ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಂಕರರಾವ ಉಭಾಳೆ ದೇವದುರ್ಗ ” ಯಾರದು?”

ಕಾವ್ಯ ಸಂಗಾತಿ ಶಂಕರರಾವ ಉಭಾಳೆ ದೇವದುರ್ಗ ” ಯಾರದು?” ಒಲೆ ಮಣ್ಣಿನದುಮಣ್ಣು ಕೆರೆಸಾಲಿನದುಕೆರೆ ಗೌಡನದು ಹಸಿವಿಗಾಗಿ ರೊಟ್ಟಿರೊಟ್ಟಿಗಾಗಿ ಜೋಳಜೋಳಕ್ಕಾಗಿ ಹೊಲಹೊಲ ಗೌಡನದು ಎತ್ತು ಗೌಡನದುಬಂಡಿ ಗೌಡನದುಉತ್ತಿ ಬಿತ್ತಿದ ಹೊಲದ ಶ್ರಮ ನನ್ನದುಬೆಳೆಯ ಅಧಿಕಾರ ಗೌಡನದು ಬಾವಿ ಗೌಡನದುನೀರು ಗೌಡನದುಹೊಲ ಗದ್ದೆ ಗೌಡನದುಓಣಿ ಕೇರಿಗಳೆಲ್ಲ ಗೌಡನದುಗ್ರಾಮಹೋಬಳಿತಾಲೂಕುಜಿಲ್ಲೆರಾಜ್ಯಗೌಡನದುಹಾಗಾದರೆನನ್ನದೇನಿದೆ…? ಶಂಕರರಾವ ಉಭಾಳೆ ದೇವದುರ್ಗ

ಶಂಕರರಾವ ಉಭಾಳೆ ದೇವದುರ್ಗ ” ಯಾರದು?” Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ “ಅಲ್ಲೆಲ್ಲೊ ನೀನೇ!”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ “ಅಲ್ಲೆಲ್ಲೊ ನೀನೇ!” ಅಂದೊಮ್ಮೆ ನನಗೆ ನಿನ್ನನ್ನು ಕಂಡುಮಾತಾಡೋ ಬಯಕೆ ಬಂದಿತ್ತು ಅಂದುಅಲ್ಲೆಲ್ಲೋ ನೀನು ಕಣ್ಮರೆಯಾಗಿ,ಸುಳಿವೊಂದು ಸಿಗದೆ ಕಣ್ಣೀರು ತಂದೆ ನಾ ನಿನ್ನ ಕರೆದು ಬಳಿ ಬಂದು ನಿಂದುನಿನ್ನ ಖುಷಿಯ ತಂದೆ ನಿನಗಾಗಿ ಇಂದುನಿನ್ನನ್ನು ಕರೆದು ಮಾತನಾಡೋ ಬಯಕೆ ನನಗಿತ್ತು ಅಂದು ಭಯವೆಲ್ಲ ಎಂದು ಆರೋಪ ಇರದ ಈ ರೂಪ ನಿನಗೆ ಕೊಡಬೇಕು ನಾನು ನಾನಿರುವವರೆಗೆಆ ನಿನ್ನ ನಗುವು ನನಗಾಗೆ ಇರಲು  ಸವಿಯುವೆ ನಾನು ಹಗಲು ಇರುಳು ನಗುವಲ್ಲಿ ಇರುವಂತ ಆ ನಿನ್ನ ಕನಸುಮಲ್ಲಿಗೆ ಹೂವಂತೆ ಅರಳುವ  ಸೊಗಸುಕೋಗಿಲೆ ಹಾಡು ನಾವಿರುವ ನಾಡುಇಂಪಾಗಿ ಕೇಳು ಈ ನನ್ನ ಹಾಡು ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ “ಅಲ್ಲೆಲ್ಲೊ ನೀನೇ!” Read Post »

ಕಾವ್ಯಯಾನ

ಹಮೀದ್ ಹಸನ್‌ ಮಾಡೂರು ” ಜಿರಳೆ ದಂಗೆ ಸಾರಿದೆ”

ಕಾವ್ಯ ಸಂಗಾತಿ ಹಮೀದ್ ಹಸನ್‌ ಮಾಡೂರು “ಜಿರಳೆ ದಂಗೆ ಸಾರಿದೆ” ಜಿರಳೆ ಬಂತಯ್ಯ ಜಿರಳೆಎಲ್ಲೆಡೆಯು ಗದ್ದಲ ಎಬ್ಬಿಸಿದುಷ್ಟ ಸ್ವಾರ್ಥಿಗಳ ನಿದ್ದೆಗೆಡಿಸಿಅತ್ತಿತ್ತ ವಾಟ್ಸಾಪ್ ತುಂಬ ಹರಿದಾಡಿಸಿ,! ದುಷ್ಟ ರಾಜಕೀಯ ನೀತಿಗೆಧರ್ಮ ರಾಜಕೀಯ ಕ್ರಾಂತಿಗೆಕೊಳಕು ಬಾಯಿಯ ಮತಿಭ್ರಾಂತಿಗೆಗೆದ್ದಲು ಸಾಮ್ರಾಜ್ಯಶಾಹಿ ಅವನತಿಗೆ,! ಯುವ ಜನಾಂಗದಶೋಷಿತ, ತುಳಿತಕ್ಕೊಳಗಾದಅಲ್ಪಸಂಖ್ಯಾತ,ನೊಂದವರಿಗಾದನ್ಯಾಯದ ಪರ ಹೋರಾಡ ಬಂದಿದೆ,! ಸರ್ವಾಧಿಕಾರಿಗಳ ಮಸ್ತಕನುಸುಳಿ ಮೆದಳಿಗೆ ನೋಯಿಸಿಸತ್ತಂತಿಹರನು ಇದೀಗ ಬಡಿದೆಬ್ಬಿಸಿನ್ಯಾಯಕ್ಕಾಗಿ ಜಿರಳೆ ಧಂಗೆಯ ಸಾರಿದೆ,! ಕುರ್ಚಿಯಾಸೆಗೆಆಡಳಿತೆಯ ದುರಾಸೆಗೆಮನುಜ ಮನಸುಗಳ ಕೊಳಚೆಗೆದೂಡಿ ಬಿಟ್ಟವರ ಬೆನ್ನಟ್ಟುತ್ತ ಬಂದಿದೆ.! ಹಮೀದ್ ಹಸನ್ ಮಾಡೂರು

ಹಮೀದ್ ಹಸನ್‌ ಮಾಡೂರು ” ಜಿರಳೆ ದಂಗೆ ಸಾರಿದೆ” Read Post »

ಇತರೆ

“ಹಂಚುವ ಗುಣವನ್ನು ಕಾಗೆಯಿಂದ ಕಲಿಯಿರಿ”ಲೇಖನ ಕವಿತಾ ಶ್ರೀನಿವಾಸ್ ನಾಯಕ್ 

ವಿಶೇಷ ಸಂಗಾತಿ “ಹಂಚುವ ಗುಣವನ್ನು ಕಾಗೆಯಿಂದ ಕಲಿಯಿರಿ” ಕವಿತಾ ಶ್ರೀನಿವಾಸ್ ನಾಯಕ್  ​ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿನ ಪ್ರತಿ ಜೀವಿಯೂ ನಮಗೆ ಒಂದಲ್ಲ ಒಂದು ಜೀವನ ಪಾಠವನ್ನು ಕಲಿಸುತ್ತಿರುತ್ತದೆ. ಅತೀ ಸಾಮಾನ್ಯ ಪಕ್ಷಿ ಎಂದು ನಾವು ಕಡೆಗಣಿಸುವ ‘ಕಾಗೆ’ಯ ಜೀವನಶೈಲಿಯಲ್ಲೇ ಮನುಷ್ಯನಿಗೆ ಅಗತ್ಯವಾದ ಅತಿ ದೊಡ್ಡ ಗುಣಗಳಿವೆ. ಕಾಗೆ ಎಂದರೆ ಕೇವಲ ಅಶುಭದ ಸಂಕೇತವಲ್ಲ, ಅದು ‘ಸಹಬಾಳ್ವೆ ಮತ್ತು ಹಂಚಿಣ್ಣುವಿಕೆ’ಯ ಸಾಕಾರ ಮೂರ್ತಿ.​ಒಗ್ಗಟ್ಟಿನಲ್ಲಿ ಬಲವಿದೆಕಾಗೆಗಳದ್ದು ಅದ್ಭುತವಾದ ಸಂಘಟನಾ ಶಕ್ತಿ. ಯಾವುದಾದರೂ ಕಾಗೆಗೆ ಆಹಾರ ಸಿಕ್ಕಾಗ, ಅದು ಎಂದಿಗೂ ಒಬ್ಬಂಟಿಯಾಗಿ ತಿಂದು ತೇಗಲು ಬಯಸುವುದಿಲ್ಲ. ಬದಲಾಗಿ, ಆಹಾರ ಕಂಡ ತಕ್ಷಣ ಜೋರಾಗಿ ‘ಕಾವ್ ಕಾವ್’ ಎಂದು ಕೂಗಿ ತನ್ನೆಲ್ಲಾ ಬಳಗವನ್ನು ಕರೆಯುತ್ತದೆ. ತನಗೆ ಸಿಕ್ಕಿದ್ದನ್ನು ತನ್ನವರಿಗೂ ಹಂಚಬೇಕು ಎಂಬ ಅದರ ಈ ಔದಾರ್ಯ, ಸ್ವಾರ್ಥದ ಸುಳಿಗೆ ಸಿಲುಕಿರುವ ಇಂದಿನ ಮನುಕುಲಕ್ಕೆ ನಿಜಕ್ಕೂ ಮಾದರಿ. “ನಾನು ಮತ್ತು ನನ್ನ ಕುಟುಂಬ” ಎಂಬ ಸಂಕುಚಿತ ಮನೋಭಾವದಿಂದ ಹೊರಬಂದು, “ನಮ್ಮವರು” ಎಂಬ ವಿಶಾಲ ಭಾವನೆಯನ್ನು ಬೆಳೆಸಿಕೊಳ್ಳಲು ಕಾಗೆ ನಮಗೆ ಕಲಿಸುತ್ತದೆ.​ಸಂಕಟದಲ್ಲಿ ಜೊತೆಗೂಡುವ ಮನಸ್ಸುಕಾಗೆಗಳ ಸಾಮಾಜಿಕ ಕಳಕಳಿ ಅತಿ ಹೆಚ್ಚು. ಯಾವುದಾದರೂ ಒಂದು ಕಾಗೆಗೆ ತೊಂದರೆಯಾದರೆ ಅಥವಾ ಅದು ಮೃತಪಟ್ಟರೆ, ನೂರಾರು ಕಾಗೆಗಳು ಒಂದೆಡೆ ಸೇರಿ ಕೂಗಾಡುವುದನ್ನು ನಾವು ಗಮನಿಸಿರಬಹುದು. ಇದು ಕೇವಲ ಶಬ್ದವಲ್ಲ, ಅವರ ನಡುವಿನ ಬಲವಾದ ಬಾಂಧವ್ಯದ ಪ್ರತೀಕ. ದುಃಖವನ್ನು ಹಂಚಿಕೊಳ್ಳುವ ಮೂಲಕ ನೋವನ್ನು ಕಡಿಮೆ ಮಾಡುವ ಗುಣ ಅವುಗಳಲ್ಲಿದೆ. ಇಂದು ಮನುಷ್ಯ ತನ್ನ ನೆರೆಯವರ ಕಷ್ಟವನ್ನೂ ಕೇಳದಷ್ಟು ತಂತ್ರಜ್ಞಾನದ ಜಾಲದಲ್ಲಿ ಸಿಲುಕಿದ್ದಾನೆ. ಅಂತಹ ಸಂದರ್ಭದಲ್ಲಿ, ಕಾಗೆಗಳ ಈ ಸಾಮಾಜಿಕ ಬದ್ಧತೆ ನಿಜಕ್ಕೂ ಶ್ಲಾಘನೀಯ.​ತಾನುಂಡು ಇತರರಿಗೂ ಉಣಬಡಿಸುವುದುಭಾರತೀಯ ಸಂಸ್ಕೃತಿಯಲ್ಲಿ “ತಾನುಂಡು ಇತರರಿಗೂ ಉಣಬಡಿಸುವವನೇ ನಿಜವಾದ ಮನುಷ್ಯ” ಎಂದು ಹೇಳಲಾಗಿದೆ. ಕಾಗೆಗಳು ಯಾವುದೇ ಭೇದವಿಲ್ಲದೆ ಎಲ್ಲವನ್ನೂ ಹಂಚಿಕೊಳ್ಳುತ್ತವೆ. ಸ್ವಾರ್ಥದ ಈ ಲೋಕದಲ್ಲಿ, ನಮ್ಮಲ್ಲಿರುವ ಜ್ಞಾನ, ಸಂಪತ್ತು ಅಥವಾ ಪ್ರೀತಿಯನ್ನು ನಾಲ್ಕು ಜನರೊಂದಿಗೆ ಹಂಚಿಕೊಂಡರೆ ಸಮಾಜ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ಕಾಗೆಗಳು ಪ್ರತಿಕ್ಷಣವೂ ಸಾಬೀತುಪಡಿಸುತ್ತಿವೆ. ನಾವು ಕೇವಲ ಭೌತಿಕ ವಸ್ತುಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ, ಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವ ಮೂಲಕವೂ ‘ಹಂಚುವಿಕೆ’ಯನ್ನು ಚಾಲ್ತಿಯಲ್ಲಿಡಬಹುದು.​ಕಾಗೆಯ ಗುಣ ನಮ್ಮ ಬದುಕಿನ ಭಾಗವಾಗಲಿನಾವು ಕಾಗೆಯನ್ನು ಕೇವಲ ಒಂದು ಪಕ್ಷಿಯೆಂದು ನೋಡದೆ, ಅದರ ‘ಹಂಚಿಣ್ಣುವ’ ಸಂಸ್ಕೃತಿಯನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಧಾವಂತದ ಬದುಕಿನಲ್ಲಿ ನಾವು ಸಣ್ಣ ಸಣ್ಣ ಸಂತೋಷಗಳನ್ನು ಹಂಚಿಕೊಳ್ಳುವುದನ್ನೇ ಮರೆತಿದ್ದೇವೆ. ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ನೆರೆಹೊರೆಯವರಿಗೆ ನೀಡುವುದಿರಲಿ, ಕನಿಷ್ಠಪಕ್ಷ ನಮ್ಮ ಹತ್ತಿರವಿರುವ ಸಕಾರಾತ್ಮಕ ವಿಚಾರಗಳನ್ನಾದರೂ ಹಂಚಿಕೊಳ್ಳೋಣ. ಸಣ್ಣ ಆಹಾರದ ತುತ್ತನ್ನು ಹಂಚುವ ಕಾಗೆಯ ಗುಣ ನಮ್ಮಲ್ಲಿದ್ದರೆ, ಖಂಡಿತವಾಗಿಯೂ ಹಸಿವು ಮತ್ತು ಒಂಟಿತನವಿಲ್ಲದ ಒಂದು ಸುಂದರ ಸಮಾಜವನ್ನು ನಿರ್ಮಿಸಬಹುದು.​ಕಾಗೆಗಳು ಎಂದಿಗೂ ತನ್ನ ಆಹಾರಕ್ಕಾಗಿ ಜಗಳವಾಡುವುದಿಲ್ಲ, ಅವು ಸಮುದಾಯದ ಪಕ್ಷಿಗಳಾಗಿ ಬದುಕುತ್ತವೆ. “ಕಾಗೆ ಒಂದೇ ಗೂಡಿನ ಪಕ್ಷಿಯಲ್ಲ, ಅದು ಸಮುದಾಯದ ಪಕ್ಷಿ.” ನಾವು ಕೂಡ ಹಾಗೆಯೇ ಆಗೋಣ. ನಾವು ಗಳಿಸುವ ಸಂಪತ್ತು, ಗಳಿಸುವ ಕೀರ್ತಿ ಅಥವಾ ನಾವು ಪಡೆಯುವ ಜ್ಞಾನ—ಯಾವುದೂ ನಾವು ಸತ್ತಾಗ ಜೊತೆಗೆ ಬರುವುದಿಲ್ಲ. ಆದರೆ, ನಾವು ಸಮಾಜಕ್ಕೆ ನೀಡಿದ ಪ್ರೀತಿ ಮತ್ತು ಸಹಕಾರ ಶಾಶ್ವತವಾಗಿ ಉಳಿಯುತ್ತದೆ.​ನಮ್ಮ ಬದುಕು ಕಾಗೆಯಂತಿರಲಿ. ಸದ್ದು ಮಾಡಿ ಬದುಕೋಣ, ಎಲ್ಲರನ್ನೂ ಸೇರಿಸಿಕೊಳ್ಳೋಣ ಮತ್ತು ಬದುಕನ್ನು ಹಂಚಿಕೊಂಡು ಆನಂದಿಸೋಣ. ಈ ಪ್ರಕೃತಿಯಲ್ಲಿ ಪ್ರತಿ ಜೀವಿಯಲ್ಲೂ ಒಂದು ಅರ್ಥವಿದೆ. ಆ ಅರ್ಥವನ್ನು ಅರಿತು ಬದುಕಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಇಂದಿನ ದಿನಗಳಲ್ಲಿ ಪರಸ್ಪರ ದ್ವೇಷ, ಅಸೂಯೆಗಳನ್ನು ಬದಿಗಿಟ್ಟು, ಸಹಬಾಳ್ವೆಯ ಪಾಠವನ್ನು ಕಾಗೆಯಿಂದ ಕಲಿತು, ಒಂದು ಸಾಮರಸ್ಯದ ಸಮಾಜಕ್ಕೆ ನಾಂದಿ ಹಾಡೋಣ.​————— ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

“ಹಂಚುವ ಗುಣವನ್ನು ಕಾಗೆಯಿಂದ ಕಲಿಯಿರಿ”ಲೇಖನ ಕವಿತಾ ಶ್ರೀನಿವಾಸ್ ನಾಯಕ್  Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ -28 ಅರ್ಜುನ ಉವಾಚ ಡಾ.ವಿಶ್ವನಾಥ್‌ ಎನ್‌ ನೇರಳಕಟ್ಟೆ ಶಾಪದ ಕಥೆಗಳನ್ನು ತಿಳಿದು ಮುನ್ಡೆನದದ್ದು ಸ್ತ್ರೀ ರಾಜ್ಯದೆಡೆಗೆ           ಗುರುಗಳನ್ನು ಹಿರಿಯರನ್ನು ದೇವತೆಯರನ್ನು ಕಂಡಾಗ ಪ್ರಣಾಮ ಮಾಡುವುದು ರೂಢಿ. ಪಾರ್ವತಿಯೆದುರಿಗೆ ಬಂದ, ದುಷ್ಟದೃಷ್ಟಿ ಬೀರುತ ನಿಂದ ಆ ದೈತ್ಯ ಶಿವಸತಿಗೆ ನಮಿಸಲಿಲ್ಲ. ಅವಳನ್ನು ಬಯಸಿದ. ಮನ್ಮಥನ ಹೂಬಾಣ ಅವನನ್ನು ಬಾಧಿಸಿತು. ಕಾಮಾತುರಕ್ಕೆ ಒಳಗಾದ ದಾನವ. ಜಗದ ಮಾತೆಯೊಡನೆ ಮದನಕೇಳಿಯಾಡುವ ಕೆಡುಬಯಕೆ ಅವನಲ್ಲಿ ಮೂಡಿತು. ಪಾರ್ವತಿಯನ್ನು ಮಾತನಾಡಿಸಲು ಮುಂದಾದ.    ಮಹಾದೈತ್ಯನ ಮನದಿಂಗಿತ ಅರ್ಥವಾಯಿತು ಅವಳಿಗೆ. ಕಡುಕೋಪದಿಂದ ಕೆಡುಕಿನ ಕಾಯವನ್ನು ದಿಟ್ಟಿಸಿದಳು. ಉರಿಉರಿದು ಬೂದಿಯಾಗಿ ಹೋದ ಆ ರಾಕ್ಷಸ.  ಬಳಿಕ ಪಾರ್ವತಿದೇವಿ ಶಾಪರೂಪದ ಮಾತೊಂದನ್ನು ಆಡಿದಳು. “ಇಂದಿನಿಂದ ಈ ವನಕ್ಕೆ ಕಾಲಿಡುವ ಪುರುಷ ರೂಪದ ಪ್ರಾಣಿಗಳೆಲ್ಲವೂ ಹೆಣ್ಣಾಗಿ ಹೋಗಲಿ” ಎಂಬ ನುಡಿಯದು ಅವಳಿಂದ ಹೊರಬಂತು. ತನ್ನನ್ನೇ ಬಯಸಿದ ಅಸುರನ ಹೀನ ಗಂಡಸ್ತನದ ಬಗೆಗೆ ಆಕ್ರೋಶ ಹುಟ್ಟಿದ್ದು ಖಚಿತ ಅವಳಲ್ಲಿ. ಗಂಡಸ್ತನದ ಬಗೆಗಿನ ತಿರಸ್ಕಾರ ತುರೀಯಾವಸ್ಥೆಯನ್ನು ತಲುಪಿದಾಗ ಹೆಂಗಳೆಯರೇ ತುಂಬಿಹೋದರೆ ಒಳಿತು ಈ ಲೋಕದಲ್ಲಿ ಎಂಬ ಭಾವವೇ ಮೂಡುತ್ತದೋ ಏನೋ! ಆ ಕಾರಣಕ್ಕೇ ಇಂಥದ್ದೊಂದು ಘನಶಾಪ ಇತ್ತಳು ಎನಿಸುತ್ತದೆ, ಮುಂದಣ ಕಾಲಕ್ಕೂ ಸಲ್ಲುವಂತೆ.  ಆ ಬಳಿಕವೂ ಅವಳ ತಪಸ್ಸು ಮುಂದುವರಿಯಿತು. ಯಾವ ತಾಪತ್ರಯವೂ ಎದುರಾಗಲಿಲ್ಲ ಅವಳಿಗೆ ಪುರುಷವರ್ಗದವರಿಂದ. ಶಂಕರವಲ್ಲಭೆಯ ಶಾಪದ ಬಲದಿಂದಲೇ ನಮ್ಮ ಯಾಗದ ಕುದುರೆ ಹೆಣ್ಣಾಗಿ ಬದಲಾದದ್ದು.    ಹುಲಿಯ ರೂಪವನ್ನು ಪಡೆದದ್ದರ ಹಿಂದೆಯೂ ಒಂದು ಕಥಾನಕವಿತ್ತು. ಬಹಳ ಹಿಂದೆ ಅಕೃತವ್ರಣಾಖ್ಯ ಎಂಬ ಬ್ರಾಹ್ಮಣ ದಿವ್ಯಸ್ನಾನವನ್ನು ಮಾಡುವುದಕ್ಕಾಗಿ ಇಲ್ಲಿನ ಸರೋವರಕ್ಕೆ ಬಂದ. ಸಮಸ್ತ ಭೂಮಿಯ ಬಹುಕಡೆಗಳಲ್ಲಿ ತೀರ್ಥಸ್ನಾನವನ್ನು ಪೂರೈಸಿಯೇ ಬಂದಿದ್ದ ಆತ. ಸರೋವರದ ನೀರಿಗಿಳಿದಿದ್ದ ಆತ ವರುಣದೇವರ ಮಂತ್ರವನ್ನು ಜಪಿಸುತ್ತಿದ್ದ.    ಅದೇ ಸಮಯದಲ್ಲಿ ಮೊಸಳೆಯೊಂದು ಬಂದು ಅವನ ಪಾದವನ್ನು ಬಲವಾಗಿ ಕಚ್ಚಿತು. ಕಾಲನ್ನು ಹಿಡಿದು ರಭಸದಿಂದ ಎಳೆಯುತ್ತಿರುವ ಜೀವಿ ಯಾವುದದು ಎನ್ನುವುದು ಆತನ ಅರಿವಿಗೆ ಬರಲಿಲ್ಲ. ಜಲದ ಒಳಗಿದ್ದುದು ಅವನ ಹೊರನೋಟಕ್ಕೆ ದಕ್ಕಲಿಲ್ಲ. ಯಾವುದೋ ರಾಕ್ಷಸರ ಮಾಯೆಯೋ ಏನೋ! ಎಂಬ ಅಳುಕು ಮೂಡಿತು. ಹಾವು ಇರಬಹುದೇ! ಎಂಬ ಸಂಶಯ ಕಾಡಿತು. ದೈತ್ಯ ಗಾತ್ರದ ಮತ್ಸ್ಯವಿರಬೇಕಿದು ಎಂದುಕೊಂಡ. ಮಹಾಸುಳಿಯೆಂದು ಭಾವಿಸಿ ನೊಂದುಕೊಂಡ. ಮೊಸಳೆಯೇ ತನ್ನ ಕಾಲನ್ನು ಹಿಡಿದಿದೆ ಎಂಬ ಯೋಚನೆಯೇ ಬರಲಿಲ್ಲ ಅವನಲ್ಲಿ.  ಹಿಡಿತದಿಂದ ತಪ್ಪಿಸಿಕೊಂಡರೆ ಸಾಕು ಎಂದುಕೊAಡವನು ಬಲವಾಗಿ ಕಾಲನ್ನೊಮ್ಮೆ ಕೊಡವಿದ. ಅವನ ಆ ಬಿರುಸಿಗೆ ಮೊಸಳೆಯ ಬಲಿಷ್ಠ ದಂತಗಳು ಮುರಿದುಹೋದವು. ಹಿಡಿತವದು ಸಡಿಲವಾಯಿತು.    ತಕ್ಷಣವೇ ಸರೋವರದ ದಡವನ್ನು ಸೇರಿಕೊಂಡ ಆ ಬ್ರಾಹ್ಮಣ. ಅವನಿಗೆ ಕೋಪ ಬಂದಿತ್ತು. ನೀರಿನಲ್ಲಿರುವ ದೇವತೆಗಳು ಕೇಳಿಸಿಕೊಳ್ಳಲಿ ಎಂಬAತೆ ನುಡಿದ. “ಈ ಸರೋವರ ದುಷ್ಟಭಾವವನ್ನು ಹೊತ್ತುನಿಂತಿದೆ. ಅತಿಯಾದ ಭಯವನ್ನು ನನ್ನಲ್ಲಿ ಹುಟ್ಟುಹಾಕಿದೆ. ಆ ಕಾರಣಕ್ಕೆ ಇನ್ನುಮುಂದೆ ಈ ಸರೋವರದ ನೀರನ್ನು ಕುಡಿದ ಜೀವಿಗಳು ಭೂಮಿಗೆ ಅತೀ ಭೀತಿಯನ್ನು ಉಂಟುಮಾಡುವAತೆ ಹುಲಿಯಾಗಿ ಹೋಗಲಿ” ಎಂದು ಶಾಪವಿತ್ತ.  ಬೇರೆಲ್ಲಾ ಪ್ರದೇಶಗಳ ನದಿನೀರಿನಲ್ಲಿ ಮಿಂದೆದ್ದಿದ ಅವನಿಗೆ ಇಲ್ಲಿ ಮಾತ್ರ ಈ ಬಗೆಯ ಭಯಾನಕ ಅನುಭವ ಆದದ್ದು. ಆದ್ದರಿಂದಲೇ ಆ ಬಗೆಯ ಶಾಪವೊಂದನ್ನು ಕೊಟ್ಟ ಸರೋವರದ ನೀರಿಗೆ. ಹುಲಿಯಾಗಲು ಇಚ್ಛಿಸದೆ ಸರೋವರದ ಜಲವನ್ನು ಸರ್ವ ಜೀವಿಗಳೂ ತಿರಸ್ಕರಿಸುವಂತಾಗಲಿ ಎಂಬ ಉದ್ದೇಶ ಇದ್ದಿರಬಹುದು ಅವನಲ್ಲಿ. ಈ ಕಾರಣಕ್ಕೆ ನಮ್ಮ ಯಜ್ಞಾಶ್ವ ವ್ಯಾಘ್ರವಾಗಿ ಪರಿವರ್ತನೆಯಾದದ್ದು.    ಕುದುರೆಯ ಈ ಬಗೆಯ ರೂಪಾಂತರವನ್ನು ಆ ಕೃಷ್ಣನ ಸ್ಮರಣೆಯ ಬಲದಿಂದ ಸರಿಮಾಡಿದೆ. ನನ್ನ ಜೊತೆಗೆ ಇದ್ದ ಸೈನಿಕರು ನನ್ನ ಪ್ರಾರ್ಥನೆಗೆ ಶ್ರೀಕೃಷ್ಣ ಪ್ರತಿಸ್ಪಂದಿಸಿದ ಬಗೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು. “ಆಪತ್ತಿನ ಭೀತಿ ಈ ಪಾಂಡವರನ್ನು ಯಾವತ್ತಿಗೂ ಬಾಧಿಸಲಾರದು. ಇವರಿಗೆ ನೋವಾಗುವುದನ್ನು, ಭಯ ಎದುರಾಗುವುದನ್ನು ಆ ಕೃಷ್ಣ ಸಹಿಸಲಾರನು. ಅವನ ನೆರವು ಇವರಿಗೆ ಯಾವಾಗಲೂ ಇದೆ” ಎಂದು ಸೈನಿಕರು ಮಾತನಾಡುತ್ತಿದ್ದುದನ್ನು ಕೇಳಿ ಹೆಮ್ಮೆಯ ಭಾವ ಮೂಡಿತು. “ಶ್ರೀಕೃಷ್ಣ ತನ್ನ ಭಕ್ತರನ್ನು ಯಾವತ್ತೂ ಕಾಪಾಡುತ್ತಾನೆ ಎನ್ನುವುದು ಈ ಕ್ಷಣಕ್ಕೆ ಮತ್ತೊಮ್ಮೆ ಸಾಬೀತಾಯಿತು. ನಂಬಿದವರ ರಕ್ಷಣೆ ಮಾಡುವುದೇ ಮಹಾಸಂತೋಷ ಆ ಅಸುರಾರಿಗೆ. ಅಶ್ವಮೇಧ ಯಾಗಕ್ಕೆ ಅಡಿಗಡಿಗೆ ಎದುರಾದ ಅಡೆತಡೆಗಳನ್ನು ಮೀರಿ ಪಾಂಡುರಾಜನ ಸುತರನ್ನು ಅಪಾಯದಿಂದ ಪಾರುಮಾಡುವುದನ್ನೇ ಮಹಾಕಾರ್ಯವಾಗಿಸಿಕೊಂಡಿದ್ದಾನೆ ಆ ಮೋಹಕ ಮಾಧವ” ಎಂಬ ಮಾತೂ ಕೇಳಿಬಂತು. ಹೆಣ್ಣು ಕುದುರೆಯಾಗಿ ಹುಲಿಯಾಗಿ ಮತ್ತೆ ನಿಜರೂಪವನ್ನು ಕುದುರೆ ಪಡೆದುದನ್ನು ಬಗೆಬಗೆಯ ವಾದ್ಯಗಳ ಶಬ್ದವನ್ನೆಬ್ಬಿಸಿ ಸಂಭ್ರಮಿಸಿದರು ನಮ್ಮ ಪಾಳಯದ ಸೈನಿಕರು.  ಅತೀವವಾಗಿ ಹಿಗ್ಗಿದೆ ನಾನು. ಶ್ರೀಕೃಷ್ಣ ನಮಗಿತ್ತ ಉಪಕಾರವನ್ನು ನಮ್ಮ ಸೇನೆ ಅರಿತಿದೆಯಲ್ಲಾ ಎಂದು ಸಂಭ್ರಮಿಸಿದೆ. ಜಗವೆಲ್ಲಾ ಅರಿಯುವಂತೆ ಆ ಹರಿಯಿಂದ ಮಹದುಪಕಾರವನ್ನು ಪಡೆಯುತ್ತಿರುವ ನಾನೇ ಧನ್ಯ ಎಂಬ ಭಾವ ಮೂಡಿತು ನನ್ನಲ್ಲಿ.  ಪಾರಿಪ್ಲವ ದೇಶದಿಂದ ನಮ್ಮ ಕುದುರೆ ಮುಂದಕ್ಕೆ ಚಲಿಸಿತು. ಅತಿವೇಗ ಪಡೆಯಿತು ಅದರ ಚಲನೆ. ಬಹಳ ದೇಶಗಳು ಕಳೆದುಹೋದವು. ಈಗ ಕುದುರೆ ಸಾಗುತ್ತಿದ್ದುದು ರಾಜ್ಯದ ಒಳಸೀಮೆಯಲ್ಲಿ. ಅದಾವ ಪ್ರದೇಶ ಎನ್ನುವುದನ್ನು ವಿಚಾರಿಸಿ ತಿಳಿದುಕೊಂಡೆ. ಹೆಂಗಳೆಯರು ಮಾತ್ರವೇ ಇರುವ ಪ್ರದೇಶ ಅದೆನ್ನುವುದು ತಿಳಿದುಬಂತು…  ಡಾ. ವಿಶ್ವನಾಥ ಎನ್ ನೇರಳಕಟ್ಟೆ    

Read Post »

You cannot copy content of this page

Scroll to Top