ ಪದ್ಧತಿ ಅನುಸರಿಸುವ ಜನರ ಗುಂಪು ಒಳಗೊಂಡಿದೆ. ಈ ನಡುವೆ ಕೊಡವ ತುಳು ಕೊಂಕಣಿ  ಭಾಷೆಗಳ ಜಾನಪದ ಸಂಪತ್ತು  ಅರಳಿದೆ. ಈ ಎಲ್ಲಾ  ಜನಪದ ಸಾಹಿತ್ಯವು ಪೂರ್ಣ ಸಂಗ್ರಹವಾಗಬೇಕೆAದು ಆಶಿಸಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಆಡಿ ಬೆಳೆದು ಗಾಣದೆತ್ತಿನಂತೆ ನಿರಂತರವಾಗಿ ದುಡಿಯುತ್ತಲೇ ಬಂದು ಉದ್ದಕ್ಕೂ ಅಕ್ಷರ ಜ್ಞಾನದಿಂದ ವಂಚಿತರಾಗಿರುವ ನಮ್ಮ ಜನಪದ ಕಲಾವಿದರು ವಾಸ್ತವವಾಗಿ ಗಂಧರ್ವಲೋಕದ ಗೆಣೆಕಾರರು ಎಂದಿದ್ದಾರೆ.  ಡಾ.ಹಿ.ಶಿ.ರಾಮಚಂದ್ರೇಗೌಡರು ಬಿ.ಡಿ.ಕುಮಾರ್ ಅವರಿಗೆ ಗೈಡ್ ಆಗಿದ್ದವರು. ಇವರ ಮಾರ್ಗದರ್ಶನದಲ್ಲಿ ಕುಮಾರ್ ಡಾಕ್ಟರೇಟ್ ಮಾಡಿದ್ದಾರೆ. ಗೌಡರಿಗೆ ತಮ್ಮ ಶಿಷ್ಯನ ಸಾಧನೆಗೆ ಪ್ರೀತಿ ಇದೆ. ವೈಫಲ್ಯದ ಬಗ್ಗೆ ಬೇಸರವೂ ಇದೆ. ‘ನಾನು ಪ್ರತಿಭೆ ಮತ್ತು ಕ್ರಿಯಾಶೀಲತೆ  ಕಂಡಲ್ಲಿ ಪುಳಕಗೊಳುತ್ತೇನೆ, ಸಂಭ್ರಮಿಸುತ್ತೇನೆ. ಇಂಥ ದ್ವಿಜತ್ವವನ್ನು ಹೊಂದಿದ ವ್ಯಕ್ತಿ ಡಾ. ಬಿ.ಡಿ.ಕುಮಾರ್. ಅವರ ಬಗ್ಗೆ ನನಗೆ ಪ್ರೀತಿಯೂ ಇದೆ. ಸಿಟ್ಟು ಇದೆ. ಪ್ರೀತಿ ಯಾಕೆಂದರೆ ಆ ಎರಡನ್ನೂ ಒಳಗೊಂಡ ವ್ಯಕ್ತಿ. ಸಿಟ್ಟು ಯಾಕೆಂದರೆ ಅವನ್ನು ಫಲಪ್ರದವಾಗಿ ಬಳಸಿಕೊಂಡಿಲ್ಲ ಎಂದು. ಅವರ ಪ್ರತಿಭೆ ಹೊರಚೆಲ್ಲುವ ಯಾವ ಉತ್ತಮ ಕೆಲಸ ಅವರು ಮಾಡಿದಂತೆ ನನಗೆ ಕಂಡಿಲ್ಲ. ನನ್ನ ಮಾರ್ಗದರ್ಶನ ದಲ್ಲಿ ಅವರು ಪಿಹೆಚ್‌ಡಿ ಪಡೆದರು. ವಿಷಯ: ಹಾಸನ ಜಿಲ್ಲೆಯ ಐತಿಹ್ಯಗಳನ್ನು ಕುರಿತು. ಪಿಹೆಚ್‌ಡಿಯ ನಂತರ ಆ ವಿಷಯದಲ್ಲಿ ತುಂಬ ಕೆಲಸ ಮಾಡಬಹುದಿತ್ತು. ಆ ನಿಟ್ಟಿನಲ್ಲಿ ಆವರ ಪ್ರತಿಭೆಯನ್ನು ದುಡಿಸಿಕೊಳ್ಳಲಿಲ್ಲ..    ಇದೇ ಕೃತಿಯನ್ನು ಪರಿಚಯಿಸುವ ನನ್ನ ಲೇಖನವು (ಗೊರೂರು ಅನಂತರಾಜು)  ಕವಲು ೨ರಲ್ಲಿದೆ. ಜಾನಪದವು ವಿಶಾಲವೂ ಮತ್ತು ವ್ಯಾಪಕವೂ ಆಗಿದ್ದು ಜಗತ್ತನ್ನೆಲ್ಲ ತನ್ನಲ್ಲಿ ಹುದುಗಿಸಿಕೊಂಡಿದೆ. ಇಲ್ಲಿ ಪ್ರಾಚೀನ ಅರ್ವಾಚೀನಗಳೆರಡೂ ಸಂಧಿಸಿ ಪರಸ್ಪರ ಕೈಕುಲುಕುತ್ತವೆ. ಈ ಜಾನಪದಕ್ಕೆ ಆದಿ ಅಂತ್ಯಗಳಿಲ್ಲ ಸಾವಿಲ್ಲ. ಆಧುನಿಕ ಮಾನವನಲ್ಲಿ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಾ ಬೀಜದಲ್ಲಿ ವೃಕ್ಷವಡಗಿರುವಂತೆ ಕಲೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಜಾನಪದ ಚೈತನ್ಯ ಸುಪ್ತವಾಗಿರುತ್ತದೆ. ಕೃತಿಯಲ್ಲಿ ಲೇಖಕರು ತಮ್ಮ ಭೌಗೋಳಿಕ ನೆಲೆಯಲ್ಲಿ ಐತಿಹ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ. ಅವುಗಳ ಸಾಂಸ್ಕೃತಿಕ ಒಳತೋಟಿಗಳನ್ನು ಒಳನುಗ್ಗಿ ನೋಡಲು ಪ್ರಯತ್ನ ಮಾಡಿದ್ದಾರೆ. ಬಹುಮುಖಿ ದೃಷ್ಟಿಯಿಂದ ಅವುಗಳ ಆಶಯ ಕಾರ್ಯತತ್ಪರತೆಯನ್ನು ಪ್ರಾತ್ಯಕ್ಷೀಕರಿಸಲು ಪ್ರಯತ್ನಿಸಿದ್ದಾರೆ. ಜನಪದದಲ್ಲಿ ಜಾತಿ ಇಲ್ಲ ಅರ್ಥಾತ್ ತಾರತಮ್ಯ ಇಲ್ಲ. ಅಲ್ಲಿರುವುದು ಸಹಜ ಮಾನವೀಯ ಬದುಕು.. ಇದು  ಡಾ. ಹಿ.ಶಿ.ರಾಮಚಂದ್ರೇಗೌಡರ ಮುನ್ನುಡಿ ಬರಹ. –ಗೊರೂರು ಅನಂತರಾಜು, ಹಾಸನ.ಮೊ:೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ. 

“ಅಕ್ಷರ ಕೃಷಿಕ ಡಾ. ಬಿ.ಡಿ.ಕುಮಾರ್ ಅವರ ಕೃಷಿ ಬದುಕಿನ ಪಾಠ” ಗೊರೂರು ಅನಂತರಾಜು Read Post »

ಕಾವ್ಯಯಾನ, ಗಝಲ್

 ಮಧು ವಸ್ತ್ರದ ಅವರ ಗಜಲ್               

ಕಾವ್ಯ ಸಂಗಾತಿ  ಮಧು ವಸ್ತ್ರದ ಗಜಲ್                ವೈಶಾಖದ ಶಾಖದಿ ಬಳಲಿ ತಪಿತಳಾಗಿಹ ಮಹಾಇಳೆಗೆ ತಂಪನು ನೀಡಲು ಬಾ ಮುಂಗಾರು ಮಳೆಯೇವಿಶಾಖದ ಹಿಂಗಾರು ಬರುವವರೆಗೂ ಮೆರೆವ ಭುವಿಯ ಚೆಲುವ ನೋಡಲು ಬಾ ಮುಂಗಾರು ಮಳೆಯೇ ಅಂಜೂರ,ಖರ್ಜೂರದ ಮರಗಳು ಚಿಗುರನೊಡೆಯದೆ ನಿನ್ನ ಆಗಮನದ ನಿರೀಕ್ಷೆಯಲಿ ಕುಳಿತಿಹವುಬಂಜರು ಭಾವದಿ ನೊಂದಿಹ ‌ಹೊಲಗದ್ದೆಗೆ ಅಮೃತ ಸಿಂಚನ ಮಾಡಲು ಬಾ ಮುಂಗಾರು ಮಳೆಯೇ ಬತ್ತಿ ತಳ ಕಾಣುತಿರುವ ಕೆರೆ ಬಾವಿಗಳಲ್ಲಿ ಮತ್ತೆ ಹೊಸ ಚೈತನ್ಯಜಲವ ತುಂಬಿಸುವ ಹೊಣೆ ನಿನ್ನದಾಗಿದೆಉತ್ತು ಬಿತ್ತಿ, ಸಮೃದ್ಧ ಫಸಲ ಬಯಸುವ ರೈತನೊಡನೆ ನೇಗಿಲ ಹೂಡಲು ಬಾ ಮುಂಗಾರು ಮಳೆಯೇ ಓಡುತಿಹ ಕರಿಮೋಡಗಳ ಕಂಡು ಗಿರಿನವಿಲು, ಮಳೆ ಸುರಿಸಿರಿ, ನಾ ಗರಿಗೆದರಿ ನರ್ತಿಸುವೆ ಎನುತಿದೆಕಾಡಿನ ಕೋಗಿಲೆಯೊಡನೆ ಮೇಘಮಲ್ಹಾರ ರಾಗದಿ ಋತುಗೀತೆ ಹಾಡಲು ಬಾ ಮುಂಗಾರು ಮಳೆಯೇ ಅಡ್ಡಾದಿಡ್ಡಿಯಾಗಿ ಸುರಿಯುತ ನಿನ್ನೆಲ್ಲ ಉತ್ಸಾಹ ಉಲ್ಲಾಸವನು ಧರಣಿಯೊಡನೆ ಹಂಚಿಕೊಂಡುಬಿಡುಗುಡ್ಡಗಾಡಿನಿಂದಿಳಿದು ಶರಧಿಯ ಸೇರಲು ತುಡಿವ ನದಿಯೊಡನೆ ಓಡಲು ಬಾ ಮುಂಗಾರು ಮಳೆಯೇ ಗುಡುಗು ಸಿಡಿಲುಗಳ ನಡುವೆ ಮಿಂಚುತ ಆರ್ಭಟಿಸುತ ಆಕಾಶದಿಂದ ಧರೆಯೆಡೆಗೆ ಸುರಿಯಬಾರದೇಗಡಗಡ ನಡುಗುತ ಶಾಲೆಗೆ ಹೋಗುವ ಮಕ್ಕಳೊಡನೆ ನೀರಾಟ ಆಡಲು ಬಾ ಮುಂಗಾರು ಮಳೆಯೇ ಮಧುರ ಭಾವದ ಕಬ್ಬಿಗರ ಮನದಲಿ ಮೊದಲ ಮಳೆ ಸ್ಪೂರ್ತಿ ಕಾರಂಜಿಯನು ಉಕ್ಕಿಸಬಲ್ಲದುಅಧರದಂಚಲಿ ನಗೆ ಸೂಸುವಂತಹ ಚೆಂದದ ಕವಿತೆಯಾಗಿ ಮೂಡಲು ಬಾ ಮುಂಗಾರು ಮಳೆಯೇ ————- ಮಧು ವಸ್ತ್ರದ

 ಮಧು ವಸ್ತ್ರದ ಅವರ ಗಜಲ್                Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-31 ಅರ್ಜುನ ಉವಾಚ ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅಸುರಾಂತಕ ಮಿತ್ರ ನಾನು ಅಸುರಪಟ್ಟಣವ ಸೇರಿದೆಆಲಿಸಿದೆ ಅಶರೀರವಾಣಿಯನ್ನು ಪರಿಪೂರ್ಣವಾಗಿ. “ಬಾಣವನ್ನು ಪ್ರಯೋಗಿಸದಿರು ಪಾರ್ಥ. ಆ ವನಿತೆಯ ಕೊಲೆಗೆ ಹೇಸದೆ ಶರವನ್ನು ತೊಡುವುದು ತರವಲ್ಲ. ಕೋಪವನ್ನು ಬಿಡು. ಪ್ರಮೀಳೆಯನ್ನು ವರಿಸು. ಮುಂದೆ ನಿನಗೆ ಒಳ್ಳೆಯದಾಗಲಿದೆ” ಎಂಬ ಧ್ವನಿಯದು ಕೇಳಿಬಂತು. ನನ್ನೊಬ್ಬನಿಗೇ ಕೇಳಿದ ಸ್ವರವಲ್ಲ. ಅಲ್ಲಿದ್ದ ಪ್ರತಿಯೊಬ್ಬರಿಗೂ ಕೇಳಿಸಿತು.ಪ್ರಯೋಗಿಸಲೆಂದು ಎತ್ತಿಹಿಡಿದಿದ್ದ ಬಾಣವನ್ನು ಇಳಿಸಿದೆ. ನನ್ನ ಜೊತೆಗಿದ್ದ ಆಪ್ತರಲ್ಲಿ ಇದರ ಬಗೆಗೆ ಚರ್ಚಿಸಿದೆ. ನಿರ್ಣಯವನ್ನು ಮಾಡಿದೆ. ಪ್ರಮೀಳೆಯನ್ನು ನನ್ನ ಬಳಿಗೆ ಕರೆಸಿಕೊಂಡೆ. ಒಪ್ಪಂದವೊAದಕ್ಕೆ ಒಳಪಡುವಂತೆ ಅವಳ ಕರಗಳನ್ನು ಹಿಡಿದುಕೊಂಡೆ. ಮನದಿಂಗಿತವನ್ನು ಹೇಳಿದೆ.“ಮರುಳುಗೊಳಿಸುವ ಮಾತು ನನ್ನದೆಂದು ಭಾವಿಸದಿರು. ಈಗ ನಾನು ನಿನ್ನನ್ನು ವರಿಸಲು ಸಾಧ್ಯವಿಲ್ಲ. ಯಾಗ ಮುಗಿಯುವವರೆಗೂ ಹೆಣ್ಣಿನ ಸಹವಾಸವನ್ನು ತೊರೆದಿರುವ ವ್ರತವನ್ನು ಪಾಲಿಸುತ್ತಿದ್ದಾನೆ ನನ್ನಣ್ಣ ಧರ್ಮಜ. ನಾನೂ ಅದೇ ವ್ರತದ ಆಚರಣೆಯಲ್ಲಿದ್ದೇನೆ. ಈಗ ನಾನು ನಿನ್ನೆಡೆಗೆ ಮನಸ್ಸು ಮಾಡಲು ಸಾಧ್ಯವಿಲ್ಲ. ಆದರೆ ಮುಂದೆ ಅಶ್ವಮೇಧ ಯಾಗ ನಡೆಯುವ ಕಾಲದಲ್ಲಿ ನಾನು ನಿನ್ನನ್ನು ಬಂದು ಸೇರುತ್ತೇನೆ. ನೀನು ಯಾಗಕ್ಕೆ ಬಂದು, ಅಲ್ಲಿ ಕೃಷ್ಣನನ್ನು ಕಂಡು, ನಿನ್ನ ದೇಹದ ವಿಷವನ್ನು ನೀಗಿಕೊಳ್ಳಬೇಕು. ಆ ಬಳಿಕ ನಾನು ನಿನ್ನ ಜೊತೆ ಸೇರಿ ಬಾಳುವುದಕ್ಕೆ ತೊಂದರೆಯಿಲ್ಲ” ಎಂದೆ, ಒಲವಿನಿಂದ.ನನ್ನ ಮಾತಿನಲ್ಲಿ ಕಪಟವಿಲ್ಲದ್ದನ್ನು ಅರ್ಥೈಸಿಕೊಂಡಳು ಪ್ರಮೀಳೆ. ನನ್ನ ಮಾತಿಗೆ ಒಪ್ಪಿಕೊಂಡಳು. ಕಟ್ಟಿಹಾಕಿದ್ದ ನಮ್ಮ ಕುದುರೆಯನ್ನು ತರಿಸಿಕೊಟ್ಟಳು. ಅವಳಿಗೆ ಆದರದ ವಿದಾಯ ಹೇಳಿ, ಸೇನೆಸಹಿತನಾಗಿ ಅಲ್ಲಿಂದ ಹೊರಟೆ. ಅವಳು ಸಂಪತ್ತನ್ನು ಜೊತೆಗಿರಿಸಿಕೊಂಡು, ವನಿತಾ ಸೈನ್ಯದ ಜೊತೆಗೆ ಹಸ್ತಿನಾವತಿಯನ್ನು ಸೇರಿಕೊಂಡಳು.ಮುಂದೆ ಹೋದಂತೆ ಹಲವು ದೇಶಗಳು ಕಂಡವು ನಮ್ಮ ಕಣ್ಣಿಗೆ. ಆನೆ, ಕುದುರೆ, ಗೋವು, ಮಹಿಷ ಮೊದಲಾದ ಪ್ರಾಣಿಸಮೂಹಗಳನ್ನು ಕಂಡೆವು. ಸೂರ್ಯ ಉದಯಿಸಿದೊಡನೆ ಜನಿಸಿ, ಮಧ್ಯಾಹ್ನದ ವೇಳೆಗೆ ಯೌವ್ವನಾವಸ್ಥೆಯನ್ನು ಪಡೆದು, ಸೂರ್ಯಾಸ್ತ ಸಮಯಕೆ ಮರಣವನ್ನಪ್ಪುವ ಅತಿಸೂಕ್ಷö್ಮ ಜೀವಿಗಳನ್ನು ನೋಡಿದೆವು, ಗಿಡಗಳ ಪೊದರುಗಳಲ್ಲಿ.ಕುದುರೆ ಮುಂದಕ್ಕೆ ಚಲಿಸಿತು. ವಿಚಿತ್ರವಾಗಿ ತೋರುತ್ತಿದ್ದ ಮನುಷ್ಯರನ್ನು ಕಂಡು ಅಚ್ಚರಿಗೊಳ್ಳುವಂತಾಯಿತು. ಚರ್ಮವನ್ನೇ ಉಡುಗೆಯಾಗಿ ಹೊಂದಿದ್ದರು ಅವರು. ಶರೀರವೆಲ್ಲಾ ವಕ್ರವಕ್ರವಾಗಿತ್ತು. ಅವರಿಗಿದ್ದದ್ದು ಒಂದೇ ಕೈ; ಒಂದೇ ಕಾಲು; ಒಂದೇ ಕಣ್ಣು. ಅವರಲ್ಲಿ ಕೆಲವರಿಗೆ ಮೂರು ಮೂರು ಕಣ್ಣುಗಳು. ಕುಬ್ಜರಾಗಿದ್ದರು. ಮೂರಡಿಯನ್ನು ಮೀರಿದ ಶರೀರವಲ್ಲ ಅವರದ್ದು. ತೀರಾ ಉದ್ದವಾದ ಮೂಗು. ನೆತ್ತಿಯ ಮೇಲೆ ಎರಡು ಕೋಡುಗಳಿದ್ದವು. ಕೆಲವರ ಮುಖ ಕತ್ತೆಯನ್ನು ಹೋಲುವಂತಿತ್ತು. ಇನ್ನೂ ಕೆಲವರು ಕುದುರೆಮುಖಿಗಳು.ವಿಚಿತ್ರವಾದ ದೇಶವಿದು ಎನಿಸಿತು ನನಗೆ. ಅಸಹ್ಯ ಭಾವ ಮೂಡಿತು. ಮರುಕ್ಷಣವೇ ಬಾಹ್ಯ ರೂಪ ಹೀಗಾದದ್ದರಲ್ಲಿ ಇವರ ತಪ್ಪೇನಿದೆ ಎನಿಸಿತು. ಎದುರಾದವರ ಚೆಲುವನ್ನು ಕಂಡು ಅವರನ್ನು ಆದರಿಸುವ, ಕುರೂಪವನ್ನು ಮೂದಲಿಸುವ ಲೋಕರೂಢಿಯ ಕ್ರಮವೊಂದಿದೆ. ಆದರೆ ಮನುಷ್ಯರೆನಿಸಿಕೊಂಡವರು ಒಳ್ಳೆಯ ಮನಸ್ಸನ್ನು ಹೊಂದಲು, ಒಳ್ಳೆಯ ಸ್ವಭಾವವನ್ನು ರೂಢಿಸಿಕೊಳ್ಳಲು ಮಾತ್ರ ಶಕ್ತರು. ಒಳ್ಳೆಯ ರೂಪವದು ಪ್ರಕೃತಿ ನಿರ್ಧರಿತವಾದದ್ದು. ಚೆಲುವೆನ್ನುವುದು ಶಾಶ್ವತವಲ್ಲ. ಹಾಗಿರುವಾಗ ಅದನ್ನು ಮುಂದಿಟ್ಟುಕೊAಡು ಸಹ್ಯ ಭಾವ ತಾಳುವುದಾಗಲೀ, ಅಸಹ್ಯವನ್ನು ಹೊಂದುವುದಾಗಲೀ ತಕ್ಕುದಲ್ಲ ಎನಿಸಿತು.ಹಾಗೆಯೇ ಮುಂದೆ ಹೋದೆವು. ಈಗ ನಮ್ಮ ಕುದುರೆ ಕಾಲಿಟ್ಟದ್ದು ಭೀಷಣ ಎನ್ನುವ ರಾಕ್ಷಸನ ಪಟ್ಟಣಕ್ಕೆ. ಮೂರು ಕೋಟಿ ಅಸುರರಿದ್ದರು ಅಲ್ಲಿ. ಅತಿಭಯಂಕರ ರೂಪ ಅವರದ್ದು. ಕ್ಷಣಕ್ಷಣವೂ ಆರ್ಭಟ. ಸಲ್ಲದ ಕೃತ್ಯಗಳೇ ಅಲ್ಲಿ ಎಲ್ಲ. ನೀಳವಾದ ದೈತ್ಯ ದೇಹವಿತ್ತು. ಶೀಘ್ರವೇ ಕೋಪಗೊಳ್ಳುತ್ತಿದ್ದರು. ಗಂಡೆದೆಯವರನ್ನೂ ಅಳುಕಿಸುವ ಘೋರ ಮುಖ ಅವರಿಗಿತ್ತು. ಮಾಯಾವಿಗಳಾಗಿದ್ದರು. ದಯೆಗೆ ಅವರೆದೆಯಲ್ಲಿ ಕಿಂಚಿತ್ ಸ್ಥಾನವೂ ಇರಲಿಲ್ಲ. ಸಂಹಾರದಲ್ಲಿಯೇ ಸಂತಸ ಕಾಣುವವರು. ಸಮರಕ್ಕೆ ಇಳಿದರೆ ಸಮಯ ಸಂದರ್ಭ ನೋಡದೆ ಹೋರಾಡುವವರು.ಹೀಗಿದ್ದ ಅಸುರರ ಪುರವನ್ನು ಆಳುತ್ತಿದ್ದ ಭೀಷಣನಿಗೆ ನಮ್ಮ ಪ್ರವೇಶದ ಸುದ್ದಿಯನ್ನು ಮುಟ್ಟಿಸಿದ್ದು ರಾಕ್ಷಸ ಪುರೋಹಿತನೆನಿಸಿದ್ದ ಮೇದೋಹೋತ. ಅವನು ಆಹಾರ ಹುಡುಕಿಕೊಂಡು ಕಾಡಿಗೆ ಬಂದಿದ್ದ. ಆ ಸಮಯದಲ್ಲಿ ನಾನು ನನ್ನ ಸೇನೆಸಹಿತ ಅದೇ ಅರಣ್ಯದಲ್ಲಿದ್ದೆ. ಅವನು ನನ್ನನ್ನು ಕಂಡ. ಕುದುರೆಯನ್ನು ನೋಡಿದ. ಸೈನಿಕರೆಡೆಗೆ ದೃಷ್ಟಿ ಹರಿಸಿದ. ಯಜ್ಞದ ಕುದುರೆಯಿದು ಅರ್ಜುನನ ರಕ್ಷೆಯಲಿ ಸೇನೆಸಹಿತವಾಗಿ ಬಂದಿದೆ ಇಲ್ಲಿಗೆ ಎನ್ನುವುದನ್ನು ಊಹಿಸಿದ. ಅವನು ನನ್ನನ್ನು ನೋಡಿದ್ದು ನನ್ನ ಅರಿವಿಗೆ ನಿಲುಕಿರಲಿಲ್ಲ ಆ ಕ್ಷಣಕ್ಕೆ.ಅವನು ತಕ್ಷಣವೇ ಹೋದದ್ದು ಭೀಷಣನ ಬಳಿಗೆ. ವಿಚಾರವನ್ನು ಅರುಹಿದ. “ಅರ್ಜುನ ಇಲ್ಲಿಗೆ ಬಂದಿದ್ದಾನೆ, ಯಾಗದ ಕುದುರೆಯನ್ನು ಜೊತೆಮಾಡಿಕೊಂಡು. ಅವನನ್ನು ಹಿಡಿದು ತಂದು ನರಮೇಧ ಯಾಗವನ್ನು ನಡೆಸು. ಅವನನ್ನು ಬಲಿಗೊಡು” ಎಂಬ ಸಲಹೆಯಿತ್ತ ಮೇದೋಹೋತ.ಭೀಷಣ ನಡೆಸುವ ನರಮೇಧ ಯಾಗಕ್ಕೆ ಪುರೋಹಿತ ತಾನಾಗಿ ಸಕಲ ಗೌರವವನ್ನೂ, ಸಮಸ್ತ ಸಂಪದವನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಆಕಾಂಕ್ಷೆಯಿತ್ತು ಆ ಅಸುರ ಪುರೋಹಿತನಲ್ಲಿ.ಭೀಷಣ ಅವನ ಮಾತಿಗೆ ಒಪ್ಪಿಕೊಂಡ. “ನರಮೇಧ ಯಾಗಕ್ಕಾಗಿ ಈಗಲೇ ಮಂಟಪವನ್ನು ನಿರ್ಮಿಸು. ನಾನೀಗಲೇ ಹೋಗಿ ಆ ಅರ್ಜುನನನ್ನು ಎಳೆದುಕೊಂಡು ಬರುತ್ತೇನೆ” ಎಂದು ಬೊಬ್ಬೆ ಹೊಡೆದ, ಮೇದೋಹೋತನಲ್ಲಿ.ಹೀಗೆ ಭೀಷಣ ಮೇದೋಹೋತನ ಮಾತಿಗೆ ತಕ್ಷಣವೇ ಒಪ್ಪಿಕೊಳ್ಳುವುದರ ಹಿಂದೆ ಬಲವಾದ ಕಾರಣವಿತ್ತು. ಅವನು ಬಕಾಸುರನ ಮಗನಾಗಿದ್ದ. ಹಿಂದೆ ಭೀಮನಿಂದ ಮಡಿದಿದ್ದ ತಂದೆಯ ಸಾವಿನ ಸೇಡನ್ನು ಭೀಷಣ ತೀರಿಸಿಕೊಳ್ಳಬಯಸಿದ್ದು ಭೀಮ ಸೋದರನಾದ ನನ್ನನ್ನು ಕೊಲ್ಲುವುದರ ಮೂಲಕ. ಮುಕ್ಕೋಟಿ ರಾಕ್ಷಸರು ಸೇರಿಕೊಂಡರು ಅವನ ಜೊತೆಗೆ… ಡಾ.ವಿಶ್ವನಾಥ್‌ ಎನ್ ನೇರಳೆಕಟ್ಟೆ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-122 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಅಮ್ಮನ ಅನಾರೋಗ್ಯದ ಬಗ್ಗೆ ದೊಡ್ಡಕ್ಕನಿಗೆ ತಿಳಿಸುವ ಸಮಯ ವಿಷಯ ತಿಳಿದ ನಂತರ ಖಂಡಿತ ತಂಗಿ ಹೀಗೆಲ್ಲಾ ಪ್ರತಿಕ್ರಿಯಿಸಿವಳು ಎಂಬುದು ಮೊದಲೇ ತಿಳಿದಿದ್ದ ಅಕ್ಕನಿಗೆ ದುಃಖ ಉತ್ತರಿಸಿ ಬಂದರೂ, ತಾನು ಕೂಡಾ ಅಳುತ್ತಾ ಕುಳಿತರೆ, ತಂಗಿಯನ್ನು ಸಮಾಧಾನ ಪಡಿಸುವವರು ಯಾರು? ಎಂದು ಯೋಚಿಸುತ್ತಾ, ತಂಗಿಯ ತಲೆಯನ್ನು ನಿಧಾನವಾಗಿ ಸಾಂತ್ವನ ಪಡಿಸುವಂತೆ ನೇವರಿಸಿದಳು. ಅವಳು ಅತ್ತು ಸಮಾಧಾನವಾಗುವರೆಗೂ ಹಾಗೆ ನೇವರಿಸುತ್ತಾ ಏನೂ ಮಾತನಾಡದೇ ಕುಳಿತಿದ್ದಳು. ಅವಳು ಸ್ವಲ್ಪ ಸಮಾಧಾನಗೊಂಡಳು ಎಂದು ಅರಿತ ಮೇಲೆ…. “ನಿನ್ನ ನೋವು, ಸಂಕಟ ಏನೆಂದು ನನಗೆ ಅರ್ಥವಾಗುತ್ತದೆ…. ದಯವಿಟ್ಟು ನಿನ್ನನ್ನು ನೀನು ಸಮಾಧಾನಪಡಿಸಿಕೋ…. ನಾವಿಬ್ಬರೂ ಈಗ ಮಾನಸಿಕವಾಗಿ ಗಟ್ಟಿಯಾಗಬೇಕಿದೆ…. ನಮ್ಮ ಈ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಜೊತೆ ಬೇರೆ ಯಾರೂ ಇಲ್ಲ…. ಅಕ್ಕನಿಗೆ ಅವಳದಾದ ಕುಟುಂಬವಿದೆ…. ಎಲ್ಲಾ ಜವಾಬ್ದಾರಿಯನ್ನು ಅಕ್ಕನಿಗೆ ಹೊರಿಸಲು ಸಾಧ್ಯವಿಲ್ಲ…. ನಮ್ಮಿಬ್ಬರ ಕೈಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಪ್ರಯತ್ನ ಮಾಡೋಣ…. ವೈದ್ಯರು ಹೇಳಿದ್ದರು ಡಯಾಲಿಸಿಸ್ ಚಿಕಿತ್ಸೆ ಕೊಡಿಸಿದರೆ, ಅಮ್ಮ ಇನ್ನೂ ಸ್ವಲ್ಪ ದಿನ ಅಮ್ಮ ಜೀವಂತವಾಗಿರಬಹುದು…. ಅಮ್ಮನ ಎಲ್ಲಾ ನೋವು ಸಂಕಟಗಳು ಸ್ವಲ್ಪ ದಿನದ ಮಟ್ಟಿಗಾದರೂ ಸುಧಾರಿಸಬಹುದು….. ನೋಡೋಣ…ಹೇಗೆ ಎಂಬುದನ್ನು ವೈದ್ಯರಿಂದ ಕೇಳಿ ತಿಳಿದುಕೊಳ್ಳುತ್ತೇನೆ….. ಎಂದಳು. ಅಕ್ಕನ ಮಾತನ್ನು ಕೇಳಿದಾಗ ತಂಗಿಯ ಮುಖವರಳಿತು. ….”ಹಾಗೆಯೇ ಮಾಡುವ ಅಕ್ಕಾ….. ನಮ್ಮಿಂದ ಆಗಿದ್ದನ್ನು ನಾವು ಮಾಡೋಣ…. ನಮಗೆ ಆಶ್ರಯ ಕೊಟ್ಟಿರುವ ಎಸ್ಟೇಟ್ ನವರು ಮೊದಲಿಂದಲೂ ಅಮ್ಮನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ…. ಅವರು ಖಂಡಿತಾ ನಮಗೆ ಸಹಾಯ ಮಾಡುತ್ತಾರೆ… ಹಾಗಾಗಿ ನಾವು ಮಾಡಬೇಕಾಗಿದ್ದು ಏನು ಎಂಬುದನ್ನು ಕೇಳಿ ತಿಳಿದುಕೋ…. ಎಂದಳು. ಸರಿ ಎನ್ನುವಂತೆ ಅಕ್ಕ ತಯಾರಿಸಿದಳು…. “ಈಗ ಡಾಕ್ಟರ್ ರೌಂಡ್ಸ್ ಮುಗಿಸಿರುತ್ತಾರೆ…. ನಡಿ ವಾರ್ಡಿಗೆ ಹೋಗೋಣ…. ಮೊದಲು ನಿನ್ನ ಕಣ್ಣುಗಳನ್ನು ಒರೆಸಿಕೊ…. ನಮಗೆ ತಿಳಿದಿರುವ ವಿಷಯ ಅಮ್ಮನಿಗೆ ಗೊತ್ತಾಗುವುದು ಬೇಡ….. ಅಮ್ಮ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಾಳೆ… ಆದಷ್ಟೂ ಅಮ್ಮನ ಮುಂದೆ ನಾವು ಖುಷಿಯಿಂದ ಇರುವಂತೆ ನಟಿಸೋಣ…. ಇದಲ್ಲದೇ ನಮಗೆ ಬೇರೆ ದಾರಿ ಇಲ್ಲ….. ಅಮ್ಮನಿಗೆ ಈ ವಿಷಯಗಳು ತಿಳಿದರೆ, ಖಂಡಿತಾ ಪೂರ್ತಿ ಕುಸಿದು ಹೋಗುತ್ತಾಳೆ…. ನಾವೆಲ್ಲರೂ ವಿದ್ಯಾಭ್ಯಾಸ ಮುಗಿಸಿ, ಒಳ್ಳೆಯ ಕೆಲಸಕ್ಕೆ ಸೇರಿ ನಂತರ ನಾವು ಮದುವೆಯಾಗುವುದನ್ನು ನೋಡಬೇಕು…. ಖುಷಿಯಿಂದ ಮೊಮ್ಮಕ್ಕಳನ್ನು ಮುದ್ದಾಡಬೇಕು…. ಅವರೊಂದಿಗೆ ಕಾಲ ಕಳೆಬೇಕು….ಎನ್ನುವ ತನ್ನಾಸೆಯ ಮಾತುಗಳನ್ನು ಆಗಾಗ ಹೇಳುತ್ತಲೇ ಇರುತ್ತಾಳೆ…. ಅಮ್ಮನಿಗೆ ಏನೂ ಆಗಿಲ್ಲ… ಆದಷ್ಟು ಬೇಗ ಗುಣಮುಖರಾಗುತ್ತಾರೆ ಎನ್ನುವ ಆಶಯವನ್ನು ಅಮ್ಮನ ಮನಸ್ಸಿನಲ್ಲಿ ತುಂಬೋಣ…. ಯಾವುದೇ ಕಾರಣಕ್ಕೂ ತನ್ನ ಆರೋಗ್ಯ ಸ್ಥಿತಿ ಈ ರೀತಿ ಇದೆ ಎಂದು ತಿಳಿಯುವುದು ಬೇಡ….. ಎಂದು ಅಕ್ಕ ಹೇಳಿದಾಗ ‘ಸರಿ’ ಎನ್ನುವಂತೆ ತಲೆಯಾಡಿಸುತ್ತಾ ದುಪ್ಪಟ್ಟಾದಿಂದ ಕಣ್ಣುಗಳನ್ನು ಮತ್ತು ಮುಖವನ್ನು ಒರೆಸಿ, ಆದಷ್ಟೂ ತಾನು ನಗುನಗುತ್ತಿರುವಂತೆ ಇರುವ ಪ್ರಯತ್ನ ಮಾಡಿದಳು. ತಂಗಿಯನ್ನು ನೋಡಿ ಮುಗುಳ್ನಕ್ಕು ಅವಳ ಹೆಗಲ ಮೇಲೆ ಕೈ ಹಾಕುತ್ತಾ…._ ಬಾ ನಡಿ ಹೋಗೋಣ”…. ಎಂದಳು ಈಗ ನಾನು ಅತ್ತಿರೋದು ಕಾಣೋದಿಲ್ಲವಲ್ಲವೇ? ಎಂಬಂತೆ ಪ್ರಶ್ನಾರ್ಥಕವಾಗಿ ಅಕ್ಕನನ್ನು ನೋಡಿದಳು ತಂಗಿ. ‘ಇಲ್ಲ’ ಎನ್ನುವಂತೆ ತಲೆ ಆಡಿಸಿದಳು, ಇಬ್ಬರೂ ವಾರ್ಡಿಗೆ ತೆರಳಿದಾಗ, ನರ್ಸ್ ತಾಯಿಗೆ ಚುಚ್ಚುಮದ್ದನ್ನು ಚುಚ್ಚುತ್ತಿರುವುದು ಕಂಡಿತು. ಅಮ್ಮ ನೋವಿನಿಂದ ಮುಖ ಹಿಂಡಿದ್ದು ಕಂಡಾಗ, ಇಬ್ಬರ ಎದೆಯಲ್ಲೂ ಏನೋ ಹರಿತವಾದದ್ದು ಚುಚ್ಚಿದ ಅನುಭವವಾಯಿತು. ಆದರೂ ತೋರಗೊಡದೆ…. “ಅಮ್ಮಾ ….ಡಾಕ್ಟರ್ ಏನು ಹೇಳಿದರು?… ಎಂದು ಇಬ್ಬರೂ ಕೇಳಿದಾಗ…. “ಏನೂ ತೊಂದರೆ ಇಲ್ಲ….ಇನ್ನೂ ಕೆಲವು ದಿನಗಳು ನಾನು ಇಲ್ಲಿಯೇ ಇರಬೇಕೆಂದು ಹೇಳಿದ್ದಾರೆ”… ಎಂದು ಹೇಳುತ್ತಾ ಸುಮತಿ ಇಬ್ಬರೂ ಮಕ್ಕಳ ಮುಖವನ್ನು ನೋಡಿದಳು. ಮಕ್ಕಳಿಬ್ಬರ ಕಣ್ಣುಗಳು ಅತ್ತು ಊದಿಕೊಂಡಿರುವಂತೆ ಅವಳಿಗೆ ಅನಿಸಿತು….. “ಏನಾಯ್ತು ಮಕ್ಕಳೇ?…. ನಿಮ್ಮಿಬ್ಬರ ಕಣ್ಣುಗಳು ಏಕೆ ಊದಿಕೊಂಡಿವೆ?…. ಎಂದು ಕೇಳಿದಾಗ,….”ಇಲ್ಲಮ್ಮಾ…. ಹಾಗೇನೂ ಇಲ್ಲ…. ನಿನಗೆ ಹಾಗೆ ಅನಿಸಿದೆಯಷ್ಟೇ”….. ಎಂದು ತಂಗಿ ಹೇಳಿದಾಗ, …. “ನೀನು ಯಾವಾಗ ಸುಳ್ಳು ಹೇಳುವುದನ್ನು ಕಲಿತುಕೊಂಡೆ?…. ನಿಜ ಹೇಳಿ….ಅದೇನಿದ್ದರೂ ನನಗೆ ತಿಳಿಸಿ” …. ಎಂದಳು ತುಸುಕೋಪದಿಂದ. …”ಏನಿಲ್ಲಮ್ಮಾ…. ಅವಳು ಸುಳ್ಳು ಹೇಳಿಲ್ಲ…. ನಮಗೇನೂ ಆಗಿಲ್ಲ…. ನಿನಗೆ ಹಾಗೆ ಅನಿಸುತ್ತಿದೆ ಅಷ್ಟೇ….. ನಾವು ಹೊರಗೆ ಕುಳಿತಿದ್ದಾಗ ಗಾಳಿಯಲ್ಲಿ ಏನೋ ಕಸ ಬಂದು ತಂಗಿಯ ಕಣ್ಣಿಗೆ ಬಿತ್ತು…. ಅವಳು ಹಣ್ಣುಗಳನ್ನು ಉಜ್ಜಿಕೊಂಡಳು…. ಹಾಗಾಗಿ ಅವಳ ಕಣ್ಣುಗಳು ಹಾಗಿವೆ”…. ಎಂದಳು….. “ಹಾಗಾದರೆ ನಿನ್ನ ಕಣ್ಣು?”…. ತುಸು ಏರು ಧ್ವನಿಯಲ್ಲಿ ಸುಮತಿ ಪ್ರಶ್ನಿಸಿದಾಗ…. “ನಾನು ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲಮ್ಮಾ…. ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ರಾತ್ರಿ ಹೆಚ್ಚು ಸಮಯ ಓದುತ್ತಾ ಕುಳಿತಿದ್ದೆ… ಹಾಗಾಗಿ ನನ್ನ ಕಣ್ಣುಗಳು ಊದಿಕೊಂಡಿವೆ…. ಸುಮ್ಮನೆ ಏನೇನೋ ಆಲೋಚಿಸಿ ತಲೆಕೆಡಿಸಿಕೊಳ್ಳಬೇಡ”… ಎಂದಳು ತಂಗಿಯನ್ನು ನೋಡುತ್ತಾ. ತಂಗಿ ‘ಹೌದು’ ಎನ್ನುವಂತೆ ತಲೆ ಆಡಿಸಿದಳು. ಇಬ್ಬರೂ ಮಕ್ಕಳು ಕೊಟ್ಟ ಉತ್ತರ ಯಾಕೋ ಸರಿ ಇಲ್ಲ ಎಂದು ಸುಮತಿಗೆ ಅನಿಸಿತು. ಆದರೆ ಇನ್ನೂ ವಾದ ಮಾಡುವುದು ಬೇಡ ಎಂದು ಸುಮ್ಮನಾದಳು. ತಂಗಿ ಅಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಾಯಿ ಮತ್ತು ಅಕ್ಕನ ಜೊತೆ ಕಾಲ ಕಳೆದಳು. ಇದರ ನಡುವೆ…. “ಅಕ್ಕಾ ….ದೊಡ್ಡಕ್ಕನಿಗೆ ಅಮ್ಮನ ಅನಾರೋಗ್ಯದ ವಿಷಯ ತಿಳಿಸಿದ್ದೀಯಾ? ಎಂದು ಕೇಳಿದಳು….. “ಇಲ್ಲ ಕಣೇ…. ಹೇಳಬೇಕು…. ಒಂದು ಕೆಲಸ ಮಾಡುತ್ತೀಯಾ? ನಾವು ಇಲ್ಲಿ ಯಾವುದಾದರೂ ಹೋಟೆಲ್ನಲ್ಲಿ ಊಟ ಮಾಡಿಕೊಳ್ಳೋಣ…. ಅಮ್ಮನಿಗೆ ಆಸ್ಪತ್ರೆಯಿಂದ ಊಟ ಸಿಗುತ್ತದೆ…. ಅಮ್ಮನಿಗೆ ಊಟ ಕೊಟ್ಟು, ನಂತರ ಹೊರಗೆ ಹೋಗಿ ನಾವು ಊಟ ಮಾಡೋಣ…. ನಂತರ ನೀನು ಅಕ್ಕನ ಮನೆಗೆ ಹೋಗಿ, ಅಮ್ಮ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಎಂಬುದನ್ನು ತಿಳಿಸು… ಎಂದಳು. ತಂಗಿ ಸರಿ ಎನ್ನುವಂತೆ ತಲೆಯಾಡಿಸಿದಳು.

Read Post »

You cannot copy content of this page

Scroll to Top