Day: August 30, 2021

ಮರೆಯಲಾಗದ ದಲಿತ ನಾಯಕ: ಅಯ್ಯನ್ ಕಾಳಿ

500 ಕುಟುಂಬಗಳಿಗೆ ತಲಾ ಒಂದೊಂದು ಎಕರೆಯಂತೆ 500 ಎಕರೆಯನ್ನು ಹಂಚಿಸಿ ದಲಿತರಿಗೆ ಭೂ ಓಡೆತನ ಕೊಡಿಸಿದ ಅಯ್ಯನ್ ಕಾಳಿ ಅವರ ಹೋರಾಟ ಮತ್ತು ಪಾತ್ರ ಮಹತ್ವದ್ದಾಗಿತ್ತು. ಇಂದಿಗೂ ಕೂಡ ಕೇರಳಾದಲ್ಲಿ ಅಯ್ಯನ್ ಕಾಳಿ ಎಂದರೆ ಮನೆಮಾತು. ಅವರನ್ನು ಅಲ್ಲಿನ ಜನತೆ ಮಹಾತ್ಮ ಅಯ್ಯನ್ ಕಾಳಿ ಎಂದೇ ಕರೆಯುತ್ತಾರೆ. ಇಂದು ಅವರ 158ನೇ ಜನ್ಮದಿನದ ಸಂಭ್ರಮ. ಇಂತಹ ಸುದಿನದಲ್ಲಿ ಅವರ ವಿಚಾರ ಮತ್ತು ಕ್ರಾಂತಿಯನ್ನು ಮತ್ತಷ್ಟು ಮುನ್ನೆಲೆಗೆ ತರುವ ಹಾಗೂ ವಿಸ್ತರಿಸುವ ಅಗತ್ಯತೆಯಿಂದ ನಾವು ನೋಡಬೇಕಿದೆ

ನೆನಪುಗಳೆಂದರೆ

ನೆನಪುಗಳೆಂದರೆ…
ಉರಿವ ಸೂರ್ಯನೆದೆಗೆ ಒದ್ದು ನಿಂತ
ಅಂಗಳದ ಹೊಂಗೆ ಮರವು
ಹಾಸಿದ ನೆರಳ ಹಾಸಿಗೆಯು…!

ಸಂಭವಾಮೀ ಯುಗೇ ಯುಗೇ

ಹೆಣ್ಣಿಗೆ ಮಾತ್ರ
ಎಚ್ಚರಿಕೆ ಅಗತ್ಯ
ಗಂಡಿಗ್ಯಾರು ಕೊಟ್ಟರು
ಅತ್ಯಾಚಾರದ ಸ್ವಾತಂತ್ರ್ಯ

ನಮಸ್ಕಾರ, ಹೋಗಿ ಬಾರಯ್ಯ ರಂಗ ಸರದಾರ

ಗುಡಿಹಳ್ಳಿ ನಾಗರಾಜ-
ನಮಸ್ಕಾರ, ಹೋಗಿ ಬಾರಯ್ಯ ರಂಗ ಸರದಾರ
@ಮಲ್ಲಿಕಾರ್ಜುನ ಕಡಕೋಳ

ನೀನಿಲ್ಲದೇ..

ಪ್ರತಿ ಸಂಜೆಯಲೂ ನೆನಪು ಅರಳಿ
ಇರುಳೆಲ್ಲಾ ಎಚ್ಚರಾಗಿ..
ಹಗಲು ಮಗ್ಗಲು ಮುರಿದು ಮತ್ತೆ ಬೆಳಕಾಗಿ

ಚಾಕು ಹೆಗಡೆ

ಇಂತಹ ಎಷ್ಟೋ ಘಟನೆಗಳಿಗೆ ಕುಮಾರ ಹೆಗಡೆ ಕಾರಣನಾದರೂ ಅವನು ಉದ್ದೇಶಪೂರ್ವಕವಾಗಿ ಹೀಗೆ ಮಾಡುವುದಿಲ್ಲ. ಅವನ ಮಟ್ಟಿಗೆ ಎಲ್ಲರಿಂದಲೂ ಪ್ರೀತಿ ಪಡೆಯಬೇಕು ಎನ್ನುವ ಆಸಕ್ತಿ. ಆದ್ದರಿಂದಲೇ ಎಲ್ಲರಿಗೂ ಅವನಲ್ಲಿ ವಿಶ್ವಾಸ. ಎಲ್ಲರಿಗೂ ಅವನ ಮಧ್ಯಸ್ತಿಕೆ ಬೇಕೇ ಬೇಕು. ಊರಿನಲ್ಲಿ ಯಾವ ಪಂಚಾಯ್ತಿಯಾದರೂ ಕುಮಾರ ಹೆಗಡೆಗೆ ಕರೆ ಹೋಗುತ್ತದೆ

ಹಳಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ

ಲೇಖನ ಹಳಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ ವಿಶ್ವನಾಥ ಎನ್ ನೇರಳಕಟ್ಟೆ ಹಳಗನ್ನಡ ಸಾಹಿತ್ಯವನ್ನು ಅಭ್ಯಸಿಸುವ ನಿಟ್ಟಿನಲ್ಲಿ ಇಂದಿನ ಬಹುತೇಕ ವಿದ್ಯಾರ್ಥಿಗಳ ಮನೋಭಾವದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಒಂದು ಕಾಲಘಟ್ಟದಲ್ಲಿ ಅಧ್ಯಯನದ ಪ್ರಮುಖ ಭಾಗವಾಗಿದ್ದ ಹಳಗನ್ನಡ ಸಾಹಿತ್ಯ ಇಂದು ಬಹುತೇಕ ಸಂದರ್ಭಗಳಲ್ಲಿ ಪರೀಕ್ಷೆಯ ಉದ್ದೇಶಕ್ಕಾಗಿ ಮಾತ್ರವೇ ಅಧ್ಯಯನಕ್ಕೆ ಒಳಪಡುತ್ತಿದೆ. ಅದರ ಕುರಿತಾದ ಆಸಕ್ತಿಯನ್ನು ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಅದನ್ನು ಸಂಪೂರ್ಣವಾಗಿ ಮರೆತುಬಿಡುತ್ತಿದ್ದಾರೆ. ಇದು ಕೇವಲ ವಿದ್ಯಾರ್ಥಿ ವಲಯದ ಮನೋಭಾವವಲ್ಲ. ಕನ್ನಡ ಭಾಷೆ- ಸಾಹಿತ್ಯವನ್ನೇ ಜೀವನ ನಿರ್ವಹಣೆಯ […]

Back To Top